Thursday, February 6, 2014

ಪರಪುಟ್ಟಿ..

ತೊರೆಪಕ್ಕದಿ
ಕಾಡ ಅಂಚಲಿ
ಹಸಿರಾಗಿ ಬೆಳೆದ ಮರದ
ಕೊಂಬೆತುಂಬ
ತಿಳಿಗುಲಾಬಿ ನೇರಳೆ ಹೂಗಳ
ಹೊತ್ತ ಆ ಗಿಡಗುಚ್ಛದ ಹಣ್ಣು
ಹೂರಸ ಸಿಹಿಸಿಹಿ.
ಬೆಳಗಿನ ಉಪಾಹಾರಕ್ಕೆ
ಅದನುಂಡ ಕಾಗಕ್ಕನ
ಕೊಕ್ಕಿಗೆ ಅಂಟಿತು ಬೀಜ
ಆಮೇಲಿಷ್ಟು ಹಾರಾಟ
ಅಲ್ಲಲ್ಲಿ ನೀರು ಎರಚಾಟ
ಬಿಸಿಲ ಪೊರೆವಾಟ
ಮುಗಿಸಿ
ಮಧ್ಯಾಹ್ನದೂಟ
ಇದೀಗ
ಇನ್ನೊಂದು ಹಣ್ಣಿನ ಮರ
ಬಲು ಜತನದಿ ಬೆಳೆಸಿದ ಕಸಿಮರ
ಕಾಟಲ್ಲ, ಹಾದಿಬದಿಯದಲ್ಲ
ಮನೆಯ ತೋಟದಿ
ಸುಪೋಷಣೆಯ ಎಳೆಮರ.
ಹಣ್ಣು ತಿಂದಾಯಿತು.
ಕೊಕ್ಕಲ್ಲಿ ಅಂಟಿದ್ದ ಬೆಳಗಿನ ಬೀಜ
ಮರದ ಕಾಂಡಕ್ಕೆ.
ವಾರ ಕಳೆಯಿತು.
ಬೀಜ ಮೊಳಕೆಯೊಡೆದು
ತೊಗಟೆಯ ಅಂಟಿ ಹಿಡಿದು
ಎಳೆ ಚಿಗುರು.
ವರ್ಷಗಳಳಿದವು
ಸುಪುಷ್ಟ ಮರದ
ಹೆಗಲೇರಿದ ಬೀಜಸಂತಾನ
ಈಗ ಮೈತುಂಬ.
ಮರದ ಜೀವರಸವುಂಡು
ಬೆಳೆಬೆಳೆವ ಬಂದಳಿಕೆ.
ಜೀವರಸವ ಹೀರಗೊಟ್ಟ
ಮರ ಈಗ ಮೊರೋಸ್ (morose).
ಎಳೆಬೀಜ, ಚಿಗುರು
ಬಣ್ಣ ಬಣ್ಣದ ಹೂಗುಚ್ಛ
ಹೊದ್ದ ಮೊದಲ ದಿನಗಳು
ಮುಗಿದು ಈಗ
ಮೈಸೋಲುವ ಕಾಲ.

ನಮ್ಮ ತನ
ಅರಿವಾಗುವ
ಚಣದ ಕಾಲದ ಮುಳ್ಳು ಬಲು ಚೂಪು.

ಅರಿವಿರದೆ ಹಬ್ಬಿ ಕೊರೆದೆ.
ಸಾಧ್ಯವಾದರೆ ಕ್ಷಮೆಯಿರಲಿ.

ದುಃಖ ಏನೆಲ್ಲ ಕಲಿಸುತ್ತದೆ!
ಎಂದೋ ಕಲಿತು ಮರೆತ
ಬಾಟನಿಯನ್ನೂ.
mistletoe
Web Courtesy: http://thetrustygardener.com

Wednesday, February 5, 2014

ಕನಸಿನ ನಿಯಮ..

ರೋ ರೋ ರೋ ಅ ಬೋಟ್
ಜೆಂಟ್ಲಿ ಡೌನ್ ದಿ ಸ್ಟ್ರೀಮ್...
ಮೆರಿಲಿ ಮೆರಿಲಿ ಮೆರಿಲಿ ಮೆರಿಲಿ
ಲೈಫ್ ಈಸ್ ಬಟ್ ಅ ಡ್ರೀಮ್..


ಇದೇ ಸರಿ.

(ನೀರಿದ್ದರೆ)
ನಿಧಾನಕ್ಕೆ.. ಆ ಹರಿವಲ್ಲಿ
ನವುರಾಗಿ..
ಮುಳುಗೇ ಹೋಗುತ್ತೇನೆ ಎನ್ನಿಸಿದರೂ
ತೇಲುತಿರುವೆ ಎಂಬಂತೆ..
ಹುಟ್ಟು ಹಾಕಬೇಕು,
ಕನಸಲ್ಲಾದರೂ
ಅಳದೆ ಇರಬೇಕು.
ಅಳುಕು ಮರೆಯಬೇಕು.

ಎಚ್ಚರದ ಮಾತು
ಈಗ ಬೇಡ.