<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-4515791944382207090</id><updated>2012-02-15T22:32:28.617-08:00</updated><category term='ಕಥೆ..'/><category term='ಮತ್ತು ನಮ್ಮ ಬದುಕು'/><category term='ತಲ್ಲಣ'/><category term='ಅಶ್ರುತ ಅನುರಣನ'/><category term='ಕೃಷ್ಣಪಕ್ಷದ ಲಹರಿ'/><category term='ತುಕ್ಕು'/><category term='ಒಂದು ಸಂತಸದ ಕ್ಷಣ'/><category term='ಕೆ.ಎಸ್.ನ'/><category term='ಬಾಲ್ಯವೆಂಬ ಮಾಯಾಲೋಕ ಮತ್ತು ನೀನು ಬಿಡಿಸಿಕೊಡುವ ಮಾಯಾಚಾಪೆ'/><category term='ಒಲವೇ ಜೀವನ ಸಾಕ್ಷಾತ್ಕಾರ..'/><category term='ಹೂಕಣಿವೆ'/><category term='ಜಾನೇ ಜಾನಾ..'/><category term='ಅಮ್ಮ'/><category term='ಅಸ್ತ ವ್ಯಸ್ತ'/><category term='ಹುಲಿ'/><category term='ಅಮ್ಮಮ್ಮ'/><category term='ಕತೆ - ನಿಜವೂ ಆಗಬಹುದು'/><category term='ಬಿಸಿಲು ಮಳೆ ಮಳೆಬಿಲ್ಲು'/><category term='ನವಪಲ್ಲವ - ಕೆಂಡಸಂಪಿಗೆ'/><category term='ಆಹ್ಲಾದ'/><category term='hhhhhmmm'/><category term='ದೀಪಕ ರಾಗ'/><category term='ಅಜ್ಜನ ಕಣಜದಿಂದ'/><category term='ಮಿಶ್ರ ಮಾಧುರ್ಯ ಸೀರೀಸ್'/><category term='ಹಂಬಲ'/><category term='ಖುಶೀ..'/><category term='ನೆನಪು'/><category term='ಘಜಲ್'/><category term='ಜಿ.ಪಿ.ರಾಜರತ್ನಂ.'/><category term='kavite ಕವಿತೆ'/><category term='ಸೃಷ್ಟಿ ಶುಭದಾಯಿನಿ'/><category term='ಕಾಡು'/><category term='ನಿನ್ನ ಕಣ್ಣಿನ ಅಮಲು'/><category term='ತಪನೆ'/><category term='ಮೋನೋ..'/><category term='ಅಂತರಾಳ'/><category term='ತುಂಬಿದರೆ ಒಲವಲ್ಲ..'/><category term='ಅನ್ಯಾಯ ಮತ್ತು ಕ್ರೌರ್ಯ'/><category term='ಅಶ್ವತ್ಠ್'/><category term='ಒಂದು ಹಳೇ ಕವಿತೆ.. ಆದ್ರೆ ಸರ್ವಋತುಪರ್ಣ..'/><category term='unfair'/><category term='ಇರುವುದೆಲ್ಲವ ಬಿಟ್ಟು'/><category term='ಒಂದು ಹಳೆ ಕವಿತೆ'/><category term='ಭಾವಲಹರಿ'/><category term='ಖುಶೀ.. ಸೃಷ್ಟಿ'/><category term='ಸೃಷ್ಟಿ.. ನೇಹಲ್.. ಕಿನಾರೆ'/><category term='ಮಧುರ ನೋವಿನ ಮಿಂಚು'/><category term='ಕೆಂಡಸಂಪಿಗೆ'/><category term='::ಸೃಷ್ಟಿ ಶುಭದಾಯಿನಿ::'/><category term='ಸ್ನೇಹಿತ'/><category term='facebook'/><category term='ಕನಸು'/><category term='ಮಾಧುರ್ಯ .. ಕಹಿಯಲ್ಲದ ನೆನಪು..'/><category term='ಹೊರಳುದಾರಿ'/><category term='JEAN'/><category term='ನಿರಾಕರಣ'/><category term='ಲಾಜವಾಬ್'/><category term='ಕನ್ನಡಪ್ರಭ'/><category term='ಬಿಂದು..ಕೊನೆಯದು.. ಪೂರ್ಣವೆನ್ನಲಾರೆ..'/><category term='ಟುಪ್ಪು'/><category term='ಸುಝೆ..suze ಎಲೆಯುದುರುವ ಕಾಲ'/><category term='ಅಜ್ಜ'/><category term='ಹನಿ ನೋಟ'/><category term='ಮಹೇಶ'/><category term='ಲಹರಿ'/><category term='ಒಂದು ಹಳೆಯ ಕವಿತೆ'/><category term='ವಿಷ್ಣು  - ಕೆಂಡಸಂಪಿಗೆ'/><category term='ಚಿತ್ರಕವನಕ್ಕೆ ಬರೆದಿದ್ದು.'/><category term='ಕೃತಜ್ಞತೆ'/><category term='...'/><category term='ಅಂಜಿಕಿನ್ಯಾತಕಯ್ಯಾ'/><category term='ಗೆಳತಿ'/><category term='ಅದೇ ನಾನು..'/><category term='&quot;ಪರಿ&quot;'/><category term='ತೆರೆದ ಬಾಗಿಲು'/><category term='ಅಮ್ಮನೆಂಬ ಮಾಧುರ್ಯ'/><category term='ಕಲಿಯಬೇಕು ತುಂಬಾ..'/><category term='ಟುಪ್ಪೂ'/><category term='ಒಲವು ತುಂಬುವುದಿಲ್ಲ'/><category term='ಕನಸು ಎಚ್ಚರ'/><category term='ಬಿದಿಗೆಯ ಬಿಂಬ'/><category term='ಬೆಳಕು'/><category term='ಲಾವಂಚ'/><category term='ಓದು'/><category term='ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಲಹರಿ..'/><category term='ನೆರಳ ಹಾದಿ..'/><category term='ಚೆಲ್ಲಾಪಿಲ್ಲಿ'/><title type='text'>ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://nenapu-nevarike.blogspot.com/feeds/posts/default'/><link rel='self' type='application/atom+xml' href='http://www.blogger.com/feeds/4515791944382207090/posts/default?max-results=100'/><link rel='alternate' type='text/html' href='http://nenapu-nevarike.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/4515791944382207090/posts/default?start-index=101&amp;max-results=100'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>140</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-4515791944382207090.post-6943695960564426888</id><published>2012-01-18T02:54:00.000-08:00</published><updated>2012-01-18T02:59:06.958-08:00</updated><category scheme='http://www.blogger.com/atom/ns#' term='ದೀಪಕ ರಾಗ'/><category scheme='http://www.blogger.com/atom/ns#' term='ಅಂತರಾಳ'/><title type='text'>ದೀಪಕ ರಾಗ</title><content type='html'>&lt;div&gt;ದೀಪು - ನನ್ನ ತಮ್ಮನ ಸ್ನೇಹಿತ. ನಮ್ಮ ಆತ್ಮೀಯ ಬಳಗ.&lt;br /&gt;ಎಲ್ಲ ಸೌಕರ್ಯಗಳ ನಗರೀಕರಣದ ಬದುಕಲ್ಲಿ ಯಾವಾಗಲೂ ಹಳ್ಳಿಯೂರಿನ ನೆನಪಿನ ನಾವೆಯಲ್ಲಿ ತೇಲಿಹೋಗುವ ನನಗೆ ದೀಪು ಈ ಅಂತರಾಳದ ಮಾಸ್ಟರ್ ಕಾಪಿ ಸೀಡಿ ಕೊಟ್ಟಾಗ ತುಂಬ ಖುಶಿಯಾಯ್ತು. ಇದು ದೀಪುನ ಮೊದಲ ಪ್ರಯತ್ನ. ಏನಾರೂ ಮಾಡ್ಬೇಕು ಅಕ್ಕಾ, ಸುಮ್ನೆ ಸಾಫ್ಟ್ವೇರ್ ಕೆಲ್ಸ ಮಾತ್ರ ಮಾಡ್ಕೊಂಡು ಸಾಕಾಗೋಗಿದೆ ಅಂತ ಈಗೊಂದು ವರ್ಷದ ಹಿಂದೆ ಅವನು ಅಂದಾಗ ನಾನು ನಕ್ಕಿದ್ದೆ. ಎಲ್ರಿಗೂ ಹಾಗೆ, ಆಮೇಲಾಮೇಲೆ ಅದೇ ಅಭ್ಯಾಸ ಆಗಿ ಸುಮ್ನಾಗ್ತಾರೆ ಅಂತ ಅಂದೂ ಇದ್ದೆ. ಅದಕ್ಕೆ ಅವನು ಇಲ್ಲಾ ಅಕ್ಕಾ, ನಾನು ಮ್ಯೂಸಿಕ್ಕಲ್ಲಿ ಏನಾರು ಮಾಡ್ಬೇಕು ನಮ್ಮ ಬದುಕು ತುಂಬಿಕೊಳ್ಳೋಕೆ ಬೇಕಾದಷ್ಟು ದಾರಿ ಇದ್ದೇ ಇರತ್ತೆ. ನಂಗೆ ಸಂಗೀತ.. ಅಂದಾಗ ನಂಗೆ ದೇಜಾ-ವೂ ಅನ್ಸಿದ್ದು ನಿಜ. ಎಳೇ ಕಣ್ಣಿನ ಕನಸುಗಳನ್ನ ಭಂಗಗೊಳಿಸುವ ಇಷ್ಟ ನಂಗೆ ಚೂರೂ ಇರಲಿಲ್ಲ. &lt;/div&gt;&lt;br /&gt;&lt;div&gt;ಅವನು ಗಿಟಾರ್ ಕಲಿಯುವುದು, ಕೀ ಬೋರ್ಡ್ ಕಲೀತಿರೋದು, ಈ ಮ್ಯೂಸಿಕ್ ಆಲ್ಬಂ ಮಾಡ್ಬೇಕಿದ್ರೆ ಏನೇನ್ ಮಾಡ್ಬೇಕು ಹೀಗೆಲ್ಲ ಹಂತಗಳಲ್ಲೂ ನನಗೆ ಒಂದೊಂದು ಅಪ್ ಡೇಟ್ ಸಿಗ್ತಾ ಇತ್ತು. ಈ ಕನಸುಗಳ ಹಾದಿಯ ಹೂ ಮೊಗ್ಗುಗಳ ಪರಿಚಯ ಸಿಕ್ಕಿದ್ದೇ ಆಗ ನಂಗೆ.&lt;br /&gt;ನಮ್ಮೂರಿನ ಹುಡುಗ, ತಮ್ಮನ ಗೆಳೆಯ, ಎಳೆಯ ಚೈತನ್ಯ ಎಂಬೆಲ್ಲ ವಾತ್ಸಲ್ಯವನ್ನು ಮೀರಿದ ಒಂದು ಮೆಚ್ಚುಗೆ ನಂಗೆ ಅವನ ಮೇಲೆ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಥ್ಯಾಂಕ್ ಗಾಡ್ ಇಟ್ ಈಸ್ ಫ್ರೈಡೇ ಅಂತೇಳಿ ಸೊಂಟಕ್ಕೆ ಗೆಳತಿಯ ಕೈ ಸಿಕ್ಕಿಸಿಕೊಂಡು ರಾಜಧಾನಿಯ ರಸ್ತೆಗಳಲ್ಲಿ ಬೈಕು ಹತ್ತಿ ಹೊಗೆಯೆಬ್ಬಿಸುವ ಸಾಧ್ಯತೆಯ ಅಸಂಖ್ಯಾತ ಯುವಕರ ಮಧ್ಯೆ, ತನ್ನ ಸಂಜೆಗಳನ್ನ ತಾನು ಕಂಡ ಕನಸಿಗೆ, ತಾನು ಅನುಭವಿಸಬೇಕಿರುವ ಹುಚ್ಚಿಗೆ ಮೀಸಲಿಟ್ಟು, ಇವೆಲ್ಲದರ ನಡುವೆ ಗೆಳತಿಯ ಮಾತುಕತೆಗಿಷ್ಟು ಸಮಯ ಕೊಟ್ಟು ಏನೋ ಮಾಡಬೇಕು ಎಂಬಲ್ಲಿನ "ಬ್ಲಾಂಕ್ ಸ್ಪೇಸು"ಗಳಲ್ಲಿ ಸಂಗೀತದ ನೋಟುಗಳನ್ನ ತುಂಬಿಸುವುದು ನಿಜಕ್ಕೂ ವಿಶಿಷ್ಟ ಪ್ರಯತ್ನ. &lt;/div&gt;&lt;br /&gt;&lt;div&gt;&lt;br /&gt;ಅಕ್ಷರ, ಸಾಹಿತ್ಯ, ಸಂಗೀತ, ಲಯ ಎಲ್ಲವೂ ತುಂಬ ಪರಿಶ್ರಮ ಬೇಡುತ್ತವೆ. ಕರೋಕೆ ಸೀಡಿಗಳನ್ನಿಟ್ಟು ಕವಿತೆ ತುಂಬಿಸುವುದು, ಎಲ್ಲೆಲ್ಲಿಂದಲೂ ಕದ್ದ ರಾಗಗಳನ್ನಿಷ್ಟು ಮಿಸಳ್ ಭಾಜಿ ಮಾಡುವುದು ಹೊಸದೇನಲ್ಲ. ಎಲ್ಲರೂ ಅನಂತಸ್ವಾಮಿ,ಅಶ್ವತ್ಥ ಆಗುವುದಿಲ್ಲ. ಎಲ್ಲ ಅಸಂಗತ ಕವಿತೆಗಳೂ ಗೋಪಿ ಮತ್ತು ಗಾಂಡಲೀನ ಎನಿಸುವುದಿಲ್ಲ. ದೂರದ ನಕ್ಷತ್ರದಟ್ಟ ಕಣ್ಣು ನೆಟ್ಟವನ ಕೈಗಳಲ್ಲಿ ಮನೆಯ ಸುತ್ತಲಿನ ಕತ್ತಲಿಗೆ ಒಂದು ಹಣತೆ ಬೆಳಗುವ ಕೆಲಸ ಮಾಡಬೇಕೆಂಬ ತೀವ್ರತೆ ಎಲ್ಲರಿಗೂ ಅನಿಸುವುದೂ ಇಲ್ಲ. ದೀಪು ಮಾಡಿದ್ದು ಇಂತಹ ಪ್ರಯತ್ನ. ಊರಿಂದ ಬಂದು ಇಲ್ಲಿ ನೆಲೆಸಿದವರ ಹಾಗೆ ಹಳಹಳಿಕೆಗೆ ಬಲಿಯಾಗದೆ, ಯುವ ಸಹಜ ಉತ್ಸಾಹವನ್ನ ಮೊಟಕುಗೊಳಿಸದೆ ತನ್ನ ಚೈತನ್ಯಕ್ಕೊಂದು ಹರಿವನ್ನ ತಾನೇ ಒದಗಿಸಿಕೊಂಡ ಈ ಪ್ರಯತ್ನವನ್ನ ಮೆಚ್ಚಲೇಬೇಕು. ಅಭಿನಂದಿಸಲೇಬೇಕು. &lt;/div&gt;&lt;br /&gt;&lt;div&gt;&lt;br /&gt;ಇಷ್ಟಕ್ಕೂ ಇವನು ಮಾಡಿದ್ದು ಏನು?&lt;br /&gt;ಅನಿಸಿದ ಕೂಡಲೆ ಸಂಗೀತ ಕಲಿಯಲು ಹೊರಟಿದ್ದು.&lt;br /&gt;ಗಿಟಾರು ಕೊಂಡಿದ್ದಲ್ಲದೇ, ಕೀ ಬೋರ್ಡನ್ನೂ ಕಲಿತಿದ್ದು,&lt;br /&gt;ಗೆಳೆಯ-ಗೆಳತಿಯರ ಗುಂಪಲ್ಲಿ ಕವಿತೆ ಹುಡುಕಿದ್ದು&lt;br /&gt;ಮಾತುಗಳ ಸೇತುವೆಯಲ್ಲಿ ಆಲ್ಬಂ ಮಾಡಲು ಬೇಕಿರುವ ನಂಟು ಹುಡುಕಿದ್ದು&lt;br /&gt;ಸ್ಟುಡಿಯೋ,ರೆಕಾರ್ಡಿಂಗ್, ಕೋ-ಆರ್ಡಿನೇಶನ್, ಗಾಯಕ-ಗಾಯಕಿಯರ ಆಯ್ಕೆ ಮತ್ತು ಮನವೊಲಿಕೆ,ಓಡಾಟ, ಹೊಂದಾಣಿಕೆ, ಕಾರ್ಯಕ್ಷಮತೆ ಎಲ್ಲವನ್ನೂ ನಿಭಾಯಿಸಿದ್ದು.&lt;br /&gt;ಇದೆಲ್ಲದರ ಒಟ್ಟು ಮೊತ್ತವೇ - ಒಂಬತ್ತು ಭಾವದಲೆಗಳ ಮೆಲುದನಿಯನ್ನ ಸೀಡಿಯಲ್ಲಿ ಮೆಲೋಡಿಯಾಗಿ ಕೇಳಿಸಿದ್ದು.&lt;br /&gt;&lt;br /&gt;ಇಷ್ಟೇನಾ ಇದು ಸ್ವಲ್ಪ ಎಫರ್ಟ್ ಹಾಕಿದ್ರೆ ಎಲ್ರೂ ಮಾಡ್ಬೋದು ಅನ್ನಿಸಿದ್ರೂ.. ಒಂದು ನೆನಪಿರಲಿ.&lt;br /&gt;ಅಸ್ಪಷ್ಟ ಕನಸೊಂದು ತೀವ್ರ ಹಪಾಹಪಿಯಾಗಿ ಪ್ರಾಮಾಣಿಕ ಪ್ರಯತ್ನವಾಗಿ ಹಿಡಿದ ಗುರಿಯಾಗಿ ಮೂಡುವ ದಾರಿಯ ಸೆಳೆತಗಳು,ಅಡೆತಡೆಗಳು, ಸೋಮಾರಿತನ ಇದೆಲ್ಲವನ್ನೂ ಮೆಟ್ಟಿ ಮುಂದುವರಿಯುವ ಛಲ ಎಲ್ಲರಲ್ಲೂ ಇಲ್ಲ. ಹೋಗಲಿ ಬಿಡು ಅನ್ನುವುದು ಸುಲಭದ ದಾರಿ. ಈ ಹುಡುಗ ತನ್ನ ತೀವ್ರತೆಯನ್ನ ಕಳೆದುಕೊಳ್ಳದೇ ಅಂದುಕೊಂಡ ದಾರಿಯ ಮೊದಲ ಮೊಗ್ಗು ಅರಳಿಸಿಯೇ ಬಿಟ್ಟಿದ್ದಾನೆ.&lt;br /&gt;ಇಂಪಿನ ದೂರ ದಾರಿಯನ್ನ ಸಾಗುವ ಚೈತನ್ಯ, ಸಂಗಾತಿಯ ಜೊತೆ ಇವನಿಗಿದೆ. ಗೆಳೆಯರ ಬಳಗವಿದೆ, ಎಲ್ಲರನ್ನೂ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವ ಪ್ರಾಮಾಣಿಕವಾದ ಫ್ರೆಶ್ ಆದ ಮನಸ್ಸಿದೆ.&lt;br /&gt;ಅಂತರಾಳದಲ್ಲಿ ಭಾವಜೀವಿಯೊಬ್ಬನ ಮೆಲ್ದನಿಗಳ ಹಾಯಿದೋಣಿಯ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಈ ದೋಣಿ, ದೊಡ್ಡ ನಾವೆಯಾಗಿ ಭಾವ-ಗೀತೆಗಳ, ಸುಗಮ ಸಂಗೀತದ ಸಮುದ್ರದಲ್ಲಿ ತೇಲಲಿ ಎಂಬುದು ನನ್ನ ಹಾರೈಕೆ.&lt;br /&gt;ಸುಲಭ ಪುನರಾವರ್ತಿತ ಪದಗಳ ಹಂಗನ್ನು ಮೀರಿ, ಟ್ಯೂನುಗಳಿಗೆ ಕವಿತೆಯನ್ನು ಹೊಂದಿಸುವ ಅವಶ್ಯಕತೆಯನ್ನು ದಾಟಿ, ನಮ್ಮ ಹಿರಿಯ, ಮತ್ತು ಇತ್ತೀಚಿನವರೆಗಿನ ಕವಿಗಳ ಕವಿತಾ ಸಂಗ್ರಹಕ್ಕೆ ದೀಪು ಸಂಗೀತ ಸಂಯೋಜಿಸುವಂತಾಗಲಿ. ಕನ್ನಡ ಬರಿಯ ನಾಡ ಉತ್ಸವಗಳಲ್ಲಿ ಬಿಕರಿಯಾಗುವ ಮಾಲು ಎಂಬ ಮಾತುಗಳನ್ನು ಸುಳ್ಳು ಮಾಡುವ, ನೆಟ್ ಯುಗದ ಯುವ ಕನ್ನಡ ಮನಕ್ಕೆ ಸೇತುವೆಯಾಗುವ ಕೆಲಸವು ದೀಪುವಿನಿಂದ ಮತ್ತವನ ಗೆಳೆಯರ ಬಳಗದಿಂದ ಆಗಲಿ ಎಂದು ಬಯಸುತ್ತೇನೆ. &lt;/div&gt;&lt;img style="TEXT-ALIGN: center; MARGIN: 0px auto 10px; WIDTH: 147px; DISPLAY: block; HEIGHT: 220px; CURSOR: hand" id="BLOGGER_PHOTO_ID_5698924326017454834" border="0" alt="" src="http://1.bp.blogspot.com/--iREVVgWVWI/TxalevYaUvI/AAAAAAAAB5E/DKk-EZpV8U0/s400/Deep_guitar.jpg" /&gt; &lt;br /&gt;&lt;div&gt;ಒಳಿತೇ ಹಾಡಾಗುವ ದಾರಿಯಲ್ಲಿ ದೀಪಕ ರಾಗ ನುಡಿಸಿದ ಈ ಕಿರಿಯ ವಯಸ್ಸಿನ ತುಂಬು ಚೈತನ್ಯಕ್ಕೆ ನನ್ನ ಮೆಚ್ಚುಗೆ,ಅಭಿನಂದನೆ.&lt;br /&gt;ಅಂತರಾಳ ಧ್ವನಿಮುದ್ರಿಕೆ(ಅಡಕಮುದ್ರಿಕೆ)ಯನ್ನು ನೀವೂ ತಗೊಂಡು, ಕೇಳಿ, ಬೆನ್ತಟ್ಟಬೇಕು.&lt;/div&gt;&lt;br /&gt;&lt;div&gt;&lt;a href="http://antharaala-thealbum.blogspot.com/"&gt;http://antharaala-thealbum.blogspot.com/&lt;/a&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-6943695960564426888?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/6943695960564426888/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=6943695960564426888' title='3 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/6943695960564426888'/><link rel='self' type='application/atom+xml' href='http://www.blogger.com/feeds/4515791944382207090/posts/default/6943695960564426888'/><link rel='alternate' type='text/html' href='http://nenapu-nevarike.blogspot.com/2012/01/blog-post_18.html' title='ದೀಪಕ ರಾಗ'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/--iREVVgWVWI/TxalevYaUvI/AAAAAAAAB5E/DKk-EZpV8U0/s72-c/Deep_guitar.jpg' height='72' width='72'/><thr:total>3</thr:total></entry><entry><id>tag:blogger.com,1999:blog-4515791944382207090.post-3057239272162643791</id><published>2012-01-12T00:32:00.000-08:00</published><updated>2012-01-12T00:45:26.604-08:00</updated><category scheme='http://www.blogger.com/atom/ns#' term='ಚೆಲ್ಲಾಪಿಲ್ಲಿ'/><title type='text'>ಹೂವು ಚೆಲ್ಲಿ-ದ ಹಾದಿ</title><content type='html'>ಉದಾತ್ತ ಹೆಜ್ಜೆಗಳ&lt;br /&gt;ಭಾರಕ್ಕೆ &lt;br /&gt;ನಲುಗಿದ ಕಾಲ ಕೆಳಗಿನ ಹೂಗಳ ಬಣ್ಣ&lt;br /&gt;ಮಾಸಲು ಮಾಸಲು,&lt;br /&gt;ಆಗಸಕ್ಕೆ ಮುಖವೆತ್ತರಿಸಿದ&lt;br /&gt;ಕನಸುಕೊಂಬೆಗಳ ತುದಿಗೆ&lt;br /&gt;ಬಿರಿಯದ ಮೊಗ್ಗುಗಳ ಬಣ್ಣದ ಹಂಬಲು.&lt;br /&gt;ಬೇರುಗಳ ಮಾತು ಬೇಡ&lt;br /&gt;ಕಂಪೌಂಡಿಗೆ ಘಾತವಾಗುತ್ತೇಂತ&lt;br /&gt;ಬೇರಿಳಿವ ಜಾತಿಯ ನೆಡುವುದಿಲ್ಲ.&lt;br /&gt;&lt;br /&gt;ತೆರೆದ ಬಾಗಿಲಿನ&lt;br /&gt;ಮುಖಮಂಟಪ&lt;br /&gt;-ದ ಒಳಗೆ ಹರಿದ ದಾರಿ&lt;br /&gt;-ಯ ಕೊನೆಗೆ&lt;br /&gt;ಮುಚ್ಚಿದ ಕೊಠಡಿ&lt;br /&gt;ತುಂಬ ಕಿಟಕಿಗಳು&lt;br /&gt;ಭಾರದ ಕದ ತಿರುಗಣೆಯಲ್ಲಿ&lt;br /&gt;ಸಿಕ್ಕಿಹಾಕಿಕೊಂಡಿದೆ&lt;br /&gt;ತೆಗೆಯಲಾಗುವುದಿಲ್ಲ.&lt;br /&gt;ಹೊರಗಿನ ಬೆಳಕು ಬೇಕು ಯಾಕೆ&lt;br /&gt;ಒಳಗೆ ಝಗಮಗಿಸುವ ದೀಪ&lt;br /&gt;ಏಸಿಯ ವೆಂಟು&lt;br /&gt;ಬಾಯಲ್ಲಿ ಕರಗುವ ಐಸ್ಕ್ರೀಮು&lt;br /&gt;ತಿನ್ನುತ್ತ&lt;br /&gt;ನೆನಪಾಗುವ ನಿಂಬೆಹುಳಿ ಪೆಪ್ಪರ್ ಮಿಂಟು.&lt;br /&gt;&lt;br /&gt;ದಾರಿಬದಿಯಲಿ ಹೂಬಿಟ್ಟ ಸಂಪಿಗೆಮರ&lt;br /&gt;ಜಡಿದು ಕೂರಿಸಿದ್ದರೂ ಎಲ್ಲೋ ಸಂದಿನಲ್ಲಿ&lt;br /&gt;ತೂರಿಬರುವ ಗಾಢ ಕಂಪು.&lt;br /&gt;ಅರೆಗತ್ತಲ ಬೀದಿಯ&lt;br /&gt;ಹೂವು ಸುರಿವ ಸಂಜೆಯಲಿ&lt;br /&gt;ಜತೆಗೆ ಹೋದ ಒದ್ದೆ ಹೆಜ್ಜೆಗಳು&lt;br /&gt;ಮೋಡ ತುಂಬಿದ &lt;br /&gt;ಆಗಸದಲಿ ಕದ್ದು ಹೊಳೆವ&lt;br /&gt;ತಿಂಗಳು&lt;br /&gt;ಇರುಳ ಹೆರಳಿನ ತುಂಬ&lt;br /&gt;ರಾತ್ರಿರಾಣಿ ಘಮಘಮಿಸಿ&lt;br /&gt;ಅಲ್ಲಿ ಕತ್ತಲಲ್ಲೂ ಬೆಳಗು&lt;br /&gt;ಕತ್ತಲಿಲ್ಲಿ ಒಳಗೂ ಹೊರಗೂ!&lt;br /&gt;&lt;br /&gt;ಈ ನೆನಪಿನ ಮಾತು ಬೇಡ ಈಗ&lt;br /&gt;ಇದೊಂದು ಹುಚ್ಚು ಮಂಪರು&lt;br /&gt;ಮಲಗಲು ಒಳ್ಳೆ ಸ್ಲೀಪ್ ವೆಲ್ ಹಾಸಿಗೆಯಿದೆಯಲ್ಲ&lt;br /&gt;ಸುಮ್ಮನೆ ಮಲಗು&lt;br /&gt;ಬೆಳಿಗ್ಗೆ ಬೇಗ ಏಳಬೇಕು.&lt;br /&gt;&lt;br /&gt;ಪಾಟಿನೊಳಗಿನ ಮಲ್ಲಿಗೆ ಬಳ್ಳಿಯ&lt;br /&gt;ಕರುಣೆ&lt;br /&gt;ದಿನದಿನವೂ&lt;br /&gt;ಎರಡೆರಡೇ ಅರಳು ಮೊಗ್ಗು.&lt;br /&gt;&lt;br /&gt;ಕಲ್ಲುಮುಳ್ಳು ಹಾದಿಯ&lt;br /&gt;ನೋವನುಂಡು ನಡೆದವರು&lt;br /&gt;ಹೂವು ಚೆಲ್ಲಿ-ದ ಹಾದಿಯ&lt;br /&gt;ನುಣ್ಪು ದುಃಖದಿ&lt;br /&gt;ಜಾರಿ ಬಿದ್ದರು,&lt;br /&gt;ಉದಾತ್ತ ಹೆಜ್ಜೆಗಳು ಬಲು ಭಾರ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-3057239272162643791?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/3057239272162643791/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=3057239272162643791' title='3 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/3057239272162643791'/><link rel='self' type='application/atom+xml' href='http://www.blogger.com/feeds/4515791944382207090/posts/default/3057239272162643791'/><link rel='alternate' type='text/html' href='http://nenapu-nevarike.blogspot.com/2012/01/blog-post_12.html' title='ಹೂವು ಚೆಲ್ಲಿ-ದ ಹಾದಿ'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-4515791944382207090.post-541505833514101509</id><published>2012-01-10T02:56:00.000-08:00</published><updated>2012-01-10T02:58:26.697-08:00</updated><category scheme='http://www.blogger.com/atom/ns#' term='ನಿನ್ನ ಕಣ್ಣಿನ ಅಮಲು'/><category scheme='http://www.blogger.com/atom/ns#' term='ಕೆಂಡಸಂಪಿಗೆ'/><category scheme='http://www.blogger.com/atom/ns#' term='ಒಂದು ಹಳೆ ಕವಿತೆ'/><title type='text'>ಈ ಹುಚ್ಚಿಗೆ ಹೆಸರು ಬೇಕೆ?</title><content type='html'>ಹಿತವಾದ ಕತ್ತಲ ಇಳಿಸಂಜೆ&lt;br /&gt;ಮಾತುಕತೆ ಮುಗಿಸಿ ಹಗುರಾಗಿ&lt;br /&gt;ಬೀಸುಹೆಜ್ಜೆಯ ಲಘುನಡಿಗೆಯಲಿ&lt;br /&gt;ಬೇಲಿ ದಾಟುವಾಗ ಮನೆಯಂಗಳದಿ-&lt;br /&gt;ಪುಟ್ಟಗೆ ಉರಿವ&lt;br /&gt;ತುಳಸಿಯ ದೀಪ&lt;br /&gt;ಹಚ್ಚಿಡುವ ನೀನು,&lt;br /&gt;ಸುಖಾಸುಮ್ಮನೆ ಕಡೆಗಣ್ಣಲಿ&lt;br /&gt;ನೋಡಿದ್ಯಾಕೆ?&lt;br /&gt;&lt;br /&gt;ದೀಪದ ಬೆಳಕನ್ನಷ್ಟೆ ತುಂಬಿಕೊಂಡು&lt;br /&gt;ಮುನ್ನಡೆಯಲಿದ್ದ ನನ್ನ&lt;br /&gt;ಜಗ್ಗಿ ನಿಲ್ಲಿಸಿ, ಮುಗ್ಗರಿಸಿ&lt;br /&gt;ತಿರುತಿರುಗಿ ನೋಡುತ್ತ&lt;br /&gt;ಹೊರಡಲಾರದೆ ಹೊರಟೆ..&lt;br /&gt;ಈಗ ನೋಡು-&lt;br /&gt;ಮಳೆ ನಿಂತ ತಂಪಲ್ಲು&lt;br /&gt;ಹೊತ್ತಿ ಉರಿವ ಒಳಗು!&lt;br /&gt;ನಿನಗೇನೂ..ಅಮ್ಮನ ಕರೆಗೆ&lt;br /&gt;ಜೋಡು ಜಡೆಯ ಬೀಸುತ್ತ&lt;br /&gt;ಕುಣಿವ ಹೆಜ್ಜೆಗಳಲ್ಲಿ ಓಡುತ್ತ&lt;br /&gt;ಹೋಗುವ ಹೊತ್ತು;&lt;br /&gt;ನಾನಿಲ್ಲಿ&lt;br /&gt;ಹೆಜ್ಜೆ ಇಲ್ಲಿಡಲಾ ಬೇಡವಾ&lt;br /&gt;ಯೋಚಿಸುತ್ತಾ&lt;br /&gt;ಕಳೆಯದೇ ಜಾರುವ ಹೊತ್ತನ್ನ&lt;br /&gt;ತುಂಬಲಾರದೆ ನೋಯುತ್ತಾ..&lt;br /&gt;&lt;br /&gt;ಹೋಗೇ ಮರಿರಾಕ್ಷಸೀ,&lt;br /&gt;ಇನ್ನೊಮ್ಮೆ ನಿನ್ನ ಯೋಚನೆ ಸುಳಿದರೆ ಕೇಳು&lt;br /&gt;ನಿನ್ನ ದೀಪದುರಿಯ ಕುಡಿಗಣ್ಣು&lt;br /&gt;ನನ್ನ ಕೆನ್ನೆಯ ಕತ್ತಲ ಮೇಲೆ ಪ್ರತಿಫಲಿಸುವವರೆಗೂ..&lt;br /&gt;ಜನ ಹೇಳುತ್ತಾರೆ&lt;br /&gt;ಪ್ರೀತಿ ಪ್ರೇಮ ಬರಿಯ ಮರುಳು..&lt;br /&gt;ಹೌದಾ..?&lt;br /&gt;ಅವರಿಗೇನು ಗೊತ್ತು&lt;br /&gt;ನಿನ್ನ ಕಣ್ಣಿನ ಅಮಲು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-541505833514101509?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/541505833514101509/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=541505833514101509' title='4 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/541505833514101509'/><link rel='self' type='application/atom+xml' href='http://www.blogger.com/feeds/4515791944382207090/posts/default/541505833514101509'/><link rel='alternate' type='text/html' href='http://nenapu-nevarike.blogspot.com/2012/01/blog-post.html' title='ಈ ಹುಚ್ಚಿಗೆ ಹೆಸರು ಬೇಕೆ?'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-4515791944382207090.post-5508579232950974236</id><published>2011-12-26T03:22:00.000-08:00</published><updated>2011-12-26T03:42:55.452-08:00</updated><category scheme='http://www.blogger.com/atom/ns#' term='ಲಾಜವಾಬ್'/><category scheme='http://www.blogger.com/atom/ns#' term='ಟುಪ್ಪೂ'/><category scheme='http://www.blogger.com/atom/ns#' term='ಸೃಷ್ಟಿ ಶುಭದಾಯಿನಿ'/><title type='text'>ಟುಪ್ಪೂ ಕಥಾ ಸರಿತ್ಸಾಗರದ ಕೆಲವು ಬಿಂದುಗಳು!</title><content type='html'>ತುಂಬ ದಿನಗಳಿಂದಲೂ ನನ್ನ "ಟುಪ್ಪೂ ಕಥಾಸರಿತ್ಸಾಗರ"ದ ದಂಡೆಗೆ ಬರಲಿಕ್ಕಾಗಲಿಲ್ಲ. ಕಥೆಗಳು ಕಣ್ಮುಂದೆ ಬಿಚ್ಚಿಕೊಳ್ಳುತ್ತಾ ಮಂತ್ರಮುಗ್ಧವಾಗಿಸುವ ಕ್ಷಣಗಳಲ್ಲಿ ಮೈಮರೆತಿದ್ದೆ ನಾನು. ಅದನ್ನು ಅಕ್ಷರಕ್ಕಿಳಿಸುವ, ನನ್ನ ಅಕ್ಕ,ಗೆಳತಿಯರು ಕೇಳುವ ಹಾಗೆ ಕ್ಯಾಮೆರಾಕ್ಕಿಳಿಸುವ, ರೆಕಾರ್ಡ್ ಮಾಡುವ ಯಾವ ಎಚ್ಚರವೂ ಇಲ್ಲದ ಸುಖವಾದ ಮೈಮರೆವು. ಕೆಲವು ನೆನಪುಗಳು ಅವು ಆದ ವರ್ಷದಲ್ಲಾದರೂ ದಾಖಲಾಗಲಿ ಎಂಬ ಆಸೆಯಿಂದ ಈ ಬರಹ. ಅಮ್ಮಂದಿರೆಂದರೆ ಹೀಗೇ ಮಕ್ಕಳ ಬಾಲ್ಯದಲ್ಲಿ ದಿನವೂ ಮಾತನಾಡಿಸಿದರೂ ನಿಮಗೆ ಒಂದೊಂದು ಹೊಸ ಮುದ್ಗಥೆ ಕೇಳಲು ಸಿಗುತ್ತಿರುತ್ತದೆ. ಅವಳ ಮಾತು ಕತೆ,ತುಂಟತನ,ಮುದ್ದುಗರೆಯುವಿಕೆ, ಆಟ,ನಲಿವು,ಸಿಡುಕು ಸೆಡವು, ಕಾಮಿಡಿಗಳಲ್ಲಿ ಕೆಲವು ನಿಮ್ಮ ಅವಗಾಹನೆಗಾಗಿ ಮತ್ತು ಮುಂದೆಂದೋ ಅವಳು ಓದಿದರೆ, ಅವಳ ಪುಟ್ಟಬಾಯಿ ಅಗಲವಾಗಿ ನಗುವಿನ ಹೂ ತುಂಬಲಿಕ್ಕಾಗಿ.&lt;br /&gt;&lt;br /&gt;ರಾಜ್ ಕುಮಾರ ನನ್ನ ಮಗಳ ನೆಚ್ಚಿನ ಮಾಮ. ಅವಳು ಅವನನ್ನು ಕರೆಯುವುದೇ "ಎಲ್ಲೂ ಹೋಗಲ್ಲ ಮಾಮ" ಎಂದು. ಅವನ ಹಳೆಯ ಕೆಲವು ಹಾಡುಗಳು ಅವಳ ಫೇವರಿಟ್ಟು. ನಗುನಗುತಾ ನಲಿ, ಬಾನಿಗೊಂದು ಎಲ್ಲೆ ಎಲ್ಲಿದೆ, ಆಗದು ಎಂದು, ಸಿಹಿಮುತ್ತು ಸಿಹಿಮುತ್ತು ನಂಗೊಂದು, ಥೈ ಥೈ ಬಂಗಾರಿ, ಇಫ್ ಯೂ ಕಮ್ ಟುಡೇ, ಒಂದು,ಎರಡು ಮೂರು ನಾಕು ಆದ್ಮೇಲೆ ಏನು, ಲಾಲಿ ಲಾಲಿ ಸುಕುಮಾರ.. ಇತ್ಯಾದಿ. ರಾಜ್ ಕುಮಾರ್ ನ ಯಾವ ಹಾಡು ಟೀವಿಯಲ್ಲಿ ಬಂದರೂ ಹತ್ತಿರ ಹೋಗಿ ನಿಂತು ನೋಡುತ್ತಾ ಕೇಳುತ್ತಾ ಇರುತ್ತಾಳೆ. :) ಮೊದಮೊದಲು ನಾವು ಅವಳನ್ನ ಬೆಳಗ್ಗೆ ಪ್ಲೇಹೋಮಿಗೆ ಬಿಡುವಾಗ, ಮೇಲೆ ಆಕಾಶ ನೋಡಿ ಟಾಟಾ ಮಾಡುತ್ತಿದ್ದಳು. ಏನೆಂದು ಕೇಳಿದರೆ, ನಕ್ಷತ್ರವಾಗಿರುವ ಎಲ್ಲೂ ಹೋಗಲ್ಲ ಮಾಮಂಗೆ ಟಾಟಾ ಎಂದು ವಿವರಿಸಿದ್ದಳು.&lt;br /&gt;ಅಮರಚಿತ್ರಕಥೆಗಳಲ್ಲಿ ಭಕ್ತ ಪ್ರಹ್ಲಾದ ಅವಳಿಗಿಷ್ಟವಾದ ಕಥೆಗಳಲ್ಲಿ ಒಂದು. ಅವಳು ಪುಟ್ಟ ಮಗುವಾಗಿದ್ದಾಗಿನಿಂದ ಈಗ ಮೂರುವರ್ಷದವರೆಗೆ ಮೂರು ಪ್ರತಿಗಳಲ್ಲಿ ಆ ಪುಸ್ತಕದ ಕಥೆ ಹರಿದಿದೆ( ಅಕ್ಷರಶಃ ಮೊದಲ ಎರಡು ಪುಸ್ತಕಗಳು ಹರಿದು ಚಪ್ಪೆದ್ದು ಹೋಗಿವೆ).&lt;br /&gt;ಒಂಟಿಕಾಲಿನಲ್ಲಿ ತಪಸ್ಸು ಮಾಡುವ ಹಿರಣ್ಯಕಶಿಪು, ತಂಬೂರಿ ನಾರದರ ನಾರಾಯಣ, ನಾರಾಯಣ, ಲಾಲಿ ಲಾಲಿ ಹೇಳುವ ಕಯಾದು, ಪ್ರಹ್ಲಾದನ ಕೈಮುಗಿದ ಹರಿಭಜನೆ, ಕಂಬ ಒಡೆಯುವ ಹಿರಣ್ಯಕಶಿಪುವಿನ ಗದಾಪರ್ವ, ಹೊಟ್ಟೆ ಸೀಳುವ ನರಸಿಂಹ ಮತ್ತು ಅವನ "ಎರಡೂ ಅಲ್ಲ" ಪ್ರಶ್ನೋತ್ತರಗಳು, ಇವು ನಮ್ಮನೆಲ್ಲ ರಂಜಿಸುವ ಅವಳ ಅಭಿನಯದ ಘಳಿಗೆಗಳು. ಹೀಗಿರಲಾಗಿ ಹೋದತಿಂಗಳು ಅವಳು ರಾಜ್ಕುಮಾರ್ ಅಭಿನಯದ ಭಕ್ತಪ್ರಹ್ಲಾದ ಸಿನಿಮಾವನ್ನು ಟೀವಿಯಲ್ಲಿ ಎರಡು ಮೂರು ಸಲ ನೋಡಿಬಿಟ್ಟಳು. ಮೊದಲ ಸಾರಿ ನರಸಿಂಹ ರಾಜಕುಮಾರ್ ನನ್ನ ಎತ್ತಿ ಕೊಂಡು ಹೊಟ್ಟೆ ಸೀಳುವಾಗ ಅವಳಿಗೆ ಭಯವಾಗಿ ಅಳು ಬಂತು. ನರಸಿಂಹನ ಮೇಲೆ ಕೋಪವೂ ಬಂತು. ಎಲ್ಲೂ ಹೋಗಲ್ಲ ಮಾಮ ಪಾಪ ಎಂದುಕೊಂಡು ನೆನೆಯುತ್ತಿದ್ದಳು. ಆಮೇಲೆ ಎರಡು ಸಲ ನೋಡುವಾಗ ಎಲ್ಲೂಹೋಗಲ್ಲ ಮಾಮ ಹಿರಣ್ಯಕಶಿಪುವೇ ಆಗಿ ಕಂಡುಬಂದಿದ್ದರಿಂದ, ಅವಳು ಮತ್ತೆ ವಾಪಸ್ ಪ್ರಹ್ಲಾದನ ಪರವಾಗಿದ್ದಾಳೆ. ಇದೆಲ್ಲ ಹೋಗಲಿ ನಾನು ಅವಳಿಗೆ ಅವಳ ಪೂರ್ತಿ ಹೆಸರು ಸೃಷ್ಟಿ ಶುಭದಾಯಿನಿ... .ಮುದ್ದು ರಾಕ್ಷಸಿ ಎಂದು ಹೇಳಿಕೊಟ್ಟಿದ್ದೆ. ಮೊದಮೊದಲು ಹಾಗೇ ಹೇಳುತ್ತಿದ್ದಳು. ಆಮೇಲೆ ನಾನು ಮುದ್ದು ರಾಕ್ಷಸಿ ಎಂದು ಕರೆದರೆ ನಗುತ್ತಿದ್ದಳು. ಆದರೆ ಭಕ್ತಪ್ರಹ್ಲಾದ ನೋಡಿದಾಗಿನಿಂದ ನಾನು ಮುದ್ದು ರಾಕ್ಷಸಿ ಎಂದು ಕರೆದರೆ ಕೋಪವೇ ಬಂದುಬಿಡುತ್ತದೆ. ಮೊದಲು ಸಿಡುಕಿ, ಆಮೇಲೆ ಅತ್ತು, ಕೊನೆಗೆ ಪುಸಲಾಯಿಸುತ್ತಾಳೆ. ಹಾಗೆ ಕರೆಯಬಾರದು ಎಂದು. :) ಯಾಕೇಂತ ಕೇಳಿದರೆ ರಾಕ್ಷಸ ಮಕ್ಕಳು ಕರ್ಕಶವಾಗಿ ಹಾಡು ಶ್ಲೋಕ ಹೇಳುತ್ತಾರೆ ಅಂತೆ!. ನಾನು ಕೈಮುಗಿದೆ.&lt;br /&gt;&lt;br /&gt;ಅವಳಿಗಿಷ್ಟವಾದ ಇನ್ನೊಂದು ಅಮರಚಿತ್ರಕತೆ (ನಂಗೂ ತುಂಬ ಇಷ್ಟ) "ನನ್ನ ಗೋಪಾಲ" ಈ ಕಥೆಯನ್ನು ನಾನು ತುಂಬ ದಿವಸಗಳ ಕಾಲ ಅವಳನ್ನು ರೆಡಿ ಮಾಡಲು ಉಪಯೋಗಿಸುತ್ತಿದ್ದೆ. ಆ ಕಥೆಯಲ್ಲಿ ಗೋಪಾಲನಿಗೆ ಅಮ್ಮ ಸ್ನಾನ ಮಾಡಿಸಿ, ಅಂಗಿ ಹಾಕಿ, ಕಾಲ್ಚೀಲ ಹಾಕಿ, ತಲೆಬಾಚಿ ಶಾಲೆಗೆ ಕಳಿಸ್ತಾರೆ. ಅವಳನ್ನು ರೆಡಿ ಮಾಡುವಾಗ ಈ ರೆಫರೆನ್ಸ್ ಒಳ್ಳೆ ಸಹಾಯ ಮಾಡುತ್ತಿತ್ತು. ಈಗ ಅವನು ಕಾಲ್ಚೀಲ ಹಾಕಿಯೇ ಇಲ್ಲ, ಚಡ್ಡಿ ಇಲ್ಲ ಬರಿಯ ಪಂಚೆ, ಎಲ್ಲಿ ತಲೆ ಬಾಚ್ತಾ ಇದಾರೆ ತೋರ್ಸು ಅಂತೆಲ್ಲ ಕೇಳುತ್ತಾಳೆ. ನಾನು "ಚಿತ್ರದಲ್ಲಿ ಕಾಣಿಸದ ಕತೆಯಲ್ಲಿ" (ಎಲ್ಲ ಚಿತ್ರಗಳಾಚೆಗಿನ ಚಿತ್ರ!) ಎನ್ನುವ ಸಬೂಬಿನೊಂದಿಗೆ ಮ್ಯಾನೇಜ್ ಮಾಡ್ತಾ ಇದೀನಿ. ಸದ್ಯಕ್ಕೆ ಇದು ಕೆಲಸ ಮಾಡುತ್ತಿದೆ. ಒಬ್ಬಳೆ ಹೋಗುವಾಗ ತಾನು ಕೃಷ್ಣಮಾಮಿಯನ್ನು ಕರೆಯುವುದಾಗಿಯೂ ಆಗ ತನಗೆ ಭಯ ಆಗುವುದಿಲ್ಲವೆಂದೂ ಅವಳೂ ಹೇಳುತ್ತಿರುತ್ತಾಳೆ. ಇದರ ಸತ್ವ ನಂಗೆ ಗೊತ್ತಿಲ್ಲ. ಯಾಕೆಂದರೆ ಬಾಗಿಲಿಂದ ಆಚೆ ಹೋದಕೂಡಲೆ ಅಮ್ಮನ ಕೈಬಿಡುವುದಕ್ಕೆ ಗೊತ್ತಿಲ್ಲ ನಮ್ಮ ದೇವರಿಗೆ.&lt;br /&gt;ಇದರ ಮಧ್ಯೆ ದಿನಾ ಅಮ್ಮಮ್ಮ ಹೇಳುವ ಕಿಷನನ ಕತೆಗಳು ಅಂದ್ರೆ ನಮ್ಮಗೂಗೆ ಸಿಕ್ಕಾಪಟ್ಟೆ ಇಷ್ಟ. ಅವಳ ತುತ್ತಿನ ಚೀಲ ತುಂಬುವುದೆ ಈ ಕಥೆಗಳಿಂದಾಗಿ. ಅದರ ಗುಂಗಿನಲ್ಲಿ ನಂಜೊತೆ ಮನೆಗೆ ಬರುವವಳು ದಿನಾ ಬೆಣ್ಣೆ ಮಡಿಕೆಯೊಡೆಯುತ್ತಾ, ಕುರ್ಚಿ ಸಂದಿಯಲ್ಲಿ ಅಡಗಿಕೊಳ್ಳುತ್ತಾ, ಮೃಣ್ಮಯ ಬಾಯನ್ನು ತೋರುತ್ತಾ, ಕಿರುಬೆರಳಿನಲ್ಲಿ ಗಿರಿಯನ್ನೆತ್ತುತ್ತಾ ಇರುತ್ತಾಳೆ. ಯಾವುದಕ್ಕಾದರೂ ನಾನು ಬೈದರೆ ನಾನು ತುಂಟತನ ಮಾಡಿದೆ ಅಷ್ಟೇಮ್ಮಾ ಕಿಶನನ ಹಾಗೆ ಅಂದು ಬಿಡುತ್ತಾಳೆ. ನಾನು ದೇವಕಿ, ಅಮ್ಮಮ್ಮ ಯಶೋದೆ ಮತ್ತು ಇವಳೇ ಕೃಷ್ಣ. ಸಂದರ್ಭಕ್ಕೆ ತಕ್ಕ ಹಾಗೆ ಅಲ್ಲಿ ಇದ್ದವರು ನಂದಗೋಪಾಲ, ಮತ್ತು ಗೋಪಿಕೆಯರು. ಅವಳು ದೇವಕಿಯಮ್ಮಾ ಅಂತ ಕರೆದಾಗ ನಾನು ಬರೀ ಏನು ಎಂದರೆ ಮೂಗಿನ ತುದಿಯ ಕೋಪ ಮಾತಿಗೆ ಮತ್ತು ಕಣ್ಣಹನಿಗೆ ಬಂದುಬಿಡುತ್ತದೆ. ಏನು ಕೃಷ್ಣಾ ಎಂದೇ ಕೇಳಬೇಕು. ಬದುಕಿನ ಬ್ರಹ್ಮಾಂಡ ದರ್ಶನ ಆಗುತ್ತಾ ಇರುತ್ತದೆ ನನಗೆ.&lt;br /&gt;&lt;br /&gt;ಕೆಲವು ರಷ್ಯಾ ರಾದುಗ ಪ್ರಕಾಶನದ ಕತೆಗಳು ಅವಳಿಗಿಷ್ಟ. ಅದರಲ್ಲಿ ಮಾಟಗಾತಿ ಬರುತ್ತಾಳೆ. ಆಮೇಲೆ ಸ್ನೋವೈಟಿನಲ್ಲೂ ಅಷ್ಟೇ ಒಂದು ಭಯಂಕರ ಮೋಸದ ಮಾಟಗಾತಿ ಇದ್ದಾಳೆ. ಹೀಗಾಗಿ ಮಾಟಗಾತಿಯೆಂದರೆ ನಮ್ಮ ಸಿಂಗಾರಿಗೆ ಸ್ವಲ್ಪ ನಿಜವಾದ್ದು ಮತ್ತು ಸ್ವಲ್ಪ ಜಾಸ್ತಿ ತೋರಿಕೆಯದ್ದೂ ಎರಡೆರಡು ರೀತಿಯ ಭಯ. "ಮಾ" ಅಂದರೆ ಸಾಕು ಅವಳು ಬಂದುಬಿಡುತ್ತಾಳೆ ಎಂದು ಹೆದರಿಸಿ ಅವಳನ್ನು ನಿದ್ದೆಗೆ ದಬ್ಬಿದ ಮಧ್ಯರಾತ್ರಿಗಳು ತುಂಬ ಇದ್ದವು. ಈಗ ಈ ಟ್ರಿಕ್ಕು ನಡೆಯುವುದಿಲ್ಲ. ಅವಳು ಮಾಟಗಾತಿಗೇ ಫೋನ್ ಮಾಡಿಬಿಡುತ್ತಾಳೆ. ಒಂದು ಮಾಟಗಾತಿ ಪೊರಕೆಗೆ ಸಮೀಕರಿಸುವ ಕೋಲಿಟ್ಟುಕೊಂಡಿದ್ದಾಳೆ. ಅದರ ಮೇಲೆ ಕುಳಿತು ಅಬ್ರಕದಬ್ರ ಹೇಳಿ ಎಲ್ಲೆಂದರಲ್ಲಿ ಸುತ್ತಿ ಬರುತ್ತಾಳೆ. ಆದರೆ ಆಳದಲ್ಲಿ ಮಾಟಗಾತಿಯೆಂದರೆ ಭಯವೂ ಇದೆ. ಏನೆಂದರೆ ನೀವೇನಾದರೂ ಅವಳಿಗೆ ರೋಪ್ ಹಾಕಿದರೆ, ಅವಳು ಮಾಟಗಾತಿಗೆ ಫೋನ್ ಮಾಡುತ್ತಾಳೆ ಅಷ್ಟೆ. ನಾನೇನಾದ್ರೂ ಮಾಟಗಾತಿಯ ಮಾತೆತ್ತಿದರೆ ಅವಳು ಸ್ಲೀಪಿಂಗ್ ಬ್ಯೂಟಿಯಲ್ಲಿ ಬರುವ ಒಳ್ಳೆಯ ಮಾಟಗಾತಿಯಾಗಿಬಿಡುತ್ತಾಳೆ. ಹೀಗೆ ಈ ಮಾತುಗಾತಿಯ ಹತ್ತಿರ ಮಾಟಗಾತಿ ಸೋತು ಬಂದ ದಾರಿಯಲ್ಲೇ ಪೊರಕೆ ಹತ್ತಿ ಸಾಗಬೇಕು.&lt;br /&gt;&lt;br /&gt;ಅವಳ ಇನ್ನೊಂದು ಹಾಟ್ ಫೇವರಿಟ್ ಕಥೆ ಮಣಿಕಂಠನದ್ದು. ಇದು ಅಜ್ಜ ಹೇಳುವ ಹಾಡು ಮತ್ತು ಕಥೆ. ಪಂದಳ ರಾಜನಿಗೆ ಸಿಕ್ಕಿದ ಮಣಿಕಂಠ, ಹುಲಿಯಹಾಲು ತರಲು ಹೋಗಿ ಮಹಿಷಿಯನ್ನು ಸೋಲಿಸಿ, ಹುಲಿಗಳ ಮೇಲೆ ಹತ್ತಿ ಅರಮನೆಗೆ ಬರುವ ಕಥೆ. ಇದು ಕೇಳುತ್ತ ಕೇಳುತ್ತ ನಿದ್ದೆ ಬಂದುಬಿಡುತ್ತದೆ ನಮ್ಮ ಮಗುವಿಗೆ. ಮಧ್ಯಾಹ್ನ ಎರಡುಗಂಟೆಯ ಹೊತ್ತಿಗೆ ಒಂದು ಸಲ ಅಜ್ಜನೂ, ರಾತ್ರಿ ಹನ್ನೆರಡು ಗಂಟೆಯ ಸುಮಾರಿಗೆ ನಾನೂ ಎಲ್ಲ ಕಥೆಗಳನ್ನು ಹೇಳಿ ಮುಗಿದ ಮೇಲೆ ಇದು ಹೇಳಿ ಮಲಗಲು ಪ್ರಯತ್ನ ಮಾಡುತ್ತೇವೆ. :)&lt;br /&gt;&lt;br /&gt;ಈ ಎಲ್ಲ ಕಥೆಗಳಲ್ಲೂ,ಘಟನೆಗಳಲ್ಲೂ ತನಗೆ ಬೇಕಾದ್ದನ್ನು ಆವಾಹಿಸಿಕೊಂಡು ತಾನು ಅದೇ ಆಗುವ ಒಂದು ಮುಗ್ಧತೆಯ ಜಾದೂ ಇವಳಲ್ಲಿದೆ. ಅದೇ ಈ ಎಲ್ಲ ಚಂದ ಸಂಗತಿಗಳ ಹೂರಣ. ಒಂದು ಕಥೆಯ ಕಾಂಗರೂ ಮರಿಯಾಗಿ ಒಂದು ವಾರ ಓಡಾಡಿಕೊಂಡಿರುತ್ತಾಳೆ. ಆ ವಾರವಿಡೀ ಎಲ್ಲರೂ ಅವಳನ್ನು ರೂಮರಿ ಎಂದೇ ಕರೆಯಬೇಕು. ನಾನೆಲ್ಲಾದರೂ ಬೈದರೆ ಕಣ್ಣ ತುಂಬು ನೀರು ತುಂಬಿ ರೂಮರಿಗೆ ಯಾರಾರೂ ಬೈತಾರ ಅಂತ ಹೇಳಿ ನನ್ನ ಅಳಿಸುತ್ತಾಳೆ. ಆಮೇಲೆ ಇನ್ನೊಂದು ವಾರ ಸ್ನೋವೈಟಿನ ಒಬ್ಬ ಪುಟ್ಟ ಕುಳ್ಳನ ಹಾಗೆ ಓಡಾಡಿಕೊಂಡಿರುತ್ತಾಳೆ. ಮತ್ತಿನ್ನೊಂದು ವಾರ ಸಿಂಡ್ರೆಲಾ ಮತ್ತವಳ ಡ್ಯಾನ್ಸು ನಡೆಯುತ್ತದೆ. ಅದರ ಮುಂದಿನ ವಾರ ಗೋಪಾಲ, ಆಮೇಲೆ ಪ್ರಹ್ಲಾದ, ಕೃಷ್ಣ ಎಲ್ಲ ಆಗಿ ರೂಪಾಂತರ ಹೊಂದುತ್ತಿರುತ್ತಾಳೆ. ಈ ವಾರ ಗೋಲ್ಡಿಲಾಕ್ಸ್ ಕತೆಯ ಪಾಪು ಕರಡಿಯಾಗಿದ್ದಾಳೆ. ಈ ಎಲ್ಲ ರೂಪಗಳಲ್ಲು ಆಗಾಗ ಕೃಶ್ಣ ಮತ್ತು ಛೋಟಾ ಭೀಮ್ ಮಾತ್ರ ಖಾಯಮ್ಮಾಗಿ ಬಂದು ಹೋಗುತ್ತಾರೆ. ಮುಂದಿನ ವಾರದ ಕಥೆಗೆ ನಾನು ಸ್ಕೆಚ್ಚು ಹಾಕುತ್ತಾ ಇದ್ದೀನಿ.&lt;br /&gt;&lt;br /&gt;ಈ ಎಲ್ಲ ಕಥೆ ಹೇಳುವಾಗಿನ ಒಂದು ಕಷ್ಟ ಅಂದರೆ ಈ ಕ್ವೆಶ್ಚನ್ ರಾಣಿಯ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಹೇಳುವುದು. ನಚಿಕೇತನ ಕತೆ ಹೇಳಿ ತುಂಬ ಕಷ್ಟ ಆಗಿಬಿಟ್ಟಿತ್ತು. ಸಾಯುವುದನ್ನು ವಿವರಿಸಿ ಯಾರೆಲ್ಲ ಸಾಯಬಹುದು ಅಂತ ಹೇಳಿ ಕೊನೆಗೆ ಈಗ ಯಾರ್ಯಾರೂ ಸಾಯುವುದೇ ಇಲ್ಲ ಅಂತ ಒಪ್ಪಿಸುವ ಹೊತ್ತಿಗೆ ಸಾಕಾಗಿ ಹೋಗಿತ್ತು ನನಗೆ.&lt;br /&gt;&lt;br /&gt;ಹೋದವಾರ ಒಂದು ರಾತ್ರಿ ಮಲಗುವಾಗ ಎಂದಿನಂತೆ ನಮ್ಮ ಸಂವಾದ ನಡಿಯುತ್ತಿತ್ತು. ಇದು ಒಂದ್ರೀತಿ ಮಾತಿನ ಯುದ್ದ. ಎಷ್ಟೋ ದಿನ ನನ್ನ ಮಾತು ಅವಳು ಕೇಳದೆ ನಾನು ಸಿಟ್ಟು ಮಾಡಿಕೊಂಡು ಎದ್ದು ಹೋಗಿ ಆಚೆ ಮಲಗಿ ಅವಳು ಮತ್ತೆ ಅತ್ತು ಕರೆದು ಅಪ್ಪನ ಮೂಲಕ ನನ್ನಲ್ಲಿ ಸಂಧಾನ ನಡೆಸಿ ನನ್ನ ತೋಳು ಬಳಸಿ ಮಲಗುತ್ತಾಳೆ. ಮತ್ತೊಂದಷ್ಟು ಸಲ ಅವಳಿಗೆ ಕೋಪ ಬಂದು, ನನಗೆ ಬೇಜಾರಾಯಿತು ಅಂತ ಹೇಳಿ ಕತ್ತಲಲ್ಲೆ ಎದ್ದು ಗೋಡೆ ಕಡೆ ಮುಖ ಮಾಡಿ ಕೂತು, ಆಮೇಲೆ ನಾನು ಅವಳಿಗಿಷ್ಟವಾದ ಏನೇನೋ ಕತೆ ಹೇಳಿ ಮುದ್ದು ಮಾಡಿ ಒಲಿಸಿಕೊಳ್ಳುತ್ತೇನೆ. ಹೆಚ್ಚಿನ ರಾತ್ರಿಗಳು ಕತೆ, ಪ್ರಶ್ನೆ, ಕತೆ ಮತ್ತು ಹಾಡುಗಳಲ್ಲಿ ಹನ್ನೆರಡಕ್ಕೆ ಕೊನೆಯಾಗುತ್ತವೆ. ಹೋದ್ವಾರ ಏನಾಯ್ತೂಂದ್ರೆ ನಾನು ಅವಳನ್ನ ನೀನು ದೊಡ್ಡವಳಾದ ಮೇಲೆ ಏನು ಮಾಡುತ್ತೀ ಎಂದು ಕೇಳಿದೆ. ಅವಳೂ ನಾನು ದೊಡ್ಡವಳೇ ಆಗೋಲ್ಲಮ್ಮ ಅಂತ ಡಿಕ್ಲೇರ್ ಮಾಡಿದಳು. ಅದ್ಯಾಕೆ ಅಂದ್ರೆ, ಅವಳ ಮುದ್ದು ಟ್ಯೂನಿನಲ್ಲಿ ಉತ್ತರ ಬಂತು. ನಾನು ದೊಡ್ಡವಳಾದ್ರೆ ನೀನೂ ದೊಡ್ಡವಳಾಗಿ ಮುದುಕಿಯಾಗಿ ಆಮೇಲೆ ಸತ್ತು ಹೋಗುತ್ತೀ. ಅದು ನಂಗೆ ಬ್ಯಾಡ. ನಾನು ಹೀಗೇ ಇರ್ತಿ. ನೀನು ಹೀಗೇ ಇರು ಎಂದಳು. ಈ ಮೊದ್ದು ಮುದ್ದಿಗೆ ತುಂಬಿ ಬಂದ ಕಣ್ಣನ್ನು ನಾನು ನಕ್ಕು ಇಂಗಿಸಿದೆ. ಈ ಪ್ರೀತಿ ಹಿಂದೆ ಎಂದೂ ಸಿಕ್ಕಿರಲಿಲ್ಲ, ಮತ್ತು ಮುಂದೆಂದೂ ಸಿಗುವುದೂ ಇಲ್ಲ. &lt;strong&gt;ಸಿಕ್ಕಾಗ ಒಡ್ಡಿಕೊಂಡು ನಿಲ್ಲುವುದಷ್ಟೇ ನನ್ನ ಭಾಗ್ಯ.&lt;br /&gt;&lt;/strong&gt;&lt;br /&gt;ಮೊನ್ನೆ ಶನಿವಾರ ಎಲ್ಲ ಕಡೆಯೂ ಕ್ರಿಸ್ಮಸ್ ವ್ಯಾಪಾರ ಭರಾಟೆ. ಅಲ್ಲದೆ ಶುಕ್ರವಾರ ಅವಳ ಪ್ಲೇಹೋಮಿನಲ್ಲೂ ಕ್ರಿಸ್ಮಸ್ ಆಚರಣೆ ಇತ್ತು. ಹಾಗಾಗಿ ಒಂದೆರಡು ದಿನದಿಂದ ಸಾಂತಾಕ್ಲಾಸ್ ಬಗ್ಗೆಯೇ ಮಾತು ಕತೆ ಮತ್ತು ಜಿಂಗಲ್ ಬೆಲ್ ಹಾಡು. ನಿನ್ನೆ ಭಕ್ತಿಪೂರ್ವಕವಾಗಿ ಅವಳು ಒಂದು ಹೊಸಾ ಕ್ರೇಯಾನ್ ಸೆಟ್ಟು ಬೇಡಿಕೊಂಡೂ ಆಯಿತು. ನಾವಿಬ್ಬರೂ ಮೇಲಿಂದ ಮೇಲೆ ಒಳ್ಳೆಯ ನಡವಳಿಕೆಯ ಮಕ್ಕಳಿಗೆ ಕ್ರಿಸ್ಮಸ್ ತಾತ ಉಡುಗೊರೆ ಕೊಟ್ಟೇ ಕೊಡ್ತಾನೆ ಅಂತ ಹೇಳಿ ನಿನ್ನೆಯ ಭಾನುವಾರವನ್ನು ಮ್ಯಾನೇಜ್ ಮಾಡಿದ್ದೇನೋ ಹೌದು. ಕೊನೆಗೆ ಇವತ್ತು ಬೆಳಿಗ್ಗೆ ಅವಳು ಏಳುವಾಗ ನೋಡುತ್ತಾಳೆ ಚೆಂದದ ಹೊಳೆಯುವ ಗಿಫ್ಟ್ ಚೀಲದಲ್ಲಿ ಒಂದು ಹೊಸಾಥರದ ಕ್ರೇಯಾನ್ ಪೆನ್ ಸೆಟ್ಟಿದೆ!. ಕವರಿನ ಮೇಲೆ ಮೆರ್ರಿ ಕ್ರಿಸ್ಮಸ್ ಎಂದು ಕೂಗುತ್ತಿರುವ ಬಿಳಿಗಡ್ಡದ ಸಾಂತಾ!! ಅವಳ ಖುಶಿಯನ್ನ ಬರೆಯಲು ನನ್ನ ಕೈಸೋತಿದೆ. ಅವಳು ನಿದ್ದೆಯಲ್ಲಿದ್ದಾಗಲೇ ಬೆಳಿಗ್ಗೆಯೇ ಅವನು ಇಡ್ತಾನೆ ಎಂಬ ನಿರೀಕ್ಷೆ ನಿಜವಾಗಿ ಸಕತ್ ಥ್ರಿಲ್ಲಾಗಿಬಿಟ್ಟಿತ್ತು. ಆದರೂ ಒಂದು ಅನುಮಾನವಿತ್ತು. ಪಕ್ಕದಲ್ಲಿದ್ದ ಅಪ್ಪನಿಗೆ ಹೇಳಿದಳೂ. ಅಪ್ಪಾ ಸಾಂತಾ ಕೊಟ್ಟಿರುವ ಕ್ರೇಯಾನ್ಸ್, ಅವತ್ತು ಪ್ರತ್ಯೂಷಿ ನನ್ ಹ್ಯಾಪಿ ಬರ್ಥ್ ಡೇಗೆ ಕೊಟ್ಟಿದ್ನಲ್ಲಾ ಆ ಕ್ರೇಯಾನ್ಸ್ ಥರಾನೇ ಇದೆ ಅಲ್ವಾ ಅಂತ. :) ಆ ಕ್ರೇಯಾನ್ಸ್ ನಿಂಗೆ ತುಂಬ ಇಷ್ಟ ಆಗಿತ್ತಲ್ವಾ ಅದ್ಕೇ ಅದೇ ತರದ್ದು ಕೊಟ್ಟಿದಾನೆ ಅಂತ ಹೇಳಿ ಅಪ್ಪ ಬಚಾವಾಗಿದ್ದಾನೆ. ಮಗಳು ಆ ಸೆಟ್ಟಲ್ಲಿರುವ ಎಲ್ಲ ಬಣ್ಣಗಳನ್ನೂ ಹೆಸರಿಸುತ್ತಾ ಕ್ರಿಸ್ ಮಸ್ ರಜೆ ಕಳೆಯಲಿದ್ದಾಳೆ. ಆ ಕ್ರೇಯಾನ್ಸ್ ಎಲ್ಲ ಖಾಲಿ ಮಾಡಕ್ಕೆ ಅಂತ ಒಂದು ಕಲರಿಂಗ್ ಬುಕ್ ಬೇರೆ ಇದೆ. ಮುಂದಿನ ಕತೆ ಮುಂದಿನ ವರ್ಷ. ಅಲ್ಲೀವರೆಗೂ ತುಂಬ ಕೆಲ್ಸ ಇದೆ. ಕಲರಿಂಗ್ ಅಂದ್ರೆ ಸುಮ್ನೇನಾ?&lt;br /&gt;&lt;br /&gt;ಸೃಷ್ಟಿ ಶುಭದಾಯಿನಿಗೆ ಈ ನವೆಂಬರ್ ಕೊನೆಯಲ್ಲಿ ಮೂರ್ವರ್ಷ ತುಂಬಿತು.&lt;br /&gt;ನಾಳೆಯಿಂದ ನಿಂಗೆ ಮೂರ್ ವರ್ಷ ಅಂತಂದೆ ನಾನು ಹಿಂದಿನ ದಿನ. "ಆವಾಗ ನೀನೇನಾಗಿರ್ತೀಯಾ" ಮುದ್ದಾದ ಮಾತಿನ ಬಾಣ ತೂರಿಬಂತು.&lt;br /&gt;ಸ್ವಚ್ಛ ಕಣ್ಣುಗಳ ತಿಳಿಗೊಳದಲ್ಲಿ ಬೀಳದೆ ಉತ್ತರಿಸಲು ಸಾಧ್ಯವೇ?&lt;br /&gt;ಪ್ರಶ್ನೆಯ ಕಡಲು ಬತ್ತುವುದೇ ಇಲ್ಲ. ಉತ್ತರದ ನದಿ ಸಣ್ಣಗೆ ಸೊರಗಿದರೂ ಹರಿದು ತುಂಬುತ್ತಿರುತ್ತದೆ. ಎಷ್ಟೇ ಉತ್ತರ ಹೇಳಿದರೂ ಕೊನೆ ಕೊನೆಯ ಪ್ರಶ್ನೆ ಬರುವಾಗ ಬೇಸಿಗೆಯಾಗಿ ಉತ್ತರವಿಲ್ಲದೆ ನಿಲ್ಲಬೇಕಾದ ಸಂಭವವೇ ಜಾಸ್ತಿ. ಅದಕ್ಕೇ ಅವಳು ನನ್ನ &lt;strong&gt;"ಲಾಜವಾಬ್"&lt;/strong&gt; ಮಗಳು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-5508579232950974236?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/5508579232950974236/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=5508579232950974236' title='4 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/5508579232950974236'/><link rel='self' type='application/atom+xml' href='http://www.blogger.com/feeds/4515791944382207090/posts/default/5508579232950974236'/><link rel='alternate' type='text/html' href='http://nenapu-nevarike.blogspot.com/2011/12/blog-post_26.html' title='ಟುಪ್ಪೂ ಕಥಾ ಸರಿತ್ಸಾಗರದ ಕೆಲವು ಬಿಂದುಗಳು!'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-4515791944382207090.post-1127880799383593745</id><published>2011-12-19T02:25:00.000-08:00</published><updated>2011-12-19T02:28:02.127-08:00</updated><category scheme='http://www.blogger.com/atom/ns#' term='ಕನಸು ಎಚ್ಚರ'/><title type='text'>ಸ್ವಪ್ನ ವಾಸ್ತವ ದತ್ತ...!</title><content type='html'>ತಡೆಹಿಡಿದಿಟ್ಟವು ಕೆಲವು&lt;br /&gt;ಕಾಣದಂತೆ ಒರೆಸಿದವು ಹಲವು&lt;br /&gt;ಮೂಡುವುದಕ್ಕೂ ಮೊದಲೆ&lt;br /&gt;ಅವಡುಗಚ್ಚಿದ ಹೊಡೆತಕ್ಕೆ&lt;br /&gt;ಕರಗಿಹೋದವು ಕೆಲವು&lt;br /&gt;ಹರಿದು ಹೋಗಲೆಂದೇ ಸುರಿದ ಅಬ್ಬಿಯೇ ಬೇರೆ&lt;br /&gt;ಅವ ಒರೆಸಿದ್ದೊಂದಷ್ಟು&lt;br /&gt;ಎಲ್ಲರ ನೇವರಿಕೆಯಲ್ಲಿ ಒಣಗಿದವೊಂದಷ್ಟು&lt;br /&gt;ಹೀಗೆ ಹಾಗೆ&lt;br /&gt;ನನ್ನೊಳಗೆ ಹೊರಗೆ&lt;br /&gt;ಸುಳಿದ ಸುಳಿವ ಹನಿಗಳನ್ನೆಲ್ಲ&lt;br /&gt;ಅಕ್ಷರವಾಗಿಸಿದರೆ&lt;br /&gt;ಅರೆ..!&lt;br /&gt;ಕವಿತೆ&lt;br /&gt;ಅರೆಗವಿತೆ?!!&lt;br /&gt;&lt;br /&gt;------------------------&lt;br /&gt;ಬನಿಯು ಹನಿವ&lt;br /&gt;ಸಾಲುಗಳಲಿ&lt;br /&gt;ಮೆತ್ತಗೆ ತೂರುವ ಬೆಳಕಬಲೆ&lt;br /&gt;ಅಲ್ಲಿ ಒಳಗೆ&lt;br /&gt;ಮೋಡ ಮುಸುಕಿದ&lt;br /&gt;ಮನದಂಗಳದಲಿ&lt;br /&gt;ಚೂರು ಬಗ್ಗಿಸಿ ಹರಿಯಿಸಿದರೆ&lt;br /&gt;ಸಾಕು ಮಳೆಬಿಲ್ಲು!&lt;br /&gt;ನೋಡನೋಡುತಲೆ ಕಳೆವ ದಿನದ&lt;br /&gt;ಕೊನೆಗೆ ರಾತ್ರಿ&lt;br /&gt;ಕತ್ತಲೆ ಅಲ್ಲು ಇಲ್ಲು ಎಲ್ಲು.&lt;br /&gt;ಮಳೆಸುರಿದ ಇರುಳು ಕಳೆದು&lt;br /&gt;ಬೆಳ್ಳಗೆ ಹೊಳೆದ ಬೆಳಗಿನ&lt;br /&gt;ನೀಲಿಬಟ್ಟಲ ತುಂಬ ಮೊಸರು ಮೊಸರು ಮೋಡ,&lt;br /&gt;ದಾರಿಯಿಡೀ ತುಂಬಿದ ಉದುರೆಲೆಗಳ&lt;br /&gt;ಮೆಟ್ಟುತ್ತ ಮೇಲೆ ನೋಡಾ&lt;br /&gt;ಹನಿಯಿಳಿವ ಎಲೆಗಳ ಹಿನ್ನೆಲೆಗೆ&lt;br /&gt;ಘಮಗುಡುವ ಹೂಗೊಂಚಲು&lt;br /&gt;ತೆಳುಪರಿಮಳವಿದು ಉಕ್ಕಿಸುವ&lt;br /&gt;ಭಾವೋತ್ಕರ್ಷವದು ಗಾಢ!&lt;br /&gt;--------------------------------&lt;br /&gt;ಹಾವು ಹರಿದಂತೆ ಸರಿವ ದಾರಿ&lt;br /&gt;ಕಾಡ ಸೆರಗಿನ ಹುಲ್ಲುಹಾವಸೆ&lt;br /&gt;ಮುಳ್ಳು ಚುಚ್ಚದ ಹಾಗೆ&lt;br /&gt;ಬದಿಯಲ್ಲಿ ಬೀಳದ ಹಾಗೆ&lt;br /&gt;ಎಚ್ಚರದಿ&lt;br /&gt;ಗಮಿಸುವ ಕನಸಿನೊಳಗಣ ಹಾದಿ&lt;br /&gt;ಅವರು ಇವರು ಎಲ್ಲರೂ&lt;br /&gt;ಜೊತೆಜೊತೆಗೆ ಸಾಗಿ&lt;br /&gt;ಇಳಿದ ನೆಲೆಯ ಹೆಸರು ನೋಡದೆ&lt;br /&gt;ವಿದಾಯದಲ್ಲಿ ನಗುವ ಹಂಚಿ&lt;br /&gt;ಮುಂದೆ ಸಾಗುವ&lt;br /&gt;ಲಗ್ಗೇಜು ಇರದ ಹಾದಿ&lt;br /&gt;ಎಚ್ಚರದ ಹೆಜ್ಜೆ ಬೇಡುವ&lt;br /&gt;ಕನಸಿನ ಹಾದಿ.&lt;br /&gt;ಸ್ವಪ್ನಂ ಶರಣಂ ಗಚ್ಛಾಮಿ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-1127880799383593745?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/1127880799383593745/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=1127880799383593745' title='6 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/1127880799383593745'/><link rel='self' type='application/atom+xml' href='http://www.blogger.com/feeds/4515791944382207090/posts/default/1127880799383593745'/><link rel='alternate' type='text/html' href='http://nenapu-nevarike.blogspot.com/2011/12/blog-post.html' title='ಸ್ವಪ್ನ ವಾಸ್ತವ ದತ್ತ...!'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-4515791944382207090.post-5767724458258355733</id><published>2011-11-10T02:32:00.000-08:00</published><updated>2011-11-10T03:21:04.923-08:00</updated><category scheme='http://www.blogger.com/atom/ns#' term='ಘಜಲ್'/><title type='text'>ಪುರಸತ್ ಕೇ ರಾತ್ ದಿನ್</title><content type='html'>ಹೀಗೊಂದು ಪುರಸೊತ್ತಿನ ಕ್ಷಣದಲ್ಲಿ ಅಕ್ಷರಕ್ಕೆ ಹರಿದ ಲಹರಿ.&lt;br /&gt;&lt;br /&gt;"ದಿಲ್ ಡೂಂಢ್ ತಾ ಹೈ ಫಿರ್ ವೊಹೀ ಪುರಸತ್ ಕೇ ರಾತ್ ದಿನ್.. "ಅಂತ ಶೀರ್ಷಿಕೆ ಕೊಟ್ಟು ಬರೆದ ಕಾಲಂ ಒಂದನ್ನು ಓದುತ್ತಿದ್ದ ದಿನಗಳಲ್ಲಿ ಆ ಇಡೀ ಸಾಲಿನ ಅರ್ಥವೇ ಹೊಳೆದಿರಲಿಲ್ಲ. ಆ ಹಾಡನ್ನು ಕೇಳಿರಲಿಲ್ಲ. ಆದರೆ ಆ ಲೇಖನವಿಡೀ ಹಾಡಿನ ಅಂತರಾಳವಿತ್ತು. ಮತ್ತು ಅದು ಸುಮ್ ಸುಮ್ನೇ ನಂಗೆ ಇಷ್ಟವಾಗಿಬಿಟ್ಟಿತು.&lt;br /&gt;ನಮ್ಮ ಕರ್ನಾಟಕದ ಎತ್ತರದ ಗಿರಿಯ ಶಿಖರದಲ್ಲಿ ಕಳೆದ ಒಂದು ಸಂಜೆ ನನ್ನ ವಾಕ್ ಮನ್ನಲ್ಲಿ ಆ ಹಾಡು ಪೂರ್ತಿಯಾಗಿ ಕಿವಿಗಿಳಿಯಿತು. ಹತ್ತಿದ ಸುಸ್ತನ್ನು ಅಳಿಸಿ ಮನಸ್ಸನ್ನ ಹೊಸದೇ ಒಂದು ಭಾವೋದ್ದೀಪ್ತ ಮಜಲಿಗೊಯ್ದು ನಿಲ್ಲಿಸಿತು. ಆ ಎತ್ತರ ಬಾನೆತ್ತರದಲ್ಲಿ ನನ್ನ ಕಾಲು,ಹಿಂಬದಿಗಳು ಮಾತ್ರ ನೆಲಕ್ಕಂಟಿದ್ದವು. ಮನ ಮುಗಿಲ ಅಂಚುಗಳಲ್ಲಿ ಸುತ್ತುತ್ತಿತ್ತು.&lt;br /&gt;ಹಾಡಿದವರು ಭೂಪಿಂದರ್ ಮತ್ತು ಬರೆದವರು ಗುಲ್ಜಾರ್ ಎಂಬ ವಿಷಯ ತಿಳಿಯಿತು. ಅವತ್ತು ಸಂಜೆ ಇರುಳುಗೆಂಪಲ್ಲಿ ಹರಿದ ಇಂಪು, ರಾತ್ರಿ ನಕ್ಷತ್ರಗಳು ಮಿಂಚುವಾಗಲೂ ಹರಿಯುತ್ತಲೇ ಇತ್ತು. ನಡುರಾತ್ರಿ ಕಳೆದು ಇಬ್ಬನಿತಂಪು ನಮ್ಮ ಟೆಂಟಲ್ಲಿ ಹನಿಯುವವರೆಗೂ ಹಾಡುತ್ತಿದ್ದ ವಾಕ್ ಮನ್ ಶೆಲ್ ಖಾಲಿಯಾಗಿ ನಿಲ್ಲುವವರೆಗೂ! ಬೆಳಿಗ್ಗೆ ಎದ್ದ ಕೂಡಲೆ ಪುರಸೊತ್ತಿನ ರಾತ್ರಿ ಮುಗಿದು ರಾಶಿ ರಾಶಿ ಮುಗಿಲುಗಳ ಹಿಂಡು ನಮ್ಮ ಶಿಖರವನ್ನು ಮುತ್ತಿದ ಚಟುವಟಿಕೆಯ ಬೆಳಗು ಹರಿಯಿತು! ಆಮೇಲೆ ಹಲವು ರಾತ್ರಿಗಳ ದೀಪವಾರಿದ ನಂತರದ ಅಳಲಿನ ಗಳಿಗೆಗಳಲ್ಲಿ ಸಾಥಿ ಕೊಟ್ಟ ಹಾಡು, ಗಡಿಬಿಡಿಯ ಗಳಿಕೆಯ ದಿನಗಳಲ್ಲಿ ನನ್ನ ಬಿಝಿ ಶೆಡ್ಯೂಲು ನೋಡಿ ವಾರ್ಡ್ ರೋಬಿನ, ಕೆಳ ಅಂಚಿನ ಡ್ರಾದಲ್ಲಿ ಹಳೆಯ ಕ್ಯಾಸೆಟ್ಟುಗಳ ಒಳಗೇ ಉಳಿಯಿತು.&lt;br /&gt;ಇವತ್ತು ಇನ್ನೇನೋ ಹಳೆಯದರ ನೆನಪಿನ ದೀಪ ಹಚ್ಚಿಟ್ಟುಕೊಂಡು, ಕಳೆದ ದಿನಗಳ ಇರುಳುಗತ್ತಲೆಯ ಗೋಡೌನಿನಲ್ಲಿ ಅಲೆದಾಟ. ಅಲ್ಲಿ ಜಗಜೀತರ ದನಿ ತುಮ್ ಕೋ ದೇಖಾ ತೋ.. ಅಂತ ನಸುನಗುತ್ತಾ ಫುರ್ ಸತ್ ಕೇ ರಾತ್ ದಿನ್ ನೆನಪು ಮಾಡಿಕೊಡುತ್ತಿದೆ. ಅಷ್ಟೆಯೇ ಆ ಪುರಸೊತ್ತಲ್ಲಿ ಏನೇನು ಮಾಡಬಹುದು ಅಂದುಕೊಂಡೇ ರೋಮಾಂಚಿತಳು ನಾನು. ಮಾಡಿದೆನಾ ಅಂತ ಕೇಳಬೇಡಿ. ಅಕಸ್ಮಾತ್ ಕೇಳಿದರೆ ಹೇಳಲಿಕ್ಕೆ ಸಮಯವಿಲ್ಲ. :)&lt;br /&gt;ಥೋಡೀ ಸೀ ಜಮೀ ಥೋಡಾ ಆಸ್ ಮಾ ದ ಟ್ಯೂನು ಸರಿಯಾಗುವುದು ೩೦*೪೦ ಚಿಕ್ಕ ಮನೆಯೋ ಅಥವಾ ಅಪಾರ್ಟ್ ಮೆಂಟೂ ನಡೆಯುತ್ತೋ ಅಂತ ಗೊಂದಲಗೊಳ್ಳುತ್ತೇನೆ ನಾನು. ಅರಳು ಹುರಿದ ಹಾಗೆ ಮಾತನಾಡದಿದ್ದರೂ ಹುರಿದ ಅರಳನ್ನು ತಿನ್ನುತ್ತ ಮಾತನಾಡಿ ಕಳೆಯುವ ನಮ್ಮ ವೀಕೆಂಡಿನ ಸಂಜೆಗಳಲ್ಲಿ ಕಾಗೆ ಹಾರಿಸುವ ಅವಶ್ಯಕತೆ ಇಲ್ಲ. ಅವೆಲ್ಲ ಗೂಡು ಸೇರಿದ ಮೇಲೆಯೇ ನಾವು ಹೊರಗೆ ಬರುವುದು.&lt;br /&gt;&lt;br /&gt;ಈ ಹಾಡು ನೀವು ಕೇಳಿರದೆ ಇದ್ದರೆ ಇಲ್ಲಿವರೆಗೂ.. ಈಗ ಕೇಳಿ.&lt;br /&gt;&lt;br /&gt;&lt;a href="http://www.muzigle.com/track/thodi-si-zamin-thoda-aasman"&gt;http://www.muzigle.com/track/thodi-si-zamin-thoda-aasman&lt;/a&gt;&lt;br /&gt;ನಂಗೆ ತುಂಬ ಇಷ್ಟ ಆದ ಈ ಹಾಡಿನ ಸಾಹಿತ್ಯ ಗುಲ್ಜಾರ್ ಅವರದ್ದು.&lt;br /&gt;ಇದೊಂದು ಡ್ಯುಯೆಟ್ - ಭೂಪಿಂದರ್ ಮತ್ತು ಲತಾ ಅವರ ಧ್ವನಿ. ಆರ್‍.ಡಿ ಬರ್ಮನ್ ಅವರ ಸಂಗೀತ.&lt;br /&gt;&lt;br /&gt;ಇವಳು: ಥೋಡಿ ಸಿ ಝಮೀ.. ಥೋಡಾ ಆಸ್.ಮಾ&lt;br /&gt;ಅವನು: ತಿನ್ ಕೋಂ ಕಾ ಬಸ್ ಇಕ್ ಆಶಿಯಾಂ&lt;br /&gt;ಇವಳು: ಮಾಂಗಾ ಹೈ ಜೋ ತುಮ್ ಸೆ ವೋ ಜ್ಯಾದಾ ತೊ ನಹೀಂ ಹೈ&lt;br /&gt;ಅವನು: ದೇನೆ ಕೋ ತೊ ಜಾನ್ ದೇ ದೇ ವಾದಾ ತೋ ನಹೀ ಹೈ&lt;br /&gt;ಇವಳು: ಕೋಯೀ ತೇರೆ ವಾದೋಂ ಪೇ ಜೀತಾ ಹೈ ಕಹಾಂ..&lt;br /&gt;ಅವನು:ಮೇರೇ ಘರ್ ಕೇ ಆಂಗನ್ ಮೇ ಚೋಟಾ ಸಾ ಝೂಲಾ ಹೋ&lt;br /&gt;ಇವಳು:ಸೌಂಧೀ ಸೌಂಧೀ ಮಿಟ್ಟೀ ಹೋಗೀ ಲೇಪಾ ಹುವಾ ಚೂಲಾ ಹೊ&lt;br /&gt;ಅವನು: ಥೋಡೀ ಥೋಡೀ ಆಗ್ ಹೋಗೀ.. ಥೋಡಾ ಸಾ ಧುವಾಂ&lt;br /&gt;ಅವನು: ರಾತ್ ಕಟ್ ಜಾಯೇಗೀ ತೋ ದಿನ್ ಕೈಸೇ ಬಿತಾಯೇಂಗೇ&lt;br /&gt;ಇವಳು: ಬಾಜರೇ ಕಿ ಖೇತೋಂ ಮೇ ಕವ್ವೇ ಉಡಾಯೇಂಗೇ&lt;br /&gt;ಅವನು: ಬಾಜರೇ ಕಿ ಸಿಟ್ಟೋಂ ಜೈಸೀ ದೇತೀ ಹೋ ಜವಾಂ (ಜವಾಬ್)&lt;br /&gt;&lt;br /&gt;ಯಾಕೋ ಈ ಕ್ಯಾಸೆಟ್ಟಿನಲ್ಲಿದ್ದ ಇಂಡೆಕ್ಸಿನ ಯಾವ ಹಾಡು ಕೇಳಿದರೂ ಮನಸ್ಸು ಮೋಡಕಟ್ಟುತ್ತದೆ. ಮಳೆಬರುವ ಸೂಚನೆ ಕಂಡ ಅವನು ಬೇಗನೆ ಕೊಡೆ ಸೂಡಿಕೊಂಡು ಒಂದು ಸಣ್ಣ ನಗೆಯೊಂದಿಗೆ ಹೊರಟುಬಿಡುತ್ತಾನೆ. ನಾನು ಒದ್ದೆ ಒಳಗೆ ಹೊರಗೆ ಗರಿ ಗರಿ ಇಸ್ತ್ರಿ ಬಟ್ಟೆ. ಪುಕ್ಕ ಕಿತ್ತ ಗರಿ.&lt;br /&gt;ಯಾರಿಗೆ ತಾನೆ ಬೆಳಕು ಹರಿಯುವವರೆಗೆ..ರಾತ್ರಿ ಇಡೀ ಕೆಲಸಕ್ಕೆ ಬಾರದ ಮಾತನಾಡುತ್ತಾ ಸುಳ್ಳೆ ಸುಳ್ಳೆ ಆಕಾಶದ ಚುಕ್ಕಿ ಎಣಿಸುತ್ತಾ ಒಬ್ಬರಿಗಿನ್ನೊಬ್ಬರು ಆತು ಕೂತು, ಬೆಳಗಾದ ಕೂಡಲೆ ಹೊಲಕ್ಕೆ ಕಾಳು ತಿನ್ನಲು ಬಂದ ಹಕ್ಕಿಗಳನ್ನು ಹಾರಿಸುವ ಕೆಲಸದಲ್ಲಿ ಕಳೆದುಹೋಗಲು ಇಷ್ಟವಾಗುವುದಿಲ್ಲ? ಅದರಲ್ಲೂ ಜೋಳದ ಕಾಳು ಹುರಿದು ಅರಳಾಗುವ ಹಾಗೆ ಮಾತನಾಡುವವಳಿಗೆ!&lt;br /&gt;ಏನೋ ಇಲ್ಲಿ ಕ್ಯೂಬಲ್ಲಿ ಏಸಿ ಆಫೀಸಿನಲ್ಲಿ ಹೊರಗಿನ ಗಾಳಿಯೇ ಬೀಸುವುದಿಲ್ಲ.. ಕಾಳು ತಿನ್ನುವ ಹಕ್ಕಿಯೆಲ್ಲಿ ಹುಡುಕಲಿ?&lt;br /&gt;&lt;br /&gt;&lt;br /&gt;ಏನೇ ನೀನು ಅಂಗಳ ಇಲ್ದೇ ಇದ್ರೂ ಜಗಲಿಗೇ ಕಟ್ಟಿದೀನಲ್ಲ ಜೋಕಾಲಿನ. ಇಷ್ಟು ದಪ್ಪ ಆಗಿ ನನ್ನ ಹತ್ರ ತೂಗು ಅಂದ್ರೆ ಆಗಲ್ಲ ಅಂತೀನಷ್ಟೆ ಅನ್ನುವ ಬದಲು ಅವನು ಜಾಣ, ಮಾತಿರದೆ ನಗು ಸೂಸಿ ಜೋಕಾಲಿಯನ್ನೊಮ್ಮೆ ನನ್ನನ್ನೊಮ್ಮೆ ನೋಡಿ ನಮ್ಮ ಮುದ್ದುರಾಕ್ಷಸಿಯನ್ನ ಎತ್ತಿಕೊಂಡು ಜೋಲಿಯಲ್ಲಿಟ್ಟು ತೂಗುತ್ತಾನೆ. "ಯಹಾಂ ಏಕ್ ಶೆಹಜಾದೀ ಸೋಯೀ ಹುಯೀ ಹೈ...ಎಂಬ ಸೊಲ್ಲು ಚೂರು ಪಾರು ಕೇಳ್ತಾ ಇದೆ.&lt;br /&gt;ಅವಳು ಎದ್ದ ಮೇಲೆ ಹಾಡುತ್ತಾಳೆ. ಏಕ್ ಫರಿಂದಾ ಹೋ ಶರ್ಮಿಂದಾ..ಆವೋ ಜಂಗಲ್...ಸೋಚ್ ರಹಾ ಹೈ ಬಾಹರ್ ಆಕೆ ಕ್ಯೂಂ ನಿಕಲಾ ಹೈ....&lt;br /&gt;&lt;img style="TEXT-ALIGN: center; MARGIN: 0px auto 10px; WIDTH: 320px; DISPLAY: block; HEIGHT: 240px; CURSOR: hand" id="BLOGGER_PHOTO_ID_5673321462255022914" border="0" alt="" src="http://4.bp.blogspot.com/-SdH38uPGMwE/Truvz7ZPc0I/AAAAAAAAB4o/wzEu2zemoj0/s400/IMG_0041.JPG" /&gt;ಓಹ್ ಇರಿ. ಅವಳು ಏಳುವುದಕ್ಕೆ ಮೊದಲು ನನ್ನ ಕೆಲಸ ಮುಗಿಸಬೇಕು. ಮತ್ತೆ ನಾಳೆ ಸಿಗೋಣ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-5767724458258355733?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/5767724458258355733/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=5767724458258355733' title='9 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/5767724458258355733'/><link rel='self' type='application/atom+xml' href='http://www.blogger.com/feeds/4515791944382207090/posts/default/5767724458258355733'/><link rel='alternate' type='text/html' href='http://nenapu-nevarike.blogspot.com/2011/11/blog-post.html' title='ಪುರಸತ್ ಕೇ ರಾತ್ ದಿನ್'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-SdH38uPGMwE/Truvz7ZPc0I/AAAAAAAAB4o/wzEu2zemoj0/s72-c/IMG_0041.JPG' height='72' width='72'/><thr:total>9</thr:total></entry><entry><id>tag:blogger.com,1999:blog-4515791944382207090.post-7896207201368394087</id><published>2011-10-20T04:09:00.000-07:00</published><updated>2011-10-20T22:25:35.175-07:00</updated><category scheme='http://www.blogger.com/atom/ns#' term='ಸೃಷ್ಟಿ ಶುಭದಾಯಿನಿ'/><title type='text'>ಎರಡು ತುದಿಗಳ ನಡುವಣಚ್ಚರಿಯ ಬದುಕು!</title><content type='html'>ಅಳುಕು -&lt;br /&gt;ಮೀರುವ ಕ್ರಿಯೆಯಲ್ಲಿ ಅಳಿಯುವೆನೇನೋ ಎಂದು;&lt;br /&gt;ಹೊಳಪು -&lt;br /&gt;ಮಡಿಲು ತುಂಬಿದ ಗುಲಾಬಿಕಾಲ್ಗಳ ಸೊಬಗು ಕಂಡು;&lt;br /&gt;ಸಿಡುಕು -&lt;br /&gt;ನೀನು ನಿದ್ದೆ ಕೆಡಿಸುತ್ತೀ ಅಂತ;&lt;br /&gt;ಕಿರಿನಗು-&lt;br /&gt;ನಿನ್ನ ಬೇಡಿಕೆ ತುಂಬಿದ ಕೆನ್ನೆಕಂಗಳ ನೋಡಿ;&lt;br /&gt;ಅಸಹನೆ -&lt;br /&gt;ಇನ್ನೇನು ತುತ್ತಿಡುವಷ್ಟರಲ್ಲಿ ಚಡ್ಡಿ ಬಿಚ್ಚುತ್ತೀ ಕಕ್ಕ ಬಂತು;&lt;br /&gt;ಮಂತ್ರಮುಗ್ಧೆ -&lt;br /&gt;ಕುತ್ತಿಗೆಯ ಬಳಸಿ ಕೆನ್ನೆಗೆ ಮೆತ್ತನೆ ಕೆನ್ನೆ ತೀಡುವಾಗ;&lt;br /&gt;ಗೊಣಗು -&lt;br /&gt;ಊಟದ ತಟ್ಟೆ ಹಿಡಿದು ಮನೆಯಿಡೀ ಸುತ್ತುವಾಗ;&lt;br /&gt;ಬೆರಗು -&lt;br /&gt;ಬೇಸರ ಬಂದು ಗಬ್ಬೆದ್ದ ದಿನದ ರುಟೀನಲ್ಲಿ ನಿನ್ನ ಹೊಸತನದ ಬನಿ ಬನಿ ಇಳಿವಾಗ;&lt;br /&gt;ಅನಿಸುತ್ತೆ ಟುಪ್ಪೂ..&lt;br /&gt;ಇದಕ್ಕೆ ಇರಬಹುದೆ ಕತೆ ಕವಿತೆ ಗೀತ ಗೋವಿಂದ-&lt;br /&gt;-ಗಳಲ್ಲಿ ಉಲಿದಿದ್ದು&lt;br /&gt;"ಮಣ್ಣುತಿಂದ ಬಾಯ ಬಿಡಿಸೆ&lt;br /&gt;ಅಮ್ಮನೆದುರು ಜಗವೆ ಹರಡಿ&lt;br /&gt;ಮೂಡಿದುದು ಅಚ್ಚರಿ&lt;br /&gt;ತಾಯ್ತನದ ವೈಖರಿ !&lt;br /&gt;ಅವಳ ಹೊರತು ಕಾಣಬಹುದು ಯಾರಾದರೂ ಹೇಗೆ??&lt;br /&gt;ಮಗು ಮಣ್ಣು ತಿನ್ನದೆ -&lt;br /&gt;ಅಮ್ಮ ಪೆಟ್ಟು ಕೊಡದೆ-&lt;br /&gt;ಬಾಯಿ ಬಿಡದೆ-&lt;br /&gt;ಅದರಲ್ಲಿಣುಕದೆ-&lt;br /&gt;ಅಮ್ಮನ ಹೊರತು ಕಾಣಬಹುದು ಯಾರಾದರೂ ಹೇಗೆ??&lt;br /&gt;ಮಗಳ ಹೊರತು ತೋರಬಹುದು ಯಾರಾದರೂ ಹೇಗೆ?&lt;a href="http://4.bp.blogspot.com/-qSBs6Q2gilw/TqAFiojnxhI/AAAAAAAAB20/5NIh2peV8DM/s1600/SrushtiShubhadaayini.jpg"&gt;&lt;img style="MARGIN: 0px 10px 10px 0px; WIDTH: 400px; FLOAT: left; HEIGHT: 338px; CURSOR: hand" id="BLOGGER_PHOTO_ID_5665534423792600594" border="0" alt="" src="http://4.bp.blogspot.com/-qSBs6Q2gilw/TqAFiojnxhI/AAAAAAAAB20/5NIh2peV8DM/s400/SrushtiShubhadaayini.jpg" /&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-7896207201368394087?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/7896207201368394087/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=7896207201368394087' title='4 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/7896207201368394087'/><link rel='self' type='application/atom+xml' href='http://www.blogger.com/feeds/4515791944382207090/posts/default/7896207201368394087'/><link rel='alternate' type='text/html' href='http://nenapu-nevarike.blogspot.com/2011/10/blog-post_20.html' title='ಎರಡು ತುದಿಗಳ ನಡುವಣಚ್ಚರಿಯ ಬದುಕು!'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-qSBs6Q2gilw/TqAFiojnxhI/AAAAAAAAB20/5NIh2peV8DM/s72-c/SrushtiShubhadaayini.jpg' height='72' width='72'/><thr:total>4</thr:total></entry><entry><id>tag:blogger.com,1999:blog-4515791944382207090.post-1261810909353074142</id><published>2011-10-12T02:46:00.000-07:00</published><updated>2011-10-12T02:50:16.524-07:00</updated><title type='text'>'ಹೊಸ'ಬಗೆ!</title><content type='html'>ಸುಳಿದು ನಿನ್ನ ನೆನಪು&lt;br /&gt;ಕತ್ತಲ ಮನದಂಗಳದ ತುಂಬ ದೀಪದ ಬೆಳಕು&lt;br /&gt;ಸುತ್ತ ಚಳಿಯ ಸಂಜೆ&lt;br /&gt;ಕಾಲು ಚಾಚಿ ಒಲೆಯ ಮುಂದೆ&lt;br /&gt;ನಿನ್ನ ನೆನಪಿನ ಕಾವು&lt;br /&gt;ಅಕಾಲದ ಸಂಜೆ ಮಳೆಗೆ ನೆಂದ ರಸ್ತೆ&lt;br /&gt;ಎದೆಯಲ್ಲಿ&lt;br /&gt;ಮೇಲೇಳುವ&lt;br /&gt;ಬೆಚ್ಚನೆ ಸ್ಪರ್ಶದ ಸ್ಮ್ರತಿಯ ಹಬೆ&lt;br /&gt;ಒಂದು ಮಾತಿನ ಮೊದಲ ಪದ ಮಾತ್ರ ನಿನ್ನದು&lt;br /&gt;ದನಿಯಾಗದೆ ಉಳಿದ ವಾಕ್ಯ&lt;br /&gt;ನನಗೆ ಕೇಳಿದ್ದು ಹೇಗೆ,&lt;br /&gt;ನಾನು ಹೇಳಲು ಬಾಯಿ ತೆರೆದದ್ದನ್ನ&lt;br /&gt;ನೀನು ಆಡಿದ ಹಾಗೆ,&lt;br /&gt;ಆಡದೆಯೆ ಉಳಿದೂ ಎಲ್ಲ ಅಂತರ್ಗತವಾದ ನಗೆ,&lt;br /&gt;ಆ ನಗೆಬಿಂಬದ ಬೆಳದಿಂಗಳ ಬೆನ್ನಿಗೆ&lt;br /&gt;ಕಡುಗಪ್ಪು ಆಕಾಶದ ಬಗೆ,&lt;br /&gt;ಬಗೆಯಲು ಹೆದರಿಕೆ ನನಗೆ&lt;br /&gt;ಉಳಿಯದೆ ಆಡಿದ ಮಾತು&lt;br /&gt;ಆಡಬಾರದ್ದೇ ಅಂತಲೂ ಗೊತ್ತು ನಿನಗೆ.&lt;br /&gt;ಇದು 'ಹೊಸ'ಬಗೆ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-1261810909353074142?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/1261810909353074142/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=1261810909353074142' title='5 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/1261810909353074142'/><link rel='self' type='application/atom+xml' href='http://www.blogger.com/feeds/4515791944382207090/posts/default/1261810909353074142'/><link rel='alternate' type='text/html' href='http://nenapu-nevarike.blogspot.com/2011/10/blog-post_12.html' title='&apos;ಹೊಸ&apos;ಬಗೆ!'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-4515791944382207090.post-5624189721507538923</id><published>2011-10-11T02:08:00.000-07:00</published><updated>2011-10-11T02:28:44.167-07:00</updated><title type='text'>ಜಿಸೇ ಹಮ್ ಗುನ್ ಗುನಾ ನಹೀ ಸಕ್  ತಾ.. ವಕ್ತ್ ನೇ ಐಸಾ ಗೀತ್ ಕ್ಯೂಂ ಗಾಯಾ..</title><content type='html'>{ನನ್ನ ಕುದಿವ ಭಾವಸರಸ್ಸಲ್ಲಿ ಕಾಗದದ ದೋಣಿ ತೇಲಿಬಿಟ್ಟು ಒಳಗುದಿಯನ್ನು ಸಹ್ಯವಾಗಿಸಿದ ದನಿಸಿರಿಯ ನೆನಪಲ್ಲಿ ಒಂದು ಬ್ಲಾಗ್ದೋಣಿ.. }&lt;br /&gt;&lt;br /&gt;ಬೇಸರಾಗಿತ್ತು ಪಯಣ. ಜೊತೆಹಾದಿ. ಪ್ರಾಪಂಚಿಕತೆಯ ಓವರ್ ಡೋಸ್ ನಿಂದಾಗಿ ರೋಗಗ್ರಸ್ತ ಮನಸ್ಸು. ಎದೆಯಿಂದ ಎದೆಗೆ, ಮೋಡದಿಂದ ಮೋಡಕ್ಕೆ, ಮನೆಯಿಂದ ಮನೆಗೆ, ದಾರಿಯಿಂದ ದಾರಿಗೆ ಯಾವುದೂ ಬೇಕಿರದೆ ಬೇಕಾರಾಗಿ ಅಲೆದ ದಿನಗಳು. ಹಿರಿಯ ಸ್ನೇಹಿತರೊಬ್ಬರ ಮನೆಯಲ್ಲಿ ಮಾತನಾಡುತ್ತ ಕೂತಿದ್ದೆ. ನನ್ನನ್ನು ಗಝಲ್ ಲೋಕಕ್ಕೆ ಪರಿಚಯಿಸಿದ ಆ ಜೀವಕ್ಕೆ ಎಂದಿಗೂ ಋಣಿ ನಾನು. ನಮ್ಮಿಬ್ಬರ ನಡುವೆ ಏನೆಲ್ಲ ನಡೆದು ಯಾವೆಲ್ಲ ನೀರು ಹರಿದಿದೆ. ಇಬ್ಬರಲ್ಲೂ ಒಮ್ಮತ ಮೂಡದೆ ನಮ್ಮ ದಾರಿ ನಾವು ಹಿಡಿದು ಜೊತೆ ಹಿಡಿಸದೆ ನಡೆದಾಗಿದೆ. ಆದರೆ ಎರಡು ವಿಷಯಕ್ಕೆ ನಾನವರಿಗೆ ಚಿರಋಣಿ.&lt;br /&gt;ಒಂದು : ಜೋಕೊಂದರಿಂದ ನನ್ನ ಅನಿಶ್ಚಯತೆಯನ್ನ ನೀಗಿಸಿ.ಹೊಸ ದಾರಿ ಹುಡುಕಿದವಳಿಗೆ ಬಯಲ ದಿಕ್ಕು ತೋರಿದ್ದಕ್ಕೆ. ಮತ್ತು ಪ್ರಾಮಾಣಿಕ ಸಾಥ್ ನೀಡಿದ್ದಕ್ಕೆ.&lt;br /&gt;ಇನ್ನೊಂದು: ನನ್ನ ತಲ್ಲಣದ ದಿನಗಳಲ್ಲಿ ಈ ಗಝಲ್ ಮೋಡಿಗೆ ನನ್ನ ಸಿಲುಕಿಸಿ ತೇಲಿಬಿಟ್ಟಿದ್ದಕ್ಕೆ. ನನ್ನ ಭಾವಜಗತ್ತಿನ ವಿಸ್ತರಣೆಯಾಗಿ ಸೇರಿದ ಈ ಗಝಲ್ಲುಗಳು ನನಗೆ ಒಬ್ಬಳೆ ಕೂತು ಅಳುವುದಕ್ಕೆ ಸಿಕ್ಕ ಮಂದಬೆಳಕಿನ ದಿವ್ಯಮೂಲೆಯಂತೆ ಭಾಸವಾಗುತ್ತದೆ.&lt;br /&gt;ಇದೆಲ್ಲ ಇರಲಿ ಅವತ್ತೊಂದಿನ ನನ್ನ ಸೆಳೆದ ಆ ಮೋಡಿಮಾಡಿದ ಹಾಡಿನ ಮೊದಲ ಸಾಲುಗಳು ಅರ್ಥವಿರಲಿ, ಪುನರುಕ್ತಿ ಮಾಡಲೂ ಗೊತ್ತಾಗಲಿಲ್ಲ. ಕೊನೆಯ ಸಾಲು ವೋ ಕಾಗಝ್ ಕೀ ಕಶ್ತೀ ವೋ ಬಾರಿಶ್ ಕಾ ಪಾನೀ.. ಕಾಗಝ್ ಅಂತಿದ್ದರೆ ಮುಂದಿನ ಪದ ದೋಣಿಯಿರಬಹುದು, ಅಲ್ದೆ ಮುಂದಿನ ಸಾಲಲ್ಲಿ ಮಳೆ ಮತ್ತು ನೀರಿದೆ ಅಂದುಕೊಂಡು ಮತ್ತೆ ಅವರಲ್ಲಿ ವಿನಂತಿಸಿಕೊಂಡು ಇಡೀ ಹಾಡು ರಿವೈಂಡ್ ಮಾಡಿ ಕೇಳಿದೆ. ಕ್ಯಾಸೆಟ್ಟು ಇಸಕೊಂಡು ಹೋಗಿ ಪ್ರತೀ ಸಾಲನ್ನೂ ರಿವೈಂಡ್ ಮಾಡುತ್ತಾ ಬರಕೊಂಡೆ. ಲೈಬ್ರರಿಗೆ ಹೋಗಿ ಉರ್ದು - ಇಂಗ್ಲಿಷ್ ಡಿಕ್ಶನರಿ ತೆಗೆದು ಎಲ್ಲ ಪದಗಳ ಅರ್ಥ ಬರಕೊಂಡೆ. ಮತ್ತೆ ಮನೆಗೆ ಬಂದು ಆ ಹಾಡನ್ನ ಕೇಳುತ್ತ ಕೂತೆ. ಹರೆಯದ ಹುಚ್ಚಲ್ಲಿ ಅರ್ಧಕ್ಕೆ ಮೊಟಕುಗೊಳಿಸಿದ ನನ್ನ ಬಾಲ್ಯ ಮನಸ್ಸಿನೊಳಗೆ ರಿವೈಂಡಾಗುತ್ತಿತ್ತು.&lt;br /&gt;ಕಣ್ಣು ತೆರೆದೂ ಕನಸು ಕಾಣುವುದ ಕಲಿತೆ. ದಾರಿ ಸಾಗುತ್ತಲೇ ಕಳೆದು ಹೋಗುವುದ ಅರಿತೆ. ಅದನ್ನು ಹಾಡಿದವ ನಾನು ಕೇಳಿ ಅಳಲಿ, ತವಕಿಸುತ್ತ ಅಮ್ಮನೂರಿಗೆ ಓಡಲಿ, ತಮ್ಮನ ಜೊತೆ ಇನ್ನೊಂದು ಹೊಸಾ ರೌಂಡು ಅಂಗಳದಲ್ಲಿ ಆಟವಾಡಲಿ, ಇದೆಲ್ಲ ಮಾಡದೆ ಹೋದರೆ ನಾನು ಸತ್ತೇ ಹೋದೇನು ಅಂತ ನನಗೆ ಅನಿಸಿಬಿಡಲಿ ಅಂತಲೇ ಹಾಡಿದ್ದು ಅಂದುಕೊಂಡೆ. ಆ ಮೆಲಾಂಕಲಿಯನ್ನ ಕೇಳಿ ಥಕ್ಕಾಗಿ ಕೂತವಳು ಒಂದಿನ ಇನ್ನೊಂದಿಷ್ಟು ಕೇಳಲು ಎದ್ದೆ. ಅವನ ಮೆಲಾಂಕಲಿ ಮುಗಿವಲ್ಲಿ ಇನ್ನೊಬ್ಬ ಗಝಲ್ ಹಾಡುಗಾರನ ಭಾವಜಗತ್ತು. ಇಲ್ಲಿ ಕಳೆದು ಹೋದದ್ದ ಕುರಿತು ದುಃಖಿಸುವ ಹಂತ ಮುಗಿದು, ಕಳೆದುಕೊಳ್ಳಲಿಕ್ಕಾಗಿ ಅಂತಲೆ ದಕ್ಕಿಸಿಕೊಳ್ಳುವ, ಮುರಿದು ಬೀಳುತ್ತದೆ ಅಂತ ಗೊತ್ತಿದ್ದೇ ಕೈಗೆತ್ತಿಕೊಳ್ಳುವ, ನನ್ನದಲ್ಲದವನು ಅಂತಲೇ ಜಾಗ ಕೇಳುವ, ಹೂವು ಗಿಡದ್ದು ಸುಗಂಧ ಗಾಳಿಯದು, ನಾನು ಸುಳಿದಲ್ಲಿ ಸಿಕ್ಕ ಸುಗಂಧ ನನ್ನದು ಎಂಬ ಹೊಸ ಖಯಾಲಿನ ಲೋಕ ತೆರೆದಿತ್ತು. ಇವರೆಲ್ಲ ಯಾಕೆ ಇಷ್ಟು ಆರ್ತವಾಗಿ ಆರ್ದ್ರರಾಗಿ ಹಾಡಿ ಸುಮ್ಮನೆ ಒಣಗಿಕೊಂಡು ಮಿಡಿಯುವ ನಮ್ಮ ಹೃದಯದಲ್ಲಿ ಒರತೆ ಉಕ್ಕಿಸುತ್ತಾರೆ ಅಂತ ಅರ್ಥವಾಗದೆ ಹೋಯಿತು. ಅಷ್ಟರಲ್ಲಿ ಇನ್ನೊಂದು ಸ್ವತಂತ್ರ ಆತ್ಮದ ಕರೆ. ಅವಳನ್ನು ಸಮೀಪಿಸುವಾಗ ನನ್ನ ಸಾಹಿತ್ಯ ತಿಳಿದು ಕೇಳುವ ಹುಚ್ಚು ಬೆಪ್ಪಾಗಿ ಹೋಯಿತು. ಊಂ.... ಅಂತಲೆ ಹರಿವ ಅವಳ ರಾಗದ ಅಲೆಗೆ ನಾನು ದಿಕ್ಕು ದೆಸೆ ತಿಳಿಯದ ಹಾಗೆ ಕೊಚ್ಚಿಕೊಂಡು ಹೋದೆ. ಈ ಮೂವರೂ ನನ್ನ ಅತ್ಯಂತ ಖಾಸಗಿಕ್ಷಣವನ್ನ ಅಪರೋಕ್ಷವಾಗಿ ಹಂಚಿಕೊಂಡ ಆಪ್ತರು. ಯಾರಿಗೂ ಹೇಳದ್ದನ್ನ ಇವರೊಡನೆ ಹೇಳಿದ್ದೇನೆ. ಅವರು ಜಗತ್ತಿಗೆ ಹರಿಸಿದ ಹೊನಲು ನನಗಾಗೆ ಕೇವಲ ನನಗಾಗೆ ಹೇಳಿದ ಖಯಾಲುಗಳೆಂದು ಬಗೆದು ಅದರಿಂದ ಸಾಂತ್ವನ ಪಡೆದಿದ್ದೇನೆ. ಹೀಗೆ ಒಂದು ಗಾಯವನ್ನ ಕೊಳೆಸದೆ ಹಾಗೇ ರಂಗಾಗಿ ಇಡುವ ಮಾಂತ್ರಿಕ ಸ್ಪರ್ಶದ ಫ್ರೀಝರ್ ನ ಈ ಮೂರು ಖಾನೆಗಳ ಹೆಸರು ಜಗಜೀತ್, ಗುಲಾಂ ಅಲಿ ಮತ್ತು ಆಬಿದಾ ಪರ್ವಿನ್.&lt;br /&gt;ನಿನ್ನೆ ಈ ಬದುಕಿನ ಕೊನೆಯ ಚರಣ ಮುಗಿಸಿ ಎದ್ದು ಹೋದ ಶ್ರೀ ಜಗಜೀತ್ ಸಿಂಗರ ನೆನಪಿನಲ್ಲಿ ಈ ಬರಹ.&lt;br /&gt;&lt;img style="TEXT-ALIGN: center; MARGIN: 0px auto 10px; WIDTH: 400px; DISPLAY: block; HEIGHT: 301px; CURSOR: hand" id="BLOGGER_PHOTO_ID_5662163642685044178" border="0" alt="" src="http://3.bp.blogspot.com/-oUp6eX5kduU/TpQL1WZftdI/AAAAAAAAB2o/PbaJTNvP5h0/s400/jagjithsingh.jpg" /&gt;ಗಝಲುಗಳನ್ನ ಅವುಗಳ ಸಾಂಪ್ರದಾಯಿಕ ಖಯಾಲುಗಳಿಂದ ಮುಕ್ತಗೊಳಿಸಿ, ಯಾರು ಬೇಕಾದರೂ ಹಾಡಬಹುದು ಅನ್ನಿಸುವಂತೆ ಆಪ್ತವಾಗಿ ಘಮಘಮಿಸುವಂತೆ ಹಾಡಿ, ಉರ್ದು ತಿಳಿಯದವರೂ ಗಝಲ್ ಕೇಳುವ ಹಾಗೆ ಮಾಡಿದ ಕೀರ್ತಿ ಜಗಜೀತರದ್ದು. ಅವರ ಧ್ವನಿಗೆ ಆಳವಿಲ್ಲ, ಹೊಸತನವಿಲ್ಲ, ಸಾಂಪ್ರದಾಯಿಕ ಘನತೆಯಿಲ್ಲ ಎಂಬಿತ್ಯಾದಿ ಹುಸಿಮಾತುಗಳಿಗೆ ತಲೆಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನು ಹಾಡುತ್ತ, ಸಂಗೀತ ಸಂಯೋಜಿಸುತ್ತ, ಹೊಸ ಹೊಸ ಪ್ರಯತ್ನ, ಮತ್ತು ಆಲ್ಬಂಗಳನ್ನು ತರುತ್ತ ಹೋದರು ಅವರು. ಹಾಡುಹಕ್ಕಿಯ ಕೇಳುವ ಕಿವಿಗಳು ಎಲ್ಲ ಕಡೆಯೂ ಇದ್ದವು. ಗಾಲಿಬ್ ಎಂಬ ಒಂದು ಅತ್ಯಪೂರ್ವ ರತ್ನವನ್ನ ರಾಷ್ಟ್ರೀಯ ಮಾಧ್ಯಮದಲ್ಲಿ ಧಾರಾವಾಹಿಯಾಗಿ ಎಳೆತಂದು ನಮ್ಮ ಪೀಳಿಗೆಗೆ ಹೊಸ ಆಪ್ತತೆಯನ್ನು ತೆರೆದುಕೊಟ್ಟದ್ದು ಅವರದ್ದೇ ಪ್ರಯತ್ನ. ಗಾಲಿಬ್ ನನ್ನ ದೊಡ್ಡ ವಿದ್ವಾಂಸರ ಸಭೆಯಲ್ಲಿ ಹಾಡಿಕೊಂಡು ಕೂರಬೇಕು ಎಂಬ ಮಿತಿಯ ಮೀರಿದ ಪ್ರಯತ್ನ. ಹೊಸ ದಿಕ್ಕುಗಳಿಗೆ ಬಾಗಿಲಿಲ್ಲ ಎಂದು ತೋರಿಸಿದ ಪ್ರಯತ್ನ ಅದು. "ಹಝಾರೋ ಖ್ವಾಯಿಷೇ ಐಸಿ ನಿಕಲೇ, ಹರ್ ಏಕ್ ಖ್ವಾಯಿಶ್ ಪೇ ದಂ ನಿಕಲೀ" ಎಂದು ಅವರು ನಿರ್ದೇಶಿಸಿದ ಗಾಲಿಬ್ ಹಾಡಿದ್ದು ನನಗಾಗೆ ಅಲ್ಲವೇ? ನಿದ್ದೆ ಬರದೆ ಕಾಡಿದ ರಾತ್ರಿಗಳ ಯುಗಾಂತ್ಯವಾಗುವುವರೆಗೂ ಸಾಥ್ ಕೊಟ್ಟ ಗಝಲುಗಳಲ್ಲಿ ಮೊದಮೊದಲ ಹಾಡುಗಳು ಅವರವೇ.. ಯಾರೋ ಹೇಳಿದ್ದು ನಿಜ. ಹೊಸಬರಿಗೆ ಗಝಲ್ ಎಂಟ್ರಿ ಪಾಯಿಂಟ್ ಜಗಜೀತ್ ಅಂತ. ಆ ಗಝಲ್ಲುಗಳ ಟೈಟಲ್ಲೇ ಅದು ಫಿಲ್ಮೀ ಗಝಲ್ಸ್! ಮತ್ತು ಆ ಫಿಲ್ಮೀ ಮೆಲಾಂಕಲಿ ಹಾಡುಗಳು ಒಮ್ಮೆ ಕೇಳಿದವರನ್ನ ಅಲ್ಲಿಗೆ ಬಿಡದೆ ಎಲ್ಲ ಗಝಲುಗಳ ಆಪ್ತಪಿಸುದನಿಯ ಪ್ರಪಂಚದಲ್ಲಿ ಆರ್ದ್ರಪಯಣಕ್ಕೆ ಹಚ್ಚಿಬಿಡುತ್ತಿದ್ದುದೂ ಹೌದು.&lt;br /&gt;ತುಮ್ ಕೋ ದೇಖಾ ತೋ ಯೇ ಖಯಾಲ್ ಆಯಾ ಎಂಬ ಮಾತಿನ ರಮ್ಯತೆಯ ಮೋಡಿಯಲ್ಲಿ ಸೆಳೆಯುವ ಸಾಲಿನ ಬೆರಳು ಹಿಡಿದು ಹೊರಟರೆ ಅದು ನಮ್ಮನ್ನ ಕರೆದೊಯ್ದು ನಿಲ್ಲಿಸುವುದು ಜಿಸೇ ಹಮ್ ಗುನ್ ಗುನಾ ನಹೀ ಸಕ್ ತಾ.. ವಕ್ತ್ ನೇ ಐಸಾ ಗೀತ್ ಕ್ಯೂಂ ಗಾಯಾ.. ಎಂಬ ಗಾಯವನ್ನು ತೋರಲು! ಜುಖೀ ಜುಖೀ ಸೀ ನಝರ್... ಎಂಬ ಹಾಡು ಕಟ್ಟಿಕೊಡುವ ಬೇಕರಾರಿ ಇನ್ಯಾವ ಹಾಡಲ್ಲಿದೆ? ಅವಳು ಅವನೊಡನೆ ಕಳೆವ ಉತ್ಕಟ ಕ್ಷಣಗಳ ಉಲ್ಲಸಕ್ಕೆ ರೋಮಾಂಚಿತರಾಗುವ ಕ್ಷಣದಲ್ಲೇ, ಇವನ ಸಂಕಟಕ್ಕೆ ಹನಿಗಣ್ಣಾಗುವ ಕ್ಷಣವೂ ಈ ಹಾಡಲ್ಲೇ!&lt;br /&gt;ಪ್ಯಾರ್ ಮುಜ್ ಸೇ ಜೋ ಕಿಯಾ ತುಮ್ ನೇ ತೋ ಕ್ಯಾ ಪಾವೋ ಗೀ...ಅಂತ ಸ್ವಮರುಕದಲ್ಲಿ ಬೇಯುವ ದನಿಗೆ ಹನಿಗಣ್ಣಾಗದ ಕಿವಿ ಇದ್ದೀತೇ?&lt;br /&gt;ಕಲ್ ಚೌದ್ವೀಂ ಕಾ ರಾತ್ ಥೇ...ಅಂದ ಮೇಲೇ ನಿನ್ನ ಚರ್ಚೆಯಾಗದೆ ಹೇಗೆ ಸಾಧ್ಯ ಅಲ್ಲವೆ.. ಎಲ್ಲೆಲ್ಲಿ ಗಝಲ್ ಹಾಡು ಹಾಡುವರೋ ಅಲ್ಲಿ ನಿನ್ನ ನೆನಪಾಗದೆ ಹೋದೀತೇ?&lt;br /&gt;ಇಶ್ಕ್ ಕೀಜಿಯೇ, ಫಿರ್ ಸಮಝಿಯೇ ಬೇಕುಧೀ ಕ್ಯಾ ಚೀಝ್ ಹೈ.. ಎಂಬ ಹಾಡಿನ ಸಾಲು ಕೇಳಿದವರು ಕೂಡಲೇ ಈ ಸಂಕಟಕ್ಕೇ ಹಂಬಲಿಸುವಂತೆ ಮಾಡುವ ಮಾಂತ್ರಿಕ ದನಿ ತನ್ನ ಕೊನೆಯ ಚರಣದಲ್ಲಿ ಜರ್ಝರಿತವಾಗಿ ಚಿಟ್ಟೀ ನ ಕೊಯೀ ಸಂದೇಸ್.. ಎಂಬ ಹಾಗೆ ಹೊರಟ ದಿನ ಮುಗಿದು, ಇನ್ನು ಬರಿ ನೆನಪುಗಳ ಪಯಣ. ಫೋಟೋ ಫ್ರೇಮುಗಳಲ್ಲಿ ಸೀಡಿ-ಡೀವಿಡಿಗಳಲ್ಲಿ ಆರ್ಕೈವುಗಳಲ್ಲಿ, ಆರ್ತ ಮನಸ್ಸುಗಳ ಕೇಳುಗಿವಿಗಳಲ್ಲಿ ಅಮರ ಗೀತವಾಗಿ ಗುನುಗುತ್ತಾ..&lt;br /&gt;&lt;br /&gt;ನನ್ನ ಗಝಲುಗಳ ಪಯಣದ ಎಂಟ್ರಿ ಪಾಯಿಂಟ್ ಮತ್ತು ನಿತ್ಯಹರಿದ್ವರ್ಣ ಹಾಡು... ಜಗಜೀತರ ಧ್ವನಿಯಲ್ಲಿ &lt;a href="http://www.youtube.com/watch?v=NqRCVdotF1U&amp;amp;feature=related"&gt;http://www.youtube.com/watch?v=NqRCVdotF1U&amp;amp;feature=related&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-5624189721507538923?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/5624189721507538923/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=5624189721507538923' title='6 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/5624189721507538923'/><link rel='self' type='application/atom+xml' href='http://www.blogger.com/feeds/4515791944382207090/posts/default/5624189721507538923'/><link rel='alternate' type='text/html' href='http://nenapu-nevarike.blogspot.com/2011/10/blog-post.html' title='ಜಿಸೇ ಹಮ್ ಗುನ್ ಗುನಾ ನಹೀ ಸಕ್  ತಾ.. ವಕ್ತ್ ನೇ ಐಸಾ ಗೀತ್ ಕ್ಯೂಂ ಗಾಯಾ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-oUp6eX5kduU/TpQL1WZftdI/AAAAAAAAB2o/PbaJTNvP5h0/s72-c/jagjithsingh.jpg' height='72' width='72'/><thr:total>6</thr:total></entry><entry><id>tag:blogger.com,1999:blog-4515791944382207090.post-1177865059332240566</id><published>2011-09-30T01:58:00.000-07:00</published><updated>2011-09-30T02:00:26.776-07:00</updated><category scheme='http://www.blogger.com/atom/ns#' term='ಒಂದು ಹಳೇ ಕವಿತೆ.. ಆದ್ರೆ ಸರ್ವಋತುಪರ್ಣ..'/><title type='text'>ಹಲ್ನೋವು</title><content type='html'>ಮಳೆಗಾಲದ ಮಧ್ಯಾಹ್ನ&lt;br /&gt;ಉಂಹೂಂ ನಮ್ಮೂರಾಗಲ್ಲ&lt;br /&gt;ಇಲ್ಲೆ ಐಟಿಸಿಟಿಯಲ್ಲಿ&lt;br /&gt;ಬೈಗು,ಬೆಳಗು,ಬಿಸ್ಲೊತ್ತು,ನೆಳಲು&lt;br /&gt;ಗೊತ್ತಾಗದ ಹಾಗೆ&lt;br /&gt;ಏಸಿಯಲ್ಲಿ ಕುಳಿತು&lt;br /&gt;ದಿನಚರಿಯನ್ನೇನು ಹೇಳುವುದು ಬಿಡಿ&lt;br /&gt;ಎಲ್ಲರ ಕತೆಯೂ ಅದೆ&lt;br /&gt;ವಿಷ್ಯ ಏನಪಾಂದ್ರೆ&lt;br /&gt;ಸ್ವಲ್ಪ ಹೆಚ್ಚೇ ಕಾಡುತ್ತಿರುವ&lt;br /&gt;ಹಲ್ನೋವು.&lt;br /&gt;ಹುಂ ತಕ್ಷಣವೇ ಡಾಕ್ಟರತ್ರ&lt;br /&gt;ಕರ್ಕೊಂಡೋಗಲು ನಾನು&lt;br /&gt;ಹೊಸಹೆಂಡತಿಯಲ್ಲ.&lt;br /&gt;ಅಂವ ಹಳೆಗಂಡನೂ ಅಲ್ಲ&lt;br /&gt;ವಯಸ್ಸಾದ್ ಮೇಲೆ&lt;br /&gt;ಇದ್ದಿದ್ದೆ ಇದೆಲ್ಲ&lt;br /&gt;ಅಂತ ನಾನೂ ಸುಮ್ನಿದ್ದೆ&lt;br /&gt;ಸುಮ್ನಾದಂಗೂ ಅಬ್ಬರ&lt;br /&gt;ಜಾಸ್ತಿಯಾಗುವುದೇ ಹಲ್ನೋವಿನ ಲಕ್ಷಣವಂತೆ&lt;br /&gt;ಈಗ ಮೂವತ್ತೈದರ ಆಜೂಬಾಜಲ್ಲಿ&lt;br /&gt;ಇನ್ನೇನು ಮತ್ತೆ&lt;br /&gt;ಎಲ್ಲ ಸಣ್ ಪುಟ್ಟ ಕಾಯಿಲೆಗಳಿಗೂ&lt;br /&gt;ಬಾಲಗೋಪಾಲದಿಂದ&lt;br /&gt;ಕಿರೀಟಕ್ಕೇ ಭಡ್ತಿ.&lt;br /&gt;ಅದಕ್ಕೆ ಇರಬೇಕು&lt;br /&gt;ಮಹಾನಗರದ ಆಸುಪತ್ರೆಗಳೆಲ್ಲ ಭರ್ತಿ.&lt;br /&gt;ಮಳೆಯ ಚಳ್ ಚಳಿಯಲ್ಲಿ&lt;br /&gt;ಬೆಚ್ಚಗೆ ಕೂತು ಚಕ್ಕಲಿ ಕಡಿಯುವ ನೆನಪಿಗೆ&lt;br /&gt;ಹಲ್ಲು ಕಟಗುಟ್ಟಿ&lt;br /&gt;ಇಷ್ಟೆಲ್ಲ ಬರೆಸಿದ್ದು ನೋಡಿದ್ರೆ&lt;br /&gt;ಭೂತಗನ್ನಡಿಯಲ್ಲಿ ಬೆಳಕು ತೂರದೇನೆ&lt;br /&gt;ಬೆಂಕಿ ಬಂದ್ರೂ ಬಂತೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-1177865059332240566?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/1177865059332240566/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=1177865059332240566' title='9 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/1177865059332240566'/><link rel='self' type='application/atom+xml' href='http://www.blogger.com/feeds/4515791944382207090/posts/default/1177865059332240566'/><link rel='alternate' type='text/html' href='http://nenapu-nevarike.blogspot.com/2011/09/blog-post_30.html' title='ಹಲ್ನೋವು'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>9</thr:total></entry><entry><id>tag:blogger.com,1999:blog-4515791944382207090.post-425719653134263391</id><published>2011-09-27T00:42:00.000-07:00</published><updated>2011-09-27T00:46:30.982-07:00</updated><category scheme='http://www.blogger.com/atom/ns#' term='ಆಹ್ಲಾದ'/><title type='text'>ಸುಗಂಧ ಸಮೀರ</title><content type='html'>ಸುಮ್ಮಗೆ ನೆಲದ ಮೇಲೆ&lt;br /&gt;ಕಾಯುತ್ತ ಕೂತವಳ&lt;br /&gt;ಎದಿರು&lt;br /&gt;ಸಗ್ಗದಿಂದಿಳಿದಂತೆ &lt;br /&gt;ನೀನು &lt;br /&gt;ಹಾಜರಿ ಹಾಕಲು -&lt;br /&gt;ಮೋಡವಾಗಿ ಬನಿಇಳಿವ &lt;br /&gt;ಮೊದಲೇ&lt;br /&gt;ಈ ಹನಿ&lt;br /&gt;ಶರಧಿಯೊಳಗೆ ತಲ್ಲಣಿಸಿ&lt;br /&gt;ಆವಿಯಾಗಿತ್ತೆಂಬ ಅರಿವು.&lt;br /&gt;ಎಳೆಯ ಕಾಲದಿ ಬಿತ್ತಿದ&lt;br /&gt;ಮೊಳಕೆಮೂಡದ ಬೀಜ&lt;br /&gt;ಏರುಬದುಕಿನ ಬಿರುಹಾದಿಯಲಿ&lt;br /&gt;ನೆರಳಿಗೆ ಹೊರಳಿದರೆ ತಂಗಾಳಿ&lt;br /&gt;ಸೂಸುವ ಎಲೆಮರ,&lt;br /&gt;ನೆನಪ ಗಂಧ ತೇಯುವ&lt;br /&gt;ಕಲ್ಲು ಮನದ ಸುತ್ತ ಸುಳಿವ&lt;br /&gt;ಸುಗಂಧಿತ ಸಮೀರ.&lt;br /&gt;ನೀನು ಮೊನ್ನೆಯ ನಿಜ.&lt;br /&gt;ಇವತ್ತೂ ನಿಜವೇ.&lt;br /&gt;ಕಳೆದ ಕಾಲದ ಕನ್ನಡಿಯಲಿ&lt;br /&gt;ನಿತ್ಯ ನೂತನ&lt;br /&gt;ಮಂದಹಾಸವರಳಿಸುವ&lt;br /&gt;ಮುಟ್ಟಲಾಗದ ನಿಜ.&lt;br /&gt;ನಿಲುಕಲಾರದ ಅಳುಕಲ್ಲು&lt;br /&gt;ಸವರಿ ಸಂತೈಸಿಕೊಳ್ಳುವೆ&lt;br /&gt;ಕವಿತೆ ಬರೆವ ಲಹರಿ&lt;br /&gt;ಅಲ್ಲು ಇಲ್ಲು ಎಲ್ಲೂ.&lt;br /&gt;ಪೋಣಿಸಿದ ಅರಳು ಮೊಗ್ಗು&lt;br /&gt;ಆಹ್ಲಾದ&lt;br /&gt;ಕನಸು ಮನಸು&lt;br /&gt;ನನಸಲ್ಲೂ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-425719653134263391?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/425719653134263391/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=425719653134263391' title='4 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/425719653134263391'/><link rel='self' type='application/atom+xml' href='http://www.blogger.com/feeds/4515791944382207090/posts/default/425719653134263391'/><link rel='alternate' type='text/html' href='http://nenapu-nevarike.blogspot.com/2011/09/blog-post.html' title='ಸುಗಂಧ ಸಮೀರ'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-4515791944382207090.post-1892167345122131148</id><published>2011-08-21T23:33:00.000-07:00</published><updated>2011-08-21T23:37:05.320-07:00</updated><category scheme='http://www.blogger.com/atom/ns#' term='ಅದೇ ನಾನು..'/><title type='text'>ಸೋಜಿಗ!</title><content type='html'>ಮೇಲ್ಮುಖ ಹರಿಯುವ&lt;br /&gt;ಕಾರಂಜಿ ನೀರಿನ&lt;br /&gt;ತುದಿಯಲೊಂದು ಪುಟ್ಟ ಗೋಲ&lt;br /&gt;ಹರಿವ ನೀರಿನ ಬಲವೇ ಬಲ&lt;br /&gt;ಅತ್ತಿತ್ತ ಜಗ್ಗದ ಗೋಲ&lt;br /&gt;ನೋಡಿ ಹಿರಿಯರಿಗೂ ಎಳೆಯರಿಗೂ ಸೋಜಿಗ&lt;br /&gt;ನೀರ್ಬಲದ ಗೋಲ&lt;br /&gt;ನಡು ದಾರಿಯಲ್ಲಿ&lt;br /&gt;ನೆನಪಾಗುವಾಗ&lt;br /&gt;ಮನದಲ್ಲೊಂದು ಭಯದ ಸೆಳೆ&lt;br /&gt;&lt;br /&gt;&lt;div&gt;ಹೆದರಿ,ಬೆವೆತ ಮಸ್ತಿಷ್ಕದಲ್ಲಿ&lt;/div&gt;ನಿಜದ ಅರಿವು ಸಟ್ಟನೆ ಹೊಳೆ&lt;br /&gt;ಹೊಳೆದು..&lt;br /&gt;ನೀರು ನಿಂತ ಮರುಘಳಿಗೆಯಲ್ಲಿ&lt;br /&gt;ಕೆಳಗುರುಳುವ ಗೋಲ!&lt;br /&gt;ಈಗಿತ್ತು ಈಗಿಲ್ಲ!&lt;br /&gt;ಬದುಕು ಕಡೆಗೂ&lt;br /&gt;ಹಳೆಯ ಹಿರಿಯರ ಮಂತ್ರಶ್ಲೋಕಗಳ&lt;br /&gt;ನೀರಮೇಲಣ ಗುಳ್ಳೆಗಳ&lt;br /&gt;ಭಾಷ್ಯವೇ!&lt;br /&gt;ನೀನು ಯಾವಾಗ&lt;br /&gt;ಹರಿದು ಹೋದೆ?&lt;br /&gt;ನಾನು ಯಾವಾಗ ಬಿದ್ದೆ?&lt;br /&gt;ಸೋಜಿಗಕ್ಕೇ ಅಚ್ಚರಿ.&lt;br /&gt;ಸ್ವಮರುಕದ ಎಣ್ಣೆಯಲಿ&lt;br /&gt;ಬಿದ್ದ ನೋವಿಗೆ ಮಾಲೀಷು,&lt;br /&gt;ಪುಕ್ಕಟೆ ಮಾಲೀಷು.&lt;br /&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-1892167345122131148?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/1892167345122131148/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=1892167345122131148' title='6 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/1892167345122131148'/><link rel='self' type='application/atom+xml' href='http://www.blogger.com/feeds/4515791944382207090/posts/default/1892167345122131148'/><link rel='alternate' type='text/html' href='http://nenapu-nevarike.blogspot.com/2011/08/blog-post_21.html' title='ಸೋಜಿಗ!'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-4515791944382207090.post-5719151026471976538</id><published>2011-08-08T04:04:00.000-07:00</published><updated>2011-08-09T02:24:32.764-07:00</updated><category scheme='http://www.blogger.com/atom/ns#' term='ಹೂಕಣಿವೆ'/><category scheme='http://www.blogger.com/atom/ns#' term='ನಿರಾಕರಣ'/><title type='text'>ಹೂಕಣಿವೆಯ ಹಾದಿ..</title><content type='html'>&lt;div&gt;&lt;br /&gt;&lt;div&gt;&lt;a href="http://4.bp.blogspot.com/-VJWZJnaTfYI/TkD7iTmI3EI/AAAAAAAABhg/hhyg39J2i9I/s1600/valley.jpg"&gt;&lt;img id="BLOGGER_PHOTO_ID_5638783300262222914" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 266px; TEXT-ALIGN: left" alt="" src="http://4.bp.blogspot.com/-VJWZJnaTfYI/TkD7iTmI3EI/AAAAAAAABhg/hhyg39J2i9I/s400/valley.jpg" border="2" /&gt;&lt;/a&gt;ನಿರಾಕರಣದ&lt;br /&gt;ಚಂದ&lt;br /&gt;ಬೆಟ್ಟ ಬಯಲು ನದಿ ಕಂದರಗಳಲಿ&lt;br /&gt;ಹೊರಳುತ್ತಿದ್ದರೆ&lt;br /&gt;ಊರ ಜಾತ್ರೆಯ ಗದ್ದಲಕೆ&lt;br /&gt;ಹೊಂದಿಕೊಂಡ ನನ್ನ ಕಂಗಳಿಗೆ&lt;br /&gt;ಬೆರಗಿನ ಪೊರೆ,&lt;br /&gt;ಅಂಚಲಿ ಹೊಳೆದವು,&lt;br /&gt;ಕಂಬನಿ ಜೋಡಿ&lt;br /&gt;-&lt;br /&gt;ನೋಡದೆ ಉಳಿದೆನೇ ಇಷ್ಟುದಿನ&lt;br /&gt;ನೋಡಲಾಯಿತಲ್ಲಾ ಈಗಾದರೂ, ಇಷ್ಟಾದರೂ&lt;br /&gt;-&lt;br /&gt;ಬಾನೆತ್ತರಕೆ ಚಿಮ್ಮುವ&lt;br /&gt;ಭುವಿಯ ಬಯಕೆ&lt;br /&gt;ಒತ್ತರಿಸಿ ಖಂಡಾಂತರಗೊಂಡ&lt;br /&gt;ತುಂಡುಗಳೂ ಅಖಂಡವೆನಿಸುವ&lt;br /&gt;ವೈರುಧ್ಯ&lt;br /&gt;ಎಲ್ಲ ಮೀರಬಲ್ಲೆ ಎನ್ನುವ&lt;br /&gt;ನನ್ನ ಒಳಗ ಹಣಿಯುವ&lt;br /&gt;ಮಣಿಸಿಯೇ ತೀರುವ&lt;br /&gt;ನಿಡುದಾರಿ,&lt;br /&gt;ಸೋತು ಕಾಲ್ ಚೆಲ್ಲಿದೊಡನೆ&lt;br /&gt;ನೇವರಿಸುವ ಕುಳಿರು&lt;br /&gt;ಅಲ್ಲ&lt;br /&gt;ಇದನೆಲ್ಲ ಮಾತಿಗಿಡುವ&lt;br /&gt;ನನ್ನ ಹಟವೇ&lt;br /&gt;ಅಲ್ಲಿ ಕುಸಿದು ಕೂತಾಗ ನೀನೆಲ್ಲಿದ್ದೆ?&lt;br /&gt;ಇರಲಿ ಬಿಡು&lt;br /&gt;ಒಣಪೊಗರಿಗೆ ಈಗ ನೆಗಡಿಯಾಗಿದೆ,&lt;br /&gt;ಏನಾದರಾಗಲಿ,&lt;br /&gt;ಹೂಕಣಿವೆಯ ಹಂಬಲು ಕೊಂಚ ಹರಿದಿದೆ,&lt;br /&gt;ಅರಳುಕಣಿವೆಯ ನೋಡಿ ತಣಿದಿದೆ.&lt;br /&gt;ಲಕ್ಷ ಪಯಣಿಗರಲ್ಲಿ ಗುರಿ ಸೇರುವವರು&lt;br /&gt;ಒಬ್ಬಿಬ್ಬರಂತೆ,&lt;br /&gt;ನನ್ನದು ಪಯಣದ್ದೇ ಭಾಗ್ಯ.&lt;br /&gt;ಗುರಿ ಯಾರಿಗೆ ಬೇಕು&lt;br /&gt;ಪಯಣ ಮುಗಿಯದೆ ಇರಬೇಕು.&lt;img id="BLOGGER_PHOTO_ID_5638783757542114306" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 266px; TEXT-ALIGN: left" alt="" src="http://4.bp.blogspot.com/-9OY77WEwMww/TkD787GKRAI/AAAAAAAABh4/2tUcW1DFgYI/s400/valley2.jpg" border="2" /&gt;&lt;/div&gt;&lt;br /&gt;&lt;div&gt;ನಿರಾಕರಣವ ಧೇನಿಸಿ&lt;br /&gt;ಒಪ್ಪಿಗೆಗೆ ಹಟವಿಡಿಯುವ ನಾ ಮಳ್ಳಲ್ಲವೇ?&lt;br /&gt;ಸಾಲು ಸಾಲು ಅಚಲ&lt;br /&gt;ಸಾರಿ ಸಾರಿ ತಿಳಿ ಹೇಳಿಯೂ&lt;br /&gt;ಕುಗ್ಗುವ ಕುದಿಯುವ ಈ ಬಗೆಗೆ ಮದ್ದಿಲ್ಲವೇ?&lt;br /&gt;ಎತ್ತರದಿ ಮುಗಿಲು ಮುದ್ದಿಸಿ&lt;br /&gt;ಆಳದಿ ಹೊನಲು ರಮಿಸುವ&lt;br /&gt;ಈ ಬದುಕಿಗೆ ಇದೇ ಒಂದು&lt;br /&gt;ಬರೆದಿಡದ ಭಾಷ್ಯವೇ?!&lt;br /&gt;ಎಲ್ಲ ಚಂದಗಳ ನಿವಾಳಿಸಿ ಒಗೆಯಲು&lt;br /&gt;ಕಿಡಿ ಇಲ್ಲ ಇಲ್ಲಿ,&lt;br /&gt;ಭಾವಬಯಕೆಗಳ ಮೇರುತುದಿಯಲಿ&lt;br /&gt;ಎಲ್ಲ ಮೀರಿದ, ತೀರಿದ ಹಿಮತೃಪ್ತಿ!&lt;br /&gt;ಗಮ್ಯಕ್ಕಿಂತ ದಾರಿಯೇ ಸೊಗಸು&lt;br /&gt;ಎಂಬ ಲೌಕಿಕವೆ ಲೇಸು.&lt;br /&gt;&lt;/div&gt;&lt;br /&gt;&lt;div&gt;(ಈ ಅಲ್ಪಳ ಬಯಕೆ ತೀರಿಸಿದ ಸಮಸ್ತ ಆತ್ಮೀಯರಿಗೆ, ಸೋಕಿಸಿಕೊಂಡ ಭೂರಮೆಗೆ, ನಿರುಕಿಸಿ ನಕ್ಕ ಬಾನಿಗೆ, ತಂಪಗೆ ಹರಿದ ನೀರಿಗೆ, ಕಂಪಲಿ ಮುಳುಗಿಸಿದ ಕಣಿವೆಗೆ, ಅತ್ತೂ ಕರೆದೂ ಜೊತೆಗೂಡಿದ ಸೃಷ್ಟಿಗೆ, ಜತೆ ಬಂದ ಬಿದಿಗೆಯ ಬಿಂಬಕ್ಕೆ&lt;br /&gt;ಮತ್ತೆ ಮತ್ತೆ ಶರಣು. )&lt;/div&gt;&lt;img id="BLOGGER_PHOTO_ID_5638783303721837442" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 340px; TEXT-ALIGN: left" alt="" src="http://3.bp.blogspot.com/-cWy8xhEjFt0/TkD7ige-Y4I/AAAAAAAABho/I2s-mUFGyU8/s400/valley1.jpg" border="2" /&gt;&lt;/div&gt;&lt;br /&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-5719151026471976538?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/5719151026471976538/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=5719151026471976538' title='2 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/5719151026471976538'/><link rel='self' type='application/atom+xml' href='http://www.blogger.com/feeds/4515791944382207090/posts/default/5719151026471976538'/><link rel='alternate' type='text/html' href='http://nenapu-nevarike.blogspot.com/2011/08/blog-post.html' title='ಹೂಕಣಿವೆಯ ಹಾದಿ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-VJWZJnaTfYI/TkD7iTmI3EI/AAAAAAAABhg/hhyg39J2i9I/s72-c/valley.jpg' height='72' width='72'/><thr:total>2</thr:total></entry><entry><id>tag:blogger.com,1999:blog-4515791944382207090.post-4087643184058281736</id><published>2011-07-05T06:06:00.000-07:00</published><updated>2011-07-05T06:11:03.494-07:00</updated><category scheme='http://www.blogger.com/atom/ns#' term='ಬಾಲ್ಯವೆಂಬ ಮಾಯಾಲೋಕ ಮತ್ತು ನೀನು ಬಿಡಿಸಿಕೊಡುವ ಮಾಯಾಚಾಪೆ'/><title type='text'>ಮಾಯಾಲೋಕ</title><content type='html'>ಬಾಲ್ಯವೆಂಬ ಮಾಯಾಲೋಕ ಮತ್ತು ನೀನು ಬಿಡಿಸಿಕೊಡುವ ಮಾಯಾಚಾಪೆ ಆಹಾ... ಥ್ಯಾಂಕ್ಸ್ ಅಂದ್ರೆ ಬಯ್ತೀಯ ನೀನು, ಅದಕ್ಕೆ ಇಡೀ ಕವಿತೆಯನ್ನ ಹೂವಪ್ಪುಗೆಯಲ್ಲಿ ನಿನಗರ್ಪಿಸುತ್ತಾ...&lt;br /&gt;&lt;span style="font-size:180%;color:#3333ff;"&gt;&lt;strong&gt;{ &lt;/strong&gt;&lt;/span&gt;&lt;span style="color:#3366ff;"&gt;ನೀನು ಚಾಟಿಸಿದಾಗೆಲ್ಲ&lt;br /&gt;ಇವತ್ತಿನ ನಾನು ಅಳಿದು&lt;br /&gt;ಪಂಚೇಂದ್ರಿಯಗಳಲ್ಲಿ&lt;br /&gt;ಹಳದಿಬೂದುಬಣ್ಣದ ಗೋಡೆ ನಡುವಿನ&lt;br /&gt;ಕೋಣೆ, ನೆಲಬೆಂಚುಗಳು,&lt;br /&gt;ಗುಸುಗುಸು ಮಾತು&lt;br /&gt;ಕಪ್ಪು ಬೋರ್ಡಿನ ಮೇಲೆ ಬಿಳಿ ಬಿಳಿ&lt;br /&gt;ಅಕ್ಷರ ದುಂಡಗೆ ಬರೆಯುತ್ತಿರುವ ಅನಸೂಯಮ್ಮ ಟೀಚರು&lt;br /&gt;ಅಲ್ಲಲ್ಲಿ ಯಾರು ಮೊದಲು ಬರೆದು ಮುಗಿಸುವರೆಂಬ&lt;br /&gt;ಛಲದ ಕಣ್ಣಾಟ,&lt;br /&gt;ಹೊರಗೆ ಅಂಗಳದಲ್ಲಿ&lt;br /&gt;ನೇತುಬಿಟ್ಟ ರೈಲ್ವೆ ಕಂಬಿಯ ಬೆಲ್ಲಿನ ರಿಂಗಣಕ್ಕೆ&lt;br /&gt;ಕಾದ ಕಿವಿಗಳು&lt;br /&gt;ಇನ್ನೇನು ಆಟದ ಬೆಲ್ಲು ಹೊಡಿಯಬೇಕು&lt;br /&gt;ಅಷ್ಟರಲ್ಲಿ ಸುರಿದ ಮಳೆಗೆ&lt;br /&gt;ಮತ್ತೆ ಕೋಣೆಯಲ್ಲೆ ಕೂಡಿಸಿ&lt;br /&gt;ಹಾಡು ಕತೆ ಹೇಳಿಸುತ್ತಿರುವ ರಮಾಮಣಿ ಟೀಚರು&lt;br /&gt;ಕೈಕಟ್ಟಿ ಎಲ್ಲರ ಮುಂದೆ&lt;br /&gt;ನಿಂತು ಬಿಡಿಸುವೆ ನಾನು&lt;br /&gt;ನೀವೆಲ್ಲ ಹತ್ತಿ ಕೂರುವುದಕ್ಕೇ ಕಾದ&lt;br /&gt;ಮಾಯಾಚಾಪೆಯನ್ನು&lt;br /&gt;ಇಂದು ಹೋಗೋಣ ರಷ್ಯಕ್ಕೆ&lt;br /&gt;ನಾಳೆ ಚಿತ್ರಕೂಟಕ್ಕೆ&lt;br /&gt;ನಾಡಿದ್ದು ಮಣ್ಣಿನಮನೆಗೆ&lt;br /&gt;ಯಾನ ಮುಗಿದಿದೆ&lt;br /&gt;ಬೆಲ್ಲು ಹೊಡೆದಿದೆ&lt;br /&gt;ಮಳೆ ನಿಂತಿದೆ&lt;br /&gt;ಶಾಲೆ ಮುಗಿದಿದೆ&lt;br /&gt;ಈಗ ಮನೆಗೋಡುವ ಸಮಯ&lt;br /&gt;ಹಾರಬಹುದು ಮಳೆನೀರಿನ ಹೊಂಡ&lt;br /&gt;ಕೆಸರು ಎರಚಿದರು ಪರವಾಗಿಲ್ಲ&lt;br /&gt;ಶಾಲೆ ಮುಗಿಯಿತಲ್ಲ&lt;br /&gt;ನಾಳೆಗೆ ಬಣ್ಣದ ಬಟ್ಟೆ&lt;br /&gt;ಆಹ್ ಎಷ್ಟು ಜೋರಾದ ಹಾರ್ನ್&lt;br /&gt;ಅಯ್ಯೋ ನನ್ನ ಬಾಲ್ಯವಳಿಯಿತು&lt;br /&gt;ಇಲ್ಲಿದೀನಿ ಗಣಕಯಂತ್ರದ ಮುಂದೆ&lt;br /&gt;ನಿನ್ನ ನೆಟ್ಟು ಕಟ್ಟಾಗಿ&lt;br /&gt;ಚಾಟು ಆಫಾಗಿ&lt;br /&gt;ಮತ್ತಿಲ್ಲೆ ನಾನು&lt;br /&gt;ಹುಶಾರಾಗಿ&lt;br /&gt;ಇರಬೇಕಾದವಳು,&lt;br /&gt;ಯಾರೆಂದರೆ ಅವರೊಡನೆ&lt;br /&gt;ಏನೆಂದರೆ ಅದು ಮಾತಾಡದೆ&lt;br /&gt;ನಗುವನ್ನು ಅಳೆದು ತೂಗಿ ಸೂಸಬೇಕಿರುವವಳು.&lt;br /&gt;ಮತ್ತೆ ನಾಳೆ ಬಾ ನೀನು&lt;br /&gt;ಬೇಗ.&lt;br /&gt;ಆಫ್ ಆಗುವ ಮುನ್ನವೆ ಹೇಳಿಬಿಡು&lt;br /&gt;ನಾನು ಚಾಪೆಯಿಂದಿಳಿಯಕ್ಕೆ ತಯಾರಿರುತ್ತೇನೆ&lt;br /&gt;ಯಾಕೆ ಸುಮ್ಮನೆ ಕ್ರಾಶ್ ಲ್ಯಾಂಡಿಂಗು??&lt;/span&gt;&lt;strong&gt;&lt;span style="color:#3333ff;"&gt; &lt;span style="font-size:180%;"&gt;}&lt;/span&gt;&lt;/span&gt;&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-4087643184058281736?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/4087643184058281736/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=4087643184058281736' title='6 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/4087643184058281736'/><link rel='self' type='application/atom+xml' href='http://www.blogger.com/feeds/4515791944382207090/posts/default/4087643184058281736'/><link rel='alternate' type='text/html' href='http://nenapu-nevarike.blogspot.com/2011/07/blog-post.html' title='ಮಾಯಾಲೋಕ'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-4515791944382207090.post-1115445355227250694</id><published>2011-06-22T01:19:00.000-07:00</published><updated>2011-06-22T01:27:11.961-07:00</updated><category scheme='http://www.blogger.com/atom/ns#' term='ಹಂಬಲ'/><category scheme='http://www.blogger.com/atom/ns#' term='ತಪನೆ'/><title type='text'>ಹೂಕಣಿವೆಯ ಹಂಬಲು</title><content type='html'>&lt;span style="color:#000099;"&gt;ಇಲ್ಲೆ ಗಣಕದ ಕಿಂಡಿಯಲ್ಲಿ&lt;br /&gt;ಇಣುಕಿದರೆ&lt;br /&gt;ಮಳೆಬಿಲ್ಲಿನ ಬಣ್ಣಗಳ ಹಾಯಿಸಿ&lt;br /&gt;ನಗುವ&lt;br /&gt;ಹೂಕಣಿವೆಯೇ,&lt;br /&gt;ಇದೆಯೆ ನನಗೆ&lt;br /&gt;ನಿನ್ನ ಒಡಲಲಿ ಹರಿದಾಡುವ ಭಾಗ್ಯ?&lt;br /&gt;&lt;/span&gt;&lt;br /&gt;&lt;span style="color:#000099;"&gt;ಬಿಳಿಬೆಟ್ಟಗಳ ತಪ್ಪಲಲಿ&lt;br /&gt;ದೀರ್ಘವಾಗಿ ಸುಯ್ಯುತಿರುವ&lt;br /&gt;ಮರಗಳೆ ನೀವು ಕಾದಿರುವುದಾರನ್ನ?&lt;br /&gt;ಗಿರಿಯ ಸಂದುಗಳಲಿ ತೂರಿ&lt;br /&gt;ಹರಿವ ದೇವನದಿಗಳೆ&lt;br /&gt;ನೀವು ಕರೆಯುವುದು ಯಾರನ್ನ?&lt;br /&gt;ಸಂಗಮಿಸಿ ಹರಿವ ನದಿಗಳು&lt;br /&gt;ಸೂಚಿಸುವುದೇನನ್ನ?&lt;br /&gt;ದೂರಹಾದಿಯ ಪಯಣದ&lt;br /&gt;ರೋಚಕತೆಯೇ ನೀನು&lt;br /&gt;ಬಳಸಿರುವೆಯೇಕೆ ಹೀಗೆ ನನ್ನ?&lt;br /&gt;ಲಕ್ಷಗಳಲ್ಲಿಹುದು ಸಂಖ್ಯೆ&lt;br /&gt;ನಿನ್ನ ಮಡಿಲಲಿ ಸಾಗಿದ ಪಯಣಿಗರದು&lt;br /&gt;ಮುಟ್ಟಿ ಮೀರಿದವರಾರು ಗುರಿಯ?&lt;/span&gt;&lt;br /&gt;&lt;br /&gt;&lt;span style="color:#000099;"&gt;ಫ್ರಾಂಕ್ ಸ್ಮಿಥ್ ಮಹಾಶಯ&lt;br /&gt;ಹೆಸರಿಡುವ ಮೊದಲೇ&lt;br /&gt;ನೀನಲ್ಲಿದ್ದೆ.&lt;br /&gt;ಇಂದಿಗೂ ಇರುವೆ,&lt;br /&gt;ಋತುಮಾನದ ಜತೆಗೂಡಿದ&lt;br /&gt;ಭುವಿಯ ಅರಳುವಿಕೆಯ&lt;br /&gt;ಸಂಭ್ರಮಕ್ಕೆ ಸಾಕ್ಷಿಯಾಗಿ!&lt;br /&gt;ಕಾಲದೇಶಗಳ ಮೀರಿದಂತೆ,&lt;br /&gt;ರಾಜಕೀಯ ನುಸುಳದಂತೆ,&lt;br /&gt;ಸಣ್ಣತನವ ಅರೆಯುವಂತೆ.&lt;br /&gt;ಅಂದಿಗೂ ಇಂದಿಗೂ ಎಂದಿಗೂ!&lt;br /&gt;ನೋಡಲು ರಮ್ಯ,&lt;br /&gt;ಹೊಂದಲು ಅಗಮ್ಯ!&lt;/span&gt;&lt;br /&gt;&lt;br /&gt;&lt;span style="color:#000099;"&gt;ಇದೆಯೆ ನನಗೆ ನಿನ್ನ&lt;br /&gt;ಒಡಲಲಿ ಹರಿದಾಡುವ ಭಾಗ್ಯ?!&lt;br /&gt;ಕಾದಿರುವೆ-&lt;br /&gt;ಅದು-ಇದು ಎಲ್ಲದೂ&lt;br /&gt;ಒಂದೇ ಎನಿಸುವ ಬಿಳಿಬಿಳಿ ಅದ್ವೈತಕ್ಕಾಗಿ..!&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-1115445355227250694?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/1115445355227250694/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=1115445355227250694' title='5 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/1115445355227250694'/><link rel='self' type='application/atom+xml' href='http://www.blogger.com/feeds/4515791944382207090/posts/default/1115445355227250694'/><link rel='alternate' type='text/html' href='http://nenapu-nevarike.blogspot.com/2011/06/blog-post.html' title='ಹೂಕಣಿವೆಯ ಹಂಬಲು'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-4515791944382207090.post-6909573772547350550</id><published>2011-05-04T03:35:00.000-07:00</published><updated>2011-05-04T03:39:48.575-07:00</updated><category scheme='http://www.blogger.com/atom/ns#' term='hhhhhmmm'/><title type='text'>ಅಗಲ-ಆಳ</title><content type='html'>ಬಾಲ್ಯದ ಓದಿಗೆ ಹರವಿತ್ತು&lt;br /&gt;ಆಳವಿರಲಿಲ್ಲ&lt;br /&gt;ಅದಾಗ್ಯೂ&lt;br /&gt;ನೆನಪು ಕಂಡರಿಸಿದ ಚಿತ್ರಗಳು ಹಲವು&lt;br /&gt;ಆತು ಕೂತ ಸಾಲುಗಳೊ ಇನ್ನೂ ಹಲವು&lt;br /&gt;ಮಿಲನ ಮುಗಿಯಲಿ,&lt;br /&gt;ಆದರೇನು&lt;br /&gt;ಎದೆಗೂತ್ತಿ ಹಿಡಿ ನನ್ನ&lt;br /&gt;ರಾತ್ರಿಯ ನಶೆ ಕತ್ತಲಲ್ಲೆ ಕರಗಲಿ&lt;br /&gt;ಬೆಳಗಾದರೂ ನಿನ್ನ ಕೈ ನನ್ನ&lt;br /&gt;ಬರಿಮೈಯ ಬಳಸಿಯೇ ಇರಲಿ;&lt;br /&gt;ಅವತ್ತು ಓದಿದ ಇಂಗ್ಲಿಷಿನ ಸಾಲುಗಳು&lt;br /&gt;ಕನ್ನಡ ಮಣ್ಣಲ್ಲಿ ಮೊಳಕೆಯೊಡೆದ&lt;br /&gt;ಆಶೆಯ ಬಳ್ಳಿಗೆ&lt;br /&gt;ಇಂಬು ಕೊಟ್ಟ ಪರಿಗೆ ಏನ ಹೇಳಲಿ?!&lt;br /&gt;ಯೂರಿಪಿಡೀಸನ ಮೀಡಿಯಾ ಅಂದುಕೊಂಡದ್ದು ತುಂಬ ನಿಜ&lt;br /&gt;ಹೆಣ್ಣಿಗೆ - ಒಲವೇ ನನ್ನ ಬದುಕು&lt;br /&gt;ಗಂಡಿಗೆ - ಒಲವು ಬದುಕನ್ನ ತುಂಬಬೇಕು&lt;br /&gt;ಅದೇನೆ ಇರಲಿ&lt;br /&gt;ಕಲಿತ ಪಾಠಗಳ ಜಾಗ ಪುಸ್ತಕಗಳಲ್ಲಿ&lt;br /&gt;ಅಂತಾದರೆ&lt;br /&gt;ಸಮಯ ಕಳೆಯಲು ಓದಿದ ಸಾಲುಗಳಲ್ಲಿ&lt;br /&gt;ಅನಾವರಣಗೊಳ್ಳುತ್ತಿರುವುದೇನು!!&lt;br /&gt;ಯಾರೋ ಹೇಳಿದರು&lt;br /&gt;ಒಳ್ಳೆಯ ಪುಸ್ತಕ ನಿನಗೆ ಈ ಮುಂಚೆಯೆ ಗೊತ್ತಿದ್ದನ್ನೆ&lt;br /&gt;ಅರ್ಥ ಮಾಡಿಸುವ ಬಗೆ&lt;br /&gt;ನಕ್ಕಿದ್ದೆ ನಾನು ಎಂಥ ತಲೆಪ್ರತಿಷ್ಠೆ!&lt;br /&gt;ಅನಿಸುತ್ತಿದೆ ಈಗ -&lt;br /&gt;ಬರಿಮೈಯ ಬಳಸಲು&lt;br /&gt;ಅವನ ಕೈ ಸಾಲದಷ್ಟು ಅಗಲಕ್ಕೆ&lt;br /&gt;ನಾನು ಹರಡಿಕೊಂಡಿರುವಾಗ-&lt;br /&gt;ಬದುಕು ಒಂದು ಒಳ್ಳೆಯ ಪುಸ್ತಕದ ಹಾಗೆ&lt;br /&gt;ಎಂದೊ ಮನದೊಳು ಹೊಕ್ಕ ಹರವಿನ&lt;br /&gt;ಆಳವನ್ನು ಇಂದು ಅರಿತ ಹಾಗೆ!&lt;br /&gt;ಆಹ್ ಎನ್ನಿಸಿದ&lt;br /&gt;ಆಶೆ&lt;br /&gt;ನಿರಾಶೆಯ ದಿಬ್ಬ ಹತ್ತಿಳಿದರೂ&lt;br /&gt;ನಿರೀಕ್ಷೆಯ ಹೊಸ್ತಿಲಲ್ಲಿ ದೀಪ ಹಚ್ಚಿಟ್ಟು&lt;br /&gt;ಕಾಯುವ ಸೊಗಸೆ ಬೇರೆ!&lt;br /&gt;ಮುಂದಿನ ಇರುಳಿನ ಕತ್ತಲ&lt;br /&gt;ಸೊಗಯಿಸುವ ದೀಪ, ಜೊತೆಗೆ&lt;br /&gt;ದೀಪದುರಿಯ ಕಣ್ಣು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-6909573772547350550?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/6909573772547350550/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=6909573772547350550' title='8 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/6909573772547350550'/><link rel='self' type='application/atom+xml' href='http://www.blogger.com/feeds/4515791944382207090/posts/default/6909573772547350550'/><link rel='alternate' type='text/html' href='http://nenapu-nevarike.blogspot.com/2011/05/blog-post.html' title='ಅಗಲ-ಆಳ'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>8</thr:total></entry><entry><id>tag:blogger.com,1999:blog-4515791944382207090.post-6698353352829323548</id><published>2011-04-20T03:19:00.000-07:00</published><updated>2011-04-20T04:30:55.944-07:00</updated><category scheme='http://www.blogger.com/atom/ns#' term='ತೆರೆದ ಬಾಗಿಲು'/><title type='text'>ತೆರೆದ ಬಾಗಿಲು</title><content type='html'>&lt;p&gt;&lt;strong&gt;ಒಳಹೋಗುವುದೂ ಅಥವಾ ತಟ್ಟುತ್ತ ಕಾಯುತ್ತಿರುವುದೂ ನಮಗೇ ಬಿಟ್ಟಿದ್ದು!&lt;br /&gt;&lt;/strong&gt;ನನ್ನ ಬಹಳ ಹತ್ತಿರದ ಗೆಳೆಯನೊಬ್ಬ ಮೊನ್ನೆ ಮೊನ್ನೆ ಬೆಂಗಳೂರು ಬಿಟ್ಟು ಬೇರೆ ಊರಿಗೆ ನೆಲೆ ಹುಡುಕಿಕೊಂಡು ಹೋದ. ವಯಸ್ಸಿನಲ್ಲಿ ಸ್ವಲ್ಪ ದೊಡ್ಡವನೂ, ಹುಡುಗಾಟಿಕೆಯಲ್ಲಿ ಚಿಕ್ಕವನೂ, ಉತ್ಸಾಹದಲ್ಲಿ ಹಿಂದಿಕ್ಕಲಾಗದವನೂ ಆದ ಈ ಗೆಳೆಯ, ಇನ್ನೊಬ್ಬ ಗೆಳೆಯ, ನಾನು ಮತ್ತು ನನ್ನ ಸಂಗಾತಿ - ನಾವು ನಾಲ್ವರದ್ದೇ ಒಂದು ಪುಟ್ಟ ಗುಂಪು. ಮಹಾನಗರದ ತಿರುಗಣಿಯಲ್ಲಿ ನಾವೇ ಬೇಕಾಗಿ ಸಿಕ್ಕು ನುರಿಸಿಕೊಂಡು, ಸಾಕು ಸಾಕಾಗಿ ಅಲ್ಲಿ ಇಲ್ಲಿ ಆಗ ಈಗ ಒಂದೆರಡುಮೂರು ದಿನಗಳ ಮಟ್ಟಿಗೆ ಕೆಲವು ಸುತ್ತಾಟ ಮಾಡುವುದು ನಮ್ಮ ಜಾಯಮಾನ. ಇದಲ್ಲದೆ ಪುಸ್ತಕ, ಸಮಾಚಾರ, ಹರಟೆ, ಪ್ರಕೃತಿ, ಹಕ್ಕಿಗಳು, ಮಳೆ,ಕಾಡು ಇವೆಲ್ಲ ನಮ್ಮ ಸಮಾನ ಆಸಕ್ತಿಯ ವಿಷಯಗಳು. ಎಲ್ಲರೂ ಬೇರೆ ಬೇರೆ ಬಡಾವಣೆಗಳಲ್ಲಿ ಗೂಡು ಕಟ್ಟಿಕೊಂಡವರು. ನೆಟ್ಟು,ಟಾಕು,ಫೋನು,ಫ್ಲಿಕರ್ರು ಹೀಗೆ ದಿನದಿನದ ಹೆಚ್ಚಿನ ಮಾತುಕತೆ. ತಿಂಗಳಿಗೊಮ್ಮೆ ಒಂದು ಭಾನುವಾರ ಬೆಳಗಿನಿಂದ ಇಳಿಮಧ್ಯಾಹ್ನದವರೆಗೆ ನಮ್ಮನೆಯಲ್ಲಿ ಸೇರಿ ಮಾತು-ನಗು-ಹರಟೆ ಮತ್ತು ಎಲ್ಲಿಗಾದರೂ ಹೊರಡುವ ಪ್ಲಾನು. ಅಲ್ಲಲ್ಲಿ ಕಾಫಿ,ಟೀ,ಪಾನಕ,ಹಣ್ಣು. ಇತ್ಯಾದಿ.&lt;br /&gt;ಬೆಂಗಳೂರು ಬಿಡುವ ಬೇರೆ ಊರಲ್ಲಿ ನೆಲೆಸುವ ಗದ್ದೆಯೋ,,ತೋಟವೋ ಕೃಷಿ ಮಾಡುವ ಮಾತುಕತೆ ಮಾತ್ರ ಪ್ರತೀಸಲವೂ ನಡೆಯುತ್ತಿತ್ತು. ನೀನು ಮಾತನಾಡುವುದು ಸುಲಭ, ಹೇಳಿದಂತೆಲ್ಲ ಮಾಡಲಿಕ್ಕಾಗುವುದಿಲ್ಲ, ಇದು ಎಂತ ಈ ವಯಸ್ಸಲ್ಲಿ ಮಗಳ ಶಾಲೆ ಬಗ್ಗೆ ಆಲೋಚಿಸು ಮೊದಲು ಅಂತೆಲ್ಲ ಏನೇನೋ ಹೇಳಿ ನನ್ನ ತಲೆ ತಿನ್ನುವ ಈ ಗೆಳೆಯ ಇಂತಹದೆ ಒಂದು ಮಾತುಕತೆಯ ಮಧ್ಯದಲ್ಲಿ - ನಾನು ಕೆಲಸ ಬಿಡೋದೂಂತ ಮಾಡಿದ್ದೇನೆ. ಮುಂದಿನ ವರ್ಷದೊಳಗೆ ನಮ್ಮ ಜಾಗಕ್ಕೆ ಹತ್ತಿರವಾಗಿ ಮನೆ ಮಾಡಿ, ಕುಟುಂಬವನ್ನೂ ಕರೆದೊಯ್ಯುವ ಯೋಚನೆ ಇದೆ - ಅಂತ ಘೋಷಿಸಿಬಿಟ್ಟ. ನಾವು ಎಂದಿನಂತೆ ಭಾಳ ಸೀರಿಯಸ್ಸಾಗಿ ಆ ಬೆಳೆ ಬೆಳೆದರೆ ಒಳ್ಳೆಯದು ಈ ಬೆಳೆ ಬಗ್ಗೆ ಅಡಿಕೆಪತ್ರಿಕೆಯಲ್ಲಿ ಬಂದಿದೆ ಅಂತೆಲ್ಲ ವಿಶ್ಲೇಷಣೆ ಮಾಡುತ್ತ ಕೂತೆವು. &lt;/p&gt;&lt;br /&gt;&lt;p&gt;ಅದಾಗಿ ಒಂದ್ನಾಲ್ಕು ವಾರಕ್ಕೆ ಆಫೀಸಿನಲ್ಲಿದ್ದಾಗ ಫೋನ್ ಬಂತು.&lt;br /&gt;ಏನಮ್ಮಾ ಬಿಸೀನಾ?...&lt;br /&gt;ಇಲ್ಲ ಹೇಳಿ,,&lt;br /&gt;ಒಂದು ಮಜಾ ಗೊತ್ತ?ಆ ಬಡ್ಡೀಮಗ ನನ್ ಮ್ಯಾನೇಜರ ಮುಖ ನೋಡ್ಬೇಕಿತ್ತು ನೀನು..&lt;br /&gt;ಯಾಕೆ ಏನಾಯ್ತು?!..&lt;br /&gt;...ಅದೇ ಹಳೆ ಪುರಾಣ. ನೀನು ಈ ಪ್ರಾಜೆಕ್ಟ್ ತೆಕ್ಕೋ ಮುಂದಿನ ವರ್ಷ ಇಷ್ಟು ಕೆ.ಜಿ. ನಾಣ್ಯಗಳ ಹೆಚ್ಚುವರಿ ಸಂಬಳ ಕೊಡ್ತೀನಿ.. ನೀನಿಲ್ಲದೆ ನನಗೇನಿದೆ... ಅಪ್ರೈಸಲ್ ಮಣ್ಣು ಮಸಿ.. ಹೋಗಲೋ ಹೋಗ್ ಅಂತ ರಾಜಿನಾಮೆ ಬಿಸಾಕ್ಬಿಟ್ಟೆ. ಈ ಮ್ಯಾನೇಜರ್ ನನ್ ಮಕ್ಳಿಗೆಲ್ಲ ಹಂಗೇ ಮಾಡ್ಬೇಕು. ಬುರುಡೆಗೆ ಬಿಸಿನೀರು ಕಾಯ್ಸುದು ಅಂತಾರಲ್ಲ ಹಂಗೆ! ಅದು ಹಾಳಾಗ್ಲಿ ನಾನು ಫೋನ್ ಮಾಡಿದ್ದು ಅದಕ್ಕಲ್ಲ. ...&lt;br /&gt;ಮತ್ತೆ?&lt;br /&gt;ಅದೇ ನಮ್ ಜಾಗದಲ್ಲಿ ನೀರು ಚೆನ್ನಾಗಿದೆ. ಈಗಿನ್ನೂ ಮಳೆ ಕಚ್ಚಿಕೊಳ್ಳುತ್ತಿದೆ ಅದಕ್ಕೆ ಸುವರ್ಣಗೆಡ್ಡೆ ಹಾಕಿಬಿಡೋಣ ಅಂತಿದೀನಿ. ಈ ಬುಧವಾರ ಊರಿಗೆ ಹೋಗಲಿಕ್ಕುಂಟು ಬರ್ತೀಯಾ ನೀನು? ಅವನು ಎಂದಿನ ಹಾಗೆಯೇ ಬಿಸಿಯಲ್ಲದಿದ್ರೆ ಇಬ್ರೂ ಬನ್ರಲ್ಲ. ಹೇಗೂ ಅಲ್ಲೊಂದು ಶೆಡ್ ಉಂಟು. ಗಂಜಿ ಊಟಕ್ಕೆ ಕರೆಂಟಿನೊಲೆ ಉಂಟು..ರಾತ್ರಿ ಹೊರಗೆ ಬಯಲಲ್ಲಿ ನಕ್ಷತ್ರ ನೋಡಿಕೊಂಡು...&lt;br /&gt;ಯಾವ ಜಾಗ, ಏನ್ ಕತೆ?&lt;br /&gt;ಅರ್ರೇ ಯಾವಾಗ್ಲೂ ಮಾತಾಡ್ತ ಇದ್ವಲ್ಲ ಅದೇ. ಅಲ್ಲಿ ಹೋಗಿ ಕೃಷಿ ಮಾಡೋದು ಅಂತ ನಿರ್ಧಾರ ಮಾಡಿಯಾಯ್ತು ನಾನು. ಎಲ್ಲ ಮಾಡಿಯಾಯ್ತು. ವರ್ಚುಯಲ್ ಸಗಣಿ ಹೊತ್ತಿದ್ದಾಯ್ತು. ನಿಜವಾದ ಮಣ್ಣೂ ಹೊತ್ ಬಿಡೋಣ ಅಂತ. ಹ್ಯಾಗೆ?&lt;br /&gt;ಅಯ್ಯೋ ನಿಮ್ಮ. ಇರಿ ಸಂಜೆಗೆ ಸರಿಯಾಗಿ ಕೊರೆದುಕೊಂಡು ಮಾತಾಡೋಣ. ನಾನ್ ಕ್ಯಾಬ್ ಹತ್ತಿದ ಮೇಲೆ ಫೋನಿಸ್ತೀನಿ. ಅಂದು ಫೋನಿಟ್ಟೆ. ತಲೆ ಸಣ್ಣಗೆ ತಿರುಗುತ್ತಿತ್ತು.&lt;br /&gt;ಸಂಜೆಯ ಮಾತುಕತೆಯಲ್ಲಿ ಈ ಹೊಸನೆಲೆ ಕಂಡುಕೊಳ್ಳುವ ಅಂದಾಜು ಸಿಕ್ಕಿತು. ವಾವ್ ಅಂತ ಮನಸ್ಸು ಘೋಷಿಸಿಬಿಟ್ಟಿದ್ದರೂ ಅಷ್ಟು ಚಿಕ್ಕವಳಿದ್ದಾಗಿನಿಂದ ಪೋಷಿಸಿಕೊಂಡು ಬಂದ ತಲೆಒಳಗಿನದ್ದು ವಾಸ್ತವದ ಲೆಕ್ಕಾಚಾರ ಹಾಕಿ ತಳಮಳಗೊಳ್ಳುತ್ತಿತ್ತು. ಅದಕ್ಕೆಲ್ಲಾ ಇನ್ನೊಂದಿಷ್ಟು ಪ್ರಶ್ನೆ ಉತ್ತರ ನಡೆದವು.&lt;br /&gt;ಕೊನೆಯದಾಗಿ ನಿಕ್ಕಿ (ಖಚಿತ) ಯಾಗಿದ್ದೆಂದರೆ ಕೆಲವು ಹುಚ್ಚಿಗೆ ಮದ್ದಿಲ್ಲ. ಅದನ್ನು ಹುಚ್ಚಾಗಿ ಅನುಭವಿಸಿಯೇ ತೀರಿಸಿಕೊಳ್ಳಬೇಕು. ಮತ್ತು ಅಂಥವು ಸಿಕ್ಕಾಪಾಟ್ಟೆ ಥ್ರಿಲ್ಲಿಂಗ್ ಆಗಿರುತ್ತವೆ. ಆ ಥ್ರಿಲ್ಲಿನ ಮುಂದೆ ಅನುಭವಿಸಿದ ಅನುಭವಿಸಲೇಬೇಕಿರುವ ಕಷ್ಟ-ಕಿರಿಕಿರಿಗಳು ಹಿನ್ನೆಲೆಟ್ರಾಕಿನಲ್ಲಿರುತ್ತವೆ ಅಂತ.&lt;br /&gt;ಅವನ ಜಾಗದಲ್ಲಿರುವ ದಿಬ್ಬದ ಮೇಲೊಂದು ಮನೆ(ಅದಕ್ಕೆ ಫ್ಯಾಂಟಮ್ಮಿನ ಮನೆಯ ಹೆಸರು ವೃಕ್ಷ ಗೃಹ) ಹಿಂಬದಿಯಲ್ಲಿ ವಿಂಡ್ ಮಿಲ್ಲು, ಒಂದು ಜಟ್ಟಿ ನಾಯಿ.. ಕಡಿಮೆಯಿರುವುದು ಹೀರೋಕುದುರೆ ಅದರ ಬದಲು ಪಲ್ಸರಿದೆ! ಇದು ನಮ್ಮ ಮಾತುಕತೆಗಳ ಸ್ಯಾಂಪಲ್. ಏನು ಹಾಕಿ, ಹೇಗೆ ಬೆಳೆದು, ಯಾವ ರೀತಿಯಲ್ಲಿ ಮಾರಾಟ ಮಾಡ್ಬೇಕು ಅಂತ ಯೋಚನೆ ಮಾಡೋದು ಬಿಟ್ಟು, ಇಂತದೇ ಕಲ್ಪನೆಯ ಮಾಯಾಚಾಪೆಯಲ್ಲಿ ಕೂತು ಸುತ್ತುವ ಕೆಲಸ ನಮ್ಮದು. ಇದೆಲ್ಲ ಒಂದು ವರ್ಷದ ಹಿಂದಿನ ಮಾತು.ಮೊನ್ನೆ ಬೆಳಗ್ಗೆ ಆ ಗೆಳೆಯ,ಅವನ ಹೆಂಡತಿ, ಪುಟ್ಟ ಮಗಳು ಮತ್ತು ಅವರಮ್ಮನನ್ನು ಹೊಸ ಊರಿಗೆ ಹೊರಟ ಕಾರಿನಲ್ಲಿ ಹತ್ತಿಸಿ ಕೈಬೀಸಿ ಕಳಿಸಿಯಾಯ್ತು.&lt;br /&gt;ಮೊನ್ನೆ ಮೊನ್ನೆ ಅವನ ಹತ್ತಿರ ನಾನು ಊರಿಗೆ ಹೋಗುವ ಪ್ಲಾನು ಹೇಳಿ ಬಯ್ಯಿಸಿಕೊಂಡಿದ್ದೂ, ಅವನು ಹೋಗ್ತೀನಿ ಅಂದಾಗ ನಾನು ಉಚಾಯಿಸಿ ಮಾತನಾಡಿದ್ದೂ, ಅವನು ನಿಜ್ವಾಗ್ಲೂ ಕೆಲಸ ಬಿಟ್ಟಾಗ ಸಕ್ಕತ್ ಥ್ರಿಲ್ಲಾದರೂ ತುಂಬ ಹೆದರಿಕೆಯಾಗಿದ್ದೂ, ಆಮೇಲೆ ವಾರವಾರವೂ ಏನೇನು ಮಾಡುವುದೆಂದು ಹರಟಿದ್ದೂ, ಮುಂದಿನವಾರ ಹೊರಡುತ್ತೇನಮ್ಮಾ ಅಂತ ಅಂದಾಗ ಆ ದಿನ ಹತ್ತಿರವಾಗುವವರೆಗೂ ಅದರ ಗಂಭೀರತೆಯನ್ನೇ ಅರಿಯದೆ ಹೋಗಿದ್ದೂ ಎಲ್ಲವೂ ಅವನ ಮನೆಯ ಮುಂದೆ ಆಟೋ ಇಳಿಯುವಾಗ ಒಟ್ಟಿಗೆ ನೆನಪಾದವು. ಅವನು ಎಂದಿನ ಟ್ರೆಕ್ಕಿಂಗ್ ಹೊರಟ ಸರಾಗ ಹರಿವಿನಲ್ಲಿ ಹೊರಟಿದ್ದಾನೆ. ಒಳಗೆ ಆತಂಕದ ಸುಳಿಗಳಿರಬಹುದು. ಅವನ ಜೊತೆಗಾತಿ ಹೆಂಡತಿ ಸಂತೈಸುತ್ತಾಳೆ. ಮಗಳು ಅವನ ಕೆನ್ನೆಗಳಲ್ಲಿ ನಗು ಮೂಡಿಸುತ್ತಾಳೆ. ನಾವು ಗೆಳೆಯರು ಶುಭ ಆಶಯಗಳ ಕೊಡೆಬಿಚ್ಚಿ ಅವನ ಜೊತೆಗಿದ್ದೇವೆ.ಪಯಣಕ್ಕೆ ಶುಭಕೋರಲು ಬಂದಿದ್ದ ನನ್ನ ಇನ್ನೊಬ್ಬ ಗೆಳೆಯ ಹೇಳಿದ. ಏನೇ ಇದು, ಟಾರ್ಜಾನೇ ಹೊರಟು ಹೋದ ಮೇಲೆ ಇನ್ನು ನಾವು ಹ್ಯಾಗೆ ಸುತ್ತಾಟ ಮಾಡೋದು ಅಂತ. ಹೌದು ಅಂವ ಒಂದ್ರೀತಿ ಫ್ಯಾಂಟಮ್ಮು ಮತ್ತು ಟಾರ್ಜಾನಿನ ಕನ್ನಡರೂಪ. ನಾನು ಮಾತಿಗೆ ಸಲೀಸಾಗಿ ಹೇಳಿಬಿಟ್ಟೆ. ಅವನಿರುವ ಊರಿನ ಹತ್ತಿರವೇ ನಾವು ಸುತ್ತೋದು ಅಂತ. ಇದೆಲ್ಲ ಅಷ್ಟು ಸುಲಭಕ್ಕಲ್ಲ. ನಾವು ಯೋಚನೆಯಲ್ಲೇ ಪ್ರಪಂಚ ಸುತ್ತುವ ಮಂದಿ. ಹೆಜ್ಜೆ ಎತ್ತಿಡುವಾಗ ವಾಸ್ತವದ ನೋವುಗಳು ಮಗ್ಗಲು ಮುರಿಯುತ್ತವೆ."A dream is given to you only to make it come true" ಅಂತ ಒಂದು ಮಾತಿದೆ. ಅದು ಇವನ ಬದುಕಾಗಲಿ ಅಂತ ಹಾರೈಕೆ.&lt;br /&gt;&lt;br /&gt;ಪುಸ್ತಕ ಪ್ರೀತಿಯ ಈ ಗೆಳೆಯನಿಗೆ ಕೊಡಲಿಕ್ಕೆಂದು ಒಂದಿಷ್ಟು ಪುಸ್ತಕ ಕೊಳ್ಳಲು ಅಂಕಿತಕ್ಕೆ ಹೋಗಿದ್ದೆ. ಬೇಕಾದ ಪುಸ್ತಕ ಕೊಳ್ಳುವಷ್ಟರಲ್ಲಿ ಪ್ರಕಾಶ್ ಇದು ನೋಡಿ ನೀವಿನ್ನೂ ಓದಿರಲ್ಲ ಅಂತ ಕೊಟ್ಟರು. ತೇಜಸ್ವಿ ಹೆಸರಿನಲ್ಲಿ ತೀರ್ಥ, ಪ್ರಸಾದ ಕೊಟ್ಟಿದ್ದರೂ ತಗೊಳ್ಳುವ ನಾನು ಆ ಪುಸ್ತಕದ ಲೇಖಕಿಯ ಹೆಸರು ನೋಡಿಯೇ ಮರುಳಾಗಿಬಿಟ್ಟೆ. ಒಂದು ಗೆಳೆಯನಿಗೂ ಇನ್ನೊಂದು ನನಗೂ ಎತ್ತಿಟ್ಟಿಕೊಂಡುಬಿಟ್ಟೆ. ಅದು ನಮ್ಮ ಪ್ರೀತಿಯ ರಾಜೇಶ್ವರಿ ತೇಜಸ್ವಿಯವರು ಬರೆದ "ನನ್ನ ತೇಜಸ್ವಿ". ಸರಿಯಾಗಿ ಮಂಗಳವಾರ ರಾತ್ರಿಯಿಂದ ಓದಲು ತೊಡಗಿ, ಬುಧವಾರ, ಗುರುವಾರ ರಾತ್ರಿಗಳಲ್ಲಿ ಮುಂದುವರಿಸಿ ಮುಗಿಸಿಬಿಟ್ಟೆ. ಅದರಲ್ಲಿರುವ ತೇಜಸ್ವಿ ನಾನು ಅಂದುಕೊಂಡ ಹಾಗೇ ಇದ್ದರಲ್ಲಾ ಎಂಬ ಅಚ್ಚರಿಯೊಂದಿಗೆ, ಅವರ ಪ್ರೀತಿಯ ಸಂಗಾತಿ ರಾಜೇಶ್ ಮೇಲಿನ ಪ್ರೀತಿ ಮತ್ತು ಅಭಿಮಾನ ಸಿಕ್ಕಾಪಟ್ಟೆ ಜಾಸ್ತಿಯಾಗ್ಬಿಟ್ಟಿದೆ. ಅವರು ಹಾಗಿರಲು ಇವರು ಹೀಗಿರುವುದೇ ಕಾರಣ. ನನ್ನನ್ನು ಒಂದು ಜ್ವರದ ಹಾಗೆ ಈ ಪುಸ್ತಕ ಆವರಿಸಿಕೊಂಡುಬಿಟ್ಟಿತು. ಇದು ಅಭಿಮಾನವನ್ನು ಮೀರಿದ, ಕನ್ನಡದ ಓದುಪ್ರೀತಿಯ ಸೃಜನಶೀಲ ಮನಸ್ಸುಗಳೆಲ್ಲ ಓದಲೇಬೇಕಿರುವ ಪುಸ್ತಕ. ಓದುಪ್ರೀತಿಯವರು ಅಂತ ಯಾಕಂದೆ ಅಂದರೆ ಇದು ೫೦೦ಕ್ಕೂ ಹೆಚ್ಚಿನ ಪುಟಗಳಿರುವ ಮಹಾ ಓದು. ಆ ಚೈತನ್ಯಪೂರ್ಣ ಸಾಂಗತ್ಯವನ್ನು ವಿವರಿಸಲು ಇದು ಕಡಿಮೆಯೇ ಅನ್ನಿಸಿದರೂ, ಇನ್ನೂ ಹೆಚ್ಚು ಬರೆದು ವಾಚ್ಯವಾಗದೆ ಅವರ ಬದುಕಿನ ಸವಿಯನ್ನು ನಮ್ಮ ಮನದ ಭಿತ್ತಿಯಲ್ಲಿ ಕಲ್ಪಿಸಿಕೊಳ್ಳಲಿಕ್ಕೂ ಅವಕಾಶ ನೀಡಿದ್ದಾರೆ ಲೇಖಕಿ. A typical Tejaswi style! ಆ ಕೊನೆಯ ಸಿಟೌಟಿನ ಅಧ್ಯಾಯವೇ ಸಾಕು ಈ ಬರಹದ ರೂಹನ್ನ ಕಟ್ಟಿಕೊಡಲು. ಈ ಮಾತುಗಳೆಲ್ಲ ಯಾಕೆ. ಅವರ ಪುಸ್ತಕ ಓದಿ. ರಾಜೇಶ್ವರಿಯವರ ಮೊದಲಮಳೆಗೆ ಅರಳಿ ಸುಗಂಧಿಸುವ ಕಾಫಿಹೂಗಳಂತಹ ಬರಹಮಾಲೆಯನ್ನ ಓದಿಯೇ ಅನುಭವಿಸಬೇಕು.&lt;br /&gt;----------------------------------&lt;br /&gt;ಇದು ಬದುಕಿನ ತಿರುಳೋ ಅಥವಾ ಇದೇ ಬದುಕೋ ಗೊತ್ತಾಗದ ಅರೆ ಎಚ್ಚರದ ಕನಸು ಮುಗಿಯುವಷ್ಟರಲ್ಲಿ ಬದುಕು ಕೊನೆಯ ನಿಲ್ದಾಣಕ್ಕೆ ಬಂದಿರುತ್ತದೆ. ಇವತ್ತು ೩೩ ವರ್ಷ ಕಳೆದ ಬದುಕಿನ ತಿರುವಿನಲ್ಲಿ ನಿಂತು ಯೋಚಿಸುತ್ತೇನೆ. ಕಳೆದ ೩೩ ವರ್ಷಗಳಲ್ಲಿ ಬದುಕಿನ ಪಾತ್ರೆಗೆ ನಾನು ತುಂಬಿದ್ದೇನು? ಅದರಿಂದ ಹರಿಸಿದ್ದೇನು?ಅಥವಾ ಉಮರ ಹೇಳಿದಂತೆ ಬೋರಲು ಬಿದ್ದ ಬದುಕಿನ ಪಾತ್ರೆ ತುಂಬದೆ ಉಳಿದಿದೆ, ತುಳುಕುವುದಕ್ಕೇನಿದೆ? ಅಥವಾ ಈ ೩೩ಕ್ಕೆ ಎಲ್ಲ ಮುಗಿಯಿತು ಎಂಬಂತೆ ಕೂರಬೇಕೆಂದೆ ನನಗೆ ಈ ವಯಸ್ಸನ್ನು,ಆರೋಗ್ಯವನ್ನು, ಏನಾದರೂ ಮಾಡುವ ಚೈತನ್ಯವನ್ನು, ಮಾಡಬೇಕೆಂಬ ತುಡಿತವನ್ನು ನನ್ನನ್ನು ರೂಪಿಸಿದ ಸೃಷ್ಟಿ ದಯಪಾಲಿಸಿದೆಯೇ? ಅಥವಾ ಈ ತಪನೆಯೇ ಒಂತರ ಏನನ್ನೂ ಮಾಡಲು ಸಾಧ್ಯವಿರುವ ಎಲ್ಲಕ್ಕೂ ಒಡ್ಡಿನಿಂತ ಹೊಸ ಬಾಗಿಲೆ? ನಾನು ಹ್ಯಾಗೆ ಗ್ರಹಿಸಿದೆ ತೊಳಲಾಟವನ್ನ,ಸಂಕ್ರಮಣವನ್ನ ಅಂತ ಮುಂದೆ ಎಂದಾದರೂ ಹೇಳಿಯೇನು.&lt;br /&gt;-ಪ್ರೀತಿಯಿಂದ,ಸಿಂಧು&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-6698353352829323548?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/6698353352829323548/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=6698353352829323548' title='8 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/6698353352829323548'/><link rel='self' type='application/atom+xml' href='http://www.blogger.com/feeds/4515791944382207090/posts/default/6698353352829323548'/><link rel='alternate' type='text/html' href='http://nenapu-nevarike.blogspot.com/2011/04/blog-post_20.html' title='ತೆರೆದ ಬಾಗಿಲು'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>8</thr:total></entry><entry><id>tag:blogger.com,1999:blog-4515791944382207090.post-1738847805382045355</id><published>2011-04-19T04:45:00.000-07:00</published><updated>2011-04-19T04:46:06.388-07:00</updated><category scheme='http://www.blogger.com/atom/ns#' term='ಬಿಸಿಲು ಮಳೆ ಮಳೆಬಿಲ್ಲು'/><title type='text'>ಬಿಸಿಲು ಮಳೆ ಮಳೆಬಿಲ್ಲು</title><content type='html'>ಪುಟ್ಟ ಕಲ್ಲು&lt;br /&gt;ಕಪ್ಪೆ ಹಾರಿಸಿ ಎದ್ದ ಅಲೆಯಂದದಿ&lt;br /&gt;ನೆನಪ ಸುಗಂಧ&lt;br /&gt;ಪರಿಮಳಿಸಿ&lt;br /&gt;ಹೊರಗೆ ಕಾಫಿಗೆ ಬಂದು&lt;br /&gt;ನೋಡುತ್ತೇನೆ&lt;br /&gt;ಬಿಸಿಲು ತೂರಿ ಮಳೆ&lt;br /&gt;ಒಳಗೂ ಹೊರಗೂ&lt;br /&gt;ದೊಡ್ಡ ಕಟ್ಟಡದ ಛಾವಣಿ&lt;br /&gt;ಕೆಳಗೆ ಅಂದದ ಆವರಣ&lt;br /&gt;ಹೊರಗೆ ಧೂಳು ಹಬೆಯೆಬ್ಬಿಸುತ್ತಾ&lt;br /&gt;ಮಳೆ ನೀರ ಪೂರಣ&lt;br /&gt;ದಶಕಗಳ ನೆನಪು&lt;br /&gt;ಮಣ್ಣವಾಸನೆಯಲ್ಲಿ&lt;br /&gt;ಹಬ್ಬುತ್ತಾ&lt;br /&gt;ಮನಸು ಹಿತವಾದ ಕನಸ&lt;br /&gt;ಹೊಕ್ಕು&lt;br /&gt;ಪುಟ್ಟ ಕಲ್ಲು&lt;br /&gt;ಕಪ್ಪೆ ಹಾರಿಸಿ&lt;br /&gt;ಅಲೆ ಅಲೆ ಅಲೆ..&lt;br /&gt;ಚೈತನ್ಯನ ನೋಡುತಲೆ!&lt;br /&gt;ಸಾಗರ, ಕೆರೆ ಏರಿ, ಸೈಕಲ್ ಸವಾರಿ&lt;br /&gt;ಹೈಸ್ಕೂಲು, ಮಾಶ್ಟ್ರು, ಸಹಪಾಠ&lt;br /&gt;ಮಾತಿರದ ಕಾಲದ ಮೆಲಕು&lt;br /&gt;ಹಾಕುತ್ತಾ ಕಾಫಿ ಮುಗಿದ ಮೇಲು&lt;br /&gt;ಕೈಯಲ್ಲೆ ಇದೆ ಲೋಟ&lt;br /&gt;ಹೊಸ ಹೊಸ ನೋಟ!&lt;br /&gt;ಬಿಸಿಲು ಮಳೆ ಮಳೆಬಿಲ್ಲು&lt;br /&gt;ಬೆಚ್ಚಗಿನ ಒದ್ದೆ ಅಲ್ಲು ಇಲ್ಲು ಎಲ್ಲೆಲ್ಲು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-1738847805382045355?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/1738847805382045355/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=1738847805382045355' title='3 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/1738847805382045355'/><link rel='self' type='application/atom+xml' href='http://www.blogger.com/feeds/4515791944382207090/posts/default/1738847805382045355'/><link rel='alternate' type='text/html' href='http://nenapu-nevarike.blogspot.com/2011/04/blog-post.html' title='ಬಿಸಿಲು ಮಳೆ ಮಳೆಬಿಲ್ಲು'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-4515791944382207090.post-4901834433530950908</id><published>2011-02-15T02:24:00.000-08:00</published><updated>2011-02-15T02:27:19.877-08:00</updated><category scheme='http://www.blogger.com/atom/ns#' term='ಅಂಜಿಕಿನ್ಯಾತಕಯ್ಯಾ'/><title type='text'>ನೀ ಬಂದ ದಾರಿ</title><content type='html'>ನೀ ಬಂದ ದಾರಿಯಲಿ&lt;br /&gt;ಕಲ್ಲುಮುಳ್ಳು ಸಹಿತ ಕೆಂಪು ಮಣ್ಣು&lt;br /&gt;ಮುಂದಡಿಯಿಟ್ಟಲ್ಲಿ&lt;br /&gt;ಹಸಿರೆಲೆಗಳ ನಡುವೆ ಪುಟ್ಟಗೆ ಹಳದಿಯಾಗಿ&lt;br /&gt;ಅರಳಿದ ನೆಲದಾವರೆ,&lt;br /&gt;ಎಡವಿದ ಬೆರಳಿನ ನೆತ್ತರಿನ ಕಿರುಹನಿ&lt;br /&gt;ಕುಂಕುಮದಂತೆ ಹಳದಿಎಸಳ ಸೋಂಕಿ&lt;br /&gt;ಅವಡುಗಚ್ಚಿದ ಮುದ್ದುಬಾಯಿಗಳ&lt;br /&gt;ಕೊನೆಗೆ ಸುಕ್ಕು&lt;br /&gt;ಮಿನುಗು ಕಣ್ಣಂಚಲ್ಲಿ ಹೊಳೆದ ಹನಿಯಲ್ಲಿ&lt;br /&gt;ನೆತ್ತಿಯ ಮೇಲಿನ ಬಿಸಿಲ ಪ್ರತಿಫಲನ&lt;br /&gt;ಕನಸುಗಳೆಲ್ಲ ಹಾದಿಗೂಡಿ ಹೊರಟ&lt;br /&gt;ಪಯಣದಿ ಸಿದ್ದಿಸಿದ ಧನ್ಯತೆ ನೀನೇನಾ?!!&lt;br /&gt;ಬಿರುಬಿಸಿಲ ಬಯಲಲ್ಲಿ ಬೀಸಿದ ತಂಪು&lt;br /&gt;ತಣ್ಣೆಳಲ ನೆಲೆಯಲ್ಲಿ ಮಂಜಾಗುತ್ತ&lt;br /&gt;ಅಸಹನೆಯೆಬ್ಬಿಸುವುದೇಕೋ?&lt;br /&gt;ಬದಲಾವಣೆಯ ಬದುಕಿನ&lt;br /&gt;ನಾಗರಿಕತೆಯ ತೊಟ್ಟಿಲಿನ&lt;br /&gt;ಮಹಿಮೆ ಬಣ್ಣಿಸಲಸದಳ!&lt;br /&gt;ಸಾಕ್ಸು ಸುತ್ತುವರಿದು&lt;br /&gt;ಬಿಳುಪೇರಿದ ಪಾದಗಳ ಆವರಿಸಿದ&lt;br /&gt;ಬ್ರಾಂಡೆಡ್ ಶೂಗಳಲ್ಲಿ&lt;br /&gt;ಎಡವಿ ಬೆರಳೊಡೆಯುವ ಅವಕಾಶವಿಲ್ಲ!&lt;br /&gt;ಹೆಚ್ಚೆಂದರೆ&lt;br /&gt;ನುಣುಪು ಮಾರ್ಬಲಿನಲ್ಲಿ ಜಾರಿಬಿದ್ದು&lt;br /&gt;ಸ್ಪ್ರೈನ್ ಆಗಿ ಒಂದೆರಡು ವಾರ&lt;br /&gt;ಮನೆಯಿಂದ ಕೆಲಸ ಮಾಡಬಹುದು-&lt;br /&gt;ನನ್ನ ಆಹ್ ನಿನಗೆ ಏನೂ ಅನ್ನಿಸದ ಹಾಗೆ.&lt;br /&gt;ನೀ ಬಂದ ದಾರಿ ಅದೇ ಅಲ್ಲಿದೆ&lt;br /&gt;ಗಾಜುಗೋಡೆಗಳಾಚೆ.&lt;br /&gt;ಇಲ್ಲೆ ನಿಲ್ಲುವುದು ಅನುಕೂಲವೇನೋ ನಿಜ&lt;br /&gt;ಆದರೂ..&lt;br /&gt;ಹೋಗಲಿ ಬಿಡು..&lt;br /&gt;ನನ್ನ ಕಂಗಾಲುಗಣ್ಣಿಗೆ ಬೆಳಕ ಹರಿಸಿದ&lt;br /&gt;ಶುಕ್ರತಾರೆಯೇ&lt;br /&gt;ಈಗೇಕೆ ಹೆದರಿಕೆ?&lt;br /&gt;ಆ ಪುಟ್ಟ ಪಚ್ಚೆಮೊಳಕೆ&lt;br /&gt;ಅಷ್ಟು ಚೆಂದಕೆ ಹೊಳೆದಿದ್ದು&lt;br /&gt;ಏರುಹಾದಿಯ ಬೆಟ್ಟತುದಿಯ&lt;br /&gt;ಬಿರುಕು ಕಲ್ಲಿನ ನಡುವೆ&lt;br /&gt;ನಸುಕಿನ ಚಳಿಯ ಚದುರಿಸಿ&lt;br /&gt;ತೂರಿದ ಹೊನ್ನಬೆಳಕಲ್ಲಿ ಅಲ್ಲವೆ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-4901834433530950908?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/4901834433530950908/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=4901834433530950908' title='2 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/4901834433530950908'/><link rel='self' type='application/atom+xml' href='http://www.blogger.com/feeds/4515791944382207090/posts/default/4901834433530950908'/><link rel='alternate' type='text/html' href='http://nenapu-nevarike.blogspot.com/2011/02/blog-post.html' title='ನೀ ಬಂದ ದಾರಿ'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4515791944382207090.post-6917497829227403594</id><published>2011-01-19T02:43:00.000-08:00</published><updated>2011-01-19T20:39:00.984-08:00</updated><category scheme='http://www.blogger.com/atom/ns#' term='facebook'/><title type='text'>ಅಚಾನಕ್ ಖುಶಿ ಕೊಟ್ಟ ಫೇಸ್ಬುಕ್..!</title><content type='html'>&lt;p&gt;ಇದ್ದಕ್ಕಿದ್ದಂಗೆ ಒಂದಿನ&lt;/p&gt;&lt;p&gt;ಚಳಿಗಾಲದ ಮಧ್ಯಾಹ್ನ&lt;/p&gt;&lt;p&gt;ಕೀ ಚಿಟುಕಿಸಿ ಜಾಲಕಿಟಕಿ ತೆರೆದರೆ&lt;/p&gt;&lt;p&gt;ಅಲ್ಲಿತ್ತೊಂದು ಕೊಂಡಿ&lt;/p&gt;&lt;p&gt;ಕುತೂಹಲದಿಂದ ಹಿಂಬಾಲಿಸಿ ಹೊರಟರೆ&lt;/p&gt;&lt;p&gt;ಬಂದು ನಿಂತಿದ್ದು ಕೆರೆಶಾಲೆಯ ನೆನಪಿನಂಗಳದಲ್ಲಿ&lt;/p&gt;&lt;p&gt;ಜೊತೆಜೊತೆಗೇ ಬೆಂಚಲ್ಲಿ ಕೂತು&lt;/p&gt;&lt;p&gt;ಎಂದೂ ಮಾತನಾಡಿಸಿರದ&lt;/p&gt;&lt;p&gt;ಆಗ ಅಕಸ್ಮಾತ್ತಾಗಿ ಎದುರು ಸಿಕ್ಕರೆ ನಾಚಿ,ಬೆಚ್ಚಿ, ಇರುಸು ಮುರುಸಾಗಿ&lt;/p&gt;&lt;p&gt;ತಿರುಗಿ ಸಾಗಿದ್ದ ಇಬ್ಬರೂ&lt;/p&gt;&lt;p&gt;ಇವತ್ತು &lt;/p&gt;&lt;p&gt;ಕಳೆದ ಗಂಟನ್ನು ಜೋಪಾನವಾಗಿ&lt;/p&gt;&lt;p&gt;ಎತ್ತಿಟ್ಟಂತೆ, &lt;/p&gt;&lt;p&gt;ಮರೆಯದಂತೆ, ಆಗೀಗ ಸಿಗುವಂತೆ&lt;/p&gt;&lt;p&gt;ಕಳೆದ ಕಾಲದ ಅಸಮಾನತೆಯನ್ನೆಲ್ಲ&lt;/p&gt;&lt;p&gt;ಸಪಾಟಾಗಿಸಿ ಒಬ್ಬರಿಗಿನ್ನೊಬ್ಬರ ಸಿಗಿಸಿ&lt;/p&gt;&lt;p&gt;ಹಳೆ ನೆನಪಿನ ಕೆರೆಯ ಅರಳು ಮೊಗ್ಗುಗಳನ್ನ&lt;/p&gt;&lt;p&gt;ಹರವಿ ಕೂರಿಸಿರುವುದು&lt;/p&gt;&lt;p&gt;ಫೇಸ್ಬುಕ್ಕು ಎಂಬ ಜಾಲಂಗಳ!&lt;/p&gt;&lt;p&gt;ನವೀನ,ರಘುರಾಮ,ದಿನೇಶ,ಶಶಿ..ಪೂರ್ಣಿಮಾ&lt;/p&gt;&lt;p&gt;ಇವರೆಲ್ಲರ ಬೆಂಗಡೆಯಲ್ಲಿ ಅನಾಮತ್ತು ಏಳು ವರ್ಷದ ಬಾಲ್ಯ&lt;/p&gt;&lt;p&gt;ಮತ್ತು ಅದು ಕಟ್ಟಿಕೊಟ್ಟ ಈ ಬದುಕು!&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-6917497829227403594?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/6917497829227403594/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=6917497829227403594' title='2 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/6917497829227403594'/><link rel='self' type='application/atom+xml' href='http://www.blogger.com/feeds/4515791944382207090/posts/default/6917497829227403594'/><link rel='alternate' type='text/html' href='http://nenapu-nevarike.blogspot.com/2011/01/blog-post.html' title='ಅಚಾನಕ್ ಖುಶಿ ಕೊಟ್ಟ ಫೇಸ್ಬುಕ್..!'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4515791944382207090.post-6619650491672949701</id><published>2010-12-09T20:41:00.000-08:00</published><updated>2010-12-09T20:45:54.091-08:00</updated><category scheme='http://www.blogger.com/atom/ns#' term='ಹನಿ ನೋಟ'/><title type='text'>ಹನಿ</title><content type='html'>ಹಸಿರೆಲೆ ತುದಿ ಮುದ್ದಿಸುವ&lt;br /&gt;ಹನಿ&lt;br /&gt;ಇನ್ನೇನು ಜೀಕಿ ಇಳಿದು&lt;br /&gt;ನೆಲದನ್ನೆಯ ಕೆನ್ನೆ ಸೋಕಿ&lt;br /&gt;ಇಂಗಲಿದೆ&lt;br /&gt;ಕೆಂಪು ಕೆಂಪು&lt;br /&gt;ಧರಣಿಯ ಬಿಸಿಯೊಡಲಲಿ&lt;br /&gt;ಸೋಸಿ ಆವಿಯಾಗಿ&lt;br /&gt;ಮುಗಿಲ ತೆಕ್ಕೆಯ ಸೇರಲಿದೆ&lt;br /&gt;ತಿಳಿಗಂದು ಮೋಡವದು&lt;br /&gt;ಉದಾಸೀನದಲಾ&lt;br /&gt;ಜೀವಸೆಲೆಯ ಹೀರಿ&lt;br /&gt;ನೀಲ ಗಗನದಿ&lt;br /&gt;ಮತ್ತೆ ಬೆಳ್ಳಿಯಂಚು ಹೊದ್ದು&lt;br /&gt;ಕಪ್ಪಗೆ ಮೆರೆದು&lt;br /&gt;ಒಣಗಿ ಉದುರಿದ ಹಳದಿಎಲೆಗೆ&lt;br /&gt;ಅವರ್ಣ&lt;br /&gt;ಕಂಬನಿ ಮಿಡಿದು&lt;br /&gt;ಹಸಿರೆಲೆ ತುದಿಯಲ್ಲಿ&lt;br /&gt;ಮುದ್ದು ಮುದ್ದಾಗಿ ಮತ್ತೆ ಕೂರಲಿದೆ&lt;br /&gt;ಅದ ನೋಡ ನೋಡುತ&lt;br /&gt;ದಿನಗಳು ತುಂಬುತಿವೆ&lt;br /&gt;ಕಾಲನ ಬಿಂದಿಗೆ&lt;br /&gt;ತುಂಬಿ ತುಳುಕಿ ಬರಿದಾಗುತ ಸಾಗಿದೆ&lt;br /&gt;ತುಂಬಿದ್ದೆಲ್ಲ ತುಳುಕಲೆಬೇಕು&lt;br /&gt;ತುಳುಕಿ ಕಳೆಯದೆ&lt;br /&gt;ಹೊಸದು ತುಂಬಲು ಜಾಗವೆಲ್ಲಿದೆ&lt;br /&gt;ತುಂಬಿ ತುಳುಕಿ&lt;br /&gt;ಬಸಿದು ಆವಿಯಾಗಿ&lt;br /&gt;ತುಂಬಿಕೊಳ್ಳುವ ವಿಧಾನವ&lt;br /&gt;ಕಲಿಸುವ ಹನಿಯೇ&lt;br /&gt;ನಿನ್ನ ನೋಡುತ ನೋಡುತ&lt;br /&gt;ನನ್ನ ದಿನಗಳು ತುಂಬುತಿವೆ.&lt;br /&gt;&lt;br /&gt;&lt;span style="color:#ffcc00;"&gt;(ಹಸಿರಿನ ಬಣ್ಣದ ಚಿಗುರೆಲೆ ನೋಡಿ ನಲಿದಾಡುವೆ ನೀನು;ಹಳದಿಯ ಬಣ್ಣದ ಹಣ್ಣೆಲೆ ನೋಡಿ ಹನಿಗೂಡುವೆ ನಾನು.. - &lt;span style="font-size:85%;"&gt;ಕಣವಿಯರ ಕವಿಸಾಲು ಅಂತ ನೆನಪು. ಸರಿಯಾದ ಮೂಲ ತಿಳಿದಿದ್ದರೆ ತಿಳಿಸಿ.)&lt;/span&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-6619650491672949701?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/6619650491672949701/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=6619650491672949701' title='4 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/6619650491672949701'/><link rel='self' type='application/atom+xml' href='http://www.blogger.com/feeds/4515791944382207090/posts/default/6619650491672949701'/><link rel='alternate' type='text/html' href='http://nenapu-nevarike.blogspot.com/2010/12/blog-post.html' title='ಹನಿ'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-4515791944382207090.post-6504793236128554582</id><published>2010-11-21T21:25:00.000-08:00</published><updated>2010-11-21T21:42:01.847-08:00</updated><category scheme='http://www.blogger.com/atom/ns#' term='ಸೃಷ್ಟಿ.. ನೇಹಲ್.. ಕಿನಾರೆ'/><title type='text'>ಸಾಗರ್ ಕಿನಾರೇ..</title><content type='html'>ರಜೆಯಲ್ಲಿ ಊರಿಗೆ ಹೋಗಿದ್ವಿ.ಹೋಗುತ್ತಾ ದಾರಿಯಲ್ಲಿ ಗೆಳೆಯರ ಊರು ಸುತ್ತಿ ಅವರ ಕುಟುಂಬವನ್ನು ಕಂಡು ನಲಿದು, ಗೆಳೆತನದ ಕಿನಾರೆಯಲ್ಲಿ ಒಂದು ಹೊತ್ತು ಕಳೆದು ಹೋದೆವು. ಆ ಸವಿಕ್ಷಣಗಳ ಮೆಲುಕನ್ನು ನನ್ನ ಮಗಳು ಸೃಷ್ಟಿ ಪದ್ಯ ಬರೆದಿದ್ದರೆ ಹೀಗೆ ಬರೆಯುತ್ತಿದ್ದಳೇನೋ ಎಂದು ಅವಳಮ್ಮನ ಕನವರಿಕೆ!&lt;br /&gt;&lt;br /&gt;ಫೋಟೋಗಳ ಮುನ್ನೆಲೆಯಲ್ಲಿ ಸೃಷ್ಟಿ, ಅವಳ ಗೆಳತಿ ನೇಹಲ್, ಕಡಲು ಮತ್ತು ದಂಡೆ , ಅಲ್ಲಲ್ಲಿ ಗೆಳೆಯ ರಾಜೇಶ್ ನಾಯಕ್, ಅವರ ಪತ್ನಿ ಲೀನಾ, ಮತ್ತು ನಾನು,ನನ್ನ ಬಾಳಸಂಗಾತಿ. ಫೋಟೋ ತೆಗೆದವರು ನನ್ನವರು ಮತ್ತು ಲೀನಾ.&lt;br /&gt;*******&lt;br /&gt;&lt;br /&gt;ನಂಗೆ ಕೊಂಕಣಿ ಗೊತ್ತಿಲ್ಲ,&lt;br /&gt;ನಿಂಗೆ ಕನ್ನಡ ಬರೋಲ್ಲ,&lt;br /&gt;ಆದ್ರೇನಾಯ್ತು ನಮ್ಮಮ್ಮ ನಿಮ್ಮಪ್ಪ ಫ್ರೆಂಡ್ಸ್ ಅಲ್ವಾ,&lt;br /&gt;ನಾವೂ ಆಟ ಆಡೋಣ,&lt;br /&gt;ಜತೆಜತೆಗೇ ನಲಿಯೋಣ.&lt;br /&gt;ನನ್ ಬಾಲ್ ತಗೋಬೇಡಾ ನೀನು&lt;br /&gt;ನಿನ್ ಸೈಕಲ್ ತಗೋತೀನಿ ನಾನು -&lt;br /&gt;ಸರಿ ಜಗಳ ಮುಗೀತೀಗ,&lt;br /&gt;ಬಾ ಸುತ್ತು ತುಳಸಿಯ ಕಟ್ಟೆ,&lt;br /&gt;ಕೆಮೆರಾಕ್ಕಿದೋ ಫೋಸ್ ಕೊಟ್ಟೆ!&lt;br /&gt;&lt;div&gt;&lt;div&gt;&lt;div&gt;&lt;div&gt;&lt;div&gt;&lt;div&gt;&lt;div&gt;&lt;a href="http://4.bp.blogspot.com/_GMLph4mGk9c/TOn_UPi0haI/AAAAAAAABWA/0HdB8SqV1wk/s1600/P1050019%2B%2528Medium%2529.JPG"&gt;&lt;img id="BLOGGER_PHOTO_ID_5542241539691152802" style="WIDTH: 400px; CURSOR: hand; HEIGHT: 266px" alt="" src="http://4.bp.blogspot.com/_GMLph4mGk9c/TOn_UPi0haI/AAAAAAAABWA/0HdB8SqV1wk/s400/P1050019%2B%2528Medium%2529.JPG" border="0" /&gt;&lt;/a&gt; &lt;/div&gt;&lt;div&gt;&lt;/div&gt;&lt;div&gt;ಅಂಬಲಪಾಡಿಯ ರಸ್ತೆಯಲ್ಲಿಳಿದ&lt;br /&gt;ಬೈಕಿನ ದಾರಿ ಕಡಲಿನ ತಡಿಗೆ..&lt;br /&gt;ಹೂಡಿಬೆಂಗ್ರೆಯ ಮರಳಿನಂಗಳದೆಡೆಗೆ&lt;br /&gt;ನಿಮ್ಮನೆ ಹಿತ್ತಲ ಸಮುದ್ದದ ನೀರು&lt;br /&gt;ಉಲಿಯುತಲಿಹುದು ಲುಲುಲುಲುಲು... &lt;/div&gt;&lt;div&gt;&lt;br /&gt;&lt;a href="http://3.bp.blogspot.com/_GMLph4mGk9c/TOn_VRdm8qI/AAAAAAAABWI/asJbFIMtqk8/s1600/P1050041%2B%2528Medium%2529.JPG"&gt;&lt;img id="BLOGGER_PHOTO_ID_5542241557386031778" style="WIDTH: 400px; CURSOR: hand; HEIGHT: 266px" alt="" src="http://3.bp.blogspot.com/_GMLph4mGk9c/TOn_VRdm8qI/AAAAAAAABWI/asJbFIMtqk8/s400/P1050041%2B%2528Medium%2529.JPG" border="0" /&gt;&lt;/a&gt;&lt;br /&gt;&lt;br /&gt;ಈ ಸಲ ನೀರು ಮೊಣಕಾಲ್ ನೆಕ್ಕಿತು,&lt;br /&gt;ಮತ್ತಿದೋ ಈಗ ಸೊಂಟದ ನೇರ,&lt;br /&gt;ಆಆಆಅ ಈಗ ಕುತ್ತಿಗೆ ಮುಚ್ಚಿ,&lt;br /&gt;ಬಾಯಿ ತುಂಬ ಉಪ್ಪಿನ ರುಚಿ. &lt;/div&gt;&lt;div&gt;&lt;a href="http://3.bp.blogspot.com/_GMLph4mGk9c/TOn_Tb_aT-I/AAAAAAAABV4/wamVWdZkOjc/s1600/P1050036%2B%2528Medium%2529.JPG"&gt;&lt;img id="BLOGGER_PHOTO_ID_5542241525852426210" style="WIDTH: 400px; CURSOR: hand; HEIGHT: 266px" alt="" src="http://3.bp.blogspot.com/_GMLph4mGk9c/TOn_Tb_aT-I/AAAAAAAABV4/wamVWdZkOjc/s400/P1050036%2B%2528Medium%2529.JPG" border="0" /&gt;&lt;/a&gt; &lt;/div&gt;&lt;div&gt;&lt;/div&gt;&lt;div&gt;&lt;br /&gt;ಬಂದೂ ಬಂದೂ ಕಾಲನು ತೋಯಿಸಿ&lt;br /&gt;ಮರಳುವ ನೀರು ಎಷ್ಟುಳಿದಿದೆ&lt;br /&gt;ತಿಳಿಯಲು ಎಂದು ಮುಳುಗಲು ಹೊರಟ&lt;br /&gt;ಸೂರಿಯಾ ಮಾಮ.&lt;br /&gt;&lt;a href="http://1.bp.blogspot.com/_GMLph4mGk9c/TOn_pX14R8I/AAAAAAAABXA/Cl9Viff38yo/s1600/P1050050%2B%2528Medium%2529.JPG"&gt;&lt;img id="BLOGGER_PHOTO_ID_5542241902695827394" style="WIDTH: 400px; CURSOR: hand; HEIGHT: 266px" alt="" src="http://1.bp.blogspot.com/_GMLph4mGk9c/TOn_pX14R8I/AAAAAAAABXA/Cl9Viff38yo/s400/P1050050%2B%2528Medium%2529.JPG" border="0" /&gt;&lt;/a&gt;&lt;br /&gt;&lt;/div&gt;&lt;div&gt;&lt;br /&gt;ಜತೆಗೇ ತೇಲುತ&lt;br /&gt;ನಾವೆಯ ಹಾಯಿ,&lt;br /&gt;ಸುತ್ತಲು ಹಾರುವ ಹಕ್ಕಿಯ ಸಾಲು,&lt;br /&gt;ಓ... ಚಂದದ ಊರಿದು,&lt;br /&gt;ಚಂದದ ಕಡಲು.&lt;br /&gt;&lt;a href="http://2.bp.blogspot.com/_GMLph4mGk9c/TOn_pM9Wv6I/AAAAAAAABWw/y8dCO7tC1v4/s1600/Picture%2B025%2B%2528Medium%2529.jpg"&gt;&lt;img id="BLOGGER_PHOTO_ID_5542241899774394274" style="WIDTH: 400px; CURSOR: hand; HEIGHT: 300px" alt="" src="http://2.bp.blogspot.com/_GMLph4mGk9c/TOn_pM9Wv6I/AAAAAAAABWw/y8dCO7tC1v4/s400/Picture%2B025%2B%2528Medium%2529.jpg" border="0" /&gt;&lt;/a&gt;&lt;br /&gt;&lt;br /&gt;&lt;br /&gt;ಅಮ್ಮ ಅಂತಾಳೆ ಕತ್ತಲಾಯಿತು,&lt;br /&gt;ಮಾಮ ಹೇಳಿದ್ರು ಹೋಗುವ ಬನ್ನಿ,&lt;br /&gt;ಅಪ್ಪ ಇನ್ನೂ ಕೆಮೆರಾ ಹಿಂದೆ.&lt;br /&gt;&lt;a href="http://2.bp.blogspot.com/_GMLph4mGk9c/TOn_pQWRf1I/AAAAAAAABW4/365TMWz8B94/s1600/Picture%2B060%2B%2528Medium%2529.jpg"&gt;&lt;img id="BLOGGER_PHOTO_ID_5542241900684214098" style="WIDTH: 400px; CURSOR: hand; HEIGHT: 300px" alt="" src="http://2.bp.blogspot.com/_GMLph4mGk9c/TOn_pQWRf1I/AAAAAAAABW4/365TMWz8B94/s400/Picture%2B060%2B%2528Medium%2529.jpg" border="0" /&gt;&lt;/a&gt;&lt;br /&gt;&lt;br /&gt;&lt;br /&gt;ಕತ್ತಲೆ ಕವಿಯಲು ಬೆಳಕೇ ಇಲ್ಲ,&lt;br /&gt;ದಂಡೆಯ ಮೇಲೆ ಏಡಿಯ ದಂಡು,&lt;br /&gt;ಅಲ್ಲೆಲ್ಲೋ ಕೆಂಪಿ ಕಣ್ಣು,&lt;br /&gt;ಅಮ್ಮ ಯಾಕೋ ಹೆದರ್ಸುವಳಲ್ಲ,&lt;br /&gt;ಹೋಗಲಂತೂ ಮನಸೇ ಇಲ್ಲ,&lt;br /&gt;ಕರೆವುದು ನೀರು ಇನ್ನೂ ಆಡು.&lt;br /&gt;ನಾಳೆ ಬರುವುದು ನಿಜನಾ ಸುಳ್ಳಾ?&lt;br /&gt;&lt;a href="http://3.bp.blogspot.com/_GMLph4mGk9c/TOn_ol2FK7I/AAAAAAAABWg/ph-72HLRFiw/s1600/Picture%2B010%2B%2528Medium%2529.jpg"&gt;&lt;img id="BLOGGER_PHOTO_ID_5542241889274899378" style="WIDTH: 400px; CURSOR: hand; HEIGHT: 300px" alt="" src="http://3.bp.blogspot.com/_GMLph4mGk9c/TOn_ol2FK7I/AAAAAAAABWg/ph-72HLRFiw/s400/Picture%2B010%2B%2528Medium%2529.jpg" border="0" /&gt;&lt;/a&gt;&lt;/div&gt;&lt;div&gt;&lt;/div&gt;&lt;div&gt;&lt;br /&gt;ಉಡುಪಿಯಲಿರುವನು ಕಡಗೋಲ್ ಕಿಶ್ಣ&lt;br /&gt;ರಾಧೆಯೇ ಇಲ್ಲದೆ&lt;br /&gt;ಒಬ್ಬನೆ ಪಾಪ,&lt;br /&gt;ನೀಡಲು ಕಾಸು&lt;br /&gt;ಸೊಂಡಿಲು ಇಡುವ&lt;br /&gt;ಮಠದಾ ಆನೆ,&lt;br /&gt;ಕೊಟ್ಟಿಗೆಯೊಳಗೆ&lt;br /&gt;ಅಂಬಾ ಬೂಚಿ, ಪುಟ್ಟೀಕರ,&lt;br /&gt;ಗೆಳತಿಯ ಮನೆಯ&lt;br /&gt;ಹಿತ್ತಲ ದಂಡೆಲಿ&lt;br /&gt;ಮೊರೆಯುವ ಕಡಲು..&lt;br /&gt;ಹೀಗಿದೆ ನನ್ನ ಉಡುಪಿಯ ಪಯಣ-&lt;br /&gt;ಏನೇ ಆದರೂ ಎಲ್ಲೇ ಹೋದರೂ&lt;br /&gt;ನೆನೆವುದು ಮನವು ಸಮುದ್ದವನ್ನೆ&lt;br /&gt;ಅಲೆಅಲೆಅಲೆಯೂ&lt;br /&gt;ಲುಲುಲುಲುಲುಲು&lt;br /&gt;ಎಂದುಲಿಯುತ ಕರೆವುದು ನನ್ನನ್ನೆ!&lt;br /&gt;&lt;a href="http://4.bp.blogspot.com/_GMLph4mGk9c/TOn_VYHr3qI/AAAAAAAABWQ/OlifzAnPRDs/s1600/P1050051%2B%2528Medium%2529.JPG"&gt;&lt;img id="BLOGGER_PHOTO_ID_5542241559173127842" style="WIDTH: 400px; CURSOR: hand; HEIGHT: 266px" alt="" src="http://4.bp.blogspot.com/_GMLph4mGk9c/TOn_VYHr3qI/AAAAAAAABWQ/OlifzAnPRDs/s400/P1050051%2B%2528Medium%2529.JPG" border="0" /&gt;&lt;/a&gt;&lt;/div&gt;&lt;div&gt;&lt;/div&gt;&lt;div&gt;&lt;br /&gt;ಬಿಡುವೆನೆ ನಾನು, ಬರುವೆನು ಮತ್ತೆ,&lt;br /&gt;ಕಾಯುತಲಿರು ನೇವಲ್ ನೀನು, &lt;span style="color:#999999;"&gt;(ಹ ಅನ್ನಲು ನಾಲಿಗೆ ಹೊರಳೋಲ್ಲ. ಗೆಳತಿಯ ಹೆಸರು ನೇಹಲ್!)&lt;/span&gt;&lt;/div&gt;&lt;div&gt;ಕೊಂಕಣಿಯನು ಕಲಿಯುವೆ ನಾನು,&lt;br /&gt;ಕನ್ನಡವ ಕಲಿತಿರು ನೀನು ,&lt;br /&gt;ಆಡುವ ಮತ್ತೆ ಮರಳತೀರದಲಿ,&lt;br /&gt;ನೀರನು ಎರಚಿ ಕಾಲನು ಮುಳುಗಿಸಿ&lt;br /&gt;ಕೈಕೈಹಿಡಿದು ಅಲೆಯುವ ನಾವೂ ಅಲೆಗಳ ಜತೆಗೆ !&lt;/div&gt;&lt;div&gt;&lt;a href="http://3.bp.blogspot.com/_GMLph4mGk9c/TOn_owgwGbI/AAAAAAAABWo/5ujM8RM-n14/s1600/Picture%2B020%2B%2528Medium%2529.jpg"&gt;&lt;img id="BLOGGER_PHOTO_ID_5542241892138228146" style="WIDTH: 400px; CURSOR: hand; HEIGHT: 300px" alt="" src="http://3.bp.blogspot.com/_GMLph4mGk9c/TOn_owgwGbI/AAAAAAAABWo/5ujM8RM-n14/s400/Picture%2B020%2B%2528Medium%2529.jpg" border="0" /&gt;&lt;/a&gt;&lt;/div&gt;&lt;div&gt;&lt;/div&gt;&lt;div&gt;&lt;br /&gt;ಬಂದೇ ಬರುವಳು ಗೆಳತಿಯು ಮತ್ತೆ&lt;br /&gt;ಕಾಯಲೆ ಬೇಕು ನೋಡು ಮತ್ತೆ!&lt;br /&gt;"ಬಾಇಲ್ಲಿ" ಎನ್ನಲು ನೀನು&lt;br /&gt;" ಆಯಿಲೋ "ಎನ್ನುತ ಬರುವೆನು ನಾನು&lt;br /&gt;ಬೆಂಗಳೂರಿಗೆ ವಾಪಸ್ ಬಂದು&lt;br /&gt;ಕರೆಯುವೆ ನಿನ್ನ "ಹಂಗ್ಯೋ" ಎಂದು.&lt;/div&gt;&lt;div&gt;&lt;a href="http://2.bp.blogspot.com/_GMLph4mGk9c/TOn_WHBmX3I/AAAAAAAABWY/SSBO4fxv7i0/s1600/P1050066%2B%2528Medium%2529.JPG"&gt;&lt;img id="BLOGGER_PHOTO_ID_5542241571764068210" style="WIDTH: 400px; CURSOR: hand; HEIGHT: 266px" alt="" src="http://2.bp.blogspot.com/_GMLph4mGk9c/TOn_WHBmX3I/AAAAAAAABWY/SSBO4fxv7i0/s400/P1050066%2B%2528Medium%2529.JPG" border="0" /&gt;&lt;/a&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-6504793236128554582?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/6504793236128554582/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=6504793236128554582' title='4 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/6504793236128554582'/><link rel='self' type='application/atom+xml' href='http://www.blogger.com/feeds/4515791944382207090/posts/default/6504793236128554582'/><link rel='alternate' type='text/html' href='http://nenapu-nevarike.blogspot.com/2010/11/blog-post_21.html' title='ಸಾಗರ್ ಕಿನಾರೇ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_GMLph4mGk9c/TOn_UPi0haI/AAAAAAAABWA/0HdB8SqV1wk/s72-c/P1050019%2B%2528Medium%2529.JPG' height='72' width='72'/><thr:total>4</thr:total></entry><entry><id>tag:blogger.com,1999:blog-4515791944382207090.post-9158234328813674005</id><published>2010-10-25T03:34:00.000-07:00</published><updated>2010-10-25T03:52:26.899-07:00</updated><category scheme='http://www.blogger.com/atom/ns#' term='ಮಹೇಶ'/><title type='text'>ಮಹೇಶ ಇನ್ನು ನೆನಪು!!</title><content type='html'>&lt;img id="BLOGGER_PHOTO_ID_5531933720333277634" style="DISPLAY: block; MARGIN: 0px auto 10px; WIDTH: 202px; CURSOR: hand; HEIGHT: 283px; TEXT-ALIGN: center" alt="" src="http://4.bp.blogspot.com/_GMLph4mGk9c/TMVgaMF4WcI/AAAAAAAABTA/PAMY5ls1kOU/s400/Mahesh.jpg" border="0" /&gt;&lt;br /&gt;&lt;div&gt;ಬದುಕಿಗೆಷ್ಟೊಂದು&lt;br /&gt;ಭಾಷ್ಯ ಬರೆಯಬಹುದು..&lt;br /&gt;ಇದು ಇದೇ, ಇದು ಇದಲ್ಲ&lt;br /&gt;ಎಂಬ ತರ್ಕವ ಮಣಿಸಿ, ಜಯಿಸಿ, &lt;/div&gt;&lt;div&gt;ನಾಳೆಯು ನನ್ನದೆಂಬ&lt;/div&gt;&lt;div&gt;ಭರವಸೆಯ ಬೆನ್ನತ್ತಿ&lt;/div&gt;&lt;div&gt;ಇಂದು ಕನಸಿನಲ್ಲಿ ಜಾರುತ್ತಾ&lt;/div&gt;&lt;div&gt;ಆಹ್ &lt;/div&gt;&lt;div&gt;ಸಾವಿಗೊಂದೇ ಸಾಲು&lt;/div&gt;&lt;div&gt;ತರ್ಕಕ್ಕೆ ಮೀರಿದ್ದು&lt;/div&gt;&lt;div&gt;ಚರಮಗೀತೆ.&lt;/div&gt;&lt;div&gt;ಕುವೆಂಪುರ ವಾಲಿಯೆಂದ ಮಾತಿನ ನೆನಪು&lt;/div&gt;&lt;div&gt;ಸಾವ್ ಗಾಳಿ ತೂರಲರಿವಪ್ಪುದಯ್...&lt;/div&gt;&lt;div&gt;ನಾವು ಗಟ್ಟಿಯೆಂದರಿತುದು ಜೊಳ್ಳು&lt;/div&gt;&lt;div&gt;ಜೊಳ್ಳೆಂದರಿತುದೇ ಗಟ್ಟಿ!&lt;/div&gt;&lt;br /&gt;&lt;div&gt;&lt;/div&gt;&lt;div&gt;ಆತ್ಮೀಯ ಮಹೇಶನಿಗೆ ಕೊಡದೆ ಉಳಿದ ಅಪ್ಪುಗೆಯೊಂದಿಗೆ, ಆಡದೆ ಉಳಿದ ಮಾತುಗಳೊಂದಿಗೆ, ಹಂಚಿಕೊಳ್ಳದೆ ಉಳಿದ ನಗೆಯೊಂದಿಗೆ, ನಮ್ಮೆಲ್ಲ ನಲ್ಮೆಯ ಕ್ಷಣಗಳನ್ನು ತೋಯಿಸಿಯೇ ತೀರುವೆನೆಂಬ ಹಟ ತೊಟ್ಟಿರುವ ದುಃಖದೊಂದಿಗೆ ಈ ಸಾಲುಗಳ ಅರ್ಪಣೆ.&lt;/div&gt;&lt;br /&gt;&lt;div&gt;ಮಾತೆತ್ತಿದ್ದರೆ ಮನೆಗೆ ಕರೆವವರು&lt;/div&gt;&lt;div&gt;ಉಂಡು ಹೋಗಿರೆಂದವರು&lt;/div&gt;&lt;div&gt;ಚಟುವಟಿಕೆಗೆ ಕೊನೆಮೊದಲಿಲ್ಲದವರು&lt;/div&gt;&lt;div&gt;ಮಲಗಿದ್ದಾರಿಲ್ಲಿ ಮಿಸುಕಾಡದೆ&lt;/div&gt;&lt;div&gt;ಕಣ್ಣು ಮುಚ್ಚಿಹರಂತೆ,&lt;/div&gt;&lt;div&gt;ಚೈತನ್ಯಶೀಲ ಬದುಕಿನ &lt;/div&gt;&lt;div&gt;ದಾರಿಯದು&lt;/div&gt;&lt;div&gt;ಇದ್ದಕಿದ್ದಂತೆ ತುಂಡರಿಸಿ&lt;/div&gt;&lt;div&gt;ಆವರಿಸಿತೆಲ್ಲ ಮೌನ,ಕತ್ತಲು,ಜಡತೆ, ಸಾವು&lt;/div&gt;&lt;div&gt;ಇದು ಅನ್ಯಾಯ.&lt;/div&gt;&lt;div&gt;ಚಂದ ಚಿತ್ರವ ಕೊರೆದು ಕತ್ತರಿಸಿ&lt;/div&gt;&lt;div&gt;ಫ್ರೇಮಲ್ಲಿಟ್ಟು ಕೊಟ್ಟ ಕೈಗಳ&lt;/div&gt;&lt;div&gt;ಕಟ್ಟಿ ಮಲಗಿಸಿ ಚೌಕಟ್ಟಿ-&lt;br /&gt;ನೊಳಗೆ ನೂಕಿದ ವಿಧಿಯೆ &lt;/div&gt;&lt;div&gt;ಇದೂ ಒಂದು ವಿಧಾನವೆ?&lt;/div&gt;&lt;div&gt;&lt;/div&gt;&lt;br /&gt;&lt;div&gt;ನೋವು,ಶೂನ್ಯಗಳಲ್ಲಿ ಮುಳುಗಿರುವ ಅವನ ಕುಟುಂಬಕ್ಕೆ ಧೈರ್ಯ ಮತ್ತು ಸ್ಥೈರ್ಯವನ್ನು ಬಯಸುತ್ತಾ &lt;/div&gt;&lt;div&gt;&lt;/div&gt;&lt;div&gt;ಪ್ರೀತಿಯಿಂದ,&lt;/div&gt;&lt;div&gt;ಸಿಂಧು&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-9158234328813674005?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/9158234328813674005/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=9158234328813674005' title='1 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/9158234328813674005'/><link rel='self' type='application/atom+xml' href='http://www.blogger.com/feeds/4515791944382207090/posts/default/9158234328813674005'/><link rel='alternate' type='text/html' href='http://nenapu-nevarike.blogspot.com/2010/10/blog-post_25.html' title='ಮಹೇಶ ಇನ್ನು ನೆನಪು!!'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_GMLph4mGk9c/TMVgaMF4WcI/AAAAAAAABTA/PAMY5ls1kOU/s72-c/Mahesh.jpg' height='72' width='72'/><thr:total>1</thr:total></entry><entry><id>tag:blogger.com,1999:blog-4515791944382207090.post-2806514041342566915</id><published>2010-10-15T03:26:00.002-07:00</published><updated>2010-10-15T03:34:50.494-07:00</updated><category scheme='http://www.blogger.com/atom/ns#' term='ಇರುವುದೆಲ್ಲವ ಬಿಟ್ಟು'/><title type='text'>ಅಂಗೈಯಲ್ಲಿನ ನಕ್ಷತ್ರ</title><content type='html'>ಮಬ್ಬುಗತ್ತಲ ಇಳಿಸಂಜೆ&lt;br /&gt;ಪುಟ್ಟಕಣ್ಣಿನ ದೀಪ&lt;br /&gt;ಸೊರಗಿದ್ದೂ ಸೊಗಯಿಸಿದ&lt;br /&gt;ಬಿಳಿಬಿಳಿ ಅಂಗೈಯನ್ನು&lt;br /&gt;ನಿನ್ನ ತಿಳಿಗೆಂಪು ಬೆರಳುಗಳ&lt;br /&gt;ಮಿಂಚಲ್ಲಿ ತೋಯಿಸುತ್ತ&lt;br /&gt;ಅಂದೆ ನೀನು&lt;br /&gt;ತಾರಗೆಯೊಂದು ಬಿದ್ದಿಹುದು&lt;br /&gt;ಅಂಗೈಯೊಳಗೆ&lt;br /&gt;ಆ ಕ್ಷಣದ ರಮ್ಯತೆಗೆ&lt;br /&gt;ಅದರೊಳಗಣ ಆರ್ದ್ರತೆಗೆ&lt;br /&gt;ಅರಳಿದ ಭಾವ&lt;br /&gt;ಧನ್ಯತೆಯೊಂದೇ&lt;br /&gt;ಇಳಿಸಂಜೆಗಳ ಕಾಲವಳಿದು&lt;br /&gt;ರಾತ್ರಿಕಳೆದು&lt;br /&gt;ಮುಂಜಾವಗಳು ನಿದ್ದೆಯಲ್ಲಿಳಿದು&lt;br /&gt;ಈಗ ಬಿರುಬೇಸಗೆಯ ಹಗಲು&lt;br /&gt;&lt;br /&gt;ಬಾನೆದೆಯ ಕತ್ತಲಲ್ಲಿ ಮಿನುಗುವ ತಾರಗೆಯ&lt;br /&gt;ನೋಡಿ&lt;br /&gt;ಬೆಳಕಿನ ಲೋಕದ ಅಂಗೈಗೆ&lt;br /&gt;ಬಿದ್ದವಳ ನೆನಕೆ,&lt;br /&gt;ಮಿಂಚು ಹೊಳೆವುದೇ ಕತ್ತಲಲ್ಲಿ&lt;br /&gt;ನೆರವೇರಿದ್ದ್ದಕ್ಕಿಂತಲೂ&lt;br /&gt;ನಿರೀಕ್ಷೆಯಲ್ಲೇ ಸುಖ&lt;br /&gt;ಎಲ್ಲ ನವ್ಯ ನವ್ಯೋತ್ತರಗಳಿಗೂ&lt;br /&gt;ಅಡಿಗರ ಮೋಹನ ಮುರಳಿಯದೇ ಭಾಷ್ಯ!&lt;br /&gt;&lt;br /&gt;ಸುಯ್ದು ನಿಟ್ಟುಸಿರು&lt;br /&gt;ಸೋತ ಕತ್ತನ್ನ ಹಗೂರ ಎತ್ತುತ್ತ&lt;br /&gt;ಕಣ್ದೆರೆದರೆ&lt;br /&gt;ಮಳೆನಿಂತ ಕಪ್ಪುನೀಲಿ ಬಾನೊಡಲಲಿ&lt;br /&gt;ಹೊಳೆ ಹೊಳೆವ ತಾರೆ&lt;br /&gt;ರಸ್ತೆಯಂಚಲಿ&lt;br /&gt;ಘಮಘಮಿಸಿ ಇಳಿಬಿದ್ದ&lt;br /&gt;ಆಕಾಶ ಮಲ್ಲಿಗೆ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-2806514041342566915?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/2806514041342566915/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=2806514041342566915' title='5 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/2806514041342566915'/><link rel='self' type='application/atom+xml' href='http://www.blogger.com/feeds/4515791944382207090/posts/default/2806514041342566915'/><link rel='alternate' type='text/html' href='http://nenapu-nevarike.blogspot.com/2010/10/blog-post.html' title='ಅಂಗೈಯಲ್ಲಿನ ನಕ್ಷತ್ರ'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-4515791944382207090.post-5708717380980758338</id><published>2010-09-07T03:28:00.000-07:00</published><updated>2010-09-07T03:50:21.716-07:00</updated><category scheme='http://www.blogger.com/atom/ns#' term='ಸುಝೆ..suze ಎಲೆಯುದುರುವ ಕಾಲ'/><title type='text'>ಶ್ರಾವಣದಲ್ಲೇ ಮಾಗಿ!</title><content type='html'>ಹೊಸ ಆಫೀಸು, ಹೊಸ ಜೊತೆಗಾರರು, ಮ್ಯಾನೇಜರು ಮತ್ತು ಒಂದಿಬ್ಬರು ಟೀಮಿಗಳನ್ನ ಬಿಟ್ಟರೆ ಇನ್ಯಾರ ಪರಿಚಯವೂ ಇರಲಿಲ್ಲ. ಮಧ್ಯಾಹ್ನ ಬೇರೆ ಬೇರೆ ಟೀಮಿನ ಎಲ್ಲರೂ ಒಟ್ಟಿಗೆ ಊಟಕ್ಕೆ ಹೊರಟೆವು. ನಾನು ಕ್ಯಾಂಟೀನಿನಲ್ಲಿ ಉದ್ದುಕೆ ಜೋಡಿಸಿದ ಟೇಬಲ್ಲಿನ ಈಚೆ ತುದಿಯಲ್ಲಿ ಕೂತು ಎಲ್ಲರ ಮಾತು ಕೇಳಿಸಿಕೊಳ್ಳುತ್ತ, ನನ್ನ ಧ್ವನಿಯನ್ನೂ ತುತ್ತಿನ ಜೊತೆಗೆ ಸೇರಿಸಿ ಒಳಕ್ಕೆ ತಳ್ಳುತ್ತಿದ್ದೆ.&lt;br /&gt;ಎಲ್ಲರೂ ಅವರಷ್ಟಕ್ಕೆ ಇಂಗ್ಲಿಷಿನಲ್ಲಿ ಆ ವಾರ ರಿಲೀಸಾಗಲಿರುವ ಸಿನಿಮಾದಿಂದ ಹಿಡಿದು, ಮೂಲಿ ಪರಾಟ ಮಾಡುವುದು ಹೇಗೆ ಮತ್ತು ಉದ್ದ ಜಡೆಯನ್ನ ಲ್ಯಾಕ್ಮೆ ಶಾಂಪೂ ಬಳಸಿ ಸಂಭಾಳಿಸುವುದು ಹೇಗೆ ಮೊದಲಾದ ವಿಷಯಗಳಲ್ಲಿ ಮುಳುಗಿದ್ದರು. ಎಲ್ಲ ವಯಸ್ಸು, ಅನುಭವ, ಆಕಾರ, ಆಸಕ್ತಿಗಳು ಕಲಸಿಕೊಂಡಿದ್ದ ಗಜಿಬಿಜಿಯ ಗುಂಪು. ನಾನು ಅಯ್ಯೋ ಇವರಲ್ಯಾರೂ ಕನ್ನಡದವರ ಹಾಗೇ ಕಾಣ್ತಾ ಇಲ್ವಲ್ಲ ಹೆಂಗಪ್ಪಾ ಗೆಳೆತನ ಬೆಳಸೋದು ಅಂದುಕೊಂಡು ಸುಮ್ಮನುಳಿದೆ.&lt;br /&gt;ಪಕ್ಕದಲ್ಲಿ ಕುಳಿತ ಸಹೋದ್ಯೋಗಿಗೆ ಎಲ್ಲರ ಮಾತುಗಳ ನಡುವೆ ನನ್ನ ದ್ವನಿ ಕೇಳದಿರುವುದು ಅದು ಹೇಗೋ ಗಮನಕ್ಕೆ ಬಂದು, ಹಾಗೇ ಇಂಗ್ಲಿಷಿನಲ್ಲಿ ಒಂದು ಸಾಲಿನ ಇಂಟ್ರೋ ಹಾಕಿದರು. ಅಷ್ಟಕ್ಕೆ ಸುಮ್ಮನುಳಿಯದೆ, ಇನ್ಫಿಯಿಂದ ಬಂದವಳು ಮತ್ತು ಚಾರಣ ಪ್ರಿಯೆ ಅನ್ನುವ ವಿಶೇಷಣ ಸೇರಿಸಿಬಿಟ್ಟರು. ಎಲ್ಲರೂ ಮತ್ತೊಮ್ಮೆ ಗಜಿಬಿಜಿಯಲ್ಲಿ ಹಾಯ್ದರು. ನಾನು ತಿರುಗಿಸಿ ಹಾಯೆಂದೆ.&lt;br /&gt;ಊಟ ಮುಗಿದು ಕೈತೊಳೆದು ಮೆಟ್ಟಲಿಳಿಯುವಾಗ ಎತ್ತರಕ್ಕೆ, ದೊಡ್ಡ ಆಕಾರದಲ್ಲಿದ್ದ ಹುಡುಗ ಬಂದು, ಇಂಗ್ಲಿಶಿನಲ್ಲಿ ನೀವು ಇನ್ಫೀನಾ, ನನ್ನ ಒಂದು ಉಸಿರಿನ ಉತ್ತರ ಹೌದು, ಟ್ರೆಕ್ಕಿಂಗ್ ಗ್ರೂಪಿದ್ಯಾ ಮತ್ತೆ ಹೌದು, ನೇಟಿವ್ ಯಾವುದು - ಮೊದಲ ಬಾರಿಗೆ ನಾನು ಬೆಂಗಳೂರು ಅಂತಂದೆ. ಈ ಬೇರೆ ಬೇರೆ ಭಾಷೆಯ ಜನರಿಗೆ ನಮ್ಮ ಸಾಗರ ಎಲ್ಲಿ ಎಂದು ಹೇಳಿಕೊಡುವ ತಾಳ್ಮೆ ಇರಲಿಲ್ಲ ನನಗೆ. ನನ್ನ ಅನಾಸಕ್ತಿ ಆತನಿಗೂ ತಟ್ಟಿರಬಹುದು. ಸೀಯಾ ಅಂತಂದು ಹೊರಟು ಹೋದ. ಸಧ್ಯ ಅಂತ ನಾನು ಬೇಗ ಮೆಟ್ಟಿಲಿಳಿದು ಸಾಗಿದೆ.&lt;br /&gt;ಮುಂದೆರಡು ದಿನಗಳಲ್ಲಿ ಅವನು ಕನ್ನಡದವನು ಅಂತ ಗೊತ್ತಾಗಿ ನೆಮ್ಮದಿಯೊಂದು ಚಿಗುರೊಡೆಯಿತು. ಆಮೇಲಿನ ದಿನಗಳಲ್ಲಿ ಕೆಲಸ, ತಮಾಷಿ,ಡ್ಯಾನ್ಸು, ಸಿನಿಮಾ, ಸುತ್ತಾಟ, ಚಾರಣ, ಪ್ರವಾಸ ಅಂತ ಚಟುವಟಿಕೆಗಳು ತುಂಬಿ ತುಳುಕಿದವು.&lt;br /&gt;ಆ ಸಹೋದ್ಯೋಗಿಯ ಭಾಷೆ, ನಡವಳಿಕೆ, ಆಸಕ್ತಿ, ಉತ್ಸಾಹ ಎಲ್ಲದರಲ್ಲೂ ಕನ್ನಡತನ ಮತ್ತು ಸಂಸ್ಕೃತಿ ಅಚ್ಚೊತ್ತಿದ್ದವು. ದಿನದಿನದಿಂದ ದಿನಕ್ಕೆ ಅಯ್ಯೋ ಬಿಟ್ಟರೆ ಸಾಕಪ್ಪಾ ಅನ್ನಿಸಿದ ಕ್ಷಣದಿಂದ ನಮ್ಮ ಸ್ನೇಹಸಂಬಂಧ ಇವತ್ತು ಯಾಕೆ ಬರಲಿಲ್ಲ ಅಂತ ಯೋಚಿಸುವಲ್ಲಿಯವರೆಗೆ ಬಂದಿತು. ಅದೆಲ್ಲಕ್ಕೂ ಆ ಮನುಷ್ಯನ ಸ್ನೇಹ, ಸೌಜನ್ಯ,ಪರಿಸರ ಪ್ರೇಮ, ಸಾಮಾಜಿಕ ಕಾಳಜಿ, ಮತ್ತು ಬದ್ಧತೆಗಳು ಕಾರಣವಾದವು.&lt;br /&gt;ಟೆಕ್ಕಿಗಳು ಎಂದರೆ ಟೆಕ್ ಪ್ರಪಂಚದ ಸರಹದ್ದಲ್ಲೆ ಇರುವ ನನಗೂ ಒಂದು ಅಳತೆ ದೂರದಲ್ಲೆ ನಿಲ್ಲಬಯಸುವ ಸಂಶಯ. ಭಾಷೆ,ದೇಶ,ಸಂಸ್ಕೃತಿಗಳು ಕೊನೆಯ ಬೆಂಚಲ್ಲಿರಬಹುದು ಅನ್ನುವ ಅನುಮಾನದ ನೆಲೆ ನನ್ನ ಈ ನಡವಳಿಕೆಯ ನೆಲೆಗಟ್ಟು. ಅದನ್ನು ಸುಳ್ಳು ಮಾಡಿ ಜೊತೆಯಾದ, ನನ್ನ ಭಾವಕೋಶವನ್ನು ವಿಸ್ತರಿಸಿದ ಸ್ನೇಹಿತರು ಈಗ ಸಾಕಷ್ಟಿರುವುದರಿಂದ ಈಗ ನಾಲ್ಕೂವರೆ ವರ್ಷಗಳ ಹಿಂದಿದ್ದ ನನ್ನ ಮನಸ್ಥಿತಿ ಬದಲಾಗಿದೆ. ಅದಕ್ಕೆ ದೊಡ್ಡ ಕೊಡುಗೆ ಈ ಗೆಳೆಯ.&lt;br /&gt;ಈ ಎಲ್ಲ ವಿಷಯಗಳನ್ನೂ ನಾನೆಂದೂ ಯೋಚಿಸಿರಲೆ ಇಲ್ಲ. ಅವನು ನನ್ನ ಸ್ನೇಹಿತನಾಗಿರುವುದು, ಮತ್ತು ಮನಸ್ಸಿಗೆ ಬಂದ ವಿಷ್ಯಗಳನ್ನ, ಹಸಿರನ್ನ, ಭಾವೋದ್ವೇಗಗಳನ್ನ, ಪಯಣವನ್ನ, ಫೋಟೋಗಳನ್ನ, ಮತ್ತು ಎಷ್ಟೊಂದೆಲ್ಲ ಮಾತುಕತೆಗಳನ್ನ, ವಿಶೇಷವಾಗಿ ಅವನಮ್ಮ ಮಾಡಿಕೊಟ್ಟ ಅದ್ಭುತ ತಿಂಡಿಗಳನ್ನ ಹಂಚಿಕೊಂಡು ತಿನ್ನುವಾಗೆಲ್ಲ ಆ ಸಂಬಂಧ ಎಷ್ಟು ಸಹಜವಾಗಿ ಆಪ್ತವಾಗಿತ್ತು ಅಂದರೆ ಅದಕ್ಕೆ ವಿಶ್ಲೇಷಣೆಯ, ಆಲೋಚನೆಯ ಅವಶ್ಯಕತೆ ಇರಲಿಲ್ಲ. ಅದು ತನ್ನಿಂತಾನೇ ಅವತ್ತು ತಪ್ಪಿಸುಕೊಳ್ಳುತ್ತಾ ಹೊರಳಿನಿಂತ ಮೆಟ್ಟಿಲು ದಾರಿಯನ್ನ ಹತ್ತಿ, ಇಬ್ಬರ ಒಳಜಗತ್ತಿನಲ್ಲಿ ಒಂದು ಆಪ್ತನೆಲೆ ಕಂಡುಕೊಂಡು ಬಿಟ್ಟಿತ್ತು.&lt;br /&gt;ಈಗ ಕೆಲತಿಂಗಳುಗಳ ಮುಂಚೆ ಅವನು ಬೇರೆ ಕೆಲಸ, ಬೇರೆ ಊರು, ಬೇರೆಯದೇ ಅಕ್ಷಾಂಶಕ್ಕೆ ಹೊರಡುವ ಮಾತು ಬಂದಾಗ ಎರಡು ದಿನ ನನಗೆ ಪ್ರತಿಸ್ಪಂದನೆಯೇ ಹೊಳೆಯಲಿಲ್ಲ.&lt;br /&gt;ಬೇಸರವಾದ ಕೂಡಲೆ, ಹಸಿವಾದ ಕೂಡಲೆ, ಪಯಣದ ಯೋಚನೆ ಬಂದಕೂಡಲೇ ಮತ್ತು ಪಯಣವೊಂದರಿಂದ ನಾನಾಗಲೀ ಅವನಾಗಲೀ ವಾಪಸ್ ಬಂದ ಕೂಡಲೆ, ಹಬ್ಬದ ಮರುದಿನ, ಹೊಸ ಓದಿನ ಮರುಕ್ಷಣ, ಫ್ಲಿಕರ್ ಅಪ್ಲೋಡ್ ಆದಕೂಡಲೇ ಅಲ್ಲಿ ಅವನ ಕ್ಯೂಬಿನ ಗೋಡೆಗಳಿಗೊರಗಿ ಒಂದಿಷ್ಟು ಹೊತ್ತು ಮಾತನಾಡುವುದಿತ್ತು. ಅದು ಹೆಚ್ಚು ಕಮ್ಮಿ ವೈಸಿವರ್ಸಾ ಕೂಡ.&lt;br /&gt;ದಿನದಿನವೂ ನೋಡದೆ ಇದ್ದರೂ ಅಲ್ಲೆಲ್ಲೋ ಕಂಡೊಡನೆ ಒಂದು ನೆಮ್ಮದಿಯ ನಗೆ ಹಿತವಾದ ನೋಟವಿರುತ್ತಿತ್ತು. ಅವನು ವೀಕೆಂಡಿನ ಹೊಸಚಾರಣದ ಪ್ಲಾನು ಹೇಳುತ್ತಿದ್ದಂತೆ ಕೇಳುವುದಿಲ್ಲ ಎಂಬ ಹುಸಿಮುನಿಸಿನ ನನ್ನ ಮೊಗವಾಡದ ಹಿಂದೆ ಕಾತರದ ಕಿವಿಯಿತ್ತು. ಅವನ ಹಿರಿನಗುವಿನ ಒಳಗೆ ನನ್ನ ಕೇಳುಗಿವಿಗೆ ಕತೆಯುಣ್ಣಿಸುವ ಅಕ್ಕರೆಯಿರುತ್ತಿತ್ತು.&lt;br /&gt;ಕನ್ನಡದ ಘಟ್ಟ ಕಾಡುಗಳ ನೆನಪು, ಹಸಿರಿನ ಮಾತು, ವನಸಿರಿಯ ಚಿತ್ರಗಳು, ಓದು-ಬರಹ ಎಲ್ಲಕ್ಕೂ ಒಂದು ಸಂವೇದನಾಶೀಲ ಕಟ್ಟೆಯಂತೆ (ಸೆನ್ಸಿಬಲ್ ಕಾರ್ನರ್ ಈಸ್ ಮೋರ್ ಕರೆಕ್ಟ್) ಒದಗಿದ, ನನ್ನ ತಮ್ಮಮತ್ತುಬಾಳಗೆಳೆಯನ ಅಂಶಗಳನ್ನು ಅಷ್ಟಷ್ಟು ಬೆರೆಸಿ ಮಾಡಿದಂತೆನಿಸುವ ಈ ಕಿರಿಯ ಗೆಳೆಯ ಇನ್ನು ಏಳು ಸಮುದ್ರದಾಚೆಗಿನ ರಾಜಕುಮಾರ.&lt;br /&gt;ಚಾಟಿ’ದೆ ಎನ್ನುವುದು ಮೇಲಿನ ಮಾತು. ನಮ್ಮ ಭಾವಜಗತ್ತಿಗೆ ಹೊಸ ಸೇತುವೆ ಬೇಕಿಲ್ಲ. ಆದರೂ ಭೌತಿಕ ಜಗತ್ತಿನಲ್ಲಿದು ದೂರದ ಬದುಕು. ಹೊರಗೆ ಮಳೆ ಹನಿಯುತ್ತಿದ್ದರೂ ಒಳಗೆ ಗಾಜಿನ ಗೋಡೆಯೀಚೆ ಕುಳಿತವಳಿಗೆ ಮುಟ್ಟಲಾಗದೆ ಉಳಿಯುವ ಸಾದೃಶ್ಯವೇಕೋ ನೆನಪಾಗುತ್ತಿದೆ.&lt;br /&gt;ಇಲ್ಲಿಯವರೆಗೆ ಅನುಭವಿಸಿದ ಸ್ನೇಹದ ಕ್ಷಣಗಳು ಇನ್ನು ಮುಂದಿನ ಅಂತರವನ್ನ ತುಂಬಿಕೊಡುವಷ್ಟು ಸಶಕ್ತವಾಗಿರುವ ಅರಿವು ಈ ವಿದಾಯವನ್ನ ಸಹನೀಯಗೊಳಿಸುತ್ತಿದೆ.&lt;br /&gt;ನಾನು ತುಂಬ ಇಷ್ಟಪಟ್ಟ ಸೆಪ್ಟೆಂಬರು ಅದ್ಯಾಕೋ ಈ ವರ್ಷ ಇದ್ದಕ್ಕಿದ್ದಂತೆ ವಿದಾಯದ ತಿಂಗಳಾಗಿ ಬದಲಾಗಿಬಿಟ್ಟಿದೆ.&lt;br /&gt;ಶ್ರಾವಣದ ಕೊನೆ ಕೊನೆಗೆ ಕಳೆದ ಕಾಲದ ಕೊಂಡಿಗಳು ಒಂದೊಂದಾಗಿ ಜರುಗುವಾಗ ಒಳಗೆ ಮನದಲ್ಲಿ ಎಲೆಯುದುರುವ ಕಾಲ ನಡೆಯುತ್ತಿದೆ. ಕಳೆದ ದಿನಗಳ ಹಚ್ಚಹಸಿರಿನ ನೆನಪು, ಅಕ್ಕರೆಯ ದೀಪದ ಬೆಳಕಲ್ಲಿ ಬಂಗಾರದಂತೆ ಹೊಳೆಯುತ್ತಿವೆ.&lt;br /&gt;ವಿದಾಯದ ಮಬ್ಬುಗತ್ತಲಿಗೆ ಬೆಳಕಾಗಿ ನಿಲ್ಲುವುದೆ ನೆನಪು?!&lt;br /&gt;ಉಳಿದದ್ದೇನೇ ಇರಲಿ.&lt;br /&gt;ನಾನು ಸಿರಿವಂತೆ.&lt;br /&gt;ಹಿರಿತನದ ಹಿರಿಕಿರಿಯ ಜೀವಗಳ ಗೆಳೆತನದ ಡೆಪಾಸಿಟ್ಟುಗಳು&lt;br /&gt;ಒಳಗೆ ಕಾಲನ ತಿರುಪಿಗೆ ಸಿಕ್ಕದಂತೆ ಬೆಚ್ಚಗೆ ಮರಿಹಾಕುತ್ತಲಿವೆ ನಿರಂತರ.&lt;br /&gt;&lt;br /&gt;ನಲ್ಮೆಯ ಗೆಳೆಯಾ,&lt;br /&gt;ಅಕ್ಕರೆಯ ಅಪ್ಪುಗೆಯ ವಿದಾಯ.&lt;br /&gt;ಅಮ್ಮ ಅಪ್ಪನಿಟ್ಟ ಹೆಸರು&lt;br /&gt;ಅನ್ವರ್ಥವಾಗಲಿ - ಸುಜಯ.&lt;br /&gt;ಒಳಿತು, ನೆಮ್ಮದಿ,&lt;br /&gt;ಸಂಕಟವ ಸಹಿಸುವ ಶಕ್ತಿ&lt;br /&gt;ನೋವಿನ ಕ್ಷಣಗಳನ್ನ ಮರೆಸುವಷ್ಟು ನಲಿವು&lt;br /&gt;ನಿನ್ನದಾಗಿರಲಿ,&lt;br /&gt;ಅವಳು ಸ್ವಲ್ಪ ಜಾಸ್ತಿನೇ ಬೇಗ ಸಿಗಲಿ,&lt;br /&gt;ಎಂಬುದೆನ್ನ ಆಶಯ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-5708717380980758338?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/5708717380980758338/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=5708717380980758338' title='10 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/5708717380980758338'/><link rel='self' type='application/atom+xml' href='http://www.blogger.com/feeds/4515791944382207090/posts/default/5708717380980758338'/><link rel='alternate' type='text/html' href='http://nenapu-nevarike.blogspot.com/2010/09/blog-post_07.html' title='ಶ್ರಾವಣದಲ್ಲೇ ಮಾಗಿ!'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>10</thr:total></entry><entry><id>tag:blogger.com,1999:blog-4515791944382207090.post-4525314879379416075</id><published>2010-09-01T05:18:00.000-07:00</published><updated>2010-09-01T21:10:57.375-07:00</updated><category scheme='http://www.blogger.com/atom/ns#' term='JEAN'/><title type='text'>ಚೈತನ್ಯದ ಸಿರಿಬುಗ್ಗೆಗೊಂದು ನವುರು ವಿದಾಯ</title><content type='html'>&lt;p&gt;ಮಳೆಗಾಲ ಅಂತ ಕರೆಯಲು ಬರದ ಆದರೆ ಆಗಾಗ ಸಿಕ್ಕಾಪಟ್ಟೆ ಮಳೆಸುರಿದು ಮೋಡ ಮುಚ್ಚಿಕೊಳ್ಳುವ ಈ ದಿನಗಳಲ್ಲಿ, ನನ್ನ ಕಾರ್ಯಕ್ಷೇತ್ರದ ಒಂದು ಹೊಂಗಿರಣ ದೂರದ ಪಥದೆಡೆಗೆ ಹೊರಟಿದೆ. ಸ್ನೇಹವೆಂದು ಹೇಳಲು ಬರದ, ಆದರೆ ವ್ಯಾವಹಾರಿಕ ಸಂಬಂಧವನ್ನು ಮೀರಿದ, ಅಚ್ಚರಿ-ಮೆಚ್ಚುಗೆ ಮತ್ತು ಅಕ್ಕರೆ ತುಂಬಿರುವ ಸಂಬಂಧವೊಂದು ದಿಕ್ಕು ಬದಲಿಸುತ್ತಿದೆ. ಕಣ್ಣಿದಿರುಗಿರುವುದೇ ಸಂಬಂಧ ಎಂಬ ವ್ಯಾಖ್ಯಾನದಿಂದ ನಾವು ನೆಟ್ ಯುಗದ ಮಂದಿ ಹೊರಬಂದು ತುಂಬ ವರ್ಷಗಳಾದವು. ಸಮಭಾಜಕವೃತ್ತದ ಇಕ್ಕೆಲಗಳಲ್ಲು ಚಾಚಿನಿಂತ ಸ್ನೇಹದ ಹರವು, ಸಂಬಂಧಗಳ ಹರಿವು ಪುಟ್ಟ ಮನೆಯ ಮೂಲೆಯ ಕಂಪ್ಯೂಟರ್ ಪರದೆಯ ಮೇಲೆ ವಿಸ್ತರಿಸುತ್ತಿದೆ.&lt;br /&gt;ಆದರೆ ಈಗ ನಾಲ್ಕೂವರೆ ವರ್ಷಗಳಿಗೂ ಮಿಕ್ಕಿ ದಿನದಿನವೂ ಒಡನಾಡಿದ ಹಿರಿಯ ಸಹೋದ್ಯೋಗಿ ಕಾರ್ಯಕ್ಷೇತ್ರದ ನಿಲುವುಗಳಿಂದಾಗಿ ದೂರವಾಗಲಿದ್ದಾರೆ. ವಯಸ್ಸಿನ ಅಂತರಗಳನ್ನ ದಾಟಿ ನಮ್ಮ ಮನಮನದ ಮೂಲೆಯಲ್ಲಿ ಉತ್ಸಾಹದಿಂದ ಓಡಾಡಿ, ಬೇಕೋ ಬೇಡವೋ ನನ್ನಂತಹ ಮುಚ್ಚುಗ ಸ್ವಭಾವದವಳನ್ನೂ ಎಲ್ಲರೊಡನೆ ಬೆರೆಯುವಂತೆ ಮಾಡಿದ, ಸಕಲ ಆಟಗಳ ಮುಂಚೂಣಿಯಲ್ಲಿ ಓಡುವ, ಚೈತನ್ಯವನ್ನು ಜೀನುಗಳಲ್ಲಿಯೇ ಹೊತ್ತುಕೊಂಡು ಬಂದಿರಬಹುದಾದ ಈ ಒಡನಾಡಿ ಮುಂದಿನ ಕೆಲದಿನಗಳಲ್ಲಿ ಬೇರೆ ಹೋಗಲಿದ್ದಾರೆ. ಸಹೋದ್ಯೋಗಿ ಎಂದರೆ ನಮ್ಮ ನಡುವಿನ ಅನುಬಂಧವನ್ನು ದೂರವಿರಿಸಿದಂತೆ, ಹಿರಿಯಕ್ಕನೆಂದರೆ ಆ ಮಗುಸದೃಶ ಚೈತನ್ಯಕ್ಕೆ ಸರಪಳಿ ಬಿಗಿದಂತೆ, ಸ್ನೇಹಿತೆ ಎನ್ನಲು ಹೋದರೆ ಆಕೆಯ ತಿಳುವಳಿಕೆ ಮತ್ತು ಪ್ರೌಢತೆಯನ್ನ ಕಿರಿದುಗೊಳಿಸಿದಂತೆ, ಇವೆಲ್ಲವನ್ನೂ ಮೀರಿ ಅಳತೆಗಳನ್ನು ಹೊರತಾಗಿಸಿ ಜೊತೆಜೊತೆಗೆ ನಡೆದು ದಾರಿ ಹೊರಳುವಲ್ಲಿ ನಗೆಮೊಗದಿ ಭಾರಹೃದಯದಿ ಹೊರಡುತ್ತಿರುವ ಈ ಮೂರ್ತರೂಪ ಜೀವನ್ಮುಖತೆಯನ್ನ ಏನೆಂದು ಕರೆಯಲಿ ಹೊಳೆಯುತ್ತಿಲ್ಲ.&lt;br /&gt;ಬದಲಾವಣೆಯೆ ಜಗದ ನಿಯಮ, ಇಲ್ಲಿ ಯಾರೂ ಮುಖ್ಯರಲ್ಲ ಎಂಬ ಅಲಿಖಿತ ಕಾರ್ಪೋರೇಟ್ ನಿಯಮಗಳು ಅರಿವು ಬೆನ್ನಿಗಿದ್ದೂ ಈ ವಿದಾಯ, ಈ ಹೊರಳುವಿಕೆ ಮನಸ್ಸಿಗೆ ಅತ್ಯಂತ ತ್ರಾಸು ಕೊಡುತ್ತಿದೆ. ಇನ್ನೊಂದೆರಡು ವಾರ ಸುತ್ತಲಿನ ವಾತಾವರಣ ಭಿನ್ನವಾಗೆನಿಸಿ, ಮತ್ತದೇ ಏಕತಾನತೆಗೆ ಹೊರಳಿಕೊಳ್ಳುವುದು ನನಗೆ ಗೊತ್ತು. ಆದರೆ ಈ ಚೈತನ್ಯ ಬರಿಯ ಆಫೀಸು ಸಮಯದಲ್ಲಿ ಮಾತ್ರ ನನ್ನ ಮೇಲೆ ಪ್ರಭಾವ ಬೀರಿದ್ದರೆ ಎರಡುವಾರದ ಕೊರಗು ಕರಗಿ ಹೊಸಗಾಳಿ ಹೊಸದಿನಚರಿಗೆ ಮನ ಒಗ್ಗಿಕೊಳ್ಳುತ್ತಿತ್ತೇನೋ.&lt;br /&gt;ಚಿಕ್ಕಂದಿನಲ್ಲಿ ಎಲ್ಲೋ ಯಾವುದೋ ಮನೆಯಂಗಳದ ಅಂಚಿಗೆ ಒತ್ತಾಗಿ ಬೆಳೆದು ಘಮ್ಮಗೆ ಅರಳಿದ ಸುಳಿಹೂವಿನ ಗೊಂಚಲು ಮತ್ತದರ ಘಮ, ಇವತ್ತಿಗೂ ಯಾವುದೇ ಆಹ್ಲಾದದ ಸಂಗತಿ ಸಂಭವಿಸಿದಾಗ ನನ್ನನ್ನು ಆವರಿಸಿಕೊಳ್ಳುತ್ತದೆ. ಉಂಹೂಂ ಅಷ್ಟು ಹೂಗಿಡಗಳ ರಾಶಿ ನಮ್ಮನೆಯಂಗಳದಲ್ಲಿದ್ದರೂ ಒಂದು ಸುಳಿಹೂವಿನ ಗಿಡವೂ ಇರಲಿಲ್ಲ. ಅದ್ಯಾರ ಮನೆಯ ಅಂಗಳದಂಚೋ ಗೊತ್ತಿಲ್ಲ ಕಂಪೌಂಡ್ ಮೂಲೆಯಲ್ಲಿ ಒತ್ತಾಗಿ ಬೆಳೆದ ಪೊದೆಗಳೂ ಅವುಗಳಿಂದ ಪರಿಮಳವೇ ನಾಜೂಕು ಬಳುಕು ಪಡೆದು ಹೊರಟಂತೆ ಎಸಳು ಎಸಳಾಗಿ ಅರಳಿಕೊಂಡಿದ್ದ ಸುಳಿಹೂವಿನ ಗೊಂಚಲುಗಳೂ, ಅಷ್ಟು ದೂರಕ್ಕೆ ನಡೆದರೂ ಅವುಗಳಿಂದ ತೇಲಿಬರುತ್ತಿದ್ದ ಪರಿಮಳವೂ ಅವತ್ತು ನೋಡಿದ್ದಕ್ಕಿಂತ ಗಾಢವಾಗಿ ನನ್ನ ಭಿತ್ತಿಯಲ್ಲಿ ಅಚ್ಚೊತ್ತಿ ಕೂತಿದೆ. ಎಷ್ಟೇ ಗಬ್ಬೆದ್ದು ಹೋಗಿದೆ ಅಂತ ಬಯ್ದುಕೊಂಡಿರುವ ಈ ಅಡ್ಡಾದಿಡ್ಡಿ ಬದುಕಿನ ಅನಿವಾರ್ಯ ಅಯಾಚಿತ ದಿನಚರಿಯಲ್ಲಿ ಯಾವುದೋ ಬಗೆಯಲ್ಲಿ ಆ ಆಹ್ಲಾದ ಮರುಕಳಿಸುತ್ತಲೇ ಇದೆ. ಇರುತ್ತದೆ.&lt;br /&gt;ಹಾಗೆಯೇ ಈ ಜೀವನ್ಮುಖೀ ಚೈತನ್ಯ ದಿನದಿನದ ಕಾರ್ಯಕ್ಷಮತೆಯ ಮೂಲಕ, ಅಂತಃಕರಣದ ಮೂಲಕ, ಗಟ್ಟಿಯೆಂದರೆ ಗಟ್ಟಿ ಅಂತ ಯಾರೂ ಥಟ್ಟನೆ ಹೇಳಿಬಿಡಬಹುದಾದಷ್ಟು ಮನೋಸ್ಥೈರ್ಯದ ಮೂಲಕ, ಹೊಸತನ್ನು ಸದಾ ಹುಡುಕುವ ಅನ್ವೇಷಣಾಸಕ್ತಿಯ ಮೂಲಕ, ಅಂದುಕೊಂಡಿದ್ದನ್ನು ಮಾಡಿಯೇ ಬಿಡುವ ಛಲದ ಮೂಲಕ, ನೋವು ಇರುವುದು ಬೆನ್ನಿಗೆ ಕಟ್ಟಿಕೊಂಡು ಹೋರಾಡಲಷ್ಟೇ - ನಗುವನ್ನು ಹುದುಗಿಸಿಡಬೇಕಿಲ್ಲ ಅಂತ ತೋರಿಸಿಕೊಡುವ ಮೂಲಕ, ಆತ್ಮಸಾಕ್ಷಿಗೆ ತಕ್ಕಂತೆ ಬದುಕು - be true to yourself - ಎಂಬುದನ್ನ ಇಂಚಿಂಚೂ ಸಾಧಿಸಿ ತೋರಿಸುವ ಇವರಿಂದ ನಾನು ಕಲಿತದ್ದು ಇಷ್ಟೇ, ಅರ್ಥೈಸಿಕೊಂಡಿದ್ದು ಇಷ್ಟೇ ಎಂದು ಹೇಳಲಿಕ್ಕಿಲ್ಲ. ಇವರು ಇನ್ನು ನನ್ನ ದಿನಚರಿಯ ಮೂರ್ತರೂಪದಲ್ಲಿರುವುದಿಲ್ಲ ಎಂಬುದಷ್ಟೇ ನಿಜ.&lt;br /&gt;ನನ್ನ ಬದುಕಿನ ಅಂತಃಪ್ರಜ್ಞೆಯನ್ನು ಇಷ್ಟೊಂದು ಪ್ರಭಾವಿಸಿದ ಈಕೆ ನನ್ನ ನಡೆನುಡಿಗಳಲ್ಲಿ ಅಂದೆಂದೋ ಹುಟ್ಟಿದ ಸುಳಿಹೂವಿನ ಗಂಧದಂತೆಯೇ ಆವರಿಸಿಕೊಂಡಿರುತ್ತಾರೆ ಎಂಬ ಅರಿವು ಈ ವಿದಾಯವನ್ನ ಸಹನೀಯವಾಗಿಸಿದೆ.&lt;br /&gt;ಈ ಚೇತನದ ಬಗ್ಗೆ ಮಾತಲ್ಲಿ ಹಿಡಿಯಬಹುದಾದಷ್ಟನ್ನು ಇಲ್ಲಿಡುವ ಪ್ರಯತ್ನ ಮಾಡಿದ್ದೇನೆ. ಮಾತಿಗೆ ಸಿಕ್ಕದ್ದು ಅಳವಿಗೆ ಮೀರಿದ್ದು ಇನ್ನೂ ಬಹಳವಿದೆ.&lt;/p&gt;&lt;p&gt;&lt;br /&gt;&lt;a href="http://sites.google.com/site/wequill/jean"&gt;ಚೈತನ್ಯದ ಸಿರಿಬುಗ್ಗೆಯೇ,&lt;br /&gt;&lt;/a&gt;ನಿಮಗೆ ನಲಿವು ನೆಮ್ಮದಿಯ ಆಶಿಸುತ್ತಾ&lt;br /&gt;ಅಕ್ಕರೆ,&lt;br /&gt;ಕಿರಿಮುತ್ತು,&lt;br /&gt;ಬಿರಿನಗು,&lt;br /&gt;ಹಿರಿಯಪ್ಪುಗೆ&lt;br /&gt;ಮತ್ತು ಆಹ್ಲಾದದ ಗೊಂಚಲುಗಳ ಹಿಂದ&lt;br /&gt;ಅಡಗಿಸಿಟ್ಟ ಬಿಸಿಕಂಬನಿಯೊಡನೆ&lt;br /&gt;ನವುರಾದ ವಿದಾಯ.&lt;br /&gt;ಮತ್ತೆ ಮತ್ತೆ ಸಿಗೋಣ.&lt;br /&gt;Dreams are given to u only to make them come true.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-4525314879379416075?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/4525314879379416075/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=4525314879379416075' title='1 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/4525314879379416075'/><link rel='self' type='application/atom+xml' href='http://www.blogger.com/feeds/4515791944382207090/posts/default/4525314879379416075'/><link rel='alternate' type='text/html' href='http://nenapu-nevarike.blogspot.com/2010/09/blog-post.html' title='ಚೈತನ್ಯದ ಸಿರಿಬುಗ್ಗೆಗೊಂದು ನವುರು ವಿದಾಯ'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-4515791944382207090.post-2945076287621223997</id><published>2010-08-02T03:03:00.000-07:00</published><updated>2010-08-02T03:07:34.325-07:00</updated><category scheme='http://www.blogger.com/atom/ns#' term='ಅಸ್ತ ವ್ಯಸ್ತ'/><title type='text'>ವಿಕ್ಷಿಪ್ತ, ಅ-ಕ್ಷರ..</title><content type='html'>&lt;span style="color:#000000;"&gt;ಆಶಾಢದ ಕೊನೆಗೆ&lt;br /&gt;ತೆರೆದಂತೆ ಕಂಡ&lt;br /&gt;ತುಸು ಹೊಸ ದಾರಿ&lt;br /&gt;ಸುತ್ತಿ ಬಳಸಿ ನಡೆದು&lt;br /&gt;ಕೊನೆಗೆ&lt;br /&gt;ಹಳೆಯ ಹೆದ್ದಾರಿಗಿಳಿದು&lt;br /&gt;ಪಯಣ ಅಸಹನೀಯವಾಗಿ&lt;br /&gt;ನಿಲ್ದಾಣದ ನೆರಳಿಗಿಳಿಯದೆ&lt;br /&gt;ಕವಲೊಡೆದು&lt;br /&gt;ಹೊರಟಾಗ&lt;br /&gt;ಕಣ್ಣ ಕೊನೆಗೆ&lt;br /&gt;ಶ್ರಾವಣದ ಹನಿ.&lt;br /&gt;ಏನ ಹೇಳಲಿ&lt;br /&gt;ಮತ್ತೆ ಮತ್ತೆ -&lt;br /&gt;ಬರ’ದ ಬದುಕಿಗೆ&lt;br /&gt;ನೆರೆಹಾವಳಿಯ ನೆರವು&lt;br /&gt;ನೆನಪು ಸಂತ್ರಸ್ತ,&lt;br /&gt;ಆ ಕಳೆದ ಕಾಲ ವ್ಯಸ್ತ, ವ್ಯರ್ಥ!&lt;br /&gt;ಋತುವಿಲಾಸಕ್ಕೆ&lt;br /&gt;ಸಂದ&lt;br /&gt;ವಿಕ್ಷಿಪ್ತ ವಿಲಾಪವಿದು&lt;br /&gt;ಪ್ರತೀ ತಿಥಿಯಲ್ಲೂ&lt;br /&gt;ಅ-ಕ್ಷರವಾಗುತ್ತಾ&lt;br /&gt;ಅದು ಹೇಗೋ&lt;br /&gt;ಒಳಗಿನ ಕುದಿ ಕಳೆದು&lt;br /&gt;ಆರುತಿರುವ ಬೆಂಕಿಯಂತಹ ನೆನಪು! &lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-2945076287621223997?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/2945076287621223997/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=2945076287621223997' title='8 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/2945076287621223997'/><link rel='self' type='application/atom+xml' href='http://www.blogger.com/feeds/4515791944382207090/posts/default/2945076287621223997'/><link rel='alternate' type='text/html' href='http://nenapu-nevarike.blogspot.com/2010/08/blog-post.html' title='ವಿಕ್ಷಿಪ್ತ, ಅ-ಕ್ಷರ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>8</thr:total></entry><entry><id>tag:blogger.com,1999:blog-4515791944382207090.post-6043918376378536442</id><published>2010-07-09T03:16:00.000-07:00</published><updated>2010-07-09T03:19:20.372-07:00</updated><category scheme='http://www.blogger.com/atom/ns#' term='ಅಮ್ಮಮ್ಮ'/><category scheme='http://www.blogger.com/atom/ns#' term='ನೆನಪು'/><category scheme='http://www.blogger.com/atom/ns#' term='ಅಶ್ರುತ ಅನುರಣನ'/><title type='text'>ನೆನಪು ನೇವರಿಕೆ</title><content type='html'>ಅಮ್ಮನಿಲ್ಲದೆ ನಿದ್ದೆ ಬರಲೊಲ್ಲದೆಂಬವಳ&lt;br /&gt;ಮಗ್ಗುಲಿಗೆ ಅವುಚಿ ಮಲಗಿಸಿ;&lt;br /&gt;ಶಾಲೆಯಂಗಳದ ಧೂಳು&lt;br /&gt;ಹೊದ್ದು ಮನೆಗೆ ಬರುವವಳ&lt;br /&gt;ಬಾಯಿ ಬಡಿಗೆಗೆ&lt;br /&gt;ಎರಡು ಹಿಡಿ ಅವಲಕ್ಕಿ&lt;br /&gt;ಮೇಲೆ ಮೊಸರು ಬೆಲ್ಲ ಕರುಣಿಸಿ;&lt;br /&gt;ರಾತ್ರಿಯಿಡೀ ಯಕ್ಷಗಾನ ನೋಡಿ&lt;br /&gt;ತಲೆನೋವು ಬಂತೇ&lt;br /&gt;ಅರ್ಧ ಕಡಿ ನಿಂಬೆಹಣ್ಣೂ &lt;br /&gt;ಎರಡು ಚಮಚ ಕೊಬ್ರಿ ಎಣ್ಣೆ&lt;br /&gt;ಹಚ್ಚಿ ತಿಕ್ಕಿ,&lt;br /&gt;ಬಿಸಿ ಬಿಸಿ ಸುರಿನೀರ ತಲೆಸ್ನಾನ;&lt;br /&gt;ಕುಣಿಕುಣಿದು ನಲಿದ ಕಾಲು ನೋವೆ&lt;br /&gt;ರಬ್ನಿಸಾಲ್ ಹಚ್ಚಿ ತಿಕ್ಕಿ,&lt;br /&gt;ಹಳೆಸೀರೆಯಿಂದ ಕಿತ್ತ ಫಾಲ್ಸ್&lt;br /&gt;ಸುತ್ತಿ;&lt;br /&gt;ಇವತ್ತು ಪರೀಕ್ಷೆ, &lt;br /&gt;ಬೆಳಗಿಂಜಾವಕ್ಕೆದ್ದು&lt;br /&gt;ಓದುತ್ತ ಕೂತವಳ&lt;br /&gt;ಕೈಗೆ ಬಿಸಿಬಿಸಿ ಚಾ ಹಿಡಿಸಿ;&lt;br /&gt;ಮಧ್ಯಾಹ್ನದ ಊಟ ಗಡದ್ದಾಯಿತೇ&lt;br /&gt;ಮಡಿಚಿ ರೆಡಿ ಮಾಡಿಟ್ಟ&lt;br /&gt;ಕವಳದಲ್ಲರ್ಧ ಸಲ್ಲಿಸಿ;&lt;br /&gt;ಬೆಳೆಸಿದವಳು,&lt;br /&gt;ಬೆಳೆದು ನಿಂತ ಮೇಲೆ&lt;br /&gt;ಅರೆಬೆರಗು,ಅರೆಮೆಚ್ಚುಗೆ,ಉಳಿದೆಲ್ಲ ಪ್ರೀತಿ&lt;br /&gt;ಎರೆದವಳು,&lt;br /&gt;ವರ್ಷವೆರಡರ ಹಿಂದೆ&lt;br /&gt;ಯಾತ್ರೆ ಮುಗಿಸಿ ಹೋಗಿಬಿಟ್ಟಳು.&lt;br /&gt;ಬಿಳಿಬಿಳಿ ಕಣ್ಣು,ಪುಟ್ಟ ಜಡೆ,&lt;br /&gt;ಸುಕ್ಕು ಮೈ, ಮುಗ್ಧ ನಗು&lt;br /&gt;ಎಲ್ಲ ಪ್ರೀತ್ಯಾದರಗಳ&lt;br /&gt;ನೆನಪಿನಂಚಿಗೆ ಹೊಳೆದು&lt;br /&gt;ನಿಲ್ಲುವುದು&lt;br /&gt;ಹೊರಡುವ ಮೊದಲು&lt;br /&gt;ಕಿರಿಹಿಡಿದು ನೋಡಿದ ನೋಟ&lt;br /&gt;ಏನು ಹೇಳಬೇಕಿತ್ತು ಅಮ್ಮಮ್ಮಾ?!&lt;br /&gt;ನನಗೆ ಈಗ ಅನ್ನಿಸುತ್ತಿರುವುದೆಲ್ಲ&lt;br /&gt;ನೀನು ಹೇಳದೆ ಉಳಿದಿದ್ದಾ!&lt;br /&gt;ಆಚೆಮೊನ್ನೆ ತಿಥಿಯಾಯಿತು,&lt;br /&gt;ನಿನ್ನೆ ವಡೆ,ಸಿಹಿ ಸಿಕ್ಕಿತು.&lt;br /&gt;&lt;br /&gt;ಹತ್ತಕ್ಕೆ ಕಳಕೊಂಡ ಮುಗ್ಧತೆಯ&lt;br /&gt;ಸಾವಿನಂಚು ಮರಳಿ ಕೊಟ್ಟಿತೆ?&lt;br /&gt;ಆಟವಾಡುವ ಮನಸ ಜಗ್ಗಿ ನಿಲ್ಲ್ಲಿಸಿ&lt;br /&gt;ಕೆಲಸಕೆಳೆದ ಕೈಯನ್ನ&lt;br /&gt;ವೃದ್ಧಾಪ್ಯ ಕ್ಷಮಿಸಬಹುದೆ?&lt;br /&gt;ಬದುಕು ಸಲ್ಲಿಸದೆ ಹೋಗಿದ್ದನ್ನು&lt;br /&gt;ತಿಥಿಯಲ್ಲಿ ಪಡೆಯಬಹುದೆ?&lt;br /&gt;ಎಲ್ಲ ವಿಶೇಷ ಸಿಟ್ಟು,ದ್ವೇಷಗಳು&lt;br /&gt;ಕೊನೆಯ ದಿನಗಳಲ್ಲಿ&lt;br /&gt;ನಿನ್ನ "ಹೋಕ್ಯಳ್ಲಿ ಬಿಡು"ವಿನಲ್ಲಿ&lt;br /&gt;ಒಂದೊಂದಾಗಿ ಕಳಚಿಕೊಂಡಾಗ&lt;br /&gt;ಹೀಗಂದುಕೊಂಡೆ,&lt;br /&gt;ಕಾಲ ಮಾಗುತ್ತಾ ಕಳೆಯುತ್ತದೆ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-6043918376378536442?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/6043918376378536442/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=6043918376378536442' title='11 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/6043918376378536442'/><link rel='self' type='application/atom+xml' href='http://www.blogger.com/feeds/4515791944382207090/posts/default/6043918376378536442'/><link rel='alternate' type='text/html' href='http://nenapu-nevarike.blogspot.com/2010/07/blog-post.html' title='ನೆನಪು ನೇವರಿಕೆ'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>11</thr:total></entry><entry><id>tag:blogger.com,1999:blog-4515791944382207090.post-3818570372325073183</id><published>2010-03-04T07:05:00.000-08:00</published><updated>2010-03-04T19:22:06.541-08:00</updated><category scheme='http://www.blogger.com/atom/ns#' term='ಟುಪ್ಪು'/><category scheme='http://www.blogger.com/atom/ns#' term='ಜಾನೇ ಜಾನಾ..'/><title type='text'>ಅಮ್ತಾತ!</title><content type='html'>ಹೋದವಾರ ಒಂದುದಿನ ರಾತ್ರಿಯೂಟ ಮಾಡುತ್ತಿದ್ದೆ. ಅಮ್ಮ ಮಾಡಿಕೊಟ್ಟ ಮಾವಿನಕಾಯಿಗೊಜ್ಜಿನ ಕೊನೆಯ ತುತ್ತುಗಳನ್ನು ಸವಿಯುತ್ತ ಕೂತಿದ್ದೆ. ರಾತ್ರಿ ಹನ್ನೊಂದು ಗಂಟೆ. ನನ್ನ ಮುದ್ದು ರಾಕ್ಷಸಿಗೆ ಊಟ ಮಾಡಿಸಿ, ನೀರು ಕುಡಿಸಿ, ಅಷ್ಟೊತ್ತಿಗೆ ಮನೆಗೆ ಬಂದ ಅವಳ ಅಪ್ಪನಿಗೆ ಊಟ ಬಡಿಸಿ, ಸಂಜೆಯಿಂದ ನಡೆದ ಅವಳ ಆಟಗಳ ಸಮಗ್ರ ವರದಿಯನ್ನು ಒಪ್ಪಿಸಿ ಮುಗಿಸಿ, ನನ್ನ ತಟ್ಟೆಗೆ ಬಡಿಸಿಕೊಳ್ಳುವಾಗ ಅಷ್ಟೊತ್ತಾಗಿತ್ತು.&lt;br /&gt;ಅಪ್ಪನನ್ನ ಒಲಿಸಿ ಮುದ್ದಿಸಿ ತೂಗುಯ್ಯಾಲೆ ಹತ್ತಿಸಿ, ತಾನು ತೊಡೆ ಹತ್ತಿ ಅವಳು ಕೂರುವ ಮರೆವಿನ ಕ್ಷಣಗಳಲ್ಲಿ ನಾನು ಊಟ ಶುರು ಮಾಡಿದ್ದೆ. ಅವಳಿಷ್ಟದ ಒಂದೆರಡು ಹಾಡು ಮುಗಿದವು. ಕಮಲ ನಯನ ಮಾಧವಾ..; ಚನ್ನಪ್ಪ ಚನ್ನಗೌಡ; ನಿಂಬೀಯಾ ಬನಾದ ಮ್ಯಾಗ ಎಲ್ಲ ಆಯಿತು.ಅಷ್ಟೊತ್ತಿಗೆ ಅಲ್ಲೇ ಕುರ್ಚಿಯ ಮೇಲೆ ಕೂತಿದ್ದ ಮೆತ್ತನೆ ನಾಯಿ ನೆನಪಾಗಿ ಅದನ್ನು ಎತ್ತಿಸಿಕೊಂಡು ತೊಡೆಯ ಮೇಲೆ ಇಟ್ಟುಕೊಂಡಾಯಿತು. ಒಂದೆರಡು ಜೀಕು ಮುಗಿಯಿತು. ಬೌ ಬೌ ಸಾಕಾಯಿತು. ಅದನ್ನು ಕೆಳಗೆಸೆದು ಅವಳಷ್ಟೇ ಉದ್ದದ ಐಶು ಗೊಂಬೆಯನ್ನು ಎತ್ತಿಸಿಕೊಂಡಾಯಿತು. ಮತ್ತೊಂದಿಷ್ಟು ತೂಗುವಿಕೆ. ಇನ್ನೆರಡು ಹಾಡು. ಈಗಲಂತೂ ತೊಡೆಯ ಮೇಲೆ ಎಲ್ಲ ತಾಳಗಳೂ ಒಟ್ಟಿಗೆ ಮೇಳ ನಡೆಸಿಯಾಯಿತು. ಆ ಹಾಡು ಮುಗಿದ ಕೂಡಲೆ ಮತ್ತೆ ಅದನ್ನೆ ಹಾಡಲು ಅಪ್ಪನನ್ನು ಪೀಡಿಸಿಯಾಯಿತು. ಸರಿ ಮತ್ತೆ ಹೇಳುತ್ತಾನೆ ಅಪ್ಪ ರಾಗವಾಗಿ -&lt;br /&gt;- ಪಂಡರಾಪುರವೆಂಬ ದೊಡ್ದ ನಗರ&lt;br /&gt;ಅಲ್ಲಿ ವಿಠೋಬನೆಂಬ ಬಲು ಸಾಹುಕಾರ&lt;br /&gt;ವಿಠೋಬನಿರುವುದು ನದಿ ತೀರ&lt;br /&gt;ಅಲ್ಲಿ ಪಂಡರಿ ಭಜನೆಯ ವ್ಯಾಪಾರ...&lt;br /&gt;ಸುಮ್ಮನೆ ಕುಳಿತಿರಲಾಗದ ನಾನು ಇನ್ನೇನು ಕಣ್ಣು ಮುಚ್ಚುತಿದ್ದ ಅವಳನ್ನೇ ನೋಡುತ್ತಾ ಅಪ್ಪನ ಹಾಡಿಗೆ ನನ್ನದೊಂದು ಉಲಿ ಸೇರಿಸಿಬಿಟ್ಟೆ.&lt;br /&gt;ಗುಬ್ಬಕ್ಕನಿರುವುದು ನದಿತೀರ -ಅಲ್ಲಿ ಟುಪ್ಪೂ ಭಜನೆಯ ವ್ಯಾಪಾರ...&lt;br /&gt;ಅಷ್ಟೇ ಅಪ್ಪನ ತೊಡೆಯ ಮೇಲಿಂದ ಟುಪ್ಪೂ ಜೀಕಿಕೊಂಡು ಇಳಿದಾಯಿತು. ಇನ್ನೇನು ಮುಚ್ಚುವಂತಿದ್ದ ಕಣ್ಣುಗಳು ಮತ್ತೆ ದೊಡ್ದ ದೊಡ್ಡಕ್ಕೆ ಹೂವು ಪೂರ್ತಿ ಅರಳಿದಂತೆ ಅರಳಿಕೊಂಡವು. ಅರ್ಧ ರಾತ್ರಿಗರಳುವ ಹೂವು ಯಾವುದದು ಬ್ರಹ್ಮಕಮಲವಲ್ಲವಾ ಅದರ ಘಮವೇ ಆವರಿಸಿಕೊಂಡಂತಾಯಿತು. ಸೊಳ್ಳೆ ಕಚ್ಚದಿರಲಿ ಅಂತ ಹಚ್ಚಿದ್ದ ಜಾನ್ಸನ್ ಬೇಬಿ ಎಣ್ಣೆಯ ಮೆಲು ಆಹ್ಲಾದ ನನ್ನನ್ನ ಸುತ್ತಿಕೊಂಡಿತು. ನನ್ನ ಹತ್ತಿರ ಓಡಿಬಂದು ಕುರ್ಚಿ ಹತ್ತಲು ಒಂದು ಕಾಲು ಮೇಲೆತ್ತಿದಳು.&lt;br /&gt;ಅಷ್ಟೇ ಹಂಗೇ ಸ್ಟಾಚ್ಯೂ ಭಂಗಿಯಲ್ಲಿ ನಿಂತುಕೊಂಡು ಒಂದು ಕೈ ಹಿಂದಕ್ಕೆ ಇಟ್ಟುಕೊಂಡು ಮುದ್ದಾಗಿ ಉಲಿದಳು - ಅಮ್ತಾತ..ನಾನು ಹೌದು ಟುಪ್ಪೂ ತಾತ ಹೈದರಾಬಾದಲ್ಲಿ ಇದಾರೆ ಇಲ್ಲಿಲ್ಲ ಟಾssಟ ಅಂದೆ.&lt;br /&gt;ಅವಳು ತಲೆಯಲ್ಲಾಡಿಸಿ ಮತ್ತೆ ಉಲಿದಳು - ಅಮ್ ತಾತ. ಏನದು ಎಂದು ಕೇಳಿದೆ ಅದೇ ಉಲಿ - ಅಮ್ ತಾತ.&lt;br /&gt;ಏನಿರಬಹುದೋ ಗೊತ್ತಾಗಲಿಲ್ಲ. ಏನು ಹಂಗಂದ್ರೆ ಮತ್ತೆ ಅವಳನ್ನೆ ಕೇಳಿದೆ. ಸಣ್ಣಗೆ ನಗುತ್ತ ಮತ್ತೆ ಉಲಿದಳು - ಅಮ್ ತಾತ. ನನ್ನ ಮುಖ ನೋಡುತ್ತಲೇ ಇದ್ದಳು. ನಂಗೆ ಗೊತ್ತಾಗಲಿಲ್ಲ ಅನ್ನುವುದು ಅವಳಿಗೆ ಗೊತ್ತಾಯಿತು.ಅಲ್ಲೆ ನನ್ನ ಬದಿಯಲ್ಲಿ ಇಟ್ಟುಕೊಂಡಿದ್ದ ಪುಸ್ತಕ ತೋರಿಸುತ್ತ ಹೇಳಿದಳು ಅಮ್ ತಾತ.&lt;br /&gt;ಅಲ್ಲಿದ್ದದ್ದು ಜೋಗಿಯವರ ಕಥಾಸಮಯ ಪುಸ್ತಕ. ಅದರ ಮುಖಪುಟದಲ್ಲಿ ಲಂಕಾದಹನದಲ್ಲಿ ಕಾಲು ಮೇಲೆತ್ತಿ ಬಾಲ ಎತ್ತರಿಸಿ ನಿಂತ ಹನುಮಂತ. ನನ್ನ ಗುಬ್ಬಕ್ಕ ಉಲಿಯುತ್ತಿರುವುದು ಅದನ್ನೇ - ಅಂತಾತ.. ಗೊತ್ತಾಗಲಿ ಅಂತ ಕೈ ಹಿಂದಕ್ಕೆ ಇಟ್ಟುಕೊಂಡು ಬಾಲವನ್ನ ಬೇರೆ ಅಭಿನಯಿಸಿ ತೋರಿಸುತ್ತಿದ್ದಾಳೆ.&lt;br /&gt;ಅಯ್ಯೋ ಮಗುವೆ ಆದರೂ ಗೊತ್ತಾಗಲಿಲ್ಲವಲ್ಲ ಅಂದುಕೊಂಡು ಹನುಮಂತನಾ ಟುಪ್ಪೂ ಅಂದ ಕೂಡಲೆ ಮುಖದಲ್ಲಿ ನಗೆ ಝಗ್ಗನೆ ಬೆಳಕಾಯಿತು. ಅವಳ ಕೆನ್ನೆಯ ಮೇಲೆ ನನ್ನ ತುಟಿಗಳಿದ್ದವು ಅನ್ನುವುದನ್ನೇನು ಹೇಳುವುದು ಬೇಡ ಅಲ್ಲವಾ?&lt;br /&gt;&lt;img id="BLOGGER_PHOTO_ID_5444983957008385378" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 300px; TEXT-ALIGN: center" alt="ಟುಪ್ಪೂ 15ತಿಂಗಳ ಪೋರಿ" src="http://1.bp.blogspot.com/_GMLph4mGk9c/S5B4D2UvhWI/AAAAAAAABPw/kZLFwPoRl5E/s320/amtaata.jpg" border="0" /&gt; ಈ ವಾರವಿಡೀ ತುಂಬ ಕೆಲಸ, ಮನೆಗೆ ಬಂದೂ ಮಾಡುವಷ್ಟು. ತಲೆ ಚಿಟ್ಟು ಹಿಡಿದ ಕ್ಷಣಗಳಲ್ಲಿ ನನಗೆ ನಾನೇ "ಅಂತಾತ" ಅಂತ ಹೇಳಿಕೊಂಡು ಹಗುರಾಗುತ್ತಾ ಬೇಸರದ ಲಂಕೆಯ ಚಡಪಡಿಕೆಗಳನ್ನ ಸುಟ್ಟು ಹಾಕಲು ಅಂತಾತನ ಸಹಾಯ ಕೋರುತ್ತೇನೆ. ಈವಾರ ಅವಳ ತೊದಲು ಬದಲಾಗಿದೆ. ಈಗ ಅಮ್ ತಾತ, ಹಮಾಂತ್ಕನಾಗಿದ್ದಾನೆ. :) ಇದು ಈ ವಾರದ ಕತೆ - ಮುಂದಿನ ವಾರ ಕಪಿಸೇನೆಯೇ ಬಂದರೂ ಬರಬಹುದು. ವಾಲಿ ಸುಗ್ರೀವ ಅಲ್ಲೇ ಮರೆಯಲ್ಲಿ ಕಾಯುತ್ತಿರಬಹುದು..! ಮತ್ತು ನಮ್ಮನೆಯ ಯಾವ ವಸ್ತು ದಹನವಾಗುತ್ತದೆಯೋ ಗೊತ್ತಿಲ್ಲ. :)&lt;br /&gt;&lt;br /&gt;-ಪ್ರೀತಿಯಿಂದ,&lt;br /&gt;ಸಿಂಧು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-3818570372325073183?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/3818570372325073183/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=3818570372325073183' title='27 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/3818570372325073183'/><link rel='self' type='application/atom+xml' href='http://www.blogger.com/feeds/4515791944382207090/posts/default/3818570372325073183'/><link rel='alternate' type='text/html' href='http://nenapu-nevarike.blogspot.com/2010/03/blog-post.html' title='ಅಮ್ತಾತ!'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_GMLph4mGk9c/S5B4D2UvhWI/AAAAAAAABPw/kZLFwPoRl5E/s72-c/amtaata.jpg' height='72' width='72'/><thr:total>27</thr:total></entry><entry><id>tag:blogger.com,1999:blog-4515791944382207090.post-3007253749040325568</id><published>2010-02-12T02:19:00.000-08:00</published><updated>2010-02-12T02:36:32.574-08:00</updated><category scheme='http://www.blogger.com/atom/ns#' term='ಬಿದಿಗೆಯ ಬಿಂಬ'/><title type='text'>ಅರಿಕೆ</title><content type='html'>ಎಷ್ಟು ಪ್ರೀತಿಸ ಬಹುದೋ ನಿನ್ನನ್ನು&lt;br /&gt;ಅದಕ್ಕಿಂತ ಜಾಸ್ತಿಯೇ&lt;br /&gt;ಪ್ರೀತಿಸುವೆ ನಾನು ನಿನ್ನನ್ನು,&lt;br /&gt;ಇದು ಗೊತ್ತಾಗಿದ್ದು&lt;br /&gt;ನಿನ್ನೆ ನಾವಿಬ್ಬರೂ&lt;br /&gt;ಹುಚ್ಚಾಪಟ್ಟೆ ಜಗಳವಾಡಿ&lt;br /&gt;ಮುಸುಡಿ ಮೂರುಕಡೆ ಮಾಡಿಕೊಂಡು&lt;br /&gt;ಕೂತಾಗ.&lt;br /&gt;&lt;br /&gt;ಯೋಚನೆಯ&lt;br /&gt;ಅಲೆಗಳ ಮೇಲೆ&lt;br /&gt;ಎದೆಯೊಸಗೆ ಮೆಲ್ಲಗೆ ಮುಳುಗೇಳುತ್ತಲಿದೆ.&lt;br /&gt;&lt;br /&gt;ನಿನ್ನ&lt;br /&gt;ಸಿಟ್ಟಿನಿಂದ ಉಬ್ಬಿದ ಮುಖ&lt;br /&gt;ಕೆಂಪಿಟ್ಟ ಮೂಗು&lt;br /&gt;ಒಳಗೊಳಗೆ ಬೇಯಿಸುವ ಕುದಿ&lt;br /&gt;ಎಲ್ಲವನ್ನೂ&lt;br /&gt;ಸಂತೈಸುವ ಪ್ರೀತಿ&lt;br /&gt;ನನ್ನ ಇದೀಗಷ್ಟೇ ಸಮಾಧಾನಿಸಿ&lt;br /&gt;ನಿನ್ನೆಡೆಗೇ ಹೊರಟಿದ್ದಾಳೆ&lt;br /&gt;ಒಂದೆರಡು ಕ್ಷಣ ತಾಳು.&lt;br /&gt;&lt;br /&gt;ಜಗತ್ತು ಆಡಿಕೊಂಡು ನಕ್ಕಾಗ&lt;br /&gt;ಜಗ್ಗದೆ&lt;br /&gt;ನನ್ನ ಜೊತೆಗೆ ಬಂದವನೆ,&lt;br /&gt;ನೀನೇ ಅಲ್ಲವೆ ಉಲಿದಿದ್ದು..&lt;br /&gt;"ಲಕ್ಷಾಂತರರು ಹೊರಡುವ ಪಯಣದ&lt;br /&gt;ಗುರಿ ತಲುಪಲು&lt;br /&gt;ಸಾಧ್ಯವಾಗುವುದು ಎಲ್ಲೋ&lt;br /&gt;ಒಬ್ಬಿಬ್ಬರಿಗೆ ಮಾತ್ರ "&lt;br /&gt;ಬದುಕಿನ ವಿಲಕ್ಷಣ ಪಯಣದಲ್ಲಿ&lt;br /&gt;ಕಂಗೆಡದೆ ಉಳಿಯುವುದು ಪ್ರೇಮಿ ಮಾತ್ರ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-3007253749040325568?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/3007253749040325568/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=3007253749040325568' title='7 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/3007253749040325568'/><link rel='self' type='application/atom+xml' href='http://www.blogger.com/feeds/4515791944382207090/posts/default/3007253749040325568'/><link rel='alternate' type='text/html' href='http://nenapu-nevarike.blogspot.com/2010/02/blog-post.html' title='ಅರಿಕೆ'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>7</thr:total></entry><entry><id>tag:blogger.com,1999:blog-4515791944382207090.post-2533473069808413556</id><published>2010-01-18T02:10:00.000-08:00</published><updated>2010-01-18T02:14:15.753-08:00</updated><category scheme='http://www.blogger.com/atom/ns#' term='ಒಂದು ಹಳೆಯ ಕವಿತೆ'/><category scheme='http://www.blogger.com/atom/ns#' term='ಚಿತ್ರಕವನಕ್ಕೆ ಬರೆದಿದ್ದು.'/><title type='text'>ಕವಡೆ ಜ್ಯೋತಿಷ್ಯ..!!!</title><content type='html'>ಕವಡೆ ಬೀಸಿದಾಗಲೆಲ್ಲ&lt;br /&gt;ಬಿದ್ದಿದ್ದು ವಚ್ಚಿ,&lt;br /&gt;ಒಂದೊಂದೇ ಹೆಜ್ಜೆ ಇಟ್ಟು&lt;br /&gt;ಮುನ್ನಡೆದ ಬದುಕ&lt;br /&gt;ಹಾದಿಯ ತುಂಬ&lt;br /&gt;ಬಿಸಿಲು ನೆರಳಾಟ;&lt;br /&gt;&lt;br /&gt;ಯಾರದೋ ಕಣ್ ಸೆಳೆದು,&lt;br /&gt;ಕವಡೆ ಜೋತಿಷ ನುಡಿಯೆ,&lt;br /&gt;ಬರುವ ದಕ್ಷಿಣೆಗೆ&lt;br /&gt;ಸರಿಹೋದೀತು&lt;br /&gt;ಸೆಟ್ಟರಂಗಡಿಯ ಲೆಕ್ಕ.&lt;br /&gt;ದಿನಕೊಂದು ಹೊತ್ತು ಉಂಡರೆ&lt;br /&gt;ಅದೇ ಸುಖ;&lt;br /&gt;ಕವಡೆಯ ಬೀಸಿ&lt;br /&gt;ತಮ್ಮ ನಾಳೆಯ ತಾವೆ ತಿಳಿವವರು&lt;br /&gt;ಕೂರುವರು ಇಲ್ಯಾಕ?!&lt;br /&gt;&lt;br /&gt;ನಮ್ಮ ನಾಳೆ ನಿನ್ನೆಗಳೆಲ್ಲ ಒಂದೇ -&lt;br /&gt;ಇಂದೇ!&lt;br /&gt;ತಿಳಿಯುವ ತಿಣುಕಾಟವಿಲ್ಲ&lt;br /&gt;ಬರಿದೆ&lt;br /&gt;ಬದುಕಬೇಕಿದೆ!&lt;br /&gt;&lt;br /&gt;ಜೋತಿಷ ಕೇಳಿದ ಮಂದಿ&lt;br /&gt;ಪಾರ್ಕು ದಾಟುವ ಮುನ್ನವೆ&lt;br /&gt;ಮರೆತವರು;&lt;br /&gt;ನಾನು ಮರೆಯುವ ಹಾಗಿಲ್ಲ&lt;br /&gt;ನನ್ನ ಮೂಗಿಗೇ ಕವಡೆ...&lt;br /&gt;ಬೀಳಲಿ ಒಂದಾದರೂ&lt;br /&gt;ಚಿತ್ತ!! ಭಾರ!! ಎಂಬಾಸೆ;&lt;br /&gt;ಉಂಹೂಂ -&lt;br /&gt;ಬರೀ ವಚ್ಚಿ,&lt;br /&gt;ಪ್ರತೀ ಸಲಿಯೂ&lt;br /&gt;ಬೆರಳಸಂದಿಯಲೆ ನುಸಿದು ಹೋಗುವ&lt;br /&gt;ಗಿಚ್ಚಿ..&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-2533473069808413556?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/2533473069808413556/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=2533473069808413556' title='14 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/2533473069808413556'/><link rel='self' type='application/atom+xml' href='http://www.blogger.com/feeds/4515791944382207090/posts/default/2533473069808413556'/><link rel='alternate' type='text/html' href='http://nenapu-nevarike.blogspot.com/2010/01/blog-post.html' title='ಕವಡೆ ಜ್ಯೋತಿಷ್ಯ..!!!'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>14</thr:total></entry><entry><id>tag:blogger.com,1999:blog-4515791944382207090.post-3013382829611644806</id><published>2009-12-29T19:15:00.000-08:00</published><updated>2009-12-29T19:23:51.044-08:00</updated><category scheme='http://www.blogger.com/atom/ns#' term='ವಿಷ್ಣು  - ಕೆಂಡಸಂಪಿಗೆ'/><category scheme='http://www.blogger.com/atom/ns#' term='ಅಶ್ವತ್ಠ್'/><title type='text'>ನೋವಿನೊಡಲಲಿ ನಲಿವಿನ ಹೂವು..</title><content type='html'>ಎಲ್ಲ ಕತ್ತಲ ಕೊನೆಯಲ್ಲೊಂದು ಬೆಳಕಿನ ಕೋಲು, ಬೇಸರದ ಕ್ಷಣಗಳ ಭಾರದ ಮೋಡವ ಇಳುಹಲು ಸುರಿವ ಮಳೆಯ ಆಹ್ಲಾದ,&lt;br /&gt;ಇದೆ ಅಲ್ಲವೆ ಬದುಕು ಎಂಬ ಅರಿವು ಮತ್ತು ಇದೆಯೆ ಬದುಕು ಎಂಬ ಅಚ್ಚರಿ.&lt;br /&gt;ನಾನು ತುಂಬ ಇಷ್ಟಪಟ್ಟ ಅಶ್ವತ್ಥರು ಮತ್ತು ಇಷ್ಟವಾಗಿದ್ದ ವಿಷ್ಣು ಇಬ್ಬರ ನಿರ್ಗಮನದ ಸುದ್ದಿಯ ಕಾರ್ಮೋಡದಂಚಿನ ಬೆಳ್ಳಿಗೆರೆಯಂತೆ ಹೊಳೆಯುತ್ತಿರುವುದು ಇನ್ನೊಂದು ಸುದ್ದಿ - ಸಂಕ್ರಾಂತಿಯ ಕಂಪಿಗೆ ಮತ್ತೆ ಕೆಂಡಸಂಪಿಗೆ&lt;br /&gt;&lt;a href="http://kendasampige.com/article.php?id=2953"&gt;http://kendasampige.com/article.php?id=2953&lt;/a&gt;&lt;br /&gt;&lt;br /&gt;ನೋವುಗಳನ್ನ ಮೀರುವ ಶಕ್ತಿಯನ್ನ ಬಯಸುತ್ತಾ,&lt;br /&gt;&lt;br /&gt;ಪ್ರೀತಿಯಿಂದ,&lt;br /&gt;ಸಿಂಧು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-3013382829611644806?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/3013382829611644806/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=3013382829611644806' title='2 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/3013382829611644806'/><link rel='self' type='application/atom+xml' href='http://www.blogger.com/feeds/4515791944382207090/posts/default/3013382829611644806'/><link rel='alternate' type='text/html' href='http://nenapu-nevarike.blogspot.com/2009/12/blog-post_29.html' title='ನೋವಿನೊಡಲಲಿ ನಲಿವಿನ ಹೂವು..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4515791944382207090.post-3058797664423778737</id><published>2009-12-24T02:43:00.000-08:00</published><updated>2009-12-24T02:49:43.087-08:00</updated><category scheme='http://www.blogger.com/atom/ns#' term='ಜಿ.ಪಿ.ರಾಜರತ್ನಂ.'/><category scheme='http://www.blogger.com/atom/ns#' term='ತುಕ್ಕು'/><title type='text'>ಗುಡಿಸಿಲ್ ಬಾಗಿಲ್ ಬೀಗದ್ ಹಂಗೇ ಮನಸಿನ್ ರಾಗಾನೂ...</title><content type='html'>ಉಪಯೋಗಿಸದೆ ಇಟ್ಟರೆ ಎಲ್ಲವಕ್ಕೂ ತುಕ್ಕು ಹಿಡಿಯುತ್ತದೆ ಅಂತ ಅದ್ಯಾವುದೋ ಕಾಲದಲ್ಲಿ ಕ್ಲಾಸಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿದ್ದಾಗ ಕೇಳಿದ ನೆನಪು. ಇನ್ಯಾವತ್ತೋ ಈ ಬಗ್ಗೆ ಪುಟಗಟ್ಟಲೆ ಬರೆದು ೫ ಮಾರ್ಕು ಗಳಿಸಲು ಹೋರಾಡಿದ್ದ ನೆನಪು. ಬ್ಲಡ್ಡೀ ಕರ್ರೋಸನ್ ಅಂತ ಮಾಸ್ತರರೊಬ್ಬರು ವೀರಾವೇಶಾದಿಂದ ಗಂಟೆಗಟ್ಟಲೆ ಕೊರೆಯುವುದನ್ನ ಅಣಕಿಸಿ ಮುಸಿಮುಸಿ ನಕ್ಕ ನೆನಪು ಇಲ್ಲೇ ಬಗಲಲ್ಲಿ ಹಚ್ಚಗಿದೆ.&lt;br /&gt;&lt;br /&gt;ಈ ಧಾವಂತದ ಬದುಕಿನಲ್ಲಿ – ಸುಮ್ಮನಿದ್ದರೆ ಪಕ್ಕದಲ್ಲಿ ಧಾವಿಸುವವನು ನಿನ್ನ ಮೇಲೆಯೇ ಹಾದು ಹೋಗುತ್ತಾರೆ ಅದಕ್ಕಾಗಿ ನೀನೂ ಧಾವಿಸುತ್ತಿರಬೇಕು ಎಂಬ – ನಿಯಮಗಳ ಬದುಕಿನಲ್ಲಿ ಮಾರ್ದವತೆಗೆ ತುಕ್ಕು ಹಿಡಿದಿದೆ.&lt;br /&gt;ಈಗಷ್ಟೇ ಸಂಜೆಗತ್ತಲು ಕವಿಯುವ ಮೊದಲು ಮಿನರ್ವಾದಿಂದ ಹೊರಟು ಗಾಂಧಿಬಜಾರಿನವರೆಗೂ ಸಾವಧಾನದಿಂದ ಬಂದ ನಡಿಗೆಯ ನೆನಪು ಹಾಗೆ ಇಲ್ಲಿ ಆರದೆ ಕೂತಿದೆ.&lt;br /&gt;ಇವತ್ತು ಸಂಜೆ ಇಲ್ಲೆ ಮನೆಯಾಚೆ ಇರುವ ಪಾರ್ಕಿಗೆ ಹೋಗಲು ಸಮಯವಿಲ್ಲ, ಹೋಗಲೇಬೇಕಿದ್ದರೆ ಬೈಕು ಬೇಕು. ನಡಿಗೆಯ ಆಮೆಓಟವನ್ನ ಹಿಂದೆ ಹಾಕಿ ಸಮಯವಿಲ್ಲದ ಮೊಲ ಓಡಿಹೋಗುತ್ತಿದೆ.&lt;br /&gt;ಅದಕ್ಕೆ ಗೊತ್ತಿದೆಯಾ ಈ ಓಡುವಿಕೆಯ ಕೊನೆಗೆ ಎದ್ದು ನಿಲ್ಲಲೂ ತ್ರಾಣವಿರುವುದಿಲ್ಲ ಅಂತ?!&lt;br /&gt;&lt;br /&gt;ಇವಳ ಮಿಂಚುಕಣ್ಣು ಅವತ್ತು ಮಿಂಚಿದ್ದರೆ ಅದಕ್ಕೆ ಅವನೇ ಕಾರಣ.&lt;br /&gt;ಇವತ್ತು ಅವಳ ಮಿಂಚು ಕಣ್ಣು ಕುಕ್ಕುತಿದ್ದರೆ ಅದಕ್ಕೂ ಅವನೇ ಕಾರಣ.&lt;br /&gt;ಎರಡು ಮಿಂಚುಗಳ ನಡುವೆ ಕಳೆದುಕೊಂಡಿದ್ದೇನು.&lt;br /&gt;ಮಿಂಚು ಕಂಡು ರೋಮಾಂಚನಗೊಳ್ಳುವುದನ್ನೇ?&lt;br /&gt;ಕಳೆದುಕೊಳ್ಳುವಿಕೆ ಮಾತ್ರ ಅಕಾರಣ!&lt;br /&gt;ಹೊಸತೆಂದರೇನು? ಬರಿಯ ಚಿಗುರು ಮಾತ್ರವೇ? ಬೇರಲ್ಲಿರುವುದೆಲ್ಲ ಹಳೆಯದೇ ಹಾಗಾದರೆ?!&lt;br /&gt;ಬದಲಾವಣೆಯ ಬದುಕಿನಲ್ಲಿ ಬದಲಾಗದೆ ಉಳಿಯುವುದೇನು?&lt;br /&gt;ತೀರದ ಆಶೆಗಳೇ?&lt;br /&gt;&lt;br /&gt;ಜೊತೆಜೊತೆಯ ಹೆಜ್ಜೆ, ಎಷ್ಟೇ ಹತ್ತಿರವಾಗಿಟ್ಟರೂ&lt;br /&gt;ಕೊನೆಗೆ ಯಾಕೆ ಅನಿಸುತ್ತದೆ&lt;br /&gt;ದೋಣಿಯೊಳಗೆ ನೀನೂ.... ಕರೆಯ ಮೇಲೆ ನಾನೂ...?!&lt;br /&gt;ಎಲ್ಲ ಗೊಂದಲಗಳ ಉತ್ತರದ ಮ್ಯಾಪು ಚಾರಣದಲ್ಲಿದೆಯೇ?&lt;br /&gt;ಆರೋಹಣದ ಹಾದಿಯ ಮೂಲ ಕಣಿವೆಯಲ್ಲಂತೆ ಹೌದೆ?&lt;br /&gt;ಸೇತುವೆಯಾದ ಮಾತು ಗೋಡೆಯಾದ ಮೇಲೆ&lt;br /&gt;ಬೇಸರಾಗಿದೆ ಮನಕೆ&lt;br /&gt;ಇಂದಿನ ತುಂಬಾ ಅಂದಿನ ನೆನಕೆ.&lt;br /&gt;&lt;br /&gt;ಮತ್ತೊಮ್ಮೆ ನೆನಪಿಸಿಕೊಳ್ಳಬಯಸುತ್ತೇನೆ. ಮತ್ತೆ ಮತ್ತೆ ಕನಸುತ್ತೇನೆ;&lt;br /&gt;ಅಂದು – ಇರುಳಿನಲ್ಲೂ ಬೆಳಗು&lt;br /&gt;ಕತ್ತಲಿಲ್ಲಿ ಒಳಗೂ ಹೊರಗೂ!&lt;br /&gt;&lt;br /&gt;ಇಷ್ಟೆಲ್ಲ ಕನವರಿಸಿಯೂ, ಎಲ್ಲದರ ಮೇಲೆ ಬೇಸರಿಸಿಕೊಂಡೂ,&lt;br /&gt;ತುಂಬು ಕೃತಜ್ಞತೆ ನನಗೆ,&lt;br /&gt;ಅಂದಿಗಾದರೂ ದಕ್ಕಿತ್ತಲ್ಲ ಬೇಕಿದ್ದುದು,&lt;br /&gt;ಇಂದಿಗೆ ನೆನಪಿಸಿಕೊಳ್ಳಲು ಉಳಿಯಿತಲ್ಲ.&lt;br /&gt;ಇಷ್ಟೆಲ್ಲ ಮಾತನಾಡಿದೆ ನಾನು. ನಾನು ಅವಳಾಗಿಯೇ ಉಳಿದಿಲ್ಲ&lt;br /&gt;ನೀನು ಹೇಗೆ ಅವನೇ ಆಗಿರುತ್ತಿ?!&lt;br /&gt;ಅಲ್ಲ!!!&lt;br /&gt;&lt;br /&gt;ಪುಣ್ಯವೆಂದರೆ ಇಬ್ಬರ ಬೆನ್ನಿಗೂ ಅದೇ ನೆಲ.&lt;br /&gt;ನೋಡಲೊಂದೇ ಆಕಾಶ,&lt;br /&gt;ಹಾದಿ ಮುಗಿದಿಲ್ಲ&lt;br /&gt;ವಿಸ್ತರಿಸಿದೆ!&lt;br /&gt;ಕತ್ತಲೆಯ ಕಾವಳದಲ್ಲಿ&lt;br /&gt;ಅಮ್ಮನ ಮಿನುಗುಚುಕ್ಕಿ!&lt;br /&gt;ನೆನಪಿನ ಎಣ್ಣೆ, ಅಕ್ಕರೆಯ ಹಳೆಬಟ್ಟೆ&lt;br /&gt;ತಿಕ್ಕಿ ಒರೆಸಲು ಕಳೆಯದೆ ತುಕ್ಕು?&lt;br /&gt;&lt;br /&gt;ಬರೆಯಲಿಕ್ಕೆಷ್ಟೋ ಇದೆ.&lt;br /&gt;ಎಲ್ಲವನ್ನ ಬರೆದೆ ಅರುಹಬೇಕೆ&lt;br /&gt;ಹೊಳವಿಗೂ ಅಷ್ಟಿರಲಿ!&lt;br /&gt;&lt;br /&gt;&lt;br /&gt;&lt;span style="color:#666666;"&gt;(ತಲೆಬರಹದ ಸಾಲು ರಾಜರತ್ನಂ ಅವರ -ರತ್ನ ಬೇವಾರ್ಸಿ- ಕವಿತೆಯದು)&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-3058797664423778737?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/3058797664423778737/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=3058797664423778737' title='3 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/3058797664423778737'/><link rel='self' type='application/atom+xml' href='http://www.blogger.com/feeds/4515791944382207090/posts/default/3058797664423778737'/><link rel='alternate' type='text/html' href='http://nenapu-nevarike.blogspot.com/2009/12/blog-post_24.html' title='ಗುಡಿಸಿಲ್ ಬಾಗಿಲ್ ಬೀಗದ್ ಹಂಗೇ ಮನಸಿನ್ ರಾಗಾನೂ...'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-4515791944382207090.post-7429462790619141575</id><published>2009-12-14T23:55:00.000-08:00</published><updated>2009-12-15T00:06:29.259-08:00</updated><category scheme='http://www.blogger.com/atom/ns#' term='...'/><title type='text'>...</title><content type='html'>ಹಾಲಿನ ಕೂಪನ್, ಕೇಬಲ್ಲು,&lt;br /&gt;ಫೋನು ಮತ್ತು ಕರೆಂಟು ಬಿಲ್ಲು,&lt;br /&gt;ತರಕಾರಿ, ದಿನಸಿ,&lt;br /&gt;ಮತ್ತಿನ್ಯಾವುದೋ ಮಾಡದೆ ಉಳಿದ ಕೆಲಸ&lt;br /&gt;ಎಲ್ಲ ಹಾಗೆ ಇರಲಿ ಬಿಡು.&lt;br /&gt;ಈಗ ಮೊದಲಿಂದ ಮಾತಾಡೋಣ&lt;br /&gt;ಯಾವ ಅಜೆಂಡಾವೂ ಇಲ್ಲದೆ&lt;br /&gt;ಅವತ್ತು ಸಂಜೆ ಗಿರಿಯ ಮೇಲೆ&lt;br /&gt;ಮೌನದ ಚಿಪ್ಪೊಡೆದು&lt;br /&gt;ಹೊರಬಂದ&lt;br /&gt;ಮುತ್ತುಮಾತುಗಳ&lt;br /&gt;ನೆನಹುಗಳ ನೇಯುತ್ತ -&lt;br /&gt;ಇವತ್ತಿನ ಸಂಭಾಷಣೆಯ ಸಿಂಗರಿಸೋಣ,&lt;br /&gt;ಯಾವ ಮಾತೂ ಆಡದೇ ಇದ್ದರೂ ನಡೆದೀತು,&lt;br /&gt;ಏನೂ ಅಲ್ಲದ -&lt;br /&gt;ಏನೋ ಆಗಬೇಕಿಲ್ಲದ&lt;br /&gt;ಆ ಮುಗ್ಧ ಭಾವಕ್ಕೆ ಮತ್ತೊಮ್ಮೆ ಒಡಲ ನೀಡೋಣ&lt;br /&gt;ಹೂವು, ಹಕ್ಕಿ,&lt;br /&gt;ನೀರು, ನೆರಳು,&lt;br /&gt;ಸಂಜೆಗೆಂಪು ಪಯಣದ ಹಾದಿಯ ಬದಿಗೆ&lt;br /&gt;ಮತ್ತೆ ಸರಿಯೋಣ&lt;br /&gt;ಕೆಲನಿಮಿಷಗಳ ಮಟ್ಟಿಗಾದರೂ..&lt;br /&gt;ಹಾಗೇ ಇರಲಿ ಬಿಡು&lt;br /&gt;ಕಟ್ಟದೆ ಉಳಿದ ಬಿಲ್ಲು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-7429462790619141575?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/7429462790619141575/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=7429462790619141575' title='7 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/7429462790619141575'/><link rel='self' type='application/atom+xml' href='http://www.blogger.com/feeds/4515791944382207090/posts/default/7429462790619141575'/><link rel='alternate' type='text/html' href='http://nenapu-nevarike.blogspot.com/2009/12/blog-post_14.html' title='...'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>7</thr:total></entry><entry><id>tag:blogger.com,1999:blog-4515791944382207090.post-6570450975228571714</id><published>2009-12-09T02:08:00.000-08:00</published><updated>2009-12-09T02:10:56.108-08:00</updated><category scheme='http://www.blogger.com/atom/ns#' term='ಕನ್ನಡಪ್ರಭ'/><category scheme='http://www.blogger.com/atom/ns#' term='ಅಮ್ಮ'/><title type='text'>ಬಹುಮುಖೀ ಚೈತನ್ಯ</title><content type='html'>ಕಣ್ನಲ್ಲಿ ಕಣ್ಣಿಟ್ಟುಕೊಂಡು ಮುಂದಿದ್ದ ಡಾಕ್ಯುಮೆಂಟನ್ನ ತಿದ್ದುತ್ತ ಕೂತಿದ್ದಾಳೆ ಇಳಾ. ಕಣ್ಣಿಗೂ ಲ್ಯಾಪ್ ಟಾಪಿಗೂ ಮಧ್ಯ ಮೋತಿಚೂರು ಲಾಡುಗಳ ಸಿಹಿಪೆಟ್ಟಿಗೆ ಬಂತು. ಕತ್ತೆತ್ತಿ ನೋಡಿದರೆ ಚಂದಕ್ಕೆ ಹಿತವಾಗಿ ನಗುತ್ತ ನಿಂತಿದ್ದ ಸ್ಫೂರ್ತಿ. ಯಾಕೆ ಎಂದು ಬಾಯಿತೆರೆಯುವುದಕ್ಕೆ ಮುನ್ನ, ಇಂಡಿಯನ್ ಕ್ಯಾಲೆಂಡರ್ ಮೇಲೆ ಇವತ್ತು ನನ್ ಮಗ ಹುಟ್ಟಿ ಒಂದ್ವರ್ಷ.ಅದಕ್ಕೆ ಎಂದು ತನ್ನ ಹಿಗ್ಗಿನ ಮೂಲವನ್ನ ತಿಳಿಸಿದಳು. ಅವಳ ಖುಶಿ ಇಳೆಯ ಮನಸ್ಸಿಗೂ ಇಳಿಯಿತು. ಹೌದಲ್ಲ ಮತ್ತೆ ರಜೆ ಹಾಕಿ ಮನೆಯಲ್ಲಿರಬಹುದಿತ್ತಲ್ಲಾ ಎಂದದ್ದಕ್ಕೆ ನಕ್ಕು ಅವನಿಲ್ಲೆಲ್ಲಿ ಇದಾನೆ. ಅವ್ನಿರೋದು ಪುಣೆಯಲ್ಲಿ ಅವನ ಅಜ್ಜ/ಅಜ್ಜಿ ಜೊತೆ. ಸೀಯೂ ಆಮೇಲೆ ಲಂಚ್ ಅವರ್ಸ್ ಅಲ್ಲಿ ಮಾತಾಡೋಣ. ಈಗ ಎಲ್ರಿಗೂ ಸಿಹಿ ಹಂಚಬೇಕಲ್ಲ ಅನ್ನುತ್ತಾ ಪರಿಮಳದ ಅಲೆಯಂತೆ ತೇಲಿಹೋದಳು. ಇಳಾ ದಂಗಾಗಿ ಕುಳಿತಳು. ಆ ಪುಟ್ಟ ಮಗು ೬ ತಿಂಗಳಾದಾಗಿನಿಂದ ತನ್ನ ಅಜ್ಜ ಅಜ್ಜಿಯ ಜೊತೆಯಲ್ಲಿತ್ತು. ಸ್ಫೂರ್ತಿ ಒಬ್ಬ ಪ್ರಾಡಕ್ಟ್ ಮ್ಯಾನೇಜರ್. ಗಂಡ ಇನ್ನೊಂದು ಕಂಪನಿಯಲ್ಲಿ ಹೆಚ್ಚಿನ ಜವಾಬ್ದಾರಿಯ ಇನ್ನೊಂದು ಕೆಲಸದಲ್ಲಿ. ಅವನು ನೆಲ್ಲೂರಿನವನು, ಇವಳು ಪುಣೆಯವಳು. ಇಬ್ಬರ ಹೆತ್ತವರೂ ಅವರವರ ಊರಲ್ಲಿದ್ದರು. ಇಲ್ಲಿ ಇವರಿಬ್ಬರ ಮುದ್ದಿನ ಚಿಕ್ಕ ಸಂಸಾರ. ಮಗು ಹುಟ್ಟಿದಾಗ ನೋಡಿಕೊಳ್ಳಲು ಸಾಧ್ಯವಾಗದೆ ಕಷ್ಟಪಟ್ಟು ಓದಿ ನಿಲುಕಿದ ಕೆಲಸದಲ್ಲಿ ಒಳ್ಳೆಯ ಸಾಧನೆಯನ್ನು ಮಾಡಿ ಮುಂದಿಟ್ಟ ಹೆಜ್ಜೆಗಳನ್ನು ಅಲ್ಲಿಯೇ ಕಟ್ಟಿಹಾಕಲು ಇಷ್ಟವಿಲ್ಲದ ಸ್ಫೂರ್ತಿ ಮಗನನ್ನು ತನ್ನ ಹೆತ್ತವರ ಬಳಿ ಬಿಟ್ಟಿದ್ದಾಳೆ. ಇಳಾಗೆ ಆ ಕ್ಷಣದಲ್ಲಿ ರೇಗಿಹೋಯಿತು. ಇವಳೆಂತಹ ಅಮ್ಮ. ಇಷ್ಟು ಚಿಕ್ಕ ಮಗುವನ್ನು ಹೇಗೆ ಬಿಟ್ಟಿರಬಲ್ಲಳು, ಮಗುವಿನ ಭಾವನಾತ್ಮಕ ಅವಶ್ಯಕತೆಗಳನ್ನು ಅರಿತುಕೊಳ್ಳದೆ ಹೋದರೆ ಹೇಗೆ ಅಂತೆಲ್ಲ ಅನಿಸಿತು.&lt;br /&gt;ಅದೇ ಗುಂಗಿನಲ್ಲಿ ಮನೆಗೆ ಬಂದರೆ ಅವತ್ತು ಸಂಜೆ ಕೆಲಸದವಳು ಬರಲೇ ಇಲ್ಲ. ರಾತ್ರಿ ಎಂಟರವರೆಗೂ ಕಾದು, ಸಿಂಕಿನಲ್ಲಿ ಬಿದ್ದಿದ್ದ ಪಾತ್ರೆಗಳನ್ನೆಲ್ಲ ತೊಳೆದಿಟ್ಟು, ಅನ್ನ-ಸಾರಿಗೆ ರೆಡಿ ಮಾಡಿಟ್ಟು, ಅವಳಿಗೆ ಫೋನ್ ಮಾಡಿದರೆ, ಅಕ್ಕಾ ಮಗಳಿಗೆ ತುಂಬ ಜರಾ, ಬರಾಕಾಗಿಲ್ಲ ಅಂದಳು. ಬಯ್ಯಲು ಹೊರಟ ಬಾಯಿ ಬಿಮ್ಮನೆ ಸರಿ ಬಿಡು, ಜೋಪಾನ ಮಾಡಿಕೋ ಅಂದು ಸುಮ್ಮನಾಯಿತು.&lt;br /&gt;ಮತ್ತೊಂದಿಷ್ಟು ದಿನಗಳ ಗಾಣದಲ್ಲಿ ತಿರುಗಿ, ಬ್ಯಾಂಕ್ ಬ್ಯಾಲೆನ್ಸಿನ ಎಣ್ಣೆಯನ್ನ ಹಿಂಡಿ ತೆಗೆದು, ಪುಟ್ಟ ಮನೆ ಕಟ್ಟಿ, ಮನೆ ಕಟ್ಟಲು ಸಾಲ ಕಟ್ಟಿ, ಎಲ್ಲೋ ಸಿಕ್ಕಿದ ಕೆಲ ಪುರುಸೊತ್ತಿನ ದಿನಗಳಲ್ಲಿ ಊರಿಗೆ ಹೋಗಿ ಬಂದು, ತನ್ನದೇ ಕನಸಿನ ವಿಸ್ತರಣೆಗಳಂತಹ ಪುಸ್ತಕಗಳನ್ನು ಆಗ ಈಗ ಓದುತ್ತಾ ಕ್ಯಾಲೆಂಡರುಗಳನ್ನು ಬದಲಿಸುವ ಭರಾಟೆಯಲ್ಲಿ ಇಳೆಯ ಸಿಟ್ಟು ಕರಗಿ ಹೋಗಿತ್ತು.&lt;br /&gt;ಸ್ಫೂರ್ತಿಯ ಮಗ ತುಂಟನಾಗಿ ಜಾಣನಾಗಿ ಬೆಳೆದು ನಿಂತು ತಿಂಗಳಿಗೊಮ್ಮೆ ಬರುವ ಅಮ್ಮನೊಡನೆ ಕಳೆಯುವ ಕಾಲಕ್ಕೆ ಸಮಾಧಾನಪಟ್ಟುಕೊಂಡು ಅಜ್ಜಿಯ ಮಡಿಲಲ್ಲಿ ನಗುತ್ತಿದ್ದಾನೆ. ಮನೆ ನಡೆಸಲು ಸೋಮಾರಿತನ ತೋರುವ ಗಂಡನೊಡನೆ ಏಗುವ ಪದ್ದು, ಮನೆಕೆಲಸ ಮಾಡಿಕೊಂಡು ತನ್ನೆರಡು ಮಕ್ಕಳನ್ನು ಅವರಿವರ ಮನೆಯಲ್ಲಿ ಬಿಟ್ಟು, ದೊಡ್ಡವರಾದ ಮೇಲೆ ಶಾಲೆಗೆ ಕಳಿಸಿ ಬದುಕನ್ನು ಅವಡುಕಚ್ಚಿ ಎದುರಿಸುತ್ತಿದ್ದಾಳೆ.&lt;br /&gt;ಭರಾಟೆಯ ಬದುಕಿನ ಮಧ್ಯೆ ಇಳೆಯ ಮಡಿಲು ತುಂಬಲು ಕಂದನೊಂದು ಒಳಗಿನಿಂದಲೇ ಸಿದ್ಧತೆ ನಡೆಸಿದೆ. ಡಾಕ್ಟರು ಅದೇನೇನೋ ಕಾಂಪ್ಲಿಕೇಶನ್ನಿನ ಹೆಸರು ಹೇಳಿ ಓಡಾಡಬಾರ‍ದು ಅಂದುಬಿಟ್ಟಿದಾರೆ. ಸಿಕ್ಕಾಪಟ್ಟೆ ಇರುವ ಹೆಚ್ಚಿನ ಜವಾಬ್ಡಾರಿಯ ಕೆಲಸವನ್ನ ಬೇರೆಯವರಿಗೆ ವಹಿಸಲು ಇಷ್ಟವಿಲ್ಲದ ಇಳೆಯ ಮ್ಯಾನೇಜರ್, ನೀನು ಮನೆಯಿಂದಲೇ ಕೆಲಸ ಮಾಡು, ಹೆರಿಗೆಯ ಹೊತ್ತಿನಲ್ಲಿ ರಜೆ ತಗೋಬಹುದು ಅಂತ ಒಪ್ಪಿಸಿದ್ದಾನೆ. ಇಷ್ಟು ಅವಕಾಶ ಸಿಗುವುದೇ ಹೆಚ್ಚು ಅಂದುಕೊಂಡ ಇಳೆ ಮನೆಯಿಂದಲೇ ಪ್ರಾಜೆಕ್ಟುಗಳನ್ನ ಮುಗಿಸುತ್ತಿದ್ದಾಳೆ. ಕಂದನೊಂದು ಮೂಡಿದರೆ ಹೀಗ್ ಹೀಗೆ ಮಾಡಬೇಕು ಅಂತ ಯಾವತ್ತಿನಿಂದಲೋ ಕಟ್ಟಿಕೊಂಡಿದ್ದ ರಮ್ಯ ಕನಸುಗಳೆಲ್ಲ ವಾಸ್ತವದ ಓಟದ ಬದುಕಿನಲ್ಲಿ ಸೈಡ್ ವಿಂಗಿನಲ್ಲಿ ಸಪ್ಪಗೆ ನೋಡುತ್ತ ಕೂತಿವೆ. ಕೆಲಸವನ್ನ ಅಚ್ಚುಕಟ್ಟಾಗಿ ಮಾಡಿ ಮುಗಿಸುವಷ್ಟರಲ್ಲಿ ಆರಾಮದಲ್ಲಿ ಕೂತು ಊಟ ಮಾಡಲೂ ಸಮಯವಿಲ್ಲದ ಇಳೆಗೆ, ಕೆಲಸ ಮುಗಿಸಿ ಬೆನ್ನು ಚಾಚಿ ಮಲಗಿಕೊಳ್ಳುವುದೇ ದೊಡ್ಡ ರಿಲೀಫು ಮತ್ತು ರಿಲ್ಯಾಕ್ಸೇಷನ್.&lt;br /&gt;ಇಷ್ಟೇ ದಿನ ಓಡಿದ್ದ ಸಮಯ ಇನ್ನೂ ಮುಂದಕ್ಕೆ ನಡೆದು ಒಂದು ದಿನ ಬೆಳಿಗ್ಗೆ ಮುಂಚೆ ಚಳಿಯ ದಿನದಲ್ಲೂ ಮಳೆ ಸಣ್ಣಗೆ ಹನಿಯುವಾಗ, ಹೊನಲು ಅಮ್ಮನ ಮಡಿಲ ಬೆಚ್ಚನೆ ಗೂಡಿನಿಂದ ಅಚ್ಚರಿಯ ಜಗದ ಅಂಗಳಕ್ಕೆ ಹರಿದುಬಂದಳು.&lt;br /&gt;ಒಂದು ಮೂರು ತಿಂಗಳು ಇಳೆಯ ಮಟ್ಟಗೆ ಆಫೀಸಿಲ್ಲ, ಪ್ರಾಜೆಕ್ಟಿಲ್ಲ, ಮೈಲಿಲ್ಲ, ಫೋನಿಲ್ಲ, ಧಾವಂತವಿಲ್ಲ - ನಿದ್ದೆಯೂ ಇಲ್ಲ. ಹಗಲೂ ರಾತ್ರಿಯ ಭೇದವಿಲ್ಲದ ಕಂದನ ಬೇಡಿಕೆಗಳನ್ನ ಗಮನಿಸುವಷ್ಟರಲ್ಲಿ ಅಮ್ಮನೆಂಬ ಪದವಿಯ ಆಳ ಅಗಲಗಳನ್ನ ಅರ್ಥ ಮಾಡಿಕೊಂಡಾಯಿತು.&lt;br /&gt;ಇಷ್ಟಕ್ಕೆ ಮುಗಿಯಿತೇ? ಬಾಣಂತನದ ರಜೆ ಮುಗಿದು ಆಫೀಸು ಶುರುವಾದ ಮೇಲೆ ಹೊಸದೇ ಕ್ಷಿತಿಜ. ಆಫೀಸು ಆಫೀಸಿನಲ್ಲಿ, ಮನೆ ಮನೆಯಲ್ಲಿ ಎಂಬ ಎರಡು ಹಳಿಗಳ ಮೇಲೆ ಅಮ್ಮನೆಂಬ ಸವಾರಿ. ರಾತ್ರಿ ನಿದ್ದೆ ಇಲ್ಲ ಎಂದು ಮೀಟಿಂಗ್ ರೂಮಿನಲ್ಲಿ ಮಾತಾಡುವ ಹಾಗಿಲ್ಲ. ಆಫೀಸಿನಲ್ಲಿ ತುಂಬ ಕೆಲಸ ಎಂದು ಮನೆಗೆ ತಂದು ಮಾಡುವಂತಿಲ್ಲ. ಬೆಳಿಗ್ಗೆ ಎಷ್ಟೇ ಲೇಟಾಗಿ ಎದ್ದರೂ, ಹಾಲುಣಿಸದೆ ಹೊರಡುವಂತಿಲ್ಲ, ಮಧ್ಯಾಹ್ನದ ಊಟಾ ಕ್ಯಾಂಟೀನಿನಲ್ಲಿ ನಡೆಯುತ್ತದೆ ಎಂದು ಅಡ್ಜಸ್ಟ್ ಮಾಡಿಕೊಂಡರೂ ಮಗುವಿನ ಪೋಷಣೆಯ ಮೆತ್ತನೆ ಅನ್ನ ಬೇಳೆ ತರಕಾರಿಗೆ ಕುಕ್ಕರ್ ಸೇರಿಸಿಟ್ಟೇ ಓಡಿಕೊಂಡೇ ಮನೆಯಿಂದ ಹೊರಡಬೇಕು. ಈ ಟಾಸ್ಕ್ ಮುಗಿಯಿತು ಎಂದು ನಿಸೂರಾಗಿ ಕುಳಿತ ಕ್ಷಣದಲ್ಲಿ ಕೈ ಅನೈಚ್ಛಿಕವಾಗಿ ಮನೆಯ ನಂಬರ್ ಡಯಲ್ ಮಾಡಿರುತ್ತದೆ. ಎದ್ದು, ತಿಂಡಿ ತಿಂದು ಸ್ನಾನ ಮಾಡಿದ ಮಗುವಿನ ಚಿತ್ರ ಅಮ್ಮನ ಕಣ್ಣು ಮನದಲ್ಲಿ ತುಂಬಿಕೊಡಿರುತ್ತದೆ. ಮೆತ್ತಗೆ ಇಡುವ ತಪ್ಪು ಹೆಜ್ಜೆಯ ನೆನಪು ಗುಂಗಿನಂತೆ ಹಾಗೇ ಇದೆ. ಕೈ ನೀಡಿ ನಗುವ ಮೊಣಕಾಲ ಮೇಲೆ ಕುಳಿತ ಪೋರಿಯ ಸೆಳೆತವನ್ನ ಒತ್ತಿ ಹಿಡಿದುಕೊಂಡು, ಮರೆತ ಹಾಗೆ ನಟಿಸುತ್ತ ಆಫೀಸಿನ ಕೆಲಸ ನಡೆಯುತ್ತಿದೆ. ಸಂಜೆ ಮನೆಗೆ ಹಿಂದಿರುಗುವ ಅಮ್ಮನಿಗೆ ಕಾಯುವ ಮಗು ಮನೆಯ ಹೊಸಿಲು ದಾಟಿ ಕಂಪೌಡಿನ ಗೇಟಿಗೇ ಬಂದಿರುತ್ತದೆ. ಹೊರಗಿನ ನಾಯಿ, ಗಿಡ, ಪಾರಿವಾಳ, ರಸ್ತೆಯಲ್ಲಿನ ಓಡಾಟ ಎಲ್ಲಕ್ಕೂ ಕಣ್ಣಾಗಿ, ದೂರತಿರುವಿನಲ್ಲಿ ಕಾಣಿಸಿಕೊಳ್ಳುವ ಸುಪರಿಚಿತ ಭಂಗಿಗೆ ಕಾಯುತ್ತಾ ಇರುವ ಚೈತನ್ಯ ಅಮ್ಮ ಬಂದ ಕೂಡಲೇ ದುಪ್ಪಟ್ಟಾಗುತ್ತದೆ. ಕರುವೊಂದು ಮೆತ್ತಗೆ ನೆಕ್ಕುವಂತೆ ಅಮ್ಮನಿಗೆ ಅಂಟಿಕೊಳ್ಳುವ ಮಗುವು ರಾತ್ರಿ ೧೨ರವರೆಗೆ ಅಮ್ಮನ ಹಿಂದೆ ಮುಂದೆ. ಇದ್ದಕ್ಕಿದ್ದಂಗೆ ಈ ದಿನಚರಿ ಏರುಪೇರಾಗುವುದುಂಟು. ಕೆಲಸದ ಮಧ್ಯೆ ಫೋನ್ ಮಾಡಿದಾಗ - ಇವತ್ತು ಬೆಳಗಿನಿಂದ ಮೂರು ಸಲ ನೀರಾಗಿ ಕಕ್ಕ ಆಯಿತು ಅಥವಾ ಒಂದು ಸಲವೂ ಚಡ್ದಿ ಒದ್ದೆ ಆಗಿಲ್ಲ ಅಂತ ಪಾಪುವನ್ನು ನೋಡಿಕೊಳ್ಳುವ ಗೌರಮ್ಮ ಹೇಳಿದ ಕೂಡಲೆ ಆಫೀಸಿನ ಕೆಲಸ ಏರು ಪೇರಾಗುತ್ತದೆ. ಇವತ್ತು ಅರ್ಧ ದಿನ ರಜೆ ಹಾಕಿ ಬಸ್ಸು ಹಿಡಿದು ಊರ ಹೊರಗಿರುವ ಆಫೀಸಿನಿಂದ ಮನೆಗೆ ಹೊರಡುತ್ತಾಳೆ. ಡಾಕ್ಟರರ ಸಂಜೆಯ ಅಪಾಯಿಂಟ್ ಮೆಂಟ್ ತಗೊಂಡು ಮನೆ ಸೇರಿದ ಅಮ್ಮನ ಮಡಿಲಿಗೆ ಆತುಕೊಳ್ಳುವ ಕಂದ.&lt;br /&gt;ಕೆಲಸ ಬಿಟ್ಟು ಬಿಡಲೇ - ಮಗುವಿನ ಭಾವನಾತ್ಮಕ ಆಸರೆಯನ್ನು ಗೋಜಲಾಗಿಸುವುದು ಅಮ್ಮನಾಗಿ ಎಷ್ಟು ಸರಿ. ಅವತ್ತು ಸ್ಫೂರ್ತಿಯ ಬಗ್ಗೆ ಸಿಟ್ಟು ಬಂದಿತ್ತಲ್ಲ ಈಗ ತನ್ನ ಪರಿಸ್ಥಿತಿಯೇನು ಭಿನ್ನ ಅನಿಸುತ್ತಿದೆ. ಹಿರಿಯರಿಲ್ಲದ ಚಿಕ್ಕ ಸಂಸಾರ, ಇಬ್ಬರೂ ದುಡಿಯುವ ಬದುಕಿನ ಹಾದಿಯಲ್ಲಿ ಹೊಸ ಮೊಗ್ಗುಗಳನ್ನ ಕುಳಿತು ಕಾಯುವುದು ಯಾರು? ಅಜ್ಜ ಅಜ್ಜಿಗೆ ದೂರದೂರಲ್ಲಿ ಅವರದೇ ಬದುಕು. ಅವರು ಕಂಡುಕೊಂಡ ನೆಲೆಯನ್ನು ಬಿಟ್ಟು ಇಲ್ಲಿ ಮಕ್ಕಳ ಜೊತೆ ಗೂಡು ಬದುಕಿನಲ್ಲಿ ಇರು ಎಂದು ಹೇಳುವುದು ಹೇಗೆ?&lt;br /&gt;&lt;br /&gt;ಇದೆಲ್ಲ ಹೋಗಲಿ ಮಗುವನ್ನು ಮಕ್ಕಳನ್ನು ನೋಡಿಕೊಳ್ಳಲೆಂದೇ ಯಾರಾದರೊಬ್ಬರಿದ್ದರೂ, ಅಮ್ಮನ ಜವಾಬ್ದಾರಿಗಳು ಬಹುಮುಖಿಯೇ ಅಲ್ಲವೇ. ಅಪ್ಪ ಇವತ್ತು ನನಗೆ ಮೀಟಿಂಗ್ ಇದೆ ಡಿಸ್ಟರ್ಬ್ ಮಾಡುವ ಹಾಗಿಲ್ಲ ಎಂದು ಫೋನನ್ನು ಸ್ವಿಚ್ ಆಫ್ ಮಾಡಿಡಬಹುದು ಅಮ್ಮ ಇಡುತ್ತಾಳೆಯೇ? ಇವತ್ತು ತುಂಬ ತಲೆನೋವು ಎಂದು ಮನೆಗೆ ಬಂದು ಸಪ್ಪೆ ಮುಖ ಮಾಡಿ ಮಲಗುವ ಹಾಗಿಲ್ಲ, ಹಚ್ಚಗೆ ನಗುವ ಕಂದನನ್ನು ನಗುತ್ತಲೇ ಮಾತನಾಡಿಸಿ ಎತ್ತಿಕೊಂಡು ಲಾಲಿಸಬೇಕು. ಇಲ್ಲಿಯವರೆಗೂ ತನ್ನದಾಗಿ ಹಬ್ಬಿಸಿಕೊಂಡಿದ್ದ ಹವ್ಯಾಸ, ಆಸಕ್ತಿ, ಚಟುವಟಿಕೆಗಳನ್ನು ಕೆಲವು ಕಾಲವಾದರೂ ಕಟ್ಟಿ ನಾಗಂದಿಗೆಯಲ್ಲಿಟ್ಟು, ಎಲ್ಲ ಸಮಯವನ್ನೂ ಮಗುವಿಗೇ ಮೀಸಲಿಡಬೇಕು. ಹಾಗಂತ ಎಲ್ಲ ಬೇಕುಗಳು ಮತ್ತು ಕಟ್ಟಿ ಹಾಕುವ ಕರ್ತವ್ಯವೆಂದಲ್ಲ. ಈ ಎಲ್ಲ ತಪನೆಗೂ ಒಂದು ಕಿಲಕಿಲ ನಗು ತಂಪು ನೇವರಿಕೆಯಂತೆ ಆವರಿಸುತ್ತದೆ. ನನಗೆ ನೀನು ಬೇಕಿತ್ತು ಸಿಕ್ಕಿದೆ ಎಂಬ ಸಮಾಧಾನದ ಆ ಪುಟಾಣಿ ಅಪ್ಪುಗೆ ಎಲ್ಲ ಸುಸ್ತಿಗೂ ಒಂದು ಮದ್ದಾಗಿ ಒದಗುತ್ತದೆ.&lt;br /&gt;&lt;br /&gt;ಹೀಗೆಲ್ಲ ಇದ್ದು ಒಂದೊಂದು ದಿನ ತುಂಬ ಬೇಸರವಾಗಿ ತಲೆಗೆಡುತ್ತದೆ. ಇದು ನನ್ನ ಕೈಯಲ್ಲಿ ಸಾಗುವುದಿಲ್ಲ ಅಂದುಕೊಂಡು ನಡೆವಾಗ ನಮ್ಮ ದೈನಂದಿನ ಕೆಲಸದ ಮಧ್ಯೆ ನೆನಪಾಗುವ ಹಟಬಿಡದೆ ಕೆಲಸವನ್ನ ನಡೆಸುವ ಹೈ-ಫೈ ಸ್ಫ್ರೂರ್ತಿ, ತಲೆಬಗ್ಗಿಸದೆ ಅವಡುಕಚ್ಚಿ ಬದುಕುವ ಕೆಲಸದ ಪದ್ದಮ್ಮ, ದಿನದಿನವೂ ಬಿ‌ಎಂಟಿಸಿಯ ರಶ್ ಬಸ್ಸಿನಲ್ಲಿ ತೂಗುಯ್ಯಾಲೆ ಮಾಡಿಕೊಂಡು ಸಾಗುವ ಸಾವಿರಾರು ಅಮ್ಮಂದಿರು, ಬೆನ್ನಿಗೆ ಹರಕು ದುಪಟ್ಟಾದಿಂದ ಜೋಲಿಕಟ್ಟಿಕೊಂಡು ಕಂದನ ಹೊತ್ತು ಕೆಲಸ ಮಾಡುವ ಕಟ್ಟೋಣ ಕೆಲಸದವರು, ಸ್ಕೂಟಿಯೋ ಪ್ಲೆಶರ್ರೋ ಸುಂಯ್ಯನೆ ಇಲ್ಲಿಂದಲ್ಲಿಗೆ ಮಗುವನ್ನು ಸಾಗಿಸಿ, ಅಜ್ಜಯ-ಪ್ಲೇಹೋಮಿನ ಮಡಿಲಿಗೆ ಹಾಕುತ್ತ ಕೆಲಸಕ್ಕೆ ಹೊರಡುವವರು, ಇದೆಲ್ಲ ಮಾಡುತ್ತಲೇ ಹಣೆಗೆ ಮ್ಯಾಚಿಂಗ್ ಬಿಂದಿಯನ್ನಿಡಲು ಮರೆಯದೆ, ಮುಡಿಗೆ ಒಂದು ಚಂದದ ಹೂವು ಸಿಕ್ಕಿಸುವವರು, ಸಿಕ್ಕಾಪಟ್ಟೆ ಕೆಲಸದ ಮಧ್ಯೆ ಒಂದ್ ಹತ್ತು ನಿಮಿಷ ಬಿಡುವು ಮಾಡಿಕೊಂಡು ಕಂದನ ಫೋಟೋ ತೋರಿಸುತ್ತಲೋ, ಆಟವನ್ನು ಅಭಿನಯಿಸುತ್ತಲೋ, ಸಿಹಿ ಹಂಚುತ್ತಲೋ ಕಷ್ಟಗಳನ್ನ ನುಂಗಿ ನಗುವವರು, ಎಲ್ಲ ನೆನಪಾಗುತ್ತಾರೆ.&lt;br /&gt;ಅಲೆದಲೆದು ಗಳಿಸಿದ್ದ ಮೊದಲ ಕೆಲಸ, ಆ ಕೆಲಸ ತುಂಬಿದ ಆತ್ಮವಿಶ್ವಾಸ, ಈಗ ಮಾಡುತ್ತಿರುವ ಕೆಲಸದಿಂದ ದೊರಕುವ ಸ್ಥೈರ್ಯ ಮತ್ತು ಗಟ್ಟಿತನ ಎಲ್ಲ ಸಾಲಾಗಿ ನಿಂತು ಭರವಸೆ ಹುಟ್ಟಿಸುತ್ತವೆ.&lt;br /&gt;ನೀನು ಹೊರಗೆ ಹೋದಾಗ ನಾನಿರುತ್ತೇನೆ ಎಂದು ನಿಲ್ಲುವ ಅಮ್ಮ, ಬೇಬಿ ಸಿಟ್ಟರ್ ಮತ್ತು ಅತ್ತೆಮ್ಮ ಮಾಡುವ ಕೆಲಸ ಬಿಡಬಾರದೆಂದು ಹುರಿದುಂಬಿಸಿದಂತಾಗುತ್ತದೆ. ಬಿರುನುಡಿಯಾಡದ ಸಂಗಾತಿಯ ಹೊಂದಾಣಿಕೆಯ ದಿನಚರಿ, ನಾನು ತೊಂದರೆ ಕೊಡುವುದಿಲ್ಲವೆಂಬ ಮಾತುಕೊಡುತ್ತದೆ.&lt;br /&gt;ಬರಿಗಾಲು,ತುಂಬಿದ ಬಸ್ಸು,ಸ್ಕೂಟಿ ಬೈಕು, ಕಾರು, ಕ್ಯಾಬು, ವಿಮಾನಮುಖೀ ಮಾತೆಯರು ಮತ್ತವರ ಬಹುಮುಖೀ ಚೈತನ್ಯ, ಎಷ್ಟೇ ಕುಗ್ಗಿಹೋಗಿದ್ದರೂ ಮಮತೆಯನ್ನ ಹಚ್ಚಗಿರಿಸುವ ಕಂದನ ದಿವ್ಯಮುಗ್ಧತೆ ಮತ್ತು ಅವಲಂಬನೆ, ಹಿಂದೆಂದೋ ಕುಣಿದು ಕುಪ್ಪಳಿಸಿದ ಬಾಲ್ಯದ ಚಲನಶೀಲತೆ ಇಳೆಯ ಈಗಿನ ಬದುಕನ್ನ, ಚೈತನ್ಯವನ್ನ ತುಂಬಿಕೊಂಡು ಮನೆಯಲ್ಲೂ, ಆಫೀಸಿನಲ್ಲೂ, ತನ್ನದೇ ಆದ ಹವ್ಯಾಸವಲಯದಲ್ಲೂ ಒಂದು ಆಹ್ಲಾದಯುತ ಪ್ರಭಾವಳಿಯನ್ನ ಕಟ್ಟಿಕೊಡುವುದು ದಿನನಿತ್ಯದ ಅಚ್ಚರಿ.&lt;br /&gt;&lt;br /&gt;ಎಲ್ಲಕ್ಕಿಂತ ಅಚ್ಚರಿಯೆಂದರೆ ನಾವು ಕೆಲಸಕ್ಕೆ ಹೋಗುವ ಎಲ್ಲ ಅಮ್ಮಂದಿರಲ್ಲೂ ಇಳೆಯ ವಿವಿಧ ಸ್ವರೂಪವೇ ಪ್ರತಿಫಲಿಸುತ್ತದೆ. ಅದೇ ಸಂಭ್ರಮ,ಅದೇ ಸಂಕಟ, ಅದೇ ಸಂಧಿಗ್ಧ, ಅದೇ ಚೈತನ್ಯ, ಅದೇ ಸಂಚಲನ.&lt;br /&gt;ಸೃಷ್ಟಿಯ ನವನವೋನ್ಮೇಷತೆಯೊಂದೇ ಮಹಿಳೆಯರ ಬದುಕನ್ನ ಸಾರ್ಥಕವಾಗಿ ಪ್ರತಿನಿಧಿಸಬಲ್ಲ ಉಪಮೆ.&lt;br /&gt;ಸಂಕಟದಲ್ಲಿ ಸಂತಸವನ್ನ ಆವಾಹಿಸಿಕೊಳ್ಳುವುದಕ್ಕೆ ಇನ್ನೊಂದು ಸಮರ್ಥಕ ಹೆಸರು ಅಮ್ಮ.&lt;br /&gt;ನಿಜ ಹೇಳಲೆ? ಮಗುವಿನ ಮುದ್ದು ಮುಖದ ಅನನ್ಯ ಬಾಂಧವ್ಯಕ್ಕೆ ಸೋಲುವ, ಇನ್ನೂ ಎಷ್ಟು ಕಷ್ಟವಾದರೂ ಪರವಾಗಿಲ್ಲ ಎಂದು ಎದ್ದು ಬಂದು ನಿಲ್ಲುವವಳೇ ಅಮ್ಮ.&lt;br /&gt;ಅದಕ್ಕೇ ಅಲ್ಲವೇ ಮಗುವಿನ ಮೊದಲ ತೊದಲೇ ಅಮ್ಮ!&lt;br /&gt;ನೋವಿನ ಮೊದಲ ಪ್ರತಿಸ್ಪಂದನೆಯ ಶಬ್ಧರೂಪವೂ ಅಮ್ಮ!&lt;br /&gt;&lt;br /&gt;ಜೀವಸೃಷ್ಟಿ ಮತ್ತು ಸಂಭಾಳಿಸುವಿಕೆ ಎರಡೂ ಅತ್ಯುತ್ಕೃಷ್ಟ ಹಂತ. ಇವು ಅತಿ ಹೆಚ್ಚಿನ ಚೈತನ್ಯ, ಶಕ್ತಿಗಳನ್ನು ಬೇಡುತ್ತವೆ. ಅದನ್ನು ನಿಭಾಯಿಸಲು ಅಮ್ಮನಾಗುವುವಳಿಗೆ ಮಾತ್ರ ಸಾಧ್ಯ.&lt;br /&gt;&lt;br /&gt;ಇಳೆಗೆ ಗೊತ್ತು, ನಾಳೆ ಒಂದು ದಿನ - ತನ್ನದೇ ಗತಿಯಲ್ಲಿ ಹೊರಡಲಿರುವ ಹೊನಲು ಅಮ್ಮನ ಬಗ್ಗೆ ಮಾತನಾಡಲು ಹೆಮ್ಮೆಯಿಂದಿರುತ್ತಾಳೆ ಅಂತ. ಅದು ಸಾಕು ಇವತ್ತಿನ ದಿನದ ಚೈತನ್ಯವನ್ನು ತುಂಬಲಿಕ್ಕೆ. ಅಲ್ಲವಾ? ಏನನ್ನುತ್ತೀರ ನೀವು?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-6570450975228571714?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/6570450975228571714/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=6570450975228571714' title='10 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/6570450975228571714'/><link rel='self' type='application/atom+xml' href='http://www.blogger.com/feeds/4515791944382207090/posts/default/6570450975228571714'/><link rel='alternate' type='text/html' href='http://nenapu-nevarike.blogspot.com/2009/12/blog-post_09.html' title='ಬಹುಮುಖೀ ಚೈತನ್ಯ'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>10</thr:total></entry><entry><id>tag:blogger.com,1999:blog-4515791944382207090.post-4364277238242781506</id><published>2009-12-04T01:54:00.000-08:00</published><updated>2009-12-04T02:01:09.564-08:00</updated><category scheme='http://www.blogger.com/atom/ns#' term='ಲಹರಿ'/><title type='text'>ಝೆಹರ್ ಜೋ ತೂನೇ ದಿಯಾ ಥಾ ವೋ ದವಾ ಹೋ ಬೈಠಾ..</title><content type='html'>ಅವತ್ತು ಬದುಕೇ ಬೇಜಾರಾಗಿ ಅಳುತ್ತಾ ಕೂತುಬಿಟ್ಟಿದ್ದೆ. ಮಾತನಾಡಿಸಲು ಬಂದ ಗೆಳೆಯ ಗೆಳತಿಯರು ಏನು ಹೇಳಲಿಕ್ಕೂ ತೋಚದೇ, ಸುಮ್ಮನೆ ಹೆಗಲ ಮೇಲೊಮ್ಮೆ ಮೆತ್ತಗೆ ಒತ್ತಿ, ಕೆನ್ನೆ ತಟ್ಟಿ ಸಪ್ಪಗೆ ಹೊರಟು ಹೋಗಿದ್ದರು. ಅವರಿಗೆ ಗೊತ್ತಿತ್ತು ಈ ಕಣ್ಣೀರನ್ನು ಒರೆಸಬಾರದು ಹರಿಯಲು ಬಿಡಬೇಕು ಅಂತ. ಅದಕ್ಕೇ ಅಲ್ಲವಾ ನನಗೆ ಅವರೆಂದರೆ ಅಷ್ಟು ಪ್ರೀತಿ.&lt;br /&gt;ಅಷ್ಟು ಪ್ರೀತಿಯ ಅವರೆಲ್ಲರಿಗಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸಿದ ನಾನು ಆ ಹೊತ್ತಿನಲ್ಲಿ ಎಲ್ಲ ಕಳೆದುಕೊಂಡು ಮೋಹದ ಬೆಂಕಿಯಲ್ಲಿ ಬೂದಿಯಾಗುತ್ತಿದ್ದೆ. ಕಣ್ಣೀರು ಎಣ್ಣೆಯ ತಲೆಯ ಮೇಲೆ ಹೊಡೆದ ಹಾಗೆ ಉರಿಗಳನ್ನು ಎತ್ತರಕ್ಕೆಬ್ಬಿಸುತ್ತಿತ್ತು.&lt;br /&gt;ನೀನು ನಿನ್ನ ಎಂದಿನ ಉಡಾಫೆಯ ರೀತಿಯಲ್ಲಿ ಹೊರಳು ದಾರ‍ಿಯಲ್ಲಿ ಹೊರಟು ನಿಂತಿದ್ದೆ. ಆ ದಾರಿಯ ಅನತಿ ದೂರದ ತಿರುವಲ್ಲಿ ಇನ್ಯಾವುದೋ ಮನಸ್ಸಿನ ಮಂಟಪ ಎದ್ದು ನಿಂತಿತ್ತು - ಹೊಸ ಕ್ಷಿತಿಜಗಳನ್ನ ತೆರೆದು ನಿಂತ ಹೊರಳು ದಾರಿ.ಹೀಗೆ ಇದ್ದಕ್ಕಿದ್ದಂಗೆ ನೀನು ಹೊರಟು ಹೋಗುತ್ತಾ ಇದ್ದರೆ ನನ್ನ ಎಲ್ಲ ಅವಲಂಬನೆಗಳ ಹಂದರವೂ ಕುಸಿದುಬಿದ್ದಿತ್ತು.&lt;br /&gt;ಭೂಕಂಪವಾಗುವವರಿಗೂ ಎಚ್ಚರವಾಗಿದ್ದರೆ ಬೀಳುತ್ತಿರುವ ಮನೆಯಿಂದ ಓಡಿಬರಲು ಸಮಯವಿರುತ್ತದೇನೋ.ನಾನು ಪೆದ್ದಿ. ನಿನ್ನ ಮನದ ಒಳ ಮೂಲೆಯಲ್ಲಿ ಕೂತು ಬಾಗಿಲು ಹಾಕಿಕೊಂಡು ಕೀಲಿ ಕಳಕೊಂಡು ಬಿಟ್ಟಿದ್ದೆ. ಸಾವರಿಸಿಕೊಂಡು ಏಳುವಷ್ಟರಲ್ಲಿ ಚಂದದ ಉದ್ಯಾನ ಮರುಭೂಮಿಯಾಗಿಬಿಟ್ಟಿತ್ತು.ಬೆಳ್ಳಗೆ ಮಿನುಗುವ ಚಂದಿರ ಹೋಗಿ, ಉರಿದು ಬೀಳುವ ಉಲ್ಕೆ ಉಳಿದಿತ್ತು.&lt;br /&gt;&lt;br /&gt;ನನ್ನ ಹುಚ್ಚುತನವೇ ನನ್ನ ಹುಚ್ಚಿಯನ್ನಾಗಿ ಮಾಡಿತು ಅಂದರೆ ಅಲ್ದೆ ಮತ್ತಿನ್ನೇನು ಅಂತೀಯ ನೀನು.&lt;br /&gt;ನಿನ್ನದೇ ಹುಚ್ಚು ನನಗೆ ಎನ್ನುವ ನನ್ನ ಮಾತು ತುಟಿಯವರೆಗೆ ಬಂದಿದ್ದು ನಿನ್ನ ಕುಹಕದ ನಗೆಯನ್ನು ನೋಡಿ ಸಪ್ಪಗಾಗಿ ಬಂದ ಕಡೆಯೇ ಹೋಯಿತು.&lt;br /&gt;ಹೋದರೆ ಹೋಗು ಮತ್ತೆ ಬರುತ್ತೀಯ ನೀನು ಅಂದುಕೊಂಡು ಸುಮ್ಮನುಳಿದೆ.&lt;br /&gt;ಎಷ್ಟು ದೂರ ಹೋದೆ ನೀನು, ಕರೆದರೂ ಕೇಳಿಸದ ತೀರದ ಗುಂಟ ನಿನ್ನ ಹಾದಿ.&lt;br /&gt;ಹೆಜ್ಜೆ ಬೆರೆಸಲೂ ಆಗದ ನನಗೆ ಉಳಿದದ್ದು ಒಳಗುದಿ.&lt;br /&gt;ಸುತ್ತಲ ಜನ ಅಯ್ಯೋ ಪಾಪ ಎಂದು ಹೇಳುತ್ತಾ ನಕ್ಕರು. ಬೇಡವೆಂದರೂ ಮಾಡಿಕೊಂಡೆ ಈಗ ಅನುಭವಿಸು ಎಂಬ ಭಾವ ಮಾತಲ್ಲಿ ಹೊರಬರದ ಹಾಗೆ ನೋಡಿಕೊಂಡರು. ಅಷ್ಟು ಮುತುವರ್ಜಿ.&lt;br /&gt;ಬಿದ್ದವಳ ಮೇಲೊಂದು ಕಲ್ಲು ಹಾಕದೆ ಇರುವುದು ಹೇಗೆಂದು ಸಂಕಟವಾಗಿ ನಗೆಮೊಗ್ಗುಗಳನ್ನೆಸೆದರು.&lt;br /&gt;ನನ್ನ ತಪನೆಯ ಉರಿಯ ವರ್ತುಲ ಹೊಕ್ಕಲಾಗದ ಮೊಗ್ಗುಗಳು ತೊಟ್ಟಿನ ಸಮೇತ ಅರಳದೆಯೆ ಕರಕಲಾದವು.&lt;br /&gt;ಒಳಗೆ ಉರಿ, ಹೊರಗೆ ಬೂದಿ, ಕಣ್ಣಲ್ಲಿ ಉರಿಯುವ ಕೆಂಡ. ಸಂಕಟದ ಸಾಗರಕ್ಕೆ ಒಂದೇ ನದಿ.&lt;br /&gt;ತಣ್ಣಗೆ ಗಾಳಿ ಸುಳಿದಾಗಲೆಲ್ಲ ನನ್ನೊಳಗಿನ ಉರಿ ಮತ್ತಷ್ಟು ಕೆನ್ನಾಲಗೆ ಚಾಚಿತು.&lt;br /&gt;ಹೀಗೆ ಬಿಟ್ಟು ಹೋಗಲೇಬೇಕೆಂದು ಇದ್ದವನು ನನ್ನನ್ನ ಕರೆದುಕೊಂಡು ಬಂದೆ ಯಾಕೆ. ಏನು ಕೇಳಿದರೆ ಏನು ಫಲ. ನಮ್ಮ ಮಧ್ಯೆ ಉಳಿದಿರುವುದು ನಿರ್ವಾತ! ನಾನುಹೇಳಿದ್ದು ನಿನಗೆ ಕೇಳುವುದಿಲ್ಲ. ಏನನ್ನಾದರೂ ಹೇಳುವುದು ನಿನಗೂ ಬೇಕಿಲ್ಲ.&lt;br /&gt;&lt;br /&gt;ಒಬ್ಬ ಗೆಳೆಯ, ಒಬ್ಬ ಗೆಳತಿ, ಇನ್ನೊಬ್ಬ ತಮ್ಮ ನನ್ನ ಅಳಲಿನ ಹರಿವಿನುದ್ದಕ್ಕೂ ಸುಮ್ಮನೆ ನಡೆಯುತ್ತ ಬಂದರು. ನಾನು ಅಳು ನಿಲ್ಲಿಸಿ ಅವರೆಡೆಗೆ ನೋಡುವ ದಿನಕ್ಕೆ ಕಾಯುತ್ತಾ! ಇದು ಅರಿವಾದ ದಿನ ಒರೆಸಿಕೊಂಡ ಕಣ್ಣು ಮತ್ತೆ ತೇವಗೊಳ್ಳಲಿಲ್ಲ.&lt;br /&gt;&lt;br /&gt;ಏನು ಗೊತ್ತಾ ?ನೀನು ಒಳ್ಳೆಯವನು. ನನ್ನ ಮೇಲೆ ನನಗೇ ನಂಬಿಕೆ ಬೆಳೆದಿದ್ದೇ ನೀನು ಬಿಟ್ಟು ಹೋಗಿದ್ದರಿಂದ. ಅವಲಂಬನೆಗಳನ್ನ ಮೀರಿದ ನನ್ನದೇ ಬದುಕನ್ನ ನಾನು ಕಟ್ಟಿಕೊಂಡಿದ್ದೇ ನೀನು ಇಲ್ಲದೆ ಹೋದದ್ದರಿಂದ.ನನ್ನ ಇವತ್ತಿನ ಖುಶಿಯ ಒರತೆಯೇ ನೀನು ಅವತ್ತು ಉಣಿಸಿದ ದುಃಖ. ನೀನೇನಾದ್ರೂ ಹಾಗೆ ಮಾಡದೆ ಇದ್ದಿದ್ದರೆ ಇವತ್ತು ನಾನು ಬರಿಯ ನೆರಳಾಗಿ ಅಷ್ಟೇ ಇರುತ್ತಿದ್ದೆ. ಸಧ್ಯ . ಇವತ್ತಿಲ್ಲಿ ಕಾರ್ತೀಕ. ವಿಷವೇ ಔಷಧಿಯಾಗುವುದನ್ನ ಗಝಲ್ಲುಗಳಲ್ಲಿ ಮಾತ್ರ ಕೇಳಿದ್ದೆ. ನಿನ್ನ ಕೃಪೆ. ಅದನ್ನೇ ಅನುಭವಿಸುತ್ತಿದ್ದೀನಿ.&lt;br /&gt;&lt;br /&gt;ಕೃತಜ್ಞತೆಗಳೊಂದಿಗೆ&lt;br /&gt;-ನವೀನ&lt;br /&gt;&lt;br /&gt;ಕೊನೆಯ ಒಂದು ಮಾತು:&lt;br /&gt;ನೀನು ಮೋಸ ಮಾಡಿದೆ ಎಂಬ ಬೇಸರವಿಲ್ಲ ನನಗೆ. ನೀನೂ ಮೋಸ ಮಾಡಿದೆಯಲ್ಲ ಎಂಬ ವಿಷಾದವಷ್ಟೇ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-4364277238242781506?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/4364277238242781506/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=4364277238242781506' title='3 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/4364277238242781506'/><link rel='self' type='application/atom+xml' href='http://www.blogger.com/feeds/4515791944382207090/posts/default/4364277238242781506'/><link rel='alternate' type='text/html' href='http://nenapu-nevarike.blogspot.com/2009/12/blog-post.html' title='ಝೆಹರ್ ಜೋ ತೂನೇ ದಿಯಾ ಥಾ ವೋ ದವಾ ಹೋ ಬೈಠಾ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-4515791944382207090.post-4772110546214768844</id><published>2009-11-26T21:25:00.000-08:00</published><updated>2009-11-26T21:31:47.777-08:00</updated><title type='text'>ಬಚ್ಚಲ ರೊಚ್ಚು..</title><content type='html'>&lt;div&gt;&lt;div&gt;ಅವನಿಂದ ನೂರಾಅರವವತ್ನಾಲ್ಕಕ್ಕೂ ಹೆಚ್ಚು ಮನೆಯ ದೀಪಗಳು ನಂದಿದವು. ಅವನ ಯೋಚನೆಗಳು ಕ್ರೌರ್ಯದ ಪರಮಾವಧಿಯವು ಮತ್ತು ನೀಚ ಉದ್ದೇಶಗಳು. ಇದರ ಬಗ್ಗೆ ಯಾವುದೇ ಧರ್ಮ,ಜಾತಿ,ರಾಷ್ಟ್ರೀಯತೆಯನ್ನು ಮೀರಿ ಎಲ್ಲರ ಅಭಿಪ್ರಾಯವೂ ಒಂದೇ.&lt;br /&gt;ಆದರೆ ಅದೇ ಅವನಿಂದ ನಾಡಿನ ಎಲ್ಲ ಮಾಧ್ಯಮಗಳ ಮಾರಾಟ ಮತ್ತು ಮೌಲ್ಯವರ್ಧನೆ ಆಗುತ್ತಿರುವುದು ಅಸಹ್ಯದ ಪರಮಾವಧಿ ಎಂಬುದು ನನ್ನ ಅನಿಸಿಕೆ.&lt;br /&gt;ಅವನು ಈಗ ಕಟಕಟೆಯಲ್ಲಿದ್ದಾನೆ. ಅವನ ಮೇಲೆ ಸರ್ಕಾರ ಇಷ್ಟು ಖರ್ಚು ಮಾಡಿದೆ ಅಷ್ಟು ಖರ್ಚು ಮಾಡಿದೆ, ಇಟ್ಟುಕೊಳ್ಳುವುದೇಕೆ, ಕಲ್ಲು ಹೊಡೆದೋ ಗುಂಡು ಹೊಡೆದೋ ಕೊಂದುಬಿಡಬೇಕು ಎಂದು ಆವೇಶದಲ್ಲಿ ಯೋಚಿಸುವ ಮುನ್ನ ಹುತಾತ್ಮ ಮೇ.ಸಂದೀಪ್ ಉನ್ನಿ ಕೃಷ್ಣನ್ ಅವರ ಅಪ್ಪ ನೀಡಿದ ಉತ್ತರವನ್ನು ದಯವಿಟ್ಟು ಓದಿ ಮನನ ಮಾಡಿಕೊಳ್ಳಿ. &lt;span style="font-size:85%;"&gt;[ನನಗೆ ಆ ನರಕೀಟದ ಹೆಸರನ್ನು ೨೪ ಸಲ ಬರೆಯಲು ಮತ್ತು ಓದಲು ಅಸಹ್ಯವಾದದ್ದರಿಂದ ಅವನ ಹೆಸರು ಬಂದಲ್ಲೆಲ್ಲ ಕಪ್ಪು ಬಣ್ಣ ಬಳಸಿದ್ದೇನೆ.]&lt;br /&gt;&lt;/span&gt;ಈ ನರಹಂತಕನ ಮುಖ ನೋಡಬೇಕೂನಿಸುತ್ತಾ ನಿಮಗೆ ಅಂತ ನಮ್ಮ ಮಾಧ್ಯಮ ಪ್ರತಿನಿಧಿ ಶಿಖಾಮಣಿ ಮಾಡಿದ ಪ್ರಶ್ನೆಗೆ ಅವರು ಹೇಳಿದ್ದಿಷ್ಟು – &lt;a href="http://www.vijaykarnatakaepaper.com/epaper/svww_index1.php"&gt;&lt;img id="BLOGGER_PHOTO_ID_5408650970005793026" style="DISPLAY: block; MARGIN: 0px auto 10px; WIDTH: 361px; CURSOR: hand; HEIGHT: 303px; TEXT-ALIGN: center" alt="" src="http://4.bp.blogspot.com/_GMLph4mGk9c/Sw9jZqVEaQI/AAAAAAAABMQ/cny3s4p1eGQ/s400/kraurya.gif" border="0" /&gt;&lt;/a&gt;&lt;/div&gt;&lt;div&gt;ಈ ಮಹಾನ್ ತಂದೆಯ ಯೋಚನೆಯನ್ನ ದೃಷ್ಟಿಕೋನವನ್ನ ಗೌರವಿಸುವುದು ಈ ಸಂದರ್ಭದಲ್ಲಿ ತುಂಬ ಸೂಕ್ತ.&lt;br /&gt;ಎಷ್ಟು ಕೋಟಿಗಳೂ ನಾವು ಕಳೆದುಕೊಂಡ ಅಮೂಲ್ಯ ಜೀವಗಳಿಗೆ ಸಮನಲ್ಲ. ಈ ತರಹದ ಘಟನೆಗಳು ಮುಂದೆ ನಡೆಯದ ಹಾಗೆ ಜವಾಬ್ದಾರಿ ತೆಗೆದುಕೊಳ್ಳುವವರು ಮಾಡುತ್ತಿರುವ ಕೆಲಸ ಮಧ್ಯೆ ಅನಾವಶ್ಯಕ ಭಾವೋದ್ವೇಗದ ಆರೋಪಣೆಗಳು ಸಲ್ಲ.&lt;br /&gt;ಆ ಕರಾಳ ದಿನ ಜೀವ ಕಳೆದುಕೊಂಡ ಮತ್ತು ಜೀವರಕ್ಷಣೆಗಾಗಿಯೇ ಜೀವತೆತ್ತ ಎಲ್ಲರ ನೆನಪಿಗೆ ತಲೆಬಾಗುತ್ತಾ,&lt;br /&gt;&lt;/div&gt;&lt;div&gt;ಪ್ರೀತಿಯಿಂದ&lt;br /&gt;ಸಿಂಧು. &lt;/div&gt;&lt;div&gt;[ಮಾಹಿತಿ ಚಿತ್ರದ ಮೂಲ - ವಿಜಯಕರ್ನಾಟಕ ೨೬.೧೧.೦೯]&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-4772110546214768844?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/4772110546214768844/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=4772110546214768844' title='2 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/4772110546214768844'/><link rel='self' type='application/atom+xml' href='http://www.blogger.com/feeds/4515791944382207090/posts/default/4772110546214768844'/><link rel='alternate' type='text/html' href='http://nenapu-nevarike.blogspot.com/2009/11/blog-post_26.html' title='ಬಚ್ಚಲ ರೊಚ್ಚು..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_GMLph4mGk9c/Sw9jZqVEaQI/AAAAAAAABMQ/cny3s4p1eGQ/s72-c/kraurya.gif' height='72' width='72'/><thr:total>2</thr:total></entry><entry><id>tag:blogger.com,1999:blog-4515791944382207090.post-8885443190115860812</id><published>2009-11-01T18:34:00.000-08:00</published><updated>2009-11-01T18:44:37.084-08:00</updated><category scheme='http://www.blogger.com/atom/ns#' term='ಮಿಶ್ರ ಮಾಧುರ್ಯ ಸೀರೀಸ್'/><title type='text'>ತವಕ..ತಲ್ಲಣ.ಸಂತಸ.. - ಮಿಶ್ರಮಾಧುರ್ಯ ಸೀರೀಸ್</title><content type='html'>ರದನೋದಯ ಜ್ವರ ದಮ್ ರೋಟ್ ಮೇಲೆ ನಡೆಯುತ್ತಾ ಇದೆ. :) &lt;div&gt;&lt;div&gt;ಇನ್ನೂ ಹಲ್ ಬಂದಿಲ್ಲ ಹಲ್ ಸೆಟ್ಟಿಗೆ ಆರ್ಡರ್ ಕೊಡಬೇಕೋ ಏನೋ ಅಂತ ಯೋಚನೆ ಮಾಡುತ್ತಾ ತುತ್ತು ಇಡುವಾಗ ಬೆರಳು ಕಡಿದು ಬಿಡಬೇಕೇ..!! &lt;/div&gt;&lt;img id="BLOGGER_PHOTO_ID_5399331086780230114" style="DISPLAY: block; MARGIN: 0px auto 10px; WIDTH: 400px; CURSOR: hand; HEIGHT: 387px; TEXT-ALIGN: center" alt="ಟುಪ್ಪೂಗೆ ಹನ್ನೊಂದು ತುಂಬಿತು..!" src="http://3.bp.blogspot.com/_GMLph4mGk9c/Su5HBDxCaeI/AAAAAAAAA94/N2jOFBo6bDo/s400/tuppu11.jpg" border="0" /&gt; &lt;div&gt;&lt;/div&gt;&lt;div&gt;ಸಣ್ಣದಾಗಿ ಜ್ವರ ಮತ್ತು ಆಗ ಈಗ ಲೂಸ್ ಮೋಶನ್ ಆಗ್ತಾ ಇದ್ರೂ, ದಮ್ರೋಟ್ ಮಾಡಿದ್ರೆ ತಿನ್ನದೆ ಹ್ಯಾಗಿರೋದು ಅಂತ ಚಪ್ಪರಿಸಿಕೊಂಡು ತಿನ್ನುತ್ತೆ ಈ ಪುಟ್ಟಗುಬ್ಬಿ ಈಗ. ಹನ್ನೊಂದು ಮಾಸಗಳುರುಳಿ ವರ್ಷದ ಹೆಜ್ಜೆಗಳು ಮೆತ್ತಗೆ ಮೂಡ್ತಾ ಇದೆ.&lt;br /&gt;ಮರಿಗೆ ಕೈಬಿಟ್ಟು ನಡೆಯಲು ತವಕ, ನೋಟ ಸಕ್ಕತ್ತಾಗಿರುತ್ತಾದರೂ ಅಮ್ಮನಿಗೆ ತಲ್ಲಣ. :)&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-8885443190115860812?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/8885443190115860812/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=8885443190115860812' title='15 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/8885443190115860812'/><link rel='self' type='application/atom+xml' href='http://www.blogger.com/feeds/4515791944382207090/posts/default/8885443190115860812'/><link rel='alternate' type='text/html' href='http://nenapu-nevarike.blogspot.com/2009/11/blog-post.html' title='ತವಕ..ತಲ್ಲಣ.ಸಂತಸ.. - ಮಿಶ್ರಮಾಧುರ್ಯ ಸೀರೀಸ್'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_GMLph4mGk9c/Su5HBDxCaeI/AAAAAAAAA94/N2jOFBo6bDo/s72-c/tuppu11.jpg' height='72' width='72'/><thr:total>15</thr:total></entry><entry><id>tag:blogger.com,1999:blog-4515791944382207090.post-1533296729944828127</id><published>2009-09-28T11:39:00.000-07:00</published><updated>2009-09-28T11:52:12.437-07:00</updated><category scheme='http://www.blogger.com/atom/ns#' term='::ಸೃಷ್ಟಿ ಶುಭದಾಯಿನಿ::'/><title type='text'>::ಸೃಷ್ಟಿ ಶುಭದಾಯಿನಿ::</title><content type='html'>&lt;div align="center"&gt;&lt;a href="http://2.bp.blogspot.com/_GMLph4mGk9c/SsEEsIpCJ1I/AAAAAAAAA9o/oeKKPizun4w/s1600-h/tuppu28.jpg"&gt;&lt;img id="BLOGGER_PHOTO_ID_5386591785592170322" style="DISPLAY: block; MARGIN: 0px auto 10px; WIDTH: 305px; CURSOR: hand; HEIGHT: 400px; TEXT-ALIGN: center" alt="" src="http://2.bp.blogspot.com/_GMLph4mGk9c/SsEEsIpCJ1I/AAAAAAAAA9o/oeKKPizun4w/s400/tuppu28.jpg" border="0" /&gt;&lt;/a&gt;::ಮಾತುಗಳನ್ನು ಮೀರಿದ ಬೆಡಗು::&lt;br /&gt;ಬೆರಗು,ಹೊನಲು,ನಸು-ಬೆಳಗು,ಬೆಳದಿಂಗಳ ಮಿಶ್ರ ಮಾಧುರ್ಯಕ್ಕೀಗ 10 ತಿಂಗಳು!&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-1533296729944828127?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/1533296729944828127/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=1533296729944828127' title='11 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/1533296729944828127'/><link rel='self' type='application/atom+xml' href='http://www.blogger.com/feeds/4515791944382207090/posts/default/1533296729944828127'/><link rel='alternate' type='text/html' href='http://nenapu-nevarike.blogspot.com/2009/09/10.html' title='::ಸೃಷ್ಟಿ ಶುಭದಾಯಿನಿ::'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_GMLph4mGk9c/SsEEsIpCJ1I/AAAAAAAAA9o/oeKKPizun4w/s72-c/tuppu28.jpg' height='72' width='72'/><thr:total>11</thr:total></entry><entry><id>tag:blogger.com,1999:blog-4515791944382207090.post-2534061070141419183</id><published>2009-09-24T23:25:00.000-07:00</published><updated>2009-09-24T23:27:06.734-07:00</updated><category scheme='http://www.blogger.com/atom/ns#' term='unfair'/><title type='text'>Ground Reality hurts.. n its unfair world!</title><content type='html'>ಸಮಾನತೆ, ಸ್ವಾತಂತ್ರ್ಯ&lt;br /&gt;ಸ್ವಾವಲಂಬನೆ&lt;br /&gt;ಒಳ್ಳೆಯ ಉಕ್ತಲೇಖನದ ಪದಗಳು.&lt;br /&gt;ಎಷ್ಟೇ ಸರಿಯಾಗಿ ಬರೆದರೂ&lt;br /&gt;ಅವು ಪುಸ್ತಕದ ಮೇಲೆ ಮಾತ್ರ.&lt;br /&gt;ಮಾತುಗಳಲ್ಲಿ ಬಂದರೂ&lt;br /&gt;ಭಾಷಣಗಳಲ್ಲಿ ಮಾತ್ರ.&lt;br /&gt;ಪದಗಳಲ್ಲಿ ಮೂಡಿದರೂ&lt;br /&gt;ಪ್ರಶಸ್ತಿ ಪಡೆಯುವ ಕವಿತೆಗಳಿಗೆ ಮಾತ್ರ.&lt;br /&gt;ಚಿತ್ರದಲ್ಲಿ ಬರಬೇಕಿದ್ದರೆ&lt;br /&gt;ಕಲಾತ್ಮಕ ಸಿನಿಮಾಗಳಿಗೆ ಮಾತ್ರ.&lt;br /&gt;ಬದುಕಿನ ಸ್ತರವೇ ಬೇರೆ&lt;br /&gt;ಹೆಣ್ಣು ಯಾವತ್ತಿದ್ದರೂ ಹೊಂದಾಣಿಕೆಗೆ ಮಾತ್ರ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-2534061070141419183?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/2534061070141419183/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=2534061070141419183' title='11 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/2534061070141419183'/><link rel='self' type='application/atom+xml' href='http://www.blogger.com/feeds/4515791944382207090/posts/default/2534061070141419183'/><link rel='alternate' type='text/html' href='http://nenapu-nevarike.blogspot.com/2009/09/ground-reality-hurts-n-its-unfair-world.html' title='Ground Reality hurts.. n its unfair world!'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>11</thr:total></entry><entry><id>tag:blogger.com,1999:blog-4515791944382207090.post-2871342779666588989</id><published>2009-08-28T01:40:00.000-07:00</published><updated>2009-08-28T01:46:19.890-07:00</updated><category scheme='http://www.blogger.com/atom/ns#' term='ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಲಹರಿ..'/><title type='text'>ಅಶ್ರುತ ಗಾನ..</title><content type='html'>&lt;span style="color:#000000;"&gt;ಬೇಸರ,ಸಂಕಟ,ಅನಾನುಕೂಲಗಳನ್ನೆಲ್ಲ&lt;/span&gt;&lt;br /&gt;&lt;span style="color:#000000;"&gt;ಮೂಟೆ ಕಟ್ಟಿಟ್ಟ&lt;/span&gt;&lt;br /&gt;&lt;span style="color:#000000;"&gt;ಆಹ್ಲಾದದ ಹಾದಿಯದು&lt;/span&gt;&lt;br /&gt;&lt;span style="color:#000000;"&gt;ಪುಲ್ಲ ಕುಸುಮಿತ ದ್ರುಮದಲ ಶೋಭಿನೀ&lt;/span&gt;&lt;br /&gt;&lt;span style="color:#000000;"&gt;ಹೊರೆಗೆಲಸದ ಕಟ್ಟೆಯಿಳಿದು &lt;/span&gt;&lt;br /&gt;&lt;span style="color:#000000;"&gt;ಕಾಲು ಚೆಲ್ಲಿದ ಕೂಡಲೆ&lt;/span&gt;&lt;br /&gt;&lt;span style="color:#000000;"&gt;ಮುತ್ತಿಡುವ ಆಶಾದಾಯಿನಿ &lt;/span&gt;&lt;br /&gt;&lt;span style="color:#000000;"&gt;&lt;/span&gt;&lt;br /&gt;&lt;span style="color:#000000;"&gt;ಯಾವ ತಿರುವಲ್ಲಿ ತಿರುಗಿದೆನೋ ಗೊತ್ತಿಲ್ಲ&lt;/span&gt;&lt;br /&gt;&lt;span style="color:#000000;"&gt;ಅನುಕೂಲಗಳ ಆತಂಕರಹಿತ&lt;/span&gt;&lt;br /&gt;&lt;span style="color:#000000;"&gt;ಅನಾಹತ ಹೈವೇಗೆ ಬಂದಾಯಿತು&lt;/span&gt;&lt;br /&gt;&lt;span style="color:#000000;"&gt;ಇಲ್ಲೇ ಸುದೂರದಿ &lt;/span&gt;&lt;br /&gt;&lt;span style="color:#000000;"&gt;ನೀಲಿಗೆರೆಯ ಸುತ್ತಲ &lt;/span&gt;&lt;br /&gt;&lt;span style="color:#000000;"&gt;ಹಸಿರು ಪದರದ ಹಾದಿಯ ಸಂಜೀವಿನೀ&lt;/span&gt;&lt;br /&gt;&lt;span style="color:#000000;"&gt;ದೂರವೇನಿಲ್ಲ, &lt;/span&gt;&lt;br /&gt;&lt;span style="color:#000000;"&gt;ಕಾಲಿಗೆ ದಕ್ಕುವುದಿಲ್ಲ,&lt;/span&gt;&lt;br /&gt;&lt;span style="color:#000000;"&gt;ನಡುವೆಯಿರುವುದೀಗ &lt;/span&gt;&lt;br /&gt;&lt;span style="color:#000000;"&gt;ದಾಟಿ ಹಾರಬಹುದಾದ ಕಿಟಕಿಯಲ್ಲ&lt;/span&gt;&lt;br /&gt;&lt;span style="color:#000000;"&gt;ದಿನದಿನವೂ ಮೊನಚಾಗಿ ಚುಚ್ಚುವ ಕನ್ನಡಿ!&lt;/span&gt;&lt;br /&gt;&lt;span style="color:#000000;"&gt;ಮುಂದೆ ಮುಂದೆ ಹೋದರೆದಾರಿ ಸಿಕ್ಕದಲ್ಲ&lt;/span&gt;&lt;br /&gt;&lt;span style="color:#000000;"&gt;ಹಿಂದೆ ತಿರುಗಿ ಹೋಗಬಹುದೆ?&lt;/span&gt;&lt;br /&gt;&lt;span style="color:#000000;"&gt;ಅದರ ಗುಟ್ಟು ನನಗೆ ತಿಳಿಯದಲ್ಲ..!&lt;/span&gt;&lt;br /&gt;&lt;span style="color:#000000;"&gt;ಕೂತು ಯೋಚಿಸಲು ಗಡಿಬಿಡಿ&lt;/span&gt;&lt;br /&gt;&lt;span style="color:#000000;"&gt;ಕೊನೆಗೆ ಷರಾ ಹೋಗಲಿಬಿಡಿ..&lt;/span&gt;&lt;br /&gt;&lt;span style="color:#000000;"&gt;ಆಕಡೆ ನೋಡದಿದ್ದರಾಯಿತು&lt;/span&gt;&lt;br /&gt;&lt;span style="color:#000000;"&gt;ದಾರಿ ತನ್ನ ಪಾಡಿಗೆ ತಾನು ಕನ್ನಡಿಯಲ್ಲಿರಲಿಬಿಡಿ&lt;/span&gt;&lt;br /&gt;&lt;span style="color:#000000;"&gt;&lt;/span&gt;&lt;br /&gt;&lt;span style="color:#000000;"&gt;ಆದರೂ...&lt;/span&gt;&lt;br /&gt;&lt;span style="color:#000000;"&gt;&lt;/span&gt;&lt;br /&gt;&lt;span style="color:#000000;"&gt;ಈಗ ಇಲ್ಲದಿದ್ದರ ಕುರಿತು &lt;/span&gt;&lt;br /&gt;&lt;span style="color:#000000;"&gt;ಕೊರಗಿ ನಲುಗುವ ಮೊದಲು&lt;/span&gt;&lt;br /&gt;&lt;span style="color:#000000;"&gt;ಒಂದು ಕೃತಜ್ಞತೆ ಹೇಳಬೇಕಿದೆ,&lt;/span&gt;&lt;br /&gt;&lt;span style="color:#000000;"&gt;ಇಲ್ಲಿಯವರೆಗೆ ನಿಲುಕಿದ್ದಕ್ಕೆ&lt;/span&gt;&lt;br /&gt;&lt;span style="color:#000000;"&gt;ಬೇಕಿತ್ತೋ ಬೇಡವೋ ಒಳಗೊಂಡಿದ್ದಕ್ಕೆ&lt;/span&gt;&lt;br /&gt;&lt;span style="color:#000000;"&gt;ಕೇಳದೆಯೇ ಒಲಿದು ಬಂದದ್ದಕ್ಕೆ&lt;/span&gt;&lt;br /&gt;&lt;span style="color:#000000;"&gt;ಕಣ್ಣಹನಿಯಿಳಿಯುವಾಗ ಅಂಗೈ ಹಿಡಿದದ್ದಕ್ಕೆ&lt;/span&gt;&lt;br /&gt;&lt;span style="color:#000000;"&gt;ಹೆಜ್ಜೆ ಜಾರುವಾಗ, ಕೈಬೆರಳ ಬಿಗಿದು ಹಿಡಿದ ಬಿಸುಪಿಗೆ&lt;/span&gt;&lt;br /&gt;&lt;span style="color:#000000;"&gt;ಹಾಗೆ  ನೋಡಿದರೆ&lt;/span&gt;&lt;br /&gt;&lt;span style="color:#000000;"&gt;ಅಂದುಕೊಂಡಿದ್ದಕ್ಕಿಂತ ಹೆಚ್ಚು ಪ್ರೀತಿಸಿದ ಬದುಕಿಗೆ&lt;/span&gt;&lt;br /&gt;&lt;span style="color:#000000;"&gt;ಬೇಸರ ಮಾಡಬಹುದೆ ಈಗ?&lt;/span&gt;&lt;br /&gt;&lt;span style="color:#000000;"&gt;&lt;/span&gt;&lt;br /&gt;&lt;span style="color:#000000;"&gt;ಸಂಕಟಕಳೆದು &lt;/span&gt;&lt;br /&gt;&lt;span style="color:#000000;"&gt;ನಲಿವು ಮುಗಿದು&lt;/span&gt;&lt;br /&gt;&lt;span style="color:#000000;"&gt;ಸ್ಥಿತಪ್ರಜ್ಞಯೋಗದಲ್ಲೂ&lt;/span&gt;&lt;br /&gt;&lt;span style="color:#000000;"&gt;ಇನ್ನೇನೋ ಬೇಕು ಬೇಕೆನ್ನುವುದು&lt;/span&gt;&lt;br /&gt;&lt;span style="color:#000000;"&gt;ಸಾಥ್ ಕೊಡಲಾಗದ ಹೆಸರಿರದ ರಾಗ!&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-2871342779666588989?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/2871342779666588989/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=2871342779666588989' title='6 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/2871342779666588989'/><link rel='self' type='application/atom+xml' href='http://www.blogger.com/feeds/4515791944382207090/posts/default/2871342779666588989'/><link rel='alternate' type='text/html' href='http://nenapu-nevarike.blogspot.com/2009/08/blog-post_28.html' title='ಅಶ್ರುತ ಗಾನ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-4515791944382207090.post-961700414200865175</id><published>2009-08-27T11:31:00.000-07:00</published><updated>2009-08-27T11:37:47.101-07:00</updated><category scheme='http://www.blogger.com/atom/ns#' term='ಕೆ.ಎಸ್.ನ'/><title type='text'>ನೀಲಾಂಬರದ ನಡುವಿನ ಚಂದಿರನ ಸೇರಲು ನಗುತ ಹೊರಟ ರೋಹಿಣಿ..</title><content type='html'>ಮಲ್ಲಿಗೆಯ ಪರಿಮಳದ ಹಾದಿ ಹಿಡಿದು ನಡೆದ ವೆಂಕಮ್ಮ ಕೆ.ಎಸ್.ನ ಅವರ ಬಗೆಗೆ ನನ್ನ &lt;a href="http://www.kendasampige.com/article.php?id=2822"&gt;&lt;strong&gt;&lt;span style="color:#ff6600;"&gt;ನುಡಿನಮನವನ್ನ ಕೆಂಡಸಂಪಿಗೆ&lt;/span&gt;&lt;/strong&gt; &lt;/a&gt;ಪ್ರಕಟಿಸಿದೆ.&lt;br /&gt;ನಿನ್ನೆ ಬುಧವಾರ ಬೆಳಿಗ್ಗೆ&lt;br /&gt;ತನ್ನ ಹಾದಿ ಕಾಯುತ್ತ ಕೂತಿರಬಹುದಾದ&lt;br /&gt;ಕವಿಚೇತನವನ್ನ ಸೇರಲು&lt;br /&gt;ಅವರ ಮನೆಯೊಡತಿ ಹೊರಟು ಹೋಗಿದ್ದಾರೆ.&lt;br /&gt;&lt;br /&gt;ಕಾವ್ಯಶ್ರೀ..ಯ ಹಿರಿಯಚೇತನಗಳನ್ನ ಕಳೆದುಕೊಂಡ ಅವರ ಕುಟುಂಬದವರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಬರಲಿ.&lt;br /&gt;ಪ್ರೀತಿಯ ನಮನಗಳು ವೆಂಕಮ್ಮನವರಿಗೆ.&lt;br /&gt;&lt;br /&gt;ಪ್ರೀತಿಯಿಂದ&lt;br /&gt;ಸಿಂಧು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-961700414200865175?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/961700414200865175/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=961700414200865175' title='2 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/961700414200865175'/><link rel='self' type='application/atom+xml' href='http://www.blogger.com/feeds/4515791944382207090/posts/default/961700414200865175'/><link rel='alternate' type='text/html' href='http://nenapu-nevarike.blogspot.com/2009/08/blog-post_27.html' title='ನೀಲಾಂಬರದ ನಡುವಿನ ಚಂದಿರನ ಸೇರಲು ನಗುತ ಹೊರಟ ರೋಹಿಣಿ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-4515791944382207090.post-7397450672752675316</id><published>2009-08-19T02:31:00.000-07:00</published><updated>2009-08-19T02:34:31.436-07:00</updated><category scheme='http://www.blogger.com/atom/ns#' term='ಲಹರಿ'/><title type='text'>ಬರಿ ಬೆಳಗಲ್ಲೋ ಅಣ್ಣಾ...</title><content type='html'>ಪಾದರಕ್ಷೆಯೊಳಗಣ ಒದ್ದೆ ಮುದ್ದೆ ಪಾದ&lt;br /&gt;ನೆನೆದು ತೋಯ್ದ ರಸ್ತೆಯ ಮೇಲೆ&lt;br /&gt;ಕೊಡೆಯ ಕೆಳಗೇ ನಡೆದೂ&lt;br /&gt;ಮೇಲುದದ ತುದಿಯಲ್ಲಿ ತುಂತುರು ಹನಿಗಳು&lt;br /&gt;ಛೇ, ಬೆಳಗಿನ ಹೊಸ್ತಿಲಲಿ&lt;br /&gt;ಹೀಗೆ ಮಳೆ ಹುಯ್ದರೆ&lt;br /&gt;ಆಫೀಸಿಗೆ ಹೋಗುವುದು ಹೇಗೆ&lt;br /&gt;ಎಷ್ಟು ಕಷ್ಟವಪ್ಪಾ ಬದುಕೂ...&lt;br /&gt;ಥಂಡಿಯಲಿ ತುಟಿ ಸುತ್ತಿಸಿ ಒಳಗಿನ ಬಿಸಿಯನ್ನು&lt;br /&gt;ಗಾಳಿಯಲಿ ಊದಿಬಿಟ್ಟ ಉಂಗುರಗಳನ್ನ&lt;br /&gt;ನೋಡುತ್ತ ಕತ್ತು ಮೇಲೆತ್ತಿದರೆ..&lt;br /&gt;&lt;br /&gt;ಬೀದಿಯಂಚಲಿ&lt;br /&gt;ಮೋಡವೇ ತನ್ನೊಳಗೆ ಎಂಬಂತೆ&lt;br /&gt;ಹನಿಯಿಡುತ್ತಿರುವ ಆಕಾಶಮಲ್ಲಿಗೆಯ ಮರ&lt;br /&gt;ತೂಗಿಬಿದ್ದ ಬೆಂಡೋಲೆಹೂಗಳ ಗೊಂಚಲಲ್ಲಿ&lt;br /&gt;ಪರಿಮಳವ ಹೊದ್ದು&lt;br /&gt;ಇಳಿಯುತ್ತಿರುವ ಬನಿ&lt;br /&gt;ಯಾರೂ ರಂಗೋಲಿಯಿಡದ&lt;br /&gt;ಮುಖ್ಯರಸ್ತೆಯ&lt;br /&gt;ಮೈಯ ತುಂಬ&lt;br /&gt;ಚಿತ್ತಾರವಿಟ್ಟ ಬಿಳಿಬಿಳಿಹೂಗಳು&lt;br /&gt;ಎಲೆಮರೆಯಲ್ಲಿ ಒದ್ದೆ ಪುಕ್ಕ&lt;br /&gt;ಕೊಡವುತ್ತ ಆರ್ದ್ರವಾಗಿ ಕುಳಿತು&lt;br /&gt;ಬೆಚ್ಚನೆ ರಾಗವ ಉಲಿಯುತ್ತಿರುವ ಹಕ್ಕಿ ಸಮುದಾಯ&lt;br /&gt;ಬೇಡಿಕೆ, ಬೇಸರಗಳಿಲ್ಲದ ಸಹಜ ಸತ್ಯ ಬದುಕು&lt;br /&gt;&lt;br /&gt;ಅದೇ ಒದ್ದೆಮುದ್ದೆ ಹಾದಿ,&lt;br /&gt;ಮೈ ತೋಯಿಸುವ ಮಳೆ ಆಪ್ತವೆನಿಸಿ..&lt;br /&gt;ಅಷ್ಟೇ ಅಲ್ಲ&lt;br /&gt;ಕಾದಿರುವ ಬೆಚ್ಚನೆ ಕ್ಯಾಬು,&lt;br /&gt;ಒಣಗಿ ಗರಿಗರಿಯಾಗಿರುವ ಆಫೀಸು ಕ್ಯೂಬು&lt;br /&gt;ಎಲ್ಲ ನೆನಪಾದವು...&lt;br /&gt;ಇದು ಬರಿ ಬೆಳಗಲ್ಲೋ ಅಣ್ಣಾ -&lt;br /&gt;ಬೇಂದ್ರೆ ಅಂದರಂತೆ&lt;br /&gt;ಹೌದೆನಲು ಮಾತು ಮರೆತು ನಿಂತೆ!&lt;br /&gt;&lt;br /&gt;ಕಾರ್ಪೋರೇಟ್ ಮೌನದಲಿ&lt;br /&gt;ಮರೆತ ಮಾತು ಆವಿಯಾಗುತ್ತಿದೆ&lt;br /&gt;ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ&lt;br /&gt;ನೋಡಬೇಕು ಅಷ್ಟೆ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-7397450672752675316?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/7397450672752675316/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=7397450672752675316' title='4 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/7397450672752675316'/><link rel='self' type='application/atom+xml' href='http://www.blogger.com/feeds/4515791944382207090/posts/default/7397450672752675316'/><link rel='alternate' type='text/html' href='http://nenapu-nevarike.blogspot.com/2009/08/blog-post_19.html' title='ಬರಿ ಬೆಳಗಲ್ಲೋ ಅಣ್ಣಾ...'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-4515791944382207090.post-8263715984759997640</id><published>2009-08-03T03:20:00.000-07:00</published><updated>2009-08-03T03:22:32.661-07:00</updated><category scheme='http://www.blogger.com/atom/ns#' term='ಮೋನೋ..'/><title type='text'>ಹತ್ತುವುದೆಲ್ಲ ಇಳಿಯಲಿಕ್ಕೇ...!!?</title><content type='html'>ಏರು ಹಾದಿಯ ಬೆಟ್ಟಸಾಲಿನ&lt;br /&gt;ನಿಬಿಡ ಕಾಡಿನ ಅಂಚಲಿ&lt;br /&gt;ಹರಡಿ ನಿಂತ ಚಾಮರವ&lt;br /&gt;ಹೊತ್ತ ಮತ್ತಿಮರದ ನೆರಳಲಿ&lt;br /&gt;ನಿಂತು ನೋಡಲು&lt;br /&gt;ಕಾಣಸಿಗುವುದು ದೂರಕಣಿವೆಯ&lt;br /&gt;ಕಾಲುಹಾದಿ,..&lt;br /&gt;ಹಸಿರ ಹುಲ್ಲಿನ ಮಧ್ಯೆ&lt;br /&gt;ಬಳುಕಿ ಹರಿವ ಹೊನಲಿದೆ,&lt;br /&gt;ಅಲ್ಲೆ ಸನಿಹದಿ&lt;br /&gt;ಮೆಲ್ಲಹೊರಳುತ ದಾರಿ&lt;br /&gt;ದೂರಕೆ ಸಾಗಿದೆ&lt;br /&gt;ಬೆಟ್ಟತುದಿಯ ನೋಟಕೆ&lt;br /&gt;ಕ್ಯಾಮೆರಾ ಕಣ್ಣಾಟಕೆ&lt;br /&gt;ರಮಣೀಯ ಚಿತ್ರದ ಯೋಚನೆ&lt;br /&gt;ದಾರಿಯೆಡೆಯಲ್ಲಿ ನಡೆದವರಿಗಷ್ಟೇ&lt;br /&gt;ಗೊತ್ತು&lt;br /&gt;ಚುಚ್ಚುವ ಮುಳ್ಳು, ಒತ್ತುವ ಕಲ್ಲು&lt;br /&gt;ಹಳ್ಳದ ಉಸುಕು,&lt;br /&gt;ಗುರಿಯಿರದ ಪಯಣದ ಯಾತನೆ....&lt;br /&gt;&lt;br /&gt;ಇಲ್ಲಿ ದೂರದಿ&lt;br /&gt;ಬೆಟ್ಟದೇರಲಿ&lt;br /&gt;ತಂಪು ಮತ್ತಿಯ&lt;br /&gt;ನೆರಳಲಿ&lt;br /&gt;ಆ ಎಲ್ಲ ಯಾತನೆಗಳ&lt;br /&gt;ತಿಥಿ ನಡೆದಿದೆ&lt;br /&gt;ಊಟವಿಲ್ಲದ ಶ್ರಾದ್ಧ;&lt;br /&gt;ಮನಸೋ&lt;br /&gt;ಮರೆಯಬೇಕಿರುವುದನ್ನೆ&lt;br /&gt;ನೆನೆಯಲು&lt;br /&gt;ಮತ್ತೆ ಮತ್ತೆ ಬದ್ಧ;&lt;br /&gt;ಮರೆಯಲೋ ನೆನಪಾಗಲೋ&lt;br /&gt;ನೆನಪುಗಳಿಗೆ ನಡೆದಿವೆ&lt;br /&gt;ತಂತಮ್ಮೊಳಗೇ ಯುದ್ಧ!&lt;br /&gt;&lt;br /&gt;ಯುದ್ಧ ಮುಗಿದು&lt;br /&gt;ಗಾಯಗಳ ನೆಕ್ಕುತ್ತಾ,&lt;br /&gt;ಕಣ್ಣ ನೋಟವ ಕದಲಿಸಿ&lt;br /&gt;ಬೆಟ್ಟಸಾಲಿನಲ್ಲಿ&lt;br /&gt;ಆರೋಹಣ.&lt;br /&gt;ಮತ್ತೆ ಮುಂದಿನ ತಿಥಿಗೆ&lt;br /&gt;ನೆನಪುಗಳ ಅವರೋಹಣ..&lt;br /&gt;ಹತ್ತುವುದೆಲ್ಲ ಇಳಿಯಲಿಕ್ಕೇ ಅಂತ ಇದಕ್ಕೇ ಅನ್ನುತ್ತಾರೇನೋ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-8263715984759997640?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/8263715984759997640/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=8263715984759997640' title='7 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/8263715984759997640'/><link rel='self' type='application/atom+xml' href='http://www.blogger.com/feeds/4515791944382207090/posts/default/8263715984759997640'/><link rel='alternate' type='text/html' href='http://nenapu-nevarike.blogspot.com/2009/08/blog-post.html' title='ಹತ್ತುವುದೆಲ್ಲ ಇಳಿಯಲಿಕ್ಕೇ...!!?'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>7</thr:total></entry><entry><id>tag:blogger.com,1999:blog-4515791944382207090.post-2430399128270641945</id><published>2009-07-16T02:24:00.000-07:00</published><updated>2009-07-16T02:34:29.560-07:00</updated><category scheme='http://www.blogger.com/atom/ns#' term='ಸ್ನೇಹಿತ'/><title type='text'>ಸ್ನೇಹಿತನಿಗೆ...</title><content type='html'>ಕವಿಕಾಣ್ಕೆಯ ಸ್ನೇಹಿತನಿಗೆ... &lt;br /&gt;&lt;br /&gt;ಕಾಲುಹಾದಿಯ ಪಯಣದಲ್ಲಿ&lt;br /&gt;ನೆರಳು ಬಿಸಿಲ ಚಿನ್ನಾಟ;&lt;br /&gt;ಎಲ್ಲೋ ನಿಂತು &lt;br /&gt;ನಿಡಿದಾದ ಉಸಿರೆಳೆಯುವಾಗ&lt;br /&gt;ನಿನ್ನ ನೆನಪಿನ&lt;br /&gt;ಹೂವರಳಿದ ಗಂಧ &lt;br /&gt;ಬಗ್ಗಿ ನೋಡಿ ಗಿಡವ ಹುಡುಕಲಾರೆ&lt;br /&gt;ನಿಬಿಡ ಕಾಡು, ಪೊದೆ;&lt;br /&gt;ದೂರವೆನಿಸುತ್ತಿದೆ ಆದರೂ &lt;br /&gt;ಹತ್ತಿರವಾಗಿ ಸುಳಿಯುತ್ತಿದೆ ಗಂಧ&lt;br /&gt;ಹೂವರಳಿದ ನೆನಕೆಗೇ&lt;br /&gt;ಮೈಯೆಲ್ಲ ಮುಳ್ಳು..&lt;br /&gt;ಮತ್ತೆ ಮುಂದೋಡುವ ಪಯಣ,&lt;br /&gt;ಎಚ್ಚರ ಕನಸುಗಳ ನಡುವಣ &lt;br /&gt;ದಿನದಿನದ ಗಾಣ&lt;br /&gt;ಗೊತ್ತು ಇನ್ಯಾವುದೋ &lt;br /&gt;ತಿರುನಲ್ಲಿ&lt;br /&gt;ಬರಲಿದೆ&lt;br /&gt;ನೆನಪಿನ ಬನದ ನಿನ್ನ ಗಂಧ ಗಾಳಿ!&lt;br /&gt;&lt;br /&gt;ದೂರವ ಮೀರಿ, &lt;br /&gt;ಮರೆವನು ಮೆಟ್ಟಿ,&lt;br /&gt;ಹಾಯೆನಿಸುವಂತೆ &lt;br /&gt;ತೀಡಿ ಬರುವ &lt;br /&gt;ನಿನ್ನ ದೃಶ್ಯಕಾವ್ಯಕ್ಕೆ&lt;br /&gt;ಮಧುರ ಸ್ನೇಹಕ್ಕೆ&lt;br /&gt;ಆಭಾರಿ ಸಮುದ್ರೆಯ&lt;br /&gt;ಕಣ್ಣ ಹನಿಗಳ ಕಾಣಿಕೆ&lt;br /&gt;ನೆನಪಿನಲೆಗಳ ಮಾಲಿಕೆ..&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-2430399128270641945?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/2430399128270641945/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=2430399128270641945' title='5 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/2430399128270641945'/><link rel='self' type='application/atom+xml' href='http://www.blogger.com/feeds/4515791944382207090/posts/default/2430399128270641945'/><link rel='alternate' type='text/html' href='http://nenapu-nevarike.blogspot.com/2009/07/blog-post_16.html' title='ಸ್ನೇಹಿತನಿಗೆ...'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-4515791944382207090.post-8839765148253779446</id><published>2009-07-14T20:37:00.000-07:00</published><updated>2009-07-14T20:51:37.328-07:00</updated><category scheme='http://www.blogger.com/atom/ns#' term='ಕೆಂಡಸಂಪಿಗೆ'/><category scheme='http://www.blogger.com/atom/ns#' term='ಲಾವಂಚ'/><title type='text'>ಅರ್ಥ - ಅಪಾರ್ಥ</title><content type='html'>&lt;blockquote style="font-family: georgia; color: rgb(0, 0, 102);"&gt;" If you have built castles in the air, your work need not be lost;&lt;br /&gt;   that is where they should be.&lt;br /&gt;   Now put the foundations under them.."&lt;/blockquote&gt;&lt;br /&gt;ಹೆನ್ರಿ ಡೇವಿಡ್ ಥೋರೋ (ಥೋರು) ನ ಈ ಉಕ್ತಿ ನನ್ನನ್ನು ಸದಾ ಕಾಡಿದ, ಕಾಪಾಡಿದ ಸಾಲು.&lt;br /&gt;&lt;br /&gt;ಕಾಡುವ ಸಾಲುಗಳನ್ನ ಬರೆದವರ ಬಗೆಗಿನ ಅರ್ಥ-ಅಪಾರ್ಥಗಳ ಕುರಿತು ನನ್ನ ಇತ್ತೀಚಿನ ಗ್ರಹಿಕೆಯನ್ನ ಕೆಂಡಸಂಪಿಗೆಯ ನನ್ನ ಅಂಕಣ &lt;a href="http://kendasampige.com/article.php?id=2657"&gt;&lt;span style="font-weight: bold;"&gt;ಲಾವಂಚದಲ್ಲಿ &lt;/span&gt;&lt;/a&gt;ಪ್ರಕಟಿಸಲಾಗಿದೆ. [http://kendasampige.com/article.php?id=2657]&lt;br /&gt;&lt;br /&gt;ಸಮಯವಿದ್ದರೆ ಓದಿ, ಏನನ್ನಿಸಿತು ಹಂಚಿಕೊಳ್ಳಿ.&lt;br /&gt;&lt;br /&gt;ಪ್ರೀತಿಯಿಂದ&lt;br /&gt;ಸಿಂಧು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-8839765148253779446?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/8839765148253779446/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=8839765148253779446' title='1 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/8839765148253779446'/><link rel='self' type='application/atom+xml' href='http://www.blogger.com/feeds/4515791944382207090/posts/default/8839765148253779446'/><link rel='alternate' type='text/html' href='http://nenapu-nevarike.blogspot.com/2009/07/blog-post_14.html' title='ಅರ್ಥ - ಅಪಾರ್ಥ'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-4515791944382207090.post-448880985131360652</id><published>2009-07-02T03:31:00.000-07:00</published><updated>2009-07-02T03:34:38.139-07:00</updated><category scheme='http://www.blogger.com/atom/ns#' term='ಕಲಿಯಬೇಕು ತುಂಬಾ..'/><category scheme='http://www.blogger.com/atom/ns#' term='ಬೆಳಕು'/><title type='text'>ಕರುಣಾಳು ಬಾ ಬೆಳಕೆ..</title><content type='html'>ಸಂಜೆ ಕಾವಳ ಕವಿದಿದೆ&lt;br /&gt;ದೂರದಿ ತೇಲಿಹ ಕರ್ಮುಗಿಲ ಮಾಲೆ&lt;br /&gt;ಭುವಿಯ ಮೈಗೆ ಮೆತ್ತಿದೆ&lt;br /&gt;ಇನ್ನೇನು ಮಳೆ ಬರಲಿದೆ..&lt;br /&gt;ದಿನದ ಬಿನ್ನಹಗಳ&lt;br /&gt;ಆಲಿಪನೆಂದು ನಂಬಿದವನ ಮುಂದೆ&lt;br /&gt;ಎರಡು ನಂದಾದೀಪ&lt;br /&gt;ಬತ್ತಿ ಸರಿಮಾಡಿ ಎಣ್ಣೆತುಂಬಿಸಿ&lt;br /&gt;ಕಡ್ಡಿ ಕೊರೆದರು ಗೌರಮ್ಮ&lt;br /&gt;ದೇವರ ಮುಂದೆ ಚೆಂಬೆಳಕು&lt;br /&gt;ಹಚ್ಚಿದ ಮೊಗದ ಮೇಲೂ&lt;br /&gt;ಪ್ರತಿಫಲಿಸಿ ಚೆಲ್ಲಿದ ಬೆಳಕು,&lt;br /&gt;ಕಾವಳ ಸರಿಯಿತೆ ಹೊರಗೆ?!&lt;br /&gt;&lt;br /&gt;ಸಮಾನತೆಯ ಬೇರಿನ&lt;br /&gt;ಕಷಾಯ ಕುಡಿದವಳಿಗೆ&lt;br /&gt;ಇರಿಸುಮುರಿಸು&lt;br /&gt;ಅವರು ಹಚ್ಚಬಹುದೆ ದೀಪ&lt;br /&gt;ಅತ್ತೆ ಸ್ವತಃ ಹುಣಿಸೆಹಣ್ಣು&lt;br /&gt;ತಿಕ್ಕಿ ತೊಳೆದು ಇಟ್ಟ ದೀಪ !&lt;br /&gt;ಸಂಜೆ ಕಾವಳ ಇಳಿದಿತ್ತು&lt;br /&gt;ಮನಸಿನ ಒಳಗೆ;&lt;br /&gt;ದೀಪದ ನಿಹಾರಿಕೆ ಹೊರಗೆ;&lt;br /&gt;ದೇವರೆಡೆಗೆ.&lt;br /&gt;ವಿಚಾರವೇನಿದ್ದರೂ ಮಾತಿಗೆ,&lt;br /&gt;ಬರವಣಿಗೆಗೆ,&lt;br /&gt;ಕೊನೆಗೂ ದೀಪದ ಸುತ್ತ ಕತ್ತಲೆ,&lt;br /&gt;ಬೆಳಕು ಮಾತ್ರ ಬೆಳ್ಳಗೆ,&lt;br /&gt;ಕಪ್ಪಿಡದೆ.. ತನ್ನ ಪಾಡಿಗೆ ತಾನಿದೆ..&lt;br /&gt;&lt;br /&gt;ನಕ್ಕಳೊಬ್ಬ ಕಿನ್ನರಿ&lt;br /&gt;ಹರಿಯಿತೊಂದು ಬೆಳಕ ಝರಿ&lt;br /&gt;ಮನೆದೇವರನ್ನೆ&lt;br /&gt;ಮಡಿಲಿಗೆ ತುಂಬಿಹೆನು&lt;br /&gt;ದೀಪ ಹಚ್ಚಬಾರದೆ&lt;br /&gt;ದೇವರಿಗೂ ಮೈಲಿಗೆಯೇ?!&lt;br /&gt;&lt;br /&gt;ಹಬ್ಬಿದ ಕಾವಳ ಕರಗಿ&lt;br /&gt;ಮೋಡಒಡೆದು ಮಳೆಯಾಗಿ&lt;br /&gt;ಗೌರಮ್ಮನಲಿ&lt;br /&gt;ಅಮ್ಮನದೇ ಬಿಂಬ&lt;br /&gt;ಮನದ ಕಪ್ಪು ತೊಳೆದ ಬೆಳಕು&lt;br /&gt;ಮತ್ತೆ ಮತ್ತೆ ಮಿನುಗಿ&lt;br /&gt;ನಿತ್ರಾಣದಿ ಮೂಲೆಹಿಡಿದ&lt;br /&gt;ವಿಚಾರದೆಳೆಯಲಿ&lt;br /&gt;ಹೊಸ ಜೀವಸೆಲೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-448880985131360652?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/448880985131360652/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=448880985131360652' title='7 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/448880985131360652'/><link rel='self' type='application/atom+xml' href='http://www.blogger.com/feeds/4515791944382207090/posts/default/448880985131360652'/><link rel='alternate' type='text/html' href='http://nenapu-nevarike.blogspot.com/2009/07/blog-post.html' title='ಕರುಣಾಳು ಬಾ ಬೆಳಕೆ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>7</thr:total></entry><entry><id>tag:blogger.com,1999:blog-4515791944382207090.post-4109300839580553944</id><published>2009-06-11T22:36:00.000-07:00</published><updated>2009-06-12T00:39:32.682-07:00</updated><category scheme='http://www.blogger.com/atom/ns#' term='ಭಾವಲಹರಿ'/><title type='text'>ತಡವಾಗಿ ಬಂದವಳು ಎಂಬ ಸಿಟ್ಟೇನಿಲ್ಲ, ತುಂಬ ಸಂತಸ ನನಗೆ ನಿನ್ನ ಕಂಡು..</title><content type='html'>&lt;span style="color:#003333;"&gt;ಹೌದು ಮುಗಿಲಗಲದ ಕಣ್ಣಿನವಳೇ, ನೀನು ತಡವಾಗಿ ಬಂದೆ ಎಂಬ ಸೆಡವು ಎನಗಿಲ್ಲ. ನನ್ನ ಜೀವಕೆ ನೀನು ಬಂದ ಪರಿಯನು ನೆನೆದು ಮಾತು ಬರಹಗಳೆಲ್ಲ ಮೂಕವಾಗಿ, ಎದೆಯ ಬಡಿತದಲ್ಲಿ ಕವನದ ಛಂದಸ್ಸು ತುಂಬುತ್ತಿದೆ. ನೀನು ಬಂದಿದ್ದರಾಗಿತ್ತು ಅಂತ ಮನಸ್ಸು ಬಯಸಿದ್ದು ಹೌದಾದರೂ, ನೀನೆ ಬರಬಹುದು ಅಂತ ಗೊತ್ತಿರಲಿಲ್ಲ. ಎಷ್ಟೇ ಒಳ್ಳೆಯವನೇ ಆದರೂ ಎಡವಟ್ಟನಂತೆ ಇರುವ ನನ್ನ ಬದುಕಿನ ಬಯಲಿಗೆ ಬೆಳದಿಂಗಳಂತೆ ಹರಿದು ಬಂದ ಹುಣ್ಣಿಮೆಯೇ ನಿನ್ನ ಬೆರಳಳತೆ ಅಂದಾಜು ಮಾಡಲಾಗದೆ ಅಮ್ಮನ ಬೆರಳಿನಳತೆಯ ಉಂಗುರ ತಂದಿದ್ದಕ್ಕೆ ದಯವಿಟ್ಟು ಕ್ಷಮಿಸು.&lt;br /&gt;ನಮ್ಮನೆಯ ಹೊಸಿಲಕ್ಕಿ ದೂಡಿದ ಕೆಲವೇ ದಿನಗಳಲ್ಲಿ ನಿನ್ನನ್ನು ದಪ್ಪಗೆ ಮಾಡುವ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳುತ್ತೇನೆ.&lt;br /&gt;&lt;br /&gt;ನಿನಗೆ ತಿಳಿನೇರಳೆ ಬಣ್ಣ ಇಷ್ಟ ಅಂತ ಗೊತ್ತಾದಾಗಿನಿಂದ ನಾನು ತಗೊಳ್ಳುತ್ತಿರುವ ಎಲ್ಲ ಟೀಶರ್ಟ್ ಗಳೂ ಹೆಚ್ಚು ಕಡಿಮೆ ಅದರದ್ದೇ ಶೇಡಿನದ್ದು.ನಿನ್ನ ಜಡೆ ಹರಡಿದ ಬೆನ್ನು ನಿಮ್ಮನೆಯವರು ಕಳಿಸಿದ ಫೋಟೋದಲ್ಲಿ ಕಾಣಿಸದೇ ಇದ್ದರೂ, ಹುಣ್ಣಿಮೆಯ ಹಾಲು ಹರಿದಂತಹ ನಗು ಮಾತ್ರ ನನ್ನನ್ನ ಫಿದಾ ಮಾಡಿದ್ದು ಹೌದು. ಆಮೇಲೆ ದಿನಾ ರಾತ್ರೆ ಜೀಟಾಕ್ ಕಂಡುಹಿಡಿದ ಗೂಗಲ್ ಟೀಮನ್ನು ನೆನೆಸಿಕೊಂಡು ದೀಪ ಹಚ್ಚಿಟ್ಟೇ ಲ್ಯಾಪ್ಟಾಪ್ ಆನ್ ಮಾಡುತ್ತಿದ್ದೇನೆ. ದೇವರ ಮುಂದೆ ಕೈಮುಗಿಯಲು ಸೋಮಾರಿತನ ಮಾಡುವ ಈ ನನ್ಮಗ ಅದ್ಯಾಕೆ ದೀಪ ಹಚ್ಚಿಡುತ್ತಾನೆ ಅಂತ ಅಮ್ಮ ಸುಡೊಕು ಬಿಡಿಸುವುದಕ್ಕಿಂತ ಜಾಸ್ತಿ ತಲೆಕೆಡಿಸಿಕೊಂಡಿದಾಳೆ. ಅವಳಿಗೇನು ಗೊತ್ತು ನಮ್ಮ ನೆಟ್ಸಂಚಾರ, ಸಮಾಚಾರ.. ಅದೆಷ್ಟೇ ಹಳೇ ಕಾಲದವಳು ಅಂದುಕೊಂಡರೂ, ಸೈಲೆಂಟ್ ಮೋಡಿನ ನನ್ನ ಮೊಬೈಲಿನ ದೀಪ ಮಿನುಗಿದ ಕೂಡಲೆ ಅಮ್ಮನ ಕುಡಿಗಣ್ಣು ಮಿಂಚುತ್ತದೆ. ಅವಳಿಗೆ ಗೊತ್ತು ಬೆಟ್ಟದ ನೆಲ್ಲಿಕಾಯಿಗೆ ಸಮುದ್ರದ ಉಪ್ಪಿನವರು ಕರೆಮಾಡುತ್ತಿದ್ದಾರೆ ಅಂತ.&lt;br /&gt;&lt;br /&gt;ನಿನ್ನ ಜೊತೆ ಚಾಟ್ ಮಾಡುವಾಗಲೆಲ್ಲ ಬರೀ ಸ್ಮೈಲಿಗಳೇ ತುಂಬಿಕೊಂಡು, ಪೂರ್ತಿ ಬರೆಯಲು ಅರ್ಜೆಂಟಾಗುವ ಅರ್ದಂಬರ್ಧ ಕಂಗ್ಲೀಶು ಕುಟ್ಟಿಕೊಂಡು ಅವತ್ತವತ್ತಿನ ಎಮೋಟ್ ಐಕಾನ್ಸ್ ಮಾತ್ರ ಹೊರಬರುತ್ತವೆ.&lt;br /&gt;ಏನಾದರೂ ಮಾಡಿ ಕನ್ನಡಪಂಡಿತರು ಬೆತ್ತದ ಪೆಟ್ಟು ಕೊಟ್ಟು ಕಲಿಸಿದ ವರ್ಣಮಾಲೆಯನ್ನ ಉಪಯೋಗಿಸಿ ಕನಸಿನ ಬಣ್ಣಗಳನ್ನ ನನಸಿನ ಕ್ಯಾನ್ವಾಸಿನಲ್ಲಿ ಹರಡೋಣ ಅಂತ ಕೂತುಕೊಂಡಿದೀನಿ. ನನಗೇ ಗೊತ್ತಿಲ್ಲದಂತೆ ಚಿಕ್ಕವನಿದ್ದಾಗಿಂದ ಕೇಳಿ ಬೆಳೆದ ಕವನಗಳು ಭಾವಗೀತಗಳು ಪ್ರತೀ ಭಾವನೆಯ ಸೊಲ್ಲಿಗೂ ಪಲ್ಲವಿಯಾಗುತ್ತಿದೆ. ಓದುವ ನಿನಗೆ ಹೊಸಲೋಕದ ಕನಸಿನ ಹೂಗಳ ದಾರಿ ಘಮ್ಮಂತ ತೆರೆದುಕೊಳ್ಳುವ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ. ನಾನು ಬರೆದಿದ್ದೆಲ್ಲ ನಿನ್ನ ಮನಸ್ಸಿನಲ್ಲಿ ನಲ್ಮೆಯ ಬನಿಯಿಳಿಸಿದರೆ ಅದರ ಕ್ರೆಡಿಟ್ಟು ಭಾವಗೀತಗಳ ಕ್ಯಾಸೆಟ್ಟು ತಂದು ಕೇಳಿಸುವ ಅಮ್ಮನಿಗೂ, ನರಸಿಂಹಸ್ವಾಮಿಯವರ ಮಲ್ಲಿಗೆಯ ಮಾಲೆಯನ್ನು ಆರಿಸಿ ಆರಿಸಿ ಓದಿಸಿದ ಅಣ್ಣನಿಗೂ ಸಲ್ಲುತ್ತದೆ.&lt;br /&gt;&lt;br /&gt;ನಿನ್ನ ಪ್ರಸ್ತಾಪ ಬರುವ ಒಂದು ವಾರ ಮುಂಚೆ ನಾವು ಸ್ನೇಹಿತರೆಲ್ಲ ಸೇರಿ ಮೂರು ದಿನ ಸುತ್ತಾಟಕ್ಕೆ ಹೋಗಿದ್ದೆವು.ನಮ್ಮ ಮೊದಲ ತಾಣ ಅಯ್ಯನಕೆರೆ ಅಂತ. ಸಕ್ಕರೆ ಪಟ್ಣದ ಮುಖ್ಯರಸ್ತೆಯಿಂದ ಒಂದ್ನಾಲ್ಕು ಕಿ.ಮೀ. ಒಳಗಿರುವ ಈ ಕೆರೆ ಯಾರೋ ರಾಜರ ಕಾಲದಲ್ಲಿ ಕಟ್ಟಿಸಿದ್ದು. ಸುತ್ತಮುತ್ತಲಿನ ಪುಟ್ಟ ಕೆರೆಗಳ ನೀರು ಕೋಡಿ ಬಿದ್ದು ಈ ಕೆರೆಗೆ ಬಂದು ತುಂಬಿ ನಂತರ ಕೋಡಿ ಬಿದ್ದು ಹೊಳೆಯಾಗಿ ಹರಿಯುತ್ತದೆ. ಸುತ್ತ ಮುತ್ತಲ ಹತ್ತಿಪ್ಪತ್ತು ಊರುಗಳಿಗೆ, ಗದ್ದೆ ತೋಟಗಳಿಗೆ, ಕುಡಿಯುವ ನೀರಿಗೆ ಆಸರೆಯಾಗಿ ಒದಗಿಬಂದ ಕೆರೆ.ನಾವು ಹೋಗಿದ್ದು ನವೆಂಬರಿನ ಕೊನೆಯಾದ್ದರಿಂದ ನೀರು ತುಂಬಿ ಕೆರೆ ಸಮುದ್ರದ ಪುಟ್ಟ ಪ್ರತಿಕೃತಿಯಂತೆ ಕಾಣುತ್ತಿತ್ತು.ದಂಡೆಗೆ ಅಲೆಗಳು ಅಪ್ಪಳಿಸುತ್ತಿದ್ದವು.ಕೋಡಿ ಬೀಳುವ ಕಟ್ಟೆಯ ಮೇಲೆ ನೀರು ತೆಳ್ಳಗೆ ದಾವಣಿಯಂತೆ ಆವರಿಸಿ ಕೆಳಗೆ ಧಾರೆಯಾಗುತ್ತಿತ್ತು.ನಾವೆಲ್ಲ ಕೈಕೈ ಹಿಡಿದು ಕೋಡಿದಂಡೆಯನ್ನ ನೀರಿನಲ್ಲಿ ಕಾಲದ್ದಿ ದಾಟುತ್ತಿದ್ದಾಗ ಗೆಳತಿಯೊಬ್ಬಳು ಮೇಲೆ ನೋಡಿ ಅಂತ ಕೂಗಿಕೊಂಡಳು ನೋಡಿದರೆ ಬೆಳ್ಳಕ್ಕಿಗಳು ದೇವರ ರುಜುವಿನಂತೆ ವೀವೀವೀಯಾಗಿ ನೀಲಿಯೆಂದರೆ ನೀಲಿಯಾಗಿ ಕಾಣುವ ಆಕಾಶದಲ್ಲಿ ಹಾರಿ ಹೋಗುತ್ತಿದ್ದವು. ನಿಮ್ಮನೆಯಲ್ಲಿ ನೀನು ಇಷ್ಟಪಟ್ಟು ಬೆಳೆಸಿರುವ ಭಟ್ಕಳ ಮಲ್ಲಿಗೆಯ ಬಿಳುಪಿನೊಂದಿಗೆ ಸ್ಪರ್ಧೆ ಇಟ್ಟರೆ ಬೆಳ್ಳಕ್ಕಿಯೇ ಗೆಲ್ಲುತ್ತದೆ. ಹಿನ್ನೆಲೆಗೆ ಅಯ್ಯನಕೆರೆಯ ಮೇಲೆ ಕಾಣುವ ನೀಲಿಯೇ ಇರಬೇಕಷ್ಟೇ. ನೀನು ನಮ್ಮನೆಯಲ್ಲಿ ಎಲ್ಲರ ನಲ್ಮೆಯಲ್ಲಿ ನೆಲೆಗೊಂಡ ಮೇಲೆ ಒಂದಿನ ಅಲ್ಲಿಗೆ ಕರೆದುಕೊಂಡು ಹೋಗುತ್ತೀನಿ. ರಾತ್ರಿ ಲೇಟಾಗಿ ಇಲ್ಲಿಂದ ಹೊರಟರೆ, ಬೆಳಗ್ಗಿನ ಬಿಸಿಲು ರಂಗೋಲಿ ಇಡುವುದರೊಳಗೆ ಅಲ್ಲಿರುತ್ತೀವಿ. ಯಾವುದೋ ಕಾಲದ ರಾಜ ಶಿಸ್ತುಬದ್ಧವಾಗಿ ಕಟ್ಟಿಸಿದ ಈ ಕೆರೆ ಇಂದಿಗೂ ಅದೇ ಅಚ್ಚುಕಟ್ಟಲ್ಲಿ ಉಳಿದುಕೊಂಡು ಸಾವಿರಾರು ಜನರಿಗೆ ಜೀವಸೆಲೆಯಾಗಿದೆ. ದಾರಿಯಲ್ಲಿ ಸಿಕ್ಕ ಹಳ್ಳಿಯವ ಹೇಳುತ್ತಿದ್ದ.ಹೂಳು ತೆಗೆಸುವುದು ಸರ್ಕಾರದ ಕೆಲಸವಾದಾಗಿನಿಂದ ಅದು ದೇವರ ಕೆಲಸವಾಗಿ, ಈಗೀಗ ಬೇಸಿಗೆಯಲ್ಲಿ ನೀರಿಗಿಂತ ಹೂಳೇ ಇರುತ್ತದೆ ಅಂತ. ನಾವೇ ಹೊಸದಾಗಿ ಕಟ್ಟಿಸುವುದಿರಲಿ, ಇದ್ದಿದ್ದನ್ನೂ ಉಳಿಸಗೊಡದೆ ಹೋಗುತ್ತೀವಲ್ಲ ಈ ಬಗ್ಗೆ ಭಾರೀ ಬೇಸರ ನನಗೆ. ನಿಮ್ಮ ಮನೆಯ ಹಿತ್ತಲಲ್ಲಿ ಇಂಗುಗುಂಡಿಯನ್ನ  ನೋಡಿ ಮನಸ್ಸಿಗೆ ನೆಮ್ಮದಿಯಾಯಿತು. ಅದನ್ನು ನೀನೂ ನಿಮ್ಮಪ್ಪ ಸೇರಿ ಗುಂಡಿ ತೋಡಿ, ಇಟ್ಟಿಗೆ ಇಟ್ಟು ಕಟ್ಟಿದಿರಿ ಅಂತ ಕೇಳಿ ಆ ನೆಮ್ಮದಿಗೆ ಗರಿ ಮೂಡಿದೆ. ನಾವಿಬ್ಬರೂ ಇನ್ನೂ ಏನೇನೋ ಮಾಡುವುದರ ಬಗ್ಗೆ ಯೋಚಿಸಬಹುದಲ್ಲಾ ಅಂತ ಸಂತಸವಾಗಿದೆ. ಅದಕ್ಕೇ ಹೇಳಿದ್ದು ತಡವಾಗಿ ಬಂದವಳು ಎಂಬ ಸಿಟ್ಟೇನಿಲ್ಲ ಅಂತ. ನನ್ನ ನೆಚ್ಚಿನ ಹಾಡು ಕೂಡ ನೀನು ಮೊದಲು ಕಲಿತ ಕೆರೆಯ ನೀರನು ಕೆರೆಗೆ ಚೆಲ್ಲಿ..&lt;br /&gt;&lt;br /&gt;ಯಾವುದಕ್ಕೂ ಬೆಳಗಿನ ತಂಪು ನನ್ನ ಪತ್ರದಲ್ಲಿ ಇಳಿಯಲಿ ಅಂತ ಬೆಳಿಗ್ಗೆ ಮುಂಚೆ ಕೂತ್ಕೊಂಡು ಬರೀತಾ ಇದೀನಿ. ಈಗಷ್ಟೇ ಸೂರ್ಯ ತನ್ನ ಒಲವುಬಲೆಗಳನ್ನ ಹೊರಗಿನ ಪುಟ್ಟಹಿತ್ತಲಿನ ಎಳೆ ಮೊಗ್ಗುಗಳ ಮೇಲೆಲ್ಲ ಸುಳಿಯುತ್ತಿದಾನೆ. ನನ್ನ ಕಿಟಕಿಯ ನೇರಕ್ಕೆ ಇರುವ ಗಂಟೆ ದಾಸವಾಳದ ಮೊಗ್ಗಿಗೆ ಬಾಯಿಟ್ಟು ಕೆಂಪುಕುತ್ತಿಗೆಯ ಉದ್ದಕೊಕ್ಕಿನ ಪುಟ್ಟ ಹೂಗುಬ್ಬಿ ಹಕ್ಕಿ,ಬಾಯಿಟ್ಟು ರಸ ಹೀರುತ್ತಾ ಇದೆ. ನನಗೆ ಫೋಟೋ ತೆಗೆಯುವುದೆಂದರೆ ಅಷ್ಟಕ್ಕಷ್ಟೇ.ನೀನು ಇಲ್ಲಿಯೇ ಇರುತ್ತೀಯಲ್ಲಾ ಆಗ ಗಮನಿಸು. ಒಂದು ಅಚಾನಕ್ ಮಳೆ ಬಂದು ಹೋದ ರಾತ್ರಿಯ ಮರುಬೆಳಗ್ಗೆ ಅರಳುವ ಮೊಗ್ಗಿಗೆ ಈ ಹಕ್ಕಿ ಗ್ಯಾರಂಟಿ ಬರುತ್ತದೆ. ಆಗ ನೋಡಬಹುದಂತೆ.&lt;br /&gt;ಈಗ ಗೊತ್ತಾಗುತ್ತಿದೆ ಹಕ್ಕಿ‌ಇಂಚರವೂ ಮತ್ತು ಬೆಳಗಿನ ತಂಪೂ ಮನಸ್ಸಿಗೆ ಏನು ಜಾದೂ ಮಾಡುತ್ತದೆ ಅಂತ.ಒಂದ್ ಹತ್ತು ನಿಮಿಷ ನನಗೆ ಏನೂ ಬರೆಯಬೇಕು ಅಂತಲೇ ಅನ್ನಿಸಲಿಲ್ಲ. ಆ ಪುಟಾಣಿಯ ರಸಹೀರುವಿಕೆಯನ್ನೇ ಗಮನಿಸುತ್ತಿದ್ದೆ. ಈಗ ಮನಸ್ಸು ನಾನೇ ರಸ ಕುಡಿದ ಅನುಭೂತಿಯಲ್ಲಿ ತೇಲುತ್ತಿದೆ.&lt;br /&gt;&lt;br /&gt;ಗಾಳಿಗೆ ತೂಗುವ ಎಲೆಯ ನವಿರಿನ ಹಾಗೆ ಆವಿರ್ಭವಿಸಿ ನನ್ನ ಮನಸ್ಸಿನಲ್ಲಿ ಮೋಹ ಉಲ್ಬಣಿಸುವಂತೆ ಮಾಡಿದವಳೇ ಈಗ ನಾನು ಕಾಲೇಜಿಗೆ ಹೊರಡಲು ರೆಡಿಯಾಗಬೇಕಿದೆ. ಇವತ್ತು ಸೈಕೋ‌ಅನಾಲಿಸಿಸ್ ಮಾಡುವ ಹೊಸ ಪ್ರಾಯೋಗಿಕ ಅಭ್ಯಾಸ ಮಾಡಿಸುತ್ತೇನೆ ಅಂತ ವಿದ್ಯಾರ್ಥಿಗಳಿಗೆ ಹೋದವಾರವೇ ಹೇಳಿಟ್ಟಿದ್ದೆ.ಎಂದಿಗಿಂತ ಸ್ವಲ್ಪ ಮೊದಲೇ ಹೋಗಬೇಕು.ಇವತ್ತಿಗೆ ಈ ಪುಟ್ಟ ಪತ್ರ ಪೋಸ್ಟ್ ಮಾಡಿರುತ್ತೀನಿ. ಮುಂದಿನವಾರ ಪ್ರಬಂಧವನ್ನೇ ಕಳಿಸುತ್ತೇನೆ.ಓದಲು ಸಮಯಾವಕಾಶ ಮಾಡಿಕೊಂಡಿರು.&lt;br /&gt;&lt;br /&gt;ಕ್ಲ್ಶಾಸಿನಲ್ಲಿ ಏನಾದರೂ ಯಡವಟ್ಟಾದರೆ ಇರಲಿ ಅಂತ ನಿನ್ನ ಮೋಹಕ ಮುಗುಳ್ನಗೆಯ ಮ್ಯಾಕ್ಸಿ ಪ್ರಿಂಟ್ ತೆಗೆದಿಟ್ಟುಕೊಂಡಿದೀನಿ. ಹುಡುಗರು ನನ್ನ ಎಡವಟ್ಟು ನೋಡಿ ಹೋ ಅಂತ ಕೂಗಿದ ಕೂಡಲೆ ಈ ಫೋಟೋ ಟೇಬಲ್ ಮೇಲಿಟ್ಟು, ಚಂದನ್ ಸಾ ಬದನ್..ಹಾಡಿನ ಚರಣವನ್ನು ಹಾಡಲು ರೆಡಿಯಾಗಿದೀನಿ. ಓಹೋ,ಈ ಲೆಕ್ಚರರ್ ನನ್ಮಗನೂ ನಮ್ ಫುಟ್ ಪಾತಿಗೇ ಬಂದವ್ನಲ್ಲಾ ಅಂತ ಅವರೆಲ್ಲ ಆಗ ಕೋ ಆಪರೇಟ್ ಮಾಡ್ತಾರೆ. ಇದು ನನ್ನ ಲೆಕ್ಚರರಿಂದ ಕಲಿತ ಪಾಠ.&lt;br /&gt;ಉಂಹು ಈ ಪತ್ರದಲ್ಲಿ ಮುದ್ದು,ಅಪ್ಪುಗೆಯೆಲ್ಲ ಏನಿಲ್ಲ. ಇದು ಭಾವಸಂಚಾರವಷ್ಟೇ.!&lt;br /&gt;&lt;br /&gt;ಮುಂದಿನ ಪತ್ರದವರೆಗೆ ಅಪ್ಪಳಿಸುವ ಎಲ್ಲ ಭಾವದಲೆಗಳನ್ನ ಮನಸ್ಸಿನಲ್ಲೇ ಸಾಲುಗಳಾಗಿ ಪರಿವರ್ತಿಸುತ್ತಿರುತ್ತೇನೆ, ನಿನ್ನ ಭಾವೋಲ್ಲಾಸದ ಸಾಲುಗಳಿಗೆ ಕಾಯುತ್ತಾ,&lt;br /&gt;ನಿನ್ನವ,&lt;br /&gt;&lt;br /&gt;now the ball n court is yours..!&lt;br /&gt;&lt;br /&gt;[ತಲೆಬರಹ ಕೆ.ಎಸ್.ನ ಅವರ ಕವಿತೆ ಸಾಲು ಮತ್ತು ಕೊನೆಯ ಇಂಗ್ಲಿಷ್ ಅಡಿಬರಹವೂ ಅವರದೇ ಕವಿತೆಯಲ್ಲಿನ ಭಾವ]&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-4109300839580553944?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/4109300839580553944/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=4109300839580553944' title='16 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/4109300839580553944'/><link rel='self' type='application/atom+xml' href='http://www.blogger.com/feeds/4515791944382207090/posts/default/4109300839580553944'/><link rel='alternate' type='text/html' href='http://nenapu-nevarike.blogspot.com/2009/06/blog-post.html' title='ತಡವಾಗಿ ಬಂದವಳು ಎಂಬ ಸಿಟ್ಟೇನಿಲ್ಲ, ತುಂಬ ಸಂತಸ ನನಗೆ ನಿನ್ನ ಕಂಡು..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>16</thr:total></entry><entry><id>tag:blogger.com,1999:blog-4515791944382207090.post-5757541609311376014</id><published>2009-05-28T23:42:00.000-07:00</published><updated>2009-05-28T23:48:24.285-07:00</updated><category scheme='http://www.blogger.com/atom/ns#' term='ಕೃಷ್ಣಪಕ್ಷದ ಲಹರಿ'/><title type='text'>ಒಂದು ರಜಾ ಅರ್ಜಿ..</title><content type='html'>&lt;p&gt;...ಗೆ&lt;/p&gt;&lt;p&gt;ಕಣ್ಣ ಕನ್ನಡಿಯಲ್ಲಿ&lt;br /&gt;ಕಳೆದ ಕಾಲದ ಧೂಳು&lt;br /&gt;ಇಣುಕಿನೋಡಿದರೆ ಪ್ರತಿಬಿಂಬವಿಲ್ಲ;&lt;br /&gt;ಒರೆಸಲು ಇಬ್ಬರಿಗೂ ಪುರುಸೊತ್ತಿಲ್ಲ...&lt;br /&gt;ತೊಡಗಿಕೊಂಡಿದ್ದು ಅತಿಯಾಯಿತೇನೋ.!?&lt;/p&gt;&lt;p&gt;ಗೊತ್ತು ನನಗೆ,&lt;br /&gt;ಕ್ಲೀನಿಂಗ್ ಏಜೆಂಟ್ ಧಾರೆಯಾಗುತಿದ್ದ&lt;br /&gt;ದುಃಖದ ದಿನಗಳು&lt;br /&gt;ಕಳೆದುಹೋದ&lt;br /&gt;ಸಮಾಧಾನದ ಬದುಕಿದು..&lt;br /&gt;ಸಮಾಧಾನ ತುಸು ಹೆಚ್ಚೇ ಆಯಿತೇನೋ!?&lt;br /&gt;&lt;br /&gt;ಕಾಡು ಹಾದಿಯ ಹಾದು&lt;br /&gt;ಬೆಟ್ಟದೊರತೆಯ ಮಗ್ಗುಲ&lt;br /&gt;ಬಯಲಲ್ಲಿ ಕೂರಬೇಕಿದೆ..&lt;br /&gt;ಕಳೆದ ಕಾಲದ ನೇಹದ ನೆನಪಿನ ಮಿನುಗು&lt;br /&gt;ಬರುವ ದಿನಗಳ ಕನಸಿನ ಮೆರುಗು&lt;br /&gt;ಅಚಾನಕ್ಕಾಗಿ ದಕ್ಕಿಸಿಕೊಂಡ ಪುರುಸೊತ್ತಿನ ಸೊಬಗು&lt;br /&gt;-ಗಳನ್ನ ಹೊತ್ತು ಹೊಳೆಯುವ&lt;br /&gt;ಆಕಾಶಗನ್ನಡಿಯ ಚುಕ್ಕಿಗಳು&lt;br /&gt;ಕಣ್ಣ ಕನ್ನಡಿಯಲ್ಲಿ&lt;br /&gt;ಕಾಣದ ಬಿಂಬಗಳ&lt;br /&gt;ಮರುಪ್ರದರ್ಶನಕ್ಕೆ ಕಾದಿವೆ..&lt;br /&gt;&lt;br /&gt;ಈ ಎಲ್ಲ ಗಡಿಬಿಡಿಯ&lt;br /&gt;ದಿನರಾತ್ರಿಗಳ ಹಿಂಡಿ&lt;br /&gt;ಒಂದುದಿನರಾತ್ರಿಯ&lt;br /&gt;ರಜೆ ಸೋಸಲಾದೀತಾ..?&lt;/p&gt;&lt;p&gt;..ಇಂದ&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-5757541609311376014?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/5757541609311376014/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=5757541609311376014' title='10 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/5757541609311376014'/><link rel='self' type='application/atom+xml' href='http://www.blogger.com/feeds/4515791944382207090/posts/default/5757541609311376014'/><link rel='alternate' type='text/html' href='http://nenapu-nevarike.blogspot.com/2009/05/blog-post_28.html' title='ಒಂದು ರಜಾ ಅರ್ಜಿ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>10</thr:total></entry><entry><id>tag:blogger.com,1999:blog-4515791944382207090.post-5403680011861637160</id><published>2009-05-19T20:15:00.000-07:00</published><updated>2009-05-19T20:18:23.242-07:00</updated><category scheme='http://www.blogger.com/atom/ns#' term='&quot;ಪರಿ&quot;'/><title type='text'>ಈ "ಪರಿ" ಯ ಸೊಬಗು...</title><content type='html'>&lt;div&gt;&lt;span style="font-size:85%;"&gt;&lt;/span&gt;&lt;/div&gt;&lt;p&gt;&lt;span style="font-size:85%;"&gt;"ಯೇ ಕೌನ್ ಆಗಯೀ ದಿಲ್ ರುಬಾ ಮೆಹಕಿ ಮೆಹಕೀ.. ಫಿಜಾ ಮೆಹಕಿ ಮೆಹಕೀ ಹವಾ ಮೆಹಕಿ ಮೆಹಕೀ...."&lt;br /&gt;ಈ ಸಾಲನ್ನು ನಾನು ಕೇಳಿದ ದಿನದಿಂದಲೂ ನನ್ನ ಒಳಗಣ್ಣ ಮುಂದಿದ್ದವಳು ಈಗ ಮಡಿಲಿಗೆ ಬಂದಿದ್ದಾಳೆ. ಒಂದೇ ವ್ಯತ್ಯಾಸವೆಂದರೆ ಅವಳು ಪುಟ್ಟ ಪುಟ್ಟ ಹೆಜ್ಜೆಯಿಡುತ್ತ ಬಂದವಳು, ಇವಳಿನ್ನೂ ಅಂಬೆಗಾಲಿಡಲು ಕಲಿಯಬೇಕಿದೆ.&lt;br /&gt;ನನ್ನೆಲ್ಲ ಸಮಯ,ಸಮಯವಿಲ್ಲದಿರುವಿಕೆ, ನಿದ್ದೆ ಎಚ್ಚರ,ಕನಸು ಊಟ, ಶೌಚ, ದಿನಚರಿ, ರಾತ್ರಿಯಪರಿ ಎಲ್ಲವನ್ನೂ ಒಂದು ಘಮದಂತೆ ಆವರಿಸಿಕೊಂಡವಳ ಒಂದು ಪೋಸ್ ಇಲ್ಲಿದೆ. &lt;a href="http://4.bp.blogspot.com/_GMLph4mGk9c/ShN2IEoq1gI/AAAAAAAAAuU/pWAGxKFmTss/s1600-h/sweety1.jpg"&gt;&lt;img id="BLOGGER_PHOTO_ID_5337739864419522050" style="FLOAT: right; MARGIN: 0px 0px 10px 10px; WIDTH: 267px; CURSOR: hand; HEIGHT: 207px" alt="" src="http://4.bp.blogspot.com/_GMLph4mGk9c/ShN2IEoq1gI/AAAAAAAAAuU/pWAGxKFmTss/s400/sweety1.jpg" border="0" /&gt;&lt;/a&gt;&lt;br /&gt;ನಿದ್ದೆ ತೂಕಡಿಸಿಬರುವಾಗ ನಾನು ಎದ್ದು ಕೂತೇ ಇರುವಂತೆ ಮಾಡುವ, ಊಟದ ಬಟ್ಟಲು ನಾನು ಕೈಲಿ ಹಿಡಿಯುವಾಗಲೇ ತನ್ನ ಚಡ್ಡಿ ಒದ್ದೆ ಮಾಡಿಕೊಳ್ಳುವ, ಕಾಡುವ ಈ 'ಪರಿ' ಅಮ್ಮನಿಗೆ ತ್ರಾಸಾಗಿ ಮುಖ ದುಮ್ಮಿಸಿಕೊಂಡಿದ್ದಾಳೆ ಅಂತ ಗೊತ್ತಾಗುತ್ತಲೇ ಒಂದು ದೇವಲೋಕದ ದಿವ್ಯನಗು ನಕ್ಕುಬಿಡುತ್ತಾಳೆ. ನಾನು ಅತ್ತಾರೆ ಅಳಲವ್ವ ಈ ಕೂಸು ನನಗಿರಲಿ ಮಿಕ್ಕಾರೆ ಮಿಗಲಿ ಮನೆಗೆಲಸ..ದ ಉಲಿಯಾಗುತ್ತೇನೆ. ಅವಳ ಆಟಕ್ಕೆ ಅವಳಂತ ಇನ್ನೂ ಹಲವು ಮಕ್ಕಳೇ ಅವರ ನಗು ಆಟಗಳೇ ಸಾಟಿ.&lt;br /&gt;ಸಾಕುಸಾಕೆನ್ನಿಸುತ್ತಲೇ ಮತ್ತೆ ಬೇಕೆನ್ನಿಸುವಂತೆ ಮಾಡುವ ಅವಳ ರೀತಿಗೆ ನಾನು ಫಿದಾ ಆಗಿಬಿಟ್ಟಿದೇನೆ. ಬರೆಯಲು ಹಂಚಿಕೊಳ್ಳಲು ವಿಷಯಗಳೇನೊ ಸಾಕಷ್ಟಿವೆ. ಆದರೆ ಅಮ್ಮನ ರೋಲು ಸ್ವಲ್ಪ ಜಾಸ್ತೀನೇ ಆಗ್ ಬಿಟ್ಟು ಬರೆಯಲು ಸಮಯ ಸಾಕಾಗುತ್ತಿಲ್ಲ. ಓದು ಬೆಳಿಗ್ಗೆ ಆಫೀಸ್ ಕ್ಯಾಬಿನಲ್ಲಿ ಮೊದಲ ೨೦ ನಿಮಿಷಕ್ಕೆ ಸೀಮಿತವಾಗಿದೆ.&lt;br /&gt;&lt;/span&gt;&lt;span style="font-size:85%;"&gt;              ಬೇಸಿಗೆ ರಜೆ ಬಂದ ಪುಟ್ಟಿಯರು ಆ ಆರೂವರೆಯ ಚುಮುಚುಮು ಚಳಿಯಲ್ಲಿ ಸರದಿಯ ಮೇಲೆ ಸೈಕಲ್ ಹೊಡೆಯಲು ರೆಡಿಯಾಗಿರುವುದನ್ನ ನೋಡುತ್ತ ಆಫೀಸಿಗೆ ಹೊರಡುತ್ತೇನೆ. ಸಂಜೆ ಇನ್ನೂ ಬಿಸಿಲಿಳಿಯುವ ಮೊದಲೆ ಮನೆಗೆ ಬರುವಾಗಲೂ ಆ ಬೆಳಗಿನ ಚೈತನ್ಯದಲ್ಲೇ ಸೈಕಲ್ ಹೊಡೆಯುತ್ತಿರುತ್ತಾ ನಗುತ್ತಿರುವ ಅವರ ಚೈತನ್ಯಕ್ಕೆ ಆ ಬಾಲ್ಯದ ಜೀವನೋತ್ಸಾಹಕ್ಕೆ ಕಣ್ಣಾಗುತ್ತಾ ನನ್ನ ಮನಸ್ಸು ಗರಿಗೆದರಿದೆ. ಈ ಗಡಿಬಿಡಿಯ ಪುರುಸೊತ್ತಿಲ್ಲದ ದಿನರಾತ್ರಿಗಳಲ್ಲಿ ನನ್ನದಾದ ಒಂದೆರಡು ಗಳಿಗೆಗಳನ್ನು ಕಾದಿಟ್ಟುಕೊಳ್ಳಲು ದೇಹವನ್ನೂ ಅಣಿಮಾಡುತ್ತಿದ್ದೇನೆ. :) ನನ್ನ ಬೆರಳುಗಳನ್ನು ಕುಟ್ಟಲು ಪುಟಗೊಳಿಸಿದ ಆ ಎಳೆಯ ಮೊಗ್ಗುಗಳಿಗೆ ಅವರ ಚೈತನ್ಯಕ್ಕೆ ತಲೆಬಾಗಿದ್ದೇನೆ.&lt;br /&gt;ನನ್ನ ಖುಶಿಯಲ್ಲಿ ಪಾಲ್ಗೊಂಡು ಸ್ಪಂದಿಸಿದ ನೀವು ಎಲ್ಲರಿಗೂ ಅಕ್ಕರೆಯ ನಮಸ್ಕಾರ.&lt;/span&gt;&lt;/p&gt;&lt;p&gt;&lt;span style="font-size:85%;"&gt;-ಪ್ರೀತಿಯಿಂದ&lt;br /&gt;ಸಿಂಧು&lt;br /&gt;&lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-5403680011861637160?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/5403680011861637160/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=5403680011861637160' title='12 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/5403680011861637160'/><link rel='self' type='application/atom+xml' href='http://www.blogger.com/feeds/4515791944382207090/posts/default/5403680011861637160'/><link rel='alternate' type='text/html' href='http://nenapu-nevarike.blogspot.com/2009/05/blog-post.html' title='ಈ &quot;ಪರಿ&quot; ಯ ಸೊಬಗು...'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_GMLph4mGk9c/ShN2IEoq1gI/AAAAAAAAAuU/pWAGxKFmTss/s72-c/sweety1.jpg' height='72' width='72'/><thr:total>12</thr:total></entry><entry><id>tag:blogger.com,1999:blog-4515791944382207090.post-2362264610073250157</id><published>2009-01-06T04:20:00.000-08:00</published><updated>2009-01-06T05:31:25.644-08:00</updated><category scheme='http://www.blogger.com/atom/ns#' term='ಖುಶೀ.. ಸೃಷ್ಟಿ'/><title type='text'>ನನ್ನ ಖುಶೀ ನಿಮಗೂ...</title><content type='html'>&lt;div&gt;&lt;a href="http://1.bp.blogspot.com/_GMLph4mGk9c/SWNcWnDBP8I/AAAAAAAAAsM/tiY8n_NF66c/s1600-h/kai.jpg"&gt;&lt;/a&gt;  &lt;div&gt;&lt;a href="http://2.bp.blogspot.com/_GMLph4mGk9c/SWNcQZ2fJCI/AAAAAAAAAsE/P1EWlDylG3c/s1600-h/P1010648.jpg"&gt;&lt;img id="BLOGGER_PHOTO_ID_5288171824350176290" style="DISPLAY: block; MARGIN: 0px auto 10px; WIDTH: 264px; CURSOR: hand; HEIGHT: 223px; TEXT-ALIGN: center" alt="" src="http://2.bp.blogspot.com/_GMLph4mGk9c/SWNcQZ2fJCI/AAAAAAAAAsE/P1EWlDylG3c/s400/P1010648.jpg" border="0" /&gt;&lt;/a&gt; &lt;span style="color:#006600;"&gt;ಫಿರ್ ಛಿಡೀ ರಾತ್ ಬಾತ್ ಫೂಲೋಂ ಕೀ.. &lt;/span&gt;&lt;span style="color:#006600;"&gt;ರಾತ್ ಹೈ ಯಾ ಬಾರಾತ್ ಫೂಲೋಂ ಕೀ.. ಎಂಬ ಹಾಡಿನುಲಿಯ ಮಾಧುರ್ಯದ ಅಂತರಂಗದಲ್ಲಿ ಅಡಗಿ ಕೂತಿದ್ದವಳು ಮಡಿಲಿಗೆ ಬಂದಿದ್ದಾಳೆ.&lt;/span&gt;&lt;/div&gt;&lt;div&gt;&lt;div&gt;&lt;div&gt;&lt;div align="center"&gt;&lt;span style="color:#006600;"&gt;ಒಲವಿನ ಪಯಣದ ಹಾದಿಗೆ&lt;br /&gt;ಜೊತೆಯಾಗಿ ಮೆಲ್ಲಡಿ ಇಡಲು&lt;br /&gt;&lt;/span&gt;&lt;span style="color:#006600;"&gt;ನೀರಧಿಯ ನೇವರಿಸಿ&lt;br /&gt;&lt;/span&gt;&lt;span style="color:#006600;"&gt;ಮುಗುಳು ಬಿರಿದ ತಿಂಗಳನ&lt;br /&gt;ಮಗಳ ಆಗಮನ..&lt;br /&gt;&lt;/span&gt;&lt;span style="color:#006600;"&gt;ಮಾರ್ಗಶಿರ ಪ್ರತಿಪದೆಯ ಹೊಸ್ತಿಲಲಿ!&lt;/span&gt;&lt;/div&gt;&lt;span style="color:#006600;"&gt;&lt;/span&gt;&lt;div align="left"&gt;&lt;span style="color:#006600;"&gt;ಖುಶೀ,ಸಂತಸ,ಛಲ,ಸಂಕಟ,ನೋವು,ನೆಮ್ಮದಿ,ಸಣ್ಣತನ,ಸಮೃದ್ಧಿ,ಸಮಾಧಾನ,ಆತ್ಮೀಯ ಕುಟುಂಬ,ಮತ್ತು ತುಂಬಿತುಳುಕುವಷ್ಟು ಪ್ರೀತಿ ಎಲ್ಲವನ್ನೂ ಎರೆದ ಬದುಕು, ಇನ್ನೊಂದೇ ಬದುಕನ್ನು ಮಡಿಲಿಗಿಟ್ಟಿದೆ.&lt;br /&gt;ಎಲ್ಲವನ್ನು ಕೊಟ್ಟಿರುವ ನವನವೋನ್ಮೇಷಶಾಲಿನೀ ಪ್ರಕೃತಿಯು ಪ್ರತಿರೂಪಿ ಸೃಷ್ಟಿಯನ್ನು ಹನಿಯಾಗಿ ಬನಿ ಇಳಿಸಿದ್ದಾಳೆ. &lt;/span&gt;&lt;span style="color:#006600;"&gt;ಆ ಶಕ್ತಿಗೆ ನಮನ. ಜೊತೆಗೆ ನಿಂತು ನೇವರಿಸಿದ ಎಲ್ಲ ಪ್ರೀತಿಯ ಕೈಗಳಿಗೆ ನಮನ.&lt;a href="http://4.bp.blogspot.com/_GMLph4mGk9c/SWNceMEylVI/AAAAAAAAAsU/5ySm2gsYYw8/s1600-h/kai.jpg"&gt;&lt;img id="BLOGGER_PHOTO_ID_5288172061170242898" style="FLOAT: right; MARGIN: 0px 0px 10px 10px; WIDTH: 201px; CURSOR: hand; HEIGHT: 189px" alt="" src="http://4.bp.blogspot.com/_GMLph4mGk9c/SWNceMEylVI/AAAAAAAAAsU/5ySm2gsYYw8/s400/kai.jpg" border="0" /&gt;&lt;/a&gt;&lt;/span&gt;&lt;/div&gt;&lt;div&gt;&lt;span style="color:#000099;"&gt;ಮುದ್ದು ಸುರಿಸುವ ಗುಲಾಬಿ ಕಾಲುಗಳಿಗೆ, ಕರೆಂಟು ಹರಿಸುವ ಮುಗ್ಧ ಕಣ್ಗಳಿಗೆ, ಬಿಗಿಯಾಗಿ ಹಿಡಿದಿರುವ ಪುಟಾಣಿ ಬೆರಳುಗಳಿಗೆ.. ನಮನ.&lt;/span&gt; &lt;/div&gt;&lt;div&gt;&lt;span style="color:#006600;"&gt;&lt;a href="http://3.bp.blogspot.com/_GMLph4mGk9c/SWNYV87664I/AAAAAAAAArk/VgRIrKfUd7w/s1600-h/kai.jpg"&gt;&lt;/a&gt;ಹೋದ ನವೆಂಬರಿನ ಕೊನೆಯಲ್ಲಿ ಧರೆಗಿಳಿದು ಘಮ್ಮನರಳಿದ ಋತುಋತುವಿನ ಚೇತನದಂತೆ ನಮ್ಮ ಬಾಳಲ್ಲಿ ತುಂಬಿಕೊಳ್ಳುತ್ತಿರುವವಳ ಹೆಸರು ಸೃಷ್ಟಿ. &lt;/span&gt;&lt;span style="color:#006600;"&gt;ನಮ್ಮ ಸಂತಸದ ಸಿಹಿ ನಿಮ್ಮೊಡನೆ ಹಂಚಿ ದುಪ್ಪಟ್ಟಾಗಿಸುವ ಆಸೆ..&lt;/span&gt; &lt;span style="color:#006600;"&gt;&lt;br /&gt;ಪ್ರೀತಿಯಿಂದ&lt;br /&gt;&lt;/span&gt;&lt;span style="color:#006600;"&gt;ಸಿಂಧು&lt;/span&gt;&lt;/div&gt;&lt;/div&gt;&lt;/div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-2362264610073250157?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/2362264610073250157/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=2362264610073250157' title='30 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/2362264610073250157'/><link rel='self' type='application/atom+xml' href='http://www.blogger.com/feeds/4515791944382207090/posts/default/2362264610073250157'/><link rel='alternate' type='text/html' href='http://nenapu-nevarike.blogspot.com/2009/01/blog-post.html' title='ನನ್ನ ಖುಶೀ ನಿಮಗೂ...'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_GMLph4mGk9c/SWNcQZ2fJCI/AAAAAAAAAsE/P1EWlDylG3c/s72-c/P1010648.jpg' height='72' width='72'/><thr:total>30</thr:total></entry><entry><id>tag:blogger.com,1999:blog-4515791944382207090.post-8410257816091770295</id><published>2008-11-13T08:09:00.000-08:00</published><updated>2008-11-13T08:12:26.934-08:00</updated><category scheme='http://www.blogger.com/atom/ns#' term='ಬಿದಿಗೆಯ ಬಿಂಬ'/><title type='text'>ಕೃಷ್ಣಪಕ್ಷದ ಲಹರಿ..</title><content type='html'>ಈಗಷ್ಟೆ ನಿಂತ ಮಳೆ,&lt;br /&gt;ಮರಮರದ ಹಸಿರೆಲೆಯ&lt;br /&gt;ತುದಿಮೂಗಲ್ಲಿ ಪುಟ್ಟ ಪುಟ್ಟಹನಿ,&lt;br /&gt;ಮೋಡ ಚೆದುರಿ, ಕೊನೆಯ ಕಿರಣಗಳು&lt;br /&gt;ಕೆಂಪಗೆ ನೀಲಿಯಲ್ಲಿ ಹರಡುತ್ತಾ&lt;br /&gt;ಹಿತವಾದ ಸಂಜೆ,&lt;br /&gt;ದಾರಿ ಇಕ್ಕೆಲದ ಕಳೆಗಿಡಕ್ಕೂ&lt;br /&gt;ಮಳೆಹನಿಯ ಸವಿದು&lt;br /&gt;ಎಂತದೋ ಬಳುಕು ;&lt;br /&gt;ದಾರಿಬದಿಯ ನೀರಹರಿವಿನಲ್ಲಿ&lt;br /&gt;ಚಿಣ್ಣರ ಪುಟ್ಟ ಕಾಲಾಟ;&lt;br /&gt;ತುಂಬಿಬಂದಿದೆ ಮನ&lt;br /&gt;ಮನೆಗೆ ಬಂದವಳು ಕದವ ತೆರೆದೆ&lt;br /&gt;ಬಾಲ್ಕನಿಯಾಚೆಗೆ ದೂರದಲಿ&lt;br /&gt;ಸಾವನದುರ್ಗದ ಮೇರುನೋಟ;&lt;br /&gt;ನೀನಿಲ್ಲ ಜತೆಯಲ್ಲಿ&lt;br /&gt;ಅಕ್ಷಾಂಶವೇ ಬೇರೆ&lt;br /&gt;ಹರಡಿಬಿದ್ದಿದೆ ಗುರುತು ಹಾಕಿಟ್ಟ ಭೂಪಟ&lt;br /&gt;ಗೊತ್ತು ಕೆಲದಿನಗಳ ದೂರ&lt;br /&gt;ಹೇಗೆ ಇಳುಕಲಿ ಮನದ ಭಾರ?&lt;br /&gt;ಕೈ ಮುಗಿದು ಕೂತಿದ್ದೇನೆ&lt;br /&gt;ಬಿಸಿಹಾಲಿನ ಬಟ್ಟಲ ಮುಂದೆ..&lt;br /&gt;ಗೊತ್ತು ನೀನಲ್ಲೆ ಇದ್ದರೂ&lt;br /&gt;ಮನಸು ಇಲ್ಲೆ ಉಳಿದಿದೆ..!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-8410257816091770295?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/8410257816091770295/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=8410257816091770295' title='14 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/8410257816091770295'/><link rel='self' type='application/atom+xml' href='http://www.blogger.com/feeds/4515791944382207090/posts/default/8410257816091770295'/><link rel='alternate' type='text/html' href='http://nenapu-nevarike.blogspot.com/2008/11/blog-post_13.html' title='ಕೃಷ್ಣಪಕ್ಷದ ಲಹರಿ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>14</thr:total></entry><entry><id>tag:blogger.com,1999:blog-4515791944382207090.post-3637138645152653027</id><published>2008-11-06T19:36:00.000-08:00</published><updated>2008-11-06T19:41:38.361-08:00</updated><category scheme='http://www.blogger.com/atom/ns#' term='ಕನ್ನಡಪ್ರಭ'/><title type='text'>ಕಾಗದದ ದೋಣಿ..</title><content type='html'>&lt;span style="color:#000066;"&gt;ವಸು ಆಸ್ಪತ್ರೆಯ ಮಧ್ಯಾಹ್ನದ ಸುತ್ತಿಗೆ ಬಂದಾಗ ಸಿಕ್ಕಿದ ವ್ಯಕ್ತಿಯ ಮುಖದಲ್ಲಿ ಬಾಲ್ಯದ ಗೆಳತಿ ಮಂಜುವಿನ ಕುರುಹಿತ್ತು. ಕಾಫಿ ಹಂಚಿಕೊಳ್ಳುತ್ತಾ ಇಬ್ಬರ ದಾರಿಯ ಮೈಲಿಗಲ್ಲುಗಳ ಪರಿಚಯವಾಗಿ, ಈಗ ಗೀತಾಂಟಿ ಮಂಜುವಿನ ಮನೆಯಲ್ಲಿರುವುದು, ಹುಶಾರಿಲ್ಲದ ಆಂಟಿಯನ್ನು ಈ ಆಸ್ಪತ್ರೆಗೆ ಸೇರಿಸಿರುವುದು ತಿಳಿಯಿತು. ಮಂಜುವಿನ ಜೊತೆಗೆ ಬಿಳಿಬಿಳಿ ವಾರ್ಡಿನ ಒಳಹೊಕ್ಕವಳಿಗೆ ಹಸಿರು ಹೊದಿಕೆಯಡಿಯ ಕ್ಷೀಣಜೀವ ಏನೆಲ್ಲ ನೆನಪನ್ನ ತಂದಿತೋ ಹೇಳುವುದು ಕಷ್ಟ.. ಒಂದು ರೀತಿಯ ಎಚ್ಚರದ ಕನಸು..&lt;/span&gt;&lt;br /&gt;&lt;br /&gt;&lt;span style="color:#000066;"&gt;ಟಪ್ಪ ಟಪ್ಪ ಅಂತ ಶುರುವಾದ ಮಳೆಹನಿ ತನ್ನ ತಾಳದಲ್ಲಿ ತಾನೇ ಮುಳುಗಿ ಕಪ್ಪು ರಸ್ತೆಯುದ್ದಕ್ಕೆ ಕೆಂಪು ನೀರಾಗಿ ಹರಿಯತೊಡಗಿತು. ಇಕ್ಕೆಲದಲ್ಲಿದ್ದ ಚರಂಡಿಗಳು ತುಂಬಿದ ನದಿಯ ರಭಸದಲ್ಲಿ ಭೋರ್ಗರೆಯತೊಡಗಿದವು. ರಸ್ತೆಯಂಚಿನಿಂದ ಮೇಲೇರಿ ಹೋಗಿದ್ದ ಮೆಟ್ಟಿಲುಗಳ ತುದಿಯ ಕಟ್ಟೆಯಲ್ಲಿ ಜನರೋ ಜನ. ಮಳೆ ಜೋರಾಗುವುದಕ್ಕೂ ಬಸ್ಸು ಬರದೇ ಇರುವುದಕ್ಕೂ ಅವಿನಾಭಾವ ಸಂಬಂಧ. ಹಬ್ಬಸಂತೆಯ ಹಿಂದಿನ ದಿನವೇ ಈ ರೀತಿ ಮಳೆಹಿಡಿಯಿತಲ್ಲಾ ಅಂತ ಊರಿಗೆ ಹೋಗಲು ಚೀಲ ತುಂಬಿ ಕಾಯುತ್ತಿರುವ ಜನರೆಲ್ಲ ತಲೆಗೊಂದೊಂದು ಮಾತನಾಡಿ ಕವಿದ ಮಳೆಚಳಿಯಿಂದ ತಪ್ಪಿಸಿಕೊಳ್ಳಲು ಮಾತಿನ ಕಾವಿನ ಮೊರೆಹೊಕ್ಕಿದ್ದರು.&lt;br /&gt;ಅದೋ ನೋಡ ನೋಡುತ್ತ ಚರಂಡಿಯ ನೀರೂ, ರಸ್ತೆಯ ಮೇಲೆ ಹರಿಯುವ ನೀರೂ ಸೇರಿ ಅಲ್ಲೆ ಮುಂದಿನ ಗೋಪಿ ಸರ್ಕಲ್ಲಿನಲ್ಲಿ ಹಳ್ಳವೆ ಆಗಿಬಿಟ್ಟಿತು. ನಾಕೂ ದಿಕ್ಕಿನಿಂದ ಮಳೆಯನ್ನು ಲೆಕ್ಕಿಸದೆ ಓಡುತ್ತ ಬಂದ ವಾಹನಗಳು ಈ ನೀರಿನ ರಭಸ ನೋಡಿ ದಿಕ್ಕುಕಾಣದೆ ಸರ್ಕಲ್ಲಿನ ಸುತ್ತ ನಿಂತರು. ಸರ್ಕಲ್ಲಿನ ಮೂಲೆಯಲ್ಲಿದ್ದ ಗೋಪಾಲನ ಗೂಡಂಗಡಿಯಲ್ಲಿ ಬರಬ್ಬರಿ ವ್ಯಾಪಾರ, ಗಣೇಶ ಮಾರ್ಕಿನ ಬೀಡಿಗಳೆಲ್ಲ ಖರ್ಚಾದವು.. ಪಾರುಹಮಾಲನ ಕಂಬಳಿಗೊಬ್ಬೆ, ಭಟ್ಟರ ಮನೆಯ ಕಿಟಕಿತಳಿಗೆ ಸಿಕ್ಕಿಸಿದ್ದು ಕೆಳಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ಅಲ್ಲಿ ಎದ್ದಿತು, ಇಲ್ಲಿ ಬಿತ್ತು ಅಂತ ನೋಡುತ್ತ ನಿಂತ ಹಮಾಲರ ಗುಂಪಿನೆದುರು ಅದು ಕೊನೆಯಬಾರಿಗೆ ಸರ್ಕಲ್ಲಿನಲ್ಲೊಂದು ಸುತ್ತು ಹೊಡೆದು ಕಣ್ಮರೆಯಾಯಿತು. ಇಕ್ಬಾಲನು ಕವಳ ತಿಂದು ಕೆಂಪು ಹಿಡಿದ ಬಾಯಲ್ಲಿ ದೊಡ್ಡಕೆ ನಗುತ್ತಾ ಪಾರು ಮಳೆ ನಿಂತ್ರೆ ವರದಾ ನದಿ ಸೇತ್ವೆ ಹತ್ರ ಹೋಗಿ ನಾಳೆ ಹುಡ್ಕು. ಸಿಕ್ಕಿದ್ರೂ ಸಿಕ್ಬೋದು ನಶೀಬಿದ್ರೆ ಅನ್ನುತ್ತಿದ್ದರೆ ಉಳಿದವರೆಲ್ಲ ಸಣ್ಣಗೆ ನಗುತ್ತ ಹೌದೇ ಹೌದೆಂದರು. ಮೊದಲೇ ಪುಟ್ಟ ಮುಖದ ಪಾರು, ಗೊಬ್ಬೆ ಕಳೆದುಕೊಂಡು ಇನ್ನಷ್ಟು ಚಿಕ್ಕ ಮುಖ ಮಾಡಿ ನಿಂತನು. ಅಷ್ಟೊತ್ತಿಗೆ ಹೊಳೆಬಾಗಿಲು ಬಸ್ ಬಂದೇಬಿಡ್ತು. ಎಲ್ಲರೂ ಹರಿವ ನೀರಿಗಿಂತ, ಬೀಳುವ ಮಳೆಗಿಂತ ವೇಗವಾಗಿ, ತುಂಬಿ ನಿಂತ ಚೀಲದಿಂದ ಒಂದೇ ಒಂದು ಸಾಮಾನೂ ಬೀಳದ ಹಾಗೆ, ಅದು ಹ್ಯಾಗೋ ಬ್ಯಾಲನ್ಸು ಮಾಡುತ್ತ ಬಸ್ ಹತ್ತಿಯೇ ಬಿಟ್ಟರು. ಹಾ ಹೂ ಅನ್ನುವಷ್ಟರಲ್ಲಿ ಬಸ್ಸು ತುಂಬಿ ಪ್ಯಾಕಾಗಿ ಹೊರಟೂ ಬಿಟ್ಟಿತು. ಈಗ ಅಲ್ಲಿನ ಗಜಿಬಿಜಿ ಕಡಿಮೆಯಾಯಿತು. ಕಟ್ಟೆ ಖಾಲಿಯಾಯಿತು. ಅಲ್ಲಲ್ಲಿ ಒಬ್ಬೊಬ್ಬ ಹಮಾಲರು ಬೀಡಿ ಹಚ್ಚಿಕೊಂಡು ಕುಕ್ಕರುಗಾಲಲ್ಲಿ ಕೂತುಕೊಂಡಿದ್ದರಷ್ಟೆ. ಪೇಟೆ ಬೀದಿಯೇ ಮಂಕಾಗಿ ಕೂತಿದ್ದರೆ ಮನೆಗಳಾದರೂ ಏನು ಮಾಡುತ್ತವೆ ಮಳೆಯ ಹೊಡೆತಕ್ಕೆ. ಎಲ್ಲರೂ ಮಧ್ಯಾಹ್ನದ ನಿದ್ದೆಯನ್ನ ಇನ್ನೊಂಚೂರು ಮುಂದುವರಿಸುತ್ತ ಮಗ್ಗಲು ಬದಲಾಯಿಸಿದರು.&lt;br /&gt;&lt;br /&gt;ಮನೆಯ ಕಿಟಕಿಯಲ್ಲಿ ಇದನ್ನೆಲ್ಲ ನೋಡುತ್ತ, ಬಿಡಬೇಕೆಂದು ಇಟ್ಟುಕೊಂಡಿದ್ದ ಕಾಗದದ ದೋಣಿಯನ್ನ ಕೈಯಲ್ಲೇ ಹಿಡಿದುಕೊಂಡು ಕೂತಿದ್ದ ವಸುಗೆ ಮಾತ್ರ ನಿದ್ದೆ ಬಂದಿರಲಿಲ್ಲ. ಅಲ್ಲೆ ಹೊರಗೆ ಕೂತಿದ್ದ ಪಾರೂನ್ನ ಕೂಗಿ ದೋಣಿ ಕೊಟ್ಟು ಹೇಳಿದಳು - ಇದನ್ನ ಬಿಡು ನೀರಿಗೆ, ಇದರ ಒಳಗಡೆ ನಿನ್ ಗೊಬ್ಬೆ ಯಾರಾದ್ರೂ ನೋಡಿದ್ರೆ ತೆಗೆದಿಡಿ ಅಂತ ಬರ್ದಿದೀನಿ ನೋಡಿದವ್ರು ತೆಕ್ಕೊಡ್ತಾರೆ - ಪಾರೂ ಕಣ್ಣಲ್ಲಿ ಹನಿಯೊಡೆಯಿತು. ಆಯಿತು ಅಮ್ಮೀ ನೀವೊಬ್ರು ಬಾಕಿ ಇದ್ರಿ. ಸರಿ ಅದ್ನೂ ಮಾಡಿ ನೋಡುವ ಅಂತ ಮಳೆಯಲ್ಲೇ ಮೆಟ್ಟಿಲಿಳಿದು ಹರಿವ ನೀರಲ್ಲಿ ದೋಣಿಯನ್ನು ತೇಲಿಬಿಟ್ಟನು. ಈಗ ಮಳೆಯ ಜೊತೆ ಅವನ ಕಣ್ಣ ಹನಿಯೂ ಸೇರಿ ಮುಗಿಲು ಮತ್ತಷ್ಟು ಕಪ್ಪಾಗಿ ಮಳೆ ಬಿರುಸಾಯಿತು. ಹಾಗೇ ನೋಡುತ್ತ ಕೂತ ವಸುಗೆ ಎದುರು ಮನೆಯ ಕಿಟಕಿಯಲ್ಲಿ ಗೀತಾ ಆಂಟಿಯ ನಗುಮೊಗ ಕಾಣಿಸಿತು. ಕೂತಲ್ಲಿಂದಲೇ ಖುಶಿಯಾಗಿ ದೋಣಿಯ ಕಡೆ ಸನ್ನೆ ಮಾಡಿ ತೋರ್‍ಇಸಿದರು. ತನಗೂ ಒಂದು ಬೇಕೆಂಬಂತೆ ಸನ್ನೆ ಮಾಡಿದರು. ಇವಳು ಕೂಡಲೇ ಕೂತು ಅವರಿಗೆ ಕಾಣುವ ಹಾಗೆ ಅವತ್ತಿನ ಪತ್ರಿಕೆಯ ಹಿಂಬದಿ ಹಾಳೆ ಹರಿದು ಪುಟ್ಟ ಕತ್ತಿದೋಣಿ ಮಾಡತೊಡಗಿದಳು.. ಅವರು ಇನ್ನೂ ಖುಶಿಯಿಂದ ಚಪ್ಪಾಳೆ ತಟ್ಟತೊಡಗಿರುವುದು ದೂರದಿಂದಲೇ ಗೊತ್ತಾಗುತ್ತಿತ್ತು.. ಮಾಡಿ ಮುಗಿಯುವಷ್ಟರಲ್ಲಿ ಮಳೆಯ ರಭಸ ನಿಂತು ಸಣ್ಣ ಹನಿಯಾಯಿತು. ಚರಂಡಿ ಎಂದಿನಂತೆ ಮಟ್ಟವಾಗಿ ಹರಿಯುತ್ತಿತ್ತು. ಸರ್ಕಲ್ಲಿನಲ್ಲಿ ನಿಂತ ವಾಹನಗಳೆಲ್ಲ ತಮ್ಮ ದಾರಿ ಹಿಡಿದು ಹೊರಟಿದ್ದವು. ಮನೆಗಳ ಬಾಗಿಲೂ ತುಸುವೇ ತೆರೆಯತೊಡಗಿತು. ಅಂಗಡಿಗಳೆಲ್ಲ ಝಳಝಳ.. ಅಲ್ಲಲ್ಲಿ ಒಬ್ಬೊಬ್ಬ ಗಿರಾಕಿ. ಅಜ್ಜ ಎದ್ದು ಬಂದು ಜಗಲಿಯ ಬಾಗಿಲು ತೆಗೆದ ಕೂಡಲೆ ವಸು ಈಗ ಬಂದೆ ಇರಜ್ಜ ಎನ್ನುತ್ತ ಹೊರಗೋಡಿದಳು..ಆಕಡೆ ಈಕಡೆ ನೋಡಿ ರಸ್ತೆ ದಾಟುತ್ತ ಎದುರು ಮನೆಯ ಕಿಟಕಿಯಲ್ಲಿ ಆಂಟಿಯ ಕೈಯಲ್ಲಿ ಕತ್ತಿದೋಣಿ ಕೊಟ್ಟಳು. ಅವರು ಪುಟ್ಟ ತಮ್ಮನಷ್ಟೇ ಚಂದವಾಗಿ ನಕ್ಕದ್ದನ್ನು ನೋಡುತ್ತ ಆಮೇಲೆ ಬರುತ್ತೇನೆ, ಮಂಜುನ ನಮ್ಮನೆಗೆ ಕಳಿಸಿ ಆಟಕ್ಕೆ ಅಂತ ಹೇಳುತ್ತ ಮೆಟ್ಟಿಲಿಳಿದು ರಸ್ತೆ ದಾಟಿ ಮನೆಯ ಹತ್ತಿರ ಬಂದರೆ ಪಾರು ಅವನ ಒದ್ದೆ ಗೊಬ್ಬೆ ಕೈಲಿ ಹಿಡಿದು ಓಡೋಡಿ ಬಂದ. ಅಮ್ಮೀ ನನ್ನ ಗೊಬ್ಬೆ ಸೊಸೇಟಿ ಪಕ್ಕದ ಹಣ್ಣಿನಂಗಡಿಯ ಕಟ್ಟೆಗೆ ಸಿಕ್ಕಿಹಾಕಿಕೊಂಡಿತ್ತು ಜೊತೆಗೇ ನಾವು ಬಿಟ್ಟ ದೋಣಿಯೂ ಇತ್ತು ನೋಡಿ ಅಂತ ಹುಳುಕುಹಲ್ಲು ಕಿರಿದನು. ಅಷ್ಟೊತ್ತಿಗೆ ಸಂಜೆಯ ಅಲ್ಲಾ ಕೂಗು ಕೇಳಿಸಿ ಇಬ್ಬರೂ ಸಮಾಧಾನವಾಗಿ ನಕ್ಕರು.&lt;br /&gt;&lt;br /&gt;ವಸೂ ಎಂದು ಕೂಗುತ್ತ ಬಂದ ಮಂಜುಳ ನಡುಮನೆಯ ಕತ್ತಲು ದಾಟಿಬರಲು ಹೆದರಿಕೆಯಾಗಿ ಜಗಲಿಯಲ್ಲೆ ನಿಂತಳು. ವಸು ಒಳಗಿನಿಂದ ಧಿಗಣ ಹಾಕುತ್ತ ಏನು ಹೆದರುಪುಕ್ಕಿ ಮಾರಾಯ್ತಿ ನೀನು ಅನ್ನುತ್ತ ಅವಳ ಕೈಹಿಡಿದು ಎಳೆದುಕೊಂಡು ಹೋದಳು.ಇಬ್ಬರ ಅಡಿಗೆ ಆಟವೂ ಮುಗಿಯುವಾಗ ಸಂಜೆ ದೀಪ ಹೊತ್ತಿಸುವ ವೇಳೆ. ಅಜ್ಜ ಜಗಲಿಯಿಂದ ಮಂಜುವಿನ ಮನೆಯಲ್ಲಿ ಕರೆಯುತ್ತಿದ್ದಾರೆ ಎಂದು ಕೂಗು ಹಾಕುತ್ತಿದ್ದ. ಇಬ್ಬರೂ ಒಟ್ಟಿಗೇ ಅವಳ ಮನೆಗೆ ಹೊರಟರು. ಒಳಗೆ ಹೋದ ಕೂಡಲೆ ಮಂಜು ಕಣ್ಮರೆಯಾಗಿಬಿಟ್ಟಳು. ಗೀತಾ ಆಂಟಿ ಬೆಂಚಿನ ತುದಿಯಲ್ಲಿ ಕಾಗದದ ದೋಣಿ ಹಿಡಿದುಕೊಂಡು ಕೂತೇ ಇದ್ದಾರೆ. ಬಾ ಹತ್ತಿರ ಅಂತ ಸನ್ನೆ ಮಾಡಿದರು. ನೀವು ದೋಣಿ ಅಂತ ಹೇಳಿ ನೋಡೋಣ ಇನ್ನೊಂದು ದೊಡ್ಡ ದೋಣಿ ಮಾಡಿಕೊಡುತ್ತೇನೆ ಅಂದ ಕೂಡಲೆ ಅವರು ದ ದ ದ... ಅಂಅತ ಶಬ್ದ ಮಾಡಿ ನಗತೊಡಗಿದರು. ಇವಳು ಇನ್ನೂ ಖುಶಿಯಿಂದ ಅವರ ಬಾಯಿಂದ ರಸ್ತೆ, ಸರ್ಕಲ್ಲು, ಅಂಗಡಿ, ಕಿಟಕಿ ಮತ್ತು ಕಣ್ಣಿಗೆ ಕಂಡ ಎಲ್ಲ ವಸ್ತುಗಳನ್ನೂ ಹೇಳಿಸಲು ಹೊರಟು ಏನೇನೋ ಅರ್ಥವಿಲ್ಲದ ಶಬ್ಧಗಳ ಮಾಲೆಯಲ್ಲಿ ಬಿದ್ದು ನಗಾಡತೊಡಗಿದಳು. ಆಂಟಿಗೂ ಖುಶಿ ತೊದಲುತ್ತ ಉಗ್ಗುತ್ತ ಏನೇನೋ ಹೇಳುತ್ತ ನಗುತ್ತಿದ್ದಾರೆ.. ಅಷ್ಟರಲ್ಲಿ ಅಲ್ಲಿಗೆ ಬಂದ ಮಂಜು ಕೈಬಾಯೊರೆಸುತ್ತ ತಾನೂ ಸೇರಿಕೊಂಡಳು ಮೂವರೂ ಶಬ್ಧಬ್ರಹ್ಮನ ಉಪಾಸನೆಯಲ್ಲಿ ಮುಳುಗಿ ತೇಲುತ್ತ ಇದ್ದರೆ ನಗು ಸುತ್ತಲೂ ಪ್ರಭಾವಲಿಯಾಗಿ ಕೂತಿತ್ತು. ಅಷ್ಟೊತ್ತಿಗೆ ಮನೆಗೆ ಬಂದ ಮಂಜುವಿನ ಮಾವ -ಏನಿದು ಬೀದಿಬಾಗಿಲಲ್ಲಿ ಕೂತು ಹುಚ್ಚಾಟ. ನಿಮ್ಮಮ್ಮ ಹುಚ್ಚಿ ಎಂದರೆ ನಿಂಗೂ ಗೊತ್ತಾಗಲ್ಲವೇನೇ ಮಂಜೂ, ಹೀಗೇ ನಗ್ತಾ ಇದ್ರೆ ನಾಳೆ ನೀನೂ ಆ ಕಡೆ ಕಿಟಕಿ ಬದಿಗೆ ಹಲ್ಲು ಕಿರಿದುಕೊಂಡು ಕೂರಬೇಕಷ್ಟೇ. ಶಾಲೆ ಪಾಠ ಅಂತ ಮಾನವಾಗಿ ಇರೋದ್ ಬಿಟ್ಟು  ಏನಿದು ಗಲಾಟೆ, ಎಂದು ಗೊಣಗುತ್ತ ಗಂಟುಮುಖದಲ್ಲಿ ಒಳಗೆ ಹೋದರು.&lt;br /&gt;&lt;br /&gt;ನಗುವೆಲ್ಲ ನಿಂತು ಆಂಟಿಯ ಮುಖ ಪೆಚ್ಚಾಯಿತು. ಮಂಜುವಿನ ಕಣ್ಣಲ್ಲಿ ಆಗಲೇ ನೀರಹನಿ.. ವಸು ತಲೆತಗ್ಗಿಸಿ ನಾಳೆ ಬರ್ತೀನಿ ಅಂತ ಹೇಳುತ್ತಾ ಅವರ ಮನೆಗೆ ಹೋದಳು. ಒಳಗೆ ಹೋದ ಕೂಡಲೆ ಅಜ್ಜ ಆಟವೆಲ್ಲ ಮುಗಿಯಿತೇನೇ, ಓದಿಕೊಳ್ಳುವುದೇನೂ ಇಲ್ಲವೋ ಅನ್ನುತ್ತಿದ್ದರೆ ಉತ್ತರಿಸಲು ತೋಚದೆ ಸುಮ್ಮನೆ ಒಳಗೆ ಹೋಗಿ ಅಮ್ಮಮ್ಮನ ಮರಿಗೆ ಹತ್ತಿ ಕತ್ತಲಲ್ಲಿ ಮಲಗಿದಳು.&lt;br /&gt;&lt;br /&gt;ಸ್ವಲ್ಪ ಹೊತ್ತಿಗೆ ಸಂಜೆಯ ಕೆಲಸ ಮುಗಿಸಿ ಬಂದ ಅಮ್ಮ ಒಳಗಿನ ದೀಪ ಹಾಕಿದಾಗ ಕಣ್ಣುಬಿಡುತ್ತ ಮಲಗಿದ್ದ ವಸು ಕಾಣಿಸಿದಳು. ಅಮ್ಮನಿಗೆ ಅಚ್ಚರಿ. ಕುಣಿದುಕೊಂಡು, ಜೇಬಲ್ಲಿ ಏನಾದರೂ ತುಂಬಿಕೊಂಡು ಮುಕ್ಕುತ್ತಾ, ಅಜ್ಜನನ್ನು ಕತೆ ಹೇಳಲು ಪೀಡಿಸುತ್ತ ಕೂರುವ ಹುಡುಗಿ ಯಾಕೆ ಇಲ್ಲಿ ಸುಮ್ಮನೆ ಮಲಗಿದಾಳೆ ಅಂತ ಹೊಳೆಯದೆ ಹೋಯಿತು. ಅಮ್ಮಾ ಅಂತ ಮಾತು ಹೊರಡುತ್ತಿದ್ದ ಹಾಗೆ ಗೊತ್ತಾಯಿತು. ಓಹೋ ಇನ್ನೇನು ಅಳು ಬರುವುದರಲ್ಲಿದೆ ಅಂತ. ನಿಧಾನವಾಗಿ ಕೂತು ಅವಳನ್ನೆಬ್ಬಿಸಿಕೊಂದು ಅವುಚಿಕೊಳ್ಳುತ್ತಾ ಏನು ಪುಟ್ಟೀ ಅನ್ನುವುದೇ ತಡ ಅಷ್ಟೊತ್ತಿನವರೆಗೂ ತಡೆದಿಟ್ಟಿದ್ದೆಲ್ಲ ಹೊರಗೆ ಬಂತು. ಅಮ್ಮಾ ಗೀತಾಂಟಿ ಯಾಕೆ ಮಾತಾಡುವುದಿಲ್ಲ, ಅವರ ಗಂಡ ಎಲ್ಲಿ, ಮಂಜುಗೆ ಯಾಕೆ ಯಾವಾಗಲೂ ಅವರ ಮಾವ ಬಯ್ಯುತ್ತಾನೆ? ಅಷ್ಟು ಬೈದರೂ ಇವರಿಬ್ಬರೂ ಯಾಕೆ ಇಲ್ಲಿರಬೇಕು. ಅವಳಿಗೆ ಅಜ್ಜನೂ ಇಲ್ಲವಲ್ಲ ಯಾಕೆ.. ಹೀಗೇ.. ಅಮ್ಮ ನಿಧಾನವಾಗಿ ಹೇಳತೊಡಗಿದರು. ಗೀತಾಆಂಟಿ ಸ್ವಲ್ಪ ಪೆದ್ದಿ . ಉಗ್ಗು ಮಾತು ಅದರಲ್ಲೂ ಪೂರ್ತಿ ಪದ ಹೊರಡುವುದಿಲ್ಲ. ಅವಳಪ್ಪ ಅಂದ್ರೆ ಮಂಜುವಿನ ಅಜ್ಜ ಇದ್ದಾಗ ಈ ಮಗಳು ಹೀಗಿರುವುದು ನೋಡಿ ಯಾರೂ ಮದುವೆಯಾಗುವುದಿಲ್ಲ, ಪೆದ್ದಿಯಾಗಿದ್ದರಿಂದ ಮದುವೆಯಾದರೂ ಗೋಳು ಹೊಯ್ದುಕೊಳ್ಳುತ್ತಾರೆ  ಎಂದು ಅವರ ಗದ್ದೆಯಲ್ಲಿ ಕೆಲಸಕ್ಕಿದ್ದ ಅವರ ಜಾತಿಯವನೇ ಒಬ್ಬನಿಗೆ ಕೊಟ್ಟು ಮದುವೆ ಮಾಡಿದರು. ಅವನನ್ನು ಮನೆ ಅಳಿಯ ಅಂತ ಕರೆದರು. ಅವನೂ ಒಂದಷ್ಟು ದಿನ ಇಲ್ಲೇ ಇದ್ದ. ಮಂಜು ಹುಟ್ಟಿದಳು. ಹೆಸರಿಟ್ಟಿದ್ದು ಅವಳ ಅಜ್ಜನೇ. ಗೀತನಿಗೆ ಏನೂ ಗೊತ್ತಾಗುವುದಿಲ್ಲ. ಮಂಜು ತನ್ನ ಮಗಳು ಮುದ್ದು ಮಾಡಬೇಕು ಅಂತಲೂ ತಿಳಿಯುವುದಿಲ್ಲ. ಅವರಜ್ಜ ಸತ್ತು ಹೋದರು. ಮನೆ ಈಗ ಗೀತನ ಅಣ್ಣನ ಯಜಮಾನಿಕೆಯಲ್ಲಿದೆ. ಕಾಲಕಸಕ್ಕಿಂತ ಕೀಳಾಗಿ ಕಂಡರೆ ಆಳೂ ಹೊರಟುಹೋಗುತ್ತಾನೆ. ಮಂಜುವಿನ ಅಪ್ಪನೂ ಮನೆ ಬಿಟ್ಟು ಹೋದ್ರು. ಅವನು ಹೋಗಿದ್ದೂ ಇವಳಿಗೆ ಗೊತ್ತಾಗುವುದಿಲ್ಲ. ಇದ್ದಿದ್ದೂ ಗೊತ್ತಿತ್ತೋ ಇಲ್ಲವೋ.. ಈಗ ಇವರಿಬ್ಬರೂ ಮನೆಗೆ ಭಾರ. ನೀನು ಈ ವಿಷಯವೆಲ್ಲ ಅವರ ಹತ್ತಿರ ಮಾತಾಡಬೇಡ. ಆದರೆ ಅವರ ಮನೆಗೆ ಹೋದಾಗ ಗೀತಾಂಟಿಯ ಜೊತೆ ಒಳ್ಳೆಯವಳಾಗಿ ನಡೆದುಕೋ. ಮಂಜು ಜೊತೆ ಜಗಳವಾಡಬೇಡ, ಸಮಾಧಾನವಾಗಿರು. ಏನಾದರೂ ಬೇಕು ಅಂತ ಕೇಳಿದರೆ ಕೊಟ್ಟುಬಿಡು..ಅವರ ಅಪ್ಪನ ಬಗ್ಗೆ ಅವಳ ಹತ್ತಿರ ಕೇಳಬೇಡ..ಆಯಿತಾ... ವಸು ಸುಮ್ಮನೆ ಹೂಂಗುಟ್ಟಿದಳು.&lt;br /&gt;&lt;br /&gt;ರಾತ್ರಿ ಅಮ್ಮನನ್ನೇ ಅಪ್ಪಿಕೊಂಡು ಮಲಗಿದ್ದರೂ ಏನೇನೋ ಕನಸುಬಿತ್ತು. ಕಿಟಕಿಯಿಂದ ಕೈ ಹೊರಗೆ ಹಾಕಿ ಗೀತಾ ಆಂಟಿ ಗ.ಗ..ಗ..ಗ... ಅಂತ ಏನನ್ನೋ ಹೇಳುತ್ತಿದ್ದರು. ವಸು ಕಂಡ ಕೂಡಲೇ ನಗು ನಗುತ್ತ ಕರೆದು ಮತ್ತೆ ಗ..ಗ..ಗ.. ಅಂತ ಹೇಳತೊಡಗಿದರು? ಏನು ಏನು ಅಂತ ವಸು ಕೇಳಿದರೆ ನಿ..ನಿ... ಗ...ಗ... ಅಂತ ಅಭಿನಯಿಸಿ ತೋರಿಸಿದರು.. ವಸುಗೆ ಅಳು ಬಂದುಬಿಟ್ಟಿತು. ನಿನ್ನ ಗಂಡನಿಗೆ ಮಾತು ಬರುತ್ತಾ ಅಂತ ನಗಾಡ್ತಾ ಇದಾರೆ ಆಂಟಿ, ವಸು ಏನೋ ಹೇಳಲು ಹೊರಟರೆ ಮಾತೇ ಹೊರಡುತ್ತಿಲ್ಲ.. ಎಲ್ಲಿ ಗಂಡ ಅಂತ ಹೇಳು ನೋಡಣಾ ಅಂತ ಮಂಜು ಇವಳ ಬಾಯಿಂದ ಶಬ್ದ ಹೊರಡಿಸಲು ಪ್ರಯತ್ನಿಸುತ್ತಾ ಬಿದ್ದು ಬಿದ್ದು ನಗುತ್ತಿದಾಳೆ. ವಸುವಿನ ಕಣ್ಣ ತುಂಬ ನೀರು.. ಆದರೆ ಅಳಲು ಶಬ್ದವೇ ಬರುತ್ತಿಲ್ಲ..ಎಚ್ಚರಾದಾಗ ಬೆಳ್ಳಂಬೆಳಗು, ಹಾಸಿಗೆಯಾಚೆಗಿನ ಕಿಟಕಿಯಲ್ಲಿ ಕಂಡ ಅಂಗಳದ ಮೇಲಿನ ಹುಲ್ಲ ಮೇಲೆಲ್ಲ ರಾತ್ರೆಯಿಡೀ ಸುರಿದ ಮಳೆಯ ಹನಿ.. ಹಿತ್ತಲಲ್ಲಿದ್ದ ಮರಗಳ ಎಲೆಯಿಂದಲೂ ತೊಟ್ಟಿಕ್ಕುತ್ತಿತ್ತು. ಪಕ್ಕದಲ್ಲೆ ಹಬ್ಬಿದ ಮಲ್ಲಿಗೆ ಹಂಬಿನ ತುಂಬ ಬಿಳಿಬಿಳಿಯಾಗಿ ಅರಳಿದ ಹೂಗಳು. ಹಸಿರು ಬಣ್ಣ ಗಾಢವೋ ಬಿಳಿಯೋ ಹೇಳಲಾಗದಷ್ಟು ಅಚ್ಚ ಹಸಿರು ಬಿಳಿ ಬಣ್ಣಗಳು.. ಅರಳಿ ಎಷ್ಟೋ ಹೊತ್ತಾಗಿದ್ದರೂ ಘಮಘಮ ಹಾಗೇ ಇತ್ತು. ಹಿತ್ತಲ ಕೊಟ್ಟಿಗೆಯಲ್ಲಿ ಕೆಂಪಿದನದ ಕರು ಅಂಬಾ ಎನ್ನುವುದು ಕೇಳುತ್ತಲೆ ಇತ್ತು. ನಿನ್ನೆಯ ತಳಮಳಗಳೆಲ್ಲ ಒದ್ದೆ ರಾತ್ರಿಯಲ್ಲಿ ಒರಸಿಹೋಗಿ, ಬೆಳಗಿನ ಬೆಳಕಲ್ಲಿ ಮನಸು ನಿಚ್ಚಳವಾಗಿತ್ತು.&lt;br /&gt;&lt;br /&gt;ಸಂಗೀತ ಕಲಿಯುವ ವಸುವನ್ನು ಗೀತಾ ಆಂಟಿ ಹಾಡಲು ಪೀಡಿಸುತ್ತಿದ್ದರು. ಶನಿವಾರ ಮಧ್ಯಾಹ್ನ ಅವರ ಮನೆಯ ಬಾಲ್ಕನಿಯಲ್ಲಿ ವಸು ಹಾಡಬೇಕು. ಆಂಟಿಗೆ ಅವಳು ಕಲಿತ ಭಾವಗೀತೆಯೊಂದು ತುಂಬ ಇಷ್ಟ..ಅದನ್ನೇ ಯಾವಾಗಲೂ ಕೇಳುವುದು ಅವರು.&lt;br /&gt;ದೇವ ನಿನ್ನ ಮಾಯೆಗಂಜಿ ನಡುಗಿ ಬಾಡೆನು..&lt;br /&gt;ಎಲ್ಲವನ್ನು ಕೊಟ್ಟಿರುವೆ ಏನ ಬೇಡಲಿ, ಜಗವ ನನಗೆ ಬಿಟ್ಟಿರುವೆ ಏಕೆ ಕಾಡಲಿ..!&lt;br /&gt;ಹಾಡಿನ ಭಾವಾರ್ಥ ಹಾಡುವ ವಸೂಗೆ, ಕೇಳುವ ಮಂಜು, ಗೀತಾಂಟಿ ಯಾರಿಗೂ ಗೊತ್ತಿಲ್ಲ. ಆದರೆ ಹಾಡಲ್ಲಿ ಒಸರುವ ದೀನತೆಯ ಸ್ವರ ಎಲ್ಲರ ಮನಸ್ಸನ್ನೂ ಮೀಟಿ ಆವರಿಸಿಕೊಳ್ಳುತ್ತದೆ. ಗೀತಾಂಟಿ ಕೇಳುತ್ತ ಕೇಳುತ್ತ ಹನಿಗಣ್ಣಾಗುತ್ತಾರೆ. ಮಕ್ಕಳು ಹಾಡು ಮುಗಿದ ಕೂಡಲೆ ಎದ್ದು ಹೋಗುತ್ತಾರೆ. ಆಂಟಿ ಸುಮ್ಮನೆ ಅಲ್ಲೆ ಕೂತಲ್ಲೆ. ಹೀಗೇ ಕಳೆದ ದಿನಗಳು ವರ್ಷಗಳ ಗಾಲಿಗೆ ಸಿಕ್ಕಿ ಎಲ್ಲರ ದಾರಿಯೂ ಬೇರೆ ಬೇರೆಯಾಯಿತು.&lt;br /&gt;&lt;br /&gt;ಶಿವಮೊಗ್ಗದಲ್ಲಿ ಡಾಕ್ಟರಾದ ವಸುಗೆ ಅಪರೂಪಕ್ಕೆ ಊರಿಗೆ ಹೋಗುವ ಅವಕಾಶವಿದ್ದರೂ ಹೊರಗಿನ ಒಡನಾಟವಿರಲಿಲ್ಲ. ಹೀಗಾಯಿತಂತೆ ಅಂತ ಕತೆ ಹೇಳಲು ಅಜ್ಜ ಅಮ್ಮಮ್ಮ ಇರದೆ ತುಂಬ ದಿನಗಳಾಗಿತ್ತು. ಅಮ್ಮನಿಗೋ ಮೊಮ್ಮಗಳ ಜತೆ ಮಾತಾಡಿಯೇ ಮುಗಿಯುವುದಿಲ್ಲ, ವಸುವನ್ನೆಲ್ಲಿ ಮಾತನಾಡಿಸುತ್ತಾಳೆ! ಪುಟ್ಟ ವಸುಗೆ ದೊಡ್ಡದಾಗಿ ಅಗಲವಾಗಿ ಎತ್ತರೆತ್ತರಕ್ಕೆ ನಿಂತ ಪೇಟೆ ಬೀದಿ, ಅಲ್ಲಿಯ ಮನೆಗಳು, ರಸ್ತೆ, ಸರ್ಕಲ್ ಎಲ್ಲ  ಈಗ ಕಾಲಿಡಲೂ ಜಾಗವಿಲ್ಲದೆ ಇಡುಕಿನಿಂತಂತೆ ಕಾಣುತ್ತಿತ್ತು. ರಸ್ತೆಯ ಗಿಜಿಗಿಜಿಯನ್ನು ಕಾರ್ಯಕಾರಣವೆನ್ನದೆ ಸುತ್ತುವ ಬೈಕುಗಳು, ದೊಡ್ಡ ದೊಡ್ಡ ಕಾರುಗಳು, ಇಕ್ಕೆಲಕ್ಕೆ ಹಚ್ಚಿ ನಿಂತ ತರಕಾರಿ ಅಂಗಡಿಗಳು, ಇನ್ನೂ ಹೆಚ್ಚು ಮಾಡಿದ್ದವು. ಸೈಕಲ್ಲಿನಲ್ಲಿ ಸಾಗುವವರು ಅಲ್ಲೊಬ್ಬರು ಇಲ್ಲೊಬ್ಬರು ಇದ್ದರೆ, ಕೂಲಿಗಾಡಿಗಳೆಲ್ಲ ಹೆಚ್ಚು ಕಮ್ಮಿ ಕಾಣದೆ ಹೋಗಿತ್ತು. ಪಾರು ಹಮಾಲನು ರೈಟ್ ಹೇಳಿ ವರ್ಷಗಳೇ ಆಗಿದ್ದವು. ಅಳಿದುಳಿದವರು ತುಂಬ ವಯಸ್ಸಾಗಿದ್ದರೂ ದಿನವೂ ಬಂದು ಬಸ್ ಸ್ಟಾಂಡ್ ಕಟ್ಟೆಯಲ್ಲಿ ಕೂತು ಬಸ್ಸುಗಳನ್ನು ನೋಡುತ್ತ ಕೂತಿರುತ್ತಿದ್ದರು. ಹಾಗೂ ಹೀಗೂ ಯಾವಾಗಲೋ ಯಾರಿಂದಲೋ ಮಂಜುಳ ಮದುವೆಯಾಗಿ ಶಿವಮೊಗ್ಗದಲ್ಲಿಯೇ ಇರುವಳೆಂದು ತಿಳಿದಿತ್ತು.&lt;br /&gt;&lt;br /&gt;ಪುಟ್ಟ ಬಲಹೀನ ಕೈಯೊಂದು ತನ್ನ ಕೈಹಿಡಿದು ಎಳೆಯುವ ಅನುಭವ ವಸುವಿನ ಎಚ್ಚರದ ಕನಸನ್ನು ಅಲ್ಲಿಗೆ ಮುಗಿಸಿತು. ಹಸಿರು ಬೆಡ್ಶೀಟ್ ಹೊದ್ದು ಮಲಗಿದ್ದ ಸೋತ ಮುಖದಲ್ಲಿ ಅವತ್ತು ಅಷ್ಟುವರ್ಷಗಳ ಹಿಂದೆ ದಿನವೂ ನೋಡಿದ್ದ ನಗುವಿತ್ತು. ಮಂಜು -ಅಮ್ಮಾ ಇವಳು ನಮ್ಮ ವಸು, ಡಾಕ್ಟರಮ್ಮಾ ಈಗ.. ಅವಳೇ ನೋಡುತ್ತಾಳೆ ನಿನ್ನ-ಹೇಳುತ್ತಿದ್ದಳು.. ಆ ಮುಖದಲ್ಲಿ ಅದೇ ನಗು.. ಬಾಯಲ್ಲಿ ಎಂದಿನ ಅಸ್ಪಷ್ಟ ಶಬ್ದಗಳ ತೊದಲು.. ಮಂಜು ಹೇಳಿದಳು.. ನಿನ್ ಗಂಡ ಎಲ್ಲಿ ಅಂತ ಕೇಳ್ತಾ ಇದ್ದಾಳೆ.. ವಸು ಗೀತಾಂಟಿಯ ಕ್ಷೀಣ ನಾಡಿ ಹಿಡಿಯುತ್ತಾ ಅವಳ ಮುಖಕ್ಕೆ ಸಮೀಪವಾಗಿ ಬಗ್ಗಿ ಹೇಳಿದಳು. ನಾಳೆ ಕರೆದುಕೊಂಡು ಬರುತ್ತೇನೆ. ನೀವಿಲ್ಲಿರುವುದು ಗೊತ್ತಿರಲಿಲ್ಲ. ಮನೆಯಿಂದ ಏನಾದರೂ ಮಾಡಿಕೊಂಡು ತರಲಾ ಆಂಟಿ.. ಸುಮ್ಮನೆ ನಕ್ಕಿತು ಸೋತ ಜೀವ. ಮರುದಿನ ಮಧ್ಯಾಹ್ನ ವಸು ಗಂಡನೊಡನೆ ಬಂದಾಗ ಆಂಟಿ ಕಿಟಕಿಯಾಚೆಗೆ ಹನಿಯುತ್ತಿರುವ ಮಳೆಯನ್ನೂ ರಸ್ತೆಯಲ್ಲಿ ಹರಿಯುವ ನೀರನ್ನೂ ನೋಡುತ್ತಿದ್ದರು. ಅವರಿಬ್ಬರನ್ನೂ ನೋಡಿದ ಕೂಡಲೇ.. ವ..ವ..ವ.. ಗ... ಗ...ಗ.. ಗ.. ಅಂತ ನಗತೊಡಗಿದರು.. ವಸು ಗಂಡ ಎಂದು ಹೇಳ್ತಿದಾರೆ ಅಂತ ಗಂಡನಿಗೆ ವಸು ಪರಿಚಯಿಸಿದಳು. ಇಬ್ಬರನ್ನೂ ನೋಡಿ ನಕ್ಕ ಆಂಟಿ ಇದ್ದಕ್ಕಿದ್ದ ಹಾಗೆ ಮ.. ಮ..ಮ.. ದ..ದ..ದ.. ಅಂತ ಹೊರಗೆ ಕೈ ಮಾಡಿ ತೋರತೊಡಗಿದರು. ವಸು ಎಮರ್ಜೆನ್ಸಿಯ ಗಡಿಬಿಡಿಯಲ್ಲಿ ಅಲ್ಲೇ ಇದ್ದ ಪತ್ರಿಕೆಯನ್ನು ಹರಿದು ದೋಣಿ ಮಾಡಿ ಕೊಟ್ಟಳು. ಆಂಟಿ ಖುಶಿಯಿಂದ ದೋಣಿಯನ್ನು ಕೈಲಿ ಹಿಡಿದು ಆಚೆ ಸುರಿವ ಮಳೆಯನ್ನೂ ಈ ಕಡೆ ತಿರುಗಿ ವಸು ಮಂಜುವನ್ನೂ ನೋಡುತ್ತ ತಮ್ಮಷ್ಟಕ್ಕೆ ತಾವೇ ನಗತೊಡಗಿದರು...&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-3637138645152653027?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/3637138645152653027/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=3637138645152653027' title='7 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/3637138645152653027'/><link rel='self' type='application/atom+xml' href='http://www.blogger.com/feeds/4515791944382207090/posts/default/3637138645152653027'/><link rel='alternate' type='text/html' href='http://nenapu-nevarike.blogspot.com/2008/11/blog-post_06.html' title='ಕಾಗದದ ದೋಣಿ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>7</thr:total></entry><entry><id>tag:blogger.com,1999:blog-4515791944382207090.post-3526207643548344992</id><published>2008-11-03T02:04:00.000-08:00</published><updated>2008-11-03T02:08:07.843-08:00</updated><title type='text'>ಸ್ಪಂದನೆ..</title><content type='html'>ನನ್ನ ಭಾವಲಹರಿಗೆ ಸ್ಪಂದಿಸಿದ ಮತ್ತು ಸ್ಪಂದಿಸುತ್ತಲೇ ಇರುವ ಎಲ್ಲರಿಗೂ ಪ್ರೀತಿಯ ವಂದನೆಗಳು.&lt;br /&gt;ಕೆಲಸ ಮತ್ತು ವೈಯಕ್ತಿಕ ಒತ್ತಡಗಳಿಂದ ಪ್ರತಿಸ್ಪಂದನೆ, ಬ್ಲಾಗ್ ಬರಹ ಮತ್ತು ಓದು ಎರಡೂ ತುಂಬ ನಿಧಾನವಾಗಿಬಿಟ್ಟಿದೆ.&lt;br /&gt;&lt;br /&gt;ನನ್ನ ಲಹರಿಗೆ (ಹಿಂದಿನ ಬರಹ/ಕವಿತೆ) ಸ್ಪಂದಿಸಿದವರಲ್ಲಿ ಹೆಚ್ಚಿನವರು ನಾನು ಬ್ಲಾಗ್ ಮುಚ್ಚುತ್ತಿದ್ದೇನಾಗಿ ತಿಳಿದುಕೊಂಡಿದ್ದೀರಿ. ಆ ಅರ್ಥ ಬರುವ ಹಾಗೆ ಬರೆದಿದ್ದರೆ ಕ್ಷಮಿಸಿ.&lt;br /&gt;&lt;br /&gt;ನಾನು ಬರೆಯುವುದು ನನ್ನ ಮನದ ಮೇಲೆ ಹಾಯುವ ಎಷ್ಟೋ ಕಾಲದ ಮತ್ತು ದಿನದಿನವೂ ಘಟಿಸಿದ ನೆನಪುಗಳನ್ನ ನೇವರಿಸಿದ ಭಾವಲಹರಿಯನ್ನ. ಓದಿದ ನೀವೂ ಇದನ್ನ ಪ್ರೀತಿಯಿಂದ ಆಸ್ಥೆಯಿಂದ ನೇವರಿಸಿದ್ದೀರಿ ಪ್ರತಿಸ್ಪಂದಿಸಿದ್ದೀರಿ. ಎಷ್ಟೋ ಬಾರಿ ಈ ಎಲ್ಲವೂ ನಾನಂದುಕೊಂಡ ಆಯಾಮವನ್ನು ದಾಟಿ ಇನ್ನೆಲ್ಲೋ ಸಾಗಿವೆ. ಬಿಟ್ಟ ಬಾಣದ ಗತಿಯಲ್ಲಿ ಬರೆದ ಮಾತುಗಳು ನನ್ನ ಪರಿಧಿ ಮೀರಿ ಸಾಗುತ್ತವೆ ನಾಟುತ್ತವೆ. ಇದು ಎಲ್ಲರ ಬರಹದ ಮಿತಿ ಮತ್ತು ಸಾಮರ್ಥ್ಯ. ಹೀಗಾದಾಗ ಭಾವುಕ ಮನಸ್ಸು ಗೊಂದಲದಲ್ಲಿ ಬೀಳುತ್ತದೆ. ತಾರ್ಕಿಕ ನೆಲೆಗಟ್ಟು ಗಟ್ಟಿಯಿರದ ಭಾವಸಂವೇದನೆಗಳು ದಿಕ್ಕೆಡುತ್ತವೆ. ಹೀಗಿದ್ದೂ ತಡವರಿಸಿಕೊಂಡೂ ಭಾವಲಹರಿಗಳು ಹರಿಯುತ್ತಲೇ ಇರುತ್ತವೆ. ಇದರ ಜೊತೆಗೆ ನನ್ನ ಕೆಲಸದ ಒತ್ತಡ, ವೈಯಕ್ತಿಕ ಒತ್ತಡಗಳು ಇನ್ನೊಂದಿಷ್ಟು ಒಜ್ಜೆ ಹೇರಿವೆ.&lt;br /&gt;&lt;br /&gt;ಬರೆಯದೆ ಕೂರಬಹುದಾದ ಹುಟ್ಟಲ್ಲ ನನ್ನದು. ಬರೆಯಲು ಬಿಂಕ ಬಿಗುಮಾನವೆರಡೂ ಇಲ್ಲ. ಬರೆದಾಗ ಇಲ್ಲಿ ಖಂಡಿತ ಹಂಚಿಕೊಳ್ಳುತ್ತೇನೆ. ನಿಮ್ಮ ಅನಿಸಿಕೆಗಳಲ್ಲಿ ಕಲಿಯಬಯಸುತ್ತೇನೆ.&lt;br /&gt;&lt;br /&gt;ಮೊದಲೆ ಹೇಳಿದ ಹಾಗೆ ಇದು - ಆಶೆಯೆಂಬ ತಳ ಒಡೆದ ದೋಣಿಯ ದೂರ ತೀರ ಯಾನ. ಎಲ್ಲೂ ಮುಳುಗಬಹುದು. ತೇಲಿ ಇನ್ನೆಲ್ಲೋ ಸಾಗಲೂ ಬಹುದು. ಇದು ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ.. ಎಂಬ ಸಾಲು ದೋಣಿಯ ಹುಟ್ಟಾಗಿರುವುದು ನನ್ನ ಯಾನದ ಅದೃಷ್ಟವಿರಬಹುದು.&lt;br /&gt;&lt;br /&gt;ಪ್ರೀತಿಯಿರಲಿ&lt;br /&gt;ಸಿಂಧು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-3526207643548344992?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/3526207643548344992/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=3526207643548344992' title='6 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/3526207643548344992'/><link rel='self' type='application/atom+xml' href='http://www.blogger.com/feeds/4515791944382207090/posts/default/3526207643548344992'/><link rel='alternate' type='text/html' href='http://nenapu-nevarike.blogspot.com/2008/11/blog-post.html' title='ಸ್ಪಂದನೆ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-4515791944382207090.post-2335630339673720807</id><published>2008-09-29T02:12:00.000-07:00</published><updated>2008-09-29T02:16:35.089-07:00</updated><category scheme='http://www.blogger.com/atom/ns#' term='ಬಿಂದು..ಕೊನೆಯದು.. ಪೂರ್ಣವೆನ್ನಲಾರೆ..'/><title type='text'>ಆಶೆಯೆಂಬ ತಳವೊಡೆದ ದೋಣಿಯಲಿ ದೂರತೀರಯಾನ..</title><content type='html'>ಕಣ್ಣಿಗೆ ಕಂಡದ್ದೆಲ್ಲವನ್ನೂ&lt;br /&gt;ಮನದ ಭಿತ್ತಿಯೊಳಗೆ ಮೂಡಿಸಲಾಗುವುದಿಲ್ಲ;&lt;br /&gt;ಒಳಗೆ ಮೂಡಿದ್ದೆಲ್ಲವನ್ನೂ&lt;br /&gt;ಹೊರಗೆ ಹಂಚಿಕೊಳ್ಳಲೂ ಆಗುವುದಿಲ್ಲ.&lt;br /&gt;ಕಂಬನಿಯ ಬದುಕಿಗೆ&lt;br /&gt;ಕವಿತೆಯ ಕರವಸ್ತ್ರ ಕೊಟ್ಟವರು&lt;br /&gt;ಮಾತಿನ ಹಾದಿಯುದ್ದಕ್ಕೆ&lt;br /&gt;ಮೌನದ ಹೆಜ್ಜೆ ಇಟ್ಟು ಹೋಗಿದ್ದಾರೆ.&lt;br /&gt;&lt;br /&gt;ಇಷ್ಟಕ್ಕೂ ಭಾವವೊಂದು&lt;br /&gt;ನನ್ನದೇ ಮಾತಾಗಿ ದಾಖಲಾಗಲೇಬೇಕೆ!&lt;br /&gt;ಗುಳ್ಳೆ-&lt;br /&gt;ಒಳಿತು,ಚೆಲುವು,ಭಾವ,ಸಹಯಾನ,ಬದುಕು,ಬದಲಾವಣೆ,ನಾನುಇತ್ಯಾದಿ..&lt;br /&gt;- ಎಲ್ಲ ಗುಳ್ಳೆಗಳೂಒಡೆದಿವೆ,&lt;br /&gt;ಈ ದಾರಿ ಕೊನೆಗೊಂಡಿದೆ.&lt;br /&gt;&lt;br /&gt;ಎಲ್ಲರ ಪ್ರೀತಿಯ ಸ್ಪಂದನೆಗೆ ತಲೆಬಾಗಿ ನಮಿಸುತ್ತಾ&lt;br /&gt;ನೇಪಥ್ಯ ಸಿಂಧುವಿನೊಳಗಿನ್ನೊಂದು ಬಿಂದುವಾಗಿ..&lt;br /&gt;&lt;br /&gt;-ಪ್ರೀತಿಯಿಂದ&lt;br /&gt;ಸಿಂಧು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-2335630339673720807?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/2335630339673720807/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=2335630339673720807' title='19 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/2335630339673720807'/><link rel='self' type='application/atom+xml' href='http://www.blogger.com/feeds/4515791944382207090/posts/default/2335630339673720807'/><link rel='alternate' type='text/html' href='http://nenapu-nevarike.blogspot.com/2008/09/blog-post_29.html' title='ಆಶೆಯೆಂಬ ತಳವೊಡೆದ ದೋಣಿಯಲಿ ದೂರತೀರಯಾನ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>19</thr:total></entry><entry><id>tag:blogger.com,1999:blog-4515791944382207090.post-593162406651411431</id><published>2008-09-26T08:20:00.000-07:00</published><updated>2008-09-26T08:31:41.698-07:00</updated><category scheme='http://www.blogger.com/atom/ns#' term='ಕಥೆ..'/><title type='text'>ಚೈ..ವೈ..</title><content type='html'>ವೈದೇಹಿಯ ಕೈಯಲ್ಲಿ ಕ್ರೋಶಾ ಕಡ್ಡಿ ತನ್ನಷ್ಟಕ್ಕೆ ತಾನು ಓಡಾಡುತ್ತಿತ್ತು. ನೇರಳೆಬಣ್ಣದ ಉಲ್ಲನ್ನಿನ ಜೊತೆಗೆ ನಿಂಬೆಹಳದಿಯ ಎಳೆಗಳು ಚಂದ ಚಿತ್ತಾರ ಮೂಡಿಸುತ್ತ ನಡೆದಿದ್ದವು. ಅಕ್ಕಿ ಆರಿಸುತ್ತ ಕೂತವಳು ಕವಿತೆಯ ಭಾವವಾಗಿ ಹೊಮ್ಮಿದಂತೆ ಇವಳೂ ಬಂಗಾರವಿಲ್ಲದ ಬೆರಳಲ್ಲಿ ಯಾರದೋ ಮನೆಯ ಮುದ್ದು ಬಂಗಾರವಾಗುವ ಚಿನ್ನಾರಿಗೆ ಸ್ವೆಟರಂಗಿ ನೇಯುತ್ತಿದ್ದಳು. ಮೊದಲ ಸಾಲು ಜಪ್ಪಿಸಿ ಹಾಕಿದವಳ ಕನ್ನಡಕದ ಕಣ್ಣು ಈಗ ಕಿಟಕಿಯಾಚೆಗಿನ ಕಾಂಪೌಂಡಿನ ಗೋಡೆಯ ಮೇಲೆ ಬಿಂಕವಾಗಿ ತಿರುಗುವ ಅಳಿಲಿನ ಮೇಲಿತ್ತು. ಬೆರಳ ತುದಿ ತನಗೇ ಕಣ್ಣಿದೆಯೋ ಎಂಬಂತೆ, ಸಾಲಿನ ಕೊನೆ ಮುಟ್ಟುತ್ತಲೂ ಕೊನೆಗಂಟು ಹಾಕಿ ತಿರುಗಿ ಮತ್ತೊಂದು ಸಾಲು ಮೇಲೇರಿಸುತ್ತಿತ್ತು. ರೂಮ್ ಮೇಟ್ ಶಾಂತಮ್ಮನನ್ನು ನೋಡಲಿಕ್ಕೆ ಆಗಾಗ ಬರುವ ಅವರ ಗೆಳತಿಯ ಮಗಳು ರಕ್ಷಾ ಹೇಳುತ್ತಿದ್ದಳು, ಆಂಟೀ ನನ್ನ ಮಗಳು ಈಗ ಐದನೇ ಕ್ಲಾಸು ಎಷ್ಟು ಹೇಳಿದರೂ ಸರಿಯಾಗಿ ಓದಿಕೊಳ್ಳುವುದೇ ಇಲ್ಲ. ಎಲ್ಲದರಲ್ಲೂ ಬರಿಯ ಹುಡುಗಾಟ, ಟೆಸ್ಟ್ ಗಳು ಎಂದರೆ ಮಕ್ಕಳು ಎಷ್ಟು ಗರ್ಕಾಗಿ ಓದಿಕೊಂಡು ಶಿಸ್ತಿನಿಂದ ರೆಡಿಯಾಗುತ್ತಾರೆ ಇವಳೋ ಅವತ್ತೂ ಆಟ ಆಡದೆ ಬಿಡುವುದಿಲ್ಲ. ಬಯ್ಯದೆ ಸಿಟ್ಟು ಮಾಡದೆ ಹೇಗೆ ಹೇಳುವುದೋ ಗೊತ್ತಾಗೋಲ್ಲ ನೀವಾದ್ರೂ ಹೇಳಿ - ಶಾಂತಮ್ಮ ಅವರು ಓದುತ್ತಿದ್ದ ಗೀತೆಗೊಂದು ಭಾಷ್ಯವನ್ನು ಬದಿಗಿಟ್ಟು ಅವರ ಎಂದಿನ ವೇದಾಂತಗಳಿಂದ ಒಂದೊಂದೇ ಸಾಲು ಒಗೆಯತೊಡಗಿದರು.&lt;br /&gt;&lt;br /&gt;ವೈದೇಹಿಯ ಕಿವಿ ಮತ್ತೆ ಕಣ್ಣನ್ನು ಹಿಂಬಾಲಿಸಿ ಗೋಡೆಯ ಮೇಲೆ ಚಿನ್ನಾಟವಾಡುತ್ತಿದ್ದ ಅಳಿಲಿನ ಮೇಲೆ ಹೋಯಿತು. ಅಳಿಲಿನ ಬೆನ್ನ ಮೇಲಿನ ಮೂರುಗೆರೆಯಿಂದ ರಾಮ ನೆನಪಾಗಿ, ಅವನ ವನವಾಸವೂ ವೈದೇಹಿಯ ಚಿರವಿರಹವೂ ನೆನಪಾದವು.ಸಣ್ಣವಳಿದ್ದಾಗ ಎಷ್ಟು ಖುಶಿಯಿತ್ತು, ತನ್ನ ಹೆಸರಿನ ಬಗ್ಗೆ. ಸಾಕ್ಷಾತ್ ಸೀತಮ್ಮನವರ ಹೆಸರು. ಅದಾದ ಮೇಲೆ, ಚಂದಮಾಮದ ಬಾಲ ಹಿಡಿದು ತರಂಗದ ಕಂಬವೇರಿ ಜಾಣ-ಜಾಣೆಯರ ಪತ್ರಿಕೆಯನ್ನ ಮೆತ್ತಿಯ ಮೂಲೆಯಲ್ಲಿ ಕೂತು ಓದುವಾಗ ತನ್ನದೇ ಹೆಸರಿನ ಲೇಖಕಿಯ ದಿಟ್ಟ ಬರಹಗಳನ್ನೋದಿ ಒಂತರ ಖುಶಿ ಹೆಚ್ಚಾಗಿತ್ತು. ಸೀತಮ್ಮನವರ ಹೆಸರಿಗಿಂತಲೂ ಈ ಲೇಖಕಿ ಮನಸ್ಸು ತುಂಬತೊಡಗಿದ್ದರು. ಸದಾ ಕತೆಪುಸ್ತಕವನ್ನೋ , ಸಾಪ್ತಾಹಿಕವನ್ನೋ ಹಿಡಿದು ಮೂಲೆಗೆ ಕೂರುವ ಮಗಳೆಂದರೆ ಅಮ್ಮನಿಗೆ ಇಲ್ಲದ ನಸನಸೆ. ಸಿಡುಕುತ್ತಿದ್ದಳು. ಅವಳ ಸಿಡುಕಿಗೆ ತನ್ನ ಜವಾಬು ರೆಡೀ ಇರುತ್ತಿತ್ತು. ತಾನು ಹೇಗೂ ಆಗಷ್ಟೇ ನೀರು ಸೇದಿ ಹರಿವೆ ಮಡಿ, ಸೇವಂತಿಗೆ ಮಡಿ ಮತ್ತು ಮನೆಯ ಮುಂದಿನ ಪುಟ್ಟ ಬಣ್ಣದ ಗಾರ್ಡನ್ನಿಗೆಲ್ಲ ನೀರುಣಿಸಿ, ಕೈಕಾಲು ತೊಳೆದೇ ಮೂಲೆಯಲ್ಲಿ ಪುಸ್ತಕ ಹಿಡಿಯುತ್ತಿದ್ದುದು. ಏನೇ ಮಾಡಿದರೂ ನಾಳೆ ಟೆಸ್ಟು, ಪರೀಕ್ಷೆ ಇವತ್ತೂ ಕತೆಪುಸ್ತಕವೇ ಬೇಕಾ ಎಂಬ ಅವಳ ಸಿಟ್ಟಿಗೆ ತನ್ನ ಕಿವಿ ಒಳಗಿನಿಂದಲೇ ಮುಚ್ಚಿಕೊಂಡುಬಿಡುತ್ತಿತ್ತು.&lt;br /&gt;&lt;br /&gt;ಅವತ್ತೊಂದಿನ ಆರನೇ ಕ್ಲಾಸಿನ ಅರ್ಧವಾರ್ಷಿಕ ಪರೀಕ್ಷೆಯ ಕೊನೆಯ ಪೇಪರ್ ಗಣಿತ. ಮುಗಿಸಿ ಮನೆಗೆ ಬಂದವಳಿಗೆ ಜಗುಲಿಯ ತೂಗುಮಂಚದಲ್ಲಿ ತೂಗುತ್ತಿದ್ದ ರಜಕ್ಕೆ ಮನೆಗೆ ಬಂದ ಅನ್ನತ್ತೆಯೂ ಅವಳೊಟ್ಟಿಗೆ ಕತೆ ಹೊಸೆಯುತ್ತ ಕೂತ ಅಮ್ಮನೂ ಕಣ್ಣಿಗೆ ಬಿದ್ದರು. ಓಡಿ ಹೋಗಿ ಅತ್ತೆಯ ಕೊರಳಿಗೆ ಹಾರವಾದಳು. ಪರೀಕ್ಷೆ ಹೇಗಿತ್ತೇ ಪುಟ್ಟೀ... ಅದೇ ಮೊದಲ ಮಾತು - ಅದಕ್ಕೆ ತಾನು ಕೊಟ್ಟ ಉತ್ತರವನ್ನ ಅನ್ನತ್ತೆ ತನ್ನ ಕೊನೆಯದಿನದವರೆಗೂ ನೆನಪಿಟ್ಟುಕೊಂಡು ನಗುತ್ತಲೇ ಇದ್ದಳು. - ಹೌದು ಇನ್ನೇನು ಹೇಳಬಹುದಿತ್ತು ತಾನು - ಎಲ್ಲ ಪ್ರಶ್ನೆಯ ಉತ್ತರಗಳೂ ಗೊತ್ತಿದ್ದವು. ಆದರೆ ಮೊದಲಿಗೆ ಪೇಪರ ಬರೆಯಲು ಶುರು ಮಾಡಿದಾಗ, ಅಲ್ಲೆ ಕಿಟಕಿಬದಿಯಲ್ಲಿ ಕೂತವಳು ತಾನು - ಹೊರಗಿನ ಕ್ರೋಟನ್ ಗಿಡದ ಕೊಂಬೆಯಲ್ಲಿ ಒಂದು ಪುಟ್ಟ ಹಕ್ಕಿ ಕೂತುಬಿಟ್ಟಿದೆ. ಅದರ ಕೊಕ್ಕೇನು ಮಾಟ, ಗರಿಯೇನು ಚಂದ ಇಲ್ಲಿಯವರೆಗೂ ನೋಡೆ ಇಲ್ಲ ತಾನದನ್ನ. ನೋಡನೋಡುತ್ತಿದ್ದ ಹಾಗೆ ಅದರ ಅಮ್ಮ ಹಕ್ಕಿಯೂ ಬಂದು ಕೂತು ಬಾಯಲ್ಲಿ ಇಟ್ಟುಕೊಂಡಿದ್ದ ಏನನ್ನೋ ಮರಿಯ ಕೊಕ್ಕಿನ ಹತ್ತಿರ ಒಯ್ದು ತಿನ್ನಿಸಿತು. ಈ ಪುಟ್ಟ ಹಕ್ಕಿ ಹೊಟ್ಟೆಬಾಕನಂತೆ ಗುಳುಂ ಮಾಡುವುದನ್ನ ನೋಡುತ್ತ ಕೂತಿದ್ದೆ. ಅಷ್ಟ್ರಲ್ಲಿ ಮಧ್ಯಂತರ ದ ಬೆಲ್ಲು ಹೊಡೆದೇ ಬಿಟ್ಟಿತು. ಓಹೋ ಇನ್ನು ಮುಕ್ಕಾಲುಗಂಟೆ ಅಷ್ಟೇ ಇರುವುದು ಅಂತ ಗಡಿಬಿಡಿಯಲ್ಲಿ ಬರೆದು ಮುಗಿಸುವಾಗ ಎಲ್ಲ ಸರಿ ಉತ್ತರವೇ ಇದ್ದರೂ, ಪ್ರಶ್ನೆಗಳ ನಂಬರ್ ಹಿಂಚು ಮುಂಚಾಗಿ ಹಾಕಿಬಿಟ್ಟಿದ್ದೆ. - ಅಮ್ಮನ ಉರಿಗಣ್ಣು ಬೆನ್ನು ಸುಡಹತ್ತಿತು. ಕೂಡಲೇ ಅಮ್ಮನಿಗೆ ಸಮಾಧಾನ ಮಾಡುವ ದನಿಯಲ್ಲಿ ಹೇಳಿದ್ದೆ - ಆದರೂ ಬಿಡಮ್ಮ ನಮ್ಮ ಗಣಿತ ಮೇಷ್ಟ್ರು ತುಂಬ ಒಳ್ಳೆಯವರು. ಒಳ್ಳೆಯ ಹುಡುಗಿ ವೈದೇಹಿ ಅಂತ ಗೊತ್ತವರಿಗೆ, ಅಲ್ದೇ ಹಾಡು ಚೆಂದಾಗಿ ಹೇಳುತ್ತೀನಲ್ಲ. ಅವರೇ ಸ್ವಲ್ಪ ನೋಡಿಕೊಂಡು, ಪ್ರಶ್ನೆ ನಂಬರ್ ಸರಿಮಾಡಿಕೊಂಡು ಮಾರ್ಕ್ಸ್ ಕೊಡುತ್ತಾರೆ. ಫೇಲಂತೂ ಆಗುವುದಿಲ್ಲ. - ಅನ್ನತ್ತೆಯ ನಗು ಮನೆಯಿಡೀ ತುಂಬಿತು. ಅಯ್ಯೋ ಹುಡುಗಿಯೇ ನಿನ್ನ ಮಾಸ್ಟರಿಗೇ ತಿರುಗಿ ಪರೀಕ್ಷೆಯನ್ನು ಹಚ್ಚಿಬಿಟ್ಟೆಯಲ್ಲಾ ಅಂತ ನಕ್ಕಿದ್ದೇ ನಕ್ಕಿದ್ದೂ..&lt;br /&gt;ಶಾಂತಮ್ಮನವರ ರಕ್ಷಾಗೆ ಈ ಕತೆ ಹೇಳಲೇ? ಬೇಡ ಒಣವೇದಾಂತ ಕೊಡುವ ಸಮಾಧಾನವನ್ನ ತನ್ನ ಮಳ್ಳು ನೆನಪು ಕೊಡುತ್ತದೆಯೇ. ಹೇಗಿದ್ದರೂ ಈಗ ಎಲ್ಲರಿಗೂ ಬದುಕನ್ನ ಕಲೆಯಾಗಿಸುವ ಮ್ಯಾನೇಜ್ ಮೆಂಟ್ ಟ್ಯಾಕ್ಟಿಕ್ಸ್ ಬೇಕು. ಕಲೆ ಯಾರಿಗೆ ಬೇಕು. ಟೀವಿಯಲ್ಲಿ ಪ್ರೈಝು ತರುವ ಹಾಗಿದ್ದರೆ ಪರವಾಗಿಲ್ಲ..ಇಂತಿಪ್ಪ ಪ್ರಪಂಚವು ಹೀಗಿರುವಾಗ ತಾನು ಸುಮ್ಮನೆ ಕೂತು ತನ್ನಷ್ಟಕ್ಕೆ ಮನಸಿನ ಹಕ್ಕಿಗೆ ನೆನಪಿನ ರೆಕ್ಕೆ ಹಚ್ಚುವುದೇ ಒಳ್ಳೆಯದು. ಮಾತೇ ಜ್ಯೋತಿರ್ಲಿಂಗ ಅಂದರು.. ಏನು ಹಾಗಂದರೆ.. ದೇವರ ಹಾಗೆ ಮಾತನಾಡದೆ ಕೂರುವುದು ಅಂತಲೇ ಇರಬೇಕು ಅಂತ ನಗುತ್ತಿದ್ದ ಬಾಳಗೆಳೆಯನ ನೆನಪಾಯಿತು. ಅವನೀಗ ಜ್ಯೋತಿರ್ಲಿಂಗವೇ ಆಗಿ, ಹೂವಿನಕೊಪ್ಪದ ಗುಡ್ಡದ ಮಣ್ಣಲ್ಲಿ ಬೂದಿಯಾಗಿಹೋಗಿದ್ದಾನೆ. ಅಲ್ಲಿ ಅವನ ನೆನಪಿಗೆ ನೆಟ್ಟ ಅವನಿಷ್ಟದ ಪಾರಿಜಾತ ಗಿಡ ಮೈತುಂಬ ಹೂಬಿಡುತ್ತದಂತೆ. ಮೊನ್ನೆ ಅಲ್ಲಿನ ಶಾನುಭೋಗರ ಮಗ ಮಾತಾಡಿಸಿಕೊಂಡು ಹೋಗಲು ಬಂದವನು ಹೇಳಿದ್ದ.&lt;br /&gt;&lt;br /&gt;ಕನ್ನಡಿಕಣ್ಣಿನ ಮೇಲೆ ಕಿಟಕಿಯ ತಳಿಯಿಂದ ತೂರಿ ಬರುವ ಕಿರಣಗಳ ಪ್ರತಿಫಲನ. ಅಷ್ಟರಲ್ಲೇ ಇಂಟರ್ ಕಾಮ್ ರಿಂಗಾಯಿತು. ಭಾಷ್ಯ ಓದುವವರಿಗೆ ಮಧ್ಯಾಹ್ನದ ತಿಳಿನಿದ್ದೆ. ಎದ್ದು ಫೋನ್ ತಗೊಂಡರೆ ತನಗೇ ಫೋನು. ರಿಸೆಪ್ಶನಿಸ್ಟ್ ಕನೆಕ್ಟ್ ಮಾಡಿಕೊಡುವ ಹೊತ್ತಿಗೆ ಆಚೆ ಕಡೆಯಿಂದ ಬಂದ ವಯಸ್ಸಾದ ದನಿಯ ಗುರುತು ಹಿಡಿಯಲಾಗಲಿಲ್ಲ. ಗುರುತೇ ಸಿಗಲ್ಯನೇ ವೈ.. ಅನ್ನುವ ಮಾತು ಕೇಳುತ್ತಲೂ ವೈ ಎನ್ನುವ ಹೆಸರು ಕಿವಿಗೆ ಬೀಳುತ್ತಲೂ ನೆನಪಾಗಿದ್ದು ಅವನೇ.. ಚೈ - ಚೈತ್ರ. ಅಯ್ಯ ಮಾರಾಯಾ ಎಲ್ಲಿಂದ ಬಂದೆ ನೀನು ಎನ್ನುವ ಇವಳ ಅಚ್ಚರಿಯ ಮಾತಿಗೆ ಅವನ ಎಂದಿನ ಹಕ್ಕಿನಗು.. ಅಡ್ರೆಸ್ ಮಗಳು ಕೊಡ್ತು, ಇವತ್ತೇ ಸಂಜೆಗೆ ನಿಮ್ಮ ಸಂಧ್ಯಾರಾಗಕ್ಕೆ ಬರ್ತಿ, ಮುಖತಃ ಮಾತಾಡಣ ರೆಡೀ ಇರು ಆರಕ್ಕೆ, ಎಂದವನೇ ಫೋನಿಟ್ಟುಬಿಟ್ಟ. ಮನಸ್ಸಿಗೆ ಗಲಿಬಿಲಿಯ ಸಂಭ್ರಮ. ಎಲ್ಲಿಂದ ಬಂದನೋ ಮಾರಾಯ ಎಂಬ ಕುತೂಹಲ.&lt;br /&gt;ಸಂಜೆ ಐದಕ್ಕೇ ಕಾಫಿಗೆ ಕುಡಿದು ನೀಟಾಗಿ ಮುಖ ತೊಳೆದು ಫ್ರೆಶ್ಶಾಗಿ ರೆಡಿಯಾದವಳಿಗೆ ಆಯಾ ಬಂದು ೫-೬ ಹೂವು ಸುರುಗಿದ ಪುಟ್ಟ ದುಂಡುಮಲ್ಲಿಗೆ ಗೊಂಚಲು ತಂದುಕೊಟ್ಟಳು. ಅವಳ ಇಬ್ಬರು ಮಕ್ಕಳಿಗೂ ತಾನೇ ಹೆಣೆದುಕೊಟ್ಟ ಸ್ವೆಟರಂಗಿಗೆ ಕೃತಜ್ಞತೆಯಾಗಿ, ಆಗ ಈಗ ತನ್ನಿಷ್ಟದ ಹೂಮೊಗ್ಗೆ ತಂದುಕೊಡುತ್ತಿರುತ್ತಾಳೆ. ನಾಲ್ಕು ಹನಿ ನೀರು ಸಿಂಪಡಿಸಿ ಕೂದಲೆಳೆ ಎತ್ತಿ ಸಿಗಿಸಿಕೊಂಡರೆ ಹಾಯ್ದ ಗಾಳಿಯಲ್ಲಿ ಹೂವಿನ ಘಮ ತುಂಬಿಕೊಂಡು ಮನಸ್ಸೂ ಕೊಂಚಕೊಂಚವೇ ಅರಳತೊಡಗಿದ್ದ ಮೊಗ್ಗುಗಳ ಹದದಲ್ಲಿ ಮುದಗೊಂಡಿತು.&lt;br /&gt;ಆರಕ್ಕೆ ಮೊದಲೇ ಸಂದರ್ಶಕರ ಕೊಠಡಿಗೆ ಹೊರಟವಳು, ರಿಸೆಪ್ಷನ್ನಿನಲ್ಲಿದ್ದ ಡ್ಯಾಫೋಡಿಲ್ಲಳಿಗೆ ವಿಷಯ ತಿಳಿಸಿ, ಚೈತ್ರ ಎಂಬವರು ಬಂದರೆ ಸೀದಾ ಒಳಗೆ ಕಳಿಸಲು ಹೇಳಿ ಮುಂದುವರಿದೆ. ಯಾರು ಹಜ್ಜೀ ನಿಮ್ ಬೋಯ್ ಫ್ರೆಂಡಾ ಅಂತ ಕಣ್ಣು ಮಿಟುಕಿಸಿದಳು, ಕಪ್ಪುಕೆನ್ನೆಯಲ್ಲಿ ಒಂದು ಆಳ ಗುಳಿಯ ನಗುವೂ ಅರಳುತ್ತಿತ್ತು. ಅವಳ ಜೀವನೋತ್ಸಾಹ ಸಾಂಕ್ರಾಮಿಕ. ಮುಗುಳ್ನಗೆಯ ಪ್ರತ್ಯುತ್ತರವಷ್ಟೇ ತನ್ನಿಂದ.&lt;br /&gt;&lt;br /&gt;ಸಂದರ್ಶಕರ ಕೊಠಡಿಯಲ್ಲಿ ಯಾವಾಗಲೂ ಕಾಯುವ ಸೊಲಬಣ್ಣ ಶೆಟ್ಟರು ಕೊನೇ ಕಿಟಕಿಯ ಮುಂದೆ ಅವರ ಕುರ್ಚಿ ಹಾಕಿಸಿಕೊಂಡು ಎಂದೂ ಬಾರದ ಅತಿಥಿಗಳಿಗೆ ಕಾಯುತ್ತಾ ಕೂತಿದ್ದರು. ಈಗ ಅವರನ್ನು ಯಾರು ಹೋಗಿ ಮಾತನಾಡಿಸಿದರೂ ಅವರ ಕತೆ ಮುಗಿದ ಹಾಗೆಯೇ. ಚನ್ನಗಿರಿಯ ಅವರ ದೊಡ್ಡ ಮನೆ ಕಟ್ಟಿದ ಕಾಲದಿಂದ ಹಿಡಿದು, ಈಗ ಮಕ್ಕಳೆಲ್ಲ ರೆಕ್ಕೆ ಬಂದು ಹಾರಿ ಹೋಗಿ, ತನ್ನನ್ನ ಇಲ್ಲಿಯ ಗೂಡಲ್ಲಿ ಬಂಧಿಸಿಟ್ಟಿರುವ ಬಗ್ಗೆ ಸಾಭಿನಯ ಕತೆ ಹೇಳುತ್ತಾರೆ. ಎಂತಲೇ ಯಾರೂ ಅವರ ತಂಟೆಗೆ ಹೋಗದೆ ದೂರದೂರದ ಕುರ್ಚಿಯಲ್ಲಿ ತಮಗೆ ಬರಬೇಕಿರುವ ಸಂದರ್ಶಕರಿಗಾಗಿ ಕಾಯುತ್ತಾರೆ. ಆರಕ್ಕೆ ಇನ್ನೂ ಹತ್ತು ನಿಮಿಷ ಇತ್ತು. ಕಿಟಕಿಯಾಚೆಗೆ ಇನ್ನಿಸ್ ಫ್ರೀ ಶಾಲೆಯ ದೊಡ್ಡ ಮೈದಾನ, ಹಿಂದಕ್ಕೆ ದೊಡ್ಡ ದೊಡ್ಡ ಅಪಾರ್ಟ್ ಮೆಂಟುಗಳು, ಅವುಗಳ ಮಧ್ಯದ ಜಾಗದಲ್ಲಿ ಕೆಂಪಕೆಂಪಗೆ ಆಕಾಶದ ತುಂಬ ಬಣ್ಣ ಚೆಲ್ಲುತ್ತ ಕೆಲಸ ಮುಗಿಸಿ ನಿಸೂರಾಗಿ ಮನೆಗೆ ಹೊರಟ ದಿನಮಣಿ.. ಬೆಳಗ್ಗೆಯೆಲ್ಲ ಸಿಮೆಂಟು ಬ್ಲಾಕುಗಳಾಗಿ ತೋರುವ ಇವೆಲ್ಲ ಈಗ ಸಂಜೆಯ ಹೊಂಬೆಳಕಿನ ಮ್ಯಾಜಿಕ್ಕಿನಲ್ಲಿ ಜೀವ ಬಂದಂತೆ ಹೊಳೆಯುತ್ತ ಕೂತಿದ್ದವು. ಅಲ್ಲಲ್ಲಿ ಹಸುರಾಗಿ ತೂಗುವ ಗಿಡಮರಗಳು ಆ ಜೀವಕ್ಕೆ ಹೊಸದೇ ಆಯಾಮವನ್ನೂ ನೀಡಿದ್ದವು. ಮುಂದಿನ ಖಾಲಿ ಮೈದಾನದಲ್ಲಿ ದೊಡ್ಡ ಚಿಕ್ಕ ಮಕ್ಕಳು ಆಟವಾಡುತ್ತಿದ್ದರು. ಅವರವರ ಅಪ್ಪ ಅಮ್ಮ ಮನೆಯಲ್ಲಿ ಬರಲಿರುವ ಮಕ್ಕಳಿಗಾಗಿ ಕಾಯುತ್ತ ಕೂತಿರಬಹುದು.. ನಗುಬಂತು. ಈ ಮಕ್ಕಳು ದೊಡ್ಡವರಾದ ಮೇಲೂ ಆ ಅಪ್ಪ ಅಮ್ಮನಿಗೆ ಕಾಯುತ್ತ ಕೂರುವುದೇ ಕೆಲಸ. ಈಗಲಾದರೋ ಮನೆಗೆ ಬರುತ್ತಾರೆ ಮಕ್ಕಳು, ದೊಡ್ಡವರಾದ ಮೇಲೆ ಇವರ ಅಪ್ಪ ಅಮ್ಮನಿರುವ ಇಳಿಸಂಜೆಯ ಮನೆಗೆ ಬರುತ್ತಾರೆಯೇ ಇವರೆಲ್ಲ.. ಎಲ್ಲ ಅಪ್ಪ ಅಮ್ಮನೂ ಬೇರೆ ಬೇರೆ ಊರಿನ ಸೊಲಬಣ್ಣ ಶೆಟ್ಟರ ಹಾಗೆ, ಶಾಂತಮ್ಮನ ಹಾಗೆ, ಬೋಯ್ ಫ್ರ್ರೆಂಡಿಗೆ ಕಾಯುತ್ತ ಕೂತ ವೈದೇಹಿಯ ಹಾಗೆ... ಇಡೀದಿನವೂ ಸಂದರ್ಶಕರು ಬರುವ ಸಂಜೆಗೆ ಕಾಯುತ್ತಾ... ಸಮಯ ಮುಗಿವಾಗ ಕಣ್ಣಲ್ಲಿ ಕಣ್ಣಿಟ್ಟು ಬಾಯ್ ಹೇಳಲಾಗದೆ ಕೊಠಡಿಯ ಗೋಡೆಯ ಗಡಿಯಾರವನ್ನೋ, ಪೈಂಟಿಂಗನ್ನೋ ನೋಡುತ್ತ, ಯಾರೂ ನೋಡದ ಕ್ಷಣಗಳಲ್ಲಿ ಸರಕ್ಕನೆ ಕಣ್ಣೊರೆಸಿಕೊಳ್ಳುತ್ತಾ..&lt;br /&gt;ಅಯ್ಯೋ ತನಗೇನಾಗಿದೆ ಇವತ್ತು. ಚೈತ್ರ ಬರುವ ಸಂಜೆಯಲ್ಲೂ ಕಣ್ಣಲ್ಲಿ ನೀರು ತುಂಬಬೇಕೆ? ಅವನ ನಗೆಚಾಟಿಕೆಗೆ ಕಣ್ಣು ನೀರುತುಂಬಿದರೆ ಸಮ.. ಹಾಗೆ ಮಾತಾಡುತ್ತಾನವನು.. ಎಂತೆಲ್ಲ ಯೋಚಿಸುವಾಗ.. ಪಕ್ಕದಲ್ಲಿ ಬಂದು ನಿಂತಿದ್ಯಾರು...&lt;br /&gt;ಅರ್ಧ ನೆತ್ತಿಯವರೆಗೂ ಬೆಳೆದ ಹಣೆ, ಬಿಳಿಬಿಳಿ ಕೂದಲು, ಮೀಸೆಯೂ ಬಿಳಿ, ಹುಬ್ಬಿನ ಮೇಲೆಲ್ಲ ನಿರಿಗೆನಿರಿಗೆ, ಆದರೆ ಅದೇ ಎತ್ತರದ ನೇರ ಮೈಕಟ್ಟು, ಪೊರೆ ಬಂದಿದ್ದರೂ ತುಂಟತನವನ್ನ ಮರೆಯದ ಕಣ್ಗಳು, ಸ್ವಲ್ಪ ನಡುಕವಿದ್ದರೂ ಅದೇ ಅಗಲವಾದ ಬಿರುಸಾದ ಹಸ್ತ, ತುಟಿಯಂಚು ಎಂದಿನ ಸ್ಮೈಲೀ ನಗೆಯ ಜೊತೆಗೇ... ಚೈತ್ರನೆಂದರೆ ಚೈತ್ರನೇ.. ಮುದಿಯಾಗಿದ್ದರೂ ಸರಿ.... ಮಾಗಿ ಎಲೆಯುದುರಿಯೂ, ಕೆಂಪುಚಿಗುರನ್ನ ಒಳಗೇ ಇಟ್ಟು ವಸಂತಕ್ಕೊಯ್ಯುವ ಚೈತ್ರ.. ತನ್ನ ಮುಖದಲ್ಲಿ ಹರಡಿದ್ದು ನಗೆಯೋ ಅಳುವೋ...&lt;br /&gt;&lt;br /&gt;ಹೆಂಗೆ ಬಂದೆ, ಒಬ್ಬನೇ, ಮಕ್ಕಳೆಲ್ಲಿ, ಯಾರು ಅಡ್ರೆಸ್ ಕೊಟ್ಟ ಇದನ್ನೇ ಎಲ್ಲ ಮಾತಾಡದಾ ಅಥವಾ ಅದೇನು ಇಲ್ಲದೆ ಸುಮ್ಮನೆ ಹಂಗೆ ಸಣ್ಣಕಿದ್ದಾಗ ಮಾಡಿದಂಗೆ ಗುರಿಯಿಲ್ಲದ ಕನಸು ಮಾತುಗಳನ್ನ ಆಡುತ್ತ, ಕಲ್ಪನೆಯ ಚಾಪೆಯಲ್ಲಿ ಕೂತು ಯಾರಿಗೂ ಹೇಳದೆ ಹಾರಿ ಹೋಗುವುದಾ ನೀನೇ ತೀರ್ಮಾನಿಸು... ಅಂದವನ ದನಿಯಲ್ಲಿ ಎಂದಿನ ಉಚಾವಳಿಯೊಡನೆ, ಎಲ್ಲ ಮುಗಿದು ಹೋದ ಬೇಸರದ ಎಳೆಯೂ ಕಂಡಿತೆ? ಅಥವಾ ಇದ್ದಕ್ಕಿದ್ದಂಗೆ ಒದಗಿಬಂದ ಈ ಮ್ಯಾಜಿಕ್ ಕ್ಷಣಗಳನ್ನ ದಿನದಿನದ ಕಾಯುವಿಕೆಯ, ಸಂಗರಾಹಿತ್ಯದ ತೆಕ್ಕೆಯಿಂದ ಅನಾಮತ್ತಾಗಿ ಬಿಡಿಸಿ, ಸುಮ್ಮನೆ ಸಿಗುವ ಕೆಲವು ಗಳಿಗೆಗಳನ್ನ ಓಡೋಡುವ ದಿನದ ಜೋಳಿಗೆಯೊಳಗೆ ಯಾರೂ ನೋಡುವುದಕ್ಕೆ ಮುಂಚೆಯೇ ಜಪ್ಪಿಸಿಟ್ಟುಕೊಳ್ಳಬೇಕೆಂಬ ಸ್ವಾರ್ಥವೇ... ಗೊತ್ತಾಗಲಿಲ್ಲ ತನಗೆ. ಆದರೂ ಅವನು ಹೇಳಿದ್ದೇ ಇಷ್ಟವಾಯಿತು. ಯಾವಾಗಿನಂತೆ..&lt;br /&gt;ಗುಲಾಮ್ ಅಲಿಯೇ ಹಾಡಿದ್ದರಲ್ಲ.. ಹಮ್ ಸೇ ನ ಪೂಚೋ ಹಿಝ್ರ್ ಕೇ ಫಿಸ್ಸೇ.. ಅಪ್ ನೀ ಕಹೋ ಅಬ್ ತುಮ್ ಕೈಸೇ ಹೋ.. ಎಂಬ ಇಂಪು ಉಲಿಯಂತೆ..&lt;br /&gt;&lt;br /&gt;ಹೊರಗೆ ಗಾರ್ಡನ್ನಿನಲ್ಲಿ ಕುಳಿತುಕೊಳ್ಳೋಣ, ಅಲ್ಲಿ ಸ್ವಲ್ಪ ಸೊಳ್ಳೆಯಿರಬಹುದು ಹೇಗೂ ನಾವೂ ಮಾಯಾಚಾಪೆಯ ಮೇಲಿರುತ್ತೇವಲ್ಲ.. ಅಲುಗಾಡುತ್ತ ಕುಳಿತುಕೊಂಡರೆ ಕಚ್ಚಲಿಕ್ಕಿಲ್ಲ.. ಎಂದು ನಕ್ಕಳು. ಅವನು ಇಡೀ ಕೊಠಡಿ ಮಾರ್ದನಿಸುವಂತೆ ಗಹಗಹಿಸಿ ನಕ್ಕ. ಪುಟ್ಟ ಹುಡುಗನಿದ್ದಾಗ ಇರಿಸುಮುರಿಸು ಮಾಡುತ್ತಿದ್ದ, ದೊಡ್ಡವನಾದ ಮೇಲೆ ಕೇಳಲು ಇಷ್ಟವಾಗಿದ್ದ ಆ ನಗು - ಈಗ ಇಳೀಸಂಜೆಯಲ್ಲಿ ನಡುಗುವ ದನಿಯಲ್ಲಿ ಕೇಳಿ ಯಕ್ಷಗಾನದ ಕೋಡಂಗಿಯ ಮಾತಿನಂತೆ ತಮಾಷೆಯೆನಿಸಿತು. ಕೊಠಡಿಯಲ್ಲಿದ್ದ ಎಲ್ಲರೂ ಒಂದು ಕ್ಷಣ ತಮ್ಮನ್ನೇ ನೋಡಿ ಮತ್ತೆ ತಮ್ಮ ತಮ್ಮ ಬಾತಾಖಾನಿಯಲ್ಲಿ ತೊಡಗಿದರು.&lt;br /&gt;&lt;br /&gt;ಬಾ ಹೀಗೆ ಅಂತ ಅವನ ಕೈಹಿಡಿದು ಗಾರ್ಡನ್ನಿನ ಬಾಗಿಲು ದಾಟಿದವಳು ಅಲ್ಲಿ ರಾತ್ರಿರಾಣಿ ಹಚ್ಚಿದ್ದ ಗೋಡೆಗೆ ಹತ್ತಿರವಿದ್ದ ಬೆಂಚನ್ನಾರಿಸಿದೆ. ಅಲ್ಲೆ ಕೂತು ತುಂಬ ಹೊತ್ತಿನ ತನಕ ಗುಣುಗುಣಿಸಿದೆವು. ಓದಿದ ಹೊಸ ಪುಸ್ತಕ, ಬಹು ಚರ್ಚಿತ ಬ್ಲಾಗು, ಇನ್ನೂ ಇನ್ನೂ ಓದಬೇಕೆನಿಸುವ ಮಾಸ್ತಿ, ಪಂಚು ಹಾಗೇ ಉಳಿದಿರುವ ಅಡಿಗ, ನವುರಾದ ನರಸಿಂಹಸ್ವಾಮಿ,ಅನಿರೀಕ್ಷಿತ ತಿರುವುಗಳ ಜೋಗಿ, ಯಾವಾಗ ಓದಿದರೂ ಬೆಚ್ಚಗೆ ಆವರಿಸುವ ಜಯಂತ, ಯಾವತ್ತಿಗೂ ನೊವೆಲ್ ಆಗಿ ಫ್ರೆಶ್ ಆಗಿ ಯಾವಕಡೆಯಿಂದ ನೋಡಿದರೂ ತುಂಬ ಡಿಫರೆಂಟ್ ಆಗಿಯೇ ಉಳಿಯುವ ಸಿಕ್ಕಾಪಟ್ಟೆ ಇಷ್ಟವಾಗುವ ಶಾಂತಿನಾಥ ದೇಸಾಯರು.. ಎಲ್ಲ ಬಂದು ಹೋದರು. ಗುಲಾಮ್ ಅಲಿಯೂ, ಆಬಿದಾ ಪರ್ವೀನರೂ ಒಂದೊಂದು ಚೀಝ್ ಒಗೆದರೆ, ಎವರ್ ಗ್ರೀನ್ ಕಿಶೋರನೂ, ರಫಿಯೂ, ಲತೆಯೂ ಈಗಷ್ಟೇ ಅರಳಿದ ಹೂವಿನ ಸೊಗದಂತೆ ಇಂಪಾಗಿ ನೆನಪಾದರು.. ನಮ್ಮ ಶಾಲೆಯೂ, ಶಾಲೆಯ ದಾರಿಯೂ, ಸೈಕಲ್ ಸವಾರಿಯೂ, ಇಂಗ್ಲಿಷ್ ಪುಸ್ತಕಗಳ ಲೈಬ್ರರಿಯೂ, ಇಷ್ಟವಾದ, ಕಷ್ಟವಾದ ಮೇಶ್ಟ್ರುಗಳ ನೆನಪೂ, ಬೇಡವಾದ ಹಾಸ್ಟೆಲ್ ವಾಸದ ಪೀಯುಸಿಯೂ, ಮನೆಯೇ ಆಗಿಹೋದ ಇಂಜಿನಿಯರಿಂಗ್ ಹಾಸ್ಟಲ್ಲೂ, ದೂರವಾದ ದಾರಿಗಳೂ, ಹತ್ತಿಹೊರಟ ವಿಮಾನಗಳೂ, ಸಿಕ್ಕಿದ ತಂಗುದಾಣಗಳೂ ಎಲ್ಲ ಒಂದೊಂದೇ ಬಂದು ರೆಕ್ಕೆಯರಳಿಸಿದವು..&lt;br /&gt;&lt;br /&gt;ಹಾಗೇ ಭೇಟಿಯ ಸಮಯವೂ ಮುಗಿಯುತ್ತ ಬಂದಿತು. ಹೊರಗೆಲ್ಲ ದೀಪಗಳೂ ಹೊತ್ತಿಕೊಂಡಿದ್ದವು. ಒಳಗೆ ಕತ್ತಲು ಕತ್ತಲಾಗುತ್ತಿತ್ತು. ನೆನಪಿನ ದೀಪದ ಮಂದ ಬೆಳಕು ಬೆಚ್ಚಗೆ ಮೂಲೆಯಲ್ಲಿ.. ಬಯಲಿಗಿಟ್ಟ ಹಣತೆಯಂತಹ ಬದುಕನ್ನ ಕಾಲ ಎಷ್ಟು ಉಪಾಯವಾಗಿ ಕಾದು ಎತ್ತಿ ಮನಸ್ಸಿನೊಳಗಿಟ್ಟು ನೆನಪಿನ ಪ್ರಿಸರ್ವೆಂಟಲ್ಲಿ ಅದ್ದಿ ಜೋಪಾನ ಮಾಡುತ್ತದೆ.. ಮತ್ತು ಅದು ಹೇಗೆ ಒಳಗಿನ ಕತ್ತಲಿಗೆಲ್ಲ ಉತ್ತರವಾಗಿ ಈ ನೆನಪಿನ ಹಣತೆ ಮಿಣುಕು ಬೆಳಕಿಂದಲೇ ಸಂತೈಸುತ್ತದೆ ಅಲ್ಲವೇ...&lt;br /&gt;ಮನದ ಮಾತು ಬಾಯಲ್ಲೂ ಬಂತೇನೋ ಚೈ ನಕ್ಕ.. ಹೌದಲ್ಲ ವೈ.. ನೀನು ಈಗಲೂ ವೈದೇಹಿಯವರ ಹಾಗೆಯೇ.. ಕಣ್ಣು ಮೇಲಕ್ಕೆ ಹೋಗುವ ಕಾವ್ಯದ ಹಾಗಿನ ಮಾತೇ ಆಡುತ್ತಿರುತ್ತೀಯ.. ಎಂದವನೇ ಮತ್ತೆ ಕೋಡಂಗಿಯ ನಗು ನಕ್ಕ..&lt;br /&gt;ನಾಳೆ ಬರುತ್ತೀಯಾ ಅಂತ ಕೇಳಬೇಕೆಂದುಕೊಂಡವಳು ಸುಮ್ಮನಾಗಿಬಿಟ್ಟೆ.. ಬಂದರೆ ಬರಲಿ ಎಂಬ ನಿರೀಕ್ಷೆಯ ಸುಖವನ್ನ ಇವತ್ತೇ ಕೊಲ್ಲಲಿ ಯಾಕೆ ಎಂಬಂತೆ..&lt;br /&gt;ಹೀಗೆನಾದ್ರೂ ಕೇಳಿದರೆ ಹಾಗೆ ಹೇಳಬೇಕಲ್ಲಾ ಎಂಬ ಯೋಚನೆಯ ನಿರಿಗೆ ಮೂಡಿದಂತಿದ್ದ ಅವನೂ ಹೇಳಲಿಲ್ಲ, ನಾಳೆ ಹೋದರಾಗಿತ್ತು ಎಂಬ ಮನಸಿನ ಜೀಕು ಉಲ್ಲಸಕ್ಕೆ ಯಾಕೆ ಇವತ್ತೆ ಕಡಿವಾಣ ಹಾಕಲಿ ಅಂತ ಇರಬಹುದು..&lt;br /&gt;&lt;br /&gt;ರಿಸೆಪ್ಷನ್ನಿನಲ್ಲಿ ಡ್ಯಾಫೋಡಿಲ್ ನಗುತ್ತ ಕುಳಿತಿದ್ದಳು, ಅವಳನ್ನು ನೋಡಿದ ಕೂಡಲೆ ನೆನಪಾಯಿತು. ನಿರಿಗೆಯಲ್ಲಿ ಸಿಕ್ಕಿಸಿ ಇಟ್ಟಿದ್ದ ಪೇಪರ್ ಕವರಿನಲ್ಲಿ ಸುತ್ತಿದ ಹಸಿರುಬಣ್ಣದ ಹೆಣಿಗೆಯ ಮಫ್ಲರ್ ತೆಗೆದು ಅವನ ಕೈಗಿಟ್ಟೆ. ಮಾಗಿಯಲ್ಲಿ ಚೈತ್ರನಿಗೂ ಚಳಿಯಾಗತ್ತೆ ಆಗ ಬೇಕಾಗುತ್ತೆ ನೋಡು ನಾನೆ ಹೆಣೆದಿದ್ದು ಅಂತ.. ಮತ್ತೆ ಕೋಡಂಗಿಯ ನಗು ನಗಲು ಹೊರಟವನ ಸ್ವರವೇಕೋ ಬಂದಾಗಿ, ಕಣ್ಣಲ್ಲಿ ತೆಳ್ಳಗೆ ನೀರಿನ ಪಸೆಯಂತಹದೇನೋ ಮೂಡತೊಡಗಿ ಎರಡೂ ಕೈಗಳ ಮಧ್ಯೆ ಆ ಮಫ್ಲರನ್ನ ಇಟ್ಟುಕೊಂಡು ನೀವುತ್ತಾ ಗೋಡೆಯ ಕಡೆಗೆ ಮುಖಮಾಡಿದ. ತುಟಿಕಚ್ಚಿ ಹಿಡಿಯುತ್ತ ಬಂದ ನೀರನ್ನ ಬಂದ ಕಡೆಗೇ ಹೋಗುವಂತೆ ಮಾಡಲು ಮೈಂಡ್ ಕಂಟ್ರೋಲ್ ಮಾಡುವ ಯೋಗಿಯಂತೆ ಕಾಣಿಸಿದವನ ಹೆಗಲು ಬಿಗಿದೆ ತಾನು... ಇರಲಿ ಬಿಡೋ ಚೈ, ಕಣ್ಣೀರು ಬರುವುದು ಕೆಡವಲಿಕ್ಕೆ.. ಗೆಳೆಯರಲ್ಲವೆ ನಾವು ಅಡಗಿಸಿಡುವುದೇಕೆ.. ಅನ್ನುತ್ತಾ ನಗು ಬಂತು ತನಗೂ. ನಗುವಿನಿಂದ ಮುಖದ ನೆರಿಗೆಗಳು ಒತ್ತಿದ ಕೂಡಲೇ ತನ್ನ ಕಣ್ಣಲ್ಲಿ ಅಲ್ಲಿಯವರೆಗೂ ಅಡಗಿದ್ದು ಕೆನ್ನೆಗಿಳಿಯಿತು. ಬನ್ನಿ-ಮೊಲದ ಮುಖದ ನಗು ನಗುತ್ತಾ ಬರಲೇನೆ ವೈ ಮತ್ತೆ ಸಿಗೋಣ ಅನ್ನುತ್ತಾ ಹೊರಟ.. ಕಾಂಪೌಂಡಿನಾಚೆ ನಿಲ್ಲಿಸಿದ್ದ ಟ್ಯಾಕ್ಸಿಯ ಇಂಜಿನ್ನಿಗೆ ಜೀವ ಬಂತು.. ಇಲ್ಲಿ ಸಂದರ್ಶಕರ ಸಮಯ ಮುಗಿದು ಎಲ್ಲರ ಜೀವಗಳೂ ಮತ್ತೆ ಮುದುಡತೊಡಗಿದವು.&lt;br /&gt;&lt;br /&gt;ಅವತ್ತು ರಾತ್ರೆ ಯಾಕೋ ಊಟ ಸೇರಲಿಲ್ಲ. ಹಾಲನ್ನಷ್ಟೇ ಕುಡಿದು ಮಲಗಿದವಳು ಕಿಟಕಿಯ ತೆರೆ ಸರಿಸಿ ಚುಕ್ಕಿಗಳಿಂದ ತುಂಬಿದ ಆಕಾಶ ನೋಡತೊಡಗಿದೆ.&lt;br /&gt;&lt;br /&gt;ಎಂದೂ ಹೆಚ್ಚಿಗೆ ಮಾತನಾಡಿಸದ ಶಾಂತಮ್ಮ, ಯಾರವರು ನಿಮ್ಮ ಸ್ನೇಹಿತರಾ ಬಂದಿದ್ದವರು ಅಂದ ಕೂಡಲೆ ನಗುಬಂತು. ಡ್ಯಾಫೋಡಿಲ್ಲೇ ಬೇರೆ ಶಾಂತಮ್ಮನೇ ಬೇರೆ.. ಅವಳು ಈ ಕ್ಷಣದಲ್ಲಿ ಮುಳುಗಿ ತೇಲುವ ಹಾರು ಹಕ್ಕಿ, ಶಾಂತಮ್ಮನೋ ಪ್ರತೀ ಸಾಲಿಗೂ, ಹೆಜ್ಜೆಗೂ ಭಾಷ್ಯವನ್ನೇ ಗ್ರಹಿಸುವ ಗಜಗಾಮಿನೀ...&lt;br /&gt;ನನ್ನ ನಗುವಷ್ಟೇ ನೋಡಿ ಅವರಿಗೆ ಸಿಟ್ಟು ಬರುವ ಮೊದಲೇ ಹೇಳಿದೆ. ಚೈತ್ರನೆಂಬವನು ನನ್ನ ಸೋದರತ್ತೆಯ ಮಗನೂ, ಅಣ್ಣನೂ, ಗೆಳೆಯನೂ, ನನ್ನೆಲ್ಲ ಬಾಲ್ಯದ ಪಾಪಕಾರ್ಯಗಳಲ್ಲಿ ಸಹಭಾಗಿಯೂ, ಬೆಳೆವ ಕಾಲದ ಲೈಬ್ರರಿಯಾಗಿಯೂ,ನನ್ನ ಮದುವೆ ಮಂಟಪದ ಉಸ್ತುವಾರಿದಾರನಾಗಿಯೂ, ಈಗ ತನ್ನಂತೆಯೇ ಸಂಧ್ಯಾರಾಗದ ಹಾಗೇ ಇರುವ ಯೂರೋಪಿಯನ್ ಮನೆಯೊಂದರಲ್ಲಿ ನಿವಾಸಿಯಾಗಿಯೂ, ಸಮೃದ್ಧ ಕುಟುಂಬದ ಹಿರಿಯ ತಲೆಯಾಗಿಯೂ ಉಳಿದಿರುವ ವಿಷಯ..&lt;br /&gt;&lt;br /&gt;ಓಹ್ ಹಾಗೇನೂ ಎಂದವರ ಮಾತಿನಲ್ಲಿ ಪಿಶ್...ಇಷ್ಟೇಯಾ ಎಂಬ ಉಪೇಕ್ಷೆಯಿತ್ತು. ಅವರಿಗೆ ಜಾಸ್ತಿ ಸಂದರ್ಶಕರಿಲ್ಲದ್ದರಿಂದಲೂ ಹೊತ್ತು ಮುಳುಗಿದ ಮೇಲೆ ಪವಿತ್ರ ಗ್ರಂಥಗಳನ್ನೆಲ್ಲ ಜೋಪಾನವಾಗಿ ಕಟ್ಟಿಡುತ್ತಿದ್ದುದರಿಂದಲೂ ಅವರ ಸಂಜೆಗಳ ತುಂಬ ಟೀವಿ ಧಾರಾವಾಹಿಗಳಿದ್ದವು. ಇದು ಯಾವ ಧಾರಾವಾಹಿಯ ಕತೆಯ ಲೆಕ್ಕಕ್ಕೂ ಬರದೆ ಇದ್ದುದರಿಂದ ಅವರ ಉತ್ಸುಕತೆ ಕಡಿಮೆಯಾಗಿ ಮಲಗುವ ಮುಂಚಿನ ಶ್ಲೋಕಾಚರಣೆ ಶುರುಮಾಡಿಕೊಂಡರು..&lt;br /&gt;&lt;br /&gt;ತಾನು ಮತ್ತೆ ಕಿಟಕಿಯಾಚೆಗೆ ಕಣ್ಣು ನೆಟ್ಟಳು. ಶೈಲ ಚಿಕ್ಕಿ ಪುಟ್ಟ ವೈದೇಹಿಯ ಉದ್ದ ಜಡೆ ಹೆಣೆಯುತ್ತಾ ಕೇಳುತ್ತಿದ್ದಾಳೆ.. ಹೌದಾ ಅಮ್ಮಕ್ಕಾ ನಿನ್ನ ಮದುವೆಯಾಗುವುದ್ಯಾರು...? ಹಿಂದೆಮುಂದೆ ನೋಡದೆ ವೈದೇಹಿಯ ಉತ್ತರ ಬರುತ್ತದೆ - ಇನ್ಯಾರು ಅನ್ನತ್ತೆಯ ಮಗ ಚೈತ್ರಣ್ಣಯ್ಯನೇ ಅಲ್ದಾ.. ಎಲ್ಲರೂ ಖಿಲ್ಲನೆ ನಗುತ್ತಾರೆ.. ಆದರೆ ಅವನು ಚೂರೂಬೆಳ್ಳಗೆ ಇಲ್ಲವಲ್ಲಾ, ನಮ್ಮ ವೈದು ನೋಡಿದರೆ ಅಕೋ ಅಂಗಳದ ಪಾರಿಜಾತದ ಹಾಗಿದ್ದಾಳೆ... - ಅಯ್ಯೋ ಬಿಡು ಚಿಕ್ಕಿ, ಅವನೇನು ಅಂತ ಕಪ್ಪಿಲ್ಲ, ಚೂರೇ ಚೂರು ಪಾಂಡ್ಸ್ ಪವುಡರು ಹಚ್ಚಿದರೆ ಸಾಕು ಬೆಳ್ಳಗೆ ಕಾಣುತ್ತಾನೆ.. ವೈದೇಹಿಯ ಮಾತಿಗೆ ಎಲ್ಲರೂ ಬಿದ್ದು ಬಿದ್ದು ನಗುತ್ತಿದ್ದಾರೆ.. ಅನ್ನತ್ತೆಗೆ ನಕ್ಕೂ ನಕ್ಕೂ ಕಣ್ಣಲ್ಲಿ ನೀರೇ ಬಂದಿದೆ. ವೈ ಬೇಗ ಬಂದ್ರೆ, ಬೆಟ್ಟಕ್ಕೆ ಕರ್ಕಂಡು ಹೋಪುದು, ಇಲ್ದೆ ಇದ್ರೆ, ನೀ ಇಲ್ಲೆ ಅಡಿಗೆ ಆಟ ಆಡಿಕೊಂಡಿರು ನಾವೆಲ್ಲ ಹೋಗುತ್ತೇವೆ ಹೆದರಿಸುವ ಹಾಗೆ ಬಾಗಿಲಲ್ಲಿ ನಿಂತ ಚೈತ್ರನ ಮಾತಿಗೆ ಪೂರ್ತಿ ಹೆಣೆಯದ ಜಡೆಯಲ್ಲೇ ಎದ್ದು ಓಡಿದಳು ಅವಳು.. ಪಾಂಡ್ಸ್ ಪೌಡರು ಬ್ಯಾಡ್ದನೇ ಶೈಲಚಿಕ್ಕಿಯ ಮಾತು ಕೇಳುತ್ತಲ್ಲೂ ಹೆಚ್ಚು ಕಮ್ಮಿ ಚೈತ್ರನನ್ನು ಅಲ್ಲಿಂದ ದಬ್ಬಿಕೊಂಡೇ ಹೊರಟಳು... ಅಗೋ ಅಲ್ಲಿ ಧ್ರುವ ನಕ್ಷತ್ರ ಮತ್ತು ಶುಕ್ರದ ಮಧ್ಯದ ಆಕಾಶದಂಗಳದಲ್ಲಿ ಮಿನುಗುವ ಎರಡು ಪುಟಾಣಿ ಚುಕ್ಕಿಗಳು ಅವರಿಬ್ಬರೇ ಅಲ್ಲವೇ... ವೈ..ಮತ್ತು ಚೈ.. ಅರೇ ಅಲ್ಲೆಲ್ಲ ಹರಡಿಕೊಂಡ ಉಳಿದ ಚುಕ್ಕಿಗಳ್ಯಾರು... ಚಿಕ್ಕಿ, ಅನ್ನತ್ತೆ, ಅಮ್ಮ, ಅಮ್ಮಮ್ಮ..ಎಲ್ಲರೂ ಇಲ್ಲೆ ಇದ್ದಾರೆ ಅನ್ನಿಸಿ ಹಾಯಾಗಿ ಕಣ್ಣು ಮುಚ್ಚತೊಡಗಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-593162406651411431?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/593162406651411431/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=593162406651411431' title='9 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/593162406651411431'/><link rel='self' type='application/atom+xml' href='http://www.blogger.com/feeds/4515791944382207090/posts/default/593162406651411431'/><link rel='alternate' type='text/html' href='http://nenapu-nevarike.blogspot.com/2008/09/blog-post_26.html' title='ಚೈ..ವೈ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>9</thr:total></entry><entry><id>tag:blogger.com,1999:blog-4515791944382207090.post-921876829233463277</id><published>2008-09-23T02:13:00.000-07:00</published><updated>2008-09-23T02:34:44.549-07:00</updated><category scheme='http://www.blogger.com/atom/ns#' term='ಖುಶೀ..'/><title type='text'>ಹೊಸಜೀವ ಹೊಸಭಾವ ಹೊಸತೀರ..</title><content type='html'>&lt;span style="color:#006600;"&gt;ಭಾದ್ರಪದ ಮುಗಿಯುವ ಸಮಯ&lt;/span&gt;&lt;br /&gt;&lt;span style="color:#006600;"&gt;ಚವತಿ ಚಂದಿರನ ಅಪವಾದ ಅಂಟಿಸುವ&lt;/span&gt;&lt;br /&gt;&lt;span style="color:#006600;"&gt;ಚೆಲ್ಮೊಗಕ್ಕೆ&lt;/span&gt;&lt;br /&gt;&lt;span style="color:#006600;"&gt;ಕೃಷ್ಣಪಕ್ಷದ ಸವೆತ..&lt;/span&gt;&lt;br /&gt;&lt;span style="color:#006600;"&gt;ಅಲ್ಲಿ ಪಡುವಣದ ತೀರದಲ್ಲಿ &lt;/span&gt;&lt;br /&gt;&lt;span style="color:#006600;"&gt;ಒಬ್ಬರಿನ್ನೊಬ್ಬರಲ್ಲಿ ಲೀನದಂಪತಿಗಳ ಮಡಿಲಲ್ಲಿ&lt;/span&gt;&lt;br /&gt;&lt;span style="color:#006600;"&gt;ಮೊಗ್ಗು ಹೂಬಿರಿದಿದೆ;&lt;/span&gt;&lt;br /&gt;&lt;span style="color:#006600;"&gt;ಮನಸು ಹಗುರಾಗಿ,&lt;/span&gt;&lt;br /&gt;&lt;span style="color:#006600;"&gt;ಚಳಿ ಕೂರುತ್ತಿರುವ ಸಂಜೆಗಳಲ್ಲಿ&lt;/span&gt;&lt;br /&gt;&lt;span style="color:#006600;"&gt;ಮಳೆಮೋಡದ ನೆನಪು ದಟ್ಟವಾಗಿ-&lt;/span&gt;&lt;br /&gt;&lt;span style="color:#006600;"&gt;ಪುಟ್ಟವಳು, ಚಿಕ್ಕವಳು &lt;/span&gt;&lt;br /&gt;&lt;span style="color:#006600;"&gt;ಇವತ್ತಷ್ಟೇ ಹುಟ್ಟಿದವಳು&lt;/span&gt;&lt;br /&gt;&lt;span style="color:#006600;"&gt;ಅಮ್ಮನ ಮಡಿಲು ತುಂಬಿ,&lt;/span&gt;&lt;br /&gt;&lt;span style="color:#006600;"&gt;ಅಪ್ಪನ ಮನಸು ತುಂಬಿ,&lt;/span&gt;&lt;br /&gt;&lt;span style="color:#006600;"&gt;ಸುತ್ತೆಲ್ಲರ ಬದುಕಲ್ಲಿ ಆಹ್ಲಾದ ತುಂಬುವವಳು&lt;/span&gt;&lt;br /&gt;&lt;span style="color:#006600;"&gt;ಚೆಲುವಾಗಿ,ಒಳಿತಾಗಿ ಬೆಳೆಯಲಿ&lt;/span&gt;&lt;br /&gt;&lt;span style="color:#006600;"&gt;ಎಂದು&lt;/span&gt;&lt;br /&gt;&lt;span style="color:#006600;"&gt;ನವನವೋನ್ಮೇಷ ಶಾಲಿನೀ&lt;/span&gt;&lt;br /&gt;&lt;span style="color:#006600;"&gt;ಪ್ರಕೃತಿಯ ಚರಣಗಳಲ್ಲಿ&lt;/span&gt;&lt;br /&gt;&lt;span style="color:#006600;"&gt;ಒಂದು ತುಪ್ಪದ ದೀಪದ ವಿನಂತಿ..&lt;/span&gt;&lt;br /&gt;&lt;span style="color:#006600;"&gt;ಇಲ್ಲಿ ಬೆಳಗುವ ಸೊಡರಿನ&lt;br /&gt;ಪ್ರತಿಫಲನಕ್ಕೆ &lt;/span&gt;&lt;br /&gt;&lt;span style="color:#006600;"&gt;ಇಂದು ಸಂಜೆಯ ಪಡುವಣ ತೀರದ ಕೆನ್ನೆ ಇನ್ನಷ್ಟು &lt;span style="color:#ff0000;"&gt;ಕೆಂಪಾ&lt;/span&gt;ಗಲಿದೆ.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-921876829233463277?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/921876829233463277/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=921876829233463277' title='3 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/921876829233463277'/><link rel='self' type='application/atom+xml' href='http://www.blogger.com/feeds/4515791944382207090/posts/default/921876829233463277'/><link rel='alternate' type='text/html' href='http://nenapu-nevarike.blogspot.com/2008/09/blog-post.html' title='ಹೊಸಜೀವ ಹೊಸಭಾವ ಹೊಸತೀರ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-4515791944382207090.post-7387504965566219112</id><published>2008-08-29T05:11:00.000-07:00</published><updated>2008-08-29T05:42:13.263-07:00</updated><category scheme='http://www.blogger.com/atom/ns#' term='ಓದು'/><title type='text'>ಗೊಂದಲಪುರದಿಂದ ಹೊರಗೆ ಹೋಗುವ ದಾರಿ ಯಾವುದು..?</title><content type='html'>&lt;p&gt;ಪ್ರಕೃತಿಯನ್ನ ಹುರಿದು ಮುಕ್ಕುತ್ತಿರುವ ಯೋಜನೆಗಳ ಬಗ್ಗೆ ಗೆಳೆಯ ರಾಜೇಶ್ ನಾಯಕ್ ಬರೆದಿದ್ದು ಓದುವಾಗ ಸಂಕಟವಾಗುತ್ತದೆ. ಅದೇ ರೀತಿಯ ದಿನದಿನವೂ ಪ್ರಗತಿಯ ಬಣ್ಣ ಮೆತ್ತಿಕೊಂಡಿರುವ ಹಲವಾರು ವಿಷಯಗಳು ಮನಸ್ಸಿಗೆ ಬರೆ ಇಡುತ್ತವೆ. ಪರಿಸರ ಪ್ರೀತಿಯ ಲೇಖಕರು, ಪರಿಸರ ವಿಜ್ಞಾನಿಗಳು ಬರೆದಿರುವ ಪುಸ್ತಕಗಳನ್ನ ಓದಿ, ಅವರು ನಡೆಸುತ್ತಿರುವ ಸಂರಕ್ಷಣಾ ಕೆಲಸಗಳ ಬಗ್ಗೆ ತಿಳಿದು ಸ್ವಲ್ಪ ಸಮಾಧಾನವೆನ್ನಿಸುತ್ತದೆ. ಆದರೆ ನಿಜವಾಗಲೂ ನನ್ನ ನಡವಳಿಕೆ ಎಷ್ಟು ಸರಿ? ಇಷ್ಟೆಲ್ಲ ಯೋಚಿಸುವ, ಕುಟ್ಟುವ ನಾನು ಏನು ಮಾಡಿದ್ದೇನೆ? ನಲ್ಲಿಯಿಂದ ನೀರು ಸೋರದಂತೆ ನಿಲ್ಲಿಸುವಷ್ಟಕ್ಕೆ, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯದೆ ಇರುವಷ್ಟಕ್ಕೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಷ್ಟಕ್ಕೆ ,  ವಿದ್ಯುತೆ ಉಪಕರಣಗಳ ಅತಿಬಳಕೆ ಮಾಡದೆ ಇರುವಷ್ಟಕ್ಕೆ ನನ್ನ ಕಾಳಜಿ, ಬದ್ಧತೆ ಮುಗಿಯಿತೇ? ನನಗೆ ದಿನ ನಡೆಸಲು ಬೇಕಾಗುವ ಕಂಪ್ಯೂಟರ್/ಲ್ಯಾಪ್ ಟಾಪ್ ಅತಿಬಳಕೆ ಮಾಡದೆ ಇರುವಷ್ಟು,  ತಿಳುವಳಿಕೆ ಇದೆಯೇ ಎಂದರೆ ಇಲ್ಲ ಎಂತಲೇ ಕಾಣುತ್ತದೆ. &lt;/p&gt;&lt;p&gt;ಈ ಬಗ್ಗೆ ಇತ್ತೀಚೆಗೆ ಗೆಳೆಯನು ಕಳುಹಿಸಿದ ಬ್ಲಾಗ್ ಬರಹವೊಂದನ್ನ ಓದಿದ ಮೇಲೆ ತಲೆ ಸ್ವಲ್ಪ ಕೆಟ್ಟ ಎಲ್ಲ ಲಕ್ಷಣಗಳೂ ಕಾಣಿಸಿಕೊಂಡಿವೆ ನನಗೆ.  ಸರಿ ತಪ್ಪುಗಳ, ಸಾಮಾಜಿಕ ಬದ್ಧತೆಗಳ, ಪರಿಸರ ಪ್ರೀತಿಯ, ಬಗ್ಗೆ ಗೊಂದಲ ಶುರುವಾಗಿದೆ. ಎಲ್ಲ ಸಮಸ್ಯೆಗಳನ್ನೂ ಮಾತಾಡೀ ಮಾತಾಡೀ, ಅನಲೈಸ್ ಮಾಡೀ ಮಾಡೀ ನಮ್ಮ ಮನದ ಭಾರವನ್ನ ಕಳೆದುಕೊಳ್ತಿದೀವೀಂತ ಅನುಮಾನ ಶುರುವಾಗಿದೆ. ಈ ಗೊಂದಲಪುರದಿಂದ ಹೊರಗೆ ಹೋಗುವ ದಾರಿ ಯಾವುದು ಅಂತ ಯೋಚಿಸುತ್ತ ಕೂತಾಗ ಬರೆದಿದ್ದನ್ನ, ಕೆಂಡಸಂಪಿಗೆಯಲ್ಲಿ ಲಾವಂಚ ಅಂಕಣದಲ್ಲಿ ಪ್ರಕಟಿಸಿದ್ದಾರೆ. &lt;a href="http://www.kendasampige.com/article.php?id=1292"&gt;http://www.kendasampige.com/article.php?id=1292&lt;/a&gt; &lt;/p&gt;&lt;p&gt;ನಿಮಗೆ ಸಮಯವಿದ್ದಾಗ ಓದಿ ನೋಡಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ಲೇಖನದ ಒಪ್ಪಕ್ಕಿಂತ ವಿಷಯದ ತೀವ್ರತೆಯ ಬಗ್ಗೆ ತಿಳಿಸಿದರೆ ನನ್ನ ಗೊಂದಲವಿಷ್ಟು ಕಡಿಮೆಯಾಗಬಹುದು. ನಿಮಗೂ ತಲೆ ಕೆಡಿಸಿದೆ ಎಂದು ಬಯ್ದುಕೊಳ್ಳಬೇಡಿ.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-7387504965566219112?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/7387504965566219112/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=7387504965566219112' title='10 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/7387504965566219112'/><link rel='self' type='application/atom+xml' href='http://www.blogger.com/feeds/4515791944382207090/posts/default/7387504965566219112'/><link rel='alternate' type='text/html' href='http://nenapu-nevarike.blogspot.com/2008/08/blog-post_29.html' title='ಗೊಂದಲಪುರದಿಂದ ಹೊರಗೆ ಹೋಗುವ ದಾರಿ ಯಾವುದು..?'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>10</thr:total></entry><entry><id>tag:blogger.com,1999:blog-4515791944382207090.post-5505832855945744530</id><published>2008-08-26T10:18:00.000-07:00</published><updated>2008-08-26T10:23:26.624-07:00</updated><category scheme='http://www.blogger.com/atom/ns#' term='ಓದು'/><title type='text'>ಒಂದು ತುಂಡು ಗೋಡೆ..</title><content type='html'>ಕೆಲವು ಬರಹಗಳೇ ಹಾಗೆ ಓದಿದ ಕೂಡಲೇ ನಮ್ಮೊಳಗೆ ಮೆತ್ತಗೆ ಎಲ್ಲೋ ಅಡಗಿದ್ದ ಭಾವಗಳನ್ನ ಉದ್ದೀಪಿಸಿ ಹೊರಗೆಲ್ಲ ಹರಿದಾಡುವಂತೆ ಮಾಡುತ್ತವೆ. ಹಲವು ಬಾರಿ ಈ ಭಾವಗಳು ಆರ್ದ್ರ ಪ್ರೀತಿ, ಸವಿ ಬಾಲ್ಯ, ಬೇಸರದ ಕ್ಷಣಗಳು, ತಲ್ಲಣ ತವಕಗಳನ್ನ, ಕರುಣೆಯನ್ನ ಉದ್ದೇಪಿಸಿದರೆ, ಕೆಲವು ಉದ್ದೇಶಪೂರ್ವಕ ಸಿಟ್ಟು ಹಗೆಯನ್ನ ಉದ್ದೇಪಿಸುತ್ತವೆ.&lt;br /&gt;ಸಾಮಾನ್ಯವಾಗಿ ಕೋಮುಭಾವನೆಗಳು ಪುಟ್ಟಕಿಡಿಗೆ ಕಾಯುವ ಗರಿಗರಿ ಸಿಡಿಮದ್ದಿನ ಹಾಗೆ. ಅಕ್ಷರಲೋಕದ ಹಲವು ಮಶಿ ಹಿಡಿದ ಚಿತ್ರಗಳ ಮೂಲಬಣ್ಣವೆ ಈ ತರಹದ ಪ್ರೇರೇಪಕ ಬರಹಗಳು. ಎಷ್ಟೇ ಆಕರ್ಷಕ ಶೈಲಿಯಲ್ಲಿದ್ದರೂ, ಇವುಗಳನ್ನ ಒಂಥರಾ ಅನುಮಾನದಿಂದಲೆ ಓದುವುದು ನನ್ನ ಅಭ್ಯಾಸ. ನನ್ನ ಜೀವನದ ಸೀಮಿತ ಅವಧಿಯಲ್ಲಿ, ಪರಿಧಿಯಲ್ಲಿ ಕಂಡ ಪ್ರಭಾವಿಸಿದ ಮಾನವೀಯತೆಯ ಸೆಲೆಗಳು ಎಲ್ಲ ಜಾತಿ ಧರ್ಮ ನೆಲೆಗಳನ್ನು ಮೀರಿ ನಿಂತ ವ್ಯಕ್ತಿತ್ವಗಳಾಗಿದ್ದರಿಂದ, ನನ್ನ ಯೋಚನೆಗಳಿಗೆ ಈ ಕೋಮು ಫ್ರ್‍ಏಮು ಬೀಳದ ಸುರಕ್ಷಿತ ಜಾಗದಲ್ಲಿದ್ದೇನೆಂಬ ಭಾವನೆ ನನಗೆ.&lt;br /&gt;ಹೀಗೆಯೆ ಕೆಲದಿನಗಳ ಹಿಂದೆ ತಮ್ಮನು ಒಂದು ಪುಸ್ತಕ ಓದಿ ಸಿಕ್ಕಾಪಟ್ಟೆ ಚೆನಾಗಿದೆ ಓದು ಅಂತ ಒಂದು ಪುಸ್ತಕ ತಂದುಕೊಟ್ಟ. ಹೆಸರು "ಒಂದು ತುಂಡು ಗೋಡೆ" ಬರೆದವರು ಶ್ರೀ ಬೊಳುವಾರು ಮಹಮ್ಮದ್ ಕುಂಇ ಯವರು.&lt;br /&gt;ಊಟ ಮಾಡುವಾಗ ಒಂದು ಕತೆ ಓದುವಾ ಅಂತ ಶುರು ಮಾಡಿದರೆ, ಸಂಕಲನದಲ್ಲಿದ್ದ ಐದೂ ಕತೆಗಳು ಒಳಗಿಳಿದವು. ಬಹಳ ಒಳ್ಳೆಯ ಉದ್ರೇಕರಹಿತ ನಿರೂಪಣೆ, ಮನಸ್ಸಿಗೆ ನಾಟುವ ಚಿತ್ರಣ, ಬರಹದಲ್ಲಿ ಎದ್ದು ಕಾಣುವ ಪ್ರಾಮಾಣಿಕತೆ, ಮಿತವಾದ ಸೂಚ್ಯವಾದ, ಅಂತರ್ಗತವಾದ ಸಹಿಷ್ಣುತೆ ಎಲ್ಲವೂ ತುಂಬ ಚೆನಾಗಿದೆ. ನಾವೆಲ್ಲ ಓದಲೇಬೇಕೆನ್ನಿಸಿದ ಪುಸ್ತಕ. ದಯವಿಟ್ಟು ಕೊಂಡು, ಅಥವಾ ಲೈಬ್ರರಿಯಲ್ಲಿ ತಗೊಂಡು ಓದಿ. ಇವು ಈಗಾಗಲೆ ಸುಧಾ, ಪ್ರಜಾವಾಣಿ ವಿಶೇಷಾಂಕಗಳಲ್ಲಿ ಪ್ರಕಟವಾದವೂ ಕೂಡ.&lt;br /&gt;&lt;ol&gt;&lt;li&gt;ಒಂದು ತುಂಡು ಗೋಡೆ,&lt;/li&gt;&lt;li&gt;ಕೇಸರಿ ಬಿಳಿ ಹಸುರು ಮೂರು ಬಣ್ಣ ನಡುವೆ ಚಕ್ರವು,&lt;/li&gt;&lt;li&gt;ಮೀನು ಮಾರುವವನು,&lt;/li&gt;&lt;li&gt;ಓದು,&lt;/li&gt;&lt;li&gt;ಸ್ವಾತಂತ್ರದ ಓಟ&lt;/li&gt;&lt;/ol&gt;&lt;p&gt;ಎಲ್ಲ ಕತೆಗಳೂ ವಿಶಿಷ್ಟ ಅನುಭವಗಳನ್ನ ಕಟ್ಟಿಕೊಡುತ್ತವೆ.&lt;br /&gt;ನನ್ನ ಕೈಯಾರೆ ಮನೆ ಸುಟ್ಟು&lt;br /&gt;ಬೂದಿ ಹೊತ್ತು ಹೊರಟಿರುವೆ,&lt;br /&gt;ಸುಡಬಯಸುವಿರಾದರೆ ನಿಮ್ಮ&lt;br /&gt;ಮನೆ,&lt;br /&gt;ನನ್ನ ಜೊತೆಯಲ್ಲಿ ಬರಬಹುದು..&lt;br /&gt;ಎಂಬ ಕಬೀರನ ದೋಹೆಯ ಸಾಲುಗಳಿಂದ ಆರಂಭವಾಗುವ ಸಂಕಲನ ಮನಸ್ಸಿನಲ್ಲಿ ಬಲವಾದ ಛಾಪೊತ್ತುತ್ತದೆ.&lt;br /&gt;&lt;br /&gt;ಮಕ್ಕಳ ಸಾಹಿತ್ಯಕ್ಕೆ, ಆ ಮೂಲಕ ದೊಡ್ಡವರ ಅಭಿವ್ಯಕ್ತಿಗೆ ಇವರು ನೀಡಿದ ಕೊಡುಗೆಯೂ ಅಪಾರ. ತಟ್ಟು ಚಪ್ಪಳೆ ಪುಟ್ಟ ಮಗು ಇವರದೇ ಕೃತಿ. ಜೆಹಾದ್ ಅಂತೊಂದು ತುಂಬ ಎಂದರೆ ತುಂಬ ಇಷ್ಟವಾಗುವ ಕಾದಂಬರಿಯೂ ಇವರದ್ದೆ. ಅಂಕ, ಆಕಾಶಕ್ಕೆ ನೀಲಿ ಪರದೆ, ದೇವರುಗಳ ರಾಜ್ಯದಲ್ಲಿ, ಅತ್ತ ಇತ್ತ ಸುತ್ತ ಮುತ್ತ ಇವರ ಇತರ ಕಥಾ ಸಂಕಲನಗಳು.&lt;br /&gt;&lt;br /&gt;ಒಂದು ತುಂಡು ಗೋಡೆಯ ಸಂಕಲನದ ಕತೆಗಳ ಬಗೆಗೆ ಕೆಲವು ಅನಿಸಿಕೆಗಳು..&lt;br /&gt;ರೊಟ್ಟಿ ಪಾತುಮ್ಮ, ಅವಳ ದಿನಗೂಲಿಯ ಸಂಗ್ರಹವಾದ ಹಣ, ಮನೆ ಕಟ್ಟುವ ಆಸೆಯಷ್ಟೆ ನಿಖರವಾಗಿ ಶ್ರೀನಿವಾಸಶೆಟ್ಟರ ಬಡ್ಡಿ ವ್ಯಾಪಾರ, ಅದರಲ್ಲಿಯೂ ತೋರುವ ಪ್ರಾಮಾಣಿಕತೆ, ಏನೋ ಸಾಧಿಸಲು ಹೊರಟು ಮಾಡಬಾರದ್ದನ್ನು ಮಾಡಿದ ಹಳಹಳಿಯಲ್ಲಿ ಕೊರಗುವ ಮನುಷ್ಯಸಹಜ ನಿಸ್ಪ್ರಹತೆ &lt;strong&gt;ಒಂದು ತುಂಡು ಗೋಡೆ&lt;/strong&gt; ಯಲ್ಲಿ ನನಗೆ ತುಂಬ ಇಷ್ಟವಾದ ಅಂಶಗಳು.&lt;br /&gt;&lt;strong&gt;ಕೇಸರಿ ಬಿಳಿ ಹಸುರು..&lt;/strong&gt; ಈಗಿನ ಕಾಲಕ್ಕೆ ಉತ್ಪ್ರೇಕ್ಷೆಯೆನ್ನಿಸಬಹುದಾದ ಆದರ್ಶದ ಎಳೆಗಳಲ್ಲಿ ಅದ್ದಿ ತೆಗೆದಂತಿದೆಯಾದರೂ ಆ ಕತೆಯ ಪಾತ್ರಗಳು ಇನ್ನೂ ಇಲ್ಲೆ ನಮ್ಮ ನಡುವೆಯೇ ಇರುವುದನ್ನ ನೋಡಬಹುದು.&lt;br /&gt;&lt;strong&gt;ಮೀನು ಮಾರುವವನು&lt;/strong&gt; ಕತೆಯ ಮೀನು ಮಾರುವವನು ಮತ್ತು ಶಾಸ್ತ್ರಿಗಳು, ಅವರ ಸುತ್ತಲಿನ ಸಮಾಜ ಮತ್ತು ಬದುಕು ಎಲ್ಲ ದಕ್ಷಿಣಕನ್ನಡದ ಅಚ್ಚ ಹಸಿರು ನೋಟಗಳ ಸೊಗದಲ್ಲಿ ಮನಸ್ಸಿಗಿಳಿಯುತ್ತವೆ.&lt;br /&gt;&lt;strong&gt;ಓದು&lt;/strong&gt; ನಂಗೆ ಇಡೀ ಸಂಕಲನದಲ್ಲಿ ಸಿಕ್ಕಾಪಟ್ಟೆ ಇಷ್ಟವಾದ ಕತೆ. ಅನುದ್ದೇಶಿತ ಆದರೂ ಗಹನವಾದ ವಿಷಯಗಳ ವಾಹಕರಾಗಿ ನಮ್ಮ ಬದುಕು ಹೇಗೆ ರೂಪಿತವಾಗಬಹುದು ಎಂಬುದರ ಒಂದು ಸರಳ ನಿರೂಪಣೆ. ಎಲ್ಲ ಪಾತ್ರಗಳೂ - ಸಿಟ್ಟುಗೊಂಡು ಮಾಸ್ತರ ವಿರುದ್ಧ ಕೆಂಡ ಕಾರುವ ಪುತ್ತುಮೋಣು, ನಯವಾಗಿ ಪಾಠ ಹೇಳಿಕೊಡುವ ಮಾಸ್ಟರನ್ನು ಇಷ್ಟಪಡುತ್ತಲೇ ಅವರನ್ನು ದೂರವಿಡಬಯಸುವ ಕಾಸಿಂ ಎಂಬ ದೊಡ್ಡವನಾಗಿಬಿಟ್ಟಿರುವ ಪುಟ್ಟ ಹುಡುಗ, ಅಪ್ಪನ ಆದರ್ಶದ ಹೊಳಪಲ್ಲೆ ದಾರಿ ಹುಡುಕುವ ಯುವ ಮಾಸ್ತರ್, ಎಲ್ಲವನ್ನೂ ಕುತೂಹಲದಿಂದ ಗಮನಿಸುತ್ತಾ ಭಾಗಿಯಾಗುವ ಊರಿನ ಸಮಸ್ತರು.. ಎಲ್ಲ ಕಾಡುವ ಪಾತ್ರಗಳೇ ಆಗಿವೆ.&lt;br /&gt;ಕೊನೆಯ ಕತೆ &lt;strong&gt;ಸ್ವಾತಂತ್ರದ ಓಟ&lt;/strong&gt; ಕೂಡ ಒಂದು ವಿಲಕ್ಷಣ ನೆನಪನ್ನು, ನಾವಿಲ್ಲಿ ಗಡಿಯಿಂದ ದೂರವಾಗಿ ಬದುಕು ಕಟ್ಟಿಕೊಂಡವರಿಗೆ ತೀರಾ ಪುಟ್ಟದು ಅನ್ನಿಸುವ ಸಂಗತಿಯನ್ನು ಅದರ ಮಾನವೀಯ ನೆಲೆಗಳಲ್ಲಿ ಚಿತ್ರಿಸಿದ ಕತೆ. &lt;/p&gt;&lt;p&gt;ಇತ್ತೀಚೆಗೆ ಈ ಕತೆಯ ನಾಟಕರೂಪವನ್ನ &lt;strong&gt;ಸಮುದಾಯ &lt;/strong&gt;ಬೆಂಗಳೂರು ತಂಡದ ಕಲಾವಿದರು ಪ್ರದರ್ಶಿಸಿದರು ಕೂಡಾ. ಸ್ವತಹ ಬೊಳುವಾರು ಅವರೇ ನಾಟಕದ ರೂಪಾಂತರ ಮಾಡಿದ್ದರು. ನನಗೆ ನಾಟಕಕ್ಕಿಂತ ಕತೆಯೇ ಜಾಸ್ತಿ ಇಷ್ಟವಾಯಿತು. ಕತೆಯ ಸೂಚ್ಯ ಮಿತಿಗಳು ನಾಟಕ ಪ್ರದರ್ಶನದಲ್ಲಿ ವಾಚ್ಯವಾಗಿ, ಕೆಲವೊಮ್ಮೆ ಅತಿ ಸರಳೀಕೃತವಾಗಿ, ನಾಟಕ ಮಾಡಿಸುವವರ ಸಿದ್ಧಾಂತಗಳ ಮರುದನಿಯಾಗಿ ಹೊಮ್ಮಿರುತ್ತವೆ. ಕತೆ ನನ್ನ/ಮ್ಮ ಓದಿನ,ತಿಳುವಳಿಕೆಯ,ಅನಿಸಿಕೆಗಳ ಕಿಂಡಿ. ಹಾಗಿದ್ದೂ  ನಾಟಕವೂ ಒಂದು ವಿಶಿಷ್ಟ ಅನುಭವವನ್ನ ಕೊಟ್ಟಿದ್ದು ಸುಳ್ಳಲ್ಲ.&lt;/p&gt;&lt;p&gt;ಅಡ್ದಗೋಡೆಯನ್ನು ಒಡೆಯಬಯಸುವವರಿಗೆ ಲೇಖಕರು ಈ ಸಂಕಲನವನ್ನು ಅರ್ಪಿಸಿದ್ದಾರೆ. ಒಳ್ಳೆಯ ಓದಿಗೆ,ಚಿಂತನೆಗೆ ಪೂರಕವಾಗುವ ಕತೆಗಳು. ನನಗೆ ಸಿಕ್ಕ ಹಿತವಾದ ಓದು ನಿಮ್ಮದೂ ಆಗಲಿ ಎಂಬ ಉದ್ದೇಶದಿಂದ ಈ ಬರಹ...&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-5505832855945744530?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/5505832855945744530/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=5505832855945744530' title='3 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/5505832855945744530'/><link rel='self' type='application/atom+xml' href='http://www.blogger.com/feeds/4515791944382207090/posts/default/5505832855945744530'/><link rel='alternate' type='text/html' href='http://nenapu-nevarike.blogspot.com/2008/08/blog-post_26.html' title='ಒಂದು ತುಂಡು ಗೋಡೆ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-4515791944382207090.post-3000870274336897001</id><published>2008-08-11T05:41:00.000-07:00</published><updated>2008-08-11T07:33:16.801-07:00</updated><category scheme='http://www.blogger.com/atom/ns#' term='ಹೊರಳುದಾರಿ'/><title type='text'>ಮತ್ತೆ ಸಿಗುವುದು ಬೇಕೆ..?</title><content type='html'>ಪುಟ್ಟಪುಟ್ಟ ಬಿಳಿನೀಲಿ ಹೂಗಳು&lt;br /&gt;ಅಲ್ಲೊಂದು ಇಲ್ಲೊಂದು..&lt;br /&gt;ಬರಿಯ ಮುಳ್ಳು ತುಂಬಿದ&lt;br /&gt;ಎಲೆಗಳಿಲ್ಲದ ಪೊದೆಯ ಮಧ್ಯೆ&lt;br /&gt;ಚುಚ್ಚಿ ಗಾಯವಾಗಿ ರಕ್ತಸುರಿದು&lt;br /&gt;ಪೊದೆಯನ್ನೇ ಕಿತ್ತು&lt;br /&gt;ಒಣಗಿಸಿ ಕತ್ತರಿಸಿ&lt;br /&gt;ಬೂದಿಯಾಗಿಸಿ&lt;br /&gt;ಕಲ್ಲಗೋರಿಯಲಿ ಮಲಗಿಸಿ&lt;br /&gt;ಮೇಲಿಷ್ಟು ಮಣ್ಣೆಳೆದು&lt;br /&gt;ಪ್ರಮಾಣ ಮಾಡಿ&lt;br /&gt;ಎಪಿಗ್ರಾಫಿಯಾ ಬರೆದಿದ್ದೂ ಆಗಿದೆ&lt;br /&gt;ಮತ್ತೇಕೆ ಕೆದಕುತ್ತೀಯೆ&lt;br /&gt;ಏಳುವುದು ಬರಿಧೂಳು&lt;br /&gt;ಕಾಲ ಕೆಳಗಿರುವುದು ಶೂನ್ಯ,&lt;br /&gt;ಕಾಲು ಹೊತ್ತಿರುವ&lt;br /&gt;ಮನದ ಗೂಡಲ್ಲಿ&lt;br /&gt;ಸೂತಕದ ನೆರಳು.&lt;br /&gt;&lt;br /&gt;ಮಾಗಿದ ಗಾಯವ ಕಿತ್ತು&lt;br /&gt;ಒಣಗಿಸುವ ಉಪಚಾರವೇಕೆ,&lt;br /&gt;ದಾರಿ ಬದಲಿಸಿದ ಮೇಲೆ&lt;br /&gt;ಮತ್ತೆ ಸಿಗುವುದು ಬೇಕೆ?&lt;br /&gt;ಬದುಕದ ಪ್ರೀತಿಯ&lt;br /&gt;ಮೊದಲ ಚಿಗುರಿನ ಹೂಗಳ&lt;br /&gt;ಬಿಳಿನೀಲಿಯಷ್ಟೇ ನೆನಪಿರಲಿ ;&lt;br /&gt;ಮಧ್ಯದ ರಂಪ, ಕೊನೆಯ ಬೂದಿ&lt;br /&gt;ಎರಡೂ ಬೇಡ.&lt;br /&gt;ಆ ಹಾದಿಯ ಗುರಿಯೇ ಅಲ್ಲಿಗೆ -&lt;br /&gt;ಯಾರೂ ಜೊತೆಯಾಗುಳಿಯದೆ&lt;br /&gt;ಗಾಡಿ ಬದಲಿಸುವ ಜಂಕ್ಷನ್ನಿಗೆ.&lt;br /&gt;&lt;br /&gt;ಇಲ್ಲ ಅವಳಿಲ್ಲ ಹುಡುಕುವುದು ಬೇಡ&lt;br /&gt;ಕಲ್ಲಕೆಳಗಿನ ಕರಗಿದ ಬೂದಿಯೆಡೆಯಲ್ಲಿ&lt;br /&gt;ಉಳಿದಿರಬಹುದು ಅವಳ&lt;br /&gt;ಚಹರೆಯ ಕುರುಹು,&lt;br /&gt;ಮೇಲೆ ಹುಡುಕುವುದು ಬೇಡ..&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-3000870274336897001?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/3000870274336897001/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=3000870274336897001' title='17 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/3000870274336897001'/><link rel='self' type='application/atom+xml' href='http://www.blogger.com/feeds/4515791944382207090/posts/default/3000870274336897001'/><link rel='alternate' type='text/html' href='http://nenapu-nevarike.blogspot.com/2008/08/blog-post.html' title='ಮತ್ತೆ ಸಿಗುವುದು ಬೇಕೆ..?'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>17</thr:total></entry><entry><id>tag:blogger.com,1999:blog-4515791944382207090.post-6490817424521909352</id><published>2008-07-09T11:23:00.000-07:00</published><updated>2008-07-09T11:27:30.954-07:00</updated><category scheme='http://www.blogger.com/atom/ns#' term='ಗೆಳತಿ'/><title type='text'>ಅರ್ಪಣೆ..</title><content type='html'>ಅರ್ಧರಾತ್ರಿಯಲ್ಲಿ ಮಾತನಾಡಿಸಿ, ಫ್ಲೈಯಿಂಗ್ ಹಗ್ ಕೊಟ್ಟವಳಿಗೆ...&lt;br /&gt;ಪುಟ್ಟ ತುಂಬೆ ಹೂ,&lt;br /&gt;ಬಿಳಿಬಿಳೀ ಇಬ್ಬನಿ,&lt;br /&gt;ಸೂಸಿ ಬರುವ ತಂಗಾಳಿ,&lt;br /&gt;ಅದರಒಳಗಣ&lt;br /&gt;ಮಲ್ಲಿಗೆಯ ಘಮ,&lt;br /&gt;ಎಳೇ ಬಿಸಿಲು,&lt;br /&gt;ಹಕ್ಕಿ ಚಿಲಿಪಿಲಿ,&lt;br /&gt;ಮೊದಲ ಮಳೆಹನಿ,&lt;br /&gt;ಪುಟ್ಟಪುಟಾಣಿ ಪಾಪುವಿನ ಹೂನಗೆ,&lt;br /&gt;ಎಲ್ಲ ಬೊಗಸೆಯಲ್ಲಿ ಹಿಡಿದು&lt;br /&gt;ನಿಂತಿದೇನೆ ನಿನ್ನ&lt;br /&gt;ಪ್ರೀತಿ,ನೇಹಗಳಿಗೆ ಮನಸೋತು..&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-6490817424521909352?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/6490817424521909352/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=6490817424521909352' title='14 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/6490817424521909352'/><link rel='self' type='application/atom+xml' href='http://www.blogger.com/feeds/4515791944382207090/posts/default/6490817424521909352'/><link rel='alternate' type='text/html' href='http://nenapu-nevarike.blogspot.com/2008/07/blog-post_09.html' title='ಅರ್ಪಣೆ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>14</thr:total></entry><entry><id>tag:blogger.com,1999:blog-4515791944382207090.post-7249288902390784004</id><published>2008-07-07T05:44:00.000-07:00</published><updated>2008-07-07T05:50:20.445-07:00</updated><category scheme='http://www.blogger.com/atom/ns#' term='ಕಾಡು'/><category scheme='http://www.blogger.com/atom/ns#' term='ಹುಲಿ'/><category scheme='http://www.blogger.com/atom/ns#' term='ಮತ್ತು ನಮ್ಮ ಬದುಕು'/><title type='text'>ಹುಲಿರಾಯನ ಆಕಾಶವಾಣಿ..</title><content type='html'>ಕೆಲದಿನಗಳ ಹಿಂದೆ 'ಸದ್ದಡಗಿದ ಶಿಕಾರಿಕೋವಿ' ಎಂಬ ಪುಸ್ತಕವನ್ನು ಓದಿದೆ. ಡಾ ಪ್ರಭಾಕರ ಶಿಶಿಲ ಅವರು ಬಡ್ಡಡ್ಕ(ಸುಳ್ಯ) ಅಪ್ಪಯ್ಯಗೌಡರ ಶಿಕಾರಿಯ ನೆನಪನ್ನು ಮನಃಸ್ಪರ್ಶಿಯಾಗಿ ನಿರೂಪಿಸಿ ಬರೆದಿರುವ ಪುಸ್ತಕ. ಕನ್ನಡದ್ದೇ ಆದ ಶಿಕಾರಿಯ ಕತೆ, ಮತ್ತು ಆ ಕಾಲದ ಕಾಡು, ಪ್ರಾಣಿಗಳು, ಮತ್ತು ಇತರೇ ವನಸಂಪತ್ತು, ಜೀವನಶೈಲಿಯ ಬಗೆಗಿನ ಕುತೂಹಲದಿಂದ ಈ ಪುಸ್ತಕ ಓದತೊಡಗಿದೆ. ಒಂದೊಂದು ಸನ್ನಿವೇಶವನ್ನೂ ಕಣ್ಣಿಗೆ ಕಟ್ಟುವ ಹಾಗೆ, ಬದುಕು,ಬೇಟೆ,ಹಳ್ಳಿ ಜೀವನ ಮತ್ತು ಕಾಡನ್ನ ಸೂಕ್ಷ್ಮ ವಿವರಗಳನ್ನೂ ಬಿಡದೆ ಬರೆದಿದ್ದಾರೆ. ರೋಮಾಂಚಕವಾದ ಶಿಕಾರಿ ಕತೆಯನ್ನು ಓದುತ್ತ ಓದುತ್ತ ಮನಸ್ಸಿಗೆ ತುಂಬ ಬೇಜಾರಾಗಿಬಿಟ್ಟಿತು. ನಮ್ಮ ಸಾಕಷ್ಟು ಅನುಭವಿ ಮತ್ತು ದೊಡ್ಡ ಬೇಟೆಗಾರರೆಲ್ಲ, ನರಭಕ್ಷಕ ಅಥವಾ ಕಂಟಕಪ್ರಾಯವಾದ ಹುಲಿಗಳನ್ನೇ ಬೇಟೆಯಾಡಿರುವುದು ನಿಜವಾದರೂ, ನಾವು ಮನುಷ್ಯರು ವನ್ಯಜೀವಿಗಳ ನಿವಾಸವಾದ ಕಾಡನ್ನು ನಮ್ಮ ಪ್ರಗತಿಪರ ಉದ್ದೇಶ/ದುರುದ್ದೇಶಗಳಿಗೆ ಖಾಲಿ ಮಾಡುತ್ತ, ಅವು ತಮ್ಮ ಜಾಗದಿಂದ ಹೊರಬಂದು ಆಹಾರ ಹುಡುಕತೊಡಗಿದರೆ ಬೇಟೆಯಾಡಿ ಕೊಲ್ಲುವುದು ಎಷ್ಟು ನ್ಯಾಯ.. ? ಇದರ ಜೊತೆಜೊತೆಗೇ "ನೆಲ ಕಚ್ಚಿದ ಗುಬ್ಬಚ್ಚಿ" ಎಂಬ ಪಕ್ಷಿ ಶಾಸ್ತ್ರಜ್ಞ ಸಲೀಂಅಲಿಯವರ  ಅನುವಾದಿತ ಜೀವನ ಚರಿತ್ರೆ ಓದಿದೆ. ಅನುವಾದಕರು ಎನ್.ಪಿ.ಶಂಕರನಾರಾಯಣ ರಾವ್. ಸಲೀಂ ಅಲಿಯವರ ಬದುಕು ಪಕ್ಷಿ ಸಂಕುಲದಷ್ಟೇ ಆಸಕ್ತಿಯುತವಾಗಿ ಓದಿಸಿಕೊಂಡುಹೋಯಿತು. ವಿವರಗಳು ಬದಿಗಿಟ್ಟು ಆ ಪುಸ್ತಕದಲ್ಲಿ ಓದಿದ ರಾಜರ, ರಾಜಮನೆತನಗಳ, ಜಮೀನುದಾರರ, ಬ್ರಿಟಿಶ್ ಅಧಿಕಾರಿಗಳನ್ನು ಮನತಣಿಸುವವರ ಬೇಟೆಯ ಕತೆಗಳು, ಪಕ್ಷಿಗಳ ಮಾರಣಹೋಮ ಇತ್ಯಾದಿ ಎಲ್ಲ ಓದಿ ಮನಸ್ಸು ಮುದುಡಿಹೋಯಿತು ಕೂಡಾ.&lt;br /&gt;ಮನರಂಜನೆಗೆ ಇನ್ನೊಂದು ಜೀವಿಯನ್ನ ಕೊಲ್ಲುವ, ಹವ್ಯಾಸವಾಗಿ ಬೆಳೆಸಿಕೊಂಡಿರುವ ಒಂದೇ ಜೀವಪ್ರಬೇಧವೆಂದರೆ ಮನುಷ್ಯರು ಅಂತ ಕಾಣುತ್ತದೆ.&lt;br /&gt;ಮತ್ತೆ ಮರುವಾರ ಪುಸ್ತಕದಂಗಡಿಗೆ ಹೋದೆ. ಪ್ರಾಣಿಗಳ ಬಗ್ಗೆ ಮತ್ತು ನಮ್ಮ ಉಲ್ಲಾಸಕಾರಂತರಂತಹ ವನ್ಯಜೀವಿಶಾಸ್ತ್ರಜ್ಞರ ಕೆಲಸ ಕಾರ್ಯಗಳ ಬಗೆಗೆ ಏನಾದರು ಪುಸ್ತಕ ಸಿಕ್ಕುತ್ತಾ ನೋಡಬೇಕು ಅಂತ. ನಾನು ಚಿಕ್ಕವಳಿದ್ದಾಗ ಕೆಲ ಪತ್ರಿಕೆಗಳಲ್ಲಿ ಹುಲಿಗಳಿಗೆ ಕಾಲರ್ ತೊಡಿಸಿದವರು ಎಂಬ ತಲೆಬರಹದಡಿಗಳಲ್ಲಿ ಇವರ ಬಗ್ಗೆ ಓದಿದ ನೆನಪು. ಎಲ್ಲ ಬಿಟ್ಟು ಇವರು ಹುಲಿಗೇಕೆ ಕಾಲರ್ ತೊಡಿಸಿದರೋ ಎಂಬ ಉಡಾಫೆಯಲ್ಲಿ ಅದನ್ನ ಓದಿರಲಿಲ್ಲ ನಾನು.&lt;br /&gt;ಈಗ ಶಿಕಾರಿಗಳ ಬಗ್ಗೆ ಓದಿದ ನಂತರ ಈ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಿತು. &lt;strong&gt;ಹುಲಿರಾಯನ ಬದುಕು, ಹುಲಿರಾಯನ ಆಕಾಶವಾಣಿ,&lt;/strong&gt; ಎಂಬ ಎರಡು ಹುಲಿಗಳ ಬಗೆಗಿನ ಪುಸ್ತಕವೇ ಸಿಕ್ಕಿತು. ಎರಡರ ಮೂಲ ಸೆಲೆಯೂ &lt;strong&gt;ಉಲ್ಲಾಸ ಕಾರಂತ&lt;/strong&gt;ರೇ. ಅವರ ಇಂಗ್ಲಿಷ್ ಪುಸ್ತಕದ ಅನುವಾದ ಮಾಡಿದವರು ಟಿ.ಎಸ್. ಗೋಪಾಲ್. ಮತ್ತೊಂದು ಪುಸ್ತಕದ ನಿರೂಪಣೆಯ ಹೊಣೆ ಹೊತ್ತವರೂ ಇವರೆ. ನನ್ನ ಕುತೂಹಲಕ್ಕೆ ಈ ಪುಸ್ತಕಗಳು ಬಹು ಒಳ್ಳೆಯ ಆಸರೆಯಾಗಿ ಒದಗಿಬಂದವು.&lt;br /&gt;&lt;br /&gt;ಹುಲಿರಾಯನ ಬದುಕು ಓದಿಮುಗಿಸಿದ್ದೇನೆ. ತಳಮಳ ಸ್ವಲ್ಪ ಕಡಿಮೆಯಾಗಿದೆ. ಎಲ್ಲ ಮುಗಿದುಹೋಯಿತು ಎಂಬ ಶೂನ್ಯಭಾವ ಇಲ್ಲ ಈಗ.  ಏನನ್ನೋ ಮಾಡಬಹುದು, ಮಾಡಬೇಕು ಎಂಬ ಅನಿಸಿಕೆ ದಟ್ಟವಾಗಿ ನಿಂತಿದೆ. &lt;br /&gt;ತನ್ನ ಸಂಪೂರ್ಣ ಆವಾಸವಾದ ಕಾಡಿನ ಶೇಕಡಾ ಐದು ಭಾಗವಷ್ಟೇ ಈಗಿನ ಹುಲಿಗಳಿಗೆ ಉಳಿದಿದೆಯಂತೆ. ಉಳಿದಿರುವ ಅದರಲ್ಲೂ  ಹೊರಗಣ ಕಾಡು ಮನುಷ್ಯರ ಸಂಚಾರ ಮತ್ತು ವ್ಯವಹಾರಗಳಿಗೆ ಪಕ್ಕಾಗಿದೆಯಂತೆ. ನಮ್ಮ ವನ್ಯಜೀವಿಗಳು ಎಲ್ಲಿ ಬದುಕಬೇಕು? ಸಂತ್ರಸ್ತ ಜನರನ್ನೇ ಕೇಳುವವರು ಗತಿಯಿಲ್ಲ. ಕಾಡು ಪ್ರಾಣಿಗಳು ಯಾರಿಗೆ ಬೇಕು?&lt;br /&gt;ಸತ್ಯವೇನೆಂದರೆ, ನಾವು ಮನುಷ್ಯರು ಇಂದು ನಮಗೆ ಬೇಕಾದ ಗುರಿಗಳ ಹಿಂದೆ ನಾಗಾಲೋಟದಿಂದ ಓಡುವ ಎಲ್ಲ ಸೌಲಭ್ಯ, ಸವಲತ್ತೂಗಳೂ ನಾವು ಬದುಕಿದ್ದರೆ ಮಾತ್ರ ಕೆಲಸ ಮಾಡುತ್ತವೆ. ಭೂಮಿಯ ಮೇಲಿನ ಸೃಷ್ಟಿ ವೈವಿಧ್ಯತೆಯೇ ಭೂಮಿಯ ಫಲವತ್ತತೆ, ಋತುಮಾನ, ಜೀವ ನಿಯಂತ್ರಣ ಮತ್ತು ಜೀವೋತ್ಪಾದನೆಯ ಎಲ್ಲದರ ಬೆನ್ನೆಲುಬು. ನಾವು ಅದನ್ನೇ ನುಂಗಿ ನೀರು ಕುಡಿಯುತ್ತಾ ಕೂತ ಮರದ ಕೊಂಬೆ ಕಡಿಯುವ ಕೆಲಸದಲ್ಲಿ ಸಿಕ್ಕಾಪಟ್ಟೆ ಚುರುಕಾಗಿದ್ದೇವೆ.&lt;br /&gt;ಬರಿಯ ಹುಲಿಯಿಂದ ಪ್ರಪಂಚ ನಡೆಯುತ್ತಿಲ್ಲ. ಮನುಷ್ಯನಿಂದಂತಲೂ ಖಂಡಿತ ಅಲ್ಲ. ಎಲ್ಲ ಜೀವವೈವಿಧ್ಯಗಳ ಒಂದರೊಡನಿನ್ನೊಂದರ ಹೊಂದಾಣಿಕೆಯೇ ನಮ್ಮ ಜೀವರಹಸ್ಯ. ಹುಲಿಗಳು ಈ ರಹಸ್ಯ ಬಿಡಿಸುವ ಮತ್ತು ವೈವಿಧ್ಯತೆ ಕಾಪಾಡುವ ಮುಖ್ಯ ಕೊಂಡಿಗಳು. ಒಂದು ಹುಲಿಯ ಉಳಿವು, ಅದರ ಸುತ್ತಲಿನ ಆಹಾರ/ಬೇಟೆಪ್ರಾಣಿಗಳ ಉಳಿವಿನ ಮೇಲೆ ನಿಂತಿರುತ್ತದೆ. ಆ ಬೇಟೆ ಪ್ರಾಣಿಗಳು ಕಾಡಿನ/ಸಸ್ಯ ಸಮೃದ್ಧತೆಯ ಮೇಲೆ ಅವಲಂಬಿಸಿರುತ್ತವೆ. ಕಾಡು ಮಳೆ/ಬಿಸಿಲುಗಳ ಮೇಲೆ. ಈ ಎಲ್ಲವೂ ನಮ್ಮ ಮೇಲೆ ಮಾಡುವ ಪರಿಣಾಮವನ್ನು ಪ್ರತ್ಯೇಕವಾಗಿ ತೋರಿಸಿಕೊಡಬೇಕಾದ್ದಿಲ್ಲ ಅಲ್ಲವೇ? ಇದು ಈ ಪುಸ್ತಕದಿಂದ ನಾನು ಕಲಿತ ಪಾಠ.&lt;br /&gt;&lt;br /&gt;ಈ ಬಗೆಗಿನ ಹೆಚ್ಚಿನ ಮಾಹಿತಿ, ನಾವು ಮಾಡಬಹುದಾದ ಸಣ್ಣ ಸಣ್ಣ ಆದರೆ ಅತ್ಯವಶ್ಯಕ ಜೀವನಶೈಲಿಯ ಬದಲಾವಣೆಗಳು, ಸಾಧ್ಯವಾದಾಗ ವನಜೀವನ ಸಂರಕ್ಷಣ ಕಾರ್ಯದಲ್ಲಿ ತೊಡಗಿರುವವರಿಗೆ ನೀಡಬಹುದಾದ ಸಹಾಯ ಎಲ್ಲವನ್ನೂ ಈ ಪುಸ್ತಕ ಪ್ರೀತಿಯಿಂದ ಹೇಳಿಕೊಡುತ್ತದೆ.ಸಮಯಾವಕಾಶವಾದಾಗ ದಯವಿಟ್ಟು ಈ ಪುಸ್ತಕ ಕೊಂಡು ಓದಿ. ಇಲ್ಲಿ ಆಳ ಅಧ್ಯಯನ ಮತ್ತು ಪರಿಶೀಲನೆಯ ಸಾರಸರ್ವಸ್ವವಿದೆ.&lt;br /&gt;&lt;br /&gt;ನಮ್ಮ ವನ್ಯಜೀವನ ಸಂರಕ್ಷಣೆಯ ಬಗೆಗಿನ ಹೆಚ್ಚು ಮತ್ತು ನಿಖರ ಮಾಹಿತಿಗಳು ಈ ವೆಬ್ ಸೈಟಿನಲ್ಲಿ ಸಿಗುತ್ತವೆ. &lt;a href="http://www.wildlifefirst.info/about.htm"&gt;http://www.wildlifefirst.info/about.htm&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-7249288902390784004?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/7249288902390784004/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=7249288902390784004' title='6 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/7249288902390784004'/><link rel='self' type='application/atom+xml' href='http://www.blogger.com/feeds/4515791944382207090/posts/default/7249288902390784004'/><link rel='alternate' type='text/html' href='http://nenapu-nevarike.blogspot.com/2008/07/blog-post_07.html' title='ಹುಲಿರಾಯನ ಆಕಾಶವಾಣಿ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-4515791944382207090.post-18703598066235304</id><published>2008-07-07T02:44:00.000-07:00</published><updated>2008-07-07T02:48:11.669-07:00</updated><category scheme='http://www.blogger.com/atom/ns#' term='ಬಿದಿಗೆಯ ಬಿಂಬ'/><title type='text'>ಅವನ ಹಾಡು..</title><content type='html'>&lt;span style="color:#000066;"&gt;&lt;/span&gt;&lt;br /&gt;&lt;span style="color:#000066;"&gt;ಆ ಉದ್ದ ಜಡೆಯನ್ನ ಬಿಂಕವಾಗಿ ಹೊತ್ತು ತಿರುಗುವ&lt;br /&gt;ಮೊದ್ದುತನದ ಮೇರುತಲೆಗೆ ಎರಡು ತಟ್ಟುತ್ತಾ;&lt;br /&gt;ಜಗದ ಎಲ್ಲ ಚಲನೆಯನ್ನ ಹೊತ್ತು ಸುಳಿವ&lt;br /&gt;ತುಂಟ ಕಣ್ಣುಗಳ ಕೊಳದಲ್ಲಿ ಬಿದ್ದು ಈಜುತ್ತಾ;&lt;br /&gt;ಸಾಗರದಷ್ಟು ಮಾತು ತುಂಬಿ ತುಳುಕುವ&lt;br /&gt;ಪುಟ್ಟ ಬಾಯಿಗೆ ನನ್ನ ಮೌನದೊಲವ ಕುರುಹ ಹಚ್ಚುತ್ತಾ;&lt;br /&gt;ಚಕ್ರ ಕಟ್ಟಿದಂತೆ ತಿರುಗುವ ಕಾಲ ಹಾದಿಯ&lt;br /&gt;ಹಿಂಬಾಲಿಸಿ ಹಿಂಬಾಲಿಸಿ ಸುಸ್ತಾಗುತ್ತಾ;&lt;br /&gt;ಮಾಡಿದಡುಗೆ ಘಾಟು ಘಾಟಾಗಿದ್ದರೂ&lt;br /&gt;ಅಮ್ಮನಡುಗೆಯಂತೇ ಇದೆ ಎಂದು ಭಾವಿಸಿ ತಿನ್ನುತ್ತಾ,&lt;br /&gt;ನಡೆಯದೇ ಓಡುತ್ತ ಎಡವಿಬಿದ್ದಾಗ&lt;br /&gt;ಮೇಲೇಳಲು ಕೈ ನೀಡುತ್ತಾ;&lt;br /&gt;ಎಲ್ಲ ನಿಯಮಗಳ ಮೀರಿದ-ಯಾವ ಅಳತೆಗೂ ಸಿಗದ&lt;br /&gt;ಸಿಟ್ಟು ಮಾಡಿದರೆ ಮುದುಡುವ,&lt;br /&gt;ಮುದ್ದು ಮಾಡಿದರೆ ಚಿಗುರುವ&lt;br /&gt;ನಿನ್ನ ಚೈತನ್ಯದ ಹರಿವು&lt;br /&gt;ನೋಡಿ ನೋಡಿ ಅವಾಕ್ಕಾಗುತ್ತಾ;&lt;br /&gt;ನನ್ನಲಿಲ್ಲದ, ನನಗೆ ತುಂಬ ಬೇಕಿರುವ ಎಲ್ಲದೂ&lt;br /&gt;ನಿನ್ನಲಿರುವುದ ನೋಡುತ್ತ&lt;br /&gt;ಪುಳಕಗೊಂಡು&lt;br /&gt;ಮತ್ತೆ ಮತ್ತೆ ಬಿಗಿದಪ್ಪುತ್ತಾ;&lt;br /&gt;ನಿನ್ನ ಮಾತಿನ ತಾಳಕ್ಕೆ&lt;br /&gt;ನನ್ನ ಮೌನರಾಗ&lt;br /&gt;ಜತೆಯಾಗಿ&lt;br /&gt;ಬದುಕಿನ ಕವಿತೆಗೆ&lt;br /&gt;ಸಂಜೀವನ ಸಂಗೀತದ ಸಂಯೋಜನೆ..&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-18703598066235304?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/18703598066235304/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=18703598066235304' title='3 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/18703598066235304'/><link rel='self' type='application/atom+xml' href='http://www.blogger.com/feeds/4515791944382207090/posts/default/18703598066235304'/><link rel='alternate' type='text/html' href='http://nenapu-nevarike.blogspot.com/2008/07/blog-post.html' title='ಅವನ ಹಾಡು..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-4515791944382207090.post-5813994389681110142</id><published>2008-06-26T06:32:00.000-07:00</published><updated>2008-06-26T06:38:59.826-07:00</updated><category scheme='http://www.blogger.com/atom/ns#' term='ನೆನಪು'/><category scheme='http://www.blogger.com/atom/ns#' term='ಅಜ್ಜ'/><title type='text'>ಅಶ್ರುತ ಅನುರಣನ.</title><content type='html'>&lt;span style="color:#000099;"&gt;ಹಸಿರು, ಮಳೆ, ಗುಡ್ಡ, ಹಿನ್ನೀರು&lt;br /&gt;ಹಣ್ಣು,ಜೇನು,ಗಾಳಿ,ಮಳೆ, ಬೆಳದಿಂಗಳ ಬಾಲ್ಯ,&lt;br /&gt;ಮಾವನೊಡನೆ ಮುನಿಸು, ಅತ್ತೆಯೊಡನೆ ಸೊಗಸು,&lt;br /&gt;ಅಜ್ಜನ ಕತೆ, ಅಮ್ಮಮ್ಮನ ಕೊಂಡಾಟ,&lt;br /&gt;ರಜೆಯ ಮಜದ ಮೂರ್ತ ರೂಪ&lt;br /&gt;ನನ್ನದೇ ಊರೆನಿಸಿದ್ದು&lt;br /&gt;ಇವತ್ತು&lt;br /&gt;ನನ್ನದಲ್ಲ, ...!!?? :( :(&lt;br /&gt;&lt;/span&gt;&lt;br /&gt;&lt;span style="color:#000099;"&gt;ಅದೇ ಹಸಿರು, ಕೊಂಚ ಧೂಳುಬಡಿದಿದೆ&lt;br /&gt;ಅದೇ ಮಳೆ, ಏನೋ ಸ್ವಲ್ಪ ಹಿಂಚು ಮಿಂಚು&lt;br /&gt;ಅದೇ ಗುಡ್ಡ, ಅಲ್ಲಲ್ಲಿ ಬೋಳಾಗಿದೆ&lt;br /&gt;ಅದೇ ಹಿನ್ನೀರು, ಸ್ವಲ್ಪ ಸವುಳಾಗಿದೆ&lt;br /&gt;ಹಣ್ಣು ಜೇನು ಗಾಳಿ ಮಳೆ ಬೆಳದಿಂಗಳು&lt;br /&gt;ಹಾಗೇ ಇರಬಹುದೇನೋ&lt;br /&gt;ಹೋಗಿ ರುಚಿ ನೋಡುವವರು ಯಾರು,ಯಾವಾಗ?&lt;/span&gt;&lt;br /&gt;&lt;br /&gt;&lt;span style="color:#000099;"&gt;ಸಂಬಂಧಗಳು ರೇಷಿಮೆಯಂತೆ-&lt;br /&gt;ಅಜ್ಜನ ಕತೆಯದೇ ರೂಪಕ;&lt;br /&gt;ಬಾಲ್ಯದ ಜೋಕಾಲಿ ಜೀಕಿ ಮುಗಿಸಿ,&lt;br /&gt;ಬದುಕಿನ ಏರು ಹತ್ತುತ್ತಾ&lt;br /&gt;ಉಸಿರುಬಿಡುತ್ತಿರುವವಳಿಗೀಗ ಹೌದೇಹೌದೆನಿಸುತ್ತಿದೆ:&lt;br /&gt;ಸಂಬಂಧಗಳು ರೇಷಿಮೆಯಂತೆ-&lt;br /&gt;ಸುಲಭವಾಗಿ ಸಿಕ್ಕಾಗುತ್ತವೆ,&lt;br /&gt;ಕಡಿದ ಮೇಲೆ ಜೋಡಿಸಲಾಗದು.&lt;br /&gt;ಮೊನ್ನೆ ಮೊನ್ನೆ&lt;br /&gt;ನಕ್ಕಂತೆ ಅನಿಸಿದ ನಗು,&lt;br /&gt;ಆಡಿದ ಮಾತು, ನೋಡಿದ ನೋಟ&lt;br /&gt;ಎಲ್ಲ ಯಾವಾಗ ಹೇಗೆ ಬದಲಾಯಿತು,&lt;br /&gt;ಗೊತ್ತಾಗುತ್ತಿಲ್ಲ!&lt;br /&gt;ಕೂತು ಕತೆಹೇಳಿ ತರ್ಕಿಸಲು ಅಜ್ಜನಿಲ್ಲ,&lt;br /&gt;ಅಮ್ಮಮ್ಮ ಅವನ ಹಿಂದೆಯೇ ಹೊರಟ ಹಾಗಿದೆ,&lt;/span&gt;&lt;br /&gt;&lt;span style="color:#000099;"&gt;ಉಳಿದೆಲ್ಲರೂ ಬದಲಾಗುವ ಕಾಲದ &lt;/span&gt;&lt;br /&gt;&lt;span style="color:#000099;"&gt;ಮುಳ್ಳು ಹಿಡಿದು ನೇತಾಡುತ್ತಾ&lt;/span&gt;&lt;br /&gt;&lt;span style="color:#000099;"&gt;ಮನದ ತುಂಬ&lt;br /&gt;ಪ್ರೀತಿಯ ಬಂಧವೊಂದರ ಸೂತಕ.&lt;/span&gt;&lt;br /&gt;&lt;br /&gt;&lt;span style="color:#000099;"&gt;ಮನುಷ್ಯರು ಬದಲಾಗಬಹುದು&lt;br /&gt;ನಿನ್ನೆಯಿದ್ದವರು ಇಂದಿಲ್ಲ,&lt;br /&gt;ಇಂದಿನ ನಾವು ನಾಳೆಗೆ ಸಲ್ಲ,&lt;br /&gt;ಮರ,ಗುಡ್ಡ,ಮಳೆ, ಕಾಡು ಹಾಗಲ್ಲವಲ್ಲ..&lt;br /&gt;ಸೂತಕದ ಒಳಮನೆಯಲ್ಲಿ&lt;br /&gt;ನೆನಪಿನ ದೀಪದ ಮಂದ ಬೆಳಕು!&lt;br /&gt;ಅಲ್ಲಿ ಬೇಕೆಂದಾಗ&lt;br /&gt;ಹೊರಗಿನ ಹಂಗಿಲ್ಲದ&lt;br /&gt;ಅಜ್ಜ,ಅಮ್ಮಮ್ಮ,ಕಾಡು,ಕತೆ,ತಿರುಗಾಟ,&lt;br /&gt;ಅಕ್ಕರೆಯ ಬಂಧದ ಅಶ್ರುತ ಅನುರಣನ.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-5813994389681110142?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/5813994389681110142/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=5813994389681110142' title='11 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/5813994389681110142'/><link rel='self' type='application/atom+xml' href='http://www.blogger.com/feeds/4515791944382207090/posts/default/5813994389681110142'/><link rel='alternate' type='text/html' href='http://nenapu-nevarike.blogspot.com/2008/06/blog-post.html' title='ಅಶ್ರುತ ಅನುರಣನ.'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>11</thr:total></entry><entry><id>tag:blogger.com,1999:blog-4515791944382207090.post-896717823780323395</id><published>2008-05-30T04:16:00.000-07:00</published><updated>2008-05-30T04:40:53.174-07:00</updated><category scheme='http://www.blogger.com/atom/ns#' term='ಕೃತಜ್ಞತೆ'/><title type='text'>ಗಂಜಿ..</title><content type='html'>&lt;span style="color:#000066;"&gt;ಜಿಟಿಜಿಟಿ ಮಳೆ ಬೆಳಿಗ್ಗೆ ಎದ್ದಾಗಿನಿಂದಲೇ ಸುರಿಯುತ್ತಿದೆ. ಹೂವು ಕೊಯ್ಯಲು ಹೋಗುವಾಗಲೂ ಕೊಡೆ ಹಿಡಿದುಕೊಂಡೇ ಹೋಗಬೇಕಾದಷ್ಟು ಜೋರೇ. ಹಾಗಾಗೇ ಇವತ್ತು ದೇವರಿಗೆ ಒಂದೆರಡು ಬೇಲಿಸಾಲಿನ ಹೂಗಳು ಖೋತಾ. ಸ್ನಾನ ಮುಗಿಸಿ ಯುನಿಫಾರ್ಮ್ ಹಾಕಿ, ಕೈಯಲ್ಲಿ ಹಣಿಗೆ ಹಿಡಿದು ಬಂದವಳಿಗೆ ಅಮ್ಮ ಬಿಸಿಬಿಸಿ ಹಬೆಯಾಡುತ್ತಿದ್ದ ತಟ್ಟೆ ಕೊಟ್ಟು ತಲೆಬಾಚತೊಡಗಿದಳು. ತಟ್ಟೆ ನೋಡಿದ ಕೂಡಲೆ ಇವಳಿಗೆ ಸಿಟ್ಟು. ನನಗೆ ಗಂಜಿ ಬೇಡ, ತಿಂಡಿ ಬೇಕು. ಸಿಡುಕತೊಡಗಿದಳು. ಅಮ್ಮ ನಯವಾಗಿ ಮಾತನಾಡಿಸುತ್ತ, ನೋಡು ಈ ಚಳಿ ಮಳೇಲಿ ಬಿಸಿ ಬಿಸಿ ಗಂಜಿ ತಿನ್ನು, ಮೇಲೆ ಘಮ ಘಮ ಕೊಬ್ಬರಿ ಎಣ್ಣೆ ಮತ್ತೆ ಕರಿಯಪ್ಪೆ ಮಾವಿನ ಮಿಡಿ ಇದೆ. ಎಷ್ಟು ರುಚಿ ಇರುತ್ತಲ್ಲಾ ಪುಟ್ಟೀ, ಈ ಮಳೆಯಲ್ಲಿ ಮೈ ಬೆಚ್ಚಗಿರತ್ತೆ. ಹೊಟ್ಟೆ ತಂಪಾಗಿರತ್ತೆ ತಿಂದರೆ ಅಂತ ಹೇಳುತ್ತ ಎರಡೂ ಜಡೆಯನ್ನೂ ಎತ್ತಿ ಕಟ್ಟಿ, ಅಲ್ಲೇ ಕಿಟಕಿಯ ಬಳಿ ಇಟ್ಟಿದ್ದ ಹಳದಿ ಬಣ್ಣದ ಗುಂಡು ಡೇರೆ ಹೂವನ್ನ ಮುಡಿಸಿದಳು. ಇವಳಿಗೆ ಅಮ್ಮನ ಮಾತು ಚೂರು ಚೂರೂ ಇಷ್ಟವಾಗಲಿಲ್ಲ. ಗಂಜಿ ತಿನ್ನಲಿಕ್ಕೇನೋ ರುಚಿಯಾಗೇ ಇತ್ತು. ಮನಸ್ಸು ಕೆಟ್ಟಿತ್ತು. ತಾನು ಓದಿದ ಕತೆಗಳಲ್ಲೆಲ್ಲ ಬಡವರ ಮನೆಯವರು ಗಂಜಿ ತಿಂದು ಬದುಕುತ್ತಿದ್ದರು. ಹಾಗಾದರೆ ನಾವೂ ಬಡವರೆ ಎಂಬ ಗಾಢ ನಿರಾಸೆಯಲ್ಲಿ ತಿಂದು ಮುಗಿಸಿ ಕೈ ತೊಳೆದುಕೊಳ್ಳುವಾಗ ಅವಳ ಕಣ್ಣಲ್ಲಿ ನೀರಿತ್ತು. ಗಮನಿಸಿದ ಅಮ್ಮ ಮೆತ್ತಗೆ ಹೇಳಿದಳು. ನಾಳೆ ತಿಂಡಿ ದೋಸೆ. ಈಗ ಸಿಟ್ಟು ಮಾಡಿಕೊಳ್ಳದೆ ಸ್ಕೂಲಿಗೆ ಹೋಗು ಮಗಳೇ. ಸರಿ ಎಂದರೂ ಬಿಗುವಾದ ಮನದಲ್ಲೆ ಕೊಡೆ ಬಿಚ್ಚಿ ಹೊರಟಳು. ಅಮ್ಮ ಬಾಗಿಲಲ್ಲೇ ತನ್ನ ಟಾಟಾಕ್ಕೆ ಕಾಯುತ್ತಿದ್ದಾಳೆ ಅಂತ ಗೊತ್ತಿದ್ದೂ ತಿರುಗಿ ನೋಡದೆ ಹೋಗಿಬಿಟ್ಟಳು.&lt;/span&gt;&lt;br /&gt;&lt;br /&gt;&lt;span style="color:#000066;"&gt;ಅವತ್ತು ಶಾಲೆಗೆ ಹೋದರೂ ಬೆಳಗ್ಗಿನಿಂದಲೇ ಒಂದು ತರ ಗೌ ಅನ್ನುತ್ತಿತ್ತು. ಧಾರಾಕಾರ ಮಳೆ. ಶಾಲೆಯ ಹೊರಗಿನ ಅಂಗಳವೆಲ್ಲ ಕೆಸರು ಹೊಂಡವಾಗಿತ್ತು. ಎಲ್ಲರೂ ಕ್ಲಾಸಿನಲ್ಲೆ ನಿಂತುಕೊಂಡು ಪ್ರಾರ್ಥನೆ ರಾಷ್ಟ್ರಗೀತೆ ಹೇಳಬೇಕಾಯಿತು. ಬೆಳಗ್ಗೆ ಹೇಗೆ ಹೇಗೋ ಮುಗಿಯಿತು. ಮಧ್ಯಾಹ್ನದ ಕ್ಲಾಸು ಭಾರೀ ಕಷ್ಟವಾಗಿಬಿಟ್ಟಿತು. ಸಂಜೆಯಾಗೇ ಹೋಯಿತೇನೋ ಅನ್ನುವಂತೆ ಕವಿದುಕೊಂಡಿದ್ದ ಕತ್ತಲು, ಎಲ್ಲರಿಗೂ ನಿದ್ದೆಯ ಮೂಡು ತಂದುಬಿಟ್ಟಿತ್ತು. ಅದಕ್ಕೆ ಸರಿಯಾಗಿ ಗುಂಡಮ್ಮ ಟೀಚರ ಗಣಿತ ಕ್ಲಾಸು ಎರಡು ಪೀರಿಯಡ್ಡು ಬೇರೆ. ಎಷ್ಟು ಕೂಡಿದರೂ ಕಳೆದರೂ ಲೆಕ್ಕವೇ ಮುಗಿಯುತ್ತಿಲ್ಲ. ದಿನವೂ ಆಗಿದ್ದರೆ ಮುಂದಿನ ಪಿರಿಯಡ್ಡು ಆಟಕ್ಕೆ ಬಿಡಬೇಕು. ಹಾಗಾಗಿ ಅದರ ಹಿಂದಿನ ಪಿರಿಯಡ್ಡಿನಲ್ಲೆ ಹಂಚಿಕೆ ಶುರುವಾಗಿರುತ್ತಿತ್ತು ಗುಟ್ಟಾಗಿ. ಯಾರು ರೂಪನ ಟೀಮು, ಯಾರು ಭಾಗ್ಯನ ಕಡೆ, ಕೆರೆ ದಡವೋ, ಕಳ್ಳಾ ಪೋಲಿಸೋ,..ಹೀಗೇ ಎಲ್ಲ ನಿರ್ಧಾರಗಳೂ ಗುಸುಗುಸೂಂತ ಹರಡಿಕೊಂಡು ಕ್ಲಾಸಿನಲ್ಲಿ ತುಂಬ ಚಟುವಟಿಕೆ ಇರುತ್ತಿತ್ತು. ಇವತ್ತು ಎಲ್ಲರೂ ಮಂಕಾಗಿದ್ದರು. ಹೊರಗೆ ಧೋ ಮಳೆ. ಅಷ್ಟಕ್ಕೇ ಮುಗಿಯಲಿಲ್ಲ. ಮುಂದಿನ ಪಿರಿಯಡ್ಡಲ್ಲಿ ಅನಸೂಯಮ್ಮ ಟೀಚರು ಬಂದುಬಿಟ್ಟರು. ಅಯ್ಯೋ ರಾಮ ಇವರಿನ್ನು ಮತ್ತೆ ಬೆಳಗ್ಗಿನ ಕನ್ನಡವನ್ನೇ ಕೊರೆಯುತ್ತಾರಲ್ಲಾ ಅಂದುಕೊಳ್ಳುತ್ತಿದ್ದ ಹಾಗೆ ಒಳಗೆ ಬಂದ ಟೀಚರು, ಮಕ್ಳಾ ಇವತ್ತು ಮಳೆ, ಆಟ ಬಂದ್, ಅದಕ್ಕೆ ಈಗ ಕತೆ ಹೇಳಾಟ ಅಂತ ಶುರು ಮಾಡಿದರು. ಓ ಇದೇನೋ ಬೇರೆ ತರ ನಡೀತಾ ಇದ್ಯಲ್ಲ ಅಂತ ಎಲ್ಲರ ಕಿವಿಯೂ ಚುರುಕಾಯಿತು. ಮೂಲೆಯಲ್ಲಿ ಬಾಗಿಲ ಹಿಂದಿನ ಬೆಂಚಲ್ಲಿ ಕೂತ ಶೋಭಾ ತೂಕಡಿಸುತ್ತಿದ್ದಿದ್ದು ಟೀಚರ ಕಣ್ಣಿಗೆ ಬಿತ್ತು. ಕೂಡಲೇ ಅವರ ಕೈಯಲ್ಲಿದ್ದ ಉದ್ದನೆ ಬೆತ್ತ ತಗೊಂಡು ಅವಳ ಹತ್ತಿರ ಹೋಗಿ ಸಣ್ಣಗೆ ತಿವಿದರು. ಅಯ್ಯಮ್ಮಾ ಅಂತ ಅವಳು ಬೆಚ್ಚಿ ಬಿದ್ದು ಎದ್ದು ಕೂತರೆ ನಮಗೆಲ್ಲ ಮುಸಿಮುಸಿ ನಗು. ಇನ್ಯಾರಾದರೂ ಮಲಗಿದರೆ ಸರಿಯಾಗಿ ಬೀಳತ್ತೆ ಮೈಮೇಲೆ ನಾಗರಬೆತ್ತ ಇದು ಗೊತ್ತಾಯ್ತಾ ಅಂತ ಪುಟ್ಟಗೆ ನಡೆದುಕೊಂಡ ಬಂದ ಟೀಚರು ಒಂದು ಕ್ಷಣ ಅಜ್ಜ ಹೇಳುವ ಕತೆಯ ಲಂಕಿಣಿಯಂತೆಯೇ ಕಾಣಿಸಿದರು. ಛೇ ಛೇ, ಟೀಚರ್ ಬಗ್ಗೆ ಹಂಗೆಲ್ಲಾ ಅಂದ್ಕಂಡ್ರೆ ಪಾಪ ಬರುತ್ತೆ, ಅಂತ ನೆನಪು ಮಾಡಿಕೊಂಡು ಲಂಕಿಣಿಯನ್ನ ಹಿಂದೆ ದಬ್ಬಿದರೂ ಟೀಚರ್ ಕನ್ನಡಕದೊಳಗಿನ ಚೂಪುಕಣ್ಣಿನಲ್ಲಿ ನೋಡುತ್ತಿದ್ದುದ್ದು ಏನೋ ಭಯ ಹುಟ್ಟಿಸುತ್ತಿತ್ತು.&lt;br /&gt;ಅಷ್ಟರಲ್ಲಿ ಟೀಚರ್ ಕತೆ ಶುರುಮಾಡಿದರು. ಅಲ್ಲಿ ನೋಡಿದರೆ ಮತ್ತೆ ಗಂಜಿಯೇ ಬರಬೇಕಾ? ಅದ್ಯಾರೋ ಅಡುಗೂಲಜ್ಜಿ ಅವಳ ಮೊಮ್ಮಗಳಿಗೆ ಮಳೆಯಲ್ಲಿ ಬಿಸಿಬಿಸಿ ಗಂಜಿ ಮಾಡಿ ಕೊಡುವ ಕತೆ. ಇವಳಿಗೆ ಬೇಜಾರಾಗಿ ಹೋಯಿತು. ಇವಳ ಇರುಸುಮುರುಸು ಟೀಚರ ಕಣ್ಣಿಗೂ ಬಿತ್ತು. ಎಬ್ಬಿಸಿ ನಿಲ್ಲಿಸಿ ಕೇಳಿದರು. ಅದು ಅದೂ ಗಂಜಿ ಅಂದ್ರೆ ಬಡವರೂಟ ಅಲ್ವಾ.. ಅಂತ ತೊದಲಿದಳು. ಅಯ್ಯೋ ಹುಚ್ಚಕ್ಕಾ, ಯಾರ್ ಹೇಳಿದ್ದು ಹಂಗೇ ಅಂತ. ಒಂದೊಂದ್ಸಲ ಮಾರಾಜಂಗೂ ಗಂಜಿನೇ ರುಚಿಯಾಗ್ ಬಿಡತ್ತೆ ಗೊತ್ತಾ. ಬಿಸಿಬಿಸಿ ಗಂಜಿಗೆ, ಚೂರು ಉಪ್ಪು, ಎಣ್ಣೆ, ಉಪ್ಪಿನಕಾಯಿರಸ ನೆಂಚಿಕೊಂಡು ತಿಂದರೆ ಆಹಾ ಅಂತ ಅವರೇ ತಿಂದ ಖುಶಿಯಲ್ಲಿ ಚಪ್ಪರಿಸಿಬಿಟ್ಟರು. ಇದು ಬಡವರ ಕತೆಯಾಯಿತು. ಶ್ರೀಮಂತರು ಇದಕ್ಕೊಂಚೂರು ಕಾಯಿತುರಿ ಹಾಕಿ ತಿಂತಾರೆ ಅದಂತೂ ಇನ್ನೂ ರುಚಿ. ತಿಂದು ನೋಡಿದಿಯಾ ಯಾವಾಗಾದ್ರೂ, ಒಂದ್ಸಲ ತಿನ್ನು, ಆಮೇಲೆ ಪಾಯಸ ಕೊಟ್ರೂ ಇಲ್ಲ ಗಂಜಿ ಬೇಕು ಅಂತೀಯ ಅಂತ ಹೇಳಿ ನಕ್ಕರು. ಶ್ರೀಕೃಷ್ಣ ಪರಮಾತ್ಮನಿಗೂ ಹಸಿವಾಗಿ ಸುಧಾಮನ ಮನೆಗೆ ಹೋದಾಗ ಅವನು ಕೊಟ್ಟಿದ್ದು ಅವಲಕ್ಕಿ ಮತ್ತು ಗಂಜಿ, ಹೇಗೆ ಸುರಿದುಕೊಂಡು ತಿಂದ ಗೊತ್ತಾ ಅವನು. ರಾಮನಿಗೆ ಶಬರಿ ಬರೀ ಹಣ್ಣು ಕಚ್ಚಿ ಕೊಟ್ಟಳು ಅಂದುಕೊಂಡ್ಯಾ, ಗಂಜಿ ಉಪ್ಪಿನಕಾಯಿ ರಸವನ್ನೂ ಕೊಟ್ಟಿರುತ್ತಾಳೆ. ಪಾಪ ಇಲ್ಲದಿದ್ದರೆ ಹಸಿವೆಲ್ಲಿ ಹೋಗತ್ತೆ. ಅಂತಹ ರಾಮದೇವರೇ ಗಂಜಿಯನ್ನು ಖುಶಿಯಿಂದ ತಿಂದ ಮೇಲೆ ಇನ್ಯಾವ ಶ್ರೀಮಂತರು ಬೇಕು ನಿನಗೆ? ಆಹ್ ಹೌದಲ್ಲಾ ಅನ್ನಿಸಿತು ಇವಳಿಗೂ.ಮತ್ತೆ ಕತೆ ಮುಂದುವರಿಯಿತು. ಅಜ್ಜಿ, ಮೊಮ್ಮಗಳು, ಕಾಡು, ಬಂಗಾರದ ಹೂವಿನ ಗಿಡ, ರಾಜಕುಮಾರ, ಮತ್ತು ಕೊನೆಗೆ ಅವರಿಬ್ಬರ ಮದುವೆಗೆ ರುಚಿಯಾದ ಗಂಜಿಯೂಟದೊಡನೆ ಕತೆ ಮುಗಿಯಿತು. ಇವಳಿಗೆ ಭಾರೀ ಸಮಾಧಾನ. ಇಷ್ಟು ದಿನಕ್ಕೆ ಒಂದು ಕತೇಲಿ ರಾಜಕುಮಾರ ಗಂಜಿ ತಿಂದ. ಆಮೇಲೆ ಟೀಚರ್ ಬೇರೆ ಶ್ರೀಮಂತರೂ ಗಂಜಿಯನ್ನ ಕೇಳಿ ಮಾಡಿಸಿಕೊಂಡು ತಿಂತಾರೆ ಅಂದ್ ಬಿಟ್ಟಿದಾರೆ. ಹೌದು ಗಂಜಿ ರುಚಿಯೇ ಆದ್ರೆ ಬಡವರು ಮಾತ್ರ ತಿನ್ನುತ್ತಾರೆ ಅನ್ನುವುದು ಅವಳ ಕೊರಗಾಗಿಬಿಟ್ಟಿತ್ತು. ಅದಕ್ಕೆ ಸರಿಯಾಗಿ ಅವರ ಮನೆಯಲ್ಲಿ ವಾರಕ್ಕೆ ನಾಲ್ಕು ದಿನ ಗಂಜಿ. ಈಗ ಏನೋ ಸಮಾಧಾನವಾಯಿತು. ಕತೆ ಮುಗಿಯುವಷ್ಟರಲ್ಲಿ ಮಳೆ ನಿಂತು, ಹೂಬಿಸಿಲು ಮೋಡದ ಮರೆಯಲ್ಲಿ ತೂರಿ ತೂರಿ ಬರುತ್ತಿತ್ತು. ಮತ್ತೆ ಮರುದಿನ ಅಮ್ಮ ದೋಸೆ ಮಾಡಿದರೆ, ಇವಳು ಗಂಜಿ ಹಾಕಮ್ಮಾ ಅಂತ ಕೇಳಿದಳು ಅಂತ ಬೇರೆ ಹೇಳಬೇಕಿಲ್ಲ ಅಲ್ಲವಾ..! :)&lt;/span&gt;&lt;br /&gt;&lt;br /&gt;&lt;span style="color:#000066;"&gt;ಇತ್ತೀಚೆಗೆ ಹುಶಾರಿಲ್ಲದಾಗ ಒಂದು ದಿನ ಗಂಜಿ ಮಾಡಿ, ಉಪ್ಪಿನಕಾಯಿ ರಸ, ಎಣ್ಣೆಯ ಜೊತೆಗೆ ಚಪ್ಪರಿಸಿ ತಿಂದು ಬಾಯಿ ಸರಿಮಾಡಿಕೊಂಡಾಗಿನಿಂದ ಅನಸೂಯಮ್ಮ ಟೀಚರೂ ಮತ್ತು ಅವರ ಗಂಜಿಯ ಕತೆ ಉಮ್ಮಳಿಸಿ ನೆನಪಾಗುತ್ತಿದೆ. ಅವತ್ತು ಅವರು ಆ ಕತೆಗೆ ಮತ್ತು ಅವಳ ಕುತೂಹಲಕ್ಕೆ ಒಂದು ಮುಗ್ಧ ತಿರುವನ್ನ ಕೊಡದೆ ಹೋಗಿದ್ದರೆ ಎಷ್ಟೊಳ್ಳೆ ಗಂಜಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದೆ ನಾನು. &lt;/span&gt;&lt;br /&gt;&lt;span style="color:#000066;"&gt;ಎಲ್ಲ ಊರಿನ ಎಲ್ಲ ಶಾಲೆಗಳಲ್ಲೂ ಅನಸೂಯಮ್ಮ ಟೀಚರಿನಂತವರು ಒಬ್ಬರಾದರೂ ಇರಲಿ, ಮಕ್ಕಳ ಮನಸ್ಸನ್ನ ಮೆತ್ತಗೆ ಹೂವರಳಿಸಿದಂತೆ ಕತೆ ಹೇಳಿ ತಿದ್ದಲಿ ಅಂತ ಆಶಿಸುತ್ತೇನೆ. ನನ್ನ ಬಾಲ್ಯದ ಕೊಂಕುಗಳನ್ನ ತಿದ್ದಿದ ಅನಸೂಯಮ್ಮ ಟೀಚರ್ ಮತ್ತು ಅವರಂತಹದೇ ಇನ್ನೂ ಹಲವಾರು ಟೀಚರುಗಳಿಗೆ ಒಂದು ಪ್ರೀತಿಯ ನಮಸ್ಕಾರ.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-896717823780323395?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/896717823780323395/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=896717823780323395' title='25 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/896717823780323395'/><link rel='self' type='application/atom+xml' href='http://www.blogger.com/feeds/4515791944382207090/posts/default/896717823780323395'/><link rel='alternate' type='text/html' href='http://nenapu-nevarike.blogspot.com/2008/05/blog-post_30.html' title='ಗಂಜಿ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>25</thr:total></entry><entry><id>tag:blogger.com,1999:blog-4515791944382207090.post-2596562821165648185</id><published>2008-05-08T05:36:00.000-07:00</published><updated>2008-05-08T05:43:51.432-07:00</updated><category scheme='http://www.blogger.com/atom/ns#' term='ಒಂದು ಸಂತಸದ ಕ್ಷಣ'/><title type='text'>ಕಾಯುವುದು..</title><content type='html'>&lt;span style="color:#330099;"&gt;ಕಡುನೀಲಿ ಆಕಾಶದ ದೂರದಂಚಲ್ಲಿ&lt;br /&gt;ಮಿಂಚಿ ಬೆಳಕಾಗುತ್ತಿದೆ ಒಂದು ಪುಟ್ಟ ಕಿರಣ&lt;br /&gt;ಕಾಯಿ ಇನ್ನೊಂದೆರಡು ಗಳಿಗೆ,&lt;br /&gt;ಕೆಂಪು ಕೆಂಪು ಸೂರ್ಯ&lt;br /&gt;ಬೆಚ್ಚಗೆ ಬೆಳಕಿನೋಕುಳಿಯಲ್ಲಿ!&lt;br /&gt;ಬೂದಿಬೂದಿ ಮೋಡದ ಒಡಲು&lt;br /&gt;ತುಂಬಿ ನಿಂತಿದೆ, ಸೆಖೆಯಲ್ಲೊಂದು ತಂಪುಗಾಳಿ&lt;br /&gt;ಗಳಿಗೆಯೆರಡು ಕಳೆಯಲಿ&lt;br /&gt;ತಂಪು ತಂಪು ಹನಿ, ಉಲ್ಲಸದ ಮಣಿ!&lt;br /&gt;ಹಸಿರೆಲೆಗಳ ನಡುವೆ ಮೂಡಿದ ಮೊಗ್ಗು&lt;br /&gt;ಒಂದೊಪ್ಪತ್ತು ಕಾಯ್ದರಾಯಿತು&lt;br /&gt;ನಸುಬಿರಿದು ಸುತ್ತ ಘಮ ಮೆಲ್ಲಗೆ ಹರಡಿ&lt;br /&gt;ಆಹಾ ಕಾಯುವುದರಲ್ಲೆಷ್ಟು ಸುಖವಿದೆ!&lt;br /&gt;&lt;/span&gt;&lt;br /&gt;&lt;span style="color:#330099;"&gt;ಸಧ್ಯ ಬರೀ ಕತ್ತಲೆ ಅಂದುಕೊಂಡು&lt;br /&gt;ಮತ್ತೆ ಹೊದ್ದು ಮಲಗಲಿಲ್ಲ&lt;br /&gt;ಕೆಂಪುಮಣಿಯ ಉದಯರಾಗ ಮನತುಂಬಿದೆ;&lt;br /&gt;ಓಹೋ ಸೆಖೆ ಎಂದು ಹಾದಿ ಬಿಟ್ಟು ಸರಿಯಲಿಲ್ಲ&lt;br /&gt;ತಂಪು ಸುರಿದಿದೆ;&lt;br /&gt;ಅರಳಲಿಲ್ಲವೆಂದು ಗಿಡವ ಸಲಹದೆ ಹೋಗಲಿಲ್ಲ&lt;br /&gt;ಇಂದು ಮೊಗ್ಗು ಬಿರಿದಿದೆ;&lt;br /&gt;ಆಹಾ ಕಾಯುವುದರಲ್ಲೂ ಸುಖವಿದೆ.&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-2596562821165648185?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/2596562821165648185/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=2596562821165648185' title='16 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/2596562821165648185'/><link rel='self' type='application/atom+xml' href='http://www.blogger.com/feeds/4515791944382207090/posts/default/2596562821165648185'/><link rel='alternate' type='text/html' href='http://nenapu-nevarike.blogspot.com/2008/05/blog-post.html' title='ಕಾಯುವುದು..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>16</thr:total></entry><entry><id>tag:blogger.com,1999:blog-4515791944382207090.post-6574109154994329722</id><published>2008-04-10T22:25:00.000-07:00</published><updated>2008-04-10T22:26:57.478-07:00</updated><title type='text'>ಆತ್ಮೀಯರೊಬ್ಬರ ಸಂಗಾತ,</title><content type='html'>&lt;p&gt;ಮೊನ್ನೆ ಎಲ್ಲೋ ಕಾಡು ಸುತ್ತಲು ಹೋದವರು ಹಾಗೇ ಕಡಲತೀರವನ್ನೊಂದಿಷ್ಟು ನೋಡಿಬಿಡುವಾ ಅಂತ ಹೋದೆವು. ಅಲ್ಲಿಸಿಕ್ಕ ಗೆಳೆಯನೊಡನೆ ಕಳೆದ ಒಂದ್ನಾಲ್ಕೈದು ಗಂಟೆಗಳು ತುಂಬ ತಂಪಾಗಿದ್ದವು. ಕಡಲ ತೀರದ ಮಾರ್ದವ ಬಿಸಿಯ ಮೇಲೆ ತೇಲಿ ಬರುವ ಗಾಳಿಯ ತಂಪು, ನುಣ್ಪು ಮತ್ತು ಬಿಸುಪು ಎಲ್ಲದರ ಒಟ್ಟಂದದಂತಿತ್ತು ಅವರೊಡನೆ ಕಳೆದ ಸಮಯ.&lt;/p&gt;&lt;p&gt;ತುಂಬ ದಿನದಿಂದ ನೋಡಬೇಕೆಂದಿತ್ತು ಇಬ್ಬರಿಗೂ. ಅವಕಾಶವಾಗಿರಲಿಲ್ಲ. ಅವತ್ತು ಅಚಾನಕ್ಕಾಗಿ ಸಿಕ್ಕಿ ಇಬ್ಬರಿಗೂ ಮಾತು ಮೊದಲು ಮಾಡಲು ಗೊತ್ತಾಗಲಿಲ್ಲ. ಒಂದೆರಡು ದೋಸೆ, ಕಾಫಿ, ಲಸ್ಸಿ, ಮತ್ತು ಅಳಿವೆಯೊಂದರಲ್ಲಿ ದೋಣಿಯಾನ, ಜನರಿಂದ ತುಂಬಿರದ ಕಡಲ ತೀರ, ಮಾತು ಮಾತು ಮಾತು.. ಎಲ್ಲ ತುಂಬ ಹಿತವಾಗಿತ್ತು. ಯುಗಾದಿಯ ಹಿಂದಿನ ದಿನ ಮುಕ್ಕಿದ ಆಲೆಮನೆಯ ಬೆಲ್ಲದ ಸಿಹಿಯಿತ್ತು.&lt;br /&gt;ಹೆಚ್ಚು ಹೆಚ್ಚು ಬರೆಯಲಿಕ್ಕೇನಿಲ್ಲ. ತುಂಬ ಸಂತಸ ನನಗೆ ಅವರ ಕಂಡು. ನೋಡಿದ ಸುತ್ತಿದ ಕಾಡೆಲ್ಲ, ಕಾಡಿನ ಪ್ರೀತಿಯೆಲ್ಲ ಮೈವೆತ್ತಂತಹ ವ್ಯಕ್ತಿಯ ಭೆಟ್ಟಿಯಾಗಿ ಮನಸು ಉಲ್ಲಸಗೊಂಡಿದೆ.&lt;br /&gt;ನಮಗಾಗಿ ಸಮಯ ಕೊಟ್ಟು, ಜೊತೆಗೂಡಿದ ಈ ಸ್ನೇಹಿತರಿಗೆ ಪ್ರೀತಿಪೂರ್ವಕ ವಂದನೆಗಳು.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-6574109154994329722?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/6574109154994329722/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=6574109154994329722' title='7 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/6574109154994329722'/><link rel='self' type='application/atom+xml' href='http://www.blogger.com/feeds/4515791944382207090/posts/default/6574109154994329722'/><link rel='alternate' type='text/html' href='http://nenapu-nevarike.blogspot.com/2008/04/blog-post_10.html' title='ಆತ್ಮೀಯರೊಬ್ಬರ ಸಂಗಾತ,'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>7</thr:total></entry><entry><id>tag:blogger.com,1999:blog-4515791944382207090.post-1923491123659444365</id><published>2008-04-02T04:21:00.000-07:00</published><updated>2008-04-10T22:32:05.641-07:00</updated><category scheme='http://www.blogger.com/atom/ns#' term='ಬಿದಿಗೆಯ ಬಿಂಬ'/><title type='text'>ಹಸಿರ ಹೊದ್ದವಳು ಕಾದಿದ್ದಾಳೆ</title><content type='html'>&lt;span style="color:#006600;"&gt;ಹಸಿರ ಹೊದ್ದವಳು ಕಾದಿದ್ದಾಳೆ&lt;/span&gt;&lt;br /&gt;&lt;span style="color:#006600;"&gt;ಹೊಳೆಯ ಹೊಸ್ತಿಲಲಿ&lt;/span&gt;&lt;br /&gt;&lt;span style="color:#006600;"&gt;ನೆನಪಿನ ದೀಪ ಹಚ್ಚಿ..&lt;/span&gt;&lt;br /&gt;&lt;span style="color:#006600;"&gt;ಏನೂ ಇಲ್ಲದೆ,&lt;/span&gt;&lt;br /&gt;&lt;span style="color:#006600;"&gt;ಸುಮ್ಮನೆ,&lt;/span&gt;&lt;br /&gt;&lt;span style="color:#006600;"&gt;ಮಾತ ಕದ್ದು&lt;/span&gt;&lt;br /&gt;&lt;span style="color:#006600;"&gt;ಮೌನ ಬಡಿಸಿ&lt;/span&gt;&lt;br /&gt;&lt;span style="color:#006600;"&gt;ಹಕ್ಕಿಗೊರಳ ಇಂಚರ ನೇಯುತ್ತಾ&lt;/span&gt;&lt;br /&gt;&lt;span style="color:#006600;"&gt;ಖಾಲಿ ಬದುಕನ್ನ ತುಂಬಿ ತುಳುಕಿಸಲು..&lt;br /&gt;ಹಸಿರ ಹೊದ್ದವಳು ಕಾದಿದ್ದಾಳೆ&lt;/span&gt;&lt;br /&gt;&lt;br /&gt;&lt;span style="color:#006600;"&gt;ಇನ್ನೇಕೆ ಮಾತು.&lt;/span&gt;&lt;br /&gt;&lt;span style="color:#006600;"&gt;ಬಿಂಕವಿಲ್ಲ, &lt;/span&gt;&lt;br /&gt;&lt;span style="color:#006600;"&gt;ಮಾತ ಕಟ್ಟಿಟ್ಟುಹೊರಟೆ..&lt;/span&gt;&lt;br /&gt;&lt;span style="color:#006600;"&gt;ಜೊತೆಗಿರುವನು ಚಂದಿರ. &lt;/span&gt;&lt;br /&gt;&lt;p&gt;&lt;span style="font-size:85%;color:#000066;"&gt;ಆಮೇಲೆ ಸೇರಿಸಿದ್ದು.. ಈ ಹಸಿರು ಪಯಣದ ನೆನಪಿನ ಬರಹ ಕೆಂಡಸಂಪಿಗೆಯಲ್ಲಿ.. &lt;br /&gt;ಲಾವಂಚ - &lt;/span&gt;&lt;a href="http://www.kendasampige.com/article.php?id=514"&gt;&lt;span style="font-size:85%;color:#000066;"&gt;http://www.kendasampige.com/article.php?id=514&lt;/span&gt;&lt;/a&gt;&lt;span style="color:#006600;"&gt;&lt;/p&gt;&lt;br /&gt;&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-1923491123659444365?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/1923491123659444365/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=1923491123659444365' title='4 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/1923491123659444365'/><link rel='self' type='application/atom+xml' href='http://www.blogger.com/feeds/4515791944382207090/posts/default/1923491123659444365'/><link rel='alternate' type='text/html' href='http://nenapu-nevarike.blogspot.com/2008/04/blog-post.html' title='ಹಸಿರ ಹೊದ್ದವಳು ಕಾದಿದ್ದಾಳೆ'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-4515791944382207090.post-3294384461156061127</id><published>2008-03-31T06:34:00.000-07:00</published><updated>2008-03-31T06:59:56.238-07:00</updated><category scheme='http://www.blogger.com/atom/ns#' term='ತಲ್ಲಣ'/><title type='text'>ಹೂವು ಚೆಲ್ಯಾವೆ ಹಾದಿಗೆ..</title><content type='html'>&lt;span style="color:#000066;"&gt;ಮಲೆನಾಡಿನ ಪುಟ್ಟ ಊರಿನಿಂದ ಬಂದ ನನಗೆ ರಾಜಧಾನಿಯ ಗಜಿಬಿಜಿ, ಗಡಿಬಿಡಿ, ಗುಂಪಿನಲ್ಲಿ ಕವಿಯುವ ಏಕಾಂಗಿತನ ಎಲ್ಲ ಬೇಸರಹುಟ್ಟಿಸಿಬಿಟ್ಟಿದ್ದವು. ಎಲ್ಲ ಅಮೂರ್ತವಾಗಿ, ಕನ್ನಡಿಯೊಳಗಿನ ಗಂಟಾಗಿ, ಆಪ್ತತೆಯಿಂದ ಹೊರತಾಗಿ ಕಾಣಿಸುತ್ತಿದ್ದವು.ಈ ಎಲ್ಲ ಬೇಸರದ ಕಾವಳಗಳನ್ನು ಬೆಚ್ಚಗೆ ಅರಳಿದ ಒಂದು ಬೆಳಗು ಸಹ್ಯವಾಗಿಸಿಬಿಟ್ಟಿತು. ಬೆಳಗ್ಗೆ ೭ ಗಂಟೆಗೆ ಬಿ.ಎಂ.ಟಿ.ಸಿ ಬಸ್ಸಿನ ಕಿಟಕಿಯಿಂದ ಕಂಡ ಮೈತುಂಬ ಹೂಬಿರಿದು ಪಾದಪಥಕ್ಕೂ ಚೆಲ್ಲಿದ ಮರಗಳ ಸಾಲು, ಇಬ್ಬನಿಯ ಮಬ್ಬಿನಲ್ಲೂ ಗೆರೆಕೊರೆದಂತೆ ಕಾಣುವ ಬೆಳ್ಳಕ್ಕಿ ಸಾಲು, ಬುಲ್ ಬುಲ್ ಮೈನಾಗಳ ಚಿಲಿಪಿಲಿ, ರಸ್ತೆಬದಿಯಲ್ಲಿ ಬೆವರಿಳಿಸುತ್ತ ಓಡುತ್ತಿರುವ ಮಂದಿ ಎಲ್ಲವೂ ಊರಿನ ಆಪ್ತತೆ ಮತ್ತು ಮಾನುಷೀ ಮಾರ್ದವತೆಯನ್ನ ಚೂರು ಚೂರಾಗಿ ಬನಿ ಇಳಿಸತೊಡಗಿದವು. &lt;/span&gt;&lt;br /&gt;&lt;span style="color:#000066;"&gt;&lt;/span&gt;&lt;br /&gt;&lt;span style="color:#000066;"&gt;ಚಳಿಗಾಲ ಗಾಢವಾಗುತ್ತಿದ್ದಂತೆ ಹೂಬಿರಿದು ನಿಲ್ಲುವ ಮರಗಳ ಸಾಲು ಏನೇನೋ ಖುಷಿಗಳನ್ನ ಹಿತವನ್ನ ಹರಡುತ್ತವೆ. ಬೆಂಗಳೂರೆಂಬ ಮಾಯಾನಗರಿ ಮಾಯೆಯ ಝಗಮಗ ಕಳೆದು, ಇಬ್ಬನಿಯಲ್ಲಿ ತೊಳೆದು ತಂಪಗೆ ಹೊಳೆಯುತ್ತದೆ. ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುವಾಗ ಕೆಂಪಾಗುವ ಪಡು ದಿಕ್ಕು ಓ ಇದು ನಮ್ಮೂರಲ್ಲಿ ಮುಳುಗುವ ಸೂರ್ಯನೇ ಅಂತನ್ನಿಸಿ ಬೆಂಗಳೂರು ಮನದಲ್ಲಿ ಇನ್ನೊಂದು ಮೆಟ್ಟಿಲೇರುತ್ತದೆ. ಎಲ್ಲ ಬಗೆಯ ಕೆಲಸ ಕಾಯಕಗಳಿಗೆ ಅವಕಾಶ ಕೊಟ್ಟು ಗುಳೆಬಂದ ರೈತರನ್ನೂ, ಓದಲು ಬಂದ ಮಕ್ಕಳನ್ನೂ,ಐಟಿ ಅಲೆಯಲ್ಲಿ ತೇಲುವ ಯುವಜನಾಂಗವನ್ನೂ, ವಾಕಿಂಗಿನಲ್ಲಿ ಸಂಚರಿಸುವ ಹಿರಿಜೀವಗಳನ್ನು, ಗಡಿಬಿಡಿಯಲ್ಲಿ ಓಡುವ ದಿನಗಳನ್ನು ಸಮಾನ ಭಾವದಲ್ಲಿ ಒಳಗೊಳ್ಳುವ ಯುಟೋಪಿಯಾದಂತೆ ಭಾಸವಾಗುತ್ತದೆ. &lt;/span&gt;&lt;br /&gt;&lt;span style="color:#000066;"&gt;&lt;br /&gt;ಒಮ್ಮೊಮ್ಮೆ ಸಿರಿತನ, ದಾರಿದ್ರ್ಯ ಎರಡೂ ಸೀಸಾ ಆಡುತ್ತಿರುವಂತೆ ಕಂಡು ಮನಸ್ಸಿನಲ್ಲಿ ಮುಳ್ಳು ಚಿಟಿಗೆಯಾಡುತ್ತದೆ. ಒಬ್ಬರಿನ್ನೊಬ್ಬರ ಹೆಗಲು ಕಟ್ಟದ ವ್ಯವಹಾರೀ ಸಂಬಂಧಗಳ ಮೆರವಣಿಗೆ ನೋಡಿ ಮನಸು ಮುದುಡುತ್ತದೆ.ಸಾಕಪ್ಪಾ ಅನ್ನಿಸುತ್ತ ರಾತ್ರಿ ಮಲಗೆ ಬೆಳಗ್ಗೆ ಏಳುವಾಗ ತಂಪಗೆ ಅರಳುವ ಬೆಳಗು, ಹೂಚೆಲ್ಲಿದ ಪಾದಪಥ, ಹೂವಾಡಗಿತ್ತಿ, ತರಕಾರಿಯಮ್ಮ, ಯುನಿಫಾರ್ಮ್ ಹಾಕಿ ತಿದ್ದಿ ತೀಡಿದ ತಲೆಗೂದಲಿನ ಜೊಂಪೆ ಹಿಂದಕ್ಕೆ ತಳ್ಳುತ್ತಾ ನಡೆಯುವ ಪುಟಾಣಿಗಳನ್ನ ನೋಡಿದರೆ ಎಲ್ಲ ಕಸಿವಿಸಿ ಕಳೆದು ಮುದ್ದು ಮೂಡುತ್ತದೆ. ಯಾವುದನ್ನೂ ಪ್ರೀತಿಸುವುದು ನಮ್ಮ ಮನಸ್ಥಿತಿಗೆ ಸಂಬಂಧ ಪಟ್ಟ ವಿಷಯವಾ ಹಾಗಾದರೆ? ನಿನ್ನೆ ಸಿಡುಕು ಮೂಡಿಸಿದ್ದ ದಾರಿಯಲ್ಲಿ ಇವತ್ತು ಹೊಸ ಹಿತ ಹೇಗೆ ಅರಳುತ್ತದೆ? ನಿನ್ನೆ ಚಿಟ್ಟು ಹಿಡಿಸಿದ್ದ ಗಜಿಬಿಜಿ ಇವತ್ತು ಹೇಗೆ ಅಚ್ಚರಿ ಹುಟ್ಟಿಸುತ್ತದೆ? ಯೋಚಿಸಬೇಕಾದ ವಿಷಯ.&lt;br /&gt;&lt;br /&gt;ಊರಿನ ನೆನಪನ್ನು ಹೊತ್ತು ತರುವುದು ಇಲ್ಲಿಯ ಅಚಾನಕ್ ಮಳೆ. ಈ ಮಳೆಯನ್ನ ಮಲೆನಾಡಿನ ಧೋ ಮಳೆಯ ಜೊತೆ ಹೋಲಿಸಲಾಗುವುದಿಲ್ಲವಾದರೂ, ಬೇಸಿಗೆ ದಿನಗಳಲ್ಲಿ ಕಾವು ಹೆಚ್ಚಿ ಮನಸ್ಸು ವಿಷಣ್ಣವಾದಾಗ ಇದ್ದಕ್ಕಿದ್ದಂಗೆ ಸಂಜೆಯೋ ರಾತ್ರಿಯೋ ಬಂದು ತೋಯಿಸುವ ಮಳೆ, ಮನಸ್ಸಿನ ಕಸಿವಿಸಿಯನ್ನು ಹೋಗಲಾಡಿಸಿ ಬಾಲ್ಯದ ನೆನಪನ್ನು, ಊರಿನ ಆಪ್ತತೆಯನ್ನು ತಂಪಾಗಿ ತಂದಿಟ್ಟು ಹೋಗುತ್ತದೆ. ಎಲ್ಲ ಚಂದವೇ ಅಂತೇನಿಲ್ಲ. ಕಟ್ಟಿ ನಿಂತ ಮೋರಿಗಳಲ್ಲಿ ಹೋಗಲಾಗದ ನೀರು ರಸ್ತೆಗೆ ನುಗ್ಗುತ್ತದೆ. ರಸ್ತೆ ಹೊಳೆಹಾದಿಯಾಗುತ್ತದೆ. ಕೆಳಗಿನ ಮಟ್ಟದಲ್ಲಿ ಕಟ್ಟಿರುವ ಮನೆಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಬೆಳಿಗ್ಗೆ ಕಸಗುಡಿಸುವವರ ಗಾಡಿ ತುಂಬಿ ತುಳುಕಿ ಭಾರವಾಗಿರುತ್ತದೆ. ಆಫೀಸುಗಳ ಹೌಸ್ ಕೀಪಿಂಗ್ ನವರ ಕೆಲಸ ಡಬ್ಬಲ್ಲಾಗಿರುತ್ತದೆ. ಇದೆಲ್ಲ ನೋಡಿದಾಗ ಮನವು ಮುದುಡಿದರೂ ಸುಮ್ಮನೆ ಕಿಟಕಿಯಾಚೆಯಿಂದ ನೋಡುವಾಗ ಮಳೆಗೆ ತೋಯ್ದು, ಧೂಳು ಕಳೆದ ಚಿಗುರು ಮರಗಳು, ಅಲ್ಲಲ್ಲಿ ಹಸಿರು ಗುಪ್ಪೆಯಾಗಿ ಕಾಣುವ ಪುಟ್ಟ ಪುಟ್ಟ ಪಾರ್ಕುಗಳು, ಸಾಲು ಮರಗಳು, ತಣ್ಣಗೆ ಭಾರವಾಗಿ ಹರಿದಾಡುವ ಗಂಧವತೀ ಗಾಳಿ ಎಲ್ಲ ಮುದುಡಿದ ಮನದ ಪಕಳೆಗಳ ಮೇಲೆ ಒಂದು ನಲಿವಿನ ಛಾಯೆಯನ್ನ ಹಬ್ಬಿಸುತ್ತವೆ. ಮೇಲೆ ನೀಲಿ ಆಗಸ ಕೆಳಗೆ ತಾಯಿ ಭೂಮಿ..ಹಾಡು ನೆನಪಾಗುತ್ತದೆ.&lt;br /&gt;&lt;br /&gt;ಚುಕ್ಕಿ ಹರಡಿದ ರಾತ್ರಿಗಳು ನಮ್ಮ ನಿಯಾನು ದೀಪದ ಬೆಳಕಲ್ಲಿ ಮಂಕಾಗಿದ್ದರು ಮಿನುಗುತ್ತಲೇ ಇರುತ್ತವೆ. ನಗರದ ಹೃದಯಭಾಗದಿಂದ ದೂರವಿರುವ ಕೆಲವು ಬಡಾವಣೆಗಳಲ್ಲಿ ಹುಣ್ಣಿಮೆ ಬೆಳಕು ನೇರ ಬಾಲ್ಕನಿಗೇ ನುಗ್ಗಿ ಮನಸ್ಸು ಹಾಡಾಗುತ್ತದೆ.. ಹುಣ್ಣಿಮೆ ಆಗಸದ ಬಣ್ಣದ ಛತ್ರಿಯು ಮೆಲ್ಲನೆ ತಾನಾಗಿ ಬಿಚ್ಚುತ್ತದೆ(ಲಕ್ಷ್ಮೀನಾರಾಯಣ ಭಟ್ಟರ ಕವಿತೆ ಸಾಲು).&lt;br /&gt;&lt;br /&gt;ಬೆಚ್ಚಗೆ ಕಾಫೀ ಹೀರುತ್ತ ನಿಂತಾಗ ತಣ್ಣಗೆ ಮುಟ್ಟುವ ಬೇಡುವ ಕೈ, ಮನಸ್ಸನ್ನು ಮಂಜುಗಟ್ಟಿಸುತ್ತದೆಯಾದೆಯಾದರೂ, ಹೊಸಹಗಲಿನ ಭರವಸೆ ನಂದುವುದಿಲ್ಲ. ಉದ್ಯಾನ ನಗರಿ ಎಂದು ಕರೆಸಿಕೊಂಡಿದ್ದ ಉದ್ಯೋಗನಗರಿ ಎಲ್ಲಕ್ಕೂ ಪರಿಹಾರವಿದೆಯೆಂಬ ಭರವಸೆಯಿಂದ ಹೂವರಳಿಸಿ ನಿಲ್ಲುತ್ತದೆ. ತಲ್ಲಣಿಸದಿರು ಕಂಡ್ಯ ತಾಳು ಮನವೇ ಅಂತ ಸಮಾಧಾನಿಸಿಕೊಳ್ಳುತ್ತೇನೆ.&lt;br /&gt;&lt;br /&gt;ಹೂಳು ತುಂಬಿ ಲೇಔಟುಗಳಾಗುತ್ತ ನಡೆದಿರುವ ಕೆರೆಗಳನ್ನು ನೋಡಿದರೆ ಮಾತ್ರ ಯಾವ ಹಾಡು, ಎಷ್ಟೇ ಹಸಿರಾಗಿರುವ ಮರವೂ ಕೂಡ ನನಗೆ ಹಾಯೆನಿಸುವುದಿಲ್ಲ. ನಮ್ಮ ಅನ್ನಕ್ಕೆ ನಾವೇ ಕಲ್ಲು ಹಾಕಿಕೊಳ್ಳುವ ನಮ್ಮ ಗೋರಿಯನ್ನ ನಾವೇ ತೋಡುವ ಕೆಲಸದಲ್ಲಿ ಎಷ್ಟು ಗಡಿಬಿಡಿಯಿಂದ ಮುಳುಗಿಹೋಗಿದ್ದೇವಲ್ಲಾ ಅಂತ ಬೇಜಾರಾಗಿ ಹೋಗುತ್ತದೆ. ಏನು ಮಾಡಲಿ? ಬಂದ ಎಲ್ಲರನ್ನೂ ತೆಕ್ಕೆಗೆ ಎಳೆದುಕೊಂಡಿರುವ ಬೆಂಗಳೂರೆಂಬ ಮಹಾತಾಯಿಯ ಬೆನ್ನು ತೊಡೆಗಳನ್ನ ಹುಣ್ಣು ಮಾಡುತ್ತಿರುವ ನಮ್ಮ ಪಾಪಕ್ಕೆ ಪರಿಹಾರವೆಲ್ಲಿದೆ? ನಾನು ಚೂರೂ ನಂಬದಿರುವ ದೇವರು ಇದ್ದಕ್ಕಿದ್ದಂಗೆ ಬಂದು ವರ್ಷಗಟ್ಟಲೆ ಮಾಡಬೇಕಿರುವ ಯಾವುದೋ ಹೊಚ್ಚ ಹೊಸಾ ಹಸಿರು ವ್ರತವನ್ನ ಹೇಳಿಕೊಡಬಾರದೇ ಅನ್ನಿಸುತ್ತಿದೆ.&lt;/span&gt;&lt;br /&gt;&lt;span style="color:#000066;"&gt;ಹೂವು ಚೆಲ್ಯಾವೆ ಹಾದಿಗೆ...  ಹೂವಲ್ಲ ಅವು ಭೂಮಿಯ ಬಯಕೆಗಳು ಮತ್ತು ನೆನವರಿಕೆಗಳು! ನೆಲದ ಆಳದಿಂದ ಆಗಸೆದೆಡೆಗೆ ಚಿಮ್ಮಿದ ಜೀವನ್ಮುಖತೆಯ ಕುಸುಮಗಳು. ನಡೆಯುವಾಗ ತುಳಿಯದೆ ಹೋಗಲು ಬರದೇ ಹೋಯಿತಲ್ಲ ನಮಗೆ?!&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4515791944382207090-3294384461156061127?l=nenapu-nevarike.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nenapu-nevarike.blogspot.com/feeds/3294384461156061127/comments/default' title='Post Comments'/><link rel='replies' type='text/html' href='http://www.blogger.com/comment.g?blogID=4515791944382207090&amp;postID=3294384461156061127' title='12 Comments'/><link rel='edit' type='application/atom+xml' href='http://www.blogger.com/feeds/4515791944382207090/posts/default/3294384461156061127'/><link rel='self' type='application/atom+xml' href='http://www.blogger.com/feeds/4515791944382207090/posts/default/3294384461156061127'/><link rel='alternate' type='text/html' href='http://nenapu-nevarike.blogspot.com/2008/03/blog-post_31.html' title='ಹೂವು ಚೆಲ್ಯಾವೆ ಹಾದಿಗೆ..'/><author><name>ಸಿಂಧು Sindhu</name><uri>http://www.blogger.com/profile/11363295766940671498</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>12</thr:total></entry><entry><id>tag:blogger.com,1999:blog-4515791944382207090.post-6895681747595504792</id><published>2008-03-10T04:03:00.000-07:00</published><updated>2008-03-10T04:07:10.547-07:00</updated><category scheme='http://www.blogger.com/atom/ns#' term='ಅಜ್ಜನ ಕಣಜದಿಂದ'/><title type='text'>ಕತೆ ಕತೆ ಕಾಪಿ...!</title><content type='html'>&lt;span style="color:#000066;"&gt;ದೊಡ್ಡದಾದ ಭವಂತಿ ಇರುವ ನಡುಮನೆಯ ಜಗುಲಿಯಲ್ಲಿ ಪುಟ್ಟ ಪುಟ್ಟ ಗುಡ್ಡಗಳಂತಹ ಅಡಿಕೆ ರಾಶಿ, ಸುತ್ತ ಗುಡ್ಡಗಳನ್ನ ಹರಡಿ ಕೂತು ತನ್ನ ಸೃಷ್ಟಿಯನ್ನ ತಾನೇ ಪರಿಶೀಲಿಸುವ ಶಿಲ್ಪಿಯಂತೆ ಕುಳಿತಿರುವ ಅಜ್ಜ..ಪುಟ್ಟಿ ಓಡೋಡಿ ಬಂದಳು ಶಾಲೆಯಿಂದ. ಇವತ್ತು ಏಪ್ರಿಲ್ ಹತ್ತು. ಇನ್ಮೇಲೆ ಎರಡು ತಿಂಗಳು ಶಾಲೆಗೆ ಬೇಸಿಗೆ ರಜ; ಯುನಿಫಾರ್ಮ್ ಬಿಸಾಕಿ, ಪಾಟಿ ಚೀಲ ಅಮ್ಮಮ್ಮನ ಮರಿಗೆಯ ಪಕ್ಕದ ಸಂದಿಯಲ್ಲೆಸೆದು, ಅವಳಿಗಿಷ್ಟವಾದ ನೇರಳೆ ಬಣ್ಣದ ಫ್ರಾಕಿನ, ಚಿಟ್ಟೆ ಚಿತ್ರದ ಬಿಳಿ ಜೇಬಿನಲ್ಲಿ ಕಿರುನೆಲ್ಲಿಕಾಯಿ ತುಂಬಿಟ್ಟುಕೊಂಡು, ಅಡಿಕೆ ಗುಡ್ಡಗಳ ಬದಿಯಲ್ಲಿ ದಾರಿ ಮಾಡಿಕೊಂಡು, ಅಜ್ಜನ ಪಕ್ಕದಲ್ಲಿ ಜಾಗ ಮಾಡಿಕೊಳ್ಳುತ್ತ ಕೂರಲಿಕ್ಕಿಲ್ಲ..ಅಮ್ಮಮ್ಮನಿಗೆ ಸಿಟ್ಟು - ಸುಮ್ನೆ ಏಳಲ್ಲಿಂದ, ಆರಿಸಿಟ್ಟ ಅಡಿಕೇನೆಲ್ಲ ಸೇರಿಸ್ ಬಿಡ್ತೆ, ಆ ಕಡೆ ಮೆತ್ತಿನ್ ಮೇಲೆ ಬೇರೆ ಆಟ ಆಡು ಹೋಗು..- ಪುಟ್ಟಿ ತುಂಬ ಒಳ್ಳೆಯವಳಂತೆ ಮುಖ ಮಾಡಿಕೊಂಡು ಅಜ್ಜನ ಹತ್ರ - ಇಲ್ಲಜ್ಜಾ ನಂಗೊತ್ತಿದ್ದು ಯಾವ್ದು ಯಾವಡಕೆ ಅಂತ - ಬಿಳೆಗೋಟು, ಚಾಲಿ, ಆಪಿ, ಹುಳುಕ ಅಲ್ದಾ.. ನಾನೂ ಆರಿಸ್ತಿ ಪ್ಲೀಸ್..ಅಜ್ಜ ಯಾವಾಗಲೂ ಅಭಯದಾತ. ಎಷ್ಟು ಸಿಟ್ಟು ಮಾಡಿಕೊಳ್ಳೋಣ ಅಂದರೂ ಪುಟ್ಟಿಯ ಮುಖ ನೋಡಿದ ಕೂಡಲೆ ನಗು ಬಂದು ಸಡಿಲಾಗುವ ಮುಖ ಬಿಗುಗೊಳ್ಳುವುದೇ ಇಲ್ಲ. ಸರಿ ಬಾ, ನೀನು ಬಿಳೆ ಗೋಟು ಮಾತ್ರ ಆರಿಸಿ ಇಕಾ ಈ ರಾಶಿಗೆ ಸೇರಿಸು.. ಬೇರೆ ಅಡಿಕೆ ಎಲ್ಲ ನಾನೇ ಆರಿಸ್ತಿ.&lt;br /&gt;&lt;/span&gt;&lt;br /&gt;&lt;span style="color:#000066;"&gt;ಆರಿಸುತ್ತಾ ಕೂತ ಹಾಗೆ ಅಲ್ಲೊಂದಿಷ್ಟು ಹಾತೆಗಳು ಹಾರಾಡುತ್ತಿವೆ. ನೋಡುವಷ್ಟೂ ನೋಡಿ, ಅದಾಗಲೇ ಆರಿಸಿ ಬೇಜಾರು ಬಂದಿದ್ದ ಪುಟ್ಟಿ ಅಜ್ಜನ ಕಡೆ ನೋಡಿದಳು. ಅವನು ಸೀರಿಯಸ್ಸಾಗಿ ಅಡಿಕೆ ಆರಿಸುತ್ತಿದ್ದಾನೆ. ಹಗೂರ ತಿರುಗಿಕೊಂಡು ಒಂದು ಹಾತೆಯನ್ನು ಪಟಾರನೆ ಸೊಳ್ಳೆ ಹೊಡೆಯುವ ಹಾಗೆ ಹೊಡೆದರೆ ಹೋ.. ಅದು ಪಡ್ಚ.. ವಾವ್, ಇದು ಸೊಳ್ಳೆಯಷ್ಟು ಚಾಲಾಕಲ್ಲ ಆರಾಮಾಗಿ ಹೊಡೀಬಹುದು. ಇನ್ನೊಂದೆರಡು ಹೊಡೆದೇಬಿಡುವಷ್ಟರಲ್ಲಿ, ತಲೆ ತಗ್ಗಿಸಿಕೊಂಡು ಅಡಿಕೆ ಆರಿಸುತ್ತಿದ್ದ ಅಜ್ಜ ಕೇಳಿಬಿಟ್ಟ.. ಎಂತ ಮಾಡ್ತಾ ಇದ್ದೆ? ಅಜ್ಜಾ ಸೊಳ್ಳೆ ಹೊಡೀತಾ ಇದ್ದಿ.. ನಿಂಗೆ ಕಚ್ಚಬಾರ್ದು ಅದು ಅಂತ.. ನಮ್ ಪುಟ್ಟಿ ಸಿಕ್ಕಾಪಟ್ಟೆ ಜಾಣೆ. ಆದ್ರೇನು ಮಾಡ್ತೀರಿ ಅವನು ಪುಟ್ಟಿಯ ಅಜ್ಜ, ಇನ್ನೂ ಜಾಣ.. - ಇಷ್ಟು ಮಧ್ಯಾಹ್ನದಾಗೆ ಸೊಳ್ಳೆ ಎಲ್ಲಿಂದ ಬರ್ತು? ಅದು ಹಾತೆ.. ಹಂಗೆಲ್ಲಾ ಹಾತೆ ನೊಣ ಎಲ್ಲ ಹೊಡೀಲಾಗ. ಇರುವೆನೋ ಸೊಳ್ಳೆನೋ ನಮಗೆ ಕಚ್ಚಿ ತೊಂದರೆ ಕೊಟ್ಟರೆ ಮಾತ್ರ ಹೊಡೆಯಬೇಕೆ ವಿನಃ ಸುಮ್ ಸುಮ್ನೆ ಹೊಡದ್ರೆ ಅಣಿಮಾಂಡವ್ಯ ಋಷಿಯ ಕತೆ ಇತ್ತಲಾ ಹಂಗೇ ಆಗ್ತು ನಿಂಗೂ..&lt;br /&gt;&lt;/span&gt;&lt;br /&gt;&lt;span style="color:#000066;"&gt;ಅಣಿಮಾಂಡವ್ಯ!!! - ಈಗ ಪುಟ್ಟಿ ಗಾಳಕ್ಕೆ ಸಿಕ್ಕ ಮೀನು.. ಅಜ್ಜನ ಕತೆಯ ಗಾಳ ಎಂತ ಪವರ್ ಫುಲ್ ಗೊತ್ತಾ- ಅಜ್ಜಾ ಅ
