ಮರುಭೂಮಿಯ ರಾತ್ರಿಗಳಲ್ಲಿ
ಬೆಳದಿಂಗಳು ಚಂದವಿರಬಹುದೆಂದು
ನನ್ನ ಅಸೆ ಮತ್ತು ನಂಬಿಕೆ;
ಮರಳುಗಾಡಿಗೇ ಬರುವ ಧೈರ್ಯ ಮಾಡಿದವನು
ಕೃಷ್ಣಪಕ್ಷ ಕಳೆದು
ಇಂಚಿಂಚೇ ನಗಲಾರೆಯಾ?
ಎಂದು ಬರಲಿದೆ ಪಾಡ್ಯ?
ನನಗೆ ಬಿದಿಗೆಯೆಂದರೆ,
ಬಿದಿಗೆಯಲ್ಲಿ ಪುಟ್ಟಗೆ ನಗುವ ನೀನೆಂದರೆ
ತುಂಬ ಪ್ರೀತಿ.
ಅದಕ್ಕೇ ಕಾದಿದ್ದೇನೆ ಇದು ಮರಳುಗಾಡೆಂದು ಗೊತ್ತಿದ್ದರೂ.
ಬಾಕಿ ಮೊಕ್ತಾ
-
ಆಮೇಲೆ ಚಿಲ್ಲರೆ ಕೊಡುತ್ತೇನೆ ಎಂದು ಕಂಡಕ್ಟರು
ಟಿಕೇಟಿನ ಹಿಂದೆ ಬರೆದುಕೊಟ್ಟಿದ್ದ ಮೊತ್ತ
ಪಡೆವುದ ಮರೆತು ಬಸ್ ಇಳಿದ ದಿನ
ಎಷ್ಟೋ ಹೊತ್ತಿನವರೆಗೆ ಕಾಡಿತ್ತು ಅದೇ ಕೊರಗು
ಕಾಡಿರಬಹುದೇ ಆ ಕಂ...
4 comments:
ಪ್ರೀತಿ ಇದ್ದಲ್ಲಿ ... ಕಾಯುವುದು ಕೂಡ ಒಂದು ಸುಖ ಅನ್ನಿಸುತ್ತದೆ ... ಅಲ್ಲವೆ .. ?
ಉಮಾಶಂಕರ್,
ಪ್ರೀತಿಯೇ, ಕಾಯುವ ಬಲ ಕೊಡುತ್ತದೆ. ನೋವಿನಲ್ಲೂ ಒಂದು ನಲಿವಿನ ಭರವಸೆ ತುಂಬುತ್ತದೆ.
ನಿಜಾ ಕಣ್ರೀ... ಮರುಭೂಮಿಯಲ್ಲಿ ಬೆಳದಿಂಗಳು ನಿಜಕ್ಕೂ ಚೆನ್ನಾಗಿರುತ್ತೆ... ಓಯಾಸಿಸ್ ಪಕ್ಕದಲ್ಲಿದ್ರೆ....
ಕವನ ತುಂಬಾ ಚೆನ್ನಾಗಿದೆ..
ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com
Post a Comment