ಮಳೆಗಾಲದ ಮಧ್ಯಾಹ್ನ
ಉಂಹೂಂ ನಮ್ಮೂರಾಗಲ್ಲ
ಇಲ್ಲೆ ಐಟಿಸಿಟಿಯಲ್ಲಿ
ಬೈಗು,ಬೆಳಗು,ಬಿಸ್ಲೊತ್ತು,ನೆಳಲು
ಗೊತ್ತಾಗದ ಹಾಗೆ
ಏಸಿಯಲ್ಲಿ ಕುಳಿತು
ದಿನಚರಿಯನ್ನೇನು ಹೇಳುವುದು ಬಿಡಿ
ಎಲ್ಲರ ಕತೆಯೂ ಅದೆ
ವಿಷ್ಯ ಏನಪಾಂದ್ರೆ
ಸ್ವಲ್ಪ ಹೆಚ್ಚೇ ಕಾಡುತ್ತಿರುವ
ಹಲ್ನೋವು.
ಹುಂ ತಕ್ಷಣವೇ ಡಾಕ್ಟರತ್ರ
ಕರ್ಕೊಂಡೋಗಲು ನಾನು
ಹೊಸಹೆಂಡತಿಯಲ್ಲ.
ಅಂವ ಹಳೆಗಂಡನೂ ಅಲ್ಲ
ವಯಸ್ಸಾದ್ ಮೇಲೆ
ಇದ್ದಿದ್ದೆ ಇದೆಲ್ಲ
ಅಂತ ನಾನೂ ಸುಮ್ನಿದ್ದೆ
ಸುಮ್ನಾದಂಗೂ ಅಬ್ಬರ
ಜಾಸ್ತಿಯಾಗುವುದೇ ಹಲ್ನೋವಿನ ಲಕ್ಷಣವಂತೆ
ಈಗ ಮೂವತ್ತೈದರ ಆಜೂಬಾಜಲ್ಲಿ
ಇನ್ನೇನು ಮತ್ತೆ
ಎಲ್ಲ ಸಣ್ ಪುಟ್ಟ ಕಾಯಿಲೆಗಳಿಗೂ
ಬಾಲಗೋಪಾಲದಿಂದ
ಕಿರೀಟಕ್ಕೇ ಭಡ್ತಿ.
ಅದಕ್ಕೆ ಇರಬೇಕು
ಮಹಾನಗರದ ಆಸುಪತ್ರೆಗಳೆಲ್ಲ ಭರ್ತಿ.
ಮಳೆಯ ಚಳ್ ಚಳಿಯಲ್ಲಿ
ಬೆಚ್ಚಗೆ ಕೂತು ಚಕ್ಕಲಿ ಕಡಿಯುವ ನೆನಪಿಗೆ
ಹಲ್ಲು ಕಟಗುಟ್ಟಿ
ಇಷ್ಟೆಲ್ಲ ಬರೆಸಿದ್ದು ನೋಡಿದ್ರೆ
ಭೂತಗನ್ನಡಿಯಲ್ಲಿ ಬೆಳಕು ತೂರದೇನೆ
ಬೆಂಕಿ ಬಂದ್ರೂ ಬಂತೆ.
ನ್ಯಾಯಿಕ ಅಸಂವೇದನೆ.
-
ನ್ಯಾಯಿಕ ಅಸಂವೇದನೆ.
ಬಂಧುಗಳೆ, ಅಪ್ರಾಪ್ತ ಹೆಂಡತಿಯ ಜೊತೆಗೆ ದೈಹಿಕ ಸಂಬಂಧ ಅತ್ಯಾಚಾರವಲ್ಲ! ಇದು ದೆಹಲಿ ಉಚ್ಚ
ನ್ಯಾಯಾಲಯದ ತೀರ್ಪು. ಯಾಕೆ? ಯಾಕೆಂದರೆ, ‘ಆ ಅಪ್ರಾಪ್ತ ಹುಡುಗಿ’ ಅತ...