Thursday, June 28, 2007

ಅಕ್ಷರ ಪ್ರೇಮ ನಿವೇದನೆ

ಮರುಭೂಮಿಯ ರಾತ್ರಿಗಳಲ್ಲಿ
ಬೆಳದಿಂಗಳು ಚಂದವಿರಬಹುದೆಂದು
ನನ್ನ ಅಸೆ ಮತ್ತು ನಂಬಿಕೆ;


ಮರಳುಗಾಡಿಗೇ ಬರುವ ಧೈರ್ಯ ಮಾಡಿದವನು
ಕೃಷ್ಣಪಕ್ಷ ಕಳೆದು
ಇಂಚಿಂಚೇ ನಗಲಾರೆಯಾ?


ಎಂದು ಬರಲಿದೆ ಪಾಡ್ಯ?
ನನಗೆ ಬಿದಿಗೆಯೆಂದರೆ,
ಬಿದಿಗೆಯಲ್ಲಿ ಪುಟ್ಟಗೆ ನಗುವ ನೀನೆಂದರೆ
ತುಂಬ ಪ್ರೀತಿ.
ಅದಕ್ಕೇ ಕಾದಿದ್ದೇನೆ ಇದು ಮರಳುಗಾಡೆಂದು ಗೊತ್ತಿದ್ದರೂ.

3 comments:

ಉಮಾಶಂಕರ್ ಯು. said...

ಪ್ರೀತಿ ಇದ್ದಲ್ಲಿ ... ಕಾಯುವುದು ಕೂಡ ಒಂದು ಸುಖ ಅನ್ನಿಸುತ್ತದೆ ... ಅಲ್ಲವೆ .. ?

ಸಿಂಧು sindhu said...

ಉಮಾಶಂಕರ್,

ಪ್ರೀತಿಯೇ, ಕಾಯುವ ಬಲ ಕೊಡುತ್ತದೆ. ನೋವಿನಲ್ಲೂ ಒಂದು ನಲಿವಿನ ಭರವಸೆ ತುಂಬುತ್ತದೆ.

dinesh said...

ನಿಜಾ ಕಣ್ರೀ... ಮರುಭೂಮಿಯಲ್ಲಿ ಬೆಳದಿಂಗಳು ನಿಜಕ್ಕೂ ಚೆನ್ನಾಗಿರುತ್ತೆ... ಓಯಾಸಿಸ್ ಪಕ್ಕದಲ್ಲಿದ್ರೆ....
ಕವನ ತುಂಬಾ ಚೆನ್ನಾಗಿದೆ..