ಚುಮು ಚುಮು ಬೆಳಗು,
ರಾತ್ರಿಯಿಡೀ ಅತ್ತುಬಿಟ್ಟಿದ್ದೆ
ಹೊರಗೆ ಧೋ ಎಂದು ಮಳೆಯಿತ್ತು
ಹಸೀ ಮಣ್ಣು ಒದ್ದೆ ಗಿಡಮರ
ಮಳೆ ನಿಂತು ಮೋಡ ಚೆದುರಿದ
ಆಕಾಶದಲ್ಲಿ ಸೂರ್ಯನ ಹೊಂಗಿರಣ
ಹರಡಿ ಕೆರೆಯ ನೀರು ಗಾಳಿಯಲೆಗೆ
ಪುಳಕಗೊಂಡು, ಅಲ್ಲೇ ಮರದ
ಮರೆಯಲ್ಲಿ ಹೆಸರು ಗೊತ್ತಿರದ ಹಕ್ಕಿಯೊಂದು ಹಾಡಿ...
ಅಷ್ಟರಲ್ಲಿ ನೀನು ಕರೆದೆ
ನನಗೆ ರಾತ್ರಿಯ ದುಃಖ ನೆನಪಾಯಿತು...
ಕಣ್ಣು ತುಂಬಿ ತುಳುಕುವುದರಲ್ಲಿತ್ತು...
ತಡೆಹಿಡಿದು
ನಿನ್ನ ಹುಟ್ಟಿದ ದಿನಕ್ಕೆ ಶುಭಾಶಯ ಹೇಳಿದೆ
ಮತ್ತೆ ಮಾತಿಲ್ಲ,
ನಿಟ್ಟುಸಿರು...
ನೀನೇನಂದುಕೊಂಡೆಯೋ ಗೊತ್ತಿಲ್ಲ,
ನಾನು ಮಾತ್ರ ಹಳೆಯ ಕಹಿ ಬದಿಗಿಟ್ಟು
ನಿನಗಿನ್ನೊಮ್ಮೆ ಮನಸಾರೆ ಹಾರೈಸಿ
ಮೇಲೆದ್ದು ಹೊರಟುಬಂದೆ...
ಇಲ್ಲ ನನಗೆ ತಿರುಗಿ ನೋಡಬೇಕೆನ್ನಿಸಲಿಲ್ಲ ನಿಜಕ್ಕೂ.
ಜೋತಯ್ಯನ ಬಿದಿರು ಬುಟ್ಟಿ..................................ತೇಜಸ್ವಿನಿ ಹೆಗಡೆ
-
ಮಾನವೀಯ ಅನುಕಂಪವು ತೇಜಸ್ವಿನಿ ಹೆಗಡೆಯವರ ಸಾಹಿತ್ಯದ ಮೂಲಸ್ರೋತವಾಗಿದೆ. ತೇಜಸ್ವಿನಿಯವರ
ಕಥೆಗಳು ಸಂವೇದನಾಶೀಲ ಲೇಖನಿಯಿಂದ ಬಂದ ಕಥೆಗಳಾಗಿವೆ. ‘ಜೋತಯ್ಯನ ಬಿದಿರು ಬುಟ್ಟಿ’ಯೊಳಗಿರುವ
ಹತ್ತ...