Friday, August 28, 2009

ನೀಲಾಂಬರದ ನಡುವಿನ ಚಂದಿರನ ಸೇರಲು ನಗುತ ಹೊರಟ ರೋಹಿಣಿ..

ಮಲ್ಲಿಗೆಯ ಪರಿಮಳದ ಹಾದಿ ಹಿಡಿದು ನಡೆದ ವೆಂಕಮ್ಮ ಕೆ.ಎಸ್.ನ ಅವರ ಬಗೆಗೆ ನನ್ನ ನುಡಿನಮನವನ್ನ ಕೆಂಡಸಂಪಿಗೆ ಪ್ರಕಟಿಸಿದೆ.
ನಿನ್ನೆ ಬುಧವಾರ ಬೆಳಿಗ್ಗೆ
ತನ್ನ ಹಾದಿ ಕಾಯುತ್ತ ಕೂತಿರಬಹುದಾದ
ಕವಿಚೇತನವನ್ನ ಸೇರಲು
ಅವರ ಮನೆಯೊಡತಿ ಹೊರಟು ಹೋಗಿದ್ದಾರೆ.

ಕಾವ್ಯಶ್ರೀ..ಯ ಹಿರಿಯಚೇತನಗಳನ್ನ ಕಳೆದುಕೊಂಡ ಅವರ ಕುಟುಂಬದವರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಬರಲಿ.
ಪ್ರೀತಿಯ ನಮನಗಳು ವೆಂಕಮ್ಮನವರಿಗೆ.

ಪ್ರೀತಿಯಿಂದ
ಸಿಂಧು

2 comments:

sunaath said...

ಸಿಂಧು,
ಕೆ.ಎಸ್.ಎನ್. ಕನ್ನಡಿಗರಿಗೆ ಮಲ್ಲಿಗೆಯ ಕಂಪು ನೀಡಿದ್ದರು. ಅವರ "ಮಲ್ಲಿಗೆ"ಯೂ ಈಗ ನಮ್ಮನ್ನು ಅಗಲಿ, ಜೊತೆಗಾರನನ್ನು ಕೂಡಿದರು.
ನಿಮ್ಮೊಡನೆ ನನ್ನದೂ ನಮನ.

Anonymous said...

ವೆಂಕಮ್ಮ ಅವರನ್ನು ನೋಡದವರಿಗೂ ಅವರನ್ನು ತೋರಿಸಿದ್ದೀರ. ಧನ್ಯವಾದಗಳು.