ಹಾಲಿನ ಕೂಪನ್, ಕೇಬಲ್ಲು,
ಫೋನು ಮತ್ತು ಕರೆಂಟು ಬಿಲ್ಲು,
ತರಕಾರಿ, ದಿನಸಿ,
ಮತ್ತಿನ್ಯಾವುದೋ ಮಾಡದೆ ಉಳಿದ ಕೆಲಸ
ಎಲ್ಲ ಹಾಗೆ ಇರಲಿ ಬಿಡು.
ಈಗ ಮೊದಲಿಂದ ಮಾತಾಡೋಣ
ಯಾವ ಅಜೆಂಡಾವೂ ಇಲ್ಲದೆ
ಅವತ್ತು ಸಂಜೆ ಗಿರಿಯ ಮೇಲೆ
ಮೌನದ ಚಿಪ್ಪೊಡೆದು
ಹೊರಬಂದ
ಮುತ್ತುಮಾತುಗಳ
ನೆನಹುಗಳ ನೇಯುತ್ತ -
ಇವತ್ತಿನ ಸಂಭಾಷಣೆಯ ಸಿಂಗರಿಸೋಣ,
ಯಾವ ಮಾತೂ ಆಡದೇ ಇದ್ದರೂ ನಡೆದೀತು,
ಏನೂ ಅಲ್ಲದ -
ಏನೋ ಆಗಬೇಕಿಲ್ಲದ
ಆ ಮುಗ್ಧ ಭಾವಕ್ಕೆ ಮತ್ತೊಮ್ಮೆ ಒಡಲ ನೀಡೋಣ
ಹೂವು, ಹಕ್ಕಿ,
ನೀರು, ನೆರಳು,
ಸಂಜೆಗೆಂಪು ಪಯಣದ ಹಾದಿಯ ಬದಿಗೆ
ಮತ್ತೆ ಸರಿಯೋಣ
ಕೆಲನಿಮಿಷಗಳ ಮಟ್ಟಿಗಾದರೂ..
ಹಾಗೇ ಇರಲಿ ಬಿಡು
ಕಟ್ಟದೆ ಉಳಿದ ಬಿಲ್ಲು.
ಜೋತಯ್ಯನ ಬಿದಿರು ಬುಟ್ಟಿ..................................ತೇಜಸ್ವಿನಿ ಹೆಗಡೆ
-
ಮಾನವೀಯ ಅನುಕಂಪವು ತೇಜಸ್ವಿನಿ ಹೆಗಡೆಯವರ ಸಾಹಿತ್ಯದ ಮೂಲಸ್ರೋತವಾಗಿದೆ. ತೇಜಸ್ವಿನಿಯವರ
ಕಥೆಗಳು ಸಂವೇದನಾಶೀಲ ಲೇಖನಿಯಿಂದ ಬಂದ ಕಥೆಗಳಾಗಿವೆ. ‘ಜೋತಯ್ಯನ ಬಿದಿರು ಬುಟ್ಟಿ’ಯೊಳಗಿರುವ
ಹತ್ತ...