ಎಲ್ಲ ಕತ್ತಲ ಕೊನೆಯಲ್ಲೊಂದು ಬೆಳಕಿನ ಕೋಲು, ಬೇಸರದ ಕ್ಷಣಗಳ ಭಾರದ ಮೋಡವ ಇಳುಹಲು ಸುರಿವ ಮಳೆಯ ಆಹ್ಲಾದ,
ಇದೆ ಅಲ್ಲವೆ ಬದುಕು ಎಂಬ ಅರಿವು ಮತ್ತು ಇದೆಯೆ ಬದುಕು ಎಂಬ ಅಚ್ಚರಿ.
ನಾನು ತುಂಬ ಇಷ್ಟಪಟ್ಟ ಅಶ್ವತ್ಥರು ಮತ್ತು ಇಷ್ಟವಾಗಿದ್ದ ವಿಷ್ಣು ಇಬ್ಬರ ನಿರ್ಗಮನದ ಸುದ್ದಿಯ ಕಾರ್ಮೋಡದಂಚಿನ ಬೆಳ್ಳಿಗೆರೆಯಂತೆ ಹೊಳೆಯುತ್ತಿರುವುದು ಇನ್ನೊಂದು ಸುದ್ದಿ - ಸಂಕ್ರಾಂತಿಯ ಕಂಪಿಗೆ ಮತ್ತೆ ಕೆಂಡಸಂಪಿಗೆ
http://kendasampige.com/article.php?id=2953
ನೋವುಗಳನ್ನ ಮೀರುವ ಶಕ್ತಿಯನ್ನ ಬಯಸುತ್ತಾ,
ಪ್ರೀತಿಯಿಂದ,
ಸಿಂಧು
ಕನಸಿನ ಕೆನಿ.....................................ದ. ರಾ. ಬೇಂದ್ರೆ
-
ಬೇಂದ್ರೆಯವರು ಒಂದು ಸಲ ತಮ್ಮ ಭಾಷಣದಾಗ ಹೇಳಿದ್ದರು:
“ನನಗ ಏನೋ ಹೊಳೀಲಿಕ್ಕೆ ಹತ್ತೇದ; ಅದು ಏನಂತ ತಿಳೀವಲ್ತು. ನನಗ ಏನೋ ತಿಳೀಲಿಕ್ಕೆ ಹತ್ತೇದ; ಅದು
ಏನಂತ ಹೊಳೀವಲ್ತು.”
ಬೇಂದ್ರೆಯವರ ಕ...