ನೀನು ಲೆಕ್ಕಕ್ಕೆ
ನಾನು ಆಟಕ್ಕೆ
ಔಟಾದರೂ, ಗೆದ್ದರೂ
ಆಟ ನಿಂತರೂ ನಡೆದರೂ
ನನಗೇ ಬಿಟ್ಟ
ಕುಂಟೇಬಿಲ್ಲೆ
ಕಾಣದ ಹಾಗೆ
ಕಟ್ಟಿಕೊಂಡ ಎಲ್ಲೆ.
ಕಾಲಿದ್ದೂ ಕುಂಟುವ
ನೋವು
ಆಡಿದವರಿಗೇ ಗೊತ್ತು,
ಬಿಲ್ಲೆ ಇಲ್ಲದೆ ದೂಡುವ
ಹೆಜ್ಜೆ ಭಾರ ಭಾರ ಇತ್ತು,
ಒಂದು ಮಾತು
ಹ್ಯಾಗಿದೀ ಅಂತ ಕೇಳಿದ್ದರೂ
ಸಾಕಿತ್ತು.
ಮಾತು ಬಿಟ್ ಹಾಕು
ಆದರೆ ಎಲ್ಲಿ ??
ಆ -
ಕೈಯೊತ್ತು,
ಕಣ್ಣು ಕಣ್ಣು ಕಲೆವ ಹೊತ್ತು,
ಕವಿದ ಕತ್ತಲಲ್ಲೆ ಹೊಳೆವ
ಬಾನ್ಮುತ್ತು...?!
ಯಾವುದೋ ಆಟ
ಇನ್ಯಾವುದೋ ಲೆಕ್ಕ
ಕನಸು ಬೀಳುವ ಕಣ್ಣಲಿ
ಕಸ ಬಿದ್ದು
ಧಾರೆ ಧಾರೆ ಮುತ್ತು.
ಜೋತಯ್ಯನ ಬಿದಿರು ಬುಟ್ಟಿ..................................ತೇಜಸ್ವಿನಿ ಹೆಗಡೆ
-
ಮಾನವೀಯ ಅನುಕಂಪವು ತೇಜಸ್ವಿನಿ ಹೆಗಡೆಯವರ ಸಾಹಿತ್ಯದ ಮೂಲಸ್ರೋತವಾಗಿದೆ. ತೇಜಸ್ವಿನಿಯವರ
ಕಥೆಗಳು ಸಂವೇದನಾಶೀಲ ಲೇಖನಿಯಿಂದ ಬಂದ ಕಥೆಗಳಾಗಿವೆ. ‘ಜೋತಯ್ಯನ ಬಿದಿರು ಬುಟ್ಟಿ’ಯೊಳಗಿರುವ
ಹತ್ತ...