ಎಷ್ಟು ಪ್ರೀತಿಸ ಬಹುದೋ ನಿನ್ನನ್ನು
ಅದಕ್ಕಿಂತ ಜಾಸ್ತಿಯೇ
ಪ್ರೀತಿಸುವೆ ನಾನು ನಿನ್ನನ್ನು,
ಇದು ಗೊತ್ತಾಗಿದ್ದು
ನಿನ್ನೆ ನಾವಿಬ್ಬರೂ
ಹುಚ್ಚಾಪಟ್ಟೆ ಜಗಳವಾಡಿ
ಮುಸುಡಿ ಮೂರುಕಡೆ ಮಾಡಿಕೊಂಡು
ಕೂತಾಗ.
ಯೋಚನೆಯ
ಅಲೆಗಳ ಮೇಲೆ
ಎದೆಯೊಸಗೆ ಮೆಲ್ಲಗೆ ಮುಳುಗೇಳುತ್ತಲಿದೆ.
ನಿನ್ನ
ಸಿಟ್ಟಿನಿಂದ ಉಬ್ಬಿದ ಮುಖ
ಕೆಂಪಿಟ್ಟ ಮೂಗು
ಒಳಗೊಳಗೆ ಬೇಯಿಸುವ ಕುದಿ
ಎಲ್ಲವನ್ನೂ
ಸಂತೈಸುವ ಪ್ರೀತಿ
ನನ್ನ ಇದೀಗಷ್ಟೇ ಸಮಾಧಾನಿಸಿ
ನಿನ್ನೆಡೆಗೇ ಹೊರಟಿದ್ದಾಳೆ
ಒಂದೆರಡು ಕ್ಷಣ ತಾಳು.
ಜಗತ್ತು ಆಡಿಕೊಂಡು ನಕ್ಕಾಗ
ಜಗ್ಗದೆ
ನನ್ನ ಜೊತೆಗೆ ಬಂದವನೆ,
ನೀನೇ ಅಲ್ಲವೆ ಉಲಿದಿದ್ದು..
"ಲಕ್ಷಾಂತರರು ಹೊರಡುವ ಪಯಣದ
ಗುರಿ ತಲುಪಲು
ಸಾಧ್ಯವಾಗುವುದು ಎಲ್ಲೋ
ಒಬ್ಬಿಬ್ಬರಿಗೆ ಮಾತ್ರ "
ಬದುಕಿನ ವಿಲಕ್ಷಣ ಪಯಣದಲ್ಲಿ
ಕಂಗೆಡದೆ ಉಳಿಯುವುದು ಪ್ರೇಮಿ ಮಾತ್ರ!
ಜೋತಯ್ಯನ ಬಿದಿರು ಬುಟ್ಟಿ..................................ತೇಜಸ್ವಿನಿ ಹೆಗಡೆ
-
ಮಾನವೀಯ ಅನುಕಂಪವು ತೇಜಸ್ವಿನಿ ಹೆಗಡೆಯವರ ಸಾಹಿತ್ಯದ ಮೂಲಸ್ರೋತವಾಗಿದೆ. ತೇಜಸ್ವಿನಿಯವರ
ಕಥೆಗಳು ಸಂವೇದನಾಶೀಲ ಲೇಖನಿಯಿಂದ ಬಂದ ಕಥೆಗಳಾಗಿವೆ. ‘ಜೋತಯ್ಯನ ಬಿದಿರು ಬುಟ್ಟಿ’ಯೊಳಗಿರುವ
ಹತ್ತ...