Friday, September 30, 2011

ಹಲ್ನೋವು

ಮಳೆಗಾಲದ ಮಧ್ಯಾಹ್ನ
ಉಂಹೂಂ ನಮ್ಮೂರಾಗಲ್ಲ
ಇಲ್ಲೆ ಐಟಿಸಿಟಿಯಲ್ಲಿ
ಬೈಗು,ಬೆಳಗು,ಬಿಸ್ಲೊತ್ತು,ನೆಳಲು
ಗೊತ್ತಾಗದ ಹಾಗೆ
ಏಸಿಯಲ್ಲಿ ಕುಳಿತು
ದಿನಚರಿಯನ್ನೇನು ಹೇಳುವುದು ಬಿಡಿ
ಎಲ್ಲರ ಕತೆಯೂ ಅದೆ
ವಿಷ್ಯ ಏನಪಾಂದ್ರೆ
ಸ್ವಲ್ಪ ಹೆಚ್ಚೇ ಕಾಡುತ್ತಿರುವ
ಹಲ್ನೋವು.
ಹುಂ ತಕ್ಷಣವೇ ಡಾಕ್ಟರತ್ರ
ಕರ್ಕೊಂಡೋಗಲು ನಾನು
ಹೊಸಹೆಂಡತಿಯಲ್ಲ.
ಅಂವ ಹಳೆಗಂಡನೂ ಅಲ್ಲ
ವಯಸ್ಸಾದ್ ಮೇಲೆ
ಇದ್ದಿದ್ದೆ ಇದೆಲ್ಲ
ಅಂತ ನಾನೂ ಸುಮ್ನಿದ್ದೆ
ಸುಮ್ನಾದಂಗೂ ಅಬ್ಬರ
ಜಾಸ್ತಿಯಾಗುವುದೇ ಹಲ್ನೋವಿನ ಲಕ್ಷಣವಂತೆ
ಈಗ ಮೂವತ್ತೈದರ ಆಜೂಬಾಜಲ್ಲಿ
ಇನ್ನೇನು ಮತ್ತೆ
ಎಲ್ಲ ಸಣ್ ಪುಟ್ಟ ಕಾಯಿಲೆಗಳಿಗೂ
ಬಾಲಗೋಪಾಲದಿಂದ
ಕಿರೀಟಕ್ಕೇ ಭಡ್ತಿ.
ಅದಕ್ಕೆ ಇರಬೇಕು
ಮಹಾನಗರದ ಆಸುಪತ್ರೆಗಳೆಲ್ಲ ಭರ್ತಿ.
ಮಳೆಯ ಚಳ್ ಚಳಿಯಲ್ಲಿ
ಬೆಚ್ಚಗೆ ಕೂತು ಚಕ್ಕಲಿ ಕಡಿಯುವ ನೆನಪಿಗೆ
ಹಲ್ಲು ಕಟಗುಟ್ಟಿ
ಇಷ್ಟೆಲ್ಲ ಬರೆಸಿದ್ದು ನೋಡಿದ್ರೆ
ಭೂತಗನ್ನಡಿಯಲ್ಲಿ ಬೆಳಕು ತೂರದೇನೆ
ಬೆಂಕಿ ಬಂದ್ರೂ ಬಂತೆ.

9 comments:

Sushrutha Dodderi said...

LOL! :D Go and get treated akkam! :)

ಸಾಗರದಾಚೆಯ ಇಂಚರ said...

ಚೆನ್ನಾಗಿದೇರಿ ಹಲ್ನೋವು ಕಥೆ :)

sunaath said...

ಸಿಂಧು,
ದಂತಯಾತನೆಯಿಂದ ಪ್ರೇರಣೆ ಪಡೆದ ಮಧುರ ಭಾವಲಹರಿ!
ನೆನಪೇ ಕಾರಣವಾಗಿ ಹಲ್ಲು ಕಟಕಟಸಿ ಮೂಡಿದ ಕವನ.
ನಿಮಗೆ ಹಲ್ಲು ನೋವಾದರೂ ಪರವಾಗಿಲ್ಲ, ಕ್ಷಮಿಸಿ; ಕವನ ಸುಂದರವಾಗಿದೆ!(ನೋವು ನಿಮ್ಮದು, ಸಂತೋಷ ನಮ್ಮದು!)

ಮನದಾಳದಿಂದ............ said...

ಹ್ಹ ಹ್ಹ ಹ್ಹಾ.......
ನಿಮ್ಮ ಹಲ್ಲುನೋವಿನ ವ್ಯತೆಯ ಕತೆ
ನಮಗೆ ಓದಲು ಸುಂದರ ಕವಿತೆ
ಸುನಾಥ್ ಜೀ ಹೇಳಿದಂತೆ ನಿಮ್ಮ ನೋವು ನಮ್ಮ ನಲಿವು!
ಚನ್ನಾಗಿದೆ.

ಶ್ರೀನಿಧಿ.ಡಿ.ಎಸ್ said...

aha:) kavana maja! ninna saja kke anukampavide:)

ಸಿಂಧು sindhu said...

ಸು,
ಒಳ್ಳೇ ತಮ್ಮ. ನಗ್ತಾ ಇದ್ರೂ ಪ್ರಾಕ್ಟಿಕಲ್ ಸಜೆಶನ್ ಕೊಡ್ತಾ ಇದ್ದೆ. :) ಇದು ಹಳೇ ಕವಿತೆ. ಹಲ್ನೋವು ಇಲ್ಲೆ.

ಗುರು,
ಥ್ಯಾಂಕ್ಸ್..

ಸುನಾಥ್,
ಕವನ ಚೆನ್ನಾಗಿದ್ದರೆ, ಹಲ್ಲುನೋವು ಬಂದಾಗ ಉಂಟಾದ ಕಿರಿಕಿರಿಯೇ ಕಾರಣ. :)

ಪ್ರವೀಣ್,
ಥ್ಯಾಂಕ್ಸ್ ಕಣ್ರೀ.

ನಿಧಿ ಎಂಬ ತಮ್ಮನೇ,
ನಿಮ್ಮ ಅನುಕಂಪವನ್ನು ಸ್ವೀಕರಿಸಲಾಗಿದೆ. ಮುಂದೆ ನಿಮ್ಮ ಹಲ್ಲುನೋವಿನ ಸಮಯದಲ್ಲಿ ಬಡ್ಡಿ ಸಮೇತ ವಾಪಸ್ ಮಾಡಲಾಗುವುದು. ;)

ನಿಮ್ಮೆಲ್ಲರ ಸ್ಪಂದನೆಗೆ ಧನ್ಯವಾದಗಳು
ಪ್ರೀತಿಯಿಂದ,ಸಿಂಧು

ಸೀತಾರಾಮ. ಕೆ. / SITARAM.K said...

+೧ ಮನದಾಳದಿಂದ

KalavathiMadhusudan said...

sindhu medam novigu
naliva kavana chendavaagide

ಸಿಂಧು sindhu said...

ಸ್ಪಂದಿಸಿದ ಸೀತಾರಾಂ ಮತ್ತು ಕಲರವ ಇಬ್ಬರಿಗೂ ಧನ್ಯವಾದಗಳು.
-ಸಿಂಧು