Friday, June 8, 2018

ಮಳೆಯಾಗುವ ಮೊದಲು..

ವಿಷಯ ತಿಳಿಯಿತು.
ಹಾಂ ಇಲ್ಲ, ಹೂಂ ಇಲ್ಲ,
ಬೇಕಿತ್ತೋ ತಿಳಿಯಲಿಲ್ಲ.
ಬೇಕಾಗಿರಲಿಲ್ಲವೋ ಗೊತ್ತಾಗಲಿಲ್ಲ!

ಇನ್ನೊಂದು ವಾರ,
ಮತ್ತೊಂದು ಸ್ಕ್ಯಾನು,
ಮತ್ತೆ ನಾಕು ಹೃದಯ,
ಕಣ್ಣರಳಲಿಲ್ಲ, ನಗು ಅರಳಲಿಲ್ಲ,
ಕೈಲಿ ಹರಿಯತ್ತಾ ಎಂಬ ಪ್ರಶ್ನೆ
ತುಟಿಯ ಬದಿಗೆ ಬಿರಿದೂ...
ಮಾತಾಗಲಿಲ್ಲ.  :(

ಎರಡು ಜೀವದ
ಬಯಕೆ,
ಸುತ್ತ ಹಬ್ಬಿದ ಜಗಕೆ-
ತಿಳಿಯಲಿಲ್ಲ.

ಎಲ್ಲರ ಕಣ್ಣಿಗೂ ಅವರವರದೆ ಕನ್ನಡಕ.

ಒಂದು ಪುಟ್ಟ ಜೀವ ಮಾತ್ರ
ದಿವಾನ ಏರಿ ನಿಂತು
"ಈಗೆತ್ತಿಕೋ ಅಮ್ಮ
ಕೆಳಗಿಂದ ಎತ್ತಲು ಕಷ್ಟವಾಗುತ್ತೆ" ಅಂತು. 
ಆ ಜೀವದ "ನೆನಕೆ,
ಆಶೆ, ಹೊಟ್ಟೆಕಿಚ್ಚು, ಮತ್ತು ಮುದ್ದುಗರೆಯುವಿಕೆಯೇ
ನಿನ್ನ ಬದುಕಿನ ಹರಕೆ"
ಎಂದು ನಾನು ಇಂದು ಹೇಳಿದರೆ ನಿನಗೆ ತಿಳಿಯುವುದಿಲ್ಲ.

ಎಲ್ಲರ ಕನ್ನಡಕದ ಪವರ್ ಬದಲಾಗಿದೆ.
ಅಂಗಳದಿ ಅರಳಿದ ಹೂವು ಎಲ್ಲರ ಮನವರಳಿಸಿದೆ.
ಹೊಕ್ಕಳ ಬಳ್ಳಿಗೆ ಮಾತ್ರ ಯಾವುದೇ ಕನ್ನಡಕವಿಲ್ಲ, ಲೆನ್ಸು ಇಲ್ಲ.
ಅದೇ ಆಶೆ, ಅದೇ ಬಯಕೆ, ಜೀವದಾಳದಲಿ ಮಮತೆ.

1 comment:

sunaath said...

ಅದ್ಭುತ!