ಮಲ್ಲಿಗೆಯ ಪರಿಮಳದ ಹಾದಿ ಹಿಡಿದು ನಡೆದ ವೆಂಕಮ್ಮ ಕೆ.ಎಸ್.ನ ಅವರ ಬಗೆಗೆ ನನ್ನ ನುಡಿನಮನವನ್ನ ಕೆಂಡಸಂಪಿಗೆ ಪ್ರಕಟಿಸಿದೆ.
ನಿನ್ನೆ ಬುಧವಾರ ಬೆಳಿಗ್ಗೆ
ತನ್ನ ಹಾದಿ ಕಾಯುತ್ತ ಕೂತಿರಬಹುದಾದ
ಕವಿಚೇತನವನ್ನ ಸೇರಲು
ಅವರ ಮನೆಯೊಡತಿ ಹೊರಟು ಹೋಗಿದ್ದಾರೆ.
ಕಾವ್ಯಶ್ರೀ..ಯ ಹಿರಿಯಚೇತನಗಳನ್ನ ಕಳೆದುಕೊಂಡ ಅವರ ಕುಟುಂಬದವರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಬರಲಿ.
ಪ್ರೀತಿಯ ನಮನಗಳು ವೆಂಕಮ್ಮನವರಿಗೆ.
ಪ್ರೀತಿಯಿಂದ
ಸಿಂಧು
ಉತ್ತಿ ಬಿತ್ತಿದ್ದು
-
ಹಲ್ಲು ಬಿತ್ತೆಂದು ಅಳಬೇಡ ಮಗಳೇ
ಅವು ಹಾಲುಹಲ್ಲು, ಬೀಳಲೆಂದೇ ಹುಟ್ಟಿದವು
ವರುಷವೇಳಾಯ್ತಲ್ಲ ನಿನಗೆ, ಬೀಳುವವು ಹೀಗೆ ಒಂದೊಂದೇ
ಹುಟ್ಟುವುವಲ್ಲಿ ಹೊಸ ಹಲ್ಲು
ಫಳಫಳ ಹೊಳೆವ ಬಿಳಿಬಿಳಿ ಹಲ್ಲು...
2 comments:
ಸಿಂಧು,
ಕೆ.ಎಸ್.ಎನ್. ಕನ್ನಡಿಗರಿಗೆ ಮಲ್ಲಿಗೆಯ ಕಂಪು ನೀಡಿದ್ದರು. ಅವರ "ಮಲ್ಲಿಗೆ"ಯೂ ಈಗ ನಮ್ಮನ್ನು ಅಗಲಿ, ಜೊತೆಗಾರನನ್ನು ಕೂಡಿದರು.
ನಿಮ್ಮೊಡನೆ ನನ್ನದೂ ನಮನ.
ವೆಂಕಮ್ಮ ಅವರನ್ನು ನೋಡದವರಿಗೂ ಅವರನ್ನು ತೋರಿಸಿದ್ದೀರ. ಧನ್ಯವಾದಗಳು.
Post a Comment