Tuesday, February 18, 2014

ವೈರುಧ್ಯ ವೈಶಿಷ್ಟ್ಯ

ಶುಕ್ಲ ಬಿದಿಗೆಯಲ್ಲಿ
ಮೂಡುವ ಬಿಂಬವೇ
ಕತ್ತಲಿಂದಲ್ಲವೇ
ನಿನ್ನ ಕಮನೀಯತೆಗೆ
ಆ ಮನೋಹರ ಹೊಳಪು!
ದಿನದಾಗಸದಿ ತೇಲಿಬಂದರೆ
ವರಕವಿಯ ಪದ್ಯಸಾಲಾದೀಯ
ಕತ್ತಲಿರಲಿ ಸುತ್ತಮುತ್ತೆಲ್ಲ

ಮಿನುಗುತಿರಲಿ ರಾತ್ರಿಯೆಲ್ಲ.

1 comment:

sunaath said...

ಬಿದಿಗೆಯ ಚಂದ್ರಮನ ಸೊಗಸುಳ್ಳ ಕವನ.