ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಮತ್ತಿಲ್ಲಿಗೆ
ತಿರುಗಿ ನೋಡಿ ದಾಖಲು ಮಾಡಿಕೊಳ್ಳಲೂ
ಪುರುಸೊತ್ತಿರದಷ್ಟು ಕೆಲಸದ ನಡುವೆ, ಕಂಡ
ನೂರೆಂಟು ನೋಟಗಳು,
ಅವುಗಳಾಚೆಗೆ ಹೊಳೆವ ಹಲವಾರು ಚಿತ್ರಗಳು
ಎಲ್ಲ ಮೆಮೊರಿ ಕಾರ್ಡಿನಲ್ಲಿವೆ,
ಈ ವಾರ ಕಾದಿರುವ ಕೆಲಸದೊತ್ತಡದ ನಡುವೆ
ಒಂದೊಂದಾಗಿ ಪಡಿಮೂಡಲು ಕಾಯುತ್ತಾ..
ಹೋಗಿದ್ದೆಲ್ಲಿಗೆ ಬಂದಿದ್ದೆಲ್ಲಿಗೆ?
ಅದೇ ದಿಲ್ಲಿಗೆ.. ಮತ್ತೆ ಬೆಂಗಳೂರಿಗೆ..
ಪುಣ್ಯವೆಂದರೆ ಹೊರಟ ಜಾಗಕ್ಕೆ
ಮತ್ತೆ ಬಂದು ಸೇರಿರುವುದು.
ಅದೇ ಜಾಗ, ಅದೇ ಮನೆ,
ಹೊರಟಾಗ
ಮೊಗ್ಗು ಮೂಡಿದ್ದ ಗಿಡದ ತುಂಬ
ಈಗ
ಬಿರಿದು ನಿಂತ ಹೂಚೆಲುವು..
ನಾಲ್ಕಾರು ತಿಳಿವಿನ ಹೊಳವು
ಸುತ್ತ ಹರಡಿ..
ಮಳೆನಿಂತ ಬೆಳಗು.
ನೋಟ್ ಬುಕ್ಕಿನ ಕಡೆಯ ಪುಟ.....ಜಯಶ್ರೀ ದೇಶಪಾಂಡೆ
-
ʼನೋಟ್ ಬುಕ್ಕಿನ ಕಡೆಯ ಪುಟʼ ಈ ಹಾಸ್ಯಪಂಚವಿಂಶತಿಯನ್ನು ಬರೆದ ಶ್ರೀಮತಿ ಜಯಶ್ರೀ
ದೇಶಪಾಂಡೆಯವರಿಗೆ ಹಾಗು ಪ್ರಕಟಿಸಿದ ಶ್ರೀ ಅಣಕು ರಾಮನಾಥರಿಗೆ ಅಭಿನಂದನೆಗಳನ್ನು ಹಾಗು
ಧನ್ಯವಾದಗಳನ್ನು ಮ...