ಮೀರುವ ಕ್ರಿಯೆಯಲ್ಲಿ ಅಳಿಯುವೆನೇನೋ ಎಂದು;
ಹೊಳಪು -
ಮಡಿಲು ತುಂಬಿದ ಗುಲಾಬಿಕಾಲ್ಗಳ ಸೊಬಗು ಕಂಡು;
ಸಿಡುಕು -
ನೀನು ನಿದ್ದೆ ಕೆಡಿಸುತ್ತೀ ಅಂತ;
ಕಿರಿನಗು-
ನಿನ್ನ ಬೇಡಿಕೆ ತುಂಬಿದ ಕೆನ್ನೆಕಂಗಳ ನೋಡಿ;
ಅಸಹನೆ -
ಇನ್ನೇನು ತುತ್ತಿಡುವಷ್ಟರಲ್ಲಿ ಚಡ್ಡಿ ಬಿಚ್ಚುತ್ತೀ ಕಕ್ಕ ಬಂತು;
ಮಂತ್ರಮುಗ್ಧೆ -
ಕುತ್ತಿಗೆಯ ಬಳಸಿ ಕೆನ್ನೆಗೆ ಮೆತ್ತನೆ ಕೆನ್ನೆ ತೀಡುವಾಗ;
ಗೊಣಗು -
ಊಟದ ತಟ್ಟೆ ಹಿಡಿದು ಮನೆಯಿಡೀ ಸುತ್ತುವಾಗ;
ಬೆರಗು -
ಬೇಸರ ಬಂದು ಗಬ್ಬೆದ್ದ ದಿನದ ರುಟೀನಲ್ಲಿ ನಿನ್ನ ಹೊಸತನದ ಬನಿ ಬನಿ ಇಳಿವಾಗ;
ಅನಿಸುತ್ತೆ ಟುಪ್ಪೂ..
ಇದಕ್ಕೆ ಇರಬಹುದೆ ಕತೆ ಕವಿತೆ ಗೀತ ಗೋವಿಂದ-
-ಗಳಲ್ಲಿ ಉಲಿದಿದ್ದು
"ಮಣ್ಣುತಿಂದ ಬಾಯ ಬಿಡಿಸೆ
ಅಮ್ಮನೆದುರು ಜಗವೆ ಹರಡಿ
ಮೂಡಿದುದು ಅಚ್ಚರಿ
ತಾಯ್ತನದ ವೈಖರಿ !
ಅವಳ ಹೊರತು ಕಾಣಬಹುದು ಯಾರಾದರೂ ಹೇಗೆ??
ಮಗು ಮಣ್ಣು ತಿನ್ನದೆ -
ಅಮ್ಮ ಪೆಟ್ಟು ಕೊಡದೆ-
ಬಾಯಿ ಬಿಡದೆ-
ಅದರಲ್ಲಿಣುಕದೆ-
ಅಮ್ಮನ ಹೊರತು ಕಾಣಬಹುದು ಯಾರಾದರೂ ಹೇಗೆ??
ಮಗಳ ಹೊರತು ತೋರಬಹುದು ಯಾರಾದರೂ ಹೇಗೆ?
![](https://blogger.googleusercontent.com/img/b/R29vZ2xl/AVvXsEigcemVJVhPEwiFZ0X5_4uI9Ke2ru8gniQl2Ut208BzviJoGUiofyrba2KcKavACG38xOnYCFAyHW7zfqvmve8Oksis7g5FIh_Cn5giLN-7s4sSR_GD1-VaFarFtd5EDvziuCi9BMLzftw/s400/SrushtiShubhadaayini.jpg)