tag:blogger.com,1999:blog-4515791944382207090.post1912148168598008748..comments2023-10-11T15:10:15.328+05:30Comments on ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: ಭಿನ್ನ ರುಚಿಸಿಂಧು sindhuhttp://www.blogger.com/profile/11363295766940671498noreply@blogger.comBlogger5125tag:blogger.com,1999:blog-4515791944382207090.post-53394208027531232502007-07-03T11:53:00.000+05:302007-07-03T11:53:00.000+05:30ಶ್ರೀ,ನನ್ನ ಭಾವನೆಗಳನ್ನು ಸರಿಯಾದ ಪದದಲ್ಲೇ ಹಿಡಿದಿಟ್ಟಿದ್ದ...ಶ್ರೀ,<BR/>ನನ್ನ ಭಾವನೆಗಳನ್ನು ಸರಿಯಾದ ಪದದಲ್ಲೇ ಹಿಡಿದಿಟ್ಟಿದ್ದಕ್ಕೆ ಧನ್ಯವಾದಗಳು. ನಂಗೆ ಖುಷಿ, ನನ್ನದೇ ಲಹರಿಯಲ್ಲಿ ತೂಗುವ ನಿಮ್ಮ ಉಯ್ಯಾಲೆಯಲ್ಲಿ ನಾನೂ ಇದ್ದೇನೆ.. :)<BR/><BR/>ಉಮಾಶಂಕರ್,<BR/>ನಿಮಗಿಷ್ಟವಾಗಿದ್ದು ನನಗೆ ಖುಷಿ.<BR/><BR/>ರಂಜು,<BR/>ನೀನು ನನ್ನನ್ನ ಪರ್ಸನಲ್ ಆಗಿ ಹೀಗಿದ್ದಾಳೆ ಅಂತ ಭಾವಿಸಿಕೊಂಡಿದ್ದಕ್ಕೆ ಹಾಗೆ ಅನಿಸ್ತು. ನಾನು ಅಜ್ಜಿ ಥರಾ ಬರದ್ನಾ.. ಹಾಗೇನಾದ್ರು ಆದ್ರೆ ನಂಗೆ ಸಿಕ್ಕಾಪಟ್ಟೆ ಖುಷಿ. ಅಜ್ಜಿ ಥರಾ ಆಗದು/ಬರಿಯದು ಸುಲಭವಲ್ಲ.. :) <BR/><BR/>ಸುಶ್ ನ ಬರಹವನ್ನು ನನ್ನ ಬರಹದ ಬಗ್ಗೆ ಹೋಲಿಸಬೇಡ. ಮಾವು ಮತ್ತು ದಾಳಿಂಬೆ ಎರಡಕ್ಕೂ ಅದರದ್ದೇ ವಿಶಿಷ್ಟ ರುಚಿ ಇರುತ್ತೆ. ಅವನ ದಾರಿ, ರೀತಿ, ಪ್ರೀತಿ ಎಲ್ಲ ವಿಶಿಷ್ಟವಾಗಿದೆ. ಅಥವಾ ಹಾಗೇನಿದ್ದರೂ ನನಗಾಗಲಿ ಅವನಿಗಾಗಲಿ ಮೈಲ್ ಮಾಡು. ನಾನು ಬರೆದಿದ್ದು, ಅವನ ಪ್ರಶ್ನೆಗೆ ನಾನೇಕೆ ಮತ್ತು ಹೇಗೆ ಉತ್ತರಿಸಬೇಕು ಅಂತ ಯೋಚಿಸಿದ್ದರ ಬಗ್ಗೆ. ಅವನ ಬರಹದ ಮೌಲ್ಯಮಾಪನ ಅಲ್ಲ.ಅದು ಮಾಡಲೂ ಸಲ್ಲ.<BR/><BR/>ಭಾಗವತರೆ,<BR/><BR/>ನಿಮ್ಮ ಆಪ್ತ ಸ್ಪಂದನಕ್ಕೆ ನಾನು ಕೃತಜ್ಞ್ನೆ. ನಾನು ಆ ಸಾಲುಗಳನ್ನ ನೊಂದು ಬರೆಯಲಿಲ್ಲ. ಆ ಅನುಭೂತಿಯನ್ನ ನಿಮಗೆ ನನ್ನ ಸಾಲುಗಳು ಕೊಟ್ಟಿದ್ದಕ್ಕೆ ಕ್ಷಮಿಸಿ. ಅದು ನನ್ನ ಪ್ರಾಮಾಣಿಕ ಅನಿಸಿಕೆ, ಮತ್ತು ಆ ಬಗ್ಗೆ ನನಗೆ ಯಾವುದೇ ಬೇಸರ, ಹತಾಶೆ ಇಲ್ಲ. ವಯಸ್ಸು ಅಥವಾ ಪ್ರೌಢತೆ, ನಮಗರಿವಿಲ್ಲದೆ ನಮ್ಮನ್ನು ದಾಟಿ ಹೋಗುವ ಹಂತ. ಹೋದ ಮೇಲೆ ಮಾತ್ರ ಗೊತ್ತಾಗಬಹುದು ಗಮನಿಸುವ ಮನಸ್ಸಿದ್ದರೆ. <BR/><BR/>ನಾನೇನು ಮಹಾ, ಅಥವಾ ನಾನೇ ಒಂತರಾ ಅನ್ನುವ ಮಾತಲ್ಲ ಅದು. ನನ್ನದು ತನ್ನ ಪಾಡಿಗೆ ತಾನು ಸುರಿವ ಮಳೆಯ, ಯಾರೂ ನೋಡದ ತಿರುವಲಿ ಬಳುಕಿ ಹರಿವ ಹೊಳೆಯ ಹಾಗಿನ ಬರಹ ಅಂತ ನನ್ನ ಭಾವನೆ. ಹಾಗಂತ, ಯಾರಿಗೂ ಕಾಣಬಾರದೆನ್ನುವ ಸೀಕ್ರೆಸಿ ಅಲ್ಲ. ನೋಡಿದರೆ ನಿಮಗೆ ಖುಷಿ, ನೋಡಿ ನಂಗೆ ಹೀಗನ್ನಿಸಿತು ಅಂತ ಹೇಳಿದರೆ ನನಗೆ ಖುಷಿ. ಮತ್ತು ನನ್ನ ಬರಹ ಹೀಗೇ/ಹೀಗಲ್ಲ ಅಂತ ನನ್ನ ಕಟ್ಟಿಲ್ಲ ಅದನ್ನು ಹೇಳಲು ಹೊರಟೆ.<BR/><BR/>ಮತ್ತು ನಿಮ್ಮ ಕೊನೆಯ ಸಾಲು ತುಂಬ ನಿಜ. ಜಯಂತರ ಭಾವತೀವ್ರತೆ ಮತ್ತು ಕೆ.ಎಸ್.ನ ಅವರ ಭಾವಸೂಕ್ಷ್ಮಜ್ಞತೆ ನನ್ನ ಭಾವಲಹರಿಗಳನ್ನು ಯಾವಾಗಲೂ ಕೈ ಹಿಡಿದು ನಡೆಸಿವೆ. ಅದಕ್ಕೆ ವಿಷಾದವಿಲ್ಲ ಅಂತ ಗೆಳೆಯನಿಗೆ ಹೇಳಲು ಹೊರಟೇ ಇಷ್ಟೆಲ್ಲ ಆಯಿತು.. :)<BR/><BR/>ಏನಾದರೇನು.. ನಿಮ್ಮ ಬೆಚ್ಚನೆ ಬೆನ್ತಟ್ಟುವಿಕೆ, ಉಳಿದ ಭಾವುಕರ ಕಣ್ ಮೆಚ್ಚುಗೆ ನನಗೆ ಸಂತಸ ತಂದಿದೆ.<BR/><BR/>ಇಂತಹ ಸಾಲು - ದ್ವಿಮುಖ ಅರ್ಥ ನೀಡುವ ಸಾಲುಗಳನ್ನು - ಬರೆಯದಿರಲು ಎಚ್ಚರವಹಿಸುತ್ತೇನೆ.<BR/><BR/>ಪ್ರೀತಿಯಿರಲಿ,<BR/>ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-4515791944382207090.post-83865124675916937602007-06-29T09:38:00.000+05:302007-06-29T09:38:00.000+05:30ನಾನೇನು, ಮುಗಿದ ಯುವಾವಸ್ಥೆ, ಹಿಡಿತಕ್ಕೆ ಸಿಗದೆ ಕಳೆದುಕೊಂಡ...ನಾನೇನು, ಮುಗಿದ ಯುವಾವಸ್ಥೆ, ಹಿಡಿತಕ್ಕೆ ಸಿಗದೆ ಕಳೆದುಕೊಂಡ ಪ್ರೌಢತೆ, ಎಲ್ಲಿಯೂ ಸಲ್ಲದ ಹೊಳೆಬದಿಯ ಹಕ್ಕಿಕೂಗು...<BR/><BR/>ನಿಮ್ಮ ತಾಣಕ್ಕೆ ನಿತ್ಯ ಭೇಟಿ ಕೊಡುತ್ತೇನೆ, ಆದರೆ ಏನೂ ಗೀಚುತ್ತಿರಲಿಲ್ಲ. ಮೇಲಿನ ಸಾಲುಗಳನ್ನು ಓದುವಾಗ ನೀವು ತುಂಬ ನೊಂದಿರುವ ಹಾಗೆ ಕಾಣುತ್ತದೆ. ಹಾಗಾಗಿ ನನ್ನ ತೊದಲು ಮಾತುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.<BR/><BR/>ಕನ್ನಡದ ಹಲವು ಲೇಖಕಿಯರು ಬರೆಯಲು ಆರಂಭಿಸಿದ್ದೆ ೩೦ರ ವಯಸ್ಸಿನ ನಂತರ. ವೈದೇಹಿ, ಸುನಂದಾ ಪ್ರಕಾಶ ಕಡಮೆಯವರ ಉದಾಹರಣೆಯನ್ನ ಬೇಕಿದ್ದರೆ ತಗೊಳ್ಳಿ. ನಿಮ್ಮದು ಅಂಥದ್ದೇನೂ ವಯಸ್ಸು ಆಗಿಲ್ಲ. ಮತ್ತೆ ಯಾಕೆ ಈ ಹತಾಶೆಯ ಸಾಲುಗಳು?<BR/><BR/>ಮತ್ತೆ, ನನಗೆ ವೈಯಕ್ತಿಕವಾಗಿ, ಶ್ರೀರಾಮ್, ಜೋಗಿ, ರಶೀದ್-ರಂತಹ ಅತಿರಥ ಮಹಾರಥರನ್ನ ಬಿಟ್ಟರೆ ಹೆಚ್ಚು ಇಷ್ಟವಾಗುವುದು ನಿಮ್ಮ ಬರಹಗಳೆ. ಹಾಗಾಗಿಯೇ ತಿಂಗಳಿಗೊಮ್ಮೆ ಹಾಜರಿ ಹಾಕುವುದು ಇಲ್ಲಿ. ನಿಮ್ಮ ಭಾವತೀವ್ರತೆ, ಸ್ಪಂದನಶೀಲತೆ, ಒಳನೋಟ ತೀರ ಅನನ್ಯವಾದುದು. ಜಯಂತ ಹುಟ್ಟುಹಾಕಿದ ಭಾವತೀವ್ರತೆಯ ಪರಂಪರೆಯ ನೆರಳು ಇರಬಹುದಾದರೂ, ಅದಕ್ಕೆ ವಿಷಾದವೇಕೆ? ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಬರೆಯುತ್ತಿರುವವರೆಲ್ಲರ ಬರಹಗಳಲ್ಲು ಅದರ ಪ್ರಭಾವ ನಿಚ್ಚಳವಾಗಿದೆ. ನೀವೊಬ್ಬರೆ ಅದಕ್ಕೆ ಹೊರತಲ್ಲ. ವಿಷಾದ ಬೇಡ.<BR/><BR/>ಇನ್ನು ಮುಂದೆ ಇಂತಹ ಸಾಲುಗಳನ್ನು ಬರೆಯಲಾರಿರಿ ಎಂದು ನಿರೀಕ್ಷಿಸಬಹುದೇ?Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-4515791944382207090.post-16763851084737726562007-06-27T09:41:00.000+05:302007-06-27T09:41:00.000+05:30"ನಾನೇನು, ಮುಗಿದ ಯುವಾವಸ್ಥೆ, ಹಿಡಿತಕ್ಕೆ ಸಿಗದೆ ಕಳೆದುಕೊಂ..."ನಾನೇನು, ಮುಗಿದ ಯುವಾವಸ್ಥೆ, ಹಿಡಿತಕ್ಕೆ ಸಿಗದೆ ಕಳೆದುಕೊಂಡ ಪ್ರೌಢತೆ, ಎಲ್ಲಿಯೂ ಸಲ್ಲದ ಹೊಳೆಬದಿಯ ಹಕ್ಕಿಕೂಗು, ಅದು ಇವತ್ತು ತನ್ನಂತೆ ಕೂಗೀತು, ನಾಳೆ ಕೋಗಿಲೆಯಂತೆ ಚಣಕಾಲ ಅಣಕಿಸೀತು, ನಾಡಿದ್ದು ಕೂಗಲರಿಯದೆ ಸುಮ್ಮನುಳಿದೀತು, ಕೇಳುವವರು ಯಾರು ಅನ್ನಿಸಿತ್ತು".<BR/>ಈ ಲೈನು ಹ್ಮ್ ಏನೋ ಒಂಥರಾ ಚನ್ನಾಗಿ ಇದ್ದು. ಓದಲೇ ಆದರೆ ಅದನ್ನ ಸಿಂಧು ಅಕ್ಕನ ಒಟ್ಟಿಗೆ ಹೋಲಿಸಿ ನೋಡಿದರೆ ಯಾಕೋ ಬ್ಯಾಡ ಅನ್ನಿಸ್ತು. ಅಲ್ಲಾ ನಿಂಗೆ ಆಗಬಾರದ ವಯಸ್ಸು ಆಗಿ ಹೋಯ್ದೇನೋ ಅನ್ನೋತರ ಮಾತು ಆಡ್ತ್ಯಲಾ.(ಅಜ್ಜಿ ಅಷ್ಟು).<BR/>ಸುಶ್ ಯುವಬರಹಗಾರ ನಿಜ ಅವನ ಲೇಖನದಿಂದ ಬರುವುದು ಕಲ್ಪನೆಯ ಮಹಾಸಾಗರ್ ಆದರೆ ನಿನ್ನ ಲೇಖನದಿಂದ ಬರುವುದು ಅನುಭವದ ಸಪ್ತಸಾಗರ.<BR/>ನೀನು ಇನ್ನು ರಾಶಿ ಬರೆಯಕು. ನಾನು ಓದಕು.<BR/>ಈ ಕವನ ತುಂಬಾ ಚನ್ನಾಗಿ ಇದ್ದು. ಯಾವಾಗಲು ಕಥೆಗೆ, articles ಗೆ ಒಂದೇ ಅರ್ಥ ಇರ್ತು ಆದರೆ ಕವನಗಳಿಗೆ ಹಲವಾರು. ಓದುಗಾರ ಆಗ ಯಾವ ಮನಸ್ಥಿತಿಯಲ್ಲಿ ಇದ್ದ ಅನ್ನುವದರ ಮೇಲೆ ಅವಲಂಭಿಸಿದ್ದು. ಅದಕ್ಕೆ "ಬಿನ್ನರುಚಿ" ಚನ್ನಾಗಿದ್ದು ಅನ್ನಿಸ್ತಾ ಇದ್ದು. "ರುಚಿ" ರುಚಿಸುವಲ್ಲಿ ಎಡವಿದ್ದು.Anonymousnoreply@blogger.comtag:blogger.com,1999:blog-4515791944382207090.post-66583167088176803262007-06-26T19:34:00.000+05:302007-06-26T19:34:00.000+05:30This comment has been removed by the author.ಉಮಾಶಂಕರ್ ಯು.https://www.blogger.com/profile/12835667957384486339noreply@blogger.comtag:blogger.com,1999:blog-4515791944382207090.post-10682729099700090712007-06-26T17:56:00.000+05:302007-06-26T17:56:00.000+05:30"ನುಗ್ಗಿ ಬಂದ ಭಾವವೊಂದಕ್ಕೆ ಹೀಗೀಗೇ ಅಂತ ಕೈ ಹಿಡಿದು ನಡೆಸದ..."ನುಗ್ಗಿ ಬಂದ ಭಾವವೊಂದಕ್ಕೆ ಹೀಗೀಗೇ ಅಂತ ಕೈ ಹಿಡಿದು ನಡೆಸದೆ, ನೀನು ಹರಿದಂತೆ ಬರೆಯುವೆ ಎಂದು ತಲೆಬಾಗಿದೆನಷ್ಟೆ. ಯಾವಾಗಲೂ ಬರಹದ ದೇವರೊಂದಿಗೆ ಗುಟ್ಟು ಅನುಸಂಧಾನ ಮಾಡಿ, ಹಟಮಾಡಿ ನನಗೆ ಬೇಕೆಂದಂತೆ ನೇಯುವ ಆಟ ಬಿಟ್ಟು ಸುಮ್ಮನೆ ಶರಣಾದೆ. ಏನ ಮಾಡಲಿ, ಅದು ನನ್ನ ಅಪ್ರಜ್ಞಾವಸ್ಥೆಯಲ್ಲಿ ಶರಣುಹೋದ ಶೈಲಿಯನ್ನು ಹಿಂಬಾಲಿಸಿದೆ.. :)"...<BR/><BR/>ಅಮೂರ್ತವಕ್ಕೆ ಮೂರ್ತರೂಪ ಕೊಟ್ಟ ರೀತಿ ತುಂಬಾ ಚೆನ್ನಾಗಿದೆ. ಇದಕ್ಕೇ ನಿಮ್ಮ ಬರಹ ನಂಗಿಷ್ಟ... :)Shreehttps://www.blogger.com/profile/11541927845221428283noreply@blogger.com