ಕವಿಕಾಣ್ಕೆಯ ಸ್ನೇಹಿತನಿಗೆ...
ಕಾಲುಹಾದಿಯ ಪಯಣದಲ್ಲಿ
ನೆರಳು ಬಿಸಿಲ ಚಿನ್ನಾಟ;
ಎಲ್ಲೋ ನಿಂತು
ನಿಡಿದಾದ ಉಸಿರೆಳೆಯುವಾಗ
ನಿನ್ನ ನೆನಪಿನ
ಹೂವರಳಿದ ಗಂಧ
ಬಗ್ಗಿ ನೋಡಿ ಗಿಡವ ಹುಡುಕಲಾರೆ
ನಿಬಿಡ ಕಾಡು, ಪೊದೆ;
ದೂರವೆನಿಸುತ್ತಿದೆ ಆದರೂ
ಹತ್ತಿರವಾಗಿ ಸುಳಿಯುತ್ತಿದೆ ಗಂಧ
ಹೂವರಳಿದ ನೆನಕೆಗೇ
ಮೈಯೆಲ್ಲ ಮುಳ್ಳು..
ಮತ್ತೆ ಮುಂದೋಡುವ ಪಯಣ,
ಎಚ್ಚರ ಕನಸುಗಳ ನಡುವಣ
ದಿನದಿನದ ಗಾಣ
ಗೊತ್ತು ಇನ್ಯಾವುದೋ
ತಿರುನಲ್ಲಿ
ಬರಲಿದೆ
ನೆನಪಿನ ಬನದ ನಿನ್ನ ಗಂಧ ಗಾಳಿ!
ದೂರವ ಮೀರಿ,
ಮರೆವನು ಮೆಟ್ಟಿ,
ಹಾಯೆನಿಸುವಂತೆ
ತೀಡಿ ಬರುವ
ನಿನ್ನ ದೃಶ್ಯಕಾವ್ಯಕ್ಕೆ
ಮಧುರ ಸ್ನೇಹಕ್ಕೆ
ಆಭಾರಿ ಸಮುದ್ರೆಯ
ಕಣ್ಣ ಹನಿಗಳ ಕಾಣಿಕೆ
ನೆನಪಿನಲೆಗಳ ಮಾಲಿಕೆ..
ಮೃಗಶಿರ : ಹಲವು ಕಥೆಗಳ ಒಂದು ಸುಂದರ ಗುಚ್ಛ
-
*ಯಾ*ವುದೇ ಪುಸ್ತಕವನ್ನು ಅದರ ಮುಖಪುಟವನ್ನು ನೋಡಿ ಅಳೆಯದಿರು ಎಂದು ಹೇಳುತ್ತಾರೆ. ಅಂತೆಯೇ
ಓರ್ವ ವ್ಯಕ್ತಿಯ ಬದುಕನ್ನು ಅರಿಯುವಾಗ, ಕೇವಲ ಆತನ ಏಕಪಕ್ಷೀಯ ಮಾತುಗಳನ್ನು, ಅವರಿವರು
ಹೇಳಿದ್ದ...