ಕವಿಕಾಣ್ಕೆಯ ಸ್ನೇಹಿತನಿಗೆ...
ಕಾಲುಹಾದಿಯ ಪಯಣದಲ್ಲಿ
ನೆರಳು ಬಿಸಿಲ ಚಿನ್ನಾಟ;
ಎಲ್ಲೋ ನಿಂತು
ನಿಡಿದಾದ ಉಸಿರೆಳೆಯುವಾಗ
ನಿನ್ನ ನೆನಪಿನ
ಹೂವರಳಿದ ಗಂಧ
ಬಗ್ಗಿ ನೋಡಿ ಗಿಡವ ಹುಡುಕಲಾರೆ
ನಿಬಿಡ ಕಾಡು, ಪೊದೆ;
ದೂರವೆನಿಸುತ್ತಿದೆ ಆದರೂ
ಹತ್ತಿರವಾಗಿ ಸುಳಿಯುತ್ತಿದೆ ಗಂಧ
ಹೂವರಳಿದ ನೆನಕೆಗೇ
ಮೈಯೆಲ್ಲ ಮುಳ್ಳು..
ಮತ್ತೆ ಮುಂದೋಡುವ ಪಯಣ,
ಎಚ್ಚರ ಕನಸುಗಳ ನಡುವಣ
ದಿನದಿನದ ಗಾಣ
ಗೊತ್ತು ಇನ್ಯಾವುದೋ
ತಿರುನಲ್ಲಿ
ಬರಲಿದೆ
ನೆನಪಿನ ಬನದ ನಿನ್ನ ಗಂಧ ಗಾಳಿ!
ದೂರವ ಮೀರಿ,
ಮರೆವನು ಮೆಟ್ಟಿ,
ಹಾಯೆನಿಸುವಂತೆ
ತೀಡಿ ಬರುವ
ನಿನ್ನ ದೃಶ್ಯಕಾವ್ಯಕ್ಕೆ
ಮಧುರ ಸ್ನೇಹಕ್ಕೆ
ಆಭಾರಿ ಸಮುದ್ರೆಯ
ಕಣ್ಣ ಹನಿಗಳ ಕಾಣಿಕೆ
ನೆನಪಿನಲೆಗಳ ಮಾಲಿಕೆ..
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...