tag:blogger.com,1999:blog-45157919443822070902024-03-13T06:12:07.517+05:30ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!ಸಿಂಧು sindhuhttp://www.blogger.com/profile/11363295766940671498noreply@blogger.comBlogger255125tag:blogger.com,1999:blog-4515791944382207090.post-76020990887684886512023-09-26T12:03:00.004+05:302023-09-26T12:12:45.040+05:30<p style="margin: 12px 0px;">Long Post Alert!</p><p style="background-color: white; margin: 8px 0px 0px;"><a name=":1um"></a><span style="color: #222222; font-family: '"Nirmala UI"'; font-size: small; font-weight: 600;"><br /></span><span style="color: #222222; font-family: '"Nirmala UI"'; font-size: x-large; font-weight: 600;">"ಆನೆ ಬಂತಾನೆ ಬಂತಾನೆ ಬಂತಮ್ಮಮ್ಮಾ..."</span></p><p style="background-color: white; margin: 0px;"><span style="color: #222222; font-family: "\"Nirmala UI\"";">ಬುದ್ಧಚರಣವೆಂಬ ಮಹಾಕಾವ್ಯದಾನೆಯ ಮುಟ್ಟಿನೋಡಿದ ಕುರುಡುನೋಟ.-ಸಿಂಧು</span></p><p style="background-color: white; margin: 0px;"><span style="color: #222222; font-family: "Nirmala UI"; font-size: 14pt;">----------------------------------------</span></p><p style="margin: 0px;">ಹೆಸರು ನೋಡಿ ಓಹ್ ಇದು ನನಗೆ ಈಗ ಸಧ್ಯಕ್ಕೆ ಬೇಡ ಅಂದುಕೊಂಡೆ. ಅದು ಮಹಾಕಾವ್ಯ ಅಂತ ವಿವರಣೆ ಓದುತ್ತಲೂ ಬಹುಶಃ ಇದು ನನಗೆ ಆಗಲಿಕ್ಕಿಲ್ಲ ಎಂಬ ಯೋಚನೆ ಬಂತು. ಎಂದಾದರೊಂದು ದಿನ ನೋಡುವ ಎಂಬ ಸಮಾಧಾನವನ್ನೂ ಕೊಟ್ಟುಕೊಂಡೆ.<br />ಹಾಗಂತಲೇ ಅಲ್ಲಿ ಇಲ್ಲಿ ಈ ಪುಸ್ತಕದ ಕುರಿತು ಕೆಲ ಹಿರಿಯರ ಅಭಿಪ್ರಾಯ ಲೇಖನಗಳು ಪ್ರಕಟವಾದಾಗ ಓದಿದರೂ ಮನಸ್ಸು ಓದಲೆಳಸಿರಲಿಲ್ಲ. ಇದರ ಕುರಿತು ಮಾತನಾಡಿಕೊಂಡರೂ ಗೆಳತಿ ಮಾಲಿನಿ ಈ ಪುಸ್ತಕದ ಕುರಿತು ಬರೆಯುವವರೆಗೂ ಓದುವ ಮನಸ್ಸು ಬಂದಿಲ್ಲದೆ ಇದ್ದದ್ದು ನಿಜ.<br />ಪುಸ್ತಕದ ಹೆಸರು ಮತ್ತು ಮಹಾಕಾವ್ಯವೆಂಬ ಪ್ರಕಾರ ಸ್ವಲ ಭಯವುಂಟು ಮಾಡಿದ್ದು ನಿಜವೇ ಆದರೂ, ಈ ಕುರಿತು ಬಂದ ಲೇಖನಗಳು ಅವುಗಳಲ್ಲಿಯ ಅಧ್ಯಯನಶೀಲತೆಯ ಗಹನತೆಯಿಂದ ಅಥವಾ ಮೇಲುಮೇಲಿನ ಕೆಲಮಾತುಗಳಿಂದ ಪುಸ್ತಕದ ತಿರುಳಿನ ಕಡೆಗೆ, ಸಂರಚನೆಯ ಕಡೆಗೆ ನನ್ನ ಮನಸ್ಸನ್ನು ಹೊರಳಿಸದೇ ಇದ್ದದ್ದೂ ಅಷ್ಟೇ ನಿಜ.<br /><br />ಚಿಕ್ಕವರಿದ್ದಾಗ ಅಲ್ಲಿಲ್ಲಿ ಚೂರು ಕೇಳಿದ ಮತ್ತು ಅಮರಚಿತ್ರಕಥೆ, ಚಂದಮಾಮದಲ್ಲಿ ಓದಿದ ಜಾತಕ ಕಥೆಗಳು ಹಾಗೂ ಪಠ್ಯದಲ್ಲಿ ಒದಗಿದ ಬುದ್ಧನಷ್ಟೇ ಗೊತ್ತಿದ್ದ ನನಗೆ ಈ ಮಹಾಕಾವ್ಯವು ಬುದ್ಧನೆಂಬ ಅಗಲವಾದ ಹರಿವಿನ ಹೊಳೆಗೆ ಲೈಫ್ ಜಾಕೆಟ್ ಇರುವ ತೆಪ್ಪವಾಗಿ ಒದಗಿತು ಎಂದರೆ ಉತ್ಪ್ರೇಕ್ಷೆಯಲ್ಲ. ಸಾಮಾನ್ಯವಾಗಿ ಬುದ್ಧ ಎಂದರೆ "ಆಸೆಯೇ ದುಃಖಕ್ಕೆ ಮೂಲ, ಬುದ್ಧ ಎಂದರೆ ನಡುರಾತ್ರೆ ಹೆಂಡತಿ ಮತ್ತು ಮಗು ಮಲಗಿದ್ದಾಗ ಬದುಕಿನ ಅರ್ಥ ತಿಳಿಯಲು ಎದ್ದು ಹೋದ ರಾಜಕುಮಾರ, ಕಿಸಾಗೌತಮಿಗೆ ಸಾವು ಎಲ್ಲರಿಗೂ ಒಂದಿಲ್ಲೊಂದು ದಿನ ಬಂದೇ ಬರುವುದು ಎಂದು ಸುಲಭವಾಗಿ ಸಾಸಿವೆಯ ಮೂಲಕ ಅರ್ಥ ಮಾಡಿಸಿದವನು, ಬುದ್ಧನೆಂದರೆ ಅಂಗುಲಿಮಾಲನಿಗೆ ಬೆರಳು ಕೊಟ್ಟವನು, ಬುದ್ಧನೆಂದರೆ ಅಮ್ರಪಾಲಿಯೆಂಬ ನರ್ತಕಿಯ ಮನೆಗೂ ಬಂದ ಗುರು, ಬುದ್ಧ ಎಂದರೆ ವಿಹಾರ, ಬುದ್ಧ ಎಂದರೆ ಚೈತ್ಯ, ಬುದ್ಧ ಎಂದರೆ ನಲಂದಾ, ಬುದ್ಧ ಎಂದರೆ ಬೋಧಿ ವೃಕ್ಷ, ಬುದ್ಧ ಎಂದರೆ ರಾಜರಾಜರುಗಳನ್ನೆಲ್ಲ ಹಿಂಸೆಯಿಂದ ವಿಮುಖವಾಗಿಸಿದವನು, ಎಂದೆಲ್ಲ ಸ್ವಲ್ಪ ರಮ್ಯ ಮತ್ತು ಸ್ವಲ್ಪ ನಾವು ಸಾಧಾರಣ ಮನುಷ್ಯರಿಂದ ತುಸು ದೂರಕ್ಕೆ ಎತ್ತರಕ್ಕೆ ಇರುವ ಮಹಾನ್ ಚೇತನ ಎಂಬುದಷ್ಟು ಅರೆಬರೆಯಾಗಿ ದಕ್ಕಿದ ಬಾಲ್ಯದ ತಿಳಿವು ಒಂದೆಡೆಗಿತ್ತು. ಮುಂದೆ ಮುಂದೆ ಬೆಳೆಯುತ್ತ ಬರುವಾಗ ಬುದ್ಧನೆಂದರೆ ವೈದಿಕಶಾಹಿಯ ವಿರುದ್ಧ ಸಮಾನತೆಯ ಧರ್ಮ ಕೊಟ್ಟವನು, ಹೊಸಯುಗದ ಹರಿಕಾರ, ಬುದ್ಧನೆಂದರೆ ಗಣರಾಜ್ಯಗಳ ಹಿಂದಿನ ಪ್ರೇರಣೆ, ಬುದ್ಧನೆಂದರೆ ನಲಂದಾ ತಕ್ಷಶಿಲೆ, ಬುದ್ಧನೆಂದರೆ ರಾಹುಲ ಸಾಂಕೃತ್ಯಾಯನರ ಕಥೆಗಳ ತಿರುಳು, ಬುದ್ಧನೆಂದರೆ ಅಂಬೇಡ್ಕರ್ ರಂತಹ ಮಹಾನಾಯಕನನ್ನೆ ಧಾರ್ಮಿಕವಾಗಿಸಿದವನು, ಬುದ್ಧನೆಂದರೆ ಪೌರ್ಣಮಿಯ ಶಾಂತತೆ, ಬುದ್ಧನೆಂದರೆ ಮಂದಸ್ಮಿತ ಹೀಗೆಲ್ಲ. ಜಗತ್ತಿನ ತೊಂದರೆಗಳಿಗೆ "ಬುದ್ಧಂ ಶರಣಂ ಗಚ್ಛಾಮಿ" ಎಂಬ ಏಕೈಕ ಪರಿಹಾರ ಎಂಬ ಅತಿರಮ್ಯ ಆದರ್ಶವೆಂದು ಕಲಿತರೂ ನನ್ನ ಹಾಗಿನ ಸಾಧಾರಣ ಮನುಷ್ಯರಿಗೆ ಒಂದು ಹೆಜ್ಜೆ ದೂರದ ನಮಸ್ಕಾರಕ್ಕೆ ಯೋಗ್ಯ ಎಂಬ ಭಾವನೆ ಇತ್ತು. ಹೆಚ್ಚೆಂದರೆ ಮನೆಯಲ್ಲಿ ದೀಪದ ಬೆಳಕು ಬೀಳುವೆಡೆಯಲ್ಲಿ ಒಂದು ಬುದ್ಧನ ಮೊಗದ ಶಿಲ್ಪವಿದ್ದರೆ ಮನೆಯ ಚಂದ ಹೆಚ್ಚುತ್ತದೆ ಎಂಬ ಅಲ್ಟ್ರಾ ಮಾಡರ್ನ್ ಅಭಿರುಚಿಯೊಂದು ಸೇರಿಕೊಂಡಿತು. ಬದುಕಿನ ದಾರಿಗಳಲ್ಲಿ ಬಗ್ಗು ಬಡಿಸಿಕೊಂಡು ಅಷ್ಟಷ್ಟೇ ದೂರ ಬರುವಾಗ ಕೆಲವು ರಮ್ಯ ಕಲ್ಪನೆಗಳು ವಾಸ್ತವದ ಬಿಸಿಲಿನಲ್ಲಿ ಒಣಗುತ್ತಾ ಹೂಪಕಳೆಗಳು ಉದುರುತ್ತವೆ. ಸಹಜವಾಗಿ ನಾವು ಒಂದು ನಿಟ್ಟುಸಿರಿನೊಂದಿಗೆ ಮುಂದೆ ಹೆಜ್ಜೆ ಇಡುತ್ತೇವೆ.<br /><br />ಮೂರ್ತಿ ಪೂಜೆಯನ್ನೇ ಕಟುವಾಗಿ ವಿರೋಧಿಸಿದ, ಮೂಢನಂಬಿಕೆಗಳನ್ನು ಹೆಜ್ಜೆಹೆಜ್ಜೆಗೂ ಪ್ರಶ್ನಿಸುತ್ತಾ ಹೊಸ ಆಕಾಶವನ್ನು ತೆರೆದ ಬುದ್ಧನೆಂಬ ಗುರುವಿನ ಹಲ್ಲುಗಳನ್ನು ವಜ್ರದ ಕರಂಡಕವೊಂದರಲ್ಲಿ ಇಟ್ಟು ಬುದ್ಧ ದೇವಾಲಯವೊಂದರಲ್ಲಿ ಪೂಜಿಸಲಾಗುತ್ತದೆ, ಅದಕ್ಕಾಗಿ ಅತಿ ಹೆಚ್ಚು ಪ್ರವಾಸಿಗಳು ಭೇಟಿ ಕೊಡುತ್ತಾರೆ ಎಂದು ತಿಳಿದಾಗ ನಾನು ವೈಚಾರಿಕತೆ ಎಂಬುದು ಕಡತಂದ ರಮ್ಯತೆಯಾಗಿದ್ದರೆ ಎಂಥ ಅಪಾಯ ಎಂದು ಮನಗಂಡೆ. ಇಂಥ ಹಿನ್ನೆಲೆಯಲ್ಲಿ, ಅವರ ಬಿಡಿ ಕಾವ್ಯದ ಅಭಿಮಾನಿಯೇ ಆಗಿದ್ದರೂ ನಮ್ಮ ಹೆಚ್ಚೆಸ್ವೀಯವರ ಬುದ್ಧಚರಣ ಮಹಾಕಾವ್ಯವನ್ನು ಕೈಗೆತ್ತಿಕೊಳ್ಳಲು ನನಗೆ ಅಂಥ ಉಮೇದು ಇರಲಿಲ್ಲ.<br /><br />ಈ ಪುಸ್ತಕದ ಕುರಿತು ನಾವೊಂದಿಷ್ಟು ಜನ ಕಾವ್ಯಾಸಕ್ತ ಸ್ನೇಹಿತರು ಮಾತನಾಡಿಕೊಂಡಾಗ ನಮ್ಮಲ್ಲಿನ ಚೆನ್ನಾಗಿ ಕವಿತೆ ಬರೆಯುವ ಸಾಕಷ್ಟು ಕಾವ್ಯ ಓದುವ ಗೆಳೆಯರು ಆಡಿದ ಅನುತ್ಸಾಹದ ಮಾತು ಕೂಡ ಇದು ಸ್ವಲ್ಪ ನನ್ನ ತಲೆಯ ಮೇಲೆ ಹೋಗುವ ಪುಸ್ತಕ ಎಂಬ ಭಾವವನ್ನೇ ಹುಟ್ಟಿಸಿತ್ತು.<br />ಮಾಲಿನಿ ಬುದ್ಧಚರಣದ ಕುರಿತು ಬರೆಯಲು ಹೊರಟಾಗ ನನ್ನನ್ನು ಬಗಲಿಗೆ ಸಿಕ್ಕಿಸಿಕೊಂಡು ಬರೆದ ಪರಿಗೆ ಈ ಸೊಗಸಾದ ಮಹಾಕಾವ್ಯದ ಘಮ ನನ್ನ ಮೊಂಡು ಮೂಗಿಗೂ ಬಂದಿತು.<br />ರಾತ್ರಿ ರಾಣಿ ಹೂಗಳಿಗೆ ತೀಕ್ಷ್ಣ ಪರಿಮಳವಿದ್ದರೂ ನೀವು ಆ ಬಳ್ಳಿಯಲ್ಲಿ ಬಿಟ್ಟ ಹೂಗೊಂಚಲಿಗೆ ಮೂಗೊಡ್ಡಿದರೆ ಅದರ ಪರಿಮಳದ ಲೋಕ ತೆರೆಯುವುದಿಲ್ಲ. ತುಸು ದೂರದಲ್ಲಿರಬೇಕು. ಮೆಲುವಾಗಿ ಗಾಳಿ ಬೀಸಬೇಕು. ಅಷ್ಟೆ.. ಮನಸ್ಸು ಆ ಪರಿಮಳದ ನಶೆಯಲ್ಲಿ ತೇಲುತ್ತ ಹಗುರಾದ ಭಾವ ತುಂಬುತ್ತದೆ. ಈ ಬುದ್ಧಚರಣವೆಂಬ ಮಹಾಕಾವ್ಯಕ್ಕೆ ಆ ಗುಣವಿದೆ ಎಂದು ನನಗಾದ ಅನುಭವ. ಮಾಲಿನಿ ಲೇಖನವನ್ನು ಮುತ್ತುಮಾಲೆಯಾಗಿ ಪೋಣಿಸುವಾಗ ಮಧ್ಯೆ ಮಧ್ಯೆ ಬೇಕಿದ್ದ ಬಿಡುವಿನಲ್ಲಿ ನನ್ನ ಜೊತೆಗೆ ಕೆಲ ಮಾತುಕತೆ ಆಡುತ್ತಿದ್ದರು. ಮಾಲಿನಿಯ ಲೇಖನದ ಒಳನೋಟಗಳು ನನ್ನನ್ನು ಈ ಮಹಾಕಾವ್ಯದ ಮೊದಲ ಪುಟ ತೆರೆಯಲು ವಿಶ್ವಾಸ ತುಂಬಿದವು.<br /><br />ಮೊದಲ ಪುಟ ಓದಿದ ಮೇಲೆ ಎಷ್ಟು ಪುಟಗಳಾದವು ಎಂದು ಎಣಿಸುವ ಪ್ರಮೇಯ ಅಥವಾ ಇದು ಮಹಾಕಾವ್ಯ, ಇದು ನನ್ನ ಅಳವಿಗೆ ಹೇಳಿದ್ದಲ್ಲ ಎಂಬ ಆತಂಕ ಬರಲೇ ಇಲ್ಲ. ಈ ಪುಸ್ತಕದ ಪುಟಪುಟಗಳಲ್ಲೂ ಭಾವಗೀತೆಗಳನ್ನೇ ಕವಿ ಕಂಡರಿಸಿಬಿಟ್ಟಿದ್ದಾರೆ.<br />ಸುಮ್ಮನೆ ಮೊದಲಿಗೆ ಒಂದು ಸಾಲು ನೋಡಿ<br />ಸಿದ್ಧಾರ್ಥನ ತಾಯಿಮಾಯಾದೇವಿಯ ಮನಸ್ಸಿನ ಕೊಳದಲ್ಲಿ ಏಳುವ ಭಾವನೆಗಳ ಅನುಭಾವದ ಅಲೆಗಳ ಕುರಿತು ಹೇಳುತ್ತಾ ಕವಿ ಬರೆಯುತ್ತಾರೆ:<br /><br />"ಯಾರ ಬೆರಳೋ ಬಿಡಿಸಿವೆ ನೀರಿನಂಗಣದಿ<br />ಬೆಳಕಿನೆಳೆಬಟ್ಟನ್ನು| ಮೈತುಂಬ ದೀಪ ಮುಡಿಸಿರುವ<br />ಕಾಲ್ದೀಪವೆಂಬಂತೆ ಕಾಣುವಳು ಆ ಪುಣ್ಯವತಿ...."<br /><br />ದುರಂತವೊಂದರ ಮುನ್ನುಡಿ ಬರೆಯುವಾಗಲೂ ಕವಿಯ ಕೈಯಲ್ಲಿ ಅದೇ ಮೆದುವಾದ ದನಿ. ಮಗು ಸಿದ್ದಾರ್ಥನ ತಾಯಿ ಎಳೆ ಬಾಣಂತಿ ಮಾಯಾದೇವಿ ಸಾಯುವ ಮುನ್ನಿನ ಗಳಿಗೆಗಳು ಹೀಗೆ ಸಾಲಾಗಿ ಬಂದಿವೆ. ಹರಿತವಾದ ಸಾಲೊಂದನ್ನು ಬರೆಯುವಾಗ ಕೈ ನಡುಗಿದರೂ ಸ್ಪಷ್ಟವಾಗಿ ಬರೆಯುತ್ತಾರೆ<br /><br />"ಹತ್ತಿಬತ್ತಿಗೂ ಉರಿವ ದೀಪಕ್ಕೂ ನಂಟು ಕಳಚಿದ ಹಾಗೆ..." ಬಸಿರಿನ ಮೊದಲಲ್ಲಿ ಮೈತುಂಬ ದೀಪ ಹೊದ್ದ ಕಾಲ್ದೀಪದ ಉಪಮೆಯನ್ನು ನೆನಪು ಮಾಡಿಕೊಳ್ಳಿ. ಅದೇ ದೀಪದ ಉಪಮಾನ ಈಗ ಬದುಕಿನ ನಂಟು ಕಳಚುವುದಕ್ಕೂ ಬಂದಿದೆ.<br /><br />"ಸುರಿಮಳೆಯ ಮುಸುಕಲ್ಲಿ ಬರಸಿಡಿಲು ಕಾಯುತಿದೆ<br />ಹಸಿಮರವ ನೋಡುತ್ತ ಮಸೆದಲಗು ಕಣ್ಣಲ್ಲಿ"<br /><br />ಸಿಡಿಲಿನ ಮಸೆದಿಟ್ಟ ಕಣ್ಣಿನಲಗು ಹಸಿಯಾದ ಮರವನ್ನೆ ನಿಟ್ಟಿಸುವ ಈ ಸಾಲಿನ ಚಿತ್ರಕ ಶಕ್ತಿಗೆ ನಾನು ಮನಸೋತೆ.<br /><br />ಸಿದ್ಧಾರ್ಥ ಯಶೋಧರೆಯ ನೋಡಿದ ಮೊದಲ ಕ್ಷಣವನ್ನು ಚಿತ್ರಿಸುವಾಗ ಬರೆಯುತ್ತಾರೆ.<br /><br />"ನೀಲಿ ನೆಲದಲ್ಲಿ ಲೀನವಾಯಿತೆ?<br />ಎಲರು ಮಲರ ಗಲ್ಲವ ಮೆಲ್ಲ<br />ಗಲುಗಿಸಿತೆ ಮುಟ್ಟಿ ಮುಟ್ಟದ ಹಾಗೆ ಹಗುರವಾಗಿ?"<br /><br />ಆಕಾಶ ಭುವಿಯೊಡನೆ ಸೇರಿದ ಗಂಡು ಹೆಣ್ಣಿನ ಹಲವಾರು ಚಿತ್ರಣಗಳು ನಮ್ಮ ಕವಿತೆ, ಹಾಡುಗಳಲ್ಲಿವೆ. ಇದು ಹೊಸದಾಗಿ ಚಿಕ್ಕದಾಗಿ ಚೆಲುವಾಗಿ ಹಿಡಿದ ಸಾಲು. ನೀಲಿಯು ನೆಲದಲ್ಲಿ ಲೀನವಾಯಿತೆ ಅಥವಾ ಗಾಳಿಯ ಅಲೆ ಪರಿಮಳದ ಗಲ್ಲವನ್ನ ಮೆಲ್ಲಗೆ ಮುಟ್ಟಿಯೂ ಮುಟ್ಟದ ಹಾಗೆ ಮೆಲ್ಲಗೆ ಅಲುಗಿಸಿತು ಅಷ್ಟೆಯೇ? ಇದನ್ನು ಸಿದ್ಧಾರ್ಥನೇ ಬಲ್ಲ.<br /><br />ಯಾವುದು ನಿಜವೋ ಯಾವುದು ಕಣ್ಣಿಗೆ ಕಾಣಲು ನಿಜವೋ, ಅದು ಅಷ್ಟೇಯೇ ಅಲ್ಲದೆ ಆಳದಲ್ಲಿ ಅದರ ವಿರುದ್ಧ ಅರ್ಥವೂ ಇದ್ದಿರಬಹುದು ಎಂಬ ಹುದುಗಿಸಿದ ಅರ್ಥವಿರುವ ಸಾಲುಗಳು ಈ ಕಾವ್ಯದ ಉದ್ದಕ್ಕೂ ಚೆಲುವಾದ ಬಣ್ಣ ಬಣ್ಣದ ಹೊಸಹೊಸದಾದ ರೆಕ್ಕೆಗಳಲ್ಲಿ ಪಟಪಟಿಸುವ ಭೃಂಗದ ಹಾಗೆ ಸಾಕಷ್ಟು ಇವೆ.<br /><br />ಇದೊಂತರ ಒಡಪು ಎಂದುಕೊಂಡರೆ ಒಡಪು. ಅದಿಲ್ಲವೋ ಹಾಗೆಯೇ ಮೇಲಿನಿಂದ ಸವರಲು ಬಲು ಚೆಲುವಾದ ಚಿತ್ತಾರ. ಚಿಟ್ಟೆಯ ಪಟಪಟಿಸುವ ಬಣ್ಣದ ರೆಕ್ಕೆ, ಸ್ವತಂತ್ರ ಹಾರಾಟ ಎಷ್ಟು ನಿಜವೋ ಅಷ್ಟೇ ನಿಜ ನೋಡಲು ಮುಟ್ಟಲು ಅಸಹ್ಯವಾದ ಕಂಬಳಿ ಹುಳು ಮತ್ತು ಕೋಶದೊಳಗೆ ಬಂಧಿಯಾದ ಪ್ಯೂಪಾ.<br /><br />ಸಿದ್ಧಾರ್ಥ ಹುಟ್ಟಿದಾಗ ನೋಡಬಂದ ಹಿರಿಯಋಷಿ ಭವಿಷ್ಯ ನುಡಿದಿರುತ್ತಾರೆ. ಈ ಮಗು ಮುಂದೆ ಲೋಕದ ಅಳಲಿಗೆ ಅರ್ಥ ಹುಡುಕಿಕೊಡುವ, ನೆಮ್ಮದಿಗೆ ದಾರಿ ತೋರುವ ಸಂನ್ಯಾಸಿಯಾಗುತ್ತಾನೆ ಎಂದು. ಆ ಆತಂಕದಲಿ ತಾಯ್ತಂದೆಯರು ಹೊರಗಿನ ಕಾವು ತಟ್ಟದ ಹಾಗೆ ಮಗನನ್ನು ಬೆಳೆಸಿ, ಎಳೆ ಯವ್ವನದಲ್ಲೆ ಅವನೇ ಮೆಚ್ಚಿದ ಯಶೋಧರೆಯೊಡನೆ ಮದುವೆ ಮಾಡಿ ಆ ಎಳೆ ಜೋಡಿಗಳನ್ನು ನೋಡುತ್ತ ನಿಟ್ಟುಸಿರು ಬಿಡುತ್ತಾರೆ. ಆದರೆ ಲೋಕದ ಅವಶ್ಯಕತೆ ಬೇರೆಯದೇ ಇದೆ. ಮಳೆಗಾಲ ಮತ್ತು ಬೆಳೆಗಾಲ ಮುಗಿಯುತ್ತಲೆ ಚಳಿಗಾಲ ಕಾಲಿಡಲೇಬೇಕಲ್ಲ. ಎಲೆಯುದುರಲೇಬೇಕಲ್ಲ. ಎಂಥ ಕಟ್ಟೆಚ್ಚರದ ನಡುವೆಯೂ ಪ್ರಕೃತಿಯ ಚಕ್ರ ತಿರುಗುವ ಅರಿವನ್ನ ಗಮನಿಸುವ ಜೀವದ ಹಕ್ಕಿಗೆ ದೊಡ್ಡ ಬಯಲೂ ಪಂಜರವೇ. ಸಿದ್ದಾರ್ಥನ ಮನದ ತಳಮಳವನ್ನ ಕವಿ ಕಣ್ಕಟ್ಟುವಂತೆ ಚಿತ್ರಿಸಿದ್ದಾರೆ. ಅಂಥ ಒಂದು ಚಿತ್ರಣ ಇಲ್ಲಿದೆ.<br /><br />"ಮರಗಳಡಿ ಹುಲ್ಲು ಅದುರುತ್ತಿರಲು,<br />ಸಣ್ಣ ಗಾಳಿಯ ನೆಪಕೆ ಕಾಯುತ್ತಿದ್ದಂತೆ<br />ಹಣ್ಣೆಲೆಗಳುದುರುತ್ತಾವೆ ತಲೆ ಮೇಲೆ ಮಳೆಯಂತೆ!"<br />"ಹಸಿರೆಲೆಗಳಿಂದ ಇಡಿಕಿರಿದಿದ್ದ ಅರಳಿ ಮರ<br />ಈಗ ನೋಡಿದರೆ ಎಲೆಯಿರದ ರೇಖಾ ಚಿತ್ರ!<br />"ಬಿದ್ದ ಎಲೆಗಳನ್ನೆತ್ತಬಹುದು ಕಾವಲ ಮಂದಿ<br />ಬೋಳು ಮರವನ್ನೆತ್ತಬಹುದೆ ಉಪವನದಿಂದ?<br />ಒಮ್ಮೊಮ್ಮೆ ಖುದ್ದು ತಾನೂ ಒಂದು ಮರವೆಂದು<br />ಭ್ರಮಿಸುವನು! ಉದುರತೊಡಗುತ್ತಾವೆ ತೋಳಿಂದ<br />ತಲೆಯಿಂದ ಕಣ್ಣ ರೆಪ್ಪೆಗಳಿಂದ ಒಣಗಿದೆಲೆ!<br /><br />ಮರುಪುಟದಲಿ ಬರುವ<br /><br />" ಅಡಕೆಯ ಮೆಣಸು ಮೈಸುತ್ತಿ ಕುಡಿಚಾಚುವಂತೆ ತುಟಿಯೊತ್ತಿ ನೀಳ್ದೋಳಿಗೆ" ಜೀವಸಖಿ ಯಶೋಧರೆ ಸಿದ್ಧಾರ್ಥನ ಜೊತೆಗಿರುವುದನ್ನು ವರ್ಣಿಸುವ ಕವಿಸಾಲು ಸಿದ್ದಾರ್ಥ ಅನುಭವಿಸುತ್ತಿರುವ ವಿವಿಧ ಭಾವಗಳಿಗೆ ರೂಪ ಕೊಡುತ್ತ ಹೋಗಿವೆ.<br /><br />ತನ್ನ ನೆಮ್ಮದಿಗಾಗಿಯೇ ರೂಪಿಸಲ್ಪಟ್ಟ ಎಲ್ಲವೂ ತನ್ನ ನೆಮ್ಮದಿಯನ್ನೇ ಕದಡುವುವಾಗಿ ಬದಲಾಗುವ ವಿಷಮ ರೂಪಾಂತರವನ್ನು ಗಳಿಗೆಗಳಿಗೂ ಅನುಭವಿಸುವ ಅವನ ತೊಳಲಾಟಗಳು ಈ ಅಷ್ಟಪದಿಗಳಲ್ಲಿ ಚಿತ್ರಿಸಲ್ಪಟ್ಟಿವೆ. ವಿಶೇಷವೆಂದರೆ ಅವನ ತೊಳಲಾಟಗಳು ನಮ್ಮ ತೊಳಲಾಟಗಳಂತೆಯೇ ಭಾಸವಾಗುವ ಕಾವ್ಯಸೇತುವನ್ನ ಕವಿ ನಮಗೆ ಬುದ್ಧಚರಣದ ಮೂಲಕ ಕಟ್ಟಿಕೊಟ್ಟಿದ್ದಾರೆ.<br /><br /><br />"ಒಳಮನೆಯ ಕಥೆ ಬೇರೆ; ಹೊರಜಗಲಿ ಕಥೆ ಬೇರೆ.<br />ಮನೆ ಬಯಲ ನೋಡುವುದು ಕಿಟಕಿಗಳ ಕಣ್ತೆರೆದು.<br />ಮತ್ತೆ ಕಣ್ಮುಗಿದು ಒಳಗಲ್ಲೆ ಉಳಿಯುವ ಯತ್ನ.<br />ಹೊರಬಿಸಿಲು ಒಳನೆರಳಿಗೂ ಧಗೆಯ ನೀಡುವುದು.<br />......<br /><br />ಬೇಡವೆಂದರು ಕಾಡುವುದು ಬಾಹ್ಯ ಜಗತ್ತು.<br />ಸುಮ್ಮನಿರಗೊಡದೆ ಒಳಗನ್ನು ಯಾವಾಗಲೂ.<br />...ಏಕಾಂತಕ್ಕೆ ಲೋಕಾಂತದಾವರಣ<br />...... ಹೊರಗ ಬಿಟ್ಟೊಳಗಿಲ್ಲ, ಒಳಗನ್ನು<br />ಒಳಗೊಳ್ಳದಿರುವ ಹೊರಗಿಲ್ಲ ಈ ಬದುಕಲ್ಲಿ.. "<br /><br />ಬದುಕಿನ ಸತ್ಯವನ್ನು ಹೇಳುವ ರೀತಿಗಳು ಬೇರೆ ಬೇರೆ ಇರುತ್ತವೆ. ಇಲ್ಲಿ ಆ ಸತ್ಯ ಸೊಗಸಾದ ಕಾವ್ಯದ ಬಳುಕಲ್ಲಿ ಮಿಂಚುತ್ತಿದೆ. ಮನೆಯೆಂಬ ಒಳಾವರಣ ತನ್ನ ಕಿಟಕಿಗಳ ಕಣ್ಣನ್ನು ತೆರೆಯುತ್ತ ಬಯಲಿನ ಹೊರಾವರಣವನ್ನು ನೋಡುವುದಂತೆ.<br /><br />ಮತ್ತೆ ಕಣ್ಮುಚ್ಚಿ, ಒಳಗಲ್ಲೆ ಉಳಿಯುವ ಪ್ರಯತ್ನ. ಒಳಗೆಲ್ಲ ತುಂಬಿದ ನೆರಳಿನಲ್ಲೂ ಹೊರಗಣ ಧಗೆ ಹಾಯ್ದೇ ಹಾಯುವುದು.<br /><br />ಇಲ್ಲಿ ಸಿದ್ದಾರ್ಥನ ಬದುಕಿನ ಉದ್ದೇಶದೊಂದಿಗೆ ನಮ್ಮ ನಿತ್ಯದ ಲೌಕಿಕಗಳೂ ಬೆರೆತುಬಿಡುತ್ತವೆ. ಜೊತೆಗೆ ಒಳಗೆ ಹೊರಗನ್ನ ಸಂಭಾಳಿಸುತ್ತ ಸಾಗುವ ನಮ್ಮ ಪರಿಯೂ ಬರುತ್ತದೆ.<br /><br />ಹಾಗಂತ ಈ ಯಾವುದೂ ಅರ್ಥ ಮಾಡಿಕೊಳ್ಳಲು ಕಷ್ಟವಾಗುವ ಭಾಷೆಯಲ್ಲಿ ಇಲ್ಲ, ಓದಲು ತೊಡಕಾಗುವ ರಚನೆ ಇಲ್ಲ. ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು ಎಂಬ ಸಾಲಿನ ಲಾಲಿತ್ಯ, ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಹೆಣ್ಣು ಎಂಬ ಸಾಲಿನ ರಮ್ಯವಿಷಾದ, ಅಥವಾ ಉತ್ತರಾಯಣದಲ್ಲಿ ಬರುವ ಎಲ್ಲರಿಗೂ ಊಟ ಬಡಿಸಿ ಕಡೆಯಲ್ಲಿ ಉಣ್ಣುತ್ತಿದ್ದ ನಿನಗೆ ಇಂದು ಮೊದಲು ಬಡಿಸಿದೆ ಎಂಬ ನೋವಿನ ಸೊಲ್ಲು - ಈ ರೀತಿಯಲ್ಲಿಯೇ ಈ ಮಹಾಕಾವ್ಯದ ಅಷ್ಟಪದಿಗಳು ಇವೆ. ಹೌದು ಕೆಲವೊಂದು ಕಡೆ ಸ್ವಲ್ಪ ಈಗಿನ ಆಡುನುಡಿಯಲ್ಲಿ ಅಷ್ಟಾಗಿ ಇಲ್ಲದ ಕನ್ನಡ ಪದಗಳು ಇವೆಯಾದರೂ ಆ ಪದಗಳ ಭಾವಕ್ಕೆ, ಸೊಬಗಿಗೆ, ಅದು ಅಲ್ಲಿ ಬರದೆ ಇದ್ದರೆ ಆಗುತ್ತಿದ್ದ ಅರ್ಥನಷ್ಟಕ್ಕೆ ಯಾವ ಓದುಗನೂ ಒಪ್ಪಲೇ ಬೇಕು ಹಾಗೆ ಬಂದಿವೆ.<br /><br />ಇದೆಲ್ಲ ನಾನು ಬುದ್ಧಚರಣದ ಸೊಗಸನ್ನು ಎತ್ತಿ ಹಿಡಿಯಲು ಹೇಳಿದೆ. ಈ ಸೊಗಸಾದ ರಚನೆ ಮಹಾಕಾವ್ಯ ಎಂಬ ಪ್ರಕಾರದ ಹೆಸರಿನ ಭಾರದಿಂದಾಗಿ ಎತ್ತರದ ಸಾಲಿಗೆ ಸೇರಿ ನಾವು ಸಾಮಾನ್ಯ ಓದುಗರ ಕೈಗೆ ಎಟುಕದೆ ಹೋಗುವಂತಾಗದೆ ಇರಲಿ, ಕನ್ನಡ ಕವಿತೆಗಳನ್ನ ಓದಿ ಸಂತಸಪಡುವ ನಮಗೆಲ್ಲರಿಗೂ ಸವಿಯಲು ಸಿಗಲಿ ಎಂಬ ಆಶೆಯಲ್ಲಿ ಹೇಳಿದೆ.<br /><br />ಇದಲ್ಲದೆ ಈ ಮಹಾಕಾವ್ಯದಲ್ಲಿ ಕವಿಯು ವರ್ತಮಾನದ ವಿಚಾರ ಘಟನೆ ವರ್ತನೆಗಳನ್ನು ಒಳಸೇರಿಸಿರುವ ಪರಿ ನನ್ನನ್ನು ಬಹುವಾಗಿ ಪ್ರಭಾವಿಸಿತು. ಎಂದೋ ಶತಮಾನಗಳಾಚೆ ಬರೆದ ಕುಮಾರವ್ಯಾಸ ಭಾರತದಲ್ಲಿ ಆಗಿನ ಕಾಲದ ಸಾಮಾಜಿಕ ಸಂಗತಿಗಳು, ಜನಜೀವನ ಹೇಗೆ ಪ್ರಭಾವ ಬೀರಿರಬಹುದು, ರಾಮಾಯಣ ದರ್ಶನಂ ನಲ್ಲಿ ಹೇಗೆ ಕುವೆಂಪು ಅವರ ಮಲೆನಾಡಿನ ಹಿನ್ನೆಲೆ, ಅಲ್ಲಿನ ಬದುಕು ಪ್ರಭಾವ ಬೀರಿ ಕಾವ್ಯದಲ್ಲಿ ಮಿಳಿತವಾಗಿದೆ ಎಂದು ಚರ್ಚಿಸುವ ನಮಗೆ ನಮ್ಮ ಕಣ್ಣೆದುರಿಗೇ ಇಂದು ಮಹಾಕಾವ್ಯವೊಂದು ಮೈದಳೆದಿದೆ. ಅದೂ ನಾವು ಓದಬಹುದಾದ ಸರಳಗನ್ನಡದಲ್ಲಿ. ಮತ್ತು ಸೊಗಸಾಗಿ ಓದಿಸಿಕೊಂಡು ಹೋಗುವಂತೆ, ಹೆಚ್ಚಿನ ವ್ಯಾಖ್ಯಾನ ಬಯಸದಂತೆ ಸಿಕ್ಕಿದೆ. ಹೀಗಿರುವಾಗ ನಮ್ಮ ವರ್ತಮಾನ, ಜನಪದ, ಜನಜೀವನವು ಈ ಕಾವ್ಯದಲ್ಲಿ ಹೇಗೆ ಮೈಗೊಂಡಿರಬಹುದು ಎಂದು ಓದುತ್ತ ಗ್ರಹಿಸಲು ಸಿಕ್ಕಿರುವುದು ನನಗೆ ಬಹಳ ಇಷ್ಟವಾಯಿತು. ಈ ಅವಕಾಶ ಅಪರೂಪವೇ. ನಾವು ಹಳೆಯ ಮಹಾಕಾವ್ಯಗಳನ್ನು ಈಗ ಓದುವಾಗ ಆ ಕುರಿತು ಬಂದ ವ್ಯಾಖ್ಯಾನಗಳೋ, ವಿಮರ್ಶೆಗಳೋ, ಲೇಖನಗಳೋ ಅವುಗಳನ್ನು ಆಧಾರವಾಗಿಟ್ಟು ಕೊಂಡು ಇದು ಹೀಗಿರಬಹುದು ಅದು ಹಾಗಿರಬಹುದು ಎಂದು ಅಂದಾಜಿಸುತ್ತೇವೆ. ಈ ಬುದ್ಧಚರಣ ಮಹಾಕಾವ್ಯದಲ್ಲಿ ಆ ರೀತಿಯ ಉಪಕರಣಗಳ ಅವಶ್ಯಕತೆ ಇಲ್ಲದೆ ಬರಿದೆ ನಮ್ಮ ಓದು ಮತ್ತು ನಮಗಿರುವ ವರ್ತಮಾನದ ತಿಳುವಳಿಕೆಗಳ ಮೂಲಕವೇ ಅದನ್ನು ಗ್ರಹಿಸಬಹುದಾಗಿದೆ.<br /><br />ಈ ಕಾವ್ಯದಲ್ಲಿ ಸಿದ್ದಾರ್ಥನು ಅರಮನೆ ತ್ಯಜಿಸುವ ಮುನ್ನ ನಡೆಯುವ ಎರಡು ರಾಜ್ಯಗಳ ಮಧ್ಯದ ಬಿಕ್ಕಟ್ಟನ್ನು ಕವಿ ಗ್ರಹಿಸಿ ನಮಗಾಗಿ ಕಟ್ಟಿಕೊಟ್ಟ ರೀತಿಯನ್ನು ನೋಡಿ.<br /><br />"ಈ ಇತ್ತ ಶಾಕ್ಯ; ಆ ಅತ್ತ ಕೋಲಿಯ ರಾಜ್ಯ.<br />ನಡುವೆ ಜುಳುಜುಳನೆ ಮುಗ್ಧತೆಯಲ್ಲಿ ರೋಹಿಣಿ.<br />ಕೃಷಿಯ ಕಸುಬೇ ಮುಖ್ಯ ಎರಡು ರಾಜ್ಯಗಳಲ್ಲು.<br />ನದಿಯ ನೀರಿನ ಹಂಚಿಕೆಗಾಗಿ ಸತ್ತೆಗಳ<br />ನಡುವೆ ಎಡೆಬಿಡದೆ ಪ್ರತಿ ವರ್ಷವೂ ನಡೆಯುವುದು<br />ಕಿತ್ತಾಟ. ದಾನಕ್ಕೆ ಕೊಟ್ಟ ದಟ್ಟಿಯ ತಮ್ಮ<br />ಹಿತ್ತಲಲ್ಲಳೆಯುವರು ಮಾರುಗೈ ಆಡಿಸುತ."<br />ನಿಮಗೆ ಪ್ರತೀವರ್ಷವೂ ನಡೆಯುವ ಚೆಕ್ ಡ್ಯಾಂ ಪ್ರಹಸನಗಳೂ, ನದೀ ತಿರುವು ಯೋಜನೆಗಳು, ಕಡತಗಳಲ್ಲಿ ಕೋಟಿಗಟ್ಟಲೆ ನುಂಗಿರುವ ಸಾವಿರಾರು ಎಕರೆ ಕೆರೆ ಪುನರುಜ್ಜೀವನ ಕಾಮಗಾರಿಗಳು ನೆನಪಾಗದೆ ಇದ್ದರೆ ಕೇಳಿ.<br /><br />ಇಲ್ಲಿ ನಾನು ಈ ಕುರಿತು ಇರುವ ಹನ್ನೊಂದು ಹನ್ನೆರಡು ಅಷ್ಟಪದಿಗಳನ್ನೂ ಬರೆಯುವುದಿಲ್ಲ. ಆದರೆ ನೀವು ಇದನ್ನು ಓದಬೇಕು. ಮೆಲುದನಿಯಲೇ ಆದರೂ ವಾಸ್ತವವನ್ನು ಸ್ಪಷ್ಟವಾಗಿ ನಿಖರವಾಗಿ ತೆರೆದಿಟ್ಟಿರುವ ಹೆಚ್ಚೆಸ್ವೀಯವರ ವರ್ತಮಾನ ಪ್ರಜ್ಞೆ ಮತ್ತು ಅದನ್ನು ಹೇಳುವ ರೀತಿಗೆ ನಾನು ಮನಸೋತಿರುವೆ. ಇಲ್ಲಿ ಕಾವ್ಯ ವರ್ತಮಾನದ ಕಹಿಯನ್ನು ತನ್ನದೇ ರೀತಿಯಲ್ಲಿ ಓದುವ ಮನಸ್ಸಿಗೆ ಔಷಧದಂತೆ ದಾಟಿಸುತ್ತದೆ.<br /><br />"ಅನಿವಾರ್ಯವಾಗಿ ಆಡಳಿತ ನಡೆಸುವ ಮಂದಿ<br />ಉದ್ವಿಗ್ನಕಾರಿ ಹೇಳಿಕೆಯನ್ನು ನೀಡುವರು.<br />ರೋಹಿಣಿಯು ನಮ್ಮದೂ! ನಮ್ಮದೂ! ಎನ್ನುತ್ತ<br />ಹರಿವು ತಗ್ಗಿದ ನದಿಯ ಸೆರಗನ್ನು ಜಗ್ಗುತ್ತ<br />ಬೆತ್ತಲಾಗಿಸುತ್ತಾರೆ ಹತ್ತು ಮಂದಿಯ ನಡುವೆ."<br />ರೋಹಿಣಿ ಎಂಬಲ್ಲಿ ಕಾವೇರಿಯೋ, ಕೃಷ್ಣೆಯೋ, ನೇತ್ರಾವತಿಯೋ, ಎತ್ತಿನಹೊಳೆಯೋ, ಶರಾವತಿಯೋ ಹಾಕಿದರೆ ಏನೂ ವ್ಯತ್ಯಾಸವಾಗುವುದಿಲ್ಲವಷ್ಟೆ!<br /><br />"ನಲುಗುವಳು ತಾಯಿ. ನದಿ ನೀರು ಕಣ್ಣೀರಾಗಿ<br />ಹೊತ್ತಿ ಉರಿವುದು ನೀರ್ಗಿಚ್ಚು ಉಲ್ಬಣಗೊಂಡು.<br />ಈ ವರ್ಷ ಕೂಡ ಮಳೆ ಕಮ್ಮಿ. ಸೋತಿದೆ ಮಾತು.<br />... ಭತ್ತ ಕಬ್ಬಿನ ಗದ್ದೆ ಒಣಗುವುದು. ಒಣಗಿದರೆ<br />ಎದೆಯ ಆರ್ದ್ರತೆ ಕೂಡ ಒಣಗುವುದು. ಕಿತ್ತಾಟ<br />ಶುರುವಾಗುವುದು..."<br /><br />ಇದರ ಜೊತೆಜೊತೆಗೇ ಯುದ್ಧೋನ್ಮಾದ, ದ್ವೇಷ ಮತ್ತು ಕೋಪದ ಕೈಗೆ ಸಿಕ್ಕ ಅರಸೊತ್ತಿಗೆಯ ಕುರಿತು ರಾಜಕುಮಾರ ಸಿದ್ಧಾರ್ಥನಾಡುವ ಮಾತು ಒಬ್ಬರಿನ್ನೊಬ್ಬರ ಮೇಲೆ ಕೆರಳಿ ಕೆಂಡವಾಗಿರುವ ಜನಕ್ಕೆ ಸೇನಾಧಿಪತಿಗಳಿಗೆ ರುಚಿಸುವುದಿಲ್ಲ.<br /><br />"ಯುದ್ಧ ಪ್ರತಿಯುದ್ಧವನ್ನು ಹುಟ್ಟಿಸುವುದರಿಯಿರಿ<br />ಎಣ್ಣೆ ಹುಯ್ಯುವುದಗ್ನಿ ಶಮನಕ್ಕೆ ದಾರಿಯೆ?<br />.. ಬಲವುಳ್ಳ ಮಂದಿ ದುರ್ಬಲರನ್ನು ಮುಗಿಸುವರು...<br />ಯುದ್ಧದಲಿ ಕಾದುವವರು ಯಾರು? ನವತರುಣರು.<br />ಬಾಳಿ ಬದುಕುವ ಕನಸ ಕಟ್ಟಿಕೊಂಡಂಥವರು.<br />...ಮರಣ ಮನೆಗೋಡೆಗಳ ಮಾಡುವುದು ದುರ್ಬಲ..<br />...ಕೋಪದಲಿ ಕೊಯ್ದ ಬೆಳೆ ಚಿಗುರಲಾರದು ಮತ್ತೆ...<br /><br />ನಿರ್ಧಾರ ಕೈಗೊಳ್ಳಬೇಕಾದ ಅಧಿಕಾರಿಗಳು, ರಾಜ್ಯಪ್ರಮುಖರು ಒಪ್ಪುವುದಿಲ್ಲ ಶಾಂತಿಗೆ.<br />ಇಂದು ನಮ್ಮ ಕಾಲದ ಮಹಾಯುದ್ಧಕ್ಕೆ ಮೂಕ ಪ್ರೇಕ್ಷಕರಾಗಿರುವ ನಮಗಲ್ಲದೆ ಇನ್ಯಾರಿಗೆ ಇದು ಹೆಚ್ಚು ಅರ್ಥವಾಗಬಹುದು?!<br /><br />ಏನೆಲ್ಲ ತೊಳಲಾಟಗಳ ನಡುವೆ ತನ್ನ ಮೂಲ ಸ್ಥಾಯೀಭಾವವಾದ ವೈರಾಗ್ಯಕ್ಕೆ ಸಲ್ಲುವ ಸಿದ್ಧಾರ್ಥ ಹಲವು ಪ್ರಯತ್ನಗಳ ನಂತರ ಒಂದು ರಾತ್ರಿ ಜೀವಸಖಿಯನ್ನೂ ಅವಳ ಮಗ್ಗುಲಲ್ಲಿ ಕನಸಿನಂತೆ ಇರುವ ಎಳೆಗೂಸನ್ನೂ ಕ್ಷಣಮಾತ್ರ ನೋಡಿ ಮನಸ್ಸು ಗಟ್ಟಿಯಾಗಿಸಿ ಹೊರಟುಬಿಡುತ್ತಾನೆ. ನಿದ್ದೆಯಲ್ಲಿರುವ ಪ್ರಿಯೆಯ ಅಲುಗುವ ರೆಪ್ಪೆಯ ನೆನಪನ್ನು ಕಷ್ಟಪಟ್ಟು ಹಿಂದಕ್ಕೆ ಸರಿಸುತ್ತಾ ತನ್ನ ಪರಿಚಿತ ಲೋಕದಿಂದ ದೂರದೂರಕ್ಕೆ ಸಾಗುವ ಸಿದ್ಧಾರ್ಥ ಹಲವು ಅನುಭವಗಳ ನದಿಯ ದಾಟಿ, ಹಲವು ದರ್ಶನಗಳ ಬೆಟ್ಟ ತಪ್ಪಲು ಹಾಯುತ್ತಾನೆ. ಎಷ್ಟೆಲ್ಲ ಸಾಧನೆಗಳ ಹಾದಿಯಲ್ಲಿ ಹಾಯುವವನಿಗೆ ಅರ್ಥವಾಗುವುದೊಂದು ಸತ್ಯ. ಏನೆಲ್ಲ ಮಾಡಿದರೂ "ಮನ ನಿಲ್ಲಬೇಕು ತನುವಲ್ಲ" ಎಂಬುದನ್ನ ಕವಿ ಬಹಳ ಸೊಗಸಾಗಿ ಹೇಳುತ್ತ ರಾಜಕುವರನು ಬುದ್ಧನಾಗುವ ಹಾದಿಯ ಚಿತ್ರಣವನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ. ಈ ಕುರಿತು ಇರುವ ಕೆಲ ಸಾಲುಗಳ ಹೈಲೈಟು ನೋಡಿ.<br /><br />"ನಿಂತಲ್ಲಿಯೇ ನಿಂತು ಉರಿಯುವನು ಭಾಸ್ಕರ<br />ಇರುವಲ್ಲಿಯೇ ಇದ್ದು ಅಲೆಯುವುದು ಮಾನಸ" ಬಯಲಲ್ಲಿ ಕುಳಿತು ಬೆಳಗು ಸಂಜೆಗಳನ್ನ ಏಕತ್ರ ಧ್ಯಾನಿಸುವ ಸಂತನ ಅನುಭಾವದ ಮೆಟ್ಟಿಲುಗಳನ್ನ ಹತ್ತಲು ಈ ಕಾವ್ಯ ಕೈಗೋಲಾಗಿ ಒದಗುತ್ತದೆ.<br /><br />"...ಒಡಲ ಕಾಳಗ ಮುಗಿದರೂನು ಒಳಮನದ<br />ಕಾಳಗವು ಮುಗಿದಿಲ್ಲ.."<br />"..ಮನೆಯ ಕಟ್ಟುವ ಮಂದಿ ಯಾರು ಎಂಬುದ ಅರಿತೆ!<br />ಮತ್ತೆ ಈ ಮನೆಯ ಕಟ್ಟೋಣ ಸಾಧ್ಯವೆ ಇಲ್ಲ.<br />ನಾಶವಾಗಿದೆ ಮನೆಯ ನಿರ್ಮಾಣ ಸಾಮಗ್ರಿ!<br /><br />ಬುದ್ಧನಾಗುವ ಹಂತ ಹಂತದ ಕುರಿತ ಈ ಅಷ್ಟಪದಿಗಳು ಆಧ್ಯಾತ್ಮದ ಉತ್ತುಂಗ ಒಳನೋಟಗಳನ್ನು ಹಾಯಿಸುತ್ತ ಇವೆ. ಕೆಲವು ಪದ್ಯಗಳಂತೂ "ಕಂಡವರಿಗಷ್ಟೆ, ಕಂಡವರಿಗಲ್ಲ, ಸಿಕ್ಕವರಿಗಷ್ಟೆ, ಸಿಕ್ಕವರಿಗಲ್ಲ" ಎಂಬಂತಹ ರಚನೆಗಳು. ಮೇಲುಮೇಲಕ್ಕೆ ಕಥನದ ಓಘಕ್ಕೆ ಸೊಗಸಾಗಿ ಒದಗುತ್ತವೆ. ಆಳಕ್ಕಿಳಿದರೆ ಆ ಮಾತೇ ಬೇರೆ.<br /><br />ಬುದ್ಧನಾದ ನಂತರ ತನಗೆ ಒದಗಿದ ಜ್ಞಾನೋದಯವನ್ನ ಲೋಕಕ್ಕೆ ಹಂಚುವ ಬುದ್ಧನನ್ನ ಕವಿ ವರ್ಣಿಸುವ ಪರಿ ನೋಡಿ.<br /><b>"ತೆರಳಿದ್ದ ಬತ್ತಿ, ಮರಳಿದೆ ಸ್ವಚ್ಛ ಬೆಳಕಾಗಿ..</b>" ಇದಕ್ಕಿಂತ ಸರಳವಾಗಿ ಸೊಗಸಾಗಿ ಹೇಳಬಹುದೆ ಪರಿವರ್ತನೆಯನ್ನ?!<br /><br />ಕಪಿಲವಸ್ತುವಿಗೆ ಬಂದ ಬುದ್ಧಗುರುವನ್ನು ನೋಡಲು ಹೊರಟ ಯಶೋಧರೆಯ ಮನದ ವಿಪ್ಲವಗಳಂತೂ ವಿಷಾದಭರಿತ ಭಾವಗೀತಗಳ ಧಾರೆಯಾಗಿವೆ ಕವಿಯ ಕೈಯಲ್ಲಿ.<br /><br />"..ಅಲೆಗಳ ವಿಪ್ಲವ. ಮಧ್ಯೆ ಮುಗಿದ ತಾವರೆ ಮೊಗ್ಗು.<br />ಕಂಬನಿಗಳ ಕೊಳದಲ್ಲಿ ಸ್ತಬ್ಧ ದೋಣಿಯ ಕಣ್ಣು..."<br />ಬುದ್ಧ ಮತ್ತು ಯಶೋಧರೆಯ ಭೇಟಿ ಓದುವವರ ಮನವನ್ನು ಮಿಡಿಸುತ್ತದೆ.<br /><br /><br />"ಕಣ್ಣೆತ್ತಿ ನೋಡುವಳು..<br />ಮೀನು ಕಲಕಿದೆ ಕೊಳವ. ಅಲೆಯು ಮೆಲ್ಲಗೆ ಬಂದು<br />ತಾಗುತಿದೆ ದಂಡೆಯನು.<br />...ಎಲ್ಲ ಸುಖದಲು ಜತೆಯಲ್ಲೆ ಇದ್ದವನು ಮುಕ್ತಿ ಸುಖದಲಿ ಅಗಲಿದೆಯೇಕೆ..."<br /><br /></p><p style="margin: 0px;">ಎಂಬ ದುಃಖದ ಪ್ರಶ್ನೆಗೆ ಬುದ್ಧ ಉತ್ತರಿಸುತ್ತಾನೆ....</p><p style="margin: 0px;"><br />ಮನೆಯಲ್ಲೆ ನಿಂತ ತಾಪಸಿ ನೀನು.<br />ಬೆಳಕನರಸುತ ನಾನು ತೊರೆದೆನೀ ಮನೆಯನ್ನ.<br />ನೀನು ನಂದಾದೀಪ ಆದೆ ಈ ಮನೆಯಲ್ಲೆ...!<br /><br />ಇದಕ್ಕಿಂತ ಮಿಗಿಲಾದ ಉತ್ತರವ ಬಯಸದ ಆ ಹೆಣ್ಣುಜೀವ ಬುದ್ಧಚರಣಕ್ಕೆ ಶರಣಾಗುತ್ತದೆ.<br /><br />ಬುದ್ಧನ ಬೋಧನೆಗಳು ಈ ಕಾವ್ಯದಲ್ಲಿ ಉಪನ್ಯಾಸಗಳ ಸಾಲುಗಳಾಗಿ ಬಂದಿಲ್ಲ. ಜೀವನಾನುಭವದ ಇಂಕಿನಲ್ಲಿ ಅದ್ದಿ ತೆಗೆದ, ಯಾರಿಗೂ ಅರ್ಥವಾಗಬಹುದಾದ ಸೊಗಸಾದ ಕವಿತೆ ಸೊಲ್ಲುಗಳಾಗಿ ಬಂದಿವೆ.<br /><br />"ಬುದ್ಧ ನಿರ್ವಾಣ ಮಾರ್ಗಕ್ಕೆ ಕೈಮರ ಮಾತ್ರ.<br />ನಡೆಯುವುದು ನೀವೆ; ನೋಡುವುದು ನಿಮ್ಮದೆ ನೇತ್ರ."<br />"ಗಾಳಿಯಲಿ ಕರಗುವುದು ಅಗರುಬತ್ತಿಯ ಧೂಪ<br />ಬಯಲಲ್ಲಿ ಏನನೋ ಬರೆಯುತ್ತ ಇರುವಂತೆ;<br />ಬರೆದದ್ದ ಕೈಯಾರೆ ಅಳಿಸುತ್ತ ಇರುವಂತೆ."<br />"ಇದ್ದಷ್ಟು ದಿನ ನಾವು<br />ಬದುಕೋಣ ನಮ್ಮಂತೆ ಇರುವ ಮಂದಿಯ ನಂಬಿ.<br />ನಮ್ಮಂತೆಯೇ ಕಣ್ಣು ಕಣ್ಣೀರ ಉಳ್ಳವರು<br />ನೋಡೋಣ ಹೇಗೆ ಕೆಂಗಣ್ಣರಾಗುವರೆಂದು."<br /><br />ಬುದ್ಧನ ಈ ಮಾತಿನ ಮುಂದಿನ ಸಾಲಲ್ಲಿಯೇ ಸೇರಿಸುತ್ತಾರೆ ಕವಿ<br /><br />ಕೇಳಲಿಕ್ಕೇನೋ ಹಿತ, ಆಚರಣೆಗಿದು ಕಷ್ಟ.<br /><br />ಬುದ್ಧನ ಪ್ರಿಯ ಶಿಷ್ಯ ಆನಂದನೊಡನೆ ಬುದ್ಧನ ಮಾತನ್ನ ಕವಿ ಕಂಡರಿಸುವ ಪರಿ ನೋಡಿ.<br /><br />ಆನಂದ ಹೇಳುತ್ತಾನೆ; ಭಂತೆ,<br />ನಿನ್ನೆದುರು ನಾನೇನು ನುಡಿದೇನು? ಕಡಲೆದುರು ನಿಂತ ಬೊಗಸೆಯ ಚಿಪ್ಪು."<br />ಬುದ್ಧ ನುಡಿಯುತ್ತಾನೆ. "ಚಿಪ್ಪಲ್ಲೆ ಮುತ್ತುಂಟು!" ಇದು ಬುದ್ಧನ ವಿಧಾನ.<br />"ಇರುಳ ಚೆಲುವೆಗೆ ತೆಗೆದ ನೇರ ಬೈತಲೆಯಂತೆ ಬುದ್ಧನ ನುಡಿ.<br />ನೆಮ್ಮದಿಯ ಸಂಚಾರ ಮನದೊಳಗೆ."<br />"ನೆರಳು ಬಿಸಿಲಿನ ನಂಟು, ಬಿಡಿಸಲಾಗದ ಗಂಟು.<br />ಬಿಸಿಲಿರದೆ ನೆರಳಿಲ್ಲ.!.." ಬದುಕಿನ ಏರುಪೇರನ್ನು ಸೈರಿಸುವ ವಿಧಾನಗಳನ್ನು ಕವಿ ಬುದ್ಧನ ಮೂಲಕ ಹೇಳಿಸುತ್ತಿರುವರು.<br /><br />ಊರಿಂದ ಊರಿಗೆ ತಿರುಗುವ ಬುದ್ಧಗುರು, ದಾರಿಯಲ್ಲೇ ನಡಿಗೆಯಲ್ಲೇ ಪಯಣದಲ್ಲೇ ಬದುಕಿನ ಸತ್ಯವನ್ನು ಜೊತೆಗಾರರಿಗೆ ಮನನ ಮಾಡಿಸುವ ರೀತಿ ಹೆಚ್ಚೆಸ್ವೀಯವರ ನುರಿತ ಭಾಷೆಯಲ್ಲಿ<br /><br />ಬಿಸಿಲಹಾದಿಯಲ್ಲಿ ಕುಡಿಯಲು ಸಿಗುವ ಮಜ್ಜಿಗೆಯಂತೆ ತಂಪೊದಗಿಸುತ್ತದೆ.<br />"ಬಿಸಿಲ ಹೂ ನೆರಳಿನಲ್ಲಿ ಚದುರಿಬಿದ್ದಂತೆ ಕಾಣುತ್ತ ಇದೆ.<br />..ಈಗ ಇದೆ, ಮರುಗಳಿಗೆ ಇರುವುದೆನುವಂತಿಲ್ಲ.<br />ಇರುವಾಗ ನೋಡು. ಇರದಿರುವಾಗ ಹಲುಬದಿರು.."<br /><br /><br />ಕೊನೆಯ ಪಯಣವೊಂದರ ಚಿತ್ರಣವನ್ನೇ ನೋಡಿ.<br /><br />"ಹೊತ್ತಿನ್ನು ಮೂಡಿಲ್ಲ. ಸುರಿಯುತಿದೆ ಹುಡಿಮಂಜು.<br />ಇಬ್ಬನಿಯ ಹೊದ್ದ ಕಾಷಾಯ ಪಡೆ ನಡೆಯುತಿದೆ.<br />ಮಾತಿರದ ಮೌನದಲಿ ಜಪಮಣಿಯನೆಣಿಸುತ್ತ.<br />ಮುಂದೆ ಗುರು, ನುಣ್ಣನೆಯ ಊರುಗೋಲೂರುತ್ತ."<br /><br /></p><p style="margin: 0px;">ಈ ಚಿತ್ರ ಕಣ್ಣ ಮುಂದೆ ಸ್ಪಷ್ಟವಾಗಿ ಮೂಡದಿದ್ದರೆ ಕೇಳಿ.<br /><br />ಹುಟ್ಟಿದ ವೈಶಾಖ ಪೂರ್ಣಿಮೆಯಂದೆ ಅಸ್ತಮಿಸಿದ ಬುದ್ಧನ ನಿರ್ವಾಣ ಕ್ಷಣ ಕವಿಯ ಸಾಲಿನಲ್ಲಿ ಹೀಗೆ ಮೈದೋರಿದೆ.<br /><br />"ಚಂದ್ರ ಮುಳುಗುತ್ತಾನೆ ತನ್ನ ಬೆಳ್ದಿಂಗಳಿನಲಿ ತಾನು."<br />"ದೀಪ ನಂದಿತು ದೀಪದಲ್ಲಿ, ಮುಳುಗಿತು ನೀರು ನೀರಲ್ಲಿ"<br />ತೊಂಗಲಲಿ ತೂಗುತಿದೆ ಬಣ್ಣದಿರುಗಿದ ಹಣ್ಣು ಎಂಬ ಸಾಲಲ್ಲಿ ಸಾವಿನ ಸಹಜತೆ, ಪ್ರಕೃತಿಯ ಚಕ್ರ ಎಲ್ಲವೂ ಆಪ್ತವಾಗಿ ಮೂಡಿವೆ.<br /><br /><br />ಇಡೀ ಕೃತಿಯಲ್ಲಿ ಕವಿಯ ಆಶಯವಾದ ಮಧ್ಯಮಮಾರ್ಗ ಬುದ್ಧಬೋಧನೆಯಾದ ಮಧ್ಯಮಮಾರ್ಗ ಎರಡೂ ಮಿಳಿತವಾಗಿ ಬುದ್ಧ ಕಥನವಾಗಿ ಹರಿದಿದೆ.<br />ಬರುವುದೆಲ್ಲಾ ಬರಲಿ, ಹೋಗಲಿ ಹರಿದು,<br />ಇರುವೆ ನಾನಿರುವಂತೆ.<br />ಇರಲಿ ಸಮಶ್ರುತಿ, ಸ್ವಸ್ಥ ಚಿತ್ತ.<br />ನೆಲೆಸಿರಲೆದೆಯಲ್ಲಿ ಸ್ವಸ್ತಿ... ಎಂಬ ಆರಂಭಕಾಂಡದ ಸಾಲುಗಳು ಈ ಇಡೀ ಮಹಾಕಾವ್ಯದ ಅಂತಃಸ್ರೋತವಾಗಿ ಹರಿದಿವೆ.<br /><br />ಅಗಲಿಕೆಯ ಶೋಕಸಾಗರವನ್ನು ದಾಟುವ ಜ್ಞಾನವ ಗಳಿಸಿದ ಬುದ್ಧನ ದಾರಿಯೇ ಕವಿಗೆ ತನ್ನ ಬದುಕಿನಲ್ಲಿ ಅನುಭವಿಸಿದ ಅಗಲಿಕೆಯ ಶೋಕದ ಹರಿವನ್ನು ದಾಟಲು ಸರಿಯಾದ ಆಯ್ಕೆ ಎಂದು ಶುರುವಾಗುವ ಮಹಾಕಾವ್ಯ, ಈ ಆಯ್ಕೆ ಬರಿದೆ ಕವಿಯ ವೈಯಕ್ತಿಕಕ್ಕಷ್ಟೆ ಅಲ್ಲ ಸಮಸ್ತರಿಗೂ ಅನ್ವಯಿಸುವುದು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ರಚಿಸಿರುವ ಚಿತ್ರಕ ಸಾಲುಗಳ ಅಷ್ಟಪದಿಯ ಮೂಲಕ ಮತ್ತೆ ಮತ್ತೆ ಮನದಟ್ಟಾಗುತ್ತದೆ.<br /><br />ಈ ೩೦೦ ಪುಟಗಳ ಪುಸ್ತಕದಲ್ಲಿ ಅಲ್ಲಿಲ್ಲಿ ಬಹಳ ಅಪರೂಪಕ್ಕೆ ಪಿಟಕಗಳ ಕೆಲವು ಶ್ಲೋಕಗಳು ಬರುವಲ್ಲಿ, ಈ ಶ್ಲೋಕಗಳ ಭಾವಾರ್ಥ ಅಥವ ವಾಚ್ಯಾರ್ಥವನ್ನು ಟಿಪ್ಪಣಿಯಾಗಿ ಕೊಟ್ಟಿದ್ದರೆ ಚೆನ್ನಿತ್ತು ಎನಿಸಿತು. ಅಲ್ಲದೆ ನಾವು ಇಂದಿನ ಕನ್ನಡದವರು ಬಳಸದೇ ಇರುವ ಹಲವಾರು ಕನ್ನಡಪದಗಳು ಹೊಸ ಪೀಳಿಗೆಗೆ ಎಷ್ಟು ದಕ್ಕೀತು ಎಂದು ಹೇಳಲು ನನಗೆ ಗೊತ್ತಾಗುವುದಿಲ್ಲ. ಹಾಗಾಗಿ ಕೆಲವು ಅಪರೂಪದ ಪದಗಳ ಕೈಪಿಡಿಯೊಂದು ಪುಸ್ತಕದಲ್ಲೇ ಅಡಿಟಿಪ್ಪಣಿಗ್ಯಾಗಿದ್ದರೆ ಒಳ್ಳೆಯದು. ಹಾಗಂತ ಈ ಬಗೆಯವು ತುಂಬ ಇಲ್ಲ. ಬಹಳ ಅಪರೂಪಕ್ಕೆ ಇವೆ. ಉಳಿದ ಎಲ್ಲವೂ ನಮ್ಮ ಆಡುಭಾಷೆಯನ್ನೆ ಕುಸುರಿಕೆತ್ತಿ ಕಾವ್ಯಕ್ಕೆ ಒಗ್ಗಿಸಿದ್ದಾರೆ.<br /><br />ಈ ಕಾವ್ಯವನ್ನು ಓದುವಾಗ ನನಗೆ ಇನ್ನೊಂದು ಅನುಭವವಾಯಿತು. ಕೆ.ಎಸ್.ನರಸಿಂಹಸ್ವಾಮಿಯವರ ಕಾವ್ಯವೆಂದರೆ ನನಗೆ ತುಂಬ ಇಷ್ಟ. ನರಸಿಂಹಸ್ವಾಮಿಯವರೇ ಈ ಕವಿತೆಗಳನ್ನು ಬರೆದಿರಬಹುದೆ ಎಂಬಂತಹ ಲಾಲಿತ್ಯ, ನಿಖರವಾಗಿದ್ದನ್ನು ಮೆತ್ತಗೆ ಹೇಳುವ ಮೆದು ದನಿ, ವಿಷಯ ಹೀಗಿದೆ ಎಂದು ಕಥನಕ್ಕೆಳೆಸುವ ಚಿತ್ರಕ ಶಕ್ತಿ ಈ ಕಾವ್ಯ ಓದುತ್ತ ಅನುಭವಿಸಿ ಬೇರೆಯದೇ ಲೋಕಕ್ಕೆ ಹೋಗಿಬಿಟ್ಟೆ.<br /><br />ಈ ಮಹಾಕಾವ್ಯವನ್ನು ನಮಗೆ ಓದುಗರಿಗೆ ರಸಧಾರೆಯಾಗಿ ಸೃಷ್ಟಿಸಿ ಕೊಟ್ಟ ಕವಿ ಶ್ರೀ ಹೆಚ್.ಎಸ್.ವೆಂಕಟೇಶ್ ಮೂರ್ತಿಯವರಿಗೆ ನನ್ನ ನಮನಗಳು. ಬುದ್ಧಚರಣವೆಂಬ ಮಹಾಕಾವ್ಯದ ಆನೆಯನ್ನ ಮುಟ್ಟಿ ನೋಡಿದ ನನ್ನ ಕುರುಡುನೋಟವನ್ನು ಇಲ್ಲಿ ಹಂಚಿಕೊಂಡಿದ್ದೇನೆ ಅಷ್ಟೆ.</p><p>
</p><p style="margin: 12px 0px;"><span style="font-family: "'tunga'";">ಬುದ್ಧಚರಣ ಸ್ಪಂದನ ಪುಸ್ತಕಕ್ಕೆ ಬರೆದ ಲೇಖನ. (2023)</span></p>ಸಿಂಧು sindhuhttp://www.blogger.com/profile/11363295766940671498noreply@blogger.com0tag:blogger.com,1999:blog-4515791944382207090.post-42448051696101866222023-09-26T11:58:00.005+05:302023-09-26T11:59:27.086+05:30<p> <span style="font-family: tunga;"><b><span style="font-size: large;">ಹಳೆಯ ಹಾಡು<br /></span></b></span></p><p><span style="font-family: arial;">Inspired by WB Yeats' Old song</span></p><p style="margin: 0px;"><span style="font-family: 'tunga';">ಪ್ರೀತಿಸದಿರು ಬಹುಕಾಲ</span></p><p style="margin: 0px;"><span style="font-family: 'tunga';">ಸದಾ ಪ್ರೀತಿಸಿದ ನಾನೀಗ</span></p><p style="margin: 0px;"><span style="font-family: 'tunga';">ಮೂಲೆಗುಂಪಾದ</span></p><p style="margin: 0px;"><span style="font-family: 'tunga';">ಮರೆವೆಗೆ ಸಂದ ಹಳೆ ಹಾಡಿನ ರಾಗ</span></p><p style="font-family: tunga; margin: 0px;"><br /></p><p style="margin: 0px;"><span style="font-family: 'tunga';">ಕಳೆದ ತಾರುಣ್ಯದ ವರುಷಗಳಲಿ</span></p><p style="margin: 0px;"><span style="font-family: 'tunga';">ಅನ್ಯನಾಗದೆ ಭಿನ್ನತೆ ಇಲ್ಲದೆ</span></p><p style="margin: 0px;"><span style="font-family: 'tunga';">ಬೇರ್ಪಡಿಸಲಾಗದ ಏಕೋಭಾವದಿ </span></p><p style="margin: 0px;"><span style="font-family: 'tunga';">ಇಹೆವೆಂದು ನಾನು ನಂಬಿದೆ </span></p><p style="font-family: tunga; margin: 0px;"><br /></p><p style="margin: 0px;"><span style="font-family: 'tunga';">ಓ ಓ..ಚಣಮಾತ್ರದಲಿ ಸರಿದಳು ಅವಳು</span></p><p style="margin: 0px;"><span style="font-family: 'tunga';">ಓ ಪ್ರೀತಿಸದಿರು ಬಹು ಕಾಲ</span></p><p style="margin: 0px;"><span style="font-family: 'tunga';">ಹಾಗೆ ಪ್ರೀತಿಸಿದೆಯಾದರೆ</span></p><p style="margin: 0px;"><span style="font-family: 'tunga';">ಆಗಿಬಿಡುವೆ ನೀನೂ</span></p><p style="margin: 0px;"><span style="font-family: 'tunga';">ಮೂಲೆಗುಂಪಾಗದ</span></p><p style="margin: 0px;"><span style="font-family: 'tunga';">ಮರೆವೆಗೆ ಸಂದ ಹಾಡಿನ ರಾಗ..</span></p><p>
</p><p style="font-family: tunga; margin: 0px;"><br /></p>ಸಿಂಧು sindhuhttp://www.blogger.com/profile/11363295766940671498noreply@blogger.com0tag:blogger.com,1999:blog-4515791944382207090.post-52435920392426920402023-09-26T11:54:00.007+05:302023-09-26T11:55:28.324+05:30<p><span style="font-family: tunga;"><b><span style="font-size: large;">ಗೆಜ್ಜೆ</span></b></span></p><p><br /></p><p><span style="font-family: tunga;">ಕಂದರ ಪಾದದಿ ನಲಿಯುವ ಗೆಜ್ಜೆ,<br />ಕುಣಿಯುವ ಕಾಲಲಿ ಉಲಿಯುವ ಗೆಜ್ಜೆ,<br /></span><span style="font-family: tunga;">ಎಳೆಯುವತಿಯ ಪಾದದಿ ಬಿಂಕದ ಗೆಜ್ಜೆ,<br /></span><span style="font-family: tunga;">ಕಟೆದ ಶಿಲ್ಪಗಳ ಕುಸುರಿಯ ಗೆಜ್ಜೆ,<br /></span><span style="font-family: tunga;">ಜಾತ್ರೆಯಲಿರುವ ಹೊಸಹೊಸ ಗೆಜ್ಜೆ.</span></p>
<p style="margin: 0px;"><span style="font-family: 'tunga';">ಸಿಂಗಾರದ ಗೆಜ್ಜೆ, ಶೃಂಗಾರದ ಗೆಜ್ಜೆ,</span></p>
<p style="margin: 0px;"><span style="font-family: 'tunga';">ಹೆಜ್ಜೆಯ ಜೊತೆಗೆ ಸಡಗರದ ಗೆಜ್ಜೆ.</span></p>
<p style="margin: 0px;"><span style="font-family: 'tunga';">ಅಜ್ಜ ಕೊಡಿಸಿದ ಗೆಜ್ಜೆ,</span></p>
<p style="margin: 0px;"><span style="font-family: 'tunga';">ಮಾವನಿಡಿಸಿದ ಗೆಜ್ಜೆ</span></p>
<p style="margin: 0px;"><span style="font-family: 'tunga';">ಅಮ್ಮ ಸಂಪಾದಿಸಿದ ಗೆಜ್ಜೆ,</span></p>
<p style="margin: 0px;"><span style="font-family: 'tunga';">ಹಬ್ಬದ ಗೆಜ್ಜೆ,</span></p>
<p style="margin: 0px;"><span style="font-family: 'tunga';">ಮದುವೆಯ ಗೆಜ್ಜೆ,</span></p>
<p style="margin: 0px;"><span style="font-family: 'tunga';">ಗೆಣೆಕಾರ ಕೊಡಿಸಿದ ಗೆಜ್ಜೆ,</span></p>
<p style="margin: 0px;"><span style="font-family: 'tunga';">ವಿಧವಿಧಗಳ ನೋಡುತ </span></p>
<p style="margin: 0px;"><span style="font-family: 'tunga';">ಮನವಿಡುವುದು ಹಳೆಹಾದಿಗೆ ಹೆಜ್ಜೆ.</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಮೊನ್ನೆ ನೋಡಿದೆನೊಂದು</span></p>
<p style="margin: 0px;"><span style="font-family: 'tunga';">ಅಪರೂಪದ ಗೆಜ್ಜೆ!</span></p>
<p style="margin: 0px;"><span style="font-family: 'tunga';">ದ್ವಿಚಕ್ರವಾಹನದಿ ಅವಡುಗಚ್ಚಿ</span></p>
<p style="margin: 0px;"><span style="font-family: 'tunga';">ನಮ್ಮ ವಾಹನದೋಟಕೆ ಸಮನಾಗಿ <br />ಓಡಿಸುತಿಹ </span><span style="font-family: 'tunga';">ತಾಯಿಯೋರ್ವಳ </span><span style="font-family: tunga;">ತಾಯಿಯೋರ್ವಳ <br />ಮರಗಾಲನು </span><span style="font-family: tunga;">ಬಳಸಿ ಕುಳಿತಿಹ ಗೆಜ್ಜೆ!</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಸದ್ದು ಮಾಡದೆಯೂ ದನಿಯಾಗುವ ಗೆಜ್ಜೆ</span></p>
<p style="margin: 0px;"><span style="font-family: 'tunga';">ವಿಶ್ವಾಸದ ತೊರೆಗೆ ಹನಿಯಾಗುವ ಗೆಜ್ಜೆ.</span></p>
<p style="margin: 0px;"><span style="font-family: 'tunga';">ಜೀವಂತ ಕಾವ್ಯದ ಬನಿಸಾಲು ಗೆಜ್ಜೆ.</span></p>
<p style="font-family: tunga; margin: 0px;"><br /></p>ಸಿಂಧು sindhuhttp://www.blogger.com/profile/11363295766940671498noreply@blogger.com0tag:blogger.com,1999:blog-4515791944382207090.post-60971565969324998932023-09-26T11:33:00.002+05:302023-09-26T11:33:54.799+05:30<p><b><span style="font-size: medium;"><u><span style="font-family: tunga;"> ಶ್ರೀ ಸುಬ್ರಾಯ ಚೊಕ್ಕಾಡಿಯವರ ಸಮಗ್ರ ಬರಹ </span><span style="font-family: tunga;">ಸಂಪುಟಗಳ ಬಿಡುಗಡೆ</span></u></span></b></p><p><span style="font-family: 'tunga';">8 January 2023 ಯಂದು ಶ್ರೀ ಸುಬ್ರಾಯ ಚೊಕ್ಕಾಡಿಯವರ ಸಮಗ್ರ ಸಾಹಿತ್ಯ ಬಿಡುಗಡೆ ಮೈಸೂರಿನಲ್ಲಿ ಆದಾಗ ಅವರ ಸಾಹಿತ್ಯ(ವಿಶೇಷವಾಗಿ ಕವಿತೆಗಳು) ಕುರಿತು ನನ್ನ ಮಾತು.</span></p><p><span style="font-family: tunga;">ಹಿರಿಯ ಕವಿ, ವಿಮರ್ಶಕರರಾದ ಮತ್ತು ಆತ್ಮೀಯರಾದ ಶ್ರೀ ಸುಬ್ರಾಯ ಚೊಕ್ಕಾಡಿಯವರ ಸಮಗ್ರ ಬರಹಗಳ ಸಂಪುಟ ಪ್ರಕಟವಾಗುತ್ತಿರುವುದು ಗೊತ್ತಾಗಿ ಬಹಳ ಸಂತೋಷ, ಸಂಭ್ರಮ ಆಯಿತು. ಆ ಸಂಪುಟಗಳ ಬಿಡುಗಡೆಯಲ್ಲಿ ನನಗೆ ಮಾತನಾಡಬೇಕು ಅಂತ ಕರೆದಾಗ ಸ್ವಲ್ಪ ತಲೆ ಗಿಮ್ಮೆಂದಿತು. ಎಲ್ಲೂ ಅಷ್ಟಾಗಿ ಹೋಗದ ನನಗೆ, ಗುರುಸಮಾನರಾದ ಹಿರಿಯರಾದ ಚೊಕ್ಕಾಡಿಯವರ ಮಾತಿಗೆ ಇಲ್ಲವೆನ್ನದೆ ಒಪ್ಪಿದೆ. ನನ್ನ ಓದಿಗೆ ದಕ್ಕಿದಷ್ಟು ಚೊಕ್ಕಾಡಿಯವರ ಕಾವ್ಯ, ವಿಮರ್ಶೆ, ಮತ್ತು ಕಥೆಗಳ ಕುರಿತು ಕೆಲವು ಅಭಿಪ್ರಾಯಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತೇನೆ. ನಾನು ಅಕಡೆಮಿಕೆ ಆಗಿ ಸಾಹಿತ್ಯಾಭ್ಯಾಸ ಮಾಡಿಲ್ಲ. ಓದುಪ್ರೀತಿಯಿಂದ ನನಗೆ ಸಿಕ್ಕಷ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.</span></p>
<p style="font-family: tunga; margin: 0px;">ಮೊದಮೊದೂಲಿಗೆ ಚೊಕ್ಕಾಡಿಯವರ ಹತ್ತಿರದ ಪರಿಚಯವಾದ ಹೊಸದು. ಅದೊಂದು ಸಾಹಿತ್ಯ ಪ್ರೀತಿಯ ಗೆಳೆಯರೆಲ್ಲ ಸೇರಿದ್ದ ಗಳಾಸು ಸಂಜೆ. ಅವರು ನನ್ನ ಆಸಕ್ತಿಯ ಕವಿ,ಸಾಹಿತ್ಯ ಇತ್ಯಾದಿಯಾಗಿ ವಿಚಾರಿಸಿದರು.</p>
<p style="margin: 0px;"><span style="font-family: 'tunga';">ಇವರು ಮುನಿಸು ತರವೇ, ದಿನ ಹೀಗೆ ಜಾರಿ ಹೋಗಿದೆ ಮುಂತಾದ ಬಹಳ ಇಷ್ಟವಾದ ಭಾವಗೀತೆಗಳ ಕವಿ, ಮತ್ತು ಹಿರಿಯರು ಎಂಬ ಗೌರವಭರಿತ ಸಂಕೋಚದಲ್ಲಿ ನಾನು ಮಾತಾಡುವುದೋ ಬೇಡವೋ ಅಂತ ಮಾತಾಡುತ್ತಿದ್ದೆ.</span></p>
<p style="margin: 0px;"><span style="font-family: 'tunga';">ಆಗ ಅವರು ಇದ್ದಕ್ಕಿದ್ದಂತೆ ಒಂದು ಕಥೆ ಹೇಳಿದರು. ನೋಡಿ ಒಬ್ಬ ಅಜ್ಜ ಅಥವಾ ಅಪ್ಪ ಮಗುವನ್ನು ಸಂತೆಗೆ ಕೊಂಡು ಹೋದ ಅಂತ ಇಟ್ಟುಕೊಳ್ಳೋಣ. ಒಬ್ಬ ಅಪ್ಪ ತನ್ನ ಹೆಗಲ ಮೇಲೆಯೇ ಮಗುವನ್ನು ಕೂರಿಸಿ ಜಾತ್ರೆ ಸುತ್ತಾಡಿಸಿ, ಇದು ನೋಡು ಅದು ನೋಡು ಅಂತೆಲ್ಲ ತಾನು ಕಂಡಿದ್ದನ್ನ, ಗ್ರಹಿಸಿದ್ದನ್ನ, ಅನುಭವಿಸಿದ್ದನ್ನ ಮಗುವಿಗೆ ತೋರಿಸಬಹುದು. ಅಥವಾ ಮಗೂ ಇದು ಸಂತೆ, ಈ ಮಾಳದ ಬೌಂಡರಿಯಲ್ಲಿ ಅಡ್ಡಾಡಿ ನಿನಗೇನೇನು ಕಾಣುತ್ತದೋ ನೋಡು ಅಂತ ಒಂದು ಆವರಣ ಕೊಟ್ಟು ಅಡ್ಡಾಡಿ ಅನುಭವಿಸಿ ನೋಡಲು ಬಿಡಬಹುದು. ಎರಡೂ ಒಳ್ಳೆಯ ವಿಧಾನವೇ. ಆದರೆ ನಮಗೆ ಯಾವುದು ಬೇಕು, ನಮಗೆ ಯಾವುದಾದೀತು ಅನ್ನುವುದು ನಮ್ಮ ಮನೋಧರ್ಮದ ಮೇಲೆ ನಿರ್ಧರಿಸಬೇಕು ಅಂತ ನನಗೆ ಅನಿಸುತ್ತಪ್ಪಾ. ನೀವು ಹೊಸಬರು ನಿಮಗೆ ಹೇಗೆ ತೋರುತ್ತೋ ಹಾಗೆ ಮಾಡಿ. ನಾನು ಹೇಳಿದ್ದನ್ನ ಓದುವಾಗ ಗಮನಿಸುತ್ತಿರು ಅಂದರು. ನಾನು ಅವತ್ತೇ ಅವರಿಗೆ ಅಡ್ಡಬಿದ್ದೆ. ಆಕ್ಚುವಲೀ ಅವರು ಕುವೆಂಪು ಮತ್ತು ಬೇಂದ್ರೆಯವರ ಕಾವ್ಯವಿಧಾನದ ಕುರಿತು ಮಾತನಾಡಿದ್ದರು.</span></p>
<p style="margin: 0px;"><span style="font-family: 'tunga';">ಅವತ್ತಿನಿಂದ ಇವತ್ತಿನವರೆಗೂ ಸಾಹಿತ್ಯದ ಕುರಿತ ನನ್ನ ಪ್ರಶ್ನೆಗಳಿಗೆ ಕೆಲವಾರು ಬದುಕಿನ ಕುರಿತ ಪ್ರಶ್ನೆಗಳಿಗೂ ಚೊಕ್ಕಾಡಿಯವರು ಸಂತೆಮಾಳದಲ್ಲಿ ನನ್ನನ್ನು ಓಡಾಡಲು ಗ್ರಹಿಸಲು ಬಿಟ್ಟ ಅಪ್ಪನ ಕೆಲಸವನ್ನು ಮಾಡಿದ್ದಾರೆ. ಅದನ್ನು ನನಗೆ ಅಂತಲ್ಲ, ಸಾಹಿತ್ಯ ಪ್ರೀತಿಯ ಯಾರು ಬಂದರೂ ಮಾಡಿದ್ದಾರೆ.</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಚೊಕ್ಕಾಡಿಯವರ ಸಮಗ್ರ ಸಾಹಿತ್ಯದ ಕುರಿತಾಗಿ ಮೊದಲಿಗೆ ಒಂದೆರಡು ಮಾತುಗಳನ್ನು ನನಗೆ ಹೇಳಬೇಕಿದೆ.</span></p>
<p style="margin: 0px;"><span style="font-family: 'tunga';">ಹಲವು ಕಡೆ ಚೊಕ್ಕಾಡಿಯವರೇ ಬರೆದುಕೊಂಡಿರುವಂತೆ ಅವರ ಬಡತನದ ಬಾಲ್ಯ ಮತ್ತು ಬೆಳೆಯುವ ಕಾಲದ ತವಕ ತಲ್ಲಣಗಳಿಗೆ ಅವರು ಸಾಹಿತ್ಯವನ್ನು ಅಡಗುದಾಣವಾಗಿ ಉಪಯೋಗಿಸಿಕೊಂಡಿದ್ದಾರೆ. ಸಾಕಷ್ಟು ಲೇಖಕರಿಗೆ ಕೂಡಾ ಈ ಮಾತು ಅನ್ವಯಿಸುತ್ತದೆಯೇನೋ. </span></p>
<p style="margin: 0px;"><span style="font-family: 'tunga';">ಅವರ ಗದ್ಯ ಸಾಹಿತ್ಯ - ಅಂದರೆ ಕಥೆಗಳು, ಮತ್ತು ಕಾದಂಬರಿಯನ್ನು ಓದಿದಾಗ ಮೊದಲು ಮನಸ್ಸಿಗೆ ಬರುವ ಭಾವ... ಉಹ್..ಈ ಬದುಕು ಎಷ್ಟು ಗಂಭೀರ ಮತ್ತು ದಾರುಣ ಎಂದು. ಅವರ ಮೊದಮೊದಲ ನೂರಾರು ಕವಿತೆಗಳಲ್ಲೂ ಕೂಡಾ ಈ ಬದುಕಿನ ಕಟುವಾಸ್ತವವಗಳು ಸ್ವಲ್ಪ ಕಣ್ಣಿಗೆ ಹೊಡೆಯುವಂತೆಯೇ ಇವೆ. ನಂತರದ ಮಾಗಿದ ಕಾಲದ, ಜವಾಬುದಾರಿಗಳು ಒಂದು ಹಂತಕ್ಕೆ ಬಂದು ಬದುಕು ಸ್ವಲ್ಪ ದಡ ಹತ್ತಿದ ಕಾಲದ ಕವಿತೆಗಳು ಆ ಕಟುತನವನ್ನು ಕಡಿಮೆ ಮಾಡಿಕೊಂಡು ನೋಡಿ ಹೀಗೆಲ್ಲ ಆಯಿತು ಅಂತ ಮೆಲುಮಾತಿನಲ್ಲಿ ಶತಮಾನದ ಹಿಂದಿನ ಕತೆಗಳನ್ನು ಹೇಳುವ ಅಜ್ಜನ ಟೋನಿನಲ್ಲಿ ಬಂದಿವೆ. ನನ್ನ ಮೆಚ್ಚಿನ ಕಥೆಗಾರ ಥಾಮಸ್ ಹಾರ್ಡಿ ಹೇಳುವಂತೆ ನಾವೆಲ್ಲರೂ ಈ ಅಗಾಧ ವಿಶ್ವದ ಒಂದು ಸಣ್ಣಾತಿಸಣ್ಣ ಕಣಗಳು. ವಿಶಾಲ ಪ್ರಕೃತಿಯನ್ನ ಗಮನಿಸುತ್ತಿದ್ದರೆ ಇದು ನಮ್ಮ ಅನುಭವಕ್ಕೆ ಬರುತ್ತದೆ. ಇದು ಬಹುಶಃ ಚೊಕ್ಕಾಡಿಯವರ ಸಾಹಿತ್ಯದ ಬೆಳವಣಿಗೆಯನ್ನು ಗುರುತಿಸಲು ಸಹಾಯಕ್ಕೆ ಬರುತ್ತದೆ. </span></p>
<p style="margin: 0px;"><span style="font-family: 'tunga';">ಮೊದಮೊದಲಿಗೆ ತನ್ನ ಪರಿಸ್ಥಿತಿಯಿಂದಾಗಿ ಉಂಟಾದ ಅಸಹಾಯಕತೆ, ಸಿಟ್ಟು ಆಕ್ರೋಶಗಳನ್ನೆಲ್ಲ ಹೊರಹಾಕಲು ಸಾಧನವಾದ ಸಾಹಿತ್ಯ ಥಟ್ಟನೆ ನವ್ಯದ ಸ್ವಕೇಂದ್ರಿತ ಫಾರ್ಮ್ಯಾಟನ್ನು ಅಪ್ಪಿಕೊಂಡಿದ್ದನ್ನು ನೋಡಬಹುದು. ಯಾರೇ ಆದರೂ ಆಗ ಚಾಲ್ತಿಯಲ್ಲಿದ್ದ, ಟ್ರೆಂಡಾಗಿದ್ದ ನವ್ಯ ಮತ್ತು ಅಡಿಗರ ಸೆಳೆತಕ್ಕೆ ಒಳಗಾಗದೆ ಇದ್ದ ಕಾಲಮಾನವೇ ಅದು. ಆದರೆ ವಿಶ್ವ ಸಾಹಿತ್ಯವನ್ನು ಓದುತ್ತ, ಗಮನಿಸುತ್ತ, ಬರಿದೆ ತನ್ನ ಬರವಣಿಗೆಯಲ್ಲದೆ ಇತರರ ಬರವಣಿಗೆಯನ್ನೂ ಓದುತ್ತ ಬೆಳೆದ ಕವಿ ಸುಬ್ರಾಯರಿಗೆ ತನ್ನ ಅಂತರಂಗಕ್ಕೆ ಸಂಬಂಧಿಸಿದ ಹಾಗೆ, ತನ್ನ ಬಹಿರಂಗಕ್ಕೆ ಲಗತ್ತಾಗುವ ಹಾಗೆ ತನ್ನ ಅಭಿವ್ಯಕ್ತಿ ಏನಿರಬೇಕು ಎಂದು ಸ್ಪಷ್ಟವಾಗುತ್ತ ಹೋದ ಹಾಗೆ ಅವರ ಕವಿತೆಗಳು ಸ್ವಯಂಕೇಂದ್ರಿತ ಆಕ್ರೋಶದಿಂದ, ಸಮಾಜಸುಧಾರಣೆಯನ್ನು ಬರಹದಿಂದ ಮಾತ್ರವೇ ಮಾಡಬಹುದು ಎಂಬ ಮಜಲಿನಿಂದ ತನ್ನ ಸುತ್ತಲ ಪರಿಸರಕ್ಕೆ ದಾಟಿಕೊಂಡವು. ಅವರ ಬಾಲ್ಯವನ್ನು ಬಡತನ, ಅಸಹಾಯಕತೆಗಳು ಹೇಗೆ ಆಕ್ರಮಿಸಿಕೊಂಡಿದ್ದವೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗಿ ಅವರಿದ್ದ ಪರಿಸರವೂ ಪೊರೆದಿತ್ತು ಅನ್ನುವುದನ್ನು ನಾವು ಗಮನಿಸಬೇಕು. ಹಾಗಂತ ಇಲ್ಲಿ ಪ್ರಕೃತಿ ಪ್ರೀತಿ ಎಂಬ ರೊಮ್ಯಾಂಟಿಸಿಸಂ ಇಲ್ಲ. ಇದ್ದದ್ದನ್ನು ಆಕರ್ಷಕವಾಗಿ ಉದ್ರೇಕಗೊಂಡು ದಾಟಿಸುವ ಭಾವೋದ್ವೇಗ ಇಲ್ಲ. ಇದ್ದದ್ದನ್ನು ಇದ್ದ ಹಾಗೆ ಹೇಳುವ ಸಹಜ ನಡೆ... ಮರವೊಂದು ಚಿಗುರಿ ಹಬ್ಬಿ ನೆರಳಾಗಿರುವುದು ಅಥವಾ ಎಲೆಯುದುರುತ್ತಿರುವುದು ನಮಗೆ ನೋಡುವವರಿಗೆ ಒಂದು ಭಾವೋದ್ವೇಗವನ್ನು ಹುಟ್ಟಿಸಲೂಬಹುದು. ಇಲ್ಲ ಅನ್ನಲಾರೆ. ಆದರೆ ಮರಕ್ಕೆ ಚಿಗುರುವುದು, ಹರಡಿಕೊಳ್ಳುವುದು, ಹೂಹಣ್ಣು ಬಿಡುವುದು, ಎಲೆಯುದುರುವುದು, ಹಕ್ಕಿಗಳಿಗೆ ಗೂಡು ಕಟ್ಟಲು ರೆಂಬೆ ಇದ್ದೇ ಇರುವುದು, ಅಥವ ನಾವು ಮನುಷ್ಯರು ಕತ್ತರಿಸಿದಾಗ ಸುಮ್ಮನುಳಿಯುವುದು, ಮತ್ತೆ ವಸಂತದಲ್ಲಿ ಚಿಗುರುವುದು ಬಹಳ ಸಹಜ ಪ್ರಾಕೃತಿಕ ಸಂಗತಿ. ಅದಕ್ಕೆ ಈ ಕುರಿತು ಸಂಭ್ರಮಾಚರಣೆಯಾಗಲೀ ಸಂತಾಪವಾಗಲಿ ಇಲ್ಲ. ಈ ಸಹಜತೆಯನ್ನ, ಇಲ್ಲಿನ ನೇರನಿಷ್ಠುರತೆಯನ್ನ ಸುಬ್ರಾಯ ಚೊಕ್ಕಾಡಿಯವರು ಹಾಸಿ ಹೊದ್ದರು ಮತ್ತು ಅದು ಅವರ ಕಾವ್ಯಮಾರ್ಗದ ಮೇಲೆ ಕೂಡಾ ಪ್ರಭಾವ ಬೀರಿತು ಎನ್ನುವುದು ನನ್ನ ಅಭಿಪ್ರಾಯ. </span></p>
<p style="margin: 0px;"><span style="font-family: 'tunga';">ಚೊಕ್ಕಾಡಿಯವರ ನಾನೇಕೆ ಬರೆಯುತ್ತೇನೆ ಲೇಖನದಲ್ಲಿ ಒಂದು ಕಡೆ ಲಾರೆನ್ಸನನ್ನು ಉದ್ಧರಿಸಿ ಹೇಳುತ್ತಾರೆ. I am free as a rooted tree is free. ಇದು ಚೊಕ್ಕಾಡಿಯವರ ಕವಿತೆಗಳ ಭಂಡಾರಕ್ಕೆ ಕೀಲಿ ಕೈ ಕೂಡ. ಅವರಿಗೆ ಮನುಷ್ಯನ ಮಿತಿ ಹಾಗೂ ಮೀರುವಿಕೆಗಳ ಸ್ಪಷ್ಟ ವಾಸ್ತವಿಕ ಅರಿವು ಇದೆ. ಎಲ್ಲಿ ಗಪ್ಪಗಿರಬೇಕು ಅಥವಾ ಎಲ್ಲಿ ದನಿಯೆತ್ತಲೇಬೇಕು ಎಂಬ ತಿಳಿವು ಇದೆ. ಹೇಳಲೇಬೇಕಾದ್ದನ್ನು ಹೇಳುವ ನಿಷ್ಠುರತೆಯಲ್ಲೂ ಕೆಲವು ಸಲ ಸುಮ್ಮನಿದ್ದು ಬಿಡಬೇಕು ಎಂಬ ಸೌಜನ್ಯವೂ ಇದೆ. </span></p>
<p style="margin: 0px;"><span style="font-family: 'tunga';">ಒಂದೆರಡು ಕವಿತೆಗಳನ್ನು ಗಮನಿಸೋಣ.</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಹಂಗು ಎಂಬ ಈ ಕವಿತೆ ಚೊಕ್ಕಾಡಿಯವರ ಕಾವ್ಯಧರ್ಮವನ್ನ ಮನೋಧರ್ಮವನ್ನ ಸ್ಪಷ್ಟವಾಗಿ ಚಿತ್ರಿಸುತ್ತದೆ. ಹಾಗಂತ ವಾಚಾಳಿತನವೇನಿಲ್ಲ.</span></p>
<p style="margin: 0px;"><span style="font-family: 'tunga';"><b>ಹಂಗು.</b></span></p>
<p style="margin: 0px;"><span style="font-family: 'tunga';">ಹಾರಿ ಹೋಗುತ್ತದೆ ಹಕ್ಕಿಗಳು ಗಾಳಿ ಬೀದಿಯಲಿ</span></p>
<p style="margin: 0px;"><span style="font-family: 'tunga';">ಜಗತ್ತನ್ನೇ ಆವರಿಸಿಕೊಳ್ಳುತ್ತ</span></p>
<p style="margin: 0px;"><span style="font-family: 'tunga';">ಮರ ಮಾತ್ರ ಅಲ್ಲೆ ನಿಂತಿರುತ್ತದೆ ನೆಲದಲ್ಲಿ ಕಾಲೂರಿ – ದಿಗಂತದತ್ತ</span></p>
<p style="margin: 0px;"><span style="font-family: 'tunga';">ಕೊಂಬೆರೆಂಬೆಗಳ ಚಾಚಿ ಜಗವನ್ನು ಒಳಗೊಳ್ಳುತ್ತ.</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಸಂಜೆ ಹಿಂದಿರುಗಿದ ಹಕ್ಕಿಗಳು ತೂಗು ಹಾಕುತ್ತವೆ ಮರಕ್ಕೆ ನಮ್ಮ</span></p>
<p style="margin: 0px;"><span style="font-family: 'tunga';">ಹಾಡುಗಳನ್ನು ನೆಲಮುಗಿಲನೊಳಗೊಂಡ ಜಗದ ಪಾಡುಗಳನ್ನು</span></p>
<p style="margin: 0px;"><span style="font-family: 'tunga';">ಬೆಳಗೆದ್ದು ನೋಡಿದರೆ, ಮರವೋ ಮಿಟುಕಿಸುತ್ತದೆ – ಮೈತುಂಬಿರುವ</span></p>
<p style="margin: 0px;"><span style="font-family: 'tunga';">ಹೊಸ ಚಿಗುರು, ಹೂವು ಹಣ್ಣುಗಳ ಕಣ್ಣುಗಳನ್ನು.</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಯಾರವಿವೊ? ಹಕ್ಕಿಗಳ ಕೊಡುಗೆಗಳ ರೂಪಾಂತರವೆ ಅಥವಾ ಮರವು</span></p>
<p style="margin: 0px;"><span style="font-family: 'tunga';">ನೆಲದಿಂದ ಪಡೆದದ್ದೇ? ಯಾವುದೂ ಸರಿಯಿರಬಹುದು;</span></p>
<p style="margin: 0px;"><span style="font-family: 'tunga';">ಇಲ್ಲದಿರಬಹುದು.</span></p>
<p style="margin: 0px;"><span style="font-family: 'tunga';">ಮರದಲ್ಲೇ ಹಕ್ಕಿಗಳ ಹೆಜ್ಜೆಗುರುತುಗಳಿಲ್ಲ; ಹಕ್ಕಿಗಳಲೂ</span></p>
<p style="margin: 0px;"><span style="font-family: 'tunga';">ಮರದ ಯಾವುದೇ ನೆನವರಿಕೆ ಉಳಿದಂತಿಲ್ಲ.</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಕವಿದ ಕತ್ತಲಲೆ ವರ್ಗಾವಣೆಗೊಂಡವೇ – ಹಕ್ಕಿಗಳು,</span></p>
<p style="margin: 0px;"><span style="font-family: 'tunga';">ಮರದ ಗಳಿಕೆಗಳು ಮುಟ್ಟಿಯೂ ಮುಟ್ಟದ ರೀತಿಯಲ್ಲಿ?</span></p>
<p style="margin: 0px;"><span style="font-family: 'tunga';">ಹಕ್ಕಿಗಳು ಹಾಗೂ ಮರ ಮಾತ್ರ ಸುಮ್ಮನೆ ನಿದ್ದೆಹೋಗುತ್ತವೆ</span></p>
<p style="margin: 0px;"><span style="font-family: 'tunga';">ರಾತ್ರಿ-ಮಾತಿರದೆ, ಯಾವುದೇ ಗೊಡವೆಯೇ ಇರದ ರೀತಿಯಲ್ಲಿ.</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಕನಸಿನ ಅನೂಹ್ಯ ಓಣಿಗಳಲ್ಲಿ ಹಕ್ಕಿಗಳಿಗೋ ಮರದ ಘನತೆ, ಮರಕ್ಕೆ</span></p>
<p style="margin: 0px;"><span style="font-family: 'tunga';">ಹಕ್ಕಿಗಳ ಲವಲವಿಕೆ ದಕ್ಕಿ ಅದಲು ಬದಲಾದಂತಿದೆ</span></p>
<p style="margin: 0px;"><span style="font-family: 'tunga';">ನಿಂತವರು ಅಲೆದಂತೆ, ಅಲೆದವರು ನಿಂತಂತೆ, ಈಗ ಹಕ್ಕಿಗಳಿಗಿಲ್ಲ</span></p>
<p style="margin: 0px;"><span style="font-family: 'tunga';">ಮರದ ಹಂಗು; ಮರಕ್ಕಿಲ್ಲ ಹಕ್ಕಿಗಳ ಹಂಗು.</span></p>
<p style="font-family: tunga; margin: 0px;"><br /></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';"><b>ಚಕ್ರಚಲನೆ</b></span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ದೇಶಪ್ರೇಮಿಗಳಿಗೂ ದೇಶದ್ರೋಹಿಗಳಿಗೂ</span></p>
<p style="margin: 0px;"><span style="font-family: 'tunga';">ಬಹಳ ವ್ಯತ್ಯಾಸವೇನೂ ಇಲ್ಲ</span></p>
<p style="margin: 0px;"><span style="font-family: 'tunga';">ನಮ್ಮ ದೇಶದಲ್ಲಿ!</span></p>
<p style="margin: 0px;"><span style="font-family: 'tunga';">ಒಂದೇ ನಾಣ್ಯದ ಎರಡು ಮುಖಗಳಂತೆ ಅವರು!</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಹೀಗೆಂದರೆ ನಾನು</span></p>
<p style="margin: 0px;"><span style="font-family: 'tunga';">ಯಾರೂ ಕೋಪಿಸಬೇಕಾಗಿಲ್ಲ,</span></p>
<p style="margin: 0px;"><span style="font-family: 'tunga';">ಗಮನಿಸಿ ನೋಡಿ:</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಸರಕಾರ ಬದಲಾದಾಗ ಆಗುತ್ತಾರೆ</span></p>
<p style="margin: 0px;"><span style="font-family: 'tunga';">ದೇಶಪ್ರೇಮಿಗಳು ದೇಶದ್ರೋಹಿಗಳು</span></p>
<p style="margin: 0px;"><span style="font-family: 'tunga';">ಹಾಗೂ </span></p>
<p style="margin: 0px;"><span style="font-family: 'tunga';">ದೇಶದ್ರೋಹಿಗಳೂ ದೇಶಪ್ರೇಮಿಗಳು</span></p>
<p style="margin: 0px;"><span style="font-family: 'tunga';">ಅದೆ ಅದೆ ಬದಲಾದ</span></p>
<p style="margin: 0px;"><span style="font-family: 'tunga';">ಸರಕಾರದ ದೃಷ್ಟಿಯಲ್ಲಿ.</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಇತಿಹಾಸದ ಚಲನೆ</span></p>
<p style="margin: 0px;"><span style="font-family: 'tunga';">ಇರುವುದೇ ಹೀಗೆ</span></p>
<p style="margin: 0px;"><span style="font-family: 'tunga';">ಚಕ್ರ ಚಲನೆಯ ಹಾಗೆ.</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಇದಲ್ಲದೆ ಇವರದ್ದು ಇನ್ನೊಂದು ನನಗೆ ಬಹಳ ಮೆಚ್ಚಿನ ಕವಿತೆಯೊಂದಿದೆ. ಇದರಲ್ಲಿ ಅದು ಎಂಬ ಕವಿತೆ.</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';"><b>ಇದರಲ್ಲಿ ಅದು </b></span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಒಂದು ಕಪ್ಪೆಯ ಬದುಕಿನಲ್ಲಿ </span></p>
<p style="margin: 0px;"><span style="font-family: 'tunga';">ಏನಿರುತ್ತದೆ ?</span></p>
<p style="margin: 0px;"><span style="font-family: 'tunga';">ಮೇಲಕ್ಕೂ ಕೆಳಕ್ಕೂ ಜಿಗಿಯುತ್ತದೆ </span></p>
<p style="margin: 0px;"><span style="font-family: 'tunga';">ಒಣ ನೆಲಕ್ಕೆ ಮಳೆ ಕರೆಯುತ್ತದೆ </span></p>
<p style="margin: 0px;"><span style="font-family: 'tunga';">ಹಸುರಿನ ಮರೆಯಲ್ಲಿ ಬೇಟೆಗೆ </span></p>
<p style="margin: 0px;"><span style="font-family: 'tunga';">ಕಾದಿರುತ್ತದೆ. </span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಒಂದು ಹಾವಿನ ಬದುಕಿನಲ್ಲಿ </span></p>
<p style="margin: 0px;"><span style="font-family: 'tunga';">ಏನಿರುತ್ತದೆ?</span></p>
<p style="margin: 0px;"><span style="font-family: 'tunga';">ಆಚೆಗೂ ಈಚೆಗೂ ತೆವಳುತ್ತದೆ. </span></p>
<p style="margin: 0px;"><span style="font-family: 'tunga';">ಹೊಳೆಯುವ ಮೈಯಲಿ ಹೊರಳುತ್ತದೆ </span></p>
<p style="margin: 0px;"><span style="font-family: 'tunga';">ಹಸುರಿನ ಮರೆಯಲಿ ಬೇಟೆಗೆ </span></p>
<p style="margin: 0px;"><span style="font-family: 'tunga';">ಕಾದಿರುತ್ತದೆ. </span></p>
<p style="margin: 0px;"><span style="font-family: 'tunga';">ಕಪ್ಪೆ ಹಾವುಗಳೆರಡೂ ಕಾದೇ ಇರುತ್ತವೆ ಅನವರತ </span></p>
<p style="margin: 0px;"><span style="font-family: 'tunga';">ಜಗತ್ತೇ ತಟಸ್ಥ ಎದುರಲ್ಲಿ</span></p>
<p style="margin: 0px;"><span style="font-family: 'tunga';">ಎನ್ನುವ ಹಾಗೆ ಧ್ಯಾನ ಸ್ಥಿತಿಯಲ್ಲಿ -</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಬೆನ್ನ ಹಿಂದಿನ - ಕವಿವ ಮತ್ತಿಗೆ</span></p>
<p style="margin: 0px;"><span style="font-family: 'tunga';">ಕಣ್ಣ ಮುಂದಿನ ಕರೆವ ತುತ್ತಿಗೆ </span></p>
<p style="margin: 0px;"><span style="font-family: 'tunga';">ವಿದಾಯ ಹೇಳಿದ ಹಾಗೆ ಎಲ್ಲ ಆಪತ್ತಿಗೆ </span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಕೊನೆಗೂ ಒಮ್ಮೆ ಅನಿವಾರ್ಯ </span></p>
<p style="margin: 0px;"><span style="font-family: 'tunga';">ಮುಖಾಮುಖಿಯಲ್ಲಿ ಮಾತ್ರ </span></p>
<p style="margin: 0px;"><span style="font-family: 'tunga';">ಒಂದು ಇನ್ನೊಂದಾಗುವ ಪವಾಡ ನಡೆಯುತ್ತದೆ .</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಹಾವಿನ ಕಣ್ಣಲ್ಲಿ; ಕಪ್ಪೆಗೆ -ಜೀವದ ಅರಳು </span></p>
<p style="margin: 0px;"><span style="font-family: 'tunga';">ಕಪ್ಪೆಯ ಕಣ್ಣಲ್ಲಿ; - ಹಾವಿಗೆ ಸಾವಿನ ನೆರಳು. </span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ನೀವು ಇತ್ತೀಚಿನ ಕಲ್ಲುಮಂಟಪ ಸಂಕಲನ ಅಥವ ಹಲವಾರು ಪ್ರಕಟಿತ ಕವಿತೆಗಳಲ್ಲಿ ಗಮನಿಸಿದರೆ ಈ ಇದರಲ್ಲಿ ಅದು ಅಥವಾ ಅದರಲ್ಲಿ ಇದು ಎಂಬುದು ಮತ್ತೆ ಮತ್ತೆ ಒರೆಹಚ್ಚಲ್ಪಟ್ಟ ಉಪಯೋಗಿಸಲ್ಪಟ್ಟ ಸ್ಥಾಯೀಭಾವವಾಗಿ ನನಗೆ ಕಾಣಿಸುತ್ತದೆ. ಯಾವುದು ಅನುಕ್ಷಣಕ್ಕೂ ಬದಲಾಗುತ್ತಲೇ ಅದೇ ಆಗಿ ಉಳಿದಿರುತ್ತದೆಯೋ... ಅದನ್ನ ಸ್ಥಾಯೀ ಭಾವ ಎನ್ನುವುದೂ ಬಹುಶಃ ಸಂಕೀರ್ಣತೆಯೇ ಇರಬಹುದು. ಆದರೆ ಈ ಮರುಕಳಿಕೆ ನನಗೆ ಅಚ್ಚರಿಯನ್ನಿತ್ತಿದೆ.</span></p>
<p style="margin: 0px;"><span style="font-family: 'tunga';">ನೀವು ಓದಿನೋಡಿ ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ, ಅಡಿಗರು, ಎಕೆಆರ್, ಎಕ್ಕುಂಡಿಯವರು, ಕಣವಿ, ಎಸ್.ಆರ್. ಮಂಜುನಾಥ್ (ಜೀವಯಾನ), ಮತ್ತು ಈಗ ಬರೆಯುತ್ತಿರುವ ಹೊಸಕವಿಗಳಿಗಿಂತ ಸ್ವಲ್ಪ ಹಿಂದಿನ ಎಲ್ಲ ಮಾಗಿದ ಕವಿಗಳ ಕಾವ್ಯದಲ್ಲೂ ಈ ಬಗೆಯ ಇದು ಅದಿರಬಹುದೇ, ಅಥವ ನಾವು ಹೀಗೆ ಎಂದು ಕೊಂಡಿದ್ದು ಹಾಗೂ ಇರಬಹುದು, ಕಣ್ಣಿಗೆ ಕಂಡದ್ದಷ್ಟೇ ಅಲ್ಲದೆ ಸಂಪೂರ್ಣ ವಿರುದ್ಧಾರ್ಥವೂ ಇರಬಹುದು ಎಂಬ ಹೊಳಹುಗಳು ಕಾಣುತ್ತವೆ. ಉದಾಹರಣೆಗೆ ಬೇಂದ್ರೆಯವರ ಬೆಳಗು, ಕುವೆಂಪು ಅವರ ದರ್ಶನಂ, ಕೆ.ಎಸ್.ಎನ್.. ಅವರ ಎಲ್ಲಚಿತ್ರಗಳಾಚೆಗಿನ್ನೊಂದು ಚಿತ್ರದ ಪ್ರತಿಮೆ, ಅಡಿಗರ ಕಾಡ ಮೂಲಕವೇ ಪಥ ಆಗಸಕ್ಕೆ.., ಎಕೆಆರ್...ಅವರ ಕವಿತೆಗಳೆಲ್ಲ ಚಕ್ರವರ್ತಿಯ ಕರುಣೆ ..ಇತ್ಯಾದಿ ಹೆಚ್ಚೂ ಕಮ್ಮಿ ಇದನ್ನೇ ಹೇಳುತ್ತವೆ. </span></p>
<p style="margin: 0px;"><span style="font-family: 'tunga';">ಮಂಜುನಾಥರ ಹಕ್ಕೀ ಪಲ್ಟೀ..ಇರಬಹುದು..ಅಥವಾ ಚೊಕ್ಕಾಡಿಯವರ ಸ್ಪರ್ಧೆ ಕವಿತೆಗಿರುವ ಸಾಮ್ಯತೆ ನನ್ನನ್ನು ಬೆಚ್ಚಿ ಬೀಳಿಸಿತು ಕೂಡಾ.. </span></p>
<p style="margin: 0px;"><span style="font-family: 'tunga';">ರಭಸದಿಂದ ದಿಗಂತವನ್ನೇ </span></p>
<p style="margin: 0px;"><span style="font-family: 'tunga';">ಸೀಳಿ ಮುನ್ನಡೆವಂತೆ</span></p>
<p style="margin: 0px;"><span style="font-family: 'tunga';">ನುಗ್ಗಿದ್ದು</span></p>
<p style="margin: 0px;"><span style="font-family: 'tunga';">ನೀಲಿ ಆಕಾಶದಲ್ಲಿ</span></p>
<p style="margin: 0px;"><span style="font-family: 'tunga';">ಕಲ್ಲೇ?</span></p>
<p style="margin: 0px;"><span style="font-family: 'tunga';">ಹಕ್ಕಿಯೇ?</span></p>
<p style="margin: 0px;"><span style="font-family: 'tunga';">ಅಥವಾ</span></p>
<p style="margin: 0px;"><span style="font-family: 'tunga';">ಕವಿತೆಯೇ?</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಕಾವ್ಯ ಎಂದರೇನು ಎಂಬುದನ್ನು ತಿಳಿಸಲು ಸುಬ್ರಾಯ ಚೊಕ್ಕಾಡಿಯವರು ಒಂದು ಕಡೆ ಬಲಿಯ ಅಂತಿಮ ಕೂಗು ಎಂಬ ಲೇಖನ ಬರೆದಿದ್ದಾರೆ. ಒಂದು ಅತ್ಯಾಧುನಿಕ ಕಸಾಯಿಕಾನೆಯ (slaughter house) ಒಡೆಯ ತನ್ನ ಸ್ನೇಹಿತನಾದ ಕವಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿನ ಎಲ್ಲ ಅಚ್ಚುಕಟ್ಟು ವ್ಯವಸ್ಥೆಯ ಬಗ್ಗೆ ವಿವರಿಸುತ್ತಾನೆ. ಪ್ರಾಣಿಯೊಂದನ್ನು ಯಂತ್ರದ ಬಾಯಿಗೆ ಕೊಟ್ಟ ಮೇಲೆ ಹೇಗೆ ಅದರ ದೇಹದ ಎಲ್ಲ ಉಪಯುಕ್ತ ಭಾಗಗಳು, ತ್ಯಾಜ್ಯ ಎಲ್ಲವೂ ಸಮರ್ಥವಾಗಿ ಪ್ಯಾಕ್ ಆಗುತ್ತವೆ, ಅಥವ ವಿಲೇವಾರಿಯಾಗುತ್ತದೆ ಮತ್ತು ಈ ಪ್ರೊಸೆಸ್ ನಲ್ಲಿ ಆ ಪ್ರಾಣಿಯ ಪ್ರಾಡಕ್ಟು ಹಾಗೂ ಆವರಣ ಎಲ್ಲವೂ ಎಷ್ಟು ಆರೋಗ್ಯಕರವಾಗಿ, ಶುಚಿಯಾಗಿ ಇಡಲ್ಪಟ್ಟಿದೆ. ಎಲ್ಲಿಯೂ ಒಂದು ಕೊಸರಿರದ ಹಾಗೆ ಹೇಗೆ ವ್ಯವಸ್ಥೆ ಮಾಡಲ್ಪಟ್ಟಿದೆ ಎಂದು ವಿವರಿಸುತ್ತಾನೆ. ಈ ಎಲ್ಲ ವಿವರಗಳನ್ನೂ ಕೇಳುತ್ತ ತಲೆದೂಗುತ್ತಿರುವ ಕವಿ ಒಂದು ಕ್ಷಣ ಮೌನವಾಗಿದ್ದು.. ತನ್ನ ಸ್ನೇಹಿತನಲ್ಲಿ ಒಂದು ಪ್ರಶ್ನೆ ಕೇಳುತ್ತಾನೆ. How do you handle and dispose the final cry before it dies? ಇದು ಕವಿ ಮತ್ತು ಇತರರಿಗಿರುವ ನೋಟದ ಬಹಳ ಚಿಕಿತ್ಸಕ ಅಂತರ. ಇದು ನಮಗೆಲ್ಲರಿಗೂ ಅನಿಸಬಹುದು. ಆದರೆ ಗ್ರಹಿಸುವ ಮತ್ತು ಅಭಿವ್ಯಕ್ತಿಸುವ ಶಕ್ತಿ ಇರುವ ನಿಜವಾದ ಕವಿ ಈ ಉದ್ವೇಗವನ್ನು ಕಾಲಾತೀತವಾದ ಕಾಡುವ ಪ್ರಶ್ನೆಯಾಗಿಸಬಹುದು, ನಮ್ಮ ಮನಸ್ಸಿನಲ್ಲಿ ಈ ಉದ್ವೇಗವನ್ನು ಹಾಯಿಸಿ ನಮ್ಮ ದೈನಂದಿನ ಓಟ ಅಥವ ಈಜಿಗೆ ಒಂದು ದಿಕ್ಕು ನೀಡಲೂಬಹುದು.</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಇದೇ ಮಾತಿಗೆ ಬಂದರೆ.. ಅಡಿಗರು ಬರೆದರು</span></p>
<p style="margin: 0px;"><span style="font-family: 'tunga';"><b>"ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ</b></span></p>
<p style="margin: 0px;"><span style="font-family: 'tunga';"><b>ರಾಮಾಯಣ ಶ್ಲೋಕ ರೇಷ್ಮೆ ತೊಗಲು" </b></span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಕವಿತೆಗಳನ್ನ ಬರೆಯುವುದು, ವಿಮರ್ಶೆ ಬರೆಯುವುದು ಎಲ್ಲ ಒಂದು ಮಟ್ಟಿಗಿನ ಸಾಮರ್ಥ್ಯವಾದರೆ ಅವುಗಳನ್ನು ಓದುವ ಆಸಕ್ತಿಯಿರುವ ಸಹೃದಯರಿಗೆ ಮುಟ್ಟಿಸುವ ಕೆಲಸ ಅದಕ್ಕಿಂತಲೂ ಬಹಳ ದೊಡ್ಡದು. ಹೀಗೆ ಮಾಡಿದರೆ ಮಾತ್ರ ಸಾಹಿತ್ಯ ಪರಂಪರೆಯ ನದಿಗೆ ಪಾತ್ರ ದೊರಕುವುದು. ರಭಸದಿಂದ ಸುರಿವ ಜಲಪಾತವನ್ನ ದೂರದಲ್ಲೇ ನೋಡಿ ಆನಂದಿಸುತ್ತೇವೆಯೇ ಹೊರತು.. ಮುಟ್ಟಲು ಆಗುವುದಿಲ್ಲ. ಆದರೆ ಸುಬ್ರಾಯ ಚೊಕ್ಕಾಡಿಯಂತಹ ತೀಕ್ಷ್ಣಮತಿಗಳು ಮತ್ತು ಟೀಚರು ಆ ಜಲಪಾತದ ಹಿನ್ನೆಲೆಗೆ ಹೋಗಲು ಇರುವ ಕಾಲುದಾರಿಯನ್ನು ತೋರಿಸುತ್ತಾರೆ. ಯಾವ ಕೀ ಹಾಕಿದರೆ ಯಾವ ಬಾಗಿಲು ತೆರೆಯಬಹುದು ಎಂಬುದನ್ನು ತಿಳಿಸಿಕೊಡುತ್ತಾರೆ. ಅದನ್ನ ಚೊಕ್ಕಾಡಿಯವರ ವಿಮರ್ಶಾ ಬರಹಗಳು ಬಲು ಸಮರ್ಥವಾಗಿ ಮಾಡಿದೆ ಎಂಬುದು ನನ್ನ ಅಭಿಪ್ರಾಯ. ಬರೆಯುವ ಹಂಬಲ ಅದಮ್ಯವಾಗಿರುವವರು ಓದಲೇಬೇಕಾದ ಬರಹಗಳಿವೆ ಅವರ ವಿಮರ್ಶಾ ಸಂಕಲನದಲ್ಲಿ. </span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಬೇಡ ಬಾಣ ಬಿಟ್ಟಿದ್ದು ಹಕ್ಕಿಗೇ ಆದರೂ ಅದು ತಗುಲಿದ್ದು ಕವಿ ವಾಲ್ಮೀಕಿಗೆ. ಆ ಶೋಕವು ಮುಂದಿನ ಶ್ಲೋಕಕ್ಕೆ ನಾಂದಿಯಾಯಿತು ಎಂಬ ಕತೆಯನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಒಬ್ಬ ಟೀಚರ್ ನಮಗೆ ಈ ಸಂಬಂಧವನ್ನು ಗುರುತಿಸಿ ನೋಡಿ ಇದನ್ನು ನೋಡುವುದು ಹೀಗೆ... </span></p>
<p style="margin: 0px;"><span style="font-family: 'tunga';">ಮೂಡಲ ಮನೆಯ ಬೆಳಗು ಕವಿತೆ ಕೇಳುತ್ತ ಖುಷಿ ಪಡುವುದು ಒಳ್ಳೆಯದೇ ಆದರೆ ಅದರ ಪ್ಯಾರಾ ಪ್ಯಾರಾಗಳಲ್ಲಿ ಕವಿ ಬೇಂದ್ರೆ ಹೇಳಹೊರಟಿರುವುದು ಪಂಚೇಂದ್ರಿಯಗಳ ಅನುಭವ ಸಾದೃಶ್ಯವನ್ನ... ಗಮನಿಸಿ ನೋಡಿ ಮೊಗ್ಗೆ ಪಟಪಟನೇ ಒಡೆದು ಎನ್ನುವಾಗ ಮೌನದಲ್ಲಿನ ನಿಶ್ಯಬ್ಧದಲ್ಲಿ ದೊರೆಯುವ ಗ್ರಹಣ, ಎಲೆಗಳ ಮೇಲೆ ಎಲೆಯಂತೆಯೇ ಮರೆಸುವ ಹಾಗೆ ಬಿದ್ದಿರುವ ತುಷಾರ ಬಿಂದುಗಳನ್ನ ನೋಡುವ ದೃಷ್ಟಿ, ಬಣ್ಣದ ಪರಾಗವನ್ನೇ ಹೊದ್ದು ಹಾರುವ ದುಂಬಿಯ ದಂಡು ಸವರಿಕೊಂಡು ಹೋಗುವಾಗ ಸಿಗುವ ಸ್ಪರ್ಶ, ಹೀಗೇ ರುಚಿ, ಆಘ್ರಾಣಿಸುವಿಕೆ ಎಲ್ಲ ಹೇಳುತ್ತ ಕೊನೆಗೆ ಈ ಎಲ್ಲದರ ಮೂಲಕ ಆವರಿಸಿಕೊಳ್ಳುವ ಬೆಳಕಿನಲ್ಲಿ ತುಂಬಿರುವ ಶಾಂತಿರಸ... ಹೀಗೆ ತಿಳಿಸಿಕೊಡುವ ಸಾಮರ್ಥ್ಯ ಇರುವ ಅಪರೂಪದ ಟೀಚರಾಗಿ, ಓದುಗೆಳೆಯರಾಗಿ ಸುಬ್ರಾಯ ಚೊಕ್ಕಾಡಿಯವರು ಮಾಡಿರುವ ಕೆಲಸ, ಸಾಹಿತ್ಯ ಪರಿಚಾರಿಕೆಗೆ ಒಂದು ಮಿತಿ ಇಲ್ಲ. ಎಲ್ಲ ಕಾಲದಲ್ಲೂ ಎಲ್ಲ ಸಾಹಿತ್ಯಾಸಕ್ತರಿಗೂ ಅವರು ಅದನ್ನ ತೋರಿಸಿಕೊಟ್ಟಿದ್ದಾರೆ.</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಎಕೆ.ಆರ್ ಬರೆದ ಹಾಗೆ ಕಣ್ಣೆದುರಿಗೆ ಪ್ರತ್ಯಕ್ಷವಾದದ್ದನ್ನ ನೋಡುವುದಕ್ಕೆ ಎರಡು ಕಣ್ಣು ಸಾಲದು ಸ್ವಾಮೀ ಅದೃಷ್ಟ ಬೇಕು... ಎಂಬುದನ್ನ ಚೊಕ್ಕಾಡಿಯವರು ಬಹಳ ಸಲ ನನಗೆ ಸಾಹಿತ್ಯ ಕುರಿತ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದ್ದಾರೆ.</span></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಚೊಕ್ಕಾಡಿಯವರ ಕಥೆಗಳ ಕುರಿತು ಬಹುಶಃ ಅಧ್ಯಕ್ಷರಾದ ಮತ್ತು ನಮ್ಮ ನಡುವಿನ ಸೊಗಸಾದ ಕಥೆಗಾರರಾದ ಶ್ರೀ ರಶೀದ್ ಮಾತಾಡುತ್ತಾರೆ. ಆದರೂ ಅವರ ಕಥೆಗಳ ಕುರಿತು ನನ್ನದು ಒಂದೆರಡು ಮಾತು. ಕವಿತೆಗಳಲ್ಲಿ ಲಂಬಿಸಿದ ಮಾರ್ದವತೆ ಆ ಕತೆಗಳಲ್ಲಿ ಇಲ್ಲ. ಹಾಗಂತ ಅದು ಕೊರತೆಯಾಗಿ ಅಲ್ಲ. ಆ ಕಥೆಗಳ ಕಥಾಂಶವೇ ಹಾಗಿದೆ. ದಾರುಣ ವಾಸ್ತವದ ಕಥನಕ್ಕೆ ಬೇರೆ ದಾರಿಯೇ ಇಲ್ಲ. ಆ ಕಥೆಗಳು ವಾಸ್ತವಕ್ಕೆ ಕನ್ನಡಿ ಹಿಡಿದಷ್ಟೇ ನಮ್ಮ ಮನಸ್ಸಿಗೂ ಕನ್ನಡಿ ಹಿಡಿಯುತ್ತವೆ. ಕನ್ನಡಿ ಎಂದರೆ ಅದೇ. ಏನಿದೆಯೋ ಅದನ್ನೇ ತೋರುವುದು. ಆ ನಿಟ್ಟಿನಲ್ಲಿ ಚೊಕ್ಕಾಡಿಯವರು ಜನಪ್ರಿಯ ಆಗದೆ ಇದ್ದರೂ ಬಹಳ ಸಮರ್ಥ ಗಟ್ಟಿ ಕಥೆಗಾರರು ಕೂಡ.</span></p>
<p style="margin: 0px;"><span style="font-family: 'tunga';">ಇಷ್ಟು ಹೇಳಿ ನನ್ನ ಮಾತು ಮುಗಿಸುತ್ತೇನೆ. ಅವಕಾಶ ಕೊಟ್ಟ ರೂಪ ಪ್ರಕಾಶನದ ಮಹೇಶ್, ನನ್ನ ಮಾತುಗಳ ಮೇಲೆ ಭರವಸೆಯಿಟ್ಟ ಅರವಿಂದ ಚೊಕ್ಕಾಡಿಯವರಿಗೆ ನನ್ನ ಧನ್ಯವಾದಗಳು.</span></p>ಸಿಂಧು sindhuhttp://www.blogger.com/profile/11363295766940671498noreply@blogger.com0tag:blogger.com,1999:blog-4515791944382207090.post-19621217159168388472023-09-26T11:28:00.000+05:302023-09-26T11:28:05.631+05:30<p><b><u><span style="font-size: medium;"> <span style="font-family: tunga;">ಬರೆಯು</span><span style="font-family: tunga;">ವಾಗ</span><span style="font-family: tunga;"> ಇರಬೇಕಾದ ಎಚ್ಚರ</span></span></u></b></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಕತೆಗಾರನಿಗೆ ತನಗೆ ಬರೆಯಲು ಇರುವ ವಿಪುಲ ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ಈ ಸ್ವಾತಂತ್ರ್ಯವನ್ನು ಎಷ್ಟರ ಮಟ್ಟಿಗೆ ಉಪಯೋಗಿಸಬಹುದೆಂಬುದರ ವಿವೇಕಪೂರ್ಣ ಜವಾಬ್ದಾರಿಯ ಸೂಕ್ಷ್ಮವೂ ಇರಬೇಕು ಎಂಬ ಮಾತು ನಮಗೆಲ್ಲರಿಗೆ ಅಪ್ಲೈ ಆಗುತ್ತದೆ. ಎದುರು ಕಾಣಿಸುವ/ಕಟ್ಟಿರುವ ಸಂಗತಿಗೆ ಅದಷ್ಟೇ ಅಲ್ಲದೆ, ನಮಗೆ ಗೋಚರಿಸುವದಷ್ಟೇ ಅಲ್ಲದೆ ಇರುವ ಹಲವು ಆಯಾಮಗಳ ಬಗೆಗೆ ಒಂದು ಎಚ್ಚರ ಇರಬೇಕು ಅಂತ ಬಲವಾಗಿ ಅನಿಸಿತು. ನನ್ನ ಧಾಟಿ ಪುರಾತನವಾಯಿತೋ ಏನೋ ಕ್ಷಮಿಸಿ. ಮತ್ತು ನನ್ನ ಊದುವಿಕೆ ಸಾಕು. ಕುರ್ತಕೋಟಿಯವರ ಮಾತುಗಳನ್ನೇ ಓದಿ.<br /><br /></span></p>
<p style="margin: 0px;"><span style="font-family: 'tunga';">" ಮಾಸ್ತಿಯವರ ಒಂದು ಕತೆ "ಬಿಳಿಗಿರಿ ರಂಗ" ಇದು ತನ್ನ ರಹಸ್ಯವನ್ನು ಬೇಗನೆ ಬಿಟ್ಟುಕೊಡುವುದಿಲ್ಲ. ರಂಗಪ್ಪ ಎಂಬ ಒಬ್ಬ ಭಕ್ತ ತನ್ನ ಮನೆದೇವರಾದ ಬಿಳಿಗಿರಿ ರಂಗನಿಗೆ ಆನೆಯ ಉತ್ಸವವನ್ನು ಮಾಡಲು ಹರಕೆ ಹೊತ್ತಿದ್ದಾನೆ. ಅವನ ತಂದೆ ಸಾಯುವಾಗ ಈ ಹರಕೆಯ ವಿಷಯವನ್ನು ಹೇಳಿದ್ದ. ಇಪ್ಪತ್ತು ವರ್ಷಗಳವರೆಗೆ ಹಣವನ್ನು ಕೂಡಿಟ್ಟು ಕೊನೆಗೆ ಒಂದು ದಿನ ಉತ್ಸವವನ್ನು ನಡೆಸಲು ನಿಶ್ಚಯಿಸುತ್ತಾನೆ. ತನ್ನ ತಾಯಿ, ಹೆಂಡತಿ ಮಕ್ಕಳನ್ನು ಕರೆದುಕೊಂಡು ಬೆಟ್ಟದ ಬುಡದ ಒಂದು ಮಂಟಪದಲ್ಲಿ ಒಂದು ರಾತ್ರಿ ಉಳಿಯುತ್ತಾನೆ. ಆದರೆ ತಾಯಿಗೆ ವಾಂತಿ ಬೇಧಿ ಶುರುವಾಗಿ ಬೆಟ್ಟವನ್ನು ಹತ್ತುವುದು ಆಗುವುದಿಲ್ಲ. ಅವಳನ್ನು ಅಲ್ಲಿಯೇ ಬಿಟ್ಟು ಉಳಿದವರು ಬೆಟ್ಟವನ್ನೇರಿ ಹೋಗುತ್ತಾರೆ. ಸಂಜೆಗೆ ಇನ್ನೇನು ಉತ್ಸವ ಮುಗಿಯಬೇಕು ಎನ್ನುವಷ್ಟರಲ್ಲಿ ತಾಯಿಯ ಸ್ಥಿತಿ ಚಿಂತಾಚಜನಕವಾಗಿದೆಯೆಂದು ಸುದ್ದಿ ಬರುತ್ತದೆ. ಮಗ ಅಲ್ಲಿಯೇ ಇರಲಾರದೆ ಬೆಟ್ಟವಿಳಿದು ಬರುತ್ತಾನೆ. ಜೊತೆಗೆ ಒಬ್ಬ ಸೋಲಿಗರ ಹುಡುಗ ಬರುತ್ತಾನೆ. ಅವನ ಹೆಸರು ರಂಗ. ಅವರಿಬ್ಬರೂ ಬರುವಾಗ ಜೊತೆಯಲ್ಲಿ ಒಂದು ಆನೆಯೂ ಬರುತ್ತದೆ. ರಂಗಪ್ಪನಿಗೆ ಹೆದರಿಕೆ. ಆದರೆ ಹುಡುಗ ಧೈರ್ಯ ಹೇಳುತ್ತಾನೆ. ಕೆಳಗಿಳಿದು ಬಂದ ಮೇಲೆ ತಾಯಿ ಸ್ವಲ್ಪ ಹುಶಾರಾಗುತ್ತಿರುತ್ತಾಳೆ. ಅದನ್ನು ತಿಳಿದು ಸಮಾಧಾನವಾಗುತ್ತದೆ. ಅಷ್ಟರಲ್ಲಿ ಆನೆಯೂ ಅಲ್ಲಿಗೆ ಬರುತ್ತದೆ. ಸೋಲಿಗರ ಹುಡುಗ ಇನ್ನು ತಾನು ಹೋಗುತ್ತೇನೆಂದು ಆನೆಯನ್ನೇರಿ ಕುಳಿತು ಹೊರಡುತ್ತಾನೆ. ತಾಯಿಗೆ ಆನೆಯ ಮೇಲೆ ಸೋಲಿಗರ ಹೆಣ್ಣಿನೊಡನೆ ಕುಳಿತ ಬಿಳಿಗಿರಿ ರಂಗನೇ ಕಾಣಿಸಿ ಕೈ ಮುಗಿಯುತ್ತಾಳೆ. ಆ ಸ್ಥಳಕ್ಕೆ ಅಂದಿನಿಂದ ಆನೆ ರಂಗನ ಹುಂಡಿ ಎಂದು ಹೆಸರಾಗುತ್ತದೆ. </span></p>
<p style="margin: 0px;"><span style="font-family: 'tunga';">ಮೇಲುನೋಟಕ್ಕೆ ಇದು ಪಾರಮಾರ್ಥಿಕ ಅನುಭವವನ್ನು ಪ್ರಕಟಿಸುವ ಕಥೆಯೆಂದೇ ಕಾಣುತ್ತದೆ. ರಂಗನ ವಿಗ್ರಹವನ್ನು ಆನೆಯ ಮೇಲೆ ಕಂಡವಳು ತಾಯಿ ಮಾತ್ರ. ಅವಳು ಬೆಟ್ಟದ ಮೇಲೆ ಹೋಗಲಿಲ್ಲ. ದೇವರೇ ಬೆಟ್ಟವಿಳಿದು ಬಂದು ಅವಳಿಗೆ ದರ್ಶನವಿತ್ತ. ಕತೆಯ ಕೊನೆಯ ಭಾಗದಲ್ಲಿ " ಬಹಳ ಜನಕ್ಕೆ ಈ ಕತೆಯಲ್ಲಿ ನಂಬಿಕೆ ಇಲ್ಲ" ಎಂಬ ಮಾತು ಬರುತ್ತದೆ. "ದೇವರು ಯಾವ ಹೊತ್ತಿನಲ್ಲಿ, ಯಾವ ರೂಪದಲ್ಲಿ ಬರುವನೋ ಹೇಳುವಂತಿಲ್ಲ" ಎಂಬ ಮಾತೂ ಬರುತ್ತದೆ. ನಂಬುವದು ಬಿಡುವುದು ಅವರವರ ಸಂಸ್ಕಾರದ ಫಲ. ತಾಯಿ ಮಲಗಿದ್ದ ಆ ಸ್ಥಳವನ್ನು ಮಗ ಕೊಂಡುಕೊಂಡು ಮುಂದೆ ಅಲ್ಲಿ ಅವಳ ನೆನಪನ್ನು ಸ್ಥಿರವಾಗಿಸಿದ. </span></p>
<p style="margin: 0px;"><span style="font-family: 'tunga';">ತಾಯಿಯ ಕಣ್ಣಿಗೆ ಆನೆಯ ಮೇಲೆ ಬಿಳಿಗಿರಿ ರಂಗನ ರೂಪ ಕಂಡಿತು. ಆದರೆ ಉಳಿದವರಿಗೆ ಅದು ಕಾಣುವುದಿಲ್ಲ. ಉಳಿದವರ ಕಣ್ಣಿಗೆ ಕಂಡದ್ದೆಂದರೆ ಸೋಲಿಗರ ಹುಡುಗ ಅಳಿಲಮರಿಯಂತೆ ಅನೆಯ ಮೇಲೆ ಏರಿ ಹೋದದ್ದು. ಮಗನಿಗೆ ಬೆಟ್ಟವಿಳಿಯುವಾಗ ಭಯ. ಸೋಲಿಗರ ಹುಡುಗನಿದ್ದದ್ದರಿಂದ ಧೈರ್ಯ ಬಂದಿತ್ತು. ಆದರೆ ಮಗನಿಗೆ ಬಿಳಿಗಿರಿರಂಗನ ದರ್ಶನವಾಗಲಿಲ್ಲ. ಅವನು ಬೆಟ್ಟದಿಂದ ಇಳಿದು ಬರುವಾಗ ಜೊತೆಯಲ್ಲಿ ಬಂದ ಆನೆಯ ಹೆಜ್ಜೆಗಳ ಸಪ್ಪಳ ಅವನಿಗೆ ಭೀತಿಯನ್ನು ತಂದಿತ್ತು. ಸೋಲಿಗರ ಹುಡುಗ ಜೊತೆಯಲ್ಲಿ ತಾನಿದ್ದೇನೆ ಎಂದು ಹೇಳಿದ್ದರೂ ಅವನಿಗೆ ಒಳಗಿಂದೊಳಗೆ ಭಯವಿತ್ತು. ಆನೆ ಬರುತ್ತಿದೆಯೆಂದು ಗೊತ್ತಾಯಿತೇ ಹೊರತು ಆನೆ ಬರುತ್ತಿರುವುದರ ಉದ್ದೇಶ ಅವನಿಗೆ ಗೊತ್ತಿರಲಿಲ್ಲ. ಇಲ್ಲಿ ಪ್ರಶ್ನೆ ಎಂದರೆ ಆನೆ ಅವನ ರಕ್ಷಕ ದೈವವಾಗಿ ಬಂದಿತೇ ಇಲ್ಲವೇ ಎನ್ನುವುದು. ನಮಗೆಲ್ಲ ಕಾಡಿನ ಭಯ. ಕಾಡಿನ ಭಯವೆಂದರೆ ಅಜ್ಞಾತದ ಭಯ. ದೇವರ ಭಯವೂ ಹೆಚ್ಚೂ ಕಡಿಮೆ ಅದೇ ರೀತಿಯ ಭಯ. ಈ ಭಯದಿಂದ ನಮ್ಮ ಮತ್ತು ದೇವರ ನಡುವಿನ ಸಂಬಂಧ ಸಹಜವಾಗಿರುವುದಿಲ್ಲ. ಕತೆಯಲ್ಲಿರುವ ತಾಯಿಗೆ ಮಾತ್ರ ಆನೆಯ ಮೇಲೆ ಕುಳಿತವನು ರಂಗನೇ ಹೊರತು ಬೇರೆ ಯಾರೂ ಅಲ್ಲ. ಆ ಹುಡುಗ ಹಾವಿನ ತಲೆಯ ಮೇಲೆ ಮೆಟ್ಟಿ ಕುಣಿದಿದ್ದೇನೆ ಎಂದು ಹೇಳಿದರೂ ಮಗನಿಗೆ ನಂಬಿಕೆ ಬರಲಿಲ್ಲ. ತಾಯಿಗೆ ಸೋಲಿಗರ ಹುಡುಗನಲ್ಲಿ ರಂಗ ಕಂಡ ಮೇಲೆ ಮಗ ಆ ಘಟನೆಯ ಬಗ್ಗೆ ಯೋಚಿಸಲು ತೊಡಗಿದ. ಸೋಲಿಗರ ಹುಡುಗ ಬೆಟ್ಟವನ್ನು ಇಳಿಯುವಾಗ ಆಡಿದ ಮಾತುಗಳನ್ನು ಕುರಿತು ಯೋಚಿಸಿದ. ಬಹುಶಃ ತನ್ನೊಡನೆ ಬಂದವನು ರಂಗನೇ ಇರಬೇಕು ಎಮ್ದು ಸಾವಕಾಶವಾಗಿ ಮನದಟ್ಟು ಮಾಡಿಕೊಂಡ.</span></p>
<p style="margin: 0px;"><span style="font-family: 'tunga';">ಇಷ್ಟಾಗಿಯೂ ಈ ಕತೆಯ ಮೂಲ ಸಮಸ್ಯೆ ದೇವರ ಸಮಸ್ಯೆ ಅಲ್ಲವೆಂದು ಅನಿಸುತ್ತದೆ. ದೇವರ ಅಸ್ತಿತ್ವದ ಸಮಸ್ಯೆಯನ್ನು ಒಂದು ಕತೆಯ ಮೂಲಕವಾಗಿ ಪರಿಹರಿಸುವುದು ಅಸಾಧ್ಯ. ಇನ್ನೂ ಒಮ್ದು ಮಾತೆಂದರೆ ಈ ಕತೆಗೆ ದೇವರ ಬಗ್ಗೆ ನಂಬಿಕೆ ಇದೆಯೇ ಹೊರತು ಸಂಶಯವಿಲ್ಲ. ತಾಯಿಗೆ ಕಾಣುವ ದೇವರು ಮಗನಿಗೆ ಕಾಣುವುದಿಲ್ಲವೆಂಬ ಸಂಗತಿಯೂ ವಿವಾದಗ್ರಸ್ತವಲ್ಲ. ದೇವರಿದ್ದಾನೆ, ಜಗತ್ತು ಇದೆ. ಆದರೆ ದೇವರು ಜಗತ್ತಿನಲ್ಲಿ ಕಾಣುವ ಬಗೆ ಮಾತ್ರ ಸಂದಿಗ್ಧವಾಗುತ್ತದೆ. ಬೆಟ್ಟವಿಳಿಯುವಾಗ ಜೊತೆಯಲ್ಲಿ ನಡೆದು ಬಂದ ಆನೆಯನ್ನು ದೇವರ ಕೃಪೆ ಎಂದು ತಿಳಿಯುವುದು ಹೇಗೆ.ಬೆಟ್ಟ, ಆನೆ, ತಿಳಿನೀರಿನ ಕೊಳ ಇವೆಲ್ಲ ಪ್ರತ್ಯೇಕವಾಗಿ ಅರ್ಥವಾಗುತ್ತವೆ. ಜೊತೆಯಲ್ಲಿ ಬಂದ ಸೋಲಿಗರ ಹುಡುಗ ಆನೆಗಳ ಬಗ್ಗೆ ಮಾತನಾಡುತ್ತಾನೆ. ಹಾವುಗಳ ಬಗ್ಗೆ ಮಾತನಾಡುತ್ತಾನೆ. ಹಾವುಬಂದರೆ ತಲೆ ಮೆಟ್ಟಬೇಕು, ಬಾಲವನ್ನಲ್ಲ ಎಂದು ಎಚ್ಚರಿಕೆ ಕೊಡುತ್ತಾನೆ. ಹಾವುಗಳನ್ನು ಮೆಟ್ಟಿ ಕುಣಿದಿದ್ದೇನೆ ಎನ್ನುತ್ತಾನೆ. ಇದೆಲ್ಲ ಅರ್ಥವಾಗುವ ಮಾತು ನಿಜ. ಆದರೆ ಪ್ರತ್ಯೇಕವಾಗಿ ಇವು ಯಾವುದೂ ದೇವರ ಕೃಪೆಯಲ್ಲ. ಅಂದ ಮೇಲೆ ಒಟ್ಟಿಗೆ ಕೂಡಿದಾಗ ಅದು ದೇವರ ಕೃಪೆ ಎಂದು ಹೇಗೆ ಅರ್ಥವಾಗುತ್ತದೆ? ದೇವರು ಯಾವ ಹೊತ್ತಿನಲ್ಲಿ ಯಾವ ರೂಪದಲ್ಲಿ ಬರುತ್ತಾನೋ ಹೇಗೆ ಹೇಳುವದು? ಕತೆ ಹೇಳುವವನು ಆಡಿದ ಮಾತಿದು. ನಡೆದ ಘಟನೆಯನ್ನೆಲ್ಲ ಒಂದು ವಾಕ್ಯ ಇಎಂದು ತಿಳಿದರೂ ಈ ವಾಕ್ಯದಲ್ಲಿ "ದೇವರ ಕೃಪೆ" ಎಂದು ಅರ್ಥವನ್ನು ಸ್ಫುರಿಸುವ ಪ್ರತಿಭೆ ಯಾವದು? ಕತೆ ಇದರ ಬಗ್ಗೆ ಮೌನವಾಗಿದೆ. ಬಹುಶಃ ಈ ಮೌನದ ಅರ್ಥವೆಂದರೆ ಹೀಗೆ ನಡೆದಿರುವ ಘಟನೆಗಳ ಹಿಂದೆ ಅವ್ಯಕ್ತವಾಗಿ ದೇವರ ಕೃಪೆ ವಾಕ್ಯದ ಸತ್ಯವಾಗಿ ಓಡಾಡುತ್ತದೆ. ವಾಕ್ಯ ಅಧೀನವಾಗಿದೆ. ಆದರೂ ತಾನು ಅಧೀನನಾಗಿರುವದು ವಾಕ್ಯಕ್ಕೆ ಗೊತ್ತಿಲ್ಲವೆಂದು (ಗೊತ್ತಿಲ್ಲದೆಇರುವುದರಿಂದ) ಅದು ಸ್ವತಂತ್ರವಾಗಿಯೂ ಇದೆ. </span></p>
<p style="margin: 0px;"><span style="font-family: 'tunga';">ಬಿಳಿಗಿರಿ ರಂಗನ ಬೆಟ್ಟ ಒಂದು ಬೆಟ್ಟ. ಬೆಟ್ಟವೆಂದ ಮೇಲೆ ಕಾಡು, ಕಾಡಿನಲ್ಲಿ ಆನೆಗಳು ಮತ್ತು ತಿಳಿನೀರಿನ ಕೊಳ. ಅಲ್ಲಿಯೇ ಹುಟ್ಟಿ ಬೆಳೆದ ಸೋಲಿಗರು. ಇವರೆಲ್ಲ ರಂಗನನ್ನು ಅರ್ಥ ಮಾಡಿಕೊಂಡಿರುವವರು ಎಂದು ನಮಗೆ ಅರ್ಥವಾದರೂ ಅರ್ಥವಾಗದೆ ಇರುವ ಇನ್ನೊಂದು ಸಂಗತಿ ಇದೆ. ಆ ಸಂಗತಿ ಎಂದರೆ ತನ್ನ ಅಭಿವ್ಯಕ್ತಿಗಾಗಿ ದೇವರು ಈ ಸ್ಥಳವನ್ನು ಆಯ್ದುಕೊಂಡಿರುವುದು. ಈ ಸ್ಥಲದ ಬಗ್ಗೆ ದೇವರಿಗೆ ಒಂದು ಪಕ್ಷಪಾತವಿದೆ. ಹುಟ್ಟಿ ಸಾಯುವ ಸೋಲಿಗರ ನಡುವೆ ಪರಮಾತ್ಮ ತಾನು ಇರಬೇಕೆನ್ನುತ್ತಾನೆ. ಮದ್ದಾನೆಗಳನ್ನೂ ಹಾವುಗಳನ್ನೂ ಮೆಟ್ಟಿ ಅವುಗಳನ್ನು ಪಳಗಿಸಿದ್ದಾನೆ. ಎಲ್ಲಕ್ಕೂ ಹೆಚ್ಚಾಗಿ ಸೋಲಿಗರ ಹೆಣ್ಣನ್ನು ಮದುವೆಯಾಗಿದ್ದಾನೆ. ಅವನು ಮದುವೆಯಾಗಿರದಿದ್ದರೆ ನಿಸ್ಸಂಗನಾದ ದೇವರಿಗೆ ಸಂಸಾರ ಹೇಗೆ ಅರ್ಥವಾಗಬೇಕು? ಸೃಷ್ಟಿಯೆಲ್ಲ ಅವನ ಅಧೀನವಾಗಿದೆ. ಆನೆಗಳು, ಹಾವುಗಳು, ಅವನ ಮಾತು ಕೇಳುತ್ತವೆ. ಅವನ ಅಪ್ಪಣೆಯಿಲ್ಲದೆ ತೃಣ ಕೂಡ ಅಲುಗಾಡುವುದಿಲ್ಲ. ಆದರೆ ದೇವರಿಗೂ ತೃಣ ಅರ್ಥವಾಗಬೇಕಾದ ಅವಶ್ಯಕತೆಯಿದೆ. ತಿಳಿದುಕೊಳ್ಳಬೇಕಾದರೆ ಸ್ವಂತವಿದ್ದದ್ದು ಇತರ ಆಗಬೇಕು. ದೇವರು ಸ್ವಂತವಾದರೆ ಪ್ರಕೃತಿ ಇತರ; ಅದರಂತೆಯೇ ಪ್ರಕೃತಿ ಸ್ವಂತವಾದರೆ ದೇವರು ಇತರ. ದೇವರು ಅಂತರ್ಯಾಮಿಯಾಗುವುದು ಬಹುಶಃ ಇದಕ್ಕಾಗಿ. ದೇವರು ಸ್ವಂತ ಆದರೆ ನಮ್ಮ ಮೂಲಕ ತನ್ನನ್ನೇ ನೋಡಿಕೊಳ್ಳುತ್ತಾನೆ. ತಾಯಿಯ ಕಣ್ಣಿಗೆ ಒಳಗಿದ್ದ ದೇವರು ಆನೆಯ ತಲೆಯ ಮೇಲೆ ಸೋಲಿಗರ ಹೆಣ್ಣಿನೊಂದಿಗೆ ಕಂಡ. ಇದಕ್ಕೆ ಕಾರಣವೆಂದರೆ ಅವನು ಅಲ್ಲಿ ಬಂದದ್ದು ಸೋಲಿಗರ ರಂಗನಾಗಿ. </span></p>
<p style="margin: 0px;"><span style="font-family: 'tunga';">ಮಾಸ್ತಿಯವರ ಕತೆಗಳಲ್ಲಿನ ಪ್ರಾದೇಶಿಕತೆ. ಬಿಳಿಗಿರಿ ರಂಗನ ಬೆಟ್ಟ ಕೂದ ಅಂತ ಒಂದು ನಿರ್ದಿಷ್ಟವಾದ ಪ್ರದೇಶ. ಈ ಪ್ರದೇಶದಲ್ಲಿ ನಡೆದ ಒಂದು ಸಂಗತಿಯ ಅರ್ಥವೇನು ಎಂದು ಕೇಳುವ ಸ್ವಾತಂತ್ರ್ಯವನ್ನು ಈ ಕತೆ ಇಟ್ಟುಕೊಂಡಿದೆ. ಈ ಸಂಗತಿಯನ್ನು ಹೇಗೆ ಬೇಕಾದರೂ ಅರ್ಥೈಸಬಹುದು. ವಿವರಣೆಯ ಸ್ವಾತಂತ್ರ್ಯ ಅಪಾರವಾಗಿದೆ. ಮಾಸ್ತಿಯವರ ಪ್ರತಿಭೆಯ ವೈಶಿಷ್ಟ್ಯವೆಂದರೆ ಈ ಸ್ವಾತಂತ್ರ್ಯವನ್ನು ಎಷ್ಟರ ಮಟ್ಟಿಗೆ ಉಪಯೋಗಿಸಬಹುದೆಂಬ ಧರ್ಮ ಸೂಕ್ಷ್ಮ, ಮತ್ತು ಸ್ವಾತಂತ್ರ್ಯವನ್ನು ಉಪಯೋಗಿಸುವ ಜವಾಬ್ದಾರಿ." - as quoted by Shri Kurthukoti<br /><br /></span></p>
<p style="margin: 0px;"><span style="font-family: 'tunga';"><b>ವಿವೇಕಪೂರ್ಣವಾದ ಬರವಣಿಗೆ ಯಾವುದೆಂದರೆ ಸ್ವಾತಂತ್ರ್ಯದ ಉಪಯೋಗದಿಂದ ಸತ್ಯದ ರೂಪರೇಷೆಗಳು ವಿಕೃತವಾಗಬಾರದು ಎಂಬ ಎಚ್ಚರದಿಂದ ಕೂಡಿದ ಬರವಣಿಗೆ. </b></span></p>ಸಿಂಧು sindhuhttp://www.blogger.com/profile/11363295766940671498noreply@blogger.com0tag:blogger.com,1999:blog-4515791944382207090.post-72761828563275916252023-09-26T11:24:00.004+05:302023-09-26T11:24:28.557+05:30<p><b><span style="font-size: medium;"><u> <span style="font-family: tunga;">ತುಂಟು ತಮಾಷಿ ರಾತ್ರಿಗಳ ಜಾದೂಗಾರ</span></u></span></b></p>
<p style="font-family: tunga; margin: 0px;"><br /></p>
<p style="margin: 0px;"><span style="font-family: 'tunga';">ಮಗಳು ಚಂದ್ರಗ್ರಹಣದ ಚಿತ್ರ ಬಿಡಿಸುತ್ತಿದ್ದಳು. ನೋಡಿದ ಅಮ್ಮ ಕೇಳಿದಳು. ಇದೇನು ಇಷ್ಟು ಹತತ್ರ ಬರೆದ್ ಬಿಟ್ಟಿದೀಯಲ್ಲ.ಚೂರು ವಿಶಾಲವಾಗಿ ಬರಿ.</span></p>
<p style="margin: 0px;"><span style="font-family: 'tunga';">ಮಗಳು ನಗುತ್ತ ಉತ್ತರಿಸಿದಳು. ಅಮ್ಮಾ ನಿನ್ನ ಲಿಟರರಿ ಮೂನಿನ ಹಾಗಲ್ಲ ಇದು. ನಂಗೆ ಈ ಪುಟದ ಅರ್ಧ ಭಾಗದಲ್ಲಿ ಗ್ರಹಣದ ಚಿತ್ರ ಬಿಡಿಸಿ, ಅದರ ಕುರಿತು ಬರೆಯಬೇಕು. ನಿಜವಾಗ್ಲೂ ಚಂದ್ರ ಭೂಮಿಯಿಂದ 3.84.000 ಕಿಮೀ ದೂರದಲ್ಲಿದಾನೆ.. ಅಂ... ದೂರದಲ್ಲಿದೆ. ಈ ಚಿತ್ರದ್ಲಲ್ಲಿ ಚಂದ್ರ ಹೆಚ್ಚೂಕಮ್ಮಿ ಭೂಮಿಯದೇ ಗಾತ್ರದಲ್ಲಿ ಬರೆದಿದೀನಿ. ಆದರೆ ಅದು ಭೂಮಿಗಿಂತ 80 ಪಟ್ಟು ಚಿಕ್ಕದು. ನನಗ್ಗೊತ್ತು ನಿನಗೆ ಆಕಾಶದಲ್ಲಿ ಚಂದ್ರ ಕಂಡ ಕೂಡಲೆ ಮನಸ್ಸು ಹಗುರಾಗುತ್ತದೆ ಅಥವಾ ಭಾರವಾಗುತ್ತದೆ ಆ ಕ್ಷಣದ ನಿನ್ನ ಮೂಡಿನ ಮೇಲೆ. ಆದರೆ ಚಂದ್ರನಿಗೆ ಏನಾಗುತ್ತದೆ ಗೊತ್ತಾ ನಿನಗೆ. ನಾವು ಯಾರೇ ನೋಡಲಿ, ನೋಡದೆ ಇರಲಿ, ಚಂದ್ರಕ್ಕೆ ಆ ಯೋಚನೆಯಿಲ್ಲ. ಅದು ಭೂಮಿಯನ್ನ ಸುತ್ತುತ್ತಿರುವ ಉಪಗ್ರಹ ಮಾತ್ರ. ನೋ ಲೈಫ್. ನೋಡೋಣ ಈ ಚಂದ್ರಯಾನದಿಂದ ಏನೇನು ಹೊಸ ವಿಷಯ ಸಿಗುತ್ತೋ...!</span></p>
<p style="margin: 0px;"><span style="font-family: 'tunga';">ಉಫ್ ಅಂತ ಉಸಿರೆಳೆದ ಅಮ್ಮ ಶುರುಮಾಡಿದಳು. ನೋಡೇ ಮಗು ನೀನ್ ಹೇಳಿದ್ದೆಲ್ಲಾ ನಿಜಾನೇ. ಆ ಚಂದ್ರ ತನ್ನ ಕಕ್ಷೆಯಲ್ಲಿ ಅದೇ ಆರ್ಬಿಟ್ಟಲ್ಲಿ ಐದೂಮುಕ್ಕಾಲ್ ಡಿಗ್ರೀ ವಾರೆಯಾಗಿ ನಮ್ ಭೂಮೀನ ಅಂದಾಜು 28ದಿನಗಳಲ್ಲಿ ಸುತ್ತಿಬರೋ ನಿರ್ಜೀವ ಉಪಗ್ರಹ ಅನ್ನುವುದು ವೈಜ್ಞಾನಿಕವಾಗಿ ಸಿದ್ಧಪಡಿಸಿದ ಸತ್ಯಾಂಶ ಹೌದು. ಆದ್ರೆ ಹಾಗಂತ ನಮ್ ಲಿಟರರಿ ಮೂನ್ ಏನೂ ಕಡಿಮೆಯಿಲ್ಲ ಆಯ್ತಾ. ನಮ್ಮ ಪುರಾಣ ಕಥೆಗಳಿಂದ ಹಿಡಿದು ಇತ್ತೀಚೆನ ಕವಿಕಥೆಗಾರರಿಗೂ ಚಂದ್ರ ಅಚ್ಚುಮೆಚ್ಚಿನ ಸಂಗಾತಿ. ಚಂದ್ರನಲ್ಲಿ ಬರಿದೆ ನಿರ್ವಾತ ಅದೇ ವ್ಯಾಕ್ಯೂಮ್ ಇರುವುದು ಹೌದು. ಆದರೆ ಅದೇ ಚಂದ್ರನ ಮೇಲೆ ನಮ್ಮಮನೋರಥ ನಮಗೆ ಎಷ್ಟು ಬೇಕೋ ಅಷ್ಟೇ ವೇಗದಲ್ಲಿ ಸಾಗುತ್ತಲ್ಲೇ.</span></p>
<p style="margin: 0px;"><span style="font-family: 'tunga';">ಬರೀ ಕುಳಿಗಳು, ಧೂಳು, ಕಲ್ಲು, ಮಣ್ಣು ತುಂಬಿದ ಚಂದ್ರನ ಸಾವಿರ ಚಿತ್ರಗಳನ್ನ ಯಾವುದೇ ಡಿಜಿಟಲ್ ಸ್ಯಾಟಲೈಟು ತೆಕ್ಕೊಟ್ಟಿರಬಹುದು. ಭೂಮಿಗೆ ಒಂದೇ ಚಂದ್ರ, ಗುರುಗ್ರಹಕ್ಕೆ 95 ಚಂದ್ರ ಇದಾರೆ ಅಂತ ಕಂಡು ಹಿಡ್ದಿದೀವಿ ಅಲ್ವಾ. ಆದರೆ ರಾತ್ರೆಯಾಕಾಶದ ಕಡುಗತ್ತಲಲ್ಲಿ ಮೋಡಮರೆಯಿಂದ ಹಗೂರಕೆ ಹೊರಬರುವ ಚಂದ್ರನ್ನ ನೋಡಿದ ಕೂಡಲೆ ನಿನಗೆ ಆ ನಿರ್ಜೀವ ಚಿತ್ರಗಳ ಯೋಚನೆ ಬರುತ್ತಾ.. ಗುರುಗ್ರಹದ 95 ಅಥವಾ ಶನಿಗ್ರಹದ 145 ಚಂದ್ರಗಳ ಬಗ್ಗೆ ನೆನಪಿಸಿಕೊಳ್ಳೋಲ್ಲ ಅಲ್ವಾ.. ನಮ್ಮ ಚಂದಿರ ನಮಗೆ ಉದ್ದೀಪಿಸುವ ಮಾರ್ದವ ಭಾವನೆಗಳೇ ಬೇರೆ. ಖುಷಿಯಾದರೆ... ಹಾಲ್ಬೆಳದಿಂಗಳು ಚೆಲ್ಲುವ ಬೆಳ್ಳಿ ಚಂದಿರ ಬೇಜಾರಾಗಿದ್ದರೆ ಶಬನಮ್ ಭೀ ರೋಯೇ ಆಗಿರುವ ಚಂದಿರ... ಅಲ್ವಾ..ನಿನ್ನ ಆನಿಮೇ ಸೀರಿಯಲ್ಲುಗಳಲ್ಲಿ ಬರುವ ಭೂತಚಂದಿರಗಳ ಕಥೆಯೇನು, ಹಾರರ್ ಸಿನಿಮಾಗಳು ಅದೇನೋ ವ್ಯಾಂಪೈರ್ ಡೈರೀ, ಟ್ವೈಲೈಟು..ಅದರಲ್ಲೆಲ್ಲ ಹೆದರಿಕೆ ಹೆಚ್ಚಿಸುವ ರಕ್ತಪಿಪಾಸು ಚಂದಿರ ಯಾರು....ಅಮ್ಮನ ಮಾತುಗಳನ್ನು ತುಂಡರಿಸಿ</span></p>
<p style="margin: 0px;"><span style="font-family: 'tunga';">ಓ...ಓಓಓ.. ಸರಿ ಸರಿ.. ಅಮ್ಮಾ ನಾನು ನನ್ನ ಹೋಮ್ ವರ್ಕು ಮುಗಿಸುವೆ...ನೀನು ನಿನ್ನ ಚಂದಿರನನ್ನು ಬರೆಯುವ ಟೇಬಲ್ಲಿನ ಮೇಲೆ ಕೂರಿಸಿ ಮಾತನಾಡಿಸಿಕೋ..ಅಂತ ಸುಮ್ಮನಾಗಿಸಿದಳು ಮಗಳು.</span></p>
<p style="margin: 0px;"><span style="font-family: 'tunga';">ಚಂದಿರನನ್ನು ನಾನು ಓದುವ ಟೇಬಲ್ಲಿಗೆ ಕರೆತಂದೆ. ಜಗತ್ತಿನೆಲ್ಲೆಡೆಯ ಸಾಹಿತ್ಯದ ವಿವಿಧ ಭಾಷೆಗಳಿಂದ ಚಂದಿರನ ಬೆಳಕು ನನ್ನ ಟೇಬಲ್ಲಿಗೆ ಹರಿದವು. ಅದರಲ್ಲಿ ಕೆಲಕಿರಣಗಳು ಈ ಲೇಖನದಲ್ಲಿ...</span></p>
<p style="margin: 0px;"><span style="font-family: 'tunga';">ಶತಮಾನಗಳಿಂದ ನಮ್ಮ ಸಾಹಿತ್ಯದಲ್ಲಿ ಚಂದಿರನೆಂದರೆ ಬೆರಗು, ನಿಗೂಢತೆ, ಚೆಲುವು, ಪ್ರಣಯಕ್ಕೂ ವಿರಹಕ್ಕೂ ಸಮಾನವಾಗಿ ಸಲ್ಲುವ ಜೊತೆಗಾರ/ತಿ, ಸಾವಲ್ಲಿ ಮಂಕಾದ ಕಿರಣಗಳನ್ನ ಸೂಸುತ್ತ ನೇವರಿಸುವ ಸಾಂತ್ವನ, ಇನ್ನೂ ಕೆಲಕಡೆ ನವಿರುಹಾಸ್ಯಕ್ಕೆ ಚೆಲ್ಲಿದ ಬೆಳದಿಂಗಳು, ಕುಡುಕರ ದಾರಿದೀಪ, ತತ್ವಜ್ಙಾನಿಗಳ ನಂದಾದೀಪ, ಹುಚ್ಚುಮನಸ್ಸನ್ನು ಕೆದರಿಸುವ ಉದ್ದೀಪನ, ಭೂತಪಿಶಾಚಗಳ ಉತ್ತೇಜಕ, ಮೂಢನಂಬಿಕೆಗಳ ವಾಹಕ, ಮಕ್ಕಳನ್ನು ಥಟ್ಟನೆ ಹಿಡಿದಿಡುವ ಅವರ ರಚ್ಚೆಗಳನ್ನು ಪಟಕ್ಕನೆ ಬದಲಿಸಬಲ್ಲ ಸೂತ್ರ.. ಹೀಗೆಲ್ಲ ಹಲಬಗೆಗಳಲ್ಲಿ ಬಗೆಬಗೆಯಾಗಿ ವರ್ಣಿಸಲ್ಪಟ್ಟ ಹಲವಾರು ಪ್ರತಿಮೆಗಳಿವೆ. ಮಜವೆಂದರೆ ಓದುವಾಗ ಚಂದಿರನ ಕುರಿತ ವೈಜ್ಞಾನಿಕ ಅಂಶಗಳ್ಯಾವುದೂ ಗೊತ್ತಿದ್ದರೂ ನೆನಪಾಗುವುದಿಲ್ಲ. ಸಾಹಿತ್ಯದ ಮೋಡಿಯಲ್ಲಿ ಚಂದಿರ ಸಜೀವವಾಗಿ ನಮ್ಮ ಭಾವಗಳಿಗೆ ಸ್ಪಂದಿಸುತ್ತಾನೆ. ಜಗತ್ತು ಕಂಡ ಶ್ರೇಷ್ಠ ನಾಟಕಕಾರ, ಕವಿ ಶೇಕ್ಸ್ಪಿಯರನ ಕೃತಿಗಳಲ್ಲಿ ಆಯಾ ಕೃತಿಗಳ ಭಾವಸೇಚನಕ್ಕೆ ತಕ್ಕಂತೆ ಚಂದಿರ ಬಂದೇ ಬರುವನು. ಒಮ್ಮೆ ದೇವತೆಗಳ ತೂಗುಕುರ್ಚಿಯಾದರೆ, ಇನ್ನೊಮ್ಮೆ ಯಕ್ಷಿಣಿಯರ ನಿಗೂಢತೆಯನ್ನ ಚೂರು ಚೂರೇ ನಮ್ಮ ಕಣ್ಣಿಗೆ ಹಾಯಿಸುವ ಬೆಳಕಿನ ಸೇತುವೆ. ಒಮ್ಮೆ ಸಮಾಜದ ಕೊಳಕುಕಸರುಗಳಿಗೆ ಬಿರಿಬೆಳಕನ್ನು ಬೀರುವ ಹುಣ್ಣಿಮೆಯೇ, ಇನ್ನೊಮ್ಮೆ ಪ್ರೇಮಿಗಳ ಪಿಸುಮಾತಿನ ರಾತ್ರಿಯ ಮೃದುಹೊದಿಕೆಯಾದ ಬೆಳದಿಂಗುಳು. ಒಮ್ಮೆ ಏಕಾಂತ ಸಂಭಾಷಣೆಯ ಒಬ್ಬನೇ ಕೇಳುಗನಾದರೆ ಇನ್ನೊಮ್ಮೆ ತುಂಟುತಮಾಷಿಯ ರಾತ್ರಿಗಳ ಜಾದೂಗಾರ. ಪ್ರಣಯ, ಹುಚ್ಚು, ನಿಗೂಢತೆ, ಮನುಷ್ಯ ಮನಸ್ಸಿನ ಅತಿರೇಕ, ಚಾರಿತ್ರ್ಯದ ಕಲ್ಪನೆಗಳ ಎರಡು ತುದಿ ಇವುಗಳನ್ನ ನಿರೂಪಿಸಲು ಶೇಕ್ಸ್ಪಿಯರ್ ಚಂದಿರನನ್ನು ಸಮರ್ಥವಾಗಿ ಬಳಸಿದ್ದಾನೆ. </span></p>
<p style="margin: 0px;"><span style="font-family: 'tunga';">ನನ್ನ ಟೇಬಲ್ಲಿನ ತುದಿಯಲ್ಲಿ ನಡುವಸಂತದ ರಾತ್ರಿಯ ಕನಸಿನ ಚಾಪೆ ಬಿಡಿಸುತ್ತಾ ಶೇಕ್ಸ್ಪಿಯರ್ ಗುನುಗುತ್ತಿದ್ದಾನೆ.</span></p>
<p style="margin: 0px;"><span style="font-family: 'tunga';">Four days will quickly steep themselves in night; Four nights will quickly dream away the time: And then the moon – like to a silver bow New-bent in heaven – shall behold the night Of our solemnities.</span></p>
<p style="margin: 0px;"><span style="font-family: 'tunga';">(ನಾಕಾರು ದಿನ ರಾತ್ರಿಗಳು ಪಟಪಟನೆ ಸಾಗುವವು ಕನಸಿನಂತೆ..ದೇವಲೋಕದ ಬೆಳ್ಳಿಚಂದಿರ ಬಾಗಿಬರುವನು ನಮ್ಮ ಮಿಲನದ ಕ್ಷಣಗಳ ಕಾಯಲಂತೆ...) </span></p>
<p style="margin: 0px;"><span style="font-family: 'tunga';">ಆಹಾ..ಎಂದು ಉಧ್ಗರಿಸುವ ಮುಂಚೆಯೇ ಆ ಕನಸಿನ ಚಾಪೆಯನ್ನು ಮಡಚುತ್ತಾ ಪಿ.ಬಿ.ಶೆಲ್ಲಿ ಉಸುರಿದ.</span></p>
<p style="margin: 0px;"><span style="font-family: 'tunga';">Wandering companionless Among the stars that have a different birth,— And ever changing, like a joyless eye That finds no object worth its constancy?</span></p>
<p style="margin: 0px;"><span style="font-family: 'tunga';">(ಚೇತನ ತುಂಬಬಲ್ಲವರಾರಿಲ್ಲದೆ ಸಂತಸರಹಿತ ನೋಟವದು ಎಲ್ಲೂ ನಿಲ್ಲದೆ ಅತ್ತಿತ್ತ ಓಡುವಂತೆ ಮಿನುಗುತಾರೆಗಳ ಮಧ್ಯೆ ಮಂಕಾಗಿ ಚಣಚಣಕೂ ಬದಲಾಗುವ ಜತೆರಹಿತ ಚಂದಿರ) </span></p>
<p style="margin: 0px;"><span style="font-family: 'tunga';">ಅವ ಮಡಚಿಟ್ಟ ಚಾಪೆಯನ್ನು ಬದಿಗೆ ಸರಿಸುತ್ತ ವರ್ಡ್ಸವರ್ಥ್ ಲೂಸಿಕವಿತೆಯೊಂದನ್ನು ಪುಟ್ಟಬಟ್ಟಲಲ್ಲಿ ಕೈಗಿಟ್ಟ..down behind the cottage roof / At once the planet dropped</span></p>
<p style="margin: 0px;"><span style="font-family: 'tunga';">ಪ್ರೇಯಸಿಯ ಹಂಬಲದ ಪಯಣದಲ್ಲಿ ಪ್ರೇಮಿಯ ಜತೆಗೆ ದಾರಿಯಿಡೀ ಹತ್ತಿಳಿಯುತ್ತ ಸಾಗುತ್ತಿದ್ದವ ಇದ್ದಕ್ಕಿದ್ದಂತೆ ಮನೆಯಿಂಚಿನ ಆಗಸದಿಂದ ಜಾರಿಬಿದ್ದು ಅಸ್ತಮಿಸುತ್ತಾನೆ, ಲೂಸಿಯ ಸಾವನ್ನು ಸೂಚಿಸುವಂತೆ! ಆ ನೋವಿನ ಕ್ಷಣದಲ್ಲಿ ಮುಚ್ಚಿದ ಕಣ್ಣಿಗೆ ಚುಚ್ಚುತ ಬಂದಳು ಎಮಿಲಿ..</span></p>
<p style="margin: 0px;"><span style="font-family: 'tunga';">I watched the Moon around the House..</span></p>
<p style="margin: 0px;"><span style="font-family: 'tunga';">And next—I met her on a Cloud— Myself too far below To follow her superior Road— Or its advantage—Blue—</span></p>
<p style="margin: 0px;"><span style="font-family: 'tunga';">(ಜಗುಲಿಯಲಿ ನಿಂತೇ ನಾ ನೋಡಿದೆನವಳ ಚಂದಿರಳ..ಮಂತ್ರಮುಗ್ಧಳಾಗಿ ಹೊರಟೆ ಹಿಂದೆ ಅವಳ...ಅವಳೋ ನನ್ನೊಲವ ಅರಿವಿರದ ತನದೇ ಪಯಣದ ಗುರಿ ಸಾಧಿಸುವ ನಿರ್ಮೋಹಿ ಚೆಲುವೆ. ಮರ್ತ್ಯಳೆನ್ನ ಬಯಕೆ,ಛಲ ಹೊಂದದೇ ಹೋಯಿತು ದಿವದ ಸುಂದರಿಯ ಪಥಕೆ..)</span></p>
<p style="margin: 0px;"><span style="font-family: 'tunga';">ಈ ವಾಸ್ತವದ ಲೇಪನದ ಮಂಕು ಬಡಿದು ಕೂತ ನನ್ನನು ಮೆಲುವಾಗಿ ಸಂತೈಸಲು ಬಂದನು ಉಮರ. </span></p>
<p style="margin: 0px;"><span style="font-family: 'tunga';">Ah, Moon of my Delight who know'st no wane, The Moon of Heav'n is rising once again: How oft hereafter rising shall she look Through this same Garden after me - in vain!</span></p>
<p style="margin: 0px;"><span style="font-family: 'tunga';">(ಸ್ವರ್ಗದ ಚಂದಿರ ಬೆಳೆವುದು ಕ್ಷಯಿಪುದು ದಿನದಿನವೂ ಬದುಕಿನ ಬನದಿ. ಆದರೇನಂತೆ ಆಹ್.. ನನ್ನ ಸ್ವಾನಂದದ ಚಂದಿರ ಇನ್ನೆಂದೂ ಕ್ಷೀಣಿಸದ ಹಾಗೆ ಬೆಳಗಿದೆ..)</span></p>
<p style="margin: 0px;"><span style="font-family: 'tunga';">ಉಮರನ ಒಸಗೆಯಿಂದ ಸ್ವಲ್ಪ ಸಮಾಧಾನವಾಗುವಾಗಲೇ...ರಮಿಸುತ ಬಂದರು ರಫಿ ಮತ್ತು ಲತಾ. ಕೈಫ್ ಭೂಪಾಲಿಯವರ ಕವಿತೆಯ ಉಲಿಯುತ್ತಾ</span></p>
<p style="margin: 0px;"><span style="font-family: 'tunga';">ಚಲೋ ದಿಲ್ ದಾರ್ ಚಲೋ ಚಾಂದ್ ಕೇ ಪಾರ್ ಚಲೊ..</span></p>
<p style="margin: 0px;"><span style="font-family: 'tunga';">ನಾನೆದ್ದು ಹೊರಟೆ..ಹಮೇ ತಯ್ಯಾರ್ ಚಲೋ ಅಂತ.</span></p>
<p style="margin: 0px;"><span style="font-family: 'tunga';">*****************************************************<br />20 August 2023 : ಭಾನುವಾರ ವಿಜಯ ಕರ್ನಾಟಕದ ಲವಲವಿಕೆಗೆ ಬರೆದ ಲೇಖನ : ಚಂದ್ರಯಾನ್ 3 ರ ಯಶಸ್ಸಿಗೆ ಕಾಯುತ್ತಿರುವ ಹೊತ್ತಲ್ಲಿ ಬರೆದ ಲೇಖನ.</span></p>ಸಿಂಧು sindhuhttp://www.blogger.com/profile/11363295766940671498noreply@blogger.com0tag:blogger.com,1999:blog-4515791944382207090.post-23997230055699312682020-04-27T22:26:00.002+05:302020-04-27T22:32:01.730+05:30ಚೈತ್ರ ಹೊರಟನೆ ಜೈತ್ರಯಾತ್ರೆಗಿನ್ನೊಂದು ಸಲ ... (ಅಡಿಗ)<div dir="ltr" style="text-align: left;" trbidi="on">
<a href="https://blogger.googleusercontent.com/img/b/R29vZ2xl/AVvXsEhYI_eNuLo_nWPytF0vDIO1EF7McNTxYLG-QxAFlbzNRPQLhtinn7CqT6GS1mMRyIlWd92-InzqpbILNx_HiqjVyZkuXBppxDlwL0BOWhLwBrEAdRo8Vpji5OimqvcR88e2dpsbABxQYbc/s1600/90289942_2792630654166044_3569910102708191232_o.jpg" imageanchor="1" style="clear: right; float: right; margin-bottom: 1em; margin-left: 1em;"><img border="0" data-original-height="1600" data-original-width="1200" height="320" src="https://blogger.googleusercontent.com/img/b/R29vZ2xl/AVvXsEhYI_eNuLo_nWPytF0vDIO1EF7McNTxYLG-QxAFlbzNRPQLhtinn7CqT6GS1mMRyIlWd92-InzqpbILNx_HiqjVyZkuXBppxDlwL0BOWhLwBrEAdRo8Vpji5OimqvcR88e2dpsbABxQYbc/s320/90289942_2792630654166044_3569910102708191232_o.jpg" width="240" /></a><span style="font-family: "tunga";"><b>"ಜೈತ್ರಯಾತ್ರೆಗೆ ಹೊರಟ ಚೈತ್ರವಿಲಾಸ"</b></span><br />
<span style="font-family: "tunga";">ಈ ವರ್ಷದ (2020) ವಿಜಯ ಕರ್ನಾಟಕ ಯುಗಾದಿ ವಿಶೇಷಾಂಕಕ್ಕೆ ಬರೆದ ಲೇಖನ.</span><br />
<span style="font-family: "tunga";">ಬರೆಯಲು ನಿಮಿತ್ತ ವಿದ್ಯಾರಶ್ಮಿ</span><br />
<span style="font-family: "tunga";">ಬರೆಯುವಾಗ ಓದುತ್ತ, ಮಾತಾಡುತ್ತ, ಕಿವಿಹಿಂಡುತ್ತ ಬರಹದ ಒಪ್ಪಕ್ಕೆ ಕಾರಣರಾದವರು ಮಾಲಿನಿ ಮತ್ತು ಚೊಕ್ಕಾಡಿ ಸರ್ ಅವರು.</span><br />
<span style="font-family: "tunga";"><br /></span>
<br />
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಕವಿತೆಯೊಂದು ತಾನು ಹುಟ್ಟಿದ ಕ್ಷಣವನ್ನು ಮೀ</span><span style="font-family: "tunga"; font-size: 12pt;">ರಿ</span><span style="font-family: "tunga,sans-serif"; font-size: 12pt;"> ಕಾಲಾತೀತವಾಗಿ ಮತ್ತೆ ಮತ್ತೆ ಜೀವಂತಗೊಳ್ಳುತ್ತ ಮಂತ್ರವೆಂಬಂ</span><span style="font-family: "tunga"; font-size: 12pt;">ತೆ</span><span style="font-family: "tunga,sans-serif"; font-size: 12pt;"> ಬದಲಾಗಿ ಹೋಗುವ ಮ್ಯಾಜಿಕ್ಕನ್ನು ಬೇಂದ್ರೆಯವರ ಯುಗಯುಗಾದಿ ಕಳೆದರೂ </span><span style="font-family: "tunga"; font-size: 12pt;">ಕವಿತೆ</span><span style="font-family: "tunga,sans-serif"; font-size: 12pt;"> ಬಹುಸಾರ್ಥಕವಾಗಿ ಪ್ರತಿನಿಧಿಸುತ್ತದೆ. ನಿಜದ ಬದುಕಿನಲ್ಲಿ ಇವತ್ತಿನ ವಿಪರೀತ ಹವಾಮಾನದಲ್ಲೂ ನಿಸರ್ಗವೂ ಹೇಗೆ ಹೇಗೆಯೋ ಕೊಸರಾಡಿಕೊಂಡು ತನ್ನ ಕಾಲಧರ್ಮವನ್ನ ಪಾಲಿಸಲು ಕಷ್ಟಪಡುತ್ತಲೇ ಇದೆ. ಹಿಂದಿನ ಪ್ರಕೃತಿ ಸಮೃದ್ಧಿ ಈಗ ವಿರಳವೇ ಆದರೂ ಪಾದಪಥದಂಚಿನ ಹೊಂಗೆಮರಗಳು ಮಾತ್ರ ಕಣ್ತುಂಬುವಂತೆ ಹಸಿರಾಗಿ ಮೊಗ್ಗೂಡಿ ಅರೆಕ್ಷಣ ಓಡುತ್ತಿರುವ ದಿನಕ್ಕೆ ಒಂದು ಪುಟ್ಟ ಜಗ್ಗುವಿಕೆಯಿತ್ತು..ಹಳೆಯ ಮಧುರ ನೆನಪಿಗೆ ಕಿಂಡಿಯಾಗುತ್ತವೆ. ಪ್ರಿಂಟು, ವೆಬ್ಬು, ಮೊಬೈಲು ಮಾಧ್ಯಮಗಳ ತುಂಬ ಯುಗಾದಿಯ ರೆಸಿಪಿ, ಕಥೆ, ಕವಿತೆ, ಪ್ರಬಂಧ, ವಿಶೇಷ ಹರಟೆ, ಸಂವಾದ ವಿವಾದ, ಮೆಗಾ ಎಪಿಸೋಡು, ಸೆಲ್ಫೀ ನೋಡು, ಇನ್ಸ್ಟಾ ಚಚ್ಚು, ರಾಶಿ ರಾಶಿ ಶುಭಾಶಯ ಫಾರ್ವರ್ಡು...ತುಂಬಿ ತುಳುಕುತ್ತವೆ. ಹಬ್ಬದ ಮರುದಿನ ಹಸಿರು ಕಸ ಹೇರಲಾರದೆ ಹೇರಿಕೊಂಡ ಕಸದ ಗಾಡಿ ಮುಂದೆ ಹೋಗಲಾರದೆ ಹೋಗುತ್ತದೆ.</span> </div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಕವಿಗಳಿಗೆ, ಕಾವ್ಯಕ್ಕೆ ಅಷ್ಟಿಷ್ಟು ಕಥೆ ಕಾದಂಬರಿಗಳಿಗೂ ನಿಷ್ಠವಾಗಿ ನಿಲ್ಲುವುದು ಪ್ರತಿ ಚೈತ್ರಕ್ಕೂ ತಪ್ಪದೆಯೆ ಚಿಗುರುವ ಹೊಂಗೆಯೇ ವಿನಃ ಓದುಗರಲ್ಲ ಎಂಬ ಕಾಲದಲ್ಲಿದ್ದೀವಿ ನಾವು. ಆದರೂ ಕವಿ ಮತ್ತೆ ಬರೆಯುತ್ತಾನೆ. ಇನ್ನೊಂದು ಯುಗಾದಿಗೆ ಕಾಯುತ್ತಾನೆ. "ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ" ಎಂಬ ಬೇಂದ್ರೆಯವರ ಸಾಲನ್ನು ಚಿಗುರುವ ಮರಗಿಡಗಳ ಜೊತೆಗೇ ತಾನೂ ಭಾಗವಹಿಸಿ ತೋರುವ ಶಕ್ತಿ ಇರುವುದು ಬಹುಶಃ ಕಾವ್ಯಕ್ಕೆ ಮಾತ್ರ. ನಿಲ್ಲದೆ ಓದುವ ನಿಷ್ಠುರ ಕಾಲವನ್ನ ಒಂದೆರಡು ಸೆಕೆಂಡುಗಳಿಗೆ ಸ್ತಬ್ಧವಾಗಿಸುವ ಶಕ್ತಿ, ಓಡುತ್ತಲೇ ಇರುವುದರ ಕುರಿತು ಬರೆದೂ ಓಡಿ ಮುಗಿದ ದಾರಿಯನ್ನ ಮತ್ತೆ ನೆನಪಿನಲಿ ಬದುಕುವ ಹಾಗೆ ಮಾಡುವ ಶಕ್ತಿ ಕಾವ್ಯಕ್ಕಿದೆ. </span></div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಹೀ</span><span style="font-family: "tunga"; font-size: 12pt;">ಗೆಯೇ</span><span style="font-family: "tunga,sans-serif"; font-size: 12pt;"> ಕುತೂಹಲ</span><span style="font-family: "tunga"; font-size: 12pt;">ದಲ್ಲಿ</span><span style="font-family: "tunga,sans-serif"; font-size: 12pt;"> ಹಲವಾರು ಕವಿಗಳ ಕಾವ್ಯಯುಗಾದಿಯನ್ನು ಓದುತ್ತ ಕುಳಿತಾಗ ಎಲ್ಲದರಲ್ಲೂ ವಿಶಿಷ್ಟವಾಗಿ ನನ್ನ ಓದಿಗೆ ನಿಲುಕಿದ್ದು ಕೆ.ಎಸ್.ನರಸಿಂಹಸ್ವಾಮಿ ಮತ್ತು ಗೋಪಾಲಕೃಷ್ಣ ಅಡಿಗರ ಯುಗಾದಿ ಕವಿತೆಗಳು. ವರ್ಷವರ್ಷವೂ ಹೆಚ್ಚಾಗುತ್ತಿರುವ, ಭೂಮಿಯನ್ನ-ಪ್ರಕೃತಿಯನ್ನ ದುರುಪಯೋಗಪಡಿಸಿಕೊಳ್ಳುವ ಮಾನವ ದುರಾಸೆ, ರಾಜಕೀಯ ದೊಂಬರಾಟ, ಸಾಮಾಜಿಕ ಸ್ಥಿತಿಗತಿ ಮತ್ತು ಪರಂಪರಾಗತವಾಗಿ ಬಂದ ಒಳಿತಿನ ನಂಬುಗೆ, ಅದರೊಳಗೇ ಸಣ್ಣಗೆ ಅಪನಂಬಿಕೆಯ ಹೊಗೆ, ಹೀಗೂ ಇರಬಹುದೆ ಎಂಬ ನಿರಾಸೆ...ಹೀಗಾಗಬಾರದೆ ಎಂಬ ಸಹಜ ಸರಳ ಆಸೆಗಳು ಈ ಕವಿತೆಗಳಲ್ಲಿ ಇವೆ. ಒಳ್ಳೆಯ ಕಾವ್ಯ</span><span style="font-family: "tunga"; font-size: 12pt;">ವು</span><span style="font-family: "tunga,sans-serif"; font-size: 12pt;"> ಕಾಲವನ್ನೂ ಮತ್ತು ಪರಿಸರವನ್ನೂ ಮೀರಿರುತ್ತದೆ ಎಂಬ ಮಾತು ನನಗೆ ಈ ಕವಿತೆಗಳನ್ನು ಓದುವಾಗ ಮನವರಿಕೆಯಾಯಿತು. ಕಾಲ ಕೆಟ್ಟಿದೆ ಹೌದು ಆದರೂ ಸರಿಪಡಿಸಬಹುದು ಎಂಬ ಭರವಸೆಯನ್ನ ಈ ಓದು ಕೊಟ್ಟಿತು. ಹೀಗಾಗಿ ನನ್ನ ನಿಲುಕಿಗೆ ಸಿಕ್ಕ ಕೆಲವು ಕವಿತೆಗಳು ನಿಮ್ಮ ಓದಿಗೆ ಮತ್ತು ಮನನಕ್ಕೆ.</span> </div>
<div style="background-color: white; color: #222222; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಸ್ವರ್ಗದ ಕನಸು ಭೂಮಿಯಲಿ ತುಂಬಿಕೊಳಲೆಂದು ಹರಸಲಿ!</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ತನ್ನ ಕಾಲದಲಿ ಉನ್ನತಿಗೆ ನಾಡ ಹರಸಲಿ! (ಕೆ.ಎಸ್.ನ. "ಸರ್ವಜಿತು", ಉಂಗುರ ಸಂಕಲನ)</span><span style="font-family: arial, helvetica, sans-serif; font-size: x-small;"> </span></div>
<div style="background-color: white; color: #222222; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಬಂಜೆ ನೆಲಕೆ ಬೇರನೂರಿ, ಹೊಳೆಯ ದಿಕ್ಕ ಬದಲಿಸಿ,</span><span style="font-family: arial, helvetica, sans-serif; font-size: x-small;"> </span><span style="font-family: "tunga,sans-serif"; font-size: 12pt;">ಕಾಡ ಕಡಿದು ದಾರಿ ಮಾಡಿ ಬೆಟ್ಟ ಸಾಲ ಕದಲಿಸಿ,</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ಹೆಜ್ಜೆಗೊಂದು ಹೊಸಯುಗಾದಿ- ಚೆಲುವು ನಮ್ಮ ಜೀವನ!</span><span style="font-family: arial, helvetica, sans-serif; font-size: x-small;"> </span><span style="font-family: "tunga,sans-serif"; font-size: 12pt;">ನಮ್ಮ ಹಾದಿಯೋ ಅನಾದಿ, ಪಯಣವೆಲ್ಲ ಪಾವನ.. ("ಯುಗಾದಿ", ಶಿಲಾಲತೆ ಸಂಕಲನ)</span><span style="font-family: arial, helvetica, sans-serif; font-size: x-small;"> </span></div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಈ ಕವಿತೆಗಳಲ್ಲಿ ತನ್ನ ಸುತ್ತಲ ಸ್ಥಿತಿಗತಿಗಳ ಎಚ್ಚರವಿದ್ದೂ ಒಳಿತಿನ ಕಡೆ ಜಗ್ಗುವ ಮನವನ್ನೇ ಕಾಣಬಹುದು. </span></div>
<div style="background-color: white; color: #222222; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ನಿನಗೆ ಭಯವಿಲ್ಲ ದುರ್ಮುಖಿ,</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ಹಾರಲಿ ನಿನ್ನಯ ಹಕ್ಕಿ ಹನ್ನೆರಡು ತಿಂಗಳು;</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ಹೆಸರಿಗೆ ಕೊರಗಬೇಡ, ಹಸುರಾಗಿಸು ನಿನ್ನ ಹಾಡ.</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ದುರ್ಮುಖಿಯಿರಬಹುದು, ಅಸುಖಿಯಿರಬಹುದು;</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ಬಿಸಿಲುರಿದು ಗಾಳಿ ಬೀಸುವುದು, ನಾಳೆ ಮಳೆಯಾಗಬಹುದು.</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ನಿನಗೆ ಈ ಹೆಸರಿಟ್ಟ ಪಾಪಿಯನು ಹರಸಿಹೋಗು..! (ದುರ್ಮುಖಿ, ಶಿಲಾಲತೆ ಸಂಕಲನ)</span><span style="font-family: arial, helvetica, sans-serif; font-size: x-small;"> </span></div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಕೆಡುಕಿನಲಿ ಒಳಿತನು ಕಾಣುವ ಮನಸಿನ ಹಾರೈಕೆಯೂ..ಏನೆಲ್ಲ ಕಷ್ಟದ ಬಿಸಿಲಬೆಂಕಿಯಲೂ ಮತ್ತೆ ನಾಳೆ ಮಳೆ ಬರಬಹುದೆಂಬ ಮನವರಿಕೆಯೂ ಈ ಕವಿತೆಯಲ್ಲಿದೆ. </span></div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಪ್ರೇಮಕವಿಯೆಂದು ಮೈಸೂರ ಮಲ್ಲಿಗೆಯವರೆಂದು ನಾಡಿನುದ್ದಕ್ಕು ಹೆಸರಾದ ಕವಿ ತನ್ನ ಸಾಮಾಜಿಕ ಪರಿಸರಗಳಿಗೆ ಸ್ಪಂದಿಸುವಾಗ ಅವರ ಮೃದುಮನದ ನಿಷ್ಠುರ ನಿಲುವುಗಳಿಗೆ ಕನ್ನಡಿಯಾದ ಸಾಲುಗಳಿಲ್ಲಿವೆ. ಇವತ್ತಿಗೂ ಅಷ್ಟೇ ಅನ್ವಯಿಸುವ ಅಂಥದೇ ಇಕ್ಕಟ್ಟುಗಳನ್ನ ಛಂದಃಬದ್ಧ ರಚನೆಯಲ್ಲಿ ಹಿಡಿದಿಡುವ ಕೆ.ಎಸ್.ನ ಮೇಲುನೋಟಕ್ಕೆ ನೋಡಿದರೆ ಯುಗಾದಿ ವಿಶೇಷಾಂಕದ ಸೊಲ್ಲಾಗಿ, ಒಳ್ಳೆಯ ಸಂಯೋಜನಕ್ಕೆ ಒದಗಬಹುದಾದ ಹಾಡಾಗಿ ಹೋಗಬಹುದಾದ ಕವಿತೆಯ ಒಡಲಿನಲ್ಲಿ ನೋವಿನ ಒಳಗುದಿಯನ್ನು ಜ್ವಾಲೆಯಾರದ ಹಾಗೆ ಕಾವು ತಟ್ಟುವ ಹಾಗೆ ಬೆಂಕಿಯಾಗಿಸಿದ್ದಾರೆ.</span> </div>
<div style="background-color: white; color: #222222; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಬೆಲೆಗಳೇರುತ್ತಿರಲು ನಕ್ಷತ್ರದೆತ್ತರಕೆ,
ಕೊಲೆಮನೆಗೆ ನಡೆದಿರಲು ಗಂಗೆ ಗೌರಿ,</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ಗಾಳಿಗೂ ನಾಳಿದ್ದು ಬರಬಂದರಚ್ಚರಿಯೆ?
ಎಂತಹ ಯುಗಾದಿಯೋ ದುರ್ದಿನದಲಿ!</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ನಗಲೆಬಾರದೆಂಬ ನಿಯಮವೇನೂ ಇಲ್ಲ-
ನಗುವುದು ಹೇಗೆ ಸಾಧ್ಯ ಅಕ್ಷಯದಲಿ?</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ಕುಡಿವ ನೀರಿಗೆ, ಉರಿವ ಬೆಳಕಿಗೂ ಕಡಿವಾಣ,
ನಿದ್ದೆ ಬರುವುದು ಹೇಗೆ ಜೋಪಡಿಯಲಿ? ("ಅಕ್ಷಯ ಯುಗಾದಿ", ದುಂಡುಮಲ್ಲಿಗೆ ಸಂಕಲನ)</span><span style="font-family: arial, helvetica, sans-serif; font-size: x-small;"> </span></div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಈ ಕವಿತೆಯನ್ನು ಇಡಿಯಾಗಿ ಓದುವಾಗ ಇವತ್ತಿನ ನಮ್ಮ ದಿನಗಳು ನೆನಪಾಗದೆ ಇರದು. ಮಾತನಾಡಬೇಡವೆಂಬ ನಿಯಮವೇನಿಲ್ಲ. ಫ್ರೀಡಮ್ ಆಫ್ ಸ್ಪೀಚ್ ಎಂಬ ಸಂವಿಧಾನಬದ್ಧ ನಿಯಮದಡಿಯಲ್ಲೆ, ಹೀಗೆಯೇ ಮಾತನಾಡಬೇಕು ಎಂಬ ಹೊರನಿಯಮವೊಂದು ಕಾಯು</span><span style="font-family: "tunga"; font-size: 12pt;">ತ್ತಿದೆಯೋ</span><span style="font-family: "tunga,sans-serif"; font-size: 12pt;"> ಎಂದೆನಿಸಿಬಿಡುತ್ತದೆ. ರೈತಸ್ನೇಹಿಯಲ್ಲದ ಮಧ್ಯವರ್ತಿಗಳಿಗೆ ಮಾತ್ರ ಅನುಕೂಲವೆನಿಸುವ ಆಕಾಶಮುಖೀ ಬೆಲೆಗಳ ಉಡ್ಡಯನದಲ್ಲಿ ಅಡ್ಡಬಿದ್ದಿರುವ ಕಡಿವಾಣ ಬದ್ಧ ಬದುಕು ಓದುತ್ತ ಓದುತ್ತ ಕಣ್ಮುಂದೆ ಹರಡಿಕೊಳ್ಳು</span><span style="font-family: "tunga"; font-size: 12pt;">ತ್ತದೆ</span><span style="font-family: "tunga,sans-serif"; font-size: 12pt;">. ಕೃಷಿಯಲ್ಲಿ ತೊಡಗಿರುವ ಸ್ನೇಹಿತರೊಬ್ಬರು ರೈತರಿಂದ ಮಾರುಕಟ್ಟೆಗಳು ಉತ್ಪನ್ನಗಳನ್ನು ಕೊಳ್ಳುವ ಬೆಲೆಯನ್ನು ಹಂಚಿಕೊಂಡರು. ಮುಖ್ಯವಾಗಿ ತರಕಾರಿಗಳ ಬೆಲೆ. ಯಾವ ತರಕಾರಿಯ ಬೆಲೆಯೂ ಕೆ.ಜಿಗೆ ಎರಡಂಕಿಯಿರಲಿ ಐದು ರೂಪಾಯಿಗಿಂತ ಮೇಲಿದ್ದರೆ ಹೆಚ್ಚು. ಅದೇ ತರಕಾರಿಗಳು ನಾವು ಸಾಮಾನ್ಯರು ಕೊಳ್ಳುವಾಗ ಕನಿಷ್ಟ ಕೊಳ್ಳಬೇಕಾದ ಬೆಲೆಯೂ ಐದು ರೂಪಾಯಿಗಿಂತ ಹೆಚ್ಚಿರುತ್ತವೆ. ಹೆಚ್ಚಿನಂಶ ಎಲ್ಲ ತರಕಾರಿಗಳೂ ೨೦ ರೂಪಾಯಿಯಿಂದ ಹಿಡಿದು ೮೦-೮೫ರ ಆಸುಪಾಸಿನಲ್ಲಿಯೇ ಇವೆ. ಬೆಳೆದ ಶ್ರಮಕ್ಕೆ ಕನಿಷ್ಠ ಬೆಲೆಯೂ ಬರದ ಈ ದಿನಗಳಲ್ಲಿ ನಾವು ಅತಿರಮ್ಯವಾಗಿ ರೈತನು ನಾಡಿನ ಬೆನ್ನೆಲುಬು ಎಂದುಕೊಳ್ಳುತ್ತ ಮೆರೆವ ಕೃಷಿಪ್ರಧಾನ ದೇಶದ ಸತ್ಪ್ರಜೆಗಳಿದ್ದೇವೆ. ಈ ವಿಷಯ ಬರೆಯಲು ಈಗೀಗ ಕವಿಗಳಿಗೆ ಪುರುಸೊತ್ತಿಲ್ಲ. ಅಥವಾ ಇದೆಲ್ಲ ಬರೆದರೂ ಓದುಗರಿಗೇ ಬೇಕಿಲ್ಲ. ಬರೆಯುವವರಿಗೆ ಸಾಕಷ್ಟು ಮುಖ್ಯ ವಿಷಯಗಳಾದ, ಪ್ರೀತಿ, ಪ್ರೇಮ, ಜಾತಿ, ಯುನಿಫಾರ್ಮು, ಮೀಸಲು, ಯುದ್ಧ, ದೇವಭಾಷೆ ಇತ್ಯಾದಿ ವಿಷಯಗಳಿವೆ. ಓದುವವರಿಗೆ ಅನ್ ಲಿಮಿಟೆಡ್ ಡಾಟಾ ಪ್ಯಾಕುಗಳಲ್ಲಿ ಜಾಗತಿಕ ವಿದ್ಯಮಾನಗಳ ಕುರಿತಾದ ಸಿನೆಮಾ ಮತ್ತು ಜಗತ್ತಿನ ಮೇಲೆ ಯುದ್ಧದ ಪ್ರಭಾವ ಇತ್ಯಾದಿ ವಿಷಯಗಳ ಕುರಿತ ಸಿನೆಮಾ ನೋಡಬೇಕಿದೆ. ಸೆಲ್ಫಿಗೆ ಒದಗದ, ಟ್ರೋಲಿಗೆ ಲಾಯಕ್ಕಾಗದ ವಿಷಯಗಳಲ್ಲಿ ಯಾರ ಆಸಕ್ತಿಯೂ ಇಲ್ಲ. </span></div>
<div style="background-color: white; color: #222222; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಮಳೆಗಾಲದಲ್ಲಿ ಮಳೆಯಿಲ್ಲ, ಮಾಡುವುದೇನು?
ಯಾರ ಅಪ್ಪಣೆಯಿಂದ ಹೀಗಾಯಿತು?</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ಹಕ್ಕಿ ತಾನೇ ಬಂದು ಬಿದ್ದಿತ್ತು ಬಲೆಯೊಳಗೆ, ಬಿಡಿಸಿಕೊಳ್ಳುವ ಮಾರ್ಗ ತಿಳಿಯಲಿಲ್ಲ!</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ಕುಡಿಯಲೂ ನೀರಿರದ ಹಲವು ಹಳ್ಳಿಗಳಲ್ಲಿ ಹಾಯಾಗಿ ನೆಲಸಿಹುದು ಬೆಳ್ದಿಂಗಳು!</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ಎಲ್ಲ ಚೆನ್ನಾಗಿಹುದು ಎಂದು ಹೇಳಲಿ ಹೇಗೆ, ಗಂಭೀರವಾಗಿಹುದು ಬಿಸಿಲ ಬೇಗೆ ("ಎರಡು ಚಿತ್ರಗಳು" ದೀಪಸಾಲಿನ ನಡುವೆ") ಯಾವ ಹೆಚ್ಚಿನ ವ್ಯಾಖ್ಯಾನ ಬೇಡದ ಈ ಕವಿತೆಸಾಲುಗಳ ಮೂಲಕ ಕವಿ ಏನನ್ನು ಸೂಚಿಸುತ್ತಿದ್ದಾರೆ? ತನ್ನ ಸುತ್ತಲ ಬದುಕಿನ ಪರಿಯನ್ನು ಬಿಚ್ಚಿಡುತ್ತಲೇ ಹೀಗೆಲ್ಲ ಇದ್ದರೂ ತನ್ನ ಪಾಡಿಗೆ ತಾನು ಲೋಕದುರುಳು ಎಂಬ ಪ್ರಕೃತಿ ಧರ್ಮವನ್ನು, ಲೋಕದ ಸಹಜ ಗತಿಯನ್ನು ಕವಿ ಸೂಚಿಸುತ್ತಾ ಎಂಥಹ ಕಷ್ಟದ ಪರಿಸ್ಥಿತಿಯಲ್ಲೂ ಭರವಸೆಯನ್ನು ಬಿಡದೆ ಮನುಷ್ಯಪ್ರಯತ್ನವನ್ನು ಬಿಡದೆ ಒಳಿತಿನ ಕಡೆಗೆ ಗಮನ ಹರಿಸಬೇಕು ಎನ್ನುತ್ತಾರೆ. </span></div>
<div style="background-color: white; color: #222222; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಎಲ್ಲಿಹುದೋ ನೋವಿಲ್ಲದ ಚೆಲುವು?</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ವರುಷ ವರುಷವೂ ಮತ್ತೆ ಯುಗಾದಿ;
ಕಾಲವಿದಂತು ಅನಂತ ಅನಾದಿ,</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ತೋರಣ ಕಟ್ಟಿದೆ ಬದುಕಿನ ಬೀದಿ;
ಏಳುಬೀಳುಗಳ ಬಳಸಿನ ಹಾದಿ.</span><span style="font-family: arial, helvetica, sans-serif; font-size: x-small;"> </span></div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಇವೇ ವಿಷಯಗಳು ಯುಗಾದಿಯ ಕಾಲಬದಲಾವಣೆಯ ಸಮಯಕ್ಕೆ ಗೋಪಾಲಕೃಷ್ಣ ಅಡಿಗರ ಕಾವ್ಯಕುಸುರಿಗೆ ಸಿಕ್ಕ ಪರಿಯನ್ನಷ್ಟು ನೋಡೋಣ. ಇದು ಕೆ.ಎಸ್.ನ ಮತ್ತು ಅಡಿಗರ ಕವಿತೆಗಳ ಹೋಲಿಕೆ ಖಂಡಿತ ಅಲ್ಲ. ಈ ಇಬ್ಬರು ಮುಖ್ಯ ಕವಿಗಳು ಹೇಗೆ ತಮ್ಮ ಸುತ್ತಲಿನ ಸ್ಥಿತ್ಯಂತರಕ್ಕೆ ಕಾವ್ಯದ ಮೂಲಕ ಸ್ಪಂದಿಸಿದರು ಮತ್ತು ಅವುಗಳನ್ನು ಇವತ್ತು ಕೂತು ಓದುವಾಗ ಈ ಸತ್ವಶಾಲೀ ಕವಿತೆಗಳ ಪ್ರಸ್ತುತತೆ ಎಷ್ಟು ಎಂಬುದನ್ನ ನನ್ನ ಜೊತೆಓದುಗರು ಓದಲೆಂಬ ಇಷ್ಟವಲ್ಲದೆ ಮತ್ತೇನೂ ಇಲ್ಲ.</span> </div>
<div style="background-color: white; color: #222222; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಯುಗ ಯುಗಾದಿಯ ತೆರೆಗಳೇಳುತಿವೆ,
ಬೀಳುತಿವೆ ಹೊಸಹೊಸವು ಪ್ರತಿವರುಷವು;</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ಈ ಯುಗಾದಿಯ ಮಾತು ಕೇಳುತಿದೆ
ಮರಮರಳಿ ಮೊದಲಾಗುತಿದೆ ಯುಗವು, ನರನ ಜಗವು;</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ತನ್ನ ನೆಲೆಯನು ಹುಡುಕಿ ಹೊರಟ ಬಡಜೀವಕಿದೆ ತೃಪ್ತಿ;
ಹೊರಟಲ್ಲಿಗೇ ಬಂದ ಗೆಲವು! (ಅಡಿಗರು, "ಯುಗಾದಿ" ಕವಿತೆ, ಕಟ್ಟುವೆವು ನಾವು ಸಂಕಲನದಿಂದ)</span><span style="font-family: arial, helvetica, sans-serif; font-size: x-small;"> </span></div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಬುದ್ಧಿ ಭಾವ ಪ್ರಯತ್ನಗಳಲ್ಲಿ ಏನನ್ನೇ ಮಾಡಿದರೂ ಕಾಲನ ಗಾಣದಲ್ಲಿ ನಾವು ಸುತ್ತುವ ಎತ್ತುಗಳಷ್ಟೇ ಪ್ರಗತಿಯಿಲ್ಲ, ಹೊರಟ ಬಿಂದುವಿಗೇ ಮತ್ತೆ ಸೇರುವುದಷ್ಟೆ ಈ ಬದುಕಿನ ಪಯಣ ಎಂಬ ತಾತ್ವಿಕ ನಿಲುವಿನಿಂದ ಶುರುವಾಗ ಅಡಿಗರ ಮೊದ ಮೊದಲ ಕವಿತೆಗಳಲ್ಲಿ ಒಂಚೂರು ನಿರಾಸೆಯೇ ಮಾರ್ಧನಿಸುತ್ತದೆನಿಸುತ್ತದೆ. ಎಲ್ಲವನ್ನೂ ಮುರಿದು ಕಟ್ಟಬೇಕೆಂಬ ಹಂಬಲದ ಯೌವನಸ್ಥ ಕವಿಗೆ ಹೊಸನಾಡನ್ನು, ರಸದ ಬೀಡನ್ನು ಕಟ್ಟುವ ತವಕ. ಯುಗಾದಿಯ ಹೊರಳುಸಮಯದಲ್ಲಿ ಕವಿಗೆ ಈಗಿನ ಜಗದ, ಸುತ್ತಲ ಪರಿಸರದ, ಜೊತೆಗೆ ತಾವು ಬದುಕಿರುವ ಪರಿಯ ಮಿತಿಯೇ ಹೆಚ್ಚಾಗಿ ಕಾಣುತ್ತದೆ. ಅದನ್ನು ಮೀರುವ ತವಕದ ಅವಶ್ಯಕತೆಗೆ ಓದುವ ನಮ್ಮನ್ನೂ ಒಡ್ಡುವುದೇ ಅಡಿಗರ ಈ ಕವಿತೆಗಳ ಗೆಲುವು. ಹಾಗಂತ ಈ ಕವಿತೆಗಳು ನೆಗೆಟಿವಿಟಿಯ ಛಂದೋಬದ್ಧ ರೂಪಕಗಳಲ್ಲ. ತನ್ನ ಸುತ್ತಲ ಪರಿಸರ ಮತ್ತು ತಾನು ಬಾಳುತ್ತಿರುವ ಕಟ್ಟುಪಾಡಿನ ಬದುಕಿನ ಕುರಿತ ಅಸಹನೆ, ಅದನ್ನು ಮೀರುವ ಛಲ ಸಾಲುಸಾಲುಗಳಲ್ಲಿ ಎದ್ದು ಕಾಣುತ್ತವೆ.</span> </div>
<div style="background-color: white; color: #222222; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಇಡೀ ವರ್ಷ ಮಧುರ ಪಕ್ವಾನ್ನ,
ಈ ದಿನ ಮಾತ್ರ ಬೇವು ಸೋಂಕಿದ ಬೆಲ್ಲದೊಂದು ಚಿಟಿಕೆ;</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ಬಳಿಕ ಹೋಳಿಗೆ ತುಪ್ಪ;
ಸಂಕೇತಕ್ಕೋಸ್ಕರವಾಗಿ ಸಂಕೇತವಾಗಿಯೆ ತೇಗಿದವರು.</span><span style="font-family: arial, helvetica, sans-serif; font-size: x-small;"> </span></div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಯುಗಯುಗಾದಿಗಳೆಷ್ಟೊ ಕಳೆದರೂ ಬೇರಿಲ್ಲ,
ಹೂಹಣ್ಣು ಬಿಡುವ ರೂಢಿ ಮರೆತುಹೋಗಿದೆ.. (ಯುಗಾದಿಯ ಅನ್ನಿಸಿಕೆಗಳು, ಮೂಲಕ ಮಹಾಶಯರು ಸಂಕಲನದಿಂದ)</span> </div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಈ ಬಾರಿ ಊರಿನ ಬಂಧುಗಳು, ಕೃಷಿಯಲ್ಲಿರುವ ಸ್ನೇಹಿತರು, ತರಕಾರಿ ಅಂಗಡಿಯವರು ಎಲ್ಲರದ್ದೂ ಒಂದೆ ಮಾತು.. ಮಾವಿಗೆ ಹೂವಿಲ್ಲ. ಇಬ್ಬನಿ ಬೀಳುವಾಗ ಬೀಳಲಿಲ್ಲ, ಹೂಬಿಡುವಾಗ ಮಳೆ ಬಿದ್ದು ಉದುರಿ, ಹೂಚಿಗುರು ಕಾಯಿ ಕಚ್ಚಲಿಲ್ಲ. ಈಗ 44 ವರ್ಷಗಳ ಹಿಂದೆ ಬರೆದ ಕವಿತೆ ಈಗಲೂ ಪ್ರಸ್ತುತ. ಉಪ್ಪಿನಕಾಯಿಗೆ ಮಿಡಿಯಿಲ್ಲ. ಹಣ್ಣಾದ ಮಾವನು ತಿನ್ನಲು ಮರದಲಿ ಕಾಯಿಯೇ ಕಟ್ಟಿಲ್ಲ. ಮಾತುಗಳಲ್ಲಿ, ತೋರಿಕೆಗಳಲ್ಲಿ ಏರುತ್ತಿರುವ ಸಂಬಳದಲಿ ಬದುಕುವುದು ನಿಜದಲ್ಲಿ ಅಷ್ಟು ಸುಲಭವಿಲ್ಲ. ಯುಗಾದಿ ಆಚರಣೆಗೆ ಸೀಮಿತವಾಗುತ್ತ ನಡೆದಿದೆ.</span> </div>
<div style="background-color: white; color: #222222; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಯುಗಾದಿ ಎಂದರೂ ಒಂದೆ,
ಯುಗಾಂತ ಎಂದರೂ ಸರಿಯೇ
ಆದಿ ಅಂತ್ಯಗಳೆರಡು ಅವಳಿ ಜವಳಿ;</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ಜವಳಿಯಂಗಡಿಯಲ್ಲಿ ಬೇಕಾದ ಪೋಷಾಕು ಇದೆ;
ಆರಿಸಿಕೊ; ನಾಮಕರಣವೋ ಸರಿ,ಬೊಜ್ಜಕ್ಕೂ ಸರಿ.</span><span style="font-family: arial, helvetica, sans-serif; font-size: x-small;"> </span></div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಕ್ಷಯವ ಅಕ್ಷಯ ಮಾಡುವುದು ಭಾರಿ ಕಷ್ಟವೇ?
ಭಾರತೀಯ ನಾಲಗೆಗೆ ಇದು ಸಣ್ಣ ಲಾಗ. (ಹೊಸ ಯುಗಾದಿಗೆ, ಚಿಂತಾಮಣಿಯಲ್ಲಿ ಕಂಡ ಮುಖ ಸಂಕಲನ)</span> </div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಈ ಕವಿತೆ ಬರೆಯುವಾಗ ಕವಿಗೆ ಮೊದಲಿಗಿಂತ ಹೆಚ್ಚು ನಿರಾಶೆ, ಭರವಸೆ ಕುಂದಿದೆ. ಆದರೆ ಸ್ಪಷ್ಟತೆ ಮೊದಲಿಗಿಂತ ಹೆಚ್ಚಾಗಿದೆ. ಆಗಿರುವುದೇನು ಎಂಬುದನ್ನು ತನ್ನ ವಿಡಂಬನೆಯ ಉಳಿಯಲ್ಲಿ ಕಟೆದಿರಲು ಕೈ ಸರಿಯಾಗಿ ಕೂತಿದೆ. ಓದಿದ ಓದುಗನಿಗೆ ಆ ಉಳಿಪೆಟ್ಟು ಎಲ್ಲಿ ಬೀಳಬೇಕೋ ಅಲ್ಲಿಗೇ ಬೀಳುತ್ತದೆ. ಕವಿ ಪಟುವಾಗುತ್ತ ಕಟುವಾಗುತ್ತ ನಡೆದಿದ್ದಾರೆ. ತನಗೆ ಸಿಕ್ಕಿರುವುದು ಸೋಗಿನ ಬೇಗಡೆ ಪಾಗಿನ ಬದುಕು ಎಂಬ ಅರಿವಿದೆ. </span></div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಗೆದ್ದು ತರುವಾಂಥದ್ದು ಆಚೆ ನೆಗೆಯುವ ಬದುಕು...
ತೋರಿಕೆಯ ಬೇಗಡೆಪಾಗನ್ನು ಹೊದ್ದುಕೊಂಡು ಇರಲಾಗುವುದಿಲ್ಲ ಎಂಬ ಚಿಕಿತ್ಸಕ ದೃಷ್ಟಿಯಿದೆ. ಎಂತಹ ಪಾತಾಳಕ್ಕೆ ಬಿದ್ದಿದ್ದರೂ ಮೇಲೇರುವ ಶಕ್ತಿ ಇದ್ದೇ ಇರುತ್ತದೆ ಎಂಬ ಭರವಸೆಯೂ ಉಂಟು.</span> </div>
<div style="background-color: white; color: #222222; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಈ ಯುಗಾದಿಯವರೆಗು ಬಂದು ತಡಕುವ ದಾರಿ ತನ್ನ ಬಲೆಯಲ್ಲಿ ತಾ ಬಿದ್ದ ಜೇಡ.</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ರಾಟೆ ಗಡಗಡಿಸಿ ಪಾತಾಳಕಿಳಿದರು ಚೆಂಬು ಹಾಲು ಸೂಸದು ಈಗ ಹೊಟ್ಟು ಬಾವಿ.
(ಈ ಯುಗಾದಿಯ ವರೆಗು, ಸಮಗ್ರದ ಅನುಬಂಧದಲ್ಲಿದೆ)</span><span style="font-family: arial, helvetica, sans-serif; font-size: x-small;"> </span></div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಕವಿ ಬರೆಯುವ ಕಾಲಕ್ಕೆ ಏನೇನು ತುರ್ತು, ಕಷ್ಟ, ಅನುಕೂಲ, ಜಾಲಗಳಿದ್ದವೋ ಈಗಂತೂ ನಾವೆಲ್ಲರೂ ನ್ಯೂಕ್ಲಿಯರ್ ಕುಟುಂಬದ, ತನ್ನ ನಡುಗಡ್ಡೆಯಲ್ಲಿ ತಾನೇ ವಿರಾಜಮಾನರಾಗಿರುವ ನೆಟ್ ಯುಗದ ಬಲೆಯಲ್ಲಿ ಸಿಕ್ಕಿಬಿದ್ದ ಜೇಡರೇ ಆಗಿಬಿಟ್ಟಿದೀವಿ.</span> </div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಇವತ್ತು ನಮಗೆ ಇರುವ ಗೊಂದಲ ಬಗ್ಗಡಗಳ ಗೊಂದಲಪುರದ ಅಣಕುಗಲ್ಲಿಗಳನ್ನ ಈ ಕವಿ ಹಲವು ದಶಕಗಳ ಮೊದಲೆ ಹೊಕ್ಕು ಮುಗಿಸಿ</span><span style="font-family: "tunga"; font-size: 12pt;"> ನಮಗೆ ಈ ಬದುಕಿನಿಂದಾಚೆ ನೆಗೆಯಬೇಕಿರುವ</span><span style="font-family: "tunga,sans-serif"; font-size: 12pt;"> ಅವಶ್ಯಕತೆಯನ್ನು ಮತ್ತೆ ಸೂಚಿಸುತ್ತಾರೆ.</span> <span style="font-family: "tunga,sans-serif"; font-size: 12pt;">ಅಳುವ ಕಡಲಿನಲಿ ತೇಲಿ ಬರಬಹುದಾದ ನಗೆಯ ಹಾಯಿದೋಣಿಯ ಪುಟ್ಟ ಭರವಸೆಯನ್ನೂ ಕೊಡುತ್ತಾರೆ.</span> </div>
<div style="background-color: white; color: #222222; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಚೈತ್ರ ಹೊರಟನೆ ಜೈತ್ರಯಾತ್ರೆಗಿನ್ನೊಂದು ಸಲ
- ವರ್ಷವರ್ಷದ ತೊಡಕು ತುಡಿವ ಸಲಗ?</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ಕಾಲದಾಚೆಗೆ ನೋಡಲಾರವು ಕಣ್ಣು;
ಬೀಜದಲ್ಲಡಗಿರುವ ಕಳಿತ ಹಣ್ಣು;</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ದೇವಮಾನವೆ ಬೇರೆ; ಮನುಷ್ಯಮಾನ
</span><span style="font-family: "tunga,sans-serif"; font-size: 12pt;">ವಕ್ರಗತಿಯ ಅಸಂಖ್ಯ, ಓರೆಕೋರೆಗಳ ಆತಂಕ, ತಳ್ಳಂಕ.</span><span style="font-family: arial, helvetica, sans-serif; font-size: x-small;">
</span><span style="font-family: "tunga,sans-serif"; font-size: 12pt;">ಹಠಾತ್ತಾಗಿ ಮುರಿವ ಆಕಾಶಸಂಕ. ("ಮತ್ತೆ ಮತ್ತೆ ಯುಗಾದಿ" ಚಿಂತಾಮಣಿಯಲ್ಲಿ ಕಂಡ ಮುಖ ಸಂಕಲನದಿಂದ)</span><span style="font-family: arial, helvetica, sans-serif; font-size: x-small;"> </span></div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ನರಸಿಂಹಸ್ವಾಮಿಯವರ ಕವಿತೆಗಳಲ್ಲಿ ಇಷ್ಟೆ ಪ್ರಾಪ್ತಿ ಎಂಬ ನೆಲೆಯಿದ್ದೂ ಬದುಕಿನ ವಿಸ್ತಾರಗಳನ್ನೂ ಅಕ್ಷರಗಳಲ್ಲಿ ಶೋಧಿಸುವ ರೀತಿಯಾದರೆ</span> ; <span style="font-family: "tunga,sans-serif"; font-size: 12pt;">ಮೊದಲಿಗೆ ಬದುಕಿನ ವಿಸ್ತಾರಗಳನ್ನು ಅದರ ವೈರುಧ್ಯಗಳ ಮೂಲಕ, ಮಿತಿಗಳ ಮೂಲಕ ಶೋಧಿಸುತ್ತ ಇಷ್ಟೆ ಪ್ರಾಪ್ತಿ ಎಂಬ ನೆಲೆಗೆ ಬಂದು ನಿಲ್ಲುವುದು ಅಡಿಗರ ರೀತಿಯೇನೋ ಎಂದು ಓದುವಾಗಲೆಲ್ಲ ಅನಿಸುತ್ತದೆ. ಇಬ್ಬರ ಕಾಣ್ಕೆಗಳೂ ನಮ್ಮದೇ ಪರಿಸ್ಥಿತಿಗೆ ಸಹಜವಾಗಿ ಹೊಂದುತ್ತ ನಮ್ಮದೇ ಆಗಿಬಿಡುತ್ತವೆ. <span style="font-family: arial, helvetica, sans-serif;">ಬೀಜದಲ್ಲಡಗಿರುವ</span> ಕಳಿತ ಹಣ್ಣು ಎಂಬ ಸಾಲು ನಮ್ಮ ಯೋಚನೆಗಳನ್ನ ಅಸಂಖ್ಯ ದಿಕ್ಕುಗಳಲ್ಲಿ ಹರಿಸಲು ಸಾಧ್ಯವಾಗಬೇಕು. ಬದುಕಿನ ಅನಂತ ಸಾಧ್ಯತೆಗಳು ಹೇಗೆ ಎಲ್ಲಿ ಅಡಗಿರಬಹುದು, ಯಾವ ಬೆಳಕಿನ ಹಾದಿ, ಯಾವ ಹೊಸ ಬೆಳಕು, ಯಾವ ಯುಗಾದಿ ಅದನ್ನು ನಮಗೆ ಕಾಣಿಸಬಹುದು ಎಂಬ ಎಚ್ಚರ ಬೇಕು.</span> </div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga"; font-size: 12pt;">ಆಕಾಶಸಂಕ ಎಂದರೆ ಕಾಮನಬಿಲ್ಲು. ಯುಗಾದಿ ಕಾಮನಬಿಲ್ಲಿನ ಹಾಗೆ ಆ ಕ್ಷಣಕ್ಕೆ ಮನಕ್ಕೆ ಮುದವನ್ನೂ, ಭರವಸೆಯನ್ನೂ..ಈ ವಿಶಾಲ ಆಕಾಶದಲ್ಲಿ ನನಗಾಗಿಯೇ ಮುರಿದುಕೊಂಡು ಬಿದ್ದಿರುವ ಒಂದು ಸ್ವರ್ಗದ ತುಣುಕು ಎಂಬ ಆಶಾಭಾವನೆಯನ್ನೂ ಹುಟ್ಟಿಸಿ ಮತ್ತೆ ಅದೇ ಕಾಮನ ಬಿಲ್ಲಿನ ಹಾಗೆಯೇ ಮರೆಯಾಗುತ್ತದೆ. ಹೊಸವರ್ಷದ ಮೊದಲ ದಿನದ ಸಂಭ್ರಮ ವರ್ಷವಿಡಿಯ ನೌಕರಿ, ಮನೆ ನಿರ್ವಹಣೆ, ಪ್ರೇಮ, ಜಗಳ, ಮದುವೆ, ಮಕ್ಕಳು, ಸಾವು, ನೋವು, ಬಾರದ ಮಳೆ, ಹೆಚ್ಚಿದ ಬೆಲೆಯ ಮಧ್ಯೆ ಇದ್ದೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಹಾಗಂತ ಆ ಕ್ಷಣದ ಸಂಭ್ರಮ ಮತ್ತೆ ಮರುಕಳಿಸದೆ ಇರದು. ದೇವ ಮನ್ಮಥ ಇಕ್ಷುಚಾಪದ ಮ್ಯಾಜಿಕ್ಕಿನ ಹಾಗೆ ಬದುಕಿನ ನಿರಂತರತೆಯು ಕಡಿದಂತೆ ಕಂಡರೂ ಮತ್ತೆ ಮೊದಲಾಗಿ ತೊಡಗಿ ಮುದಗೊಳಿಸುತ್ತಲೆ ಇರುತ್ತದೆ. ಆದರೂ ಇದು ಈ ಕ್ಷಣದ ಸಂಭ್ರಮವೇ ಇರಬಹುದು. ಮತ್ತೆ ಬರಬಹುದಾದದ್ದೇ ಆದರೂ, ಸದಾ ಇದ್ದೇ ಇರುವುದಲ್ಲ..ಎಂದು ವಾಸ್ತವಕ್ಕೆ ಒತ್ತುಕೊಡುತ್ತಾರೆ ಅಡಿಗರು.</span></div>
<div style="background-color: white; color: #222222; font-family: Arial, Helvetica, sans-serif; font-size: small; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಹೀಗೆ ಯುಗಾದಿಯೆಂಬುದು ಕ್ಯಾಲೆಂಡರಿನ ರಜಾದಿನವಾಗಿ, ಪಂಚಾಂಗದ ಮೊದಲಾಗಿ, ಹಬ್ಬದೂಟವಾಗಿ, ನಿದ್ದೆಯ ಮಬ್ಬು ಕವಿವ ಮಧ್ಯಾಹ್ನವಾಗಿ, ಸೆಲ್ಫಿಯ ಪೋಸಾಗಿ, ಫಾರ್ವರ್ಡು ಶುಭಾಶಯವಾಗಿ ಮಾತ್ರವೇ ಆಗುಳಿಯದೆ ಈ ನಮ್ಮ ಅತ್ಯುತ್ತಮ ಕವಿಗಳ ಕುಸುರಿಯಲ್ಲಿ ಹಾದುಬಂದ ಕಾವ್ಯಗುಚ್ಛಗಳ ಓದಿನಲ್ಲಿ, ಮನನದಲ್ಲಿ ಹಾದು ನಮ್ಮ ಬದುಕಿನ ದಾರಿಯನ್ನ ಇನ್ನಷ್ಟು ಸ್ಪಷ್ಟಗೊಳಿಸುವ, ನಮ್ಮ ಮಿತಿಯನ್ನ ನಮಗೆ ಅರ್ಥ ಮಾಡಿಸುವ, ಮಿತಿ ಗೊತ್ತಾದ ಮೇಲೆ ಅದನ್ನು ದಾಟಿ ಮೇಲಕ್ಕೆ ಹಾರುವ ಸಂಕಲ್ಪವನ್ನು ಮನದಲ್ಲಿ ಮೂಡಿಸುವ, ಮಿಡಿಯೋಕ್ರಿಟಿಯನ್ನ ಒದರಿಬೀಳಿಸಿ ನಮ್ಮನ್ನ ಇನ್ನಷ್ಟು ಮಾನವೀಯವಾಗಿ ಸಹಬಾಳುವೆ ಮಾಡುವಂತೆ ಮಾಡುವ ಬದಲಾವಣೆಯ ಆದಿಯಾಗಲಿ ಎಂಬುದು ನನ್ನ ಆಶಯ. </span><span style="font-family: "tunga"; font-size: 12pt;">ನಮ್ಮ ಪರಿಸರ, ಸಮುದಾಯ ಇವೆಲ್ಲವನ್ನು ಜವಾಬ್ದಾರಿಯುತವಾಗಿ ಎಚ್ಚರಿಕೆಯಿಂದ ನೋಡಿಕೊಳ್ಳುವ, ಸ್ಪಂದಿಸುವ ಮನೋಭಾವ ನಮ್ಮದಾಗಲಿ. </span><span style="font-family: "tunga,sans-serif"; font-size: 12pt;">ಇದಕ್ಕೆ ಹದವಾಗಿ ಒದಗಿದ ನನ್ನ ನೆಚ್ಚಿನ ಕವಿಗಳಾದ ಕೆ.ಎಸ್.ನರಸಿಂಹಸ್ವಾಮಿಯವರಿಗೆ ಮತ್ತು ಗೋಪಾಲಕೃಷ್ಣ ಅಡಿಗರಿಗೆ </span><span style="font-family: "tunga"; font-size: 12pt;">ನಮಿಸುತ್ತ ಈ ಬರಹ ಮುಗಿಸುತ್ತೇನೆ.</span></div>
<div style="background-color: white; color: #222222; font-family: Arial, Helvetica, sans-serif; font-size: small; margin-bottom: 12px; margin-top: 12px; white-space: pre-wrap;">
<span style="font-family: "tunga,sans-serif"; font-size: 12pt;">ಹಳತೆಲ್ಲರ ನೋವು, ನಗೆಗಳ ಜೊತೆಗೆ, ಹೊಸತಿಗೆ, ಹೊಸನಾಳೆಗೆ, ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುತ್ತ ಈ ಯುಗಾದಿಯನ್ನು ಬರಮಾಡಿಕೊಳ್ಳೋಣ.</span></div>
</div>
ಸಿಂಧು sindhuhttp://www.blogger.com/profile/11363295766940671498noreply@blogger.com0tag:blogger.com,1999:blog-4515791944382207090.post-2123267866103630502020-01-21T15:26:00.002+05:302020-01-21T15:28:34.844+05:30ಸಾಧಾರಣ.<div dir="ltr" style="text-align: left;" trbidi="on">
<span style="font-family: "tunga";">ನಾನು ಸಾಧಾರಣ.</span><br />
<span style="font-family: "tunga";">ಬಾಲ್ಯದಲಿ ಶಾಲೆಯಲಿ..<br />ಮೊದಲ ಸಾಲಲಿ ಎದೆಯುಬ್ಬಿಸಿ ನಿಲುವವರ ಹಿಂದೆ,</span><br />
<span style="font-family: "tunga";">ಕೊನೆಯ ಸಾಲಲಿ ತಲೆತಗ್ಗಿಸಿ ನಿಲುವವರ ಮುಂದೆ,</span><br />
<span style="font-family: "tunga";">ಆಟದ ಮೈದಾನಿನಲಿ ಆಟದಲಿ ಗೆದ್ದವರ ಹಿಂದೆ,</span><br />
<span style="font-family: "tunga";">ಆಡುವವರ ಮಂದೆಯೊಳಗೊಂದೆ,</span><br />
<span style="font-family: "tunga";">ನಾನು ಸಾಧಾರಣ.</span><br />
<span style="font-family: "tunga";"><br /></span>
<br />
<div style="font-family: tunga;">
</div>
<span style="font-family: "tunga";">ಹಾಡುವವರ ಮೆಚ್ಚುತ ಚಪ್ಪಾಳೆ ಚಚ್ಚುತ,</span><br />
<span style="font-family: "tunga";">ನಾಟಕದ ಕಿರುಪಾತ್ರಕೆ ಬಣ್ಣ ಹಚ್ಚುತ,</span><br />
<span style="font-family: "tunga";">ಕಥೆಕವನ ಹೇಳುವವರ ಕೇಳುತ,</span><br />
<span style="font-family: "tunga";">ಹೊಸಹೊಸದ ಮಾಡುವವರ ನೋಡಿ ಬೆರಗಾಗುತ,</span><br />
<span style="font-family: "tunga";">ನಾನು ಸಾಧಾರಣ.</span><br />
<span style="font-family: "tunga";"><br /></span>
<br />
<div style="font-family: tunga;">
</div>
<span style="font-family: "tunga";">ಮೊದಲ ಸ್ಥಾನಬಂದವರಿಗೆ</span><br />
<span style="font-family: "tunga";">ನಮ್ಮಂತವರೇ ಕಾರಣ.</span><br />
<span style="font-family: "tunga";">ಸೋತು ನಿಂತವರಿಗೆ</span><br />
<span style="font-family: "tunga";">ನಮ್ಮಂತವರೇ ಮರುಪೂರಣ.</span><br />
<span style="font-family: "tunga";">ನಾನು ಸಾಧಾರಣ.</span><br />
<span style="font-family: "tunga";"><br /></span>
<br />
<div style="font-family: tunga;">
</div>
<span style="font-family: "tunga";">ಬೆಳೆಯುತ್ತ ಬೆಳೆಯುತ್ತ..</span><br />
<span style="font-family: "tunga";">ಉಪ್ಯೋಗಿಲ್ಲವೆಂಬ ಹಾಗೇನಿಲ್ಲ,</span><br />
<span style="font-family: "tunga";">ಎಲ್ಲೆಲ್ಲಿ ನೋಡಿದರಲ್ಲಲ್ಲಿ ಇಲ್ಲ,</span><br />
<span style="font-family: "tunga";">ಎಲ್ಲದರಲೂ ತೊಡಗುವ,</span><br />
<span style="font-family: "tunga";">ಎಲ್ಲಿಯೂ ಗೆದ್ದು ಮುಂದೋಡದ,</span><br />
<span style="font-family: "tunga";">ಎಂದಿಗೂ ಸೋತು ಕುಸಿದುಳಿಯದ,</span><br />
<span style="font-family: "tunga";">ನಾನು ಸಾಧಾರಣ.</span><br />
<span style="font-family: "tunga";"><br /></span>
<br />
<div style="font-family: tunga;">
</div>
<span style="font-family: "tunga";">ಈಗೀಗ ನಡುವಯದಲಿ..</span><br />
<span style="font-family: "tunga";">ಓಟದಲಿ ಮೊದಲು ಬರದ ಮಗು <br />ಮುಖ ತಗ್ಗಿಸಿ ಮನೆಗೆ ಬರುವಾಗ</span><br />
<span style="font-family: "tunga";">ನನ್ನ ಸೋಲಿನ ಕತೆ, ಹೇಳಲು ಇದೆ,</span><br />
<span style="font-family: "tunga";">ಎಂಬುದೆ ಸಮಾಧಾನ,</span><br />
<span style="font-family: "tunga";">ಸಾಧಾರಣ ಸಮಾಧಾನ.</span><br />
<span style="font-family: "tunga";"><br /></span>
<span style="font-family: "tunga";">ಮೊದಲ ಮೂರು ಸ್ಥಾನ ಯಾವಾಗಲೂ </span><br />
<span style="font-family: "tunga";">ಆ ಮೂವರಿಗೆ ಎಂದು ಹೊಟ್ಟೆಕಿಚ್ಯಾಕೆ!</span><br />
<span style="font-family: "tunga";">ನಿನ್ನ ನಾಕನೆ ಸ್ಥಾನದ ಮೇಲ್ಯಾರಿಗೂ </span><br />
<span style="font-family: "tunga";">ಕಣ್ಣಿಲ್ಲ, ಸೇಫು ಜಾಗ, ಎಂಬ ಕಚಗುಳಿಗೆ</span><br />
<span style="font-family: "tunga";">ಮಕ್ಕಳು ನಗುವಾಗ ಸಾಂತ್ವನ.</span><br />
<span style="font-family: "tunga";">ನಾನು ಸಾಧಾರಣ.</span><br />
<span style="font-family: "tunga";"><br /></span>
<br />
<div style="font-family: tunga;">
</div>
<span style="font-family: "tunga";">ಹೂಂ ಅದೇ, ಪೇಟೆ ಭಾಷೆಲಿ ಆವರೇಜ್.</span><br />
<span style="font-family: tunga;">ಫೋಟೋ ಶೂಟಿಗೆ ಒದಗದ </span><br />
<span style="font-family: "tunga";">ಇನ್ಸ್ಟಾ</span><span style="font-family: "tunga";">ದ</span><span style="font-family: "tunga";">ಲಿ ಹೊರಳದ ಕವರೇಜ್.</span></div>
ಸಿಂಧು sindhuhttp://www.blogger.com/profile/11363295766940671498noreply@blogger.com3tag:blogger.com,1999:blog-4515791944382207090.post-35890830654830590282019-11-19T18:58:00.003+05:302019-11-19T18:58:33.943+05:30ಹೊಳ್ಳಿ ಹೋಗಲು ಬರದ ಹಾದಿ<div dir="ltr" style="text-align: left;" trbidi="on">
<span style="font-family: 'tunga';">ಸಿಟ್ಬಂತು, ಖುಶಿಯಾಯ್ತು</span><br />
<span style="font-family: 'tunga';">ಅಳು ಒತ್ತಿಹಿಡಿದಿರುವೆ</span><br />
<span style="font-family: 'tunga';">ಆತಂಕದಲ್ಲಿ ನರಳಿರುವೆ</span><br />
<span style="font-family: 'tunga';">ಮನದ ಮಾತು ತುಟಿಗೆ ಬರದ ಹಾಗೆ ತಡೆದಿರುವೆ</span><br />
<span style="font-family: 'tunga';">ಓಹ್ ಕೂಡಲೆ ಹೊರಟೆ</span><br />
<span style="font-family: 'tunga';">ನನ್ನ ರಹಸ್ಯತಾಣಕ್ಕೆ</span><br />
<span style="font-family: 'tunga';">ಅಕ್ಷರಗಳ ಪಾಕವಿಳಿಸಿ</span><br />
<span style="font-family: 'tunga';">ಲಹರಿಗಳ ಸಾಲಲ್ಲಿ ಇರಿಸಿ</span><br />
<span style="font-family: 'tunga';">ಹಗುರಾಗಿ, ಮೆದುವಾಗಿ</span><br />
<span style="font-family: 'tunga';">ಬಿರಿದ ಗಾಯಕ್ಕೆ ಮುಲಾಮು ಸವರಿ</span><br />
<span style="font-family: 'tunga';">ಮತ್ತೆ ನನ್ನ ಜಗಲಿಗೆ, ಮನೆಗೆ ವಾಪಸ್.</span><br />
<span style="font-family: 'tunga';"><br /></span>
<span style="font-family: 'tunga';">ನೀನು ಒಮ್ಮೆ ಇದೆಲ್ಲ ಓದಿ</span><br />
<span style="font-family: 'tunga';">ಎಷ್ಟು ಚಂದಿದೆ ಹೇಳಿ</span><br />
<span style="font-family: 'tunga';">ಸ್ಪರ್ಧೆಗೆ ಕಳಿಸಿ...<br /></span><br />
<span style="font-family: 'tunga';">ಈಗ ಬಹುಮಾನದ ಮೇಲೆ ಬಹುಮಾನ</span><br />
<span style="font-family: 'tunga';">ಯಾವುದೇ ಸಾಲು ಮೂಡಿದ ಕೂಡಲೆ</span><br />
<span style="font-family: 'tunga';">ಅದನ್ನ ವಿಮರ್ಶಿಸಿ</span><br />
<span style="font-family: 'tunga';">ಬರೆದ ಸಾಲುಗಳ ನಡುವಿನ ಮೌನವನ್ನು</span><br />
<span style="font-family: 'tunga';">ಆಡದೆ ಉಳಿದ ಮಾತುಗಳನ್ನು</span><br />
<span style="font-family: 'tunga';">ತುಂಡರಿಸಿ ಚೆಂದಗೆ ಅಲಂಕರಿಸಿ</span><br />
<span style="font-family: 'tunga';">ನಿಲ್ಲಿಸುತ್ತಾರೆ ಎಲ್ಲರೂ.</span><br />
<span style="font-family: 'tunga';"><br /></span>
<span style="font-family: 'tunga';">ನಾನು ಈಗ ಎಲ್ಲ ಕಡೆಯೂ</span><br />
<span style="font-family: 'tunga';">ಕುದಿಯುತ್ತಿರುತ್ತೇನೆ</span><br />
<span style="font-family: 'tunga';">ಬಿಗಿದಿಟ್ಟ ತಂತಿಯ ವಾದ್ಯದ ಹಾಗೆ</span><br />
<span style="font-family: 'tunga';">ಚೀರುತ್ತೇನೆ</span><br />
<span style="font-family: 'tunga';">ಅರಳುಮೊಗ್ಗು ಸುಮ್ಮನೆ ಗಾಳಿಗೆ ಹಾಗೆ ಕದಲಿದರೆ</span><br />
<span style="font-family: 'tunga';">ಸಿಟ್ಟುಕ್ಕಿ ಸಿಡಾರನೆ ದೂಡಿ ನಡೆದುಬಿಡುತ್ತೇನೆ.</span><br />
<span style="font-family: 'tunga';">ನನ್ನ ಮನಸು ನನಗೂ ಅರ್ಥವಾಗದಷ್ಟು ಗೋಜಲಾಗಿದ್ದೇನೆ :(</span><br />
<br />
<span style="font-family: 'tunga';">ಇದು ಹೊಳ್ಳಿ ಹೋಗಲು ಬರದ ಹಾದಿ.</span></div>
ಸಿಂಧು sindhuhttp://www.blogger.com/profile/11363295766940671498noreply@blogger.com2tag:blogger.com,1999:blog-4515791944382207090.post-21478772875234457472019-05-06T15:10:00.001+05:302019-05-06T15:10:17.970+05:30ಮಾತು, ಮೌನದ ಗೆರೆಯ ನಡುವೆ..<div dir="ltr" style="text-align: left;" trbidi="on">
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px;">
ಮಾತನಾಡುತ್ತ ಆಡುತ್ತ ,</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px;">
ನೀನು ಹೂಂಗುಡುವ ಹೊತ್ತು<br />ಕೇಳುವ ನನಗೆ ಗೊತ್ತು:<br />ನುಗ್ಗಿ ನುರಿಯಾದ ಚಿತ್ತ<br />ಈಗಿಲ್ಲ ಇತ್ತ;<br />ಬೇಸರದಿ ಮುದುಡುತ್ತ,<br />ಒಳಗೊಳಗೆ ಸರಿಯುತ್ತ,<br />ಹರಿವು ಬಂದತ್ತ ಹರಿಯುತ್ತ,<br />ಮಾತು ಮರೆತಿರುವ ಹೊತ್ತು.</div>
<div style="background-color: white; color: #1d2129; display: inline; font-family: Helvetica, Arial, sans-serif; font-size: 14px; margin-top: 6px;">
ಉಳಿದ ಮಾತು ನೆನಪಾದರೆ ನಾಳೆಯಿದೆಯೆನ್ನುತ್ತ<br />ಫೋನಿಡುವ ಮನದ ಹುತ್ತ-<br />-ವೊಡೆದರೆ ಶೋಕಭರಿತ ಕಾವ್ಯ ಉನ್ಮತ್ತ.</div>
</div>
ಸಿಂಧು sindhuhttp://www.blogger.com/profile/11363295766940671498noreply@blogger.com3tag:blogger.com,1999:blog-4515791944382207090.post-23984812082380370992019-05-06T13:56:00.002+05:302019-05-06T15:08:01.899+05:30ಯಾರು ಜೀವವೇ ಯಾರು ಬರೆದವರು..?<div dir="ltr" style="text-align: left;" trbidi="on">
<span style="font-family: "tunga";">ಮೊದಮೊದಲು ಬರೆದಾಗ ಅಂದುಕೊಂಡೆ:</span><br />
<span style="font-family: "tunga";">ನನ್ನ ಮನದ ದುಗುಡವಾರಿಸಲು ಬರೆಯುತಿರುವೆ</span><br />
<span style="font-family: "tunga";">ಆಮೇಲಾಮೇಲೆ</span><br />
<span style="font-family: "tunga";"> ಓದಿದವರ ಆಹಾ...ಚೆನಾಗಿದೆ ಕೇಳಲು ಬರೆಯುತಿರುವೆ</span><br />
<span style="font-family: "tunga";"> ನಾನು ಮೆಚ್ಚುವವವರು ಮೆಚ್ಚಲು ಬರೆಯುತಿರುವೆ</span><br />
<span style="font-family: "tunga";"> ಇಂದು ನನ್ನ ಲೇಖನಿ ಕಸಿಯುವವಳು ಎಂದಾದರೂ ಓದಲೆಂದು ಬರೆಯುತಿರುವೆ</span><br />
<span style="font-family: "tunga";"> ಎಳೆಬೆನ್ನ ಮೇಲೆ ಸೆಳೆದ ನನ್ನದೇ ಕೈಯ ಹಕೀಕತ್ತು ನನಗೇ ಗೊತ್ತಾಗಲು ಬರೆಯುತಿರುವೆ</span><br />
<span style="font-family: "tunga";"> ....</span><br />
<span style="font-family: "tunga";">ಮತ್ತೆ ಈಗೀಗ:</span><br />
<span style="font-family: "tunga";">ನನ್ನ ಮನದ ದುಗುಡವಾರಿಸಲು ಬರೆಯುತಿರುವೆ;</span><br />
<span style="font-family: "tunga";">ಆರುವುದೋ, ತೀರುವುದೋ..ಮತ್ತೆ ಹೊತ್ತಿ ಉರಿಯುವುದೋ</span><br />
<span style="font-family: "tunga";">ತಿಳಿದವಳಲ್ಲ.</span><br />
<span style="font-family: "tunga";">ದುಗುಡವಾರಲೆಂಬ ಹಂಬಲ ಮತ್ತು ಅಸಹಾಯಕತೆ</span><br />
<span style="font-family: "tunga";">ಯಲಿ ಮುಳುಗಿ ಬರೆವ ಕ್ಷಣಗಳಲಿ ನಾನು ನಾನಲ್ಲ.</span><br />
<span style="font-family: "tunga";">ಬರೆವಾಗ ಇರುವವಳು </span><br />
<span style="font-family: "tunga";">ಕರೆದಾಗ ಬರದವಳು</span><br />
<span style="font-family: tunga;">ಬರೆದ ಮೇಲೆ ಇರುವವಳಲ್ಲ.</span></div>
ಸಿಂಧು sindhuhttp://www.blogger.com/profile/11363295766940671498noreply@blogger.com1tag:blogger.com,1999:blog-4515791944382207090.post-28505274082953884482019-02-11T17:10:00.002+05:302019-02-11T17:11:08.518+05:30ವ್ಯಾಕರಣ<div dir="ltr" style="text-align: left;" trbidi="on">
<span style="font-family: "tunga";">ನೀನು ನನ್ನ ಬದುಕಿನ ಮಹಾಪ್ರಾಣ </span><br />
<span style="font-family: "tunga";">ಅನ್ನುವುದೆಲ್ಲ ನಿಜ.</span><br />
<span style="font-family: "tunga";">ಆದರೆ ಬದುಕಿನ ಕಾಗುಣಿತದಲ್ಲಿ</span><br />
<span style="font-family: "tunga";">ತಲೆಗಟ್ಟು, ಇಳಿ, ಕೊಂಬು, </span><br />
<span style="font-family: "tunga";">ದೀರ್ಘ, ಅನುಸ್ವಾರ, ವಿಸರ್ಗ, </span><br />
<span style="font-family: "tunga";">ಅರ್ಕಾವತ್ತು, ಮತ್ತು ಒತ್ತಕ್ಷರಗಳ </span><br />
<span style="font-family: "tunga";">ಹಿಂಡೇ ಇದೆ.</span><br />
<span style="font-family: "tunga";">ನಾನು ಬದುಕೆಂಬ ಭಾಷೆಯನ್ನು ಹಿಂಡುತ್ತ ಇರುವಾಗ</span><br />
<span style="font-family: "tunga";">*ಹಿಂಡಬಾರದು ದುಂಡುಮಲ್ಲಿಗೆಯ ದಂಡೆಯನು*</span><br />
<span style="font-family: "tunga";">ಎಂದು ಕೆ.ಎಸ್.ನ. ಕವಿತೆ ಓದಿದೆ.</span><br />
<span style="font-family: "tunga";">ಈಗ ಭಾಷೆಯನ್ನು ಮರೆತಿರುವೆ</span><br />
<span style="font-family: "tunga";">ಹಿಂಡುವ ಬದುಕಿನ ತಿರುಗಣಿಗೆ </span><br />
<span style="font-family: "tunga";">ನನ್ನನು ನಾನೇ ಒಪ್ಪಿಸಿಕೊಂಡಿರುವೆ</span><br />
<span style="font-family: "tunga";">ಒಮ್ಮೊಮ್ಮೆ ಗಾಳಿ ಬೀಸುವುದು</span><br />
<span style="font-family: "tunga";">ಕಥೆ ಕವಿತೆ ಇಂಪುಲಿ ಮತ್ತು ಮಕ್ಕಳನಗೆಯಂತೆ.</span><br />
<span style="font-family: "tunga";">ಮರೆತಿದ್ದರೂ ಎಲ್ಲ ವ್ಯಾಕರಣ</span><br />
<span style="font-family: "tunga";">ತಿರುಗತಲಿಹುದು ಗಾಣ</span><br />
<span style="font-family: tunga;">ಅದಕೆ ನೀನೇ ಕಾರಣ.</span></div>
ಸಿಂಧು sindhuhttp://www.blogger.com/profile/11363295766940671498noreply@blogger.com1tag:blogger.com,1999:blog-4515791944382207090.post-28130280094381174652019-02-11T12:55:00.003+05:302019-02-11T17:52:53.772+05:30<div dir="ltr" style="text-align: left;" trbidi="on">
<span style="font-family: "tunga";">ಗತಿ ನಿರ್ಧರಿಸದೆ ಅತ್ತಿತ್ತ ತಿರುಗುವ ಹೆಜ್ಜೆ</span><br />
<span style="font-family: "tunga";">ನಿಂತುಬಿಟ್ಟಿತು:</span><br />
<span style="font-family: "tunga";">ಇನ್ನೇನು-</span><br />
<span style="font-family: "tunga";">ಹನಿಯಿಳಿಯಲು ಅಣಿಯಾದ ಬನಿಸಂಜೆ</span><br />
<span style="font-family: "tunga";">ಗಿಜಿಗಿಟ್ಟುವ ಬೀದಿ, ಪಾದಪಥ, ಅಂಗಡಿ ಮುಂಗಟ್ಟೆ</span><br />
<span style="font-family: "tunga";">ಕೊಳ್ಳುವಿಕೆಯಿಂದ ಬೀಗುವ ಚೀಲದ ಹೊಟ್ಟೆ</span><br />
<span style="font-family: "tunga";">ಸರಸರನೆ ಸರಿವ ನೂರಾರು ಚಹರೆ</span><br />
<span style="font-family: "tunga";">-ಗಳ ನಡುವೆ ದಿಟ್ಟಿಸಿ ನೋಡುತ ನಿಂತವನ </span><br />
<span style="font-family: "tunga";">ನೋಡುತ</span><span style="font-family: "tunga";">ನಿಂತುಬಿಟ್ಟಿತು</span><br />
<span style="font-family: "tunga";">ಹೆಜ್ಜೆ, ಕಣ್ಣು, ಯೋಚನೆ, ಕಾಲ</span><br />
<span style="font-family: "tunga";">ಮರೆತವು ಎಲ್ಲ</span><br />
<span style="font-family: "tunga";">"ಬಿಚಿ" "ಡಿಚಿ" ರಂಪ ರಾದ್ಧಾಂತ</span><br />
<span style="font-family: "tunga";">ಜತೆಹಾದಿಯ ಪಯಣಾಂತ್ಯ :(</span><br />
<span style="font-family: "tunga";">ಹೇಗಿದ್ದೀ ಎಂ</span><span style="font-family: "tunga";">ದಿಷ್ಟು</span><br />
<span style="font-family: "tunga";">ಮಣಮಣಿಸಿ</span><br />
<span style="font-family: "tunga";">ಮಾತು ಮರಣಿಸಿ, </span><br />
<span style="font-family: "tunga";">ಮೌನ ತಳಮಳಿಸಿ</span><br />
<span style="font-family: "tunga";">..................ಕೈಬೀಸಿ</span><br />
<span style="font-family: "tunga";">ಪಟಪಟನೆ ಹೆಜ್ಜೆ ಹೊರಟಿತು-</span><br />
<span style="font-family: "tunga";">ಹೆಜ್ಜೆ, ಕಣ್ಣು, ಯೋಚನೆ, ಕಾಲ</span><br />
<span style="font-family: "tunga";">ಚಲಿಸತೊಡಗಿ</span><br />
<span style="font-family: "tunga";">ಹನಿಯುದುರುವ ಸಂಜೆ</span><br />
<span style="font-family: "tunga";">-ಯಲ್ಲಿ ಬಜಾರು ಬೀದಿಯಲ್ಲಿ ಓಡಾಡುವ </span><br />
<span style="font-family: "tunga";">ಖುಷಿ ಕರಗಿ ನೀರಾಗಿ;</span><br />
<span style="font-family: "tunga";">ದಿನಪತ್ರಿಕೆಯಲ್ಲಿ ಸುದ್ದಿ ಬಂತು-</span><br />
<span style="font-family: "tunga";">"60ಮಿ.ಮೀ ಮಳೆ, ರಸ್ತೆ ತುಂಬ ಹರಿದ ಕೊಳೆ."</span></div>
ಸಿಂಧು sindhuhttp://www.blogger.com/profile/11363295766940671498noreply@blogger.com1tag:blogger.com,1999:blog-4515791944382207090.post-16817884422811981682018-12-04T20:01:00.003+05:302018-12-04T20:01:28.823+05:30ಹಬ್ಬವೆಂಬ ರೂಪಕ<div dir="ltr" style="text-align: left;" trbidi="on">
(2018<span style="font-family: 'tunga';">ರ ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲಿ ನನ್ನ ಲೇಖನ.)</span><br />
<span style="font-family: 'tunga';"><br /></span>
ಪ್ರತೀ ದೀವಳಿಗೆಯಲ್ಲೂ ಕತ್ತಲಿನಿಂದ ಬೆಳಕಿನೆಡೆಗೆ ಅಜ್ಞಾನದಿಂದ ತಿಳುವಳಿಕೆಯೆಡೆಗೆ ನಡೆಯುವ ಪ್ರತಿಮೆಯಾಗಿ ಈ ಹಬ್ಬವನ್ನು ಎಲ್ಲರೂ ವಿವರಿಸುತ್ತಿರುತ್ತಾರೆ. ನಗರಕೇಂದ್ರಿತ ಕೆಲಸ,ಬೊಗಸೆ ಮತ್ತು ವಲಸೆಯ ಈ ಕಾಲದಲ್ಲಿ ಬೆಳಕು ಚೆಲ್ಲಾಡುತ್ತಲೆ ಇದೆ. ಪ್ರಪಂಚದೆಲ್ಲೆಡೆಯ ಜ್ಞಾನ ಟೀವಿ ಮೊಬೈಲುಗಳಿಂದ ವಿಂಗಡಿಸಲು ಅಸಾಧ್ಯವಾಗುವಷ್ಟು ಬೇಗ ನಮ್ಮ ಮುಂದೆ ಶೇಖರಣೆಯಾಗುತ್ತಿದೆ. ಯಾವ ಜ್ಞಾನ ಯಾರಿಗೆ ಬೇಕು ಎಂಬುದರ ವಿವೇಕ ಮಾತ್ರ ಈ ಎಲ್ಲ ಝಗಮಗದ ತೀವ್ರ ಕೋರೈಸುವಿಕೆಯನ್ನು ತಡೆಯಲಾಗದೆ, ಕತ್ತಲ ಆಳದಲ್ಲಿ ಮರೆಯಲ್ಲಿ ಕೂತು ಕಣ್ಣು ನೇವರಿಸಿಕೊಳ್ಳುತ್ತಿದೆ.<br />
ದೀಪಾವಳಿಯೆಂದರೆ ಸುಗ್ಗಿ, ಭೂಮಿ ಪೂಜೆ, ನೀರು ಪೂಜೆ, ಆಕಾಶ(ಬೆಳಕು) ಪೂಜೆ, ಆದ ಈ ಹಬ್ಬ ಇವತ್ತು ಬರಿದೆ ಹೊಸಬಟ್ಟೆ, ಹೊಸವಸ್ತು, ಮತ್ತು ಹೊಸಹೊಸ ಸೆಲ್ಪೀಗಳ ಸಂಭ್ರಮವಾಗಿ ಬದಲಾಗುತ್ತಿರುವುದನ್ನು ಕಂಡಾಗ ಮನಸ್ಸು ಮ್ಲಾನವಾಗುತ್ತದೆ. ನಗರದ ಬದುಕಿನಿಂದ ತೀವ್ರ ಪ್ರಭಾವಿತವಾದ ಹಳ್ಳಿಗಳಲ್ಲೂ ಈಗ ಹಬ್ಬ ಹೋಗಿಬಿಟ್ಟಿದೆ. ಪೂಜೆ ಮತ್ತು ಆಚರಣೆ ಮಾತ್ರ ಉಳಿದುಬಿಟ್ಟಿದೆ. ಆದರೂ ಹಳ್ಳಿಗಳಲ್ಲಿ ನಮ್ಮ ವಿದ್ಯುದ್ಮಂಡಳಿಯ ಕೃಪೆಯಿಂದಾಗಿ ಕತ್ತಲಿನ ಸಂಜೆಗಳು ಸಿಗುತ್ತವೆ ಹಚ್ಚಿದ ದೀಪದ ಪುಟ್ಟ ಬೆಳಕಿನಲ್ಲಿ ಒಂದು ಮಾತಿಗೆ ಮೀರಿದ ಸಾಂತ್ವನ ಮಿನುಗುತ್ತದೆ. ಇದು ಬೇಕಿಲ್ಲದೆ, ಗೊತ್ತಿಲ್ಲದೆ ಸಿಗುವ ಸಾಂತ್ವನವಾದ್ದರಿಂದ ಎಲ್ಲರ ಬಯ್ಗುಳಗಳಲ್ಲೆ ಈ ಬೆಳಕು ಮತ್ತು ಕತ್ತಲೆ ತೃಪ್ತಿ ಪಡಬೇಕಿದೆ.<br />
ಒಳ್ಳೆಯ ಮಳೆ ಬಿದ್ದು, ಭೂಮಿಹೊಲಗಳೆಲ್ಲ ಫಲವತ್ತಾಗಿ ಬೀಗುವಾಗ ಮಳೆ ಕಳೆದು ಚಳಿಗಾಳಿಯ ಹೊಡೆತ ಶುರುವಾಗುವ ಮೊದಮೊದಲ ವಾರಗಳಲ್ಲಿ ಬರುವ ಈ ಹಬ್ಬದ ಸುತ್ತಲೂ ಸಮುದಾಯದ ಇಡೀ ವರ್ಷದ ಬದುಕು ಮತ್ತು ಸಂಭ್ರಮ ಸುತ್ತಿಕೊಂಡಿರುತ್ತಿದ್ದ ಕಾಲವೊಂದಿತ್ತು. ಪ್ರಕೃತಿಯ ಬದಲಾವಣೆಗೆ ತನ್ನನ್ನು ಹೊಂದಿಸಿಕೊಂಡು ಅದರಿಂದಲೆ ತನ್ನ ಒಳಿತನ್ನು ಹೂಡಿಕೆ ಮಾಡಿ ಅದರ ಬಡ್ಡಿ ದೀಪದ ಬೆಳಕಲ್ಲಿ ಮಿನುಗುವ ಈ ಹಬ್ಬದ ಗ್ರಾಮ್ಯ ಪರಿಭಾಷೆ ಇವತ್ತು ಗ್ಲೋಬಲ್ ವಿಲೇಜಿನ ತನಗೆ ಬೇಕಾದಂತೆ ಮಾರ್ಪಡಿಸಿಕೊಂಡು ತನ್ನ ಸಮಯಕ್ಕೆ ತಕ್ಕಂತೆ ಹೊಂದಿಸಿಕೊಂಡು ಸಾಲದ ಬಡ್ಡಿ ಕಟ್ಟುತ್ತಾ ಮತಾಪು ರಾಕೆಟ್ಟುಗಳನ್ನು ಹಾರಿಸುತ್ತಾ ಝಗಮಗಿಸುವ ದೀಪದ ಸಾಲುಗಳನ್ನು ಕಟ್ಟುವ ನಗರದ ಪ್ರಗತಿಯ ಪರಿಭಾಷೆಯಾಗಿ ಬದಲಾಗಿದೆ. ಭೂಚಲನೆಯನ್ನು, ಗ್ರಹತಾರೆಗಳ ಚಲನೆಯನ್ನು ತನ್ನ ಮನಸ್ಸಿಗೆ ಬಂದಂತೆ ಬದಲಾಯಿಸಬಹುದಾದ ವಿಪರೀತ ಪರಿಸ್ಥಿತಿಯಿಲ್ಲದೆ ಇರುವುದರಿಂದಾಗಿ ಮಳೆ,ಗಾಳಿ,ಹೊಳೆ, ಬೆಳಕು ಇವು ತನ್ನ ಪಾಡಿಗೆ ಹೇಗೋ ನಡೆದುಕೊಂಡಿದೆ. ಇದೆಲ್ಲ ಯಾರೂ ತಡೆಯಲಾಗದ, ತಡೆಯಲೂಬಾರದ ಬೆಳವಣಿಗೆಯೆ. ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿರುವ ಜಗತ್ತು ಒಂದು ಕ್ಷಣವನ್ನೂ ಪೋಲು ಮಾಡದೆ ಬದಲಾಗುತ್ತಲೆ ಇರುತ್ತದೆ. ಬದಲಾವಣೆಗಳನ್ನ ತಡೆಯಲಾಗುವುದಿಲ್ಲ ಎನ್ನುವುದು ಎಷ್ಟು ನಿಜವೋ ಆ ಬದಲಾವಣೆಗಳ ಜತೆಗೆ ನಾವೂ ಹೋಗದೆ ಇದ್ದರೆ ನಿಂತನೀರಿನ ಹಾಗೆ ಕೊಳೆತುಹೋಗುತ್ತೇವೆ ಎನ್ನುವುದೂ ಅಷ್ಟೆ ನಿಜ. ಬದಲಾವಣೆಗಳ ಜೊತೆಗೆ ಸಾಗುವಾಗ ಹಳೆಯ ವಿವೇಕವನು ಮರೆಯದೆ, ನಮ್ಮ ಅಂತರಂಗದಲಿ ಕತ್ತಲಲಿ ಹಣತೆಯೊಂದನು ಹಚ್ಚಿಕೊಳ್ಳುವುದನ್ನು ನಾವು ಕಲಿಯಬೇಕಿದೆ. ಹಂಬಲವಿದ್ದರೆ ಮಾತ್ರ ಸಾಧ್ಯವೇನೋ. ಹಂಬಲವಿದ್ದರೆ ಪ್ರಕೃತಿಯೂ ಜೊತೆಗೂಡುತ್ತದೆಯೇನೋ.<br />
<br />
ಮೊದಲಿನಿಂದ ಹೇಳುವುದಾದರೆ ಆದಿಕವಿಯ ರೂಪಕವೊಂದನ್ನ ನೋಡುವ. ತನ್ನ ತಂದೆಯು ತಾಯಿ ಕೈಕೇಯಿಗೆ ಕೊಟ್ಟ ಮಾತಿನ ಸತ್ಯವನ್ನು ಉಳಿಸಲು ರಾಮ ಕಾಡಿಗೆ ಹೋಗುತ್ತಾನೆ. ಈ ಎಲ್ಲ ಘಟನೆಗಳೂ ಭರತನಿಗೆ ರಾಮ ಕಾಡಿಗೆ ಹೋದ ಮೇಲೆ, ತಂದೆ ದಶರಥ ತೀರಿಕೊಂಡ ಮೇಲೆ ತಿಳಿದುಬರುತ್ತದೆ. ಅಜ್ಜನಮನೆಯಿಂದ ಬಂದ ಭರತನಿಗೆ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಈ ರಾಜ್ಯ, ರಾಜ್ಯಭಾರ, ಅಣ್ಣ, ಅಪ್ಪ, ಅಮ್ಮ ಎಲ್ಲರೂ ಎಲ್ಲವೂ ಬದಲಾಗಿಹೋಗಿದೆ. ಬೇಡದೆ ಆದ ಬದಲಾವಣೆಯನ್ನು ಅರಗಿಸಿಕೊಳ್ಳಲಾಗದ ಭರತನೂ ಕಾಡಿಗೆ ಹೊರಡುತ್ತಾನೆ. ಅಣ್ಣನ ಮನವೊಲಿಸಿ ವಾಪಸ್ ಕರೆತರುವ ಆಶೆಯಲ್ಲಿ. ಚಿತ್ರಕೂಟದಲ್ಲಿ ಪರಿಪರಿಯಾಗಿ ಕೇಳಿಕೊಳ್ಳುವ ಅವನಿಗೆ ತನ್ನ ಪ್ರಯತ್ನದ ನಿರರ್ಥಕತೆ ಗೊತ್ತಾಗುತ್ತದೆ.<br />
ತಂದೆಯ ಮಾತಿನ ಸತ್ಯವನ್ನು ಮಗನಾಗಿ ಉಳಿಸಬೇಕಾದ ತನ್ನ ಜವಾಬ್ದಾರಿ, ಮತ್ತು ತಂದೆಯಿಲ್ಲದಿರುವಾಗ ರಾಜನಿಲ್ಲದೆ ಅರಾಜಕವಾದ ರಾಜ್ಯದ ಹೊಣೆಯನ್ನು ರಾಜನಾಗಿ ನಿರ್ವಹಿಸಬೇಕಾದ ಭರತನ ರಾಜಧರ್ಮ ಇವನ್ನು ರಾಮನು ಭರತನಿಗೆ ತಿಳಿಸುತ್ತಾನೆ. ಭರತನೂ ವಿವೇಕವಂತ, ತಿಳಿವಳಿಕೆಯುಳ್ಳವ ಮತ್ತು ಸಮರ್ಥ ರಾಜಕುವರನೇ. ಎಷ್ಟು ಹೇಳಿದರೂ ಅವನ ಮನಸ್ಸು ರಾಮನಿಲ್ಲದ ರಾಜ್ಯವನ್ನು ಕಲ್ಪಿಸಿಕೊಳ್ಳಲೂ ಒಪ್ಪುವುದಿಲ್ಲ. ರಾಮನಿಗೆ ಅವನ ದಾರಿ ಸ್ಪಷ್ಟವಾಗಿದೆ. ತಂದೆಯ ಮಾತನ್ನು ಪಾಲಿಸುವುದು ಮತ್ತು ವನವಾಸ.<br />
ಭರತನಿಗೆ ಸಂದಿಗ್ಧ. ಮನಸಿನ ಮಾತಿಗೆ ಕಿವಿಗೊಡುವ ಅವನಿಗೆ ರಾಜಧರ್ಮವನ್ನು ಬಿಡಲೂ ಆರ. ತಾನು ರಾಜನಾಗಲೂ ಆರ. ಅವನು ರಾಮನ ಜೊತೆಗೆ ಕಾಡಿಗೆ ಹೋಗಲಾರ. ಬೇಡವೆಂದು ಬಿಟ್ಟು ಬಂದ ಅಯೋಧ್ಯೆಯ ರಾಜತ್ವಕ್ಕೆ ಮರಳಲೂ ಆರ. ಕವಿ ವಾಲ್ಮೀಕಿ ಇಲ್ಲಿ ನಂದಿಗ್ರಾಮವನ್ನು ಸೃಷ್ಟಿಸುತ್ತಾರೆ. ತಾನು ರಾಜನಾಗದೆ, ರಾಜಧರ್ಮವನ್ನೂ ಬಿಡದೆ, ತನ್ನ ಮನಸ್ಸಿಗೆ ವಿರುದ್ಧವಾಗದ ಹಾಗೆ ರಾಮನನ್ನೆ ಮುಂದಿಟ್ಟು ಬಯಸದೆ ಬಂದ ರಾಜತ್ವವನ್ನು ಬದಿಗಿಟ್ಟು ಗ್ರಾಮರಾಜ್ಯವನ್ನು ಭರತ ನಿರ್ವಹಿಸುವ ಹಾಗೆ ಮಾಡುತ್ತಾರೆ.<br />
ನಾವು ನಮ್ಮ ಗ್ರಾಮಕ್ಕೆ ಮೂಲಕ್ಕೆ ಹೋಗಲಾರೆವು. ನಗರದ ಝಗಮಗ ಪ್ರಗತಿಯಲ್ಲಿ ಬಾಳಲೂ ಬಯಸೆವು. ಆದರೆ ಮಧ್ಯದ ಒಂದು ನಂದಿಗ್ರಾಮವನ್ನು ಇವೆರಡರ ನಡುವಿನ ಸೇತುವೆಯನ್ನು ಕಟ್ಟಲಾರೆವೇ? ಗೊಲ್ಲ ಕೃಷ್ಣ ಗೋಕುಲದಿಂದ ಮಥುರೆಯ ರಾಜಬೀದಿಗೆ ಬಂದಮೇಲೆ ಅವನು ಗೊಲ್ಲನಾಗಿ ಉಳಿಯಲೇ ಇಲ್ಲ. ಕೊಳಲ ತೊರೆದ, ಚಕ್ರ ಧರಿಸಿದ ಎಂದು ಓದಿದ್ದೇವೆ. ನಿಜಕ್ಕೂ ಹೌದೆ? ಅವನು ಮಥುರೆಯಲ್ಲಿ ಗೋಕುಲದ ಛಾಯೆ ತರಲಿಲ್ಲವೆ? ಅಣ್ಣತಮ್ಮಂದಿರ ಕಚ್ಚಾಟದ ರಾಜ್ಯಗಳಲ್ಲಿಯೂ ಅವನು ಒಳಿತಿನ ಬೀಜ ಬಿತ್ತಲಿಲ್ಲವೆ?<br />
ಗರ್ವದಿಂದ ಮೆರೆವ ರಾಜರ ತೊಡೆ ಮುರಿವ, ಕತ್ತು ಸೀಳುವ ಕೃಷ್ಣ ಅಲ್ಲಲ್ಲೆ ಭಾವಸೇತುವೆಯ ಕಟ್ಟುತ್ತ ಮಡದಿಯರ ಮನವನ್ನು ಕದಿಯಲಿಲ್ಲವೆ? ಭಕ್ತಿಯಿಂದ ಕರೆದವರ ಒಲುಮೆಗೆ ಕಟ್ಟು ಬೀಳಲಿಲ್ಲವೆ? ಲೋಕಪ್ರಸಿದ್ಧ ದ್ಯೂತವನ್ನು ದೇವರೇ ಆದ ಶ್ರೀಕೃಷ್ಣ ನಿಲ್ಲಿಸಿ, ಚಕ್ರ ತೋರಿಸಿ ಸೀರೆಸೆಳೆವವರನ್ನು, ನಕ್ಕವರನ್ನು ಹೆದರಿಸಿ ದ್ರೌಪದಿಯನ್ನು ಕಾಪಾಡಬಹುದಿತ್ತು ಆದರ ಅಕ್ಷಯವಸನವನ್ನೇಕೆ ಕೊಟ್ಟ? ಈ ಎಲ್ಲ ಆಟಾಟೋಪಗಳ ಮಧ್ಯೆದಲ್ಲಿ ಒಂದು ವೃಂದಾವನವಿದೆ ಎಂದು ಸೂಚಿಸುತ್ತಿಲ್ಲವೆ? ಅದರ ದಾರಿ ಬೇಕಾದವರು ಮಾತ್ರ ಹುಡುಕಿಕೊಳ್ಳುತ್ತಾರೆ. ದ್ರೌಪದಿಯ ಆರ್ತತೆ, ಕುಂತಿಯ ದೈನ್ಯ, ತ್ರಿವಕ್ರೆಯ ಶರಣ್ಯ, ವಿದುರನ ನಮ್ರತೆ, ಅಥವಾ ಭೀಷಣವಾಗಿ ಕಾದುತ್ತಲೆ ಆ ಮೂರುತಿಯನ್ನೆ ತನ್ನ ಕಣ್ಣ ನೋಟವಾಗಿಸಿಕೊಂಡ ಕರ್ಣ ಮತ್ತು ಭೀಷ್ಮ, ಮತ್ತು ಅವನಿಲ್ಲದೆಯೂ ತನ್ನ ಭಾವಲೋಕದಿ ತಾನೆ ತೂರಿಕೊಳುವ ರಾಧೆ.. ನಂದಿಗ್ರಾಮದಲಿ ಗ್ರಾಮರಾಜ್ಯ ನಡೆಸಿದ ಭರತನ ಹಾಗೆ.<br />
ಇದೆಲ್ಲ ರೂಪಕಗಳ ಮಾತಾಯಿತು. ಎಲ್ಲಿ ಒಂಚೂರು ಹಿಮ್ಮೊಗ ನೆನಪು ಮಾಡಿಕೊಳ್ಳಿ. ಹಳ್ಳಿಗಳಾದರೆ ಹಬ್ಬಕ್ಕೆ ವಾರವಿರುವಾಗಲೆ ಮನೆಯನ್ನು ಕೊಟ್ಟಿಗೆಯನ್ನು ಚೊಕ್ಕಟಗೊಳಿಸಿ, ಪಾತ್ರೆಪಡಗಗಳನ್ನು ಅಣಿಗೊಳಿಸಿ, ಹಬ್ಬದ ಬಟ್ಟೆಗಳನ್ನ ಬಿಸಿಲಿಗೆ ಹಾಕಿ, ಅಂಗಳ ಬಳಿವ ಕೆಲಸ ಆರಂಭವಾಗುತ್ತಿತ್ತು. ಎಲ್ಲೆಲ್ಲೋ ಹೋದ ಹಕ್ಕಿಗಳೆಲ್ಲ ಗೂಡಿಗೆ ಮರಳಿದ ಹಾಗೆ ಕೆಲಸ, ಓದು, ಮದುವೆ ಇತ್ಯಾದಿಗಾಗಿ ದೂರದೂರದಲ್ಲಿರುವ ಮನೆ ಮಕ್ಕಳೆಲ್ಲ ಎರಡು ದಿನ ಮುಂಚೆಯೆ ಮನೆಗೆ ಬಂದು ನೀರುತುಂಬುವ ಹಬ್ಬದ ಹಂಡೆಗೆ ಕಹಿಂಡಲ ಕಾಯಿ ಬಳ್ಳಿ ಕಟ್ಟುತ್ತಿದ್ದರು. ನೀರು ತುಂಬುತ್ತಿದ್ದರು. ಕಟ್ಟಿಗೆ ಒಟ್ಟಿ ಉರಿ ಕೊಡುತ್ತಿದ್ದರು. ಹಬ್ಬದ ಸಿಹಿ ಹೋಳಿಗೆಗಳು, ಚಕ್ಕುಲಿಗಳು ಮನೆಯ ಹಿರಿಹೆಂಗಸರ ಉಸ್ತುವಾರಿಯಲ್ಲಿ ಹದದಲ್ಲಿ ಸಿದ್ಧವಾಗುತ್ತಿದ್ದವು. ಮನೆಯ ಚಂದ, ಬಣ್ಣ, ರಂಗೋಲಿಗಳು, ಬಾವಿಗೆ ಬಳಿಯುವ ಶೇಡಿ ಕೆಲಸ ಮಧ್ಯದವರ ಪಾಲಿಗೆ. ಮಕ್ಕಳು ಪರಿಚಾರಿಕೆಗೆ ನಿಂತು ಹೂ, ಹಣ್ಣುಗಳ ತರುವ ಕೆಲಸ. ಇಡೀ ಮನೆಯು ಜೀವ ಬಂದ ಹಾಗೆ ಮಿಡಿಯುತ್ತ ಎಲ್ಲರ ಮಾತು, ಕತೆ, ನಗು, ಗಲಾಟೆಗಳಲ್ಲಿ ಕಂಪಿಸುತ್ತಿತ್ತು. ಕೊಟ್ಟಿಗೆಯ ಜೀವಗಳ ಅಂಬಾಗಳಲ್ಲಿ ಬದುಕು ಮಾರ್ನುಡಿಯುತ್ತಿತ್ತು. ಹೊರಗೆ ಅಂಗಳದ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಪಿಲಿ, ಗದ್ದೆ ತೋಟಗಳಲ್ಲಿ ತೊನೆವ ತೆನೆ, ಸಿಂಗಾರಗಳು. ಮಳೆ ಕಡಿಮೆಯಾಗಿ ತೆಳ್ಳಗೆ ಹರಿವ ಹಳ್ಳದಲಿ ಕಾಲಾಡಿಸುವ ಮಕ್ಕಳು. ಪೇಟೆ ಊರಿನ ಹಬ್ಬವೇನೂ ಕಡಿಮೆಯಿರಲಿಲ್ಲ. ಮನೆ ಅಂಗಳಗಳು ಮನೆಯ ಎಲ್ಲರ ಸಹಕಾರದಲಿ ಚೊಕ್ಕವಾಗಿ, ಹಣತೆಯಿಡುವ ಜಾಗಗಳು ನಿಗದಿಯಾಗಿ, ಹೊಸಬಟ್ಟೆಗಳು ಇಸ್ತ್ರಿಯಾಗಿ, ವರ್ತನೆಯ ಹೂಗಳಿಗೆ ಬೇಡಿಕೆ ಹೆಚ್ಚಾಗಿ, ಹಬ್ಬದ ಸಿಹಿಗಳ ರೆಸಿಪಿಗಳು ರಿವೈಸಾಗಿ ಹಿಟ್ಟಿನ ಗಿರಣಿಗಳಲ್ಲಿ ಉದೂದ್ದ ಕ್ಯೂ ಇರುತ್ತಿತ್ತು. ಚೀಟಿ ಕಟ್ಟಿದ ಪಟಾಕಿಗಳು ಅವರವರ ಸಂಬಳಕ್ಕೆ ತಕ್ಕಂತೆ ವಾರಮೊದಲೆ ಪ್ಯಾಕುಗಳಲ್ಲಿ ಬಂದು ಬಿಸಿಲಿಗೆ ಒಣಗಿಸಿಕೊಂಡು ಮಕ್ಕಳ ಹಂಚಿಕೆಯಲ್ಲಿ ಖಾಲಿಯಾಗುತ್ತಿದ್ದವು. ಸ್ನಾನ, ಶುಚಿ, ಹಿರಿಯರಿಗೆ ದೇವರಿಗೆ, ತಮಗೆ ಸಿಕ್ಕಿದ್ದಕ್ಕೆ ನಮಿಸಿ ನಂತರ ಹಬ್ಬದೂಟ ಮುಗಿಸಿ ಆಟ, ಪಟಾಕಿ, ಸಂಭ್ರಮ.<br />
ಸರಿ ಈವತ್ತಿಗೆ ಬನ್ನಿ. ಈಗ ಹಳ್ಳಿಯ ಮನೆಮನೆಗಳಲ್ಲಿ ವಯಸ್ಸಾದ ಹಿರಿಯರು ಬಾಣಗಳೆಲ್ಲ ಖಾಲಿಯಾದ ಬತ್ತಳಿಕೆಗಳ ಹಾಗೆ ಕಾಯುತ್ತ ಕೂತಿರುವರು. ಕೊಟ್ಟಿಗೆ ನಡೆಸಲು ಸೊಂಟ ಸಹಕಾರ ಕೊಡುವುದಿಲ್ಲವಾಗಿ ಈಗ ಕೊಟ್ಟಿಗೆಗಳು ಎತ್ತಂಗಡಿಯಾಗಿವೆ. ಬೆಳಿಗ್ಗೆ ಬರುವ ಬಸ್ಸಿನಲ್ಲಿ ಅಥವಾ ವ್ಯಾನಿನಲ್ಲಿ ಪ್ಯಾಕೆಟ್ ಹಾಲು ಬರುತ್ತದೆ. ಮಕ್ಕಳು ಒಂದು ದಿನ ರಜೆ ಸಿಕ್ಕರೆ ಬಂದರೂ ಬರಬಹುದು. ಮೂರ್ನಾಕು ದಿನ ರಜೆ ಇದ್ದರೆ ಪ್ಯಾಕೇಜು ಟೂರ್ ಹೋದರೂ ಹೋಗಬಹುದು. ವರ್ಷಕಟ್ಟಳೆಯ ಹಬ್ಬವೆಂದು ಬಾವಿಗೆ ನಾಲ್ಕು ಗೀಟು ರಂಗೋಲಿ ಎಳೆಯಲಾಗಿದೆ. ಪಂಪಿನಿಂದ ಕರೆಂಟು ಇರುವಾಗಲೇ ನೀರೆತ್ತಿ ಮೇಲಿನ ಟ್ಯಾಂಕಿಗೆ ತುಂಬಲಾಗಿದೆ. ಪೂಜೆಯ ಹೊತ್ತಿಗೆ ಮಾತ್ರ ಒಂದು ಬಿಂದಿಗೆ ನೀರು ಬಾವಿಯಿಂದ ಸೇದಲಾಗುವುದು. ಟೈಲುಗಳೆಲ್ಲ ಕೊಳೆಯಾಗುವುದೆಂದು ಎಣ್ಣೆಯ ದೀಪವು ವಾಸ್ತುಬಾಗಿಲಿನ ಅಕ್ಕ ಪಕ್ಕಕ್ಕೆ ಮಾತ್ರ. ಉಳಿದೆಲ್ಲ ಕಡೆ ಸೀರಿಯಲ್ ಲೈಟುಗಳನ್ನ ನೇತುಹಾಕಲಾಗಿದೆ. ಏನೋ ಮ್ಯಾಜಿಕ್ ಆಗಿ ಮೊಮ್ಮಕ್ಕಳೇನಾದರೂ ಬಂದರೆ ಇರಲಿ ಅಂತ ಮೊಂಬತ್ತಿಗಳ ಪ್ಯಾಕೆಟ್ಟನ್ನು ಅಜ್ಜಿ ತೆಗೆದಿಟ್ಟಿದ್ದಾಳೆ. ಜನರಿಲ್ಲದ ಹಬ್ಬಕ್ಕೆ ಶಾಸ್ತ್ರಕ್ಕೊಂದು ಪಾಯಸ, ಚಿತ್ರಾನ್ನ, ಕೋಸಂಬರಿ, ಅಷ್ಟು ಖಾಯಿಷು ಬಂದರ ಪೇಟೆಯ ಬೇಕರಿಯಲ್ಲಿ ಸಿಗುವ ಹೋಳಿಗೆಯ ಪ್ಯಾಕೆಟು ತರಲೂಬಹುದು.<br />
ಪೇಟೆಗಳಲ್ಲಿ, ನಗರಗಳಲ್ಲಿ ಕೇಳಲೇಬೇಡಿ. ಇದು ಖರೀದಿಯ ಹಬ್ಬ, ದಿವಾಳಿಯ ಹಬ್ಬ. ಬೇಕು ಬೇಕೆಂದಿದ್ದನ್ನೆಲ್ಲ ಆನ್ ಲೈನಿನಲ್ಲಿ ಇ.ಎಂ.ಐಗಳಲ್ಲಿ ಕೊಂಡರೂ ಪಟಾಕಿಗಳು ಮಾತ್ರ ಅಂಗಡಿಯಲ್ಲಿಯೇ ಖರೀದಿಯಾಗುತ್ತಿವೆ. ಹಬ್ಬಕ್ಕಿಂತ ಮೊದಲೆ ಹಾರಿಸಿದ ಪಟಾಕಿಗಳ ಕಸದ ರಾಶಿಯಲ್ಲಿ ಇನ್ನೂ ಸಿಡಿದಿರಲಾರದ, ಹೊತ್ತಿರಲಾರದ ಪಟಾಕಿಗಳ ಆಯುವ ಪುಟ್ಟ ಕೈಗಳು ಆರಿಸಿ ಆರಿಸಿ ಅವನ್ನ ತಮ್ಮ ಹಬ್ಬದ ಸಂಜೆಗೆ ಎತ್ತಿಡುತ್ತಿವೆ. ಹೀಗೆ ಎಲ್ಲ ವೈರುಧ್ಯಗಳ ಬೆಳಕಿನ ಕೋಲುಗಳು ಒಂದಕ್ಕೊಂದು ಢಿಕ್ಕಿಯಾದರೂ ಇಲ್ಲಿ ಹೊರಗೆ ಕತ್ತಲೇ ಇಲ್ಲ. ದೀಪ ಹಚ್ಚಬೇಕು ಹೇಗೆ ಮತ್ತು ಯಾಕೆ ಎಂದು ಯೋಚಿಸಲು ಸಮಯವೂ ಇಲ್ಲದೆ ಎಲ್ಲ ಮನೆಗಳ ಮುಂದೆ ತೂಗುಬಿದ್ದಿರುವ ಎಲೆಕ್ಟ್ರಿಕ್ ಆಕಾಶಬುಟ್ಟಿ ಕಣ್ಣು ಮಿಟುಕಿಸುತ್ತಿದೆ. ಸ್ನಾನ ಸಂಜೆಗೆ ಮಾಡಿದರೂ ನಡೆಯುತ್ತದೆ. ಗ್ರಾಮೀಣ ಥೀಮಿನ ಹೋಟೆಲುಗಳಿಂದ ಆನ್ಲೈನು ಊಟ ಆರ್ಡರಾಗುತ್ತದೆ. ಟೀವಿ ಕಾರ್ಯರ್ಕ್ರಮಗಳೂ, ಸಿನಿಮಾಗಳು, ಮ್ಯಾಚಿಂಗಾಗಿರುವ ದಿರಿಸಿನಲ್ಲಿ ತೆಗೆದ ಫೋಟೋವನ್ನು ಅರ್ಜಂಟಾಗಿ ಎಫ್ಬಿ,ಇನ್ ಸ್ಟಾ ಗ್ರಾಮು, ವಾಟ್ಸಪ್ಪಿಗೆ ಕಳಿಸಬೇಕಿದೆ. ಆಮೇಲೆ ಉಳಿದಿದ್ದು. ಸಂಭ್ರಮಿಸುತ್ತೇವೆಯೋ ಬಿಡುತ್ತೇವೆಯೋ ಆಚರಿಸುವುದು ಮುಖ್ಯ. ಮತ್ತು ಆ ಆಚರಣೆಯನ್ನು ತೋರಿಸುವುದು ಇನ್ನೂ ಮುಖ್ಯ ಎಂಬ ದೊಡ್ಡ ಬಿಸಿಗಾಳಿಯ ಬಲೂನಿನಲ್ಲಿ ನಾವು ಮೇಲೇರುತ್ತಿದ್ದೇವೆ. ಗಾಳಿ ಕಡಿಮೆಯಾಗುವುದೋ ಅಥವಾ ಅಗತ್ಯಕ್ಕಿಂತ ಹೆಚ್ಚು ಬಿಸಿಯೇರುವುದೋ ಅದು ನಾವು ನಡೆಸಿಕೊಂಡ ಹಾಗೆ. ಒಟ್ಟಿನಲ್ಲಿ ಕೆಳಗೆ ಬೀಳುವುದು ಪುಡಿಯಾಗುವುದು ಮಾತ್ರ ಗ್ಯಾರಂಟಿ. ಥೇಟ್ ಬದುಕಿನ ಹಾಗೆ.<br />
<br />
ಕೊನೆಗೂ ಮತ್ತು ನಿಜಕ್ಕೂ ಇಷ್ಟೆಯೆ ಅಂತ ಯೋಚಿಸುವಾಗ ಅನಿಸುತ್ತದೆ. ಎಲ್ಲವನ್ನೂ ಅನುಕೂಲಗಳನ್ನಾಗಿ ಪರಿವರ್ತಿಸಿಕೊಳ್ಳುತ್ತ ಇಲ್ಲದಿರುವಾಗ ಇರಸರಿಸಿಕೊಳ್ಳುವ, ಬೇರೆಯವರ ಕಷ್ಟದಲ್ಲಿ ಭಾಗಿಯಾಗುವ, ಸ್ಪಂದಿಸುವ ಮೂಲಮನುಷ್ಯ ಗುಣವನ್ನೆ ಅದುಮಿಟ್ಟು ಮೇಲಕ್ಕೆ ಚಿಮ್ಮುತ್ತಾ ಇದ್ದೇವೆ ಅಂತ. ಒಂದು ಕ್ಷಣ ನಿಂತು ಯೋಚಿಸಿದರೆ ಸುಲಭವಾಗಿ ಸೇತುವೆ ಕಟ್ಟಬಹುದಾದ, ಎಲ್ಲಸೇರಿ ಬದುಕಬಹುದಾದ ಭೂಮಿಯ ದಾರಿ ನಮ್ಮ ಮುಂದೆಯೇ ಇದೆ. ನಾವು ಸ್ವಕೇಂದ್ರಿತ ಸ್ವರ್ಗದಲ್ಲಿ ಒಬ್ಬೊಬ್ಬರೇ ನಿಂತು ಇನ್ನೊಬ್ಬರ ಸ್ವರ್ಗಕ್ಕೆ ನೆಟ್ವರ್ಕ್ ಸಿಗಲೀ ಎಂದು ಕಾಯುತ್ತಿದ್ದೇವೆ.<br />
<br />
ಹಿಂದೆಲ್ಲ ಜನ ಬಿಡುವಾಗಿದ್ದರೆ? ಈಗಿನ ಪುರುಸೊತ್ತಿಲ್ಲದ ಬದುಕು ಆಗಿರಲಿಲ್ಲವೆ ಅಂತ ಯೋಚಿಸದರೆ ಹೊಳೆಯುತ್ತದೆ. ಹಿಂದೆಯೂ ಅವರಿಗೆಲ್ಲ ಕೈತುಂಬ ಕೆಲಸಗಳಿದ್ದವು. ಪುರುಸೊತ್ತಿರಲಿಲ್ಲ. ಆದರೆ ಈ ಕೈತುಂಬುವ ಕೆಲಸಗಳಿಂದ ಆಗೀಗ ಪುರುಸೊತ್ತು ಮಾಡಿಕೊಳ್ಳದೆ ಹೋದರೆ ಬದುಕಿನ ರುಚಿಯನ್ನು ಸವಿಯುತ್ತಿರುವ ಅರಿವೇ ಆಗದೆ ಹೋಗುತ್ತದೆ ಎಂಬ ತಿಳುವಳಿಕೆ ಅವರಿಗಿತ್ತು. ಅದಕ್ಕೆ ಹಬ್ಬಗಳು ಸರಿಯಾದ ಉಪಾಯವಾಗಿದ್ದವು. ವ್ರತ,ನೇಮದ ಹೆಸರಲ್ಲಿ ದಿನದಿನದ ಯಾಂತ್ರಿಕ ಕೆಲಸಗಳಿಂದ ದೂರವಾಗಿ ಮನೆಯನ್ನ, ಮನಸ್ಸನ್ನ, ಕುಟುಂಬವನ್ನ, ಜತೆಗಿರುವುದನ್ನ ಸಂಭ್ರಮಿಸುವ ದಾರಿ ಹಬ್ಬಗಳಾಗಿದ್ದವು. ಹೊರಬದುಕಿನ ಯಾಂತ್ರಿಕತೆಯ ಗಾಣದ ಬಯಲಿನ ಗಡಿಬಿಡಿ ಮತ್ತು ಹಗಲಾಟಾಗಳ ನಡುವಿನಿಂದ ಸುಮ್ಮನಿರುವ, ಕತ್ತಲ ಒಳಮನೆಗೆ ತಿರುಗಿ ಅಲ್ಲೊಂದು ಯೋಚನೆಯ, ತಿಳಿವಿನ ಹಣತೆ ಹಚ್ಚುವ ಅವಕಾಶಕ್ಕೆ ಸೇತುವೆಯಾಗುವ ಹಾಗೆ ಹಬ್ಬಗಳೆಂಬ ನಂದಿಗ್ರಾಮವೊಂದು ಕಾಯುತ್ತಿತ್ತು. ಈಗಲೂ ಇರಬಹುದು. ಹೋಗೋಣವೇ? ಅಶ್ವಯುಜ ಮಾಸದ ಕೊನೆಯ ಪಕ್ಷದ ಅಮಾವಾಸ್ಯೆ ಭೂಮಿಗೆ ಅತಿ ಕತ್ತಲದಿನವಂತೆ. ತನ್ನ ಪರಿಭ್ರಮಣದಲ್ಲಿ ಸೂರ್ಯನಿಗೆ ಅತಿ ಹೆಚ್ಚು ದೂರದಲಿರುವ ದಿನವನ್ನೆ ನಾವು ದೀಪ ಬೆಳಗಲು ಆರಿಸಿಕೊಂಡ ಈ ಹಬ್ಬದ ರೂಪಕಕ್ಕೆ ನಾನು ಮನಸೋತೆ. ಬೆಳಕು ಬೆಳಗಲು ಕತ್ತಲಿನ ಅವಶ್ಯಕತೆ ಹಿಂದೆಂದಿಗಿಂತ ಇಂದು ಹೆಚ್ಚಾಗಿ ಇದೆಯಲ್ಲವೆ?<br />
ಕತ್ತಲಿನ ತಾಯಿ ಮಡಲಿನಲಿ ಸುಮ್ಮನೆ ಕೂತು ತಂದೆಗಣ್ಣ ದೀಪವ ಹಚ್ಚೋಣವೇ. ಮಕ್ಕಳ ನಕ್ಷತ್ರ ಮಿನುಗುವುದು ಕಾಣಬಹುದಾದ ಕತ್ತಲೆಯು ಬೇಕು. ಗಾಳಿ ಬೀಸುವ ಅಂಗಳದಲಿ ಹಣತೆಯೊಂದನ್ನ ಹಚ್ಚಿ ಕೈಯ ಮರೆಯಿಡಬೇಕು ಎನಿಸುತ್ತಿರುವಾಗ ಗೋಪಾಲಕೃಷ್ಣ ಅಡಿಗರ ಈ ಪದ್ಯದ ಪ್ರಸ್ತುತತೆ ಎದ್ದು ಕಾಣುತ್ತಿದೆ. ಓದಿದ ನಿಮಗೆ ಕತ್ತಲ ಹಂಬಲು ಬಂದರೆ ಅಲ್ಲಿ ಕಿರುಹಣತೆಯು ಬೆಳಗುವ ಕ್ಷಣ ದೂರವಿಲ್ಲ ಎಂದು ನನ್ನ ನಂಬಿಕೆ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.<br />
<br />
ಮಾಡಬೇಕಾದ್ದೆಷ್ಟೋ ಇದೆ; ಮೂಲ ಕತ್ತಲಿನಲ್ಲಿ<br />
ಮುಳುಗಿ ಹೋಗುತ್ತಿರುವ ಪರಂಪರಾಗತ ತಿಳಿವ<br />
ನೆತ್ತುವುದು, ಎತ್ತಿ ಪುರಾತನ ಮಗುವ<br />
ಇತ್ತಕಡೆ ಕರೆತಂದು ಅಂತರಂಗದಲಿಟ್ಟು, ಕಾಪಿಟ್ಟು<br />
ಹೊಸಗಾಳಿಯಲ್ಲುಸುರು ಬಿಟ್ಟ ನಡೆಯುವ ಹಾಗೆ<br />
ಆಧುನಿಕಗೊಳಿಸುವುದು, ಆರಾಧಿಸುವುದು, ದೀಪ ಹಚ್ಚಿಟ್ಟು<br />
ಮರೆಯಾದವರ, ತನ್ನ ಕಿರುಹಣತೆಗಳ<br />
ಬೀಸುಗಾಳಿಗೆ ಮರೆಯೊಳಿಟ್ಟು ಆರಯ್ಯುವುದು (ಇದನ್ನು ಬಯಸಿರಲಿಲ್ಲ (ಸಂಕಲನ)ದಿಂದ *ದೆಹಲಿಯಲ್ಲಿ* ಕವಿತೆ by ಅಡಿಗ ) <br />
</div>
ಸಿಂಧು sindhuhttp://www.blogger.com/profile/11363295766940671498noreply@blogger.com1tag:blogger.com,1999:blog-4515791944382207090.post-19003608723114500862018-10-03T11:21:00.000+05:302018-10-03T11:21:31.178+05:30"ಗಾಂಧಿ"<div dir="ltr" style="text-align: left;" trbidi="on">
(<span style="font-family: tunga;">ಗಾಂಧಿಯವರು ಹುಟ್ಟಿ 150 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ವಿಜಯಕರ್ನಾಟಕದ ಭಾನುವಾರದ ಪುರವಣಿಯಲ್ಲಿ ನನ್ನ ಲೇಖನ (30.09.2018))</span><br />
<br />
There is no such thing as ‘Gandhism,’ and I do not want to leave any sect after me. I do not claim to have originated any new principle or doctrine. I have simply tried in my own way to apply the eternal truths to our daily life and problems…The opinions I have formed and the conclusions I have arrived at are not final. I may change them tomorrow. I have nothing new to teach the world. Truth and nonviolence are as old as the hills. • Gandhi<br />
ಇವತ್ತು, ಗಾಂಧಿ ಜಯಂತಿ ಎನ್ನುವುದು ಬೇಕೋ ಬೇಡವೋ ಎಂಬಂತಹ ಚರ್ಚೆಗಳನ್ನ ಹುಟ್ಟುಹಾಕುತ್ತಿರುವ ನಮ್ಮ ರಾಜಕೀಯಕೃಪಾಪೋಷಿತ ಯುವಸಮುದಾಯಗಳು ಹುಟ್ಟುಹಾಕುತ್ತಿರುವ ಹೊತ್ತಿನಲ್ಲಿ ಈ ಮಾತು ಎಂದಿಗಿಂತ ಉಜ್ವಲವಾಗಿ ಹೊಳೆಯುತ್ತಿದೆ.<br />
ಮಹಾತ್ಮಾ ಎಂಬ ಹೆಸರನ್ನು ಕೊಟ್ಟ ಸಂದರ್ಭದಲ್ಲಿ ಅದನ್ನು ನಿರಾಕರಿಸುವ ಗಾಂಧೀಜಿ ಹೇಳುತ್ತಾರೆ. ಲಂಪಟ ಎನ್ನುವ ಹೆಸರು ನನಗೆ ಮಹಾತ್ಮಾ ಎಂಬ ಹೆಸರಿಗಿಂತ ಹೆಚ್ಚು ಸೂಕ್ತ. ದಯವಿಟ್ಟು ನನ್ನನ್ನು ಮಹಾತ್ಮಾ ಎನ್ನಬೇಡಿ, ನಾನು ಸಾಮಾನ್ಯ ರಾಗದ್ವೇಷಗಳ ಮನುಷ್ಯ. ಅಹಿಂಸೆ ಮತ್ತು ಸತ್ಯವನ್ನು ಪಾಲಿಸುವ ವ್ರತದ ದಾರಿಯಲ್ಲಿ ನಡೆಯುತ್ತಿರುವುದಷ್ಟೇ ನನ್ನ ಹಾಗಿನ ಎಲ್ಲರಿಗಿಂತ ನಾನು ಮಾಡುತ್ತಿರುವ ಭಿನ್ನ ಕೆಲಸ. ಎಂದರು. ಗಾಂಧೀಜಿಯನ್ನು ಎಲ್ಲ ಆಯಾಮಗಳಲ್ಲಿ ವೈಭವೀಕರಿಸುವ ಅಥವಾ ಧಿಕ್ಕರಿಸುವ ಮುನ್ನ ಅವರ ಕೆಲವು ಕೆಲವೇ ಕೆಲವು ನೇರ ಮತ್ತು ಸರಳ ಪತ್ರಗಳನ್ನ ಓದಿದರೆ ಸಾಕು ನಮ್ಮ ಆರಾಧನೆ ಅಥವಾ ಅಸಹ್ಯದ ವ್ಯರ್ಥತೆ ಅರ್ಥವಾಗುತ್ತದೆ.<br />
<br />
ನಾವು ಸ್ವತಂತ್ರ ಭಾರತದ ಮಕ್ಕಳು, ಮೊಮ್ಮಕ್ಕಳು, ಮತ್ತು ಮರಿಮಕ್ಕಳು. ಹೆಚ್ಚಿನ ಮಕ್ಕಳು ಈಗ ರಂಗದ ಮೇಲಿರುವವರ ಆಟಾಟೋಪಗಳನ್ನು ನೋಡುತ್ತ ಹಿಂದಿನದನ್ನು ಮೆಲುಕು ಹಾಕುತ್ತ ತೆರೆಮರೆಯಲ್ಲಿ ಉಳಿದಿದ್ದಾರೆ. ಕೆಲವೇ ಕೆಲವು ಪ್ರಿವಿಲೇಜ್ಡ್ ಮೊಮ್ಮಕ್ಕಳು ಸ್ವತಂತ್ರ ಭಾರತವೆಂಬ ಸ್ವರ್ಗವನ್ನ ಒಂದೊಂದೇ ಹೆಜ್ಜೆ ನರಕವನ್ನಾಗಿಸುತ್ತ ತಮ್ಮ ಮಕ್ಕಳಿಗೆ ಅಥವಾ ಸ್ವತಂತ್ರ ಭಾರತದ ಮರಿಮಕ್ಕಳ ಹೆಸರಲ್ಲಿ ದಾಖಲು ಮಾಡುತ್ತಿದ್ದಾರೆ. ಜಾಗದಲ್ಲಿ ದಾಖಲಾಗದಿರುವುದನ್ನ ಹೊರದೇಶದ ಬ್ಯಾಂಕುಗಳಲ್ಲಿ ಕೇಜಿಗಟ್ಟಲೆ ಬಂಗಾರದಲ್ಲಿ ಕಣ್ಣುಕುಕ್ಕುವ ವೈಭವೋಪೇತ ಜೀವನಶೈಲಿಯಲ್ಲಿ ಸಿಕ್ಸ್ ಲೇನ್ ಹೆದ್ದಾರಿಗಳಲ್ಲಿ ಯಾರ ಜೀವದ ಹಂಗೂ ಇಲ್ಲದೆ ಯಮವೇಗದಲ್ಲಿ ಓಡುವ ಐಷಾರಾಮಿ ಕಾರುಗಳಲ್ಲಿ ಕಟ್ಟಿಡುತ್ತಿದ್ದಾರೆ. ಒಂದಷ್ಟು ಜನ ಮೊಮ್ಮಕ್ಕಳು ಈ ಸ್ವತಂತ್ರದ ಹಂಗೇ ಬೇಡವೆಂದು ಚೆನ್ನಾಗಿ ಓದಿ ಈ ಕಕ್ಷೆಯಿಂದಾಚೆಗೆ ಜಿಗಿದಿದ್ದಾರೆ. ಅವರ ಮಕ್ಕಳು ಈಗ ಇನ್ನಾವುದೋ ಸ್ವತಂತ್ರ ದೇಶಗಳ ಮೀಸಲು ನೌಕರರು. ಇಲ್ಲೆ ಇರುವ ಎಲ್ಲಿಗೂ ಹೋಗಲರದ ಕೆಲವು ಮೊಮ್ಮಕ್ಕಳು ಹಳೆಯ ಮತ್ತು ಹೊಸತರ ಕೊಂಡಿಯಾಗಿರುವುವವರು ಐಷಾರಾಮವನ್ನು ಬಯಸದೆ ಅದನ್ನು ಬಿಡಲೂ ಆಗದೆ ಹಳಹಳಿಕೆಯಿಂದ ತಮ್ಮ ಮಕ್ಕಳನ್ನು ತಮ್ಮ ಪರವಾಗಿ ಹೆದೆಯೇರಿಸಿ ಬಾಣ ಬಿಡುತ್ತಿದ್ದಾರೆ. ಈ ಎಲ್ಲದರ ನಡುವೆ ದೇಶದ ಬಹುಪಾಲು ಜನ ಸ್ವತಂತ್ರ ಭಾರತದ ಭವ್ಯ ಬದುಕು ಆಕಾಶಕ್ಕೆ ನೇತುಬಿಟ್ಟ ಅತ್ತಿಂದಿತ್ತ ತೂಗುವ ವಿಶಾಲ ಉಯ್ಯಾಲೆಯಂತೆ ಜೀಕುತ್ತಿರುವುದನ್ನ ನೋಡುತ್ತಾ, ಒಂದು ಕಾಲು ನೋಯ್ದಾಗ ಅದನ್ನ ತುಸ ಮೇಲೆತ್ತಿ ಇನ್ನೊಂದು ಕಾಲಿನ ಮೇಲೆ ಹೆಚ್ಚಿನ ಭಾರ ಬಿಡುತ್ತಾ ಅದು ನೋಯ್ದಾಗ ಮತ್ತೆ ಕಾಲು ಬದಲಾಯಿಸುತ್ತಾ ನಿಂತಿದ್ದಾರೆ. ಆಗಾಗ ಇವರಿಗೆ ಸ್ವಾತಂತ್ರ್ಯದ ಎಷ್ಟನೆಯದೋ ಆಚರಣೆ, ಮಹಾತ್ಮನ ದಿನ, ಇನ್ಯಾವುದೋ ಹೋರಾಟದ ನೆನಪಿನ ಸುವರ್ಣ ಸಂಭ್ರಮಗಳ ಅಕ್ಷತೆಕಾಳು ತಲೆ ಮೇಲೆ ಬೀಳುತ್ತದೆ. ಒಲೆಯ ಮೇಲಿನ ಪಾತ್ರೆಯಲ್ಲಿ ಬರಿದೆ ನೀರು ಮರಳುತ್ತಿದೆ ಅಕ್ಕಿಯಿಲ್ಲ.<br />
ಬಾಚಿಕೊಳ್ಳುವವರ, ತಲೆತಲಾಂತರಗಳಿಗೆ ಮೆತ್ತನೆಯ ಕುರ್ಚಿಯ ಮೇಲಿನ ಝರಿ ಶಾಲು ಮಾಸದ ಹಾಗೆ ಬುಕ್ ಮಾಡಿ ಇಡುವ ನಾಯಕರ, ಪಕ್ಷಪಾತಿಗಳ ನಡುವೆ, ಒಂದೇ ಒಂದು ಗಾಂಧಿಯ ನೆರಳೂ ಇಲ್ಲದೆ ಇರುವ ಈ ಹೊತ್ತಿನಲ್ಲಿ ಗಾಂಧಿಜಯಂತಿ ಮತ್ತು ಅವರ ನೆನಪು ಹೆಚ್ಚು ಪ್ರಸ್ತುತ.<br />
ನನ್ನ ದೇಶದ ಬಹುಪಾಲು ಜನರ ಮೈಗೆ ಅವರ ನಗ್ನತೆಯನ್ನು ಮುಚ್ಚುವಷ್ಟೂ ಬಟ್ಟೆಯಿಲ್ಲ. ಹಾಗಾಗಿ ನಾನು ಅರ್ಧ ಮೈ ಬಟ್ಟೆ ತೊಡುತ್ತೇನೆ ಎಂದು ಘೋಷಿಸಿ, ಕಡೆಯವರೆಗೆ ಅದಕ್ಕೆ ಬದ್ಧನಾಗಿ ಬದುಕಿದ ಗಾಂಧಿಯೆಲ್ಲಿ? ಸರಳ ಎಂಬುದು ಬ್ರಾಂಡುಗಳ ಹೆಸರಾಗಿ, ವಿಶ್ವಮಾನ್ಯತೆಯ ಮಾರಾಟದ ಸರಕಾಗಿ ಸಾವಿರ ಲಕ್ಷಗಳಲ್ಲಿ ಬಿಕರಿಯಾಗುತ್ತಿರುವ<br />
ಈ ಹೊತ್ತು ವಾಲಂಟರಿ ಸಿಂಪ್ಲಿಸಿಟಿ ಅಥವಾ ಐಚ್ಚಿಕ ಸರಳತೆ ಎಂಬ ಮೌಲ್ಯವನ್ನು ನಂಬಿ ಬದುಕಿದ ಗಾಂಧಿಯ ಬದುಕಿನ ಕುರಿತ ಬರಹಗಳ, ವಿವರಗಳ ಒಂದು ಕಿರುನೋಟಕ್ಕೆ ಕೆಲಸಮಯ ಮೀಸಲಿಡಲು ಈ ದಿನವನ್ನು ಗಾಂಧಿಜಯಂತಿಯನ್ನು ಆಚರಿಸಬೇಕು. ಗಾಂಧಿ ಬದುಕಿದ (ಬರಿಯ ಬೋಧನೆಗೆ ಸೀಮಿತವಲ್ಲದ) ಮೌಲ್ಯಗಳನ್ನು ಕಡೆಯ ಪಕ್ಷ ಓದಬೇಕು ಮತ್ತು ನಮ್ಮ ಮಕ್ಕಳು ಓದುವಂತೆ ಮಾಡಬೇಕು. ಓದಿದ್ದೆಲ್ಲ ಗ್ರಹಿಕೆಗೆ ದಕ್ಕುವುದಿಲ್ಲ. ಗ್ರಹಿಕೆಗೆ ದಕ್ಕಿದ್ದರಲ್ಲಿ ಎಲ್ಲವೂ ಆಚರಣೆಗೆ ಬರುವುದೂ ಇಲ್ಲ.<br />
ಆದರೆ ನಾನು ಅನುಕೂಲದ ತುತ್ತ ತುದಿಯಲ್ಲಿ ಆನಂದತುಂದಿಲಳಾದ ಕ್ಷಣದಲ್ಲಿ ಆ ತುದಿಯ ಇನ್ನೊಂದು ಕೊನೆಯಲ್ಲಿ ದಿನನಿತ್ಯದ ಅವಶ್ಯಕತೆಗಾಗಿ ದಿನಗಟ್ಟಲೆ ಕಾದುಕೂರುವ ಜನ ಇದ್ದಾರೆ ಎಂಬ ಅರಿವು ನನಗೆ ಆದರೆ ಸಾಕು. ಆ ಅರಿವು ನನ್ನನ್ನು ಮುನ್ನಡೆಸುವ ಬೆಳಕಾಗುತ್ತದೆ. ಆದರೆ ಇಷ್ಟು ಮಟ್ಟಿನ ಓದನ್ನೂ, ಹೀಗೆಲ್ಲ ಇದೆ, ಇತ್ತು ಎಂಬುದನ್ನೂ ನಾವು ಗಮನಿಸದೆ ಹೋದರೆ, ನಮ್ಮ ಮಕ್ಕಳಿಗೆ ಹೇಳದೆ ಹೋದರೆ ಲಕ್ಷಾಂತರ ಜನ ಜೀವ ಕೊಟ್ಟು, ಮನೆಮಾರು ಬಿಟ್ಟು, ಓದು ಕೆಲಸ ಬಿಟ್ಟು...ಹೋರಾಡಿ ನಮ್ಮದಾಗಿಸಿದ ಸ್ವಾತಂತ್ರ್ಯವನ್ನು ನಾವೇ ತಟ್ಟೆಯಲ್ಲಿ ಇಟ್ಟು ಲಾಲಸೆಗಳಿಗೆ, ಮಾರಾಟಕೋರರಿಗೆ ಕೊಡುವ ದಿನ ದೂರವಿಲ್ಲ.<br />
1869 ಅಕ್ಟೋಬರ್ 2ರಂದು ಹುಟ್ಟಿದ ಮೋಹನದಾಸ ಕರಮಚಂದ ಗಾಂಧಿ ಎಂಬ ಹುಡುಗ, ಮುಂದೊಂದು ದಿನ ಮನುಕುಲದ ಹೋರಾಟಗಳಲ್ಲಿ ತನ್ನ ಬದುಕಿನ ಸಾರ್ಥಕ್ಯವನ್ನು ಕಂಡುಕೊಂಡು, ಅದರಿಂದ ತನ್ನ ಜನ್ಮಭೂಮಿಯ ಬಾಂಧವರ ಬದುಕನ್ನು ಉತ್ತಮಗೊಳಿಸುತ್ತ ಹೋದ ಕಥೆ, ತನ್ನ ಶೋಧನೆಯಲ್ಲೇ ತಾನು ತಳಮಳಿಸುತ್ತ ದಾರಿ ಸಾಗಿದ ಕಥೆಯನ್ನು ಓದಲು ಈ ದಿನ ಬೇಕಲ್ಲವೆ. ಅಥವಾ ಕನಿಷ್ಟ ಪಕ್ಷ ಅವರ ಬದುಕಿನ ಕೆಲವು ಅತ್ಯುನ್ನತ ಮೌಲ್ಯಗಳ ಇಣುಕುನೋಟ ನಾವು ನಿಂತ ನೆಲವನ್ನೂ ಮುಟ್ಟಬಹುದಾದ ಎತ್ತರವನ್ನೂ ದೊರಕಬಹುದಾದ ವೈಶಾಲ್ಯವನ್ನೂ ತೋರಿಸುತ್ತದೆ ಎಂಬ ನಂಬಿಕೆ ನನ್ನದು.<br />
ಇಂತಹ ಒಬ್ಬ ಮನುಷ್ಯ ಈ ಭೂಮಿಯ ಮೇಲೆ ನಡೆದಿದ್ದ ಎಂಬುದನ್ನೂ ನಂಬದ ಕಾಲವೊಂದು ಮುಂದೆ ಬರುತ್ತದೆ ಎಂದು ಅಲ್ಬರ್ಟ್ ಐನ್ ಸ್ಟೀನ್ ಗಾಂಧೀಜಿಯ ಕುರಿತು ಉದ್ಘರಿಸಿದ್ದು ನಿಜವಾಗುವ ಕಾಲವಿದು. ಒಂದು ಗುಂಪು ಅವನು ಮನುಷ್ಯನಲ್ಲ ದೇವರು ಎಂದು ವಿಜೃಂಭಿಸುತ್ತಿದೆ. ಇನ್ನೊಂದು ಅವನೊಬ್ಬ ಮನುಷ್ಯನೇ ಎಂದು ಕೀಳುಗರೆಯುತ್ತಿದೆ. ಸತ್ಯ ಇವೆರಡರ ಮಧ್ಯದಲ್ಲಿ ಹಿಂಸೆ ಅನುಭವಿಸುತ್ತಿದೆ. ಅಹಿಂಸೆಯನ್ನು ಅದರ ತಾತ್ವಿಕ ರೂಪದಿಂದ ಅದರ ಪರಿಣಾಮಕಾರೀ ಕಾರ್ಯರೂಪಕ್ಕೆ ಎತ್ತರಿಸಿದ ಗಾಂಧೀಜಿಗೆ ಇದು ನಾವು ಮಾಡುವ ದೊಡ್ಡ ಅವಮಾನ.<br />
<br />
ಒಬ್ಬ ರಾಜಕೀಯ ನಾಯಕನಾಗಿ ನಾನು ನನ್ನ ಮನೆಯವರಿಗೆ, ಮಕ್ಕಳಿಗೆ ಪರವಾಗಿ ನಿಲ್ಲುವುದಿಲ್ಲ, ಅವರ ಬೆನ್ನು ಕಟ್ಟುವುದಿಲ್ಲ ಎಂದು ನಿಂತ ಈ ನಾಯಕನ ಚೂರುಪಾರು ನೆರಳಾದರೂ ನಮ್ಮ ರಾಜಕೀಯದ ನಾಯಕರ ಮೇಲೆ ಬೀಳಲಿ.<br />
ಇಂದಿಗೂ ಗಾಂಧೀಜಿ ಬದುಕಿದ ಸರಳ ಜೀವನದ ಪಳೆಯುಳಿಕೆಗಳಾಗಿ ಹಲವು ಸೇವಾಗ್ರಾಮಗಳಿವೆ. ಅಲ್ಲಿ ಹಳೆಯ ತಲೆಮಾರೊಂದು ಈ ನಾಯಕನ ಹಿಂದೆ ತಲೆತಗ್ಗಿಸಿ ನಡೆದುಹೋಗಿ ನಿಂತುಬಿಟ್ಟಿರುವುದು ಕಾಣುತ್ತದೆ. ಆದರೆ ಪ್ರಾಮಾಣಿಕತೆ ಎಂಬುದು ಹೊರಗಿನ ಆಚರಣೆಯಾಗದೆ ಜೀವನದ್ರವ್ಯವನ್ನೇ ಆಗಿಸಿಕೊಂಡ ಗಾಂಧಿಯ ಬದುಕು ಮತ್ತು ದಾರಿ ನಡೆಯಲು ಹೋದ ಇವರೆಲ್ಲರೂ ತಮ್ಮ ದಾರಿಯನ್ನು ತಾವು ಶೋಧಿಸುವುದರಲ್ಲಿ ಸ್ವಲ್ಪ ಕಂಗೆಟ್ಟರೇನೋ ಎಂಬಂತೆ ಕಾಣಿಸುತ್ತಾರೆ. ಆದರೂ ಆ ಸರಳಚೇತನದ ಸವಿಯುಂಡ ಈ ಗುಂಪು ಈಗ ತನ್ನ ಪಾಡಿಗೆ ತಾನು ತಲೆತಗ್ಗಿಸಿ ನೇಯುತ್ತ ಕೂತಿದೆ. ದಣಿದ ಕೈಗಳನ್ನ ನೇವರಿಸಿ ಬಲುಹಿನ ಕೈಗಳನ್ನ ಸೇರಿಸುವ ಯುವ ಸಮುದಾಯದ ಪ್ರಾಮುಖ್ಯತೆ ಬೇರೆಯದೇ ಇದೆ. ಆ ಪ್ರಾಮುಖ್ಯತೆಯನ್ನು ರೂಪಿಸಿದ ಜವಾಬ್ದಾರಿ ಅವರ ಅಪ್ಪ ಅಮ್ಮಂದಿರದು. ಮುಂದೆ ನಮ್ಮ ಮಕ್ಕಳು ನೀನೇಕೆ ಇವುಗಳನ್ನು ನನ್ನ ಮುಂದಿಟ್ಟೆ ಎಂದು ನಮ್ಮನ್ನು ಬಯ್ಯದೆ ಇರಲು ನಾವು ಗಾಂಧಿಯ ಬದುಕಿನ ಬರಹಗಳನ್ನು ಆಶ್ರಯಿಸಬೇಕಿದೆ. ಅವರ ಆರಾಧಕರನ್ನಲ್ಲ. ಅವರ ಟೋಪಿ ಮತ್ತು ಚರಕಾದ ಜಾಹೀರಾತನ್ನಂತೂ ಖಂಡಿತ ಅಲ್ಲ.<br />
ಈ ಮನುಷ್ಯನ ತೀವ್ರ ಪ್ರಾಮಾಣಿಕ ಪ್ರಯತ್ನಕ್ಕೆ ದಾಸ್ಯದಲ್ಲಿದ್ದ ಭಾರತದ ಲಕ್ಷಾಂತರ ಜನ ಅದೇ ತೀವ್ರತೆಯಲ್ಲಿ ಪ್ರತಿಸ್ಪಂದಿಸಿದರು. ಆ ತೀವ್ರತೆ ಮತ್ತು ಪ್ರಾಮಾಣಿಕತೆ ಒಂದು ಕ್ಷಣದ್ದಲ್ಲ. ಕ್ಷಣದಲ್ಲಿ ಗಳಿಸಿದ್ದೂ ಅಲ್ಲ. ಹೊರಗಿನ ವೇಷ,ಪೋಷಾಕು,ನಡವಳಿಕೆಗೆ ಅತ್ಯಂತ ಬೆಲೆಕೊಡುವ ಹೈಫೈ ನಾಯಕರುಗಳು, ಪ್ರಪಂಚದಾದ್ಯಂತ ಈ ತುಂಡುಡುಗೆಯ ಮನುಷ್ಯನ ಮಾತನ್ನು ಕೇಳಿದರು.<br />
ಹಿಟ್ಲರ್ ನಂತಹ ಹಿಟ್ಲರನಿಗೆ ಪ್ರಿಯ ಸ್ನೇಹಿತನೇ ಎಂದು ಬಹಿರಂಗ ಪತ್ರಬರೆಯಬಹುದಾದ ನೈತಿಕತೆ ಮತ್ತು ಪ್ರಾಮಾಣಿಕತೆ, ತನ್ನದೇ ಮಗನ ಅನ್ಯಾಯಗಳನ್ನು ಸಹಿಸದೆ ದೂರವಿಟ್ಟ ನ್ಯಾಯಪರತೆ, ನಾಯಕನಾಗಿ ನಡೆಯುವಾಗ ಕುಟುಂಬದ ಪ್ರಾಮುಖ್ಯತೆ ಗೌಣವಾಗಿಸಿ, ಅವರು ಕಷ್ಟದಲ್ಲಿ ನೊಂದರೆ ತಾನು ಒಳಗೆ ಬೆಂದು, ಹೊರಗೆ ನಗುತ ನಿಲ್ಲುವ ನಿಷ್ಠುರತೆ, ತನ್ನ ಮಾನವಸಹಜ ದೌರ್ಬಲ್ಯಗಳನ್ನು ಸಾರ್ವಜನಿಕವಾಗಿ ತೆರೆದಿಡಬಲ್ಲ ಸರಳತೆ ಇದೆಲ್ಲವನ್ನೂ ನಾವು ನಂಬಲು ಅಸಾಧ್ಯವಾಗುವಷ್ಟು ತೀವ್ರತೆಯಲ್ಲಿ ಬದುಕಿದ ಈ ಮನುಷ್ಯ ಗಾಂಧಿಯೆಂದರೆ ನನಗೆ ಪ್ರೀತಿ, ಅಚ್ಚರಿ ಮತ್ತು ಅಪಾರ ಗೌರವ.<br />
ಫಾಧರ್ ಆಫ್ ದಿ ನೇಷನ್, ಮತ್ತು ಭಾರತ ಸ್ವತಂತ್ರ ಹೋರಾಟದ ನೇತಾರ, ಮತ್ತು ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಎಂಬ ಅತ್ಯಂತ ಸೀಮಿತ ಚೌಕಟ್ಟಿನಲ್ಲಿ ನಿಲ್ಲಿಸಿರುವ ಗಾಂಧಿ ಅಸಹಾಯಕತೆಯಿಂದ ಚಡಪಡಿಸುತ್ತಿದ್ದಾರೆ. ಹೊರಗೆ ಬರೋಣವೆಂದರೆ ಅವರ ಕೈಯ ಕೋಲನ್ನು ಆ ಭಾರೀ ಚೌಕಟ್ಟಿಗೆ ಅಂಟಿಸಲಾಗಿದೆ, ಮಾತನಾಡಿ ತಿಳಿಸೋಣವೆಂದರೆ ಮಕ್ಕಳ ಕಿವಿಯಲ್ಲಿ ಗ್ಯಾಜೆಟ್ಟುಗಳ ಇಯರ್ ಫೋನಿದೆ. ಕೊನೆಯ ಪಕ್ಷ ಇದೊಂದು ದಿವಸ ನಾವು ಮಹಾತ್ಮನನ್ನು - ಬಾಪುವಾಗಿಸೋಣ, ಮಕ್ಕಳು ನಿಜವಾದ ಮಮತೆಯಲ್ಲಿ ಅವರನ್ನು ಬಾಪೂಜಿ ಎಂದು ಕರೆಯುವಷ್ಟು ಹತ್ತಿರ ಹೋಗೋಣ. </div>
ಸಿಂಧು sindhuhttp://www.blogger.com/profile/11363295766940671498noreply@blogger.com2tag:blogger.com,1999:blog-4515791944382207090.post-11997629281148911162018-09-19T12:34:00.000+05:302018-09-19T12:36:03.339+05:30ಥೋಡೀ ಸೀ..<div dir="ltr" style="text-align: left;" trbidi="on">
ಮೇರೇ ಘರ್ ಕೇ ಆಂಗನ್ ಮೇ, ಛೋಟಾ ಸಾ ಝೂಲಾ ಹೋ<br />
ಸೋಂಧೀ ಸೋಂಧೀ ಮಿಟ್ಟೀ ಹೋಗಿ, ಲೇಪಾ ಹುವಾ ಚೂಲಾ ಹೋ<br />
ಥೋಡಿ ಥೋಡಿ <span style="font-family: 'tunga';">ಆಗ್ </span>ಹೋಗೀ..ಥೋಡಾ ಸಾ ದುವಾಂ...<br />
<span style="color: #666666;">(<span style="font-family: "tunga";">ಗುಲ್ಜಾರ್ ಕವಿತೆ, ಭೂಪಿಂದರ್ ಮತ್ತು ಲತಾ ಹಾಡುಗಾರಿಕೆ)</span></span><br />
<br />
ಒಂದು ಉಲಿ ಮೆಲ್ಲನೆ ಹರಿಯುತ್ತಿದೆ ಸ್ಟೀರಿಯೋದಿಂದ.. ಅದು ಅಲ್ಲಿಂದ ಹೊರಗೆ ಬಂದಿದ್ದಲ್ಲ. ಬಹುಶಃ ನಮ್ಮೊಳಗಿನ ಹಂಬಲಗಳೇ ಆ ಪದಗಳಲ್ಲಿ ತುಂಬಿ ಹಾಡಲ್ಲಿ ಹರಿದಿರಬಹುದು...ನನ್ನ ಮಾತು ಕೇಳಿ ನಿನ್ನ ಪುಟ್ಟ ಬಾಯಿ ಕಿರುನಗುತ್ತದೆ.<br />
ಬಾಯ ತುದಿಯಿಂದ ಅದು ಹೇಗೋ ಆ ನಗು ನಿನ್ನ ಕಣ್ಣಿಗೆ ಜಿಗಿದು ನನ್ನ ಕಣ್ಣ ತುಂಬ ಬೆಳದಿಂಗಳು ಸುರಿದು<br />
ಮಾತೆಲ್ಲ ಮೂಕವಾಗಿ ಸುಮ್ಮನೆ ಬೆರಳಿಗೆ ಬೆರಳು ಬೆಸೆದು, ಕಣ್ತುಂಬಿದ ನೋಟವನ್ನ ಬಿಡಲಿಷ್ಟವಿಲ್ಲದೆ ಕಣ್ಣೊಳಗೇ ಮುಚ್ಚಿಕೊಂಡು ಆಗಸಕ್ಕೆ ಮುಖ ಮೇಲೆತ್ತಿ ಕೂತುಬಿಡುವೆ.<br />
<br />
ಚಿಕ್ಕ ಉಯ್ಯಾಲೆಯಲ್ಲಿ ಜೀಕುತ್ತ ಕಣ್ಣು ಬಿಟ್ಟು ನೋಡುತ್ತೇನೆ. ಅಂಗಳವನ್ನು ಮೆಟ್ಟಿ ಜೀಕಿದ ಉಯ್ಯಾಲೆ ಕೆಳಗಿಳಿಯದೆ ಹಾಗೆ ಮೇಲೇರಿ..ಬೆಟ್ಟ ಗುಡ್ಡ ಹಾದು, ಮೋಡ ಮಳೆಗಳಲಿ ನೆನೆದು, ಸಮುದ್ರದ ಉಪ್ಪು ಗಾಳಿ ಕುಡಿದು...ನಿಧಾನಕ್ಕೆ ಇಳಿಯುತ್ತಿದೆ ಅಂಗಳದಿಂದ ದೂರ, ಬಯಲುಗಳಾಚೆಗೆ ಕಿಕ್ಕಿರಿದ ಮಹಾನಗರದ ಚೆಲುವಾದ ಬೀದಿಯ ಸೊಗಸಾದ ಮನೆಯೊಂದರ ಛಾವಣಿಗೆ.<br />
<br />
ಅದೇ ಆಗಸ, ಅದೇ ಚಂದ್ರ. ನೋಡುವ ಪಾತಳಿಯೇ ಬೇರೆ.<br />
ಚಂದ್ರನಿಳಿಯಲಾರ ಇಲ್ಲಿ ನೇವರಿಸಲಾರ ಕೆನ್ನೆ ಬೆಸೆಯುವುದಿಲ್ಲ ಬೆರಳು...<br />
ದಾರಿಯೇ ಹೊರಳು. ತುಂಬಿನಿಂತ ಕೊರಳು.<br />
<span style="font-family: "tunga";">ಥೋಡೀ ಸೀ..ಎಂದು ಕೊಳ್ಳುವುದೂ ಕೂಡ ಎಷ್ಟು ಭಾರಿಯಾಗಿ ಹೋಗಿ ನಿಲುಕದೆ ಇದ್ದು ಬಿಡಬಹುದು ಎಂದು ಅರ್ಥವಾಗುತ್ತಿರುವ ದಿನಗಳು.</span></div>
ಸಿಂಧು sindhuhttp://www.blogger.com/profile/11363295766940671498noreply@blogger.com2tag:blogger.com,1999:blog-4515791944382207090.post-57766417376715824532018-07-17T22:36:00.004+05:302018-07-17T22:36:59.033+05:30<div dir="ltr" style="text-align: left;" trbidi="on">
ಎರಡು ಮೆದುದಿಂಬುಗಳ<br />
ನಡುವಿನ ಹಳ್ಳದಲಿ<br />
ತಲೆಯಿಟ್ಟು ಮಲಗುವುದೆ<br />
ತಾಯ್ತನ!</div>
ಸಿಂಧು sindhuhttp://www.blogger.com/profile/11363295766940671498noreply@blogger.com0tag:blogger.com,1999:blog-4515791944382207090.post-1646624564426077382018-07-10T17:31:00.002+05:302018-07-10T17:32:26.819+05:30<div dir="ltr" style="text-align: left;" trbidi="on">
<span style="font-family: "tunga";">"ಕರೆದ ದಾರಿ ಬೇರೆ, ಮತ್ತೆ</span><br />
<span style="font-family: "tunga";">ಹಿಡಿದ ದಾರಿ ಬೇರೆಯೆ!</span><br />
<span style="font-family: "tunga";">ಹಾತೊರೆದು ನಡೆವರನ್ನು</span><br />
<span style="font-family: "tunga";">ಹಾದಿಗೆಡಿಸುತಾರೆಯೆ?"</span><br />
<span style="font-family: "tunga";"> - ದಿಗ್ಭ್ರಾಂತ ಕವಿತೆ - ಗಂಗಾಧರ ಚಿತ್ತಾಲ</span><br />
<span style="font-family: "tunga";"><br /></span>
<br />
<div style="font-family: tunga;">
</div>
<span style="font-family: "tunga";">ಇವತ್ತು ಈ ಕವಿತೆ ಓದಿ ಒಂದು ವಿಚಿತ್ರ ಮನಸ್ಥಿತಿ ಉಂಟಾಯಿತು. ಎಲ್ಲೆಲ್ಲಿಯದೋ ಯಾವಯಾವದೋ ವಿಷಯಗಳು ಕನೆಕ್ಟ್ ಆಗಿಬಿಟ್ಟಿತು. </span><br />
<span style="font-family: "tunga";">ಒಂದೊಳ್ಳೆಯ ಕವಿತೆ ಅಂದ್ರೆ ಹೀಗೆ ಅಲ್ಲವೆ? ನಾನು ಹುಟ್ಟುವುದಕ್ಕೂ ಮೂವತ್ತು ವರುಷಗಳಿದ್ದಾಗ ಬರೆದ ಕವಿತೆ ನಾನು ಹುಟ್ಟಿ ನಲವತ್ತು ವರುಷದ ಮೇಲೆ ನನ್ನನ್ನು ಅಲುಗಾಡಿಸುವ ಈ ಕಾವ್ಯಾನುಸಂಧಾನಕ್ಕೆ ಮನಸೋತಿರುವೆ.</span><br />
<span style="font-family: "tunga";">ಪು.ತಿ.ನ ಬರೆದ ಹಾಗೆ "ಕಥೆಗಳ ಬರೆಯುವ ಕಥೆಗಾರ ನಿನ್ನ ಕಲೆಗೆ ಯಾವುದು ಪಾರ.."</span><br />
<div style="font-family: tunga;">
</div>
<span style="font-family: "tunga";"><br /></span>
<span style="font-family: "tunga";">ಇದೇ ಹುಕಿಯಲ್ಲಿ ನನ್ನದೊಂದು ಸೊಲ್ಲು ತಡೆದರೂ ಮತ್ತೆ ಬಂದು ಬರೆಸಿಕೊಂಡಿತು.</span><br />
<div style="font-family: tunga;">
</div>
<span style="font-family: "tunga";"><br /></span>
<span style="font-family: "tunga";">ಬದಲಾದ ಹಾದಿ, ಹೆಜ್ಜೆ,</span><br />
<span style="font-family: "tunga";">ಜತೆಪಯಣದ ವಜ್ಜೆ</span><br />
<span style="font-family: "tunga";">ನೋಡುತ್ತಲೆ ಕಳೆದ ದಿನಗಳ</span><br />
<span style="font-family: "tunga";">ನಿಲ್ದಾಣದಿಂದ ಹೊರಟು</span><br />
<span style="font-family: "tunga";">ನೋಡದಿದ್ದರೂ ನಡೆದೀತೆಂಬ</span><br />
<span style="font-family: "tunga";">ನಿಲುಗಡೆಗಳ ದಾರಿ</span><br />
<span style="font-family: "tunga";">ತುಟಿಮುಚ್ಚಿದ ಕಣ್ರೆಪ್ಪೆಗಳು ಉದುರಿವೆ</span><br />
<span style="font-family: "tunga";">ತುಟಿ ಮುಟ್ಟಲಾರದೆ ಅದುರಿದೆ</span><br />
<span style="font-family: "tunga";">ನೀನು ನಡೆದುಬಿಟ್ಟಿದ್ದೀ</span><br />
<span style="font-family: "tunga";">ನಾನು ಹೊರಳಿಬಿಟ್ಟಿರುವೆ</span><br />
<span style="font-family: "tunga";">ಆದರೂ </span><br />
<span style="font-family: "tunga";">ಆ ನೀನು</span><br />
<span style="font-family: "tunga";">ಕಾಲವಳಿಸದ ನಿಜ</span><br />
<span style="font-family: "tunga";">ನನ್ನ ನೆನಪಿನಲ್ಲಿ,</span><br />
<span style="font-family: tunga;">ಒಂದೇ ಹಾದಿಯ, ಹೆಜ್ಜೆ-ಮೇಲೆ-ಹೆಜ್ಜೆಯೇ ಕನಸಿನಲ್ಲಿ.</span></div>
ಸಿಂಧು sindhuhttp://www.blogger.com/profile/11363295766940671498noreply@blogger.com0tag:blogger.com,1999:blog-4515791944382207090.post-23127085542611253262018-07-06T17:04:00.002+05:302018-07-06T17:04:55.189+05:30ಉಮ್ಮತ್ತಿ<div dir="ltr" style="text-align: left;" trbidi="on">
<span style="font-family: "tunga";">ಇರಬಹುದೆ</span><br />
<span style="font-family: "tunga";">ರಸ,ಹಣ್ಣು,ಕಾಯಿ,ಬೇರು..</span><br />
<span style="font-family: "tunga";">ಉಮ್ಮತ್ತಿ ಕಾಯಿಯ ಹಾಗೆ?</span><br />
<span style="font-family: "tunga";">ಎರಡು ದಿನ ಹಚ್ಚಿದ ಮೇಲೆ</span><br />
<span style="font-family: "tunga";">ಕೂದಲುದುರಿ ನುಣ್ಣಗಾಗಿ</span><br />
<span style="font-family: "tunga";">ಫಣಿಯ ಮಂಡೆ ಬೋಳಾದ ಹಾಗೆ</span><br />
<span style="font-family: "tunga";">ಗಂಟಲ ಸಮುದ್ರದೊಳಗಿಂದ</span><br />
<span style="font-family: "tunga";">ಉಕ್ಕಿ ಬರುವ ಮಾತಿನಲೆಗಳ</span><br />
<span style="font-family: "tunga";">ಅಡಗಿಸಿ, ಮಲಗಿಸಿ,</span><br />
<span style="font-family: "tunga";">ಮೌನದಂಡೆಗೆ ಮರಳಿಸುವ</span><br />
<span style="font-family: "tunga";">ಮಾಯಕದ ರಸ, ಹಣ್ಣು, ಕಾಯಿ, ಬೇರು?</span><br />
<span style="font-family: "tunga";">ಇರಬಹುದೆ</span><br />
<span style="font-family: "tunga";">ಸಿಗಬಹುದೆ</span><br />
<span style="font-family: tunga;">ಜೀವವುಳಿಯಬಹುದೆ?</span></div>
ಸಿಂಧು sindhuhttp://www.blogger.com/profile/11363295766940671498noreply@blogger.com1tag:blogger.com,1999:blog-4515791944382207090.post-72533403961285926282018-06-08T15:10:00.001+05:302018-06-08T15:15:39.338+05:30ಮಳೆಯಾಗುವ ಮೊದಲು..<div dir="ltr" style="text-align: left;" trbidi="on">
<span style="font-family: "tunga";">ವಿಷಯ ತಿಳಿಯಿತು.</span><br />
<span style="font-family: "tunga";">ಹಾಂ ಇಲ್ಲ, ಹೂಂ ಇಲ್ಲ,</span><br />
<span style="font-family: "tunga";">ಬೇಕಿತ್ತೋ ತಿಳಿಯಲಿಲ್ಲ. </span><br />
<span style="font-family: "tunga";">ಬೇಕಾಗಿರಲಿಲ್ಲವೋ ಗೊತ್ತಾಗಲಿಲ್ಲ!</span><br />
<span style="font-family: "tunga";"><br /></span>
<span style="font-family: tunga;">ಇನ್ನೊಂದು ವಾರ,</span><br />
<span style="font-family: "tunga";">ಮತ್ತೊಂದು ಸ್ಕ್ಯಾನು,</span><br />
<span style="font-family: "tunga";">ಮತ್ತೆ ನಾಕು ಹೃದಯ,</span><br />
<span style="font-family: "tunga";">ಕಣ್ಣರಳಲಿಲ್ಲ, ನಗು ಅರಳಲಿಲ್ಲ,</span><br />
<span style="font-family: "tunga";">ಕೈಲಿ ಹರಿಯತ್ತಾ ಎಂಬ ಪ್ರಶ್ನೆ</span><br />
<span style="font-family: "tunga";">ತುಟಿಯ ಬದಿಗೆ </span><span style="font-family: "tunga";">ಬಿರಿದೂ...</span><br />
<span style="font-family: "tunga";">ಮಾತಾಗಲಿಲ್ಲ. :(</span><br />
<span style="font-family: "tunga";"><br /></span>
<span style="font-family: "tunga";">ಎರಡು ಜೀವದ</span><br />
<span style="font-family: "tunga";">ಬಯಕೆ,</span><br />
<span style="font-family: "tunga";">ಸುತ್ತ ಹಬ್ಬಿದ ಜಗಕೆ-</span><br />
<span style="font-family: "tunga";">ತಿಳಿಯಲಿಲ್ಲ.</span><br />
<span style="font-family: "tunga";"><br /></span>
<span style="font-family: "tunga";">ಎಲ್ಲರ ಕಣ್ಣಿಗೂ ಅವರವರದೆ ಕನ್ನಡಕ.</span><br />
<span style="font-family: tunga;"><br /></span>
<span style="font-family: tunga;">ಒಂದು ಪುಟ್ಟ ಜೀವ ಮಾತ್ರ</span><br />
<span style="font-family: "tunga";">ದಿವಾನ ಏರಿ ನಿಂತು</span><br />
<span style="font-family: "tunga";">"ಈಗೆತ್ತಿಕೋ ಅಮ್ಮ</span><br />
<span style="font-family: "tunga";">ಕೆಳಗಿಂದ ಎತ್ತಲು ಕಷ್ಟವಾಗುತ್ತೆ" ಅಂತು. </span><br />
<span style="font-family: tunga;">ಆ ಜೀವದ "ನೆನಕೆ,</span><br />
<span style="font-family: "tunga";">ಆಶೆ, ಹೊಟ್ಟೆಕಿಚ್ಚು, ಮತ್ತು ಮುದ್ದುಗರೆಯುವಿಕೆಯೇ</span><br />
<span style="font-family: "tunga";">ನಿನ್ನ ಬದುಕಿನ ಹರಕೆ"</span><br />
<span style="font-family: "tunga";">ಎಂದು ನಾನು ಇಂದು ಹೇಳಿದರೆ ನಿನಗೆ ತಿಳಿಯುವುದಿಲ್ಲ.</span><br />
<span style="font-family: "tunga";"><br /></span>
<span style="font-family: tunga;">ಎಲ್ಲರ ಕನ್ನಡಕದ ಪವರ್ ಬದಲಾಗಿದೆ.</span><br />
<span style="font-family: "tunga";">ಅಂಗಳದಿ ಅರಳಿದ ಹೂವು ಎಲ್ಲರ ಮನವರಳಿಸಿದೆ.</span><br />
<span style="font-family: "tunga";">ಹೊಕ್ಕಳ ಬಳ್ಳಿಗೆ ಮಾತ್ರ ಯಾವುದೇ ಕನ್ನಡಕವಿಲ್ಲ, ಲೆನ್ಸು ಇಲ್ಲ.</span><br />
<span style="font-family: "tunga";">ಅದೇ ಆಶೆ, ಅದೇ ಬಯಕೆ, ಜೀವದಾಳದಲಿ ಮಮತೆ.</span><br />
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: "tunga";"><br /></span></div>
</div>
ಸಿಂಧು sindhuhttp://www.blogger.com/profile/11363295766940671498noreply@blogger.com1tag:blogger.com,1999:blog-4515791944382207090.post-85821570582464542242018-06-03T00:13:00.000+05:302018-06-03T00:16:32.310+05:30ಕಿಟಕಿಯಾಚೆಗಿನ ಆಕಾಶ<div dir="ltr" style="text-align: left;" trbidi="on">
<span style="font-family: "tunga";">ಮೋಹದಾ ಹೆಂಡತಿ ತೀರಿದ ಬಳಿಕ...</span><br />
<span style="font-family: "tunga";">ಅವನು ಹೋಗಬಹುದು</span><br />
<span style="font-family: "tunga";">ಎಳೆಗಳ ರೇಷಿಮೆಯ ಕತ್ತರಿಸಬಹುದದು</span><br />
<span style="font-family: "tunga";">ಲೋಕರೂಢಿ</span><br />
<div style="font-family: tunga;">
</div>
<span style="font-family: "tunga";"><br /></span>
<span style="font-family: "tunga";">ಮೋಹ ಹರಿದರೂ </span><br />
<span style="font-family: "tunga";">ಇವಳು ಮಾತ್ರ...</span><br />
<span style="font-family: "tunga";"><br /></span>
<span style="font-family: "tunga";">ಅವನ ಮನೆಯ ಗಟ್ಟಿ ದಿಂಬ (ಗೋಡೆ)</span><br />
<span style="font-family: "tunga";">ಅತ್ತೆ ಮಾವರ ದಿಟ್ಟಿ ಕಂಬ</span><br />
<span style="font-family: "tunga";">ಮಕ್ಕಳ ಹೊಟ್ಟೆ ತುಂಬ</span><br />
<span style="font-family: "tunga";">ಜೀವರಸ ಪಾಕ ಹದಗೊಳಿಸದೆ</span><br />
<span style="font-family: "tunga";">ಹೊರಟು</span><br />
<span style="font-family: "tunga";">ಮುರಿದರೆ ರೂಢಿ</span><br />
<span style="font-family: "tunga";">ಸಮಾಜಕ್ಕೆ ರಾಡಿ.</span><br />
<span style="font-family: "tunga";"><br /></span>
<br />
<div style="font-family: tunga;">
</div>
<span style="font-family: "tunga";">ಒಳಗಿನ ಬಗ್ಗಡ</span><br />
<span style="font-family: "tunga";">ರಾಚದಂತೆ</span><br />
<span style="font-family: "tunga";">ನೋವ ನೂಲು</span><br />
<span style="font-family: "tunga";">ಕಾಣದಂತೆ</span><br />
<span style="font-family: "tunga";">ಬದುಕ ನೇಯ್ಗೆ ನೇಯುವಂತೆ</span><br />
<span style="font-family: "tunga";">ಇವಳಿಗೆ ಕಲಿಸಲಾಗಿದೆ.</span><br />
<span style="font-family: 'tunga';">ಇಲ್ಲದ ಗೂಟಕೆ</span><br />
<span style="font-family: "tunga";">ಒಲ್ಲದ ಹಗ್ಗಕೆ</span><br />
<span style="font-family: "tunga";">ಒಡ್ದಿ ಇವಳು ನಿಲ್ಲಬೇಕಿದೆ.</span><br />
<div style="font-family: tunga;">
</div>
<span style="font-family: "tunga";"><br /></span>
<span style="font-family: "tunga";">ಮೋಹದ ಹೆಂಡತಿ ತೀರಿದ ಬಳಿಕ ಅವನು</span><br />
<span style="font-family: "tunga";">ಸ್ವಚ್ಭ ಆಕಾಶದಿ ತೇಲುವ ಹಕ್ಕಿ.</span><br />
<span style="font-family: "tunga";">ಒಂದೊಂದು ಸಲ ಆಕಾಶವೂ ಆಗಿಬಿಡಬಹುದು.</span><br />
<div style="font-family: tunga;">
</div>
<span style="font-family: "tunga";"><br /></span>
<span style="font-family: "tunga";">ಇವಳು ಬರೀ </span><br />
<span style="font-family: "tunga";">ದಿಟ್ಟಿ ಹರಿಸಬಹುದು</span><br />
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: "tunga";">ಕಿಟಕಿಯಾಚೆಗಿನ ಆಕಾಶ</span><span style="font-family: tunga;">ಕೆ.</span></div>
</div>
ಸಿಂಧು sindhuhttp://www.blogger.com/profile/11363295766940671498noreply@blogger.com1tag:blogger.com,1999:blog-4515791944382207090.post-20577189984938949942018-05-08T13:43:00.000+05:302018-05-08T23:05:22.768+05:30ಮಳೆ ಮೋಡ (ಮಾತ್ರ)..<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhIwQjYV-bo1G3gR0hv-bW1ZTN_S7_Zc8eA2WBX14QFHO49ovKBMeXhMxzIlclshyphenhyphengkeaNbb7t05rAT9HbWeyvsbIsdYpUUEjGF4drYvkr9U4HU5787OYplzzdmGPJ2H-E7p7DwkFptN1A/s1600/IMG_20180407_120603.jpg" imageanchor="1" style="margin-left: 1em; margin-right: 1em;"><img border="0" data-original-height="1200" data-original-width="1600" height="480" src="https://blogger.googleusercontent.com/img/b/R29vZ2xl/AVvXsEhIwQjYV-bo1G3gR0hv-bW1ZTN_S7_Zc8eA2WBX14QFHO49ovKBMeXhMxzIlclshyphenhyphengkeaNbb7t05rAT9HbWeyvsbIsdYpUUEjGF4drYvkr9U4HU5787OYplzzdmGPJ2H-E7p7DwkFptN1A/s640/IMG_20180407_120603.jpg" width="640" /></a></div>
<span style="font-family: "tunga";"><br /></span><span style="font-family: "tunga";">ಮೊಣಕಾಲುದ್ದ ನೀರಿನ ಹೊಳೆಯಲ್ಲಿ ಆಡುವ ಮಕ್ಕಳು</span><br />
<span style="font-family: "tunga";">ಬಿಸಿಬಿಸಿ ಕಲ್ಸೋಪಾನದ ಅಂಚಿಗೆ ನೆರಳಾಡುವ ಅರಳಿಮರ</span><br />
<span style="font-family: "tunga";">ಬಿರು ಬೇಸಿಗೆಯ ಮಧ್ಯಾಹ್ನದಿ ಮಳೆ ಮೋಡ.</span><br />
<span style="font-family: "tunga";">ಈಗೀಗ,</span><br />
<span style="font-family: "tunga";">ಬರಬೇಕಾದ ಮಳೆ, ಮೋಡ ತುಂಬಿಯೂ ಬರುವುದಿಲ್ಲ</span><br />
<span style="font-family: "tunga";">ಆಸೆ ತೋರಿಸಿ ಕರಗುವುದನ್ನು ಮೋಡಗಳು ಕಲಿತಿವೆ;</span><br />
<span style="font-family: "tunga";">ಕರಗಿದ, ಪುಡಿಯಾದ, ಆಸೆಬೆಟ್ಟದ ತಪ್ಪಲಿನವಳು ಮಾತ್ರ</span><br />
<span style="font-family: "tunga";">ಕಲಿಯಲಾರದೆ ಕಾಯುತ್ತಲೇ ಇರುವಳು.</span><br />
<span style="font-family: "tunga";"><br /></span><span style="color: #444444; font-family: "tunga";">(ದೋಣಿಯೊಳಗೆ ನೀನೂ....)</span><br />
<span style="font-family: "tunga";">ನೀನು ಒಬ್ಬನೇ ನಿಲ್ಲಬಯಸಿದೆ. </span><br />
<span style="color: #444444; font-family: "tunga";">(ಕರೆಯ ಮೇಲೆ ನಾನೂ...)</span><br />
<span style="font-family: "tunga";">ನಾನು ಒಬ್ಬಳೇ ಆಗಿಬಿಟ್ಟೆ.</span><br />
<span style="font-family: "tunga";">ಸುತ್ತ ಮಕ್ಕಳು, ನದಿ, ಆಕಾಶ, ಮಳೆ ಮೋಡ, ಬಿಸಿಲು, </span><br />
<div style="-qt-block-indent: 0; margin-bottom: 0px; margin-left: 0px; margin-right: 0px; margin-top: 0px; text-indent: 0px;">
<span style="font-family: "tunga";">ಸೋಪಾನ, ಅರಳಿ ಮರ, ಮತ್ತು ಊರೊಳಗೆ ಹೋಗುವ ಹಾದಿ.</span></div>
</div>
ಸಿಂಧು sindhuhttp://www.blogger.com/profile/11363295766940671498noreply@blogger.com3tag:blogger.com,1999:blog-4515791944382207090.post-87661968546669676562018-04-06T17:27:00.000+05:302018-04-09T11:26:15.194+05:30ನಡೆಯುತ್ತ ನಡೆಯುತ್ತ...<div dir="ltr" style="text-align: left;" trbidi="on">
<span style="font-family: "tunga";">ಮಲ್ಲಿಗೆಯಿಂದ ಮಲ್ಲಿಗೆಗೆ,</span><br />
<span style="font-family: "tunga";">ಕನಸಿನಿಂದ ಕನಸಿಗೆ,</span><br />
<span style="font-family: "tunga";">ದಾಟುತ್ತ ದಾಟುತ್ತ,</span><br />
<span style="font-family: "tunga";">ಈಗ ನನಸಿನ ಬಯಲು,</span><br />
<span style="font-family: "tunga";">ಸ್ವಪ್ನ ಹರಡಿದ ಮುಗಿಲು,</span><br />
<span style="font-family: "tunga";">ವಸಂತದ ಗಂಧ ಗಾಳಿ ಹೂಗೊಂಚಲು</span><br />
<span style="font-family: "tunga";">ಎಂದಿನ ಹಾಗೆ ಚೆಲುವರಿದೂ,</span><br />
<span style="font-family: "tunga";">ಕೇಳದಿದೆ ಕೋಗಿಲೆಯ ಕುಕಿಲು,</span><br />
<span style="font-family: "tunga";">ನೆರಳಿಗಿಂತಲೂ ಉದ್ದದ ಬಿಸಿಲು.</span><br />
<div style="font-family: tunga;">
</div>
<span style="font-family: "tunga";"><br /></span>
<span style="font-family: "tunga";">ಮಲ್ಲಿಗಿ ಮಂಟಪದಾಗ</span><br />
<span style="font-family: "tunga";">ಗಲ್ಲ ಗಲ್ಲ ಹಚ್ಚಿಕೂತು</span><br />
<span style="font-family: "tunga";">ಯಾರಿಗೂ ಹೇಳದ ಪಯಣ-</span><br />
<span style="font-family: "tunga";">-ದ ದಾರಿ ಬದಲಾಗಿ</span><br />
<span style="font-family: "tunga";">ಸಮಾಹಿತ-</span><br />
<span style="font-family: "tunga";">-ದ ನಿರ್ವಾತ,</span><br />
<span style="font-family: "tunga";">ಝಗಮಗಿಸುವ ಸೂರ್ಯನೇ</span><br />
<span style="font-family: "tunga";">ಬೆಚ್ಚಿ ಬೆಮರುವ ಕಪ್ಪುಕುಳಿ ಬದುಕಿನ</span><br />
<span style="font-family: "tunga";">ಅವಕಾಶದಿ,</span><br />
<span style="font-family: "tunga";">ಬಗೆಬಗೆಯ ಉಲ್ಕಾಪಾತ.</span><br />
<span style="font-family: "tunga";">ಈಗ ಮಲ್ಲಿಗೆ ಬಳ್ಳಿ ಡೆಸ್ಕ್ ಟಾಪಿನ ಸ್ಕ್ರೀನ್ ಸೇವರಲ್ಲಿದೆ,</span><br />
<span style="font-family: "tunga";">ರಾತ್ರಿ ರಾಣಿಯ ಬೊನ್ಸಾಯ್ ಕಿಟಕಿ ಪಕ್ಕದ ಕುಂಡದಲ್ಲಿದೆ,</span><br />
<span style="font-family: "tunga";">ಮಕ್ಕಳ ಕೈಗೆ ಸಿಕ್ಕಿ ತುದಿ ಹರಿದ-</span><br />
<span style="font-family: "tunga";">ಜತೆಪಯಣದ ಚೊಲೋ ಚಿತ್ರವ ಫ್ರೇಮಲ್ಲಿ ಸಿಕ್ಕಿಸಲಾಗಿದೆ.</span><br />
<div style="font-family: tunga;">
</div>
<div style="font-family: tunga;">
</div>
<span style="font-family: "tunga";"><br /></span>
<span style="font-family: "tunga";">ಕೆ.ಎಸ್.ನ ಹೇಳಿದಂತೆ</span><br />
<span style="font-family: "tunga";">"ಕವಿತೆ ಕರವಸ್ತ್ರ"</span><br />
<span style="font-family: "tunga";">ಮತ್ತು ಚಿಕಿತ್ಸೆ ಕೂಡ.</span><br />
<span style="font-family: "tunga";">ಲಘು ಗುರು ಮಾತ್ರೆಗಳ ಬಲವೇ ಬಲ.</span><br />
<span style="font-family: "tunga";">ಬೇಂದ್ರೆ ಅಜ್ಜ ಬೇಜಾರಾಗಬ್ಯಾಡ್ರಿ</span><br />
<span style="font-family: "tunga";">ನೀವು ಹೇಳಿದ ಹಾಗೆ</span><br />
<span style="font-family: "tunga";">"ಕವಿಗೆ ಏನು ಬೇಕು</span><br />
<span style="font-family: "tunga";">ಹೂತ ಹುಣಸೀಮರ ಸಾಕು"</span><br />
<span style="font-family: "tunga";">ಬದುಕಿನ ಮರದೆದೆಗೆ ಕವಿತೆಯ ಹನಿ ಹನಿ ಬೇಕು.</span><br />
<span style="font-family: "tunga";">ಆದರೂ ಕೊನೆಗೆ ಒಂದು ಮಾತು ಹೇಳಲು</span><br />
<span style="font-family: "tunga";">ಅಡಿಗರೇ ಸೂಕ್ತ..</span><br />
<span style="font-family: "tunga";">"ಮುಗಿಲು ಮಿಂಚಿನ ತತ್ತಿ</span><br />
<span style="font-family: "tunga";">ತಳಕ್ಕೆ ಬೆಳಕಿನ ಮರಿಗಳಿಳಿಯಲಿಲ್ಲ.</span><br />
<span style="font-family: "tunga";">ಅಷ್ಟೊಂದು ಮಿಂಚು ಮಿಂಚಿದ್ದಕ್ಕೂ</span><br />
<span style="font-family: "tunga";">ಅಡಿಗೆಮನೆಯ ತರಗೆಲೆ ಹೊತ್ತಲಿಲ್ಲ."</span><br />
<span style="font-family: "tunga";">ಪಯಣ ಪೂರ್ಣದೆಡೆಗೇ ಇದ್ದರೂ</span><br />
<span style="font-family: "tunga";">ಪುಡಿಯಾಗುವುದು ನಿಯಮ.</span></div>
ಸಿಂಧು sindhuhttp://www.blogger.com/profile/11363295766940671498noreply@blogger.com2tag:blogger.com,1999:blog-4515791944382207090.post-74657953039006282412018-03-12T18:37:00.000+05:302018-03-12T18:37:48.322+05:30ಕವಿ ಮಿತಿ<div dir="ltr" style="text-align: left;" trbidi="on">
<span style="font-family: "tunga";">ನೆಲ ಹೇಳಿತು</span><br />
<span style="font-family: "tunga";">ಮುಗಿಲು</span><span style="font-family: "tunga";"> ಕಿವಿಗೊಟ್ಟಿತು</span><br />
<span style="font-family: "tunga";">ಮಧ್ಯದ ಜನಸಂಕುಲ ಗಾಬರಿಯಾಯಿತು</span><br />
<span style="font-family: "tunga";">ಒಂದು ತುಂತುರು ಮಳೆ</span><br />
<span style="font-family: "tunga";">ಮಳೆ ನಿಂತ ತಂಗಾಳಿ, ಹಕ್ಕಿ ಕುಕಿಲು</span><br />
<span style="font-family: "tunga";">ಎಂದಿನ ಹಾಗೆ ಟ್ರಾಫಿಕ್ಕು, ಕೆಲಸ, ಶಬ್ಧ,</span><br />
<span style="font-family: "tunga";">ತುಂಬಿ ತುಳುಕುವ ಸಾರಿಗೆ,ಆಸ್ಪತ್ರೆ, ಹೋಟೆಲು, </span><br />
<span style="font-family: "tunga";">ಹನಿ ತುಳುಕದ ಹಾಗೆ ಎಚ್ಚರದ ಬಾಟಲು.</span><br />
<div style="font-family: tunga;">
</div>
<span style="font-family: "tunga";"><br /></span>
<span style="font-family: "tunga";">ಆಗಸ ಪಿಸುನುಡಿಯಿತು</span><br />
<span style="font-family: "tunga";">ಭುವಿ ಕಿವಿಯಾಯಿತು</span><br />
<span style="font-family: "tunga";">ಮಧ್ಯದ ಜನಸಂಕುಲ ಕುಮ್ಹಿಟಿಬಿದ್ದರು</span><br />
<span style="font-family: "tunga";">ಆತಂಕ, ಸಾಶಂಕ, ದೇಗುಲಗಳಲ್ಲಿ ಪರಿಪರಿಯ ಅರ್ಚನೆ ತಳ್ಳಂಕ</span><br />
<span style="font-family: "tunga";">ಮತ್ತೊಂದು ಸುರಿಮಳೆ</span><br />
<span style="font-family: "tunga";">ತೊಳೆದ ಕೊಳೆ, ಮುರಿದು ಬಿದ್ದ ರೆಂಬೆ ಕೊಂಬೆ</span><br />
<span style="font-family: "tunga";">ಪಕ್ಕದ ಮರದಲ್ಲಿ ಗೂಡು ಸಿದ್ಧಗೊಳ್ಳುತ್ತಿರುವ ಸಂಜೆ</span><br />
<span style="font-family: "tunga";">ಬೆಳಕು ಚೆಲ್ಲಿದ ಪಾದಪಥ, ಕಿವಿ ತುಂಬುವ ಹಾರ್ನುಗೀತ</span><br />
<span style="font-family: "tunga";">ಮತ್ತದೇ ಟ್ರಾಫಿಕ್ಕು, ಕಿಕ್ಕಿರಿದ ಸಿಗ್ನಲು, </span><br />
<span style="font-family: "tunga";">ಉದ್ದ ಕ್ಯೂಭರಿತ ಸಾರಿಗೆ, ಆಸ್ಪತ್ರೆ, ಹೋಟೆಲು</span><br />
<span style="font-family: "tunga";">ಒಂದೆರಡು ಹನಿ ತುಳುಕಿಯೂ ತುಳುಕದ ಬಾಟಲು.</span><br />
<div style="font-family: tunga;">
</div>
<span style="font-family: "tunga";"><br /></span>
<span style="font-family: "tunga";">ಮಧ್ಯೆ ಟೆಕ್ನಾಲಜಿ</span><br />
<span style="font-family: "tunga";">ಪತ್ರ,ಮೆಸೇಜು,ಚಿತ್ರ, ಎಮೋಜಿ</span><br />
<span style="font-family: "tunga";">ಎಲ್ಲ ಸ್ತಬ್ಧ.</span><br />
<span style="font-family: "tunga";">ಶಬ್ಧದೊಳಗಣ ನಿಶ್ಯಬ್ಧ</span><br />
<span style="font-family: "tunga";">ದೊಳಗೆ </span><br />
<span style="font-family: "tunga";">ಅಮೃತವಾಹಿನಿಯೊಂದು</span><br />
<span style="font-family: "tunga";">ಹರಿಯುತ್ತಲೆ ಇರಲಿ</span><br />
<span style="font-family: "tunga";">ಎಂದಷ್ಟೆ ಬಯಸುವುದು</span><br />
<span style="font-family: tunga;">ಕವಿಯ ಭಾಗ್ಯ.</span></div>
ಸಿಂಧು sindhuhttp://www.blogger.com/profile/11363295766940671498noreply@blogger.com1tag:blogger.com,1999:blog-4515791944382207090.post-67632321771689347732018-03-12T18:21:00.000+05:302018-04-08T12:10:29.076+05:30ಇರಬಹುದೆ...<div dir="ltr" style="text-align: left;" trbidi="on">
<span style="font-family: "tunga";">ಜತೆಗಿಳಿದ ದಾರಿ ಬಿಟ್ಟು</span><br />
<span style="font-family: "tunga";">ತಿರುಗಿ ಹೊರಟೆ</span><br />
<span style="font-family: "tunga";">ಸಕ್ಕತ್ತಾಗಿ ಕೈಕೊಟ್ಲು ಗುರೂ</span><br />
<span style="font-family: "tunga";">ಲೋಕವೆಂದಿತು.</span><br />
<span style="font-family: "tunga";">ಎಲ್ಲಿ ಕೈಯಿಟ್ಟೆ, ಎಲ್ಲಿ ಬಿಟ್ಟೆ</span><br />
<span style="font-family: "tunga";">ಎಲ್ಲಿ ಕಟ್ಟಿದೆ, ಎಲ್ಲಿ ಒಡೆದೆ ಅಂತ</span><br />
<span style="font-family: "tunga";">ಅದಕ್ಕೇನು ಗೊತ್ತು</span><br />
<span style="font-family: "tunga";">ಪ್ಚ್ ಪ್ಚ್ ಅನ್ನುತ್ತದೆ.</span><br />
<span style="font-family: "tunga";"><br /></span>
<br />
<div style="font-family: tunga;">
</div>
<span style="font-family: "tunga";">ಬಿದ್ದು ಪುಡಿಯಾಗುವವಳಿದ್ದೆ</span><br />
<span style="font-family: "tunga";">ಒಂದು ಕಿರಿಬೆರಳು ಹಿಡಿದೆತ್ತಿ ನಿಲ್ಲಿಸಿತು</span><br />
<span style="font-family: "tunga";">ನೋಡ್ದಾ.. ಗೊತಿತ್ತು ನಂಗೆ</span><br />
<span style="font-family: "tunga";">ಎಂದು ಹಲವರಿಯಿತು ಲೋಕ</span><br />
<span style="font-family: "tunga";">ಏನು ಸಿಕ್ಕಿತು ಏನು ದಕ್ಕಿತು</span><br />
<span style="font-family: "tunga";">ಎದ್ದು ನಿಂತಿದ್ದು ಹೇಗೆ</span><br />
<span style="font-family: "tunga";">ಅದಕ್ಕೇನು ಗೊತ್ತು</span><br />
<span style="font-family: "tunga";">ಮುಸಿನಗೆ ನಗುತ್ತದೆ.</span><br />
<span style="font-family: "tunga";"><br /></span>
<br />
<div style="font-family: tunga;">
</div>
<span style="font-family: "tunga";">ಹೇಳಿದ ಮಾತು ಕೇಳಲಿಲ್ಲ</span><br />
<span style="font-family: "tunga";">ದೊಡ್ಡವರ ದಾರಿ ಸಾಗಲಿಲ್ಲ</span><br />
<span style="font-family: "tunga";">ಬೆನ್ನು ಹತ್ತದಿರದೆ ಪಾಪ</span><br />
<span style="font-family: "tunga";">ಕಳೆಯಬಹುದೆ ಶಾಪ</span><br />
<span style="font-family: "tunga";">ಹೊರೆಸುತ್ತದೆ ಲೋಕ</span><br />
<span style="font-family: "tunga";">ಏನು ಕೇಳಿದೆ, ಎಲ್ಲಿ ಹೋದೆ</span><br />
<span style="font-family: "tunga";">ಬೆನ್ನೇರಿದ್ದು ಏನು</span><br />
<span style="font-family: "tunga";">ಇಳಿಸಿದ್ದು ಏನು</span><br />
<span style="font-family: "tunga";">ಶಾಪವೋ ವರವೋ</span><br />
<span style="font-family: "tunga";">ಅದಕ್ಕೇನು ಗೊತ್ತು</span><br />
<span style="font-family: "tunga";">ಉಪದೇಶ ಮಾಡುತ್ತದೆ.</span><br />
<span style="font-family: "tunga";"><br /></span>
<br />
<div style="font-family: tunga;">
</div>
<span style="font-family: "tunga";">ಎಲ್ಲ ತಿರುವುಗಳೂ ಒಂದು ದಾರಿಯಲ್ಲಿ</span><br />
<span style="font-family: "tunga";">ಒಟ್ಟಾಗಿ ಕರಗುವಾಗ</span><br />
<span style="font-family: "tunga";">ಅನಿಸುತ್ತದೆ</span><br />
<span style="font-family: "tunga";">ಹೊರಳುದಾರಿ, ಕಿರುಬೆರಳು,</span><br />
<span style="font-family: "tunga";">ಎಡವು ನಡೆ, ಎದ್ದ ನಿಲುವು</span><br />
<span style="font-family: "tunga";">ಶಾಪ, ಉಶ್ಯಾಪ, ಪಶ್ಚಾತ್ತಾಪ, ಪರಿಹಾರ</span><br />
<span style="font-family: "tunga";">ಎಲ್ಲ ನಿಶ್ಚಿತವಾಗಿದ್ದು ಆ ನದೀಮೂಲದಲ್ಲೆ</span><br />
<span style="font-family: "tunga";">ಇರಬಹುದೆ?!!</span><br />
<span style="font-family: "tunga";">ಎಲ್ಲವೂ ಕರಗುವುದೆ ಒಂದೇ ನಿರಾಳದಲ್ಲಿ...?!</span><br />
<span style="font-family: "tunga";">ಮಡಕೆಯೊಳಗಿನ ನೀರು ಸಮುದ್ರದೊಡನೆ ಸೇರುವಲ್ಲಿ!</span></div>
ಸಿಂಧು sindhuhttp://www.blogger.com/profile/11363295766940671498noreply@blogger.com1