Monday, May 6, 2019

ಮಾತು, ಮೌನದ ಗೆರೆಯ ನಡುವೆ..

ಮಾತನಾಡುತ್ತ ಆಡುತ್ತ ,
ನೀನು ಹೂಂಗುಡುವ ಹೊತ್ತು
ಕೇಳುವ ನನಗೆ ಗೊತ್ತು:
ನುಗ್ಗಿ ನುರಿಯಾದ ಚಿತ್ತ
ಈಗಿಲ್ಲ ಇತ್ತ;
ಬೇಸರದಿ ಮುದುಡುತ್ತ,
ಒಳಗೊಳಗೆ ಸರಿಯುತ್ತ,
ಹರಿವು ಬಂದತ್ತ ಹರಿಯುತ್ತ,
ಮಾತು ಮರೆತಿರುವ ಹೊತ್ತು.
ಉಳಿದ ಮಾತು ನೆನಪಾದರೆ ನಾಳೆಯಿದೆಯೆನ್ನುತ್ತ
ಫೋನಿಡುವ ಮನದ ಹುತ್ತ-
-ವೊಡೆದರೆ ಶೋಕಭರಿತ ಕಾವ್ಯ ಉನ್ಮತ್ತ.

3 comments:

sunaath said...

ಇದು ನಿಜವಾಗಿಯೂ ಕಾವ್ಯ ಉನ್ಮತ್ತ!

Unknown said...

😇 it's too good

Unknown said...

It's too good