ಎಲ್ಲ ಕತ್ತಲ ಕೊನೆಯಲ್ಲೊಂದು ಬೆಳಕಿನ ಕೋಲು, ಬೇಸರದ ಕ್ಷಣಗಳ ಭಾರದ ಮೋಡವ ಇಳುಹಲು ಸುರಿವ ಮಳೆಯ ಆಹ್ಲಾದ,
ಇದೆ ಅಲ್ಲವೆ ಬದುಕು ಎಂಬ ಅರಿವು ಮತ್ತು ಇದೆಯೆ ಬದುಕು ಎಂಬ ಅಚ್ಚರಿ.
ನಾನು ತುಂಬ ಇಷ್ಟಪಟ್ಟ ಅಶ್ವತ್ಥರು ಮತ್ತು ಇಷ್ಟವಾಗಿದ್ದ ವಿಷ್ಣು ಇಬ್ಬರ ನಿರ್ಗಮನದ ಸುದ್ದಿಯ ಕಾರ್ಮೋಡದಂಚಿನ ಬೆಳ್ಳಿಗೆರೆಯಂತೆ ಹೊಳೆಯುತ್ತಿರುವುದು ಇನ್ನೊಂದು ಸುದ್ದಿ - ಸಂಕ್ರಾಂತಿಯ ಕಂಪಿಗೆ ಮತ್ತೆ ಕೆಂಡಸಂಪಿಗೆ
http://kendasampige.com/article.php?id=2953
ನೋವುಗಳನ್ನ ಮೀರುವ ಶಕ್ತಿಯನ್ನ ಬಯಸುತ್ತಾ,
ಪ್ರೀತಿಯಿಂದ,
ಸಿಂಧು
waiting for many more in kenda sampige
ReplyDeleteಚಿಂದಕ್ಕಾ...
ReplyDeleteಅರೆ ! ಕೆಂಡಸಂಪಿಗೆ ಮತ್ತೆ ಆರಂಭವಾ? ನಿಜ. ಪ್ರತಿಯೊಂದು ನೋವನ ಅಂಚಿನಲ್ಲೊಂದು ನಲಿವಿನ ಹೂ ಇದ್ದಿದ್ದಕ್ಕೇ ಬದುಕಿಷ್ಟು ಚೆಲುವು.
ನಿನ್ನ ಬ್ಲಾಗ್ ಲೇಖನಕ್ಕೆ ಪಬ್ಲಿಷ್ ಆದ ತಾರೀಖು ತಪ್ಪು ತೋರಿಸ್ತಿದೆಯೇನೇ ಚಿಂದಕ್ಕಾ... ಒಮ್ಮೆ ನೋಡೋ.